📍 Karavali Maruta kannada News
LIVE CONTACT

ವೆಟ್-ವೆಲ್‌ಗಳ ಕಳಪೆ ನಿರ್ವಹಣೆಚರಂಡಿ-ಬಾವಿಗಳಿಗೆ ಡ್ರೈನೇಜ್ ನೀರು..

ಮಂಗಳೂರು : ನಗರದ 50 ವರ್ಷ ಹಳೆಯದಾದ ಡ್ರೈನೇಜ್ ಸಿಸ್ಟಮ್‌ಗೆ ಇನ್ನೂ ಕಾಯಕಲ್ಪ ಸಿಕ್ಕಿಲ್ಲ. ನಗರ ಪಾಲಿಕೆ ವ್ಯಾಪ್ತಿಯಲ್ಲಿ ೨೨ ವೆಟ್‌ವೆಲ್‌ಗಳಿದ್ದರೂ ಅಲ್ಲಿಯ ತೊಂದರೆಗಳಿAದ, ಟ್ರೀಟ್ಮೆಂಟ್ ಆಗದ ಸಿವೇಜ್ ನೀರು ಸರಾಗವಾಗಿ ನಗರದ ತೋಡುಗಳಿಗೆ, ಬಾವಿಗಳಿಗೆ ಹೋಗುತ್ತಿರೋದು ಗೌಪ್ಯವಾಗಿ ಉಳಿದಿಲ್ಲ. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದರೂ.. ದೂರರ್ಜಿಗಳ ನೀಡಿದರೂ ಏನೊಂದು ಕ್ರಮ ಮಹಾನಗರ ಪಾಲಿಕೆಯಿಂದ ಆಗುತ್ತಿಲ್ಲ. ಇದರಿಂದಾಗಿ ನಗರದೊಳಗಿನ ಬಾವಿಗಳು ಕಲುಷಿತಗೊಳ್ಳುವುದರೊಂದಿಗೆ ಸಾಂಕ್ರಾಮಿಕ ರೋಗಗಳು ಹರಡುವುದರಲ್ಲಿ ಎರಡು ಮಾತಿಲ್ಲ. ಸದ್ಯ ಮಹಾನಗರ ಪಾಲಿಕೆ ಆಡಳಿತಾಧಿಕಾರಿUಳಾದ ಜಿಲ್ಲಾಧಿಕಾರಿಗಳೇ ಈ ಬಗ್ಗೆ ಮುತುವರ್ಜಿ ವಹಿಸಬೇಕಾಗಿದೆ.
ನಗರದ ಡ್ರೈನೇಜ್ ಸಿಸ್ಟಮ್ ಮತ್ತು ವೆಟ್‌ವೆಲ್‌ಗಳ ನಿರ್ವಹಣೆ ಸಂಪೂರ್ಣ ಹದಗೆಟ್ಟಿದೆ. ಈ ವೆಟ್‌ವೆಲ್ ಸಿಸ್ಟಮ್‌ಗಳಿಗೆ ಅಳವಡಿಸಿದ್ದ ಪೈಪ್‌ಲೈನ್‌ಗಳು ೫೦ ವರ್ಷ ಹಳೆಯದಾಗಿವೆ. ಈ ಪೈಪ್‌ಲೈನ್ ಗಳಿಂದ ಪಂಪಿAಗ್ ಆಗುತ್ತಿರೋ ಸೀವೇಜï ನೀರನ್ನು ತಡೆಯಲು ಅಸಾಧ್ಯವಾಗಿದ್ದು ಅಲ್ಲೇ ಒಡೆದು ಹೋಗುತ್ತಿರೋದಲ್ಲದೆ, ಒಡೆದು ಹೋದ ಪೈಪಲೈನ್ ನೀರು ನೇರವಾಗಿ ಚರಂಡಿಗಳಿಗೆ ಹೋಗುತ್ತಿರೋದು ಒಂದೆಡೆಯಾದರೆ, ಸುತ್ತಮುತ್ತಲಿನ ಬಾವಿಗಳಿಗೂ ಹೊಕ್ಕುತ್ತಿರೋದು ಕೂಡ ಕಣ್ಣಿಗೆ ರಾಚುವಂತಿದೆ.

ಇಲ್ಲಿ ಬಾವಿ ನೀರು ಕಲುಷಿತವಾಗುವುದರೊಂದಿಗೆ, ಸಾಲು-ಸಾಲು ಸಾಂಕ್ರಾಮಿಕ ರೋಗಗಳು ಬರುವ ಎಲ್ಲಾ ಅವಕಾಶಗಳಿರೋದರಿಂದ ಈ ಸಮಸ್ಯೆಗಳನ್ನು ಮಂಗಳೂರು ಮಹಾನಗರ ಪಾಲಿಕೆ ಅಗತ್ಯವಾಗಿ ವಿಶೇಷ ಮುತುವರ್ಜಿ ವಹಿಸಿ ಕೆಲಸ ಮಾಡಬೇಕಾಗಿದೆ.
ಮತ್ತೊಂದೆಡೆ, ವೆಟ್‌ವೇಲ್‌ಗಳು ಫುಲ್ ಆಗ್ತಾ ಇದ್ದಂತೆ ಸೀವೇಜ್ ನೀರನ್ನ ನೇರವಾಗಿ ಕಾವೂರಿನ ಮುಲ್ಲಕಾಡು ಟ್ರೀಟ್ಮೆಂಟ್ ಪ್ಲಾಂಟ್‌ಗೆ ಪಂಪಿಂಗ್ ಮಾಡಬೇಕು. ಅಲ್ಲಿ ಈ ಸೀವೇಜ್ ನೀರನ್ನು ಟ್ರೀಟ್ಮೆಂಟ್ ಮಾಡುತ್ತಾರೆ, ಆವಾಗ ಫ್ರಶ್ ನೀರನ್ನು ನದಿಗೆ ಬಿಡಬಹುದು ಅಥವಾ ಮರುಬಳಕೆ ಮಾಡಬಹುದು, ಹಾಗೇ ಇಲ್ಲಿ ಬರೋ ಗೊಬ್ಬರ ಹಾಗು ವೇಸ್ಟನ್ನು ಕೂಡ ಮರುಬಳಕೆಗೆ ಬಳಸಬಹುದಾಗಿದೆ. ಆದರೆ ನಮ್ಮಲ್ಲಿ ಇದ್ಯಾವುದೂ ಸರಿ ಇಲ್ಲ. ಮ್ಯಾನ್ ಹೋಲ್‌ಗಳಿಂದ ಗ್ರಾವಿಟಿಯಲ್ಲಿ ವೆಟ್‌ವೆಲ್‌ಗಳಿಗೆ ಬರೋ ಲೈನ್‌ಗಳೆಲ್ಲ ಹಳೇ ಲೈನ್‌ಗಳಾಗಿದ್ದು ಅಲ್ಲೂ ಸೀವೇಜ್ ನೀರು ನೇರ ಚರಂಡಿಗೆ ಹೋಗುತ್ತಿದೆ. ಈ ಬಗ್ಗೆ ಸ್ಥಳೀಯರು ಹೇಳೋ ಪ್ರಕಾರ ಕೆಲವಮ್ಮೆ ಓವರ್ ಫ್ಲೋ ಆಗುತ್ತೆ. ಆದರೇ ಎಲ್ಲಾ ಬಾರಿ ಆಗಲ್ಲಾ ಆದರಿದು ನೇರವಾಗಿ ಚರಂಡಿಗೆ ಬಂದು ಅಲ್ಲಿಂದ ನದಿಗೆ ಸೇರುತ್ತಿದೆ, ಈ ಮದ್ಯೆ ಬರೋ ಎಲ್ಲಾ ಬಾವಿಗಳೂ ಕೂಡಾ ಇಲ್ಲಿ ಕಲುಷಿತವಾಗಿವೆ ಅನ್ನುತ್ತಿದ್ದಾರವರು.
ನಗರದಲ್ಲಿ 22 ವೆಟ್ ವೆಲ್‌ಗಳಿದ್ದು ಇವುಗಳಿಗೆ ಆಯಾ ಪ್ರದೇಶದ ಡ್ರೈನೇಜ್ ಲೈನ್‌ಗಳಿಂದ ಸೀವೇಜ್ ಹರಿದು ಬರೋದಾದರೂ, ಈ ಸರ್ಕ್ಯೂಟ್ ಅದೇನಿಲ್ಲ ಅಂದ್ರು 525 ರಿಂದ 550 ಕಿ.ಮಿ ಗಳಷ್ಟು ಉದ್ದದ ಪೈಪ್ ಲೈನ್‌ಗಳಿವೆ. ಇಲ್ಲಿ ವೆಟ್ ವೆಲ್ ಕೂಡ ಹಳೆದಿದೆ ಅದರೊಂದಿಗೆ ಪೈಪ್‌ಲೈನ್ ಗಳು ಮಾತ್ರ, ಅದೇನಿಲ್ಲ ಅಂದ್ರು  ೫೦ ವರ್ಷದ ಹಳೆಯದ್ದು ಆಗಿವೆ. ಲೈನ್‌ಗಳಿಗೆ ಪಂಪ್ ಹಾಕಿ ಪ್ರೆಶರ್ ಕೊಟ್ಟು ಸೇವೆಜ್ ನೀರು ಪಾಸ್ ಮಾಡಲು ಹೊರಟರೆ ಇಡೀ ಪೈಪ್‌ಲೈನ್‌ಗಳೇ ಒಡೆದು ಹೋಗುತ್ತಿವೆ. ಮತ್ತೆ ಕೆಲವು ಲೈನ್ಗಲ್ಲಿ ನೀರೇ ಪಾಸ್ ಆಗಲ್ಲ ಅಂತವುವನ್ನು ಡೈರೆಕ್ಟ್ ಆಗಿ ಹತ್ತರದ ಚರಂಡಿಗೇ ಕೊಡಲಾಗಿದೆ. ಹಾಗಾಗಿ ಇಲ್ಲಿ ಒಂದಷ್ಟು ಗಬ್ಬು ವಾಸನೆ ಬಂದು ನಾರುತ್ತಿರುವುದಲ್ಲದೆ, ಸಾಂಕ್ರಾಮಿಕ ರೋಗಕ್ಕೆ ರಹದಾರಿ ನೀಡಿದಂತಾಗಿದೆ.
ಈ ಬಗ್ಗೆ, ನಾಗರಿಕರು ಹತ್ತು ಹಲವು ಬಾರಿ ನಗರ ಪಾಲಿಕೆ ದೂರು ನೀಡಿದ್ದಾರೆ ಅಲ್ಲೇನು ಆಗ್ತಾ ಇಲ್ಲ. ಅಧಿಕಾರಿಗಳಿಗೆ ದೂರ್ ನೀಡಿದ್ದಾರೆ ಅಲ್ಲೂ ಏನು ಆಗ್ತಾ ಇಲ್ಲ. ಈ ಬಾರಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ಸಂತ್ರಸ್ತರ ತಂಡವೊಂದು ತಯಾರಾಗಿದೆ. ಸದ್ಯ ಜಿಲ್ಲಾಧಿಕಾರಿಗಳೇ ನಗರ ಪಾಲಿಕೆ ಆಡಳಿತಾಧಿಕಾರಿಯಾಗಿದ್ದು ಅದೇನು ಕ್ರಮ ವಹಿಸುತ್ತಾರೋ ಕಾದು ನೋಡಬೇಕಾಗಿದೆ. ಅಲ್ಲಿದೆ ಕೆಲವು ಚರಂಡಿಗಳು ನೇರವಾಗಿ ನದಿಗಳಿಗೆ ಲಿಂಕ್ ಇರೋದಕ್ಕೆ ನದಿ ನೀರುಗಳು ಕೂಡ ಕಲುಷಿತಗೊಂಡಿವೆ ಜಲಚರಗಳು ಸತ್ತಿವೆ ಹಾಗಾಗಿ ಈ ವಿಚಾರವಾಗಿ ಜಿಲ್ಲಾಡಳಿತ ಪ್ರಯಾರಿಟಿಯಾಗಿ, ತುರ್ತಾಗಿ ಈ ಕೆಲಸ ಮಾಡುವ ಅತ್ಯವಶ್ಯಕತೆ ಇದೆ.