📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ವೆಟ್-ವೆಲ್‌ಗಳ ಕಳಪೆ ನಿರ್ವಹಣೆಚರಂಡಿ-ಬಾವಿಗಳಿಗೆ ಡ್ರೈನೇಜ್ ನೀರು..

ಮಂಗಳೂರು : ನಗರದ 50 ವರ್ಷ ಹಳೆಯದಾದ ಡ್ರೈನೇಜ್ ಸಿಸ್ಟಮ್‌ಗೆ ಇನ್ನೂ ಕಾಯಕಲ್ಪ ಸಿಕ್ಕಿಲ್ಲ. ನಗರ ಪಾಲಿಕೆ ವ್ಯಾಪ್ತಿಯಲ್ಲಿ ೨೨ ವೆಟ್‌ವೆಲ್‌ಗಳಿದ್ದರೂ ಅಲ್ಲಿಯ ತೊಂದರೆಗಳಿAದ, ಟ್ರೀಟ್ಮೆಂಟ್ ಆಗದ ಸಿವೇಜ್ ನೀರು ಸರಾಗವಾಗಿ ನಗರದ ತೋಡುಗಳಿಗೆ, ಬಾವಿಗಳಿಗೆ ಹೋಗುತ್ತಿರೋದು ಗೌಪ್ಯವಾಗಿ ಉಳಿದಿಲ್ಲ. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದರೂ.. ದೂರರ್ಜಿಗಳ ನೀಡಿದರೂ ಏನೊಂದು ಕ್ರಮ ಮಹಾನಗರ ಪಾಲಿಕೆಯಿಂದ ಆಗುತ್ತಿಲ್ಲ. ಇದರಿಂದಾಗಿ ನಗರದೊಳಗಿನ ಬಾವಿಗಳು ಕಲುಷಿತಗೊಳ್ಳುವುದರೊಂದಿಗೆ ಸಾಂಕ್ರಾಮಿಕ ರೋಗಗಳು ಹರಡುವುದರಲ್ಲಿ ಎರಡು ಮಾತಿಲ್ಲ. ಸದ್ಯ ಮಹಾನಗರ ಪಾಲಿಕೆ ಆಡಳಿತಾಧಿಕಾರಿUಳಾದ ಜಿಲ್ಲಾಧಿಕಾರಿಗಳೇ ಈ ಬಗ್ಗೆ ಮುತುವರ್ಜಿ ವಹಿಸಬೇಕಾಗಿದೆ.
ನಗರದ ಡ್ರೈನೇಜ್ ಸಿಸ್ಟಮ್ ಮತ್ತು ವೆಟ್‌ವೆಲ್‌ಗಳ ನಿರ್ವಹಣೆ ಸಂಪೂರ್ಣ ಹದಗೆಟ್ಟಿದೆ. ಈ ವೆಟ್‌ವೆಲ್ ಸಿಸ್ಟಮ್‌ಗಳಿಗೆ ಅಳವಡಿಸಿದ್ದ ಪೈಪ್‌ಲೈನ್‌ಗಳು ೫೦ ವರ್ಷ ಹಳೆಯದಾಗಿವೆ. ಈ ಪೈಪ್‌ಲೈನ್ ಗಳಿಂದ ಪಂಪಿAಗ್ ಆಗುತ್ತಿರೋ ಸೀವೇಜï ನೀರನ್ನು ತಡೆಯಲು ಅಸಾಧ್ಯವಾಗಿದ್ದು ಅಲ್ಲೇ ಒಡೆದು ಹೋಗುತ್ತಿರೋದಲ್ಲದೆ, ಒಡೆದು ಹೋದ ಪೈಪಲೈನ್ ನೀರು ನೇರವಾಗಿ ಚರಂಡಿಗಳಿಗೆ ಹೋಗುತ್ತಿರೋದು ಒಂದೆಡೆಯಾದರೆ, ಸುತ್ತಮುತ್ತಲಿನ ಬಾವಿಗಳಿಗೂ ಹೊಕ್ಕುತ್ತಿರೋದು ಕೂಡ ಕಣ್ಣಿಗೆ ರಾಚುವಂತಿದೆ.

ಇಲ್ಲಿ ಬಾವಿ ನೀರು ಕಲುಷಿತವಾಗುವುದರೊಂದಿಗೆ, ಸಾಲು-ಸಾಲು ಸಾಂಕ್ರಾಮಿಕ ರೋಗಗಳು ಬರುವ ಎಲ್ಲಾ ಅವಕಾಶಗಳಿರೋದರಿಂದ ಈ ಸಮಸ್ಯೆಗಳನ್ನು ಮಂಗಳೂರು ಮಹಾನಗರ ಪಾಲಿಕೆ ಅಗತ್ಯವಾಗಿ ವಿಶೇಷ ಮುತುವರ್ಜಿ ವಹಿಸಿ ಕೆಲಸ ಮಾಡಬೇಕಾಗಿದೆ.
ಮತ್ತೊಂದೆಡೆ, ವೆಟ್‌ವೇಲ್‌ಗಳು ಫುಲ್ ಆಗ್ತಾ ಇದ್ದಂತೆ ಸೀವೇಜ್ ನೀರನ್ನ ನೇರವಾಗಿ ಕಾವೂರಿನ ಮುಲ್ಲಕಾಡು ಟ್ರೀಟ್ಮೆಂಟ್ ಪ್ಲಾಂಟ್‌ಗೆ ಪಂಪಿಂಗ್ ಮಾಡಬೇಕು. ಅಲ್ಲಿ ಈ ಸೀವೇಜ್ ನೀರನ್ನು ಟ್ರೀಟ್ಮೆಂಟ್ ಮಾಡುತ್ತಾರೆ, ಆವಾಗ ಫ್ರಶ್ ನೀರನ್ನು ನದಿಗೆ ಬಿಡಬಹುದು ಅಥವಾ ಮರುಬಳಕೆ ಮಾಡಬಹುದು, ಹಾಗೇ ಇಲ್ಲಿ ಬರೋ ಗೊಬ್ಬರ ಹಾಗು ವೇಸ್ಟನ್ನು ಕೂಡ ಮರುಬಳಕೆಗೆ ಬಳಸಬಹುದಾಗಿದೆ. ಆದರೆ ನಮ್ಮಲ್ಲಿ ಇದ್ಯಾವುದೂ ಸರಿ ಇಲ್ಲ. ಮ್ಯಾನ್ ಹೋಲ್‌ಗಳಿಂದ ಗ್ರಾವಿಟಿಯಲ್ಲಿ ವೆಟ್‌ವೆಲ್‌ಗಳಿಗೆ ಬರೋ ಲೈನ್‌ಗಳೆಲ್ಲ ಹಳೇ ಲೈನ್‌ಗಳಾಗಿದ್ದು ಅಲ್ಲೂ ಸೀವೇಜ್ ನೀರು ನೇರ ಚರಂಡಿಗೆ ಹೋಗುತ್ತಿದೆ. ಈ ಬಗ್ಗೆ ಸ್ಥಳೀಯರು ಹೇಳೋ ಪ್ರಕಾರ ಕೆಲವಮ್ಮೆ ಓವರ್ ಫ್ಲೋ ಆಗುತ್ತೆ. ಆದರೇ ಎಲ್ಲಾ ಬಾರಿ ಆಗಲ್ಲಾ ಆದರಿದು ನೇರವಾಗಿ ಚರಂಡಿಗೆ ಬಂದು ಅಲ್ಲಿಂದ ನದಿಗೆ ಸೇರುತ್ತಿದೆ, ಈ ಮದ್ಯೆ ಬರೋ ಎಲ್ಲಾ ಬಾವಿಗಳೂ ಕೂಡಾ ಇಲ್ಲಿ ಕಲುಷಿತವಾಗಿವೆ ಅನ್ನುತ್ತಿದ್ದಾರವರು.
ನಗರದಲ್ಲಿ 22 ವೆಟ್ ವೆಲ್‌ಗಳಿದ್ದು ಇವುಗಳಿಗೆ ಆಯಾ ಪ್ರದೇಶದ ಡ್ರೈನೇಜ್ ಲೈನ್‌ಗಳಿಂದ ಸೀವೇಜ್ ಹರಿದು ಬರೋದಾದರೂ, ಈ ಸರ್ಕ್ಯೂಟ್ ಅದೇನಿಲ್ಲ ಅಂದ್ರು 525 ರಿಂದ 550 ಕಿ.ಮಿ ಗಳಷ್ಟು ಉದ್ದದ ಪೈಪ್ ಲೈನ್‌ಗಳಿವೆ. ಇಲ್ಲಿ ವೆಟ್ ವೆಲ್ ಕೂಡ ಹಳೆದಿದೆ ಅದರೊಂದಿಗೆ ಪೈಪ್‌ಲೈನ್ ಗಳು ಮಾತ್ರ, ಅದೇನಿಲ್ಲ ಅಂದ್ರು  ೫೦ ವರ್ಷದ ಹಳೆಯದ್ದು ಆಗಿವೆ. ಲೈನ್‌ಗಳಿಗೆ ಪಂಪ್ ಹಾಕಿ ಪ್ರೆಶರ್ ಕೊಟ್ಟು ಸೇವೆಜ್ ನೀರು ಪಾಸ್ ಮಾಡಲು ಹೊರಟರೆ ಇಡೀ ಪೈಪ್‌ಲೈನ್‌ಗಳೇ ಒಡೆದು ಹೋಗುತ್ತಿವೆ. ಮತ್ತೆ ಕೆಲವು ಲೈನ್ಗಲ್ಲಿ ನೀರೇ ಪಾಸ್ ಆಗಲ್ಲ ಅಂತವುವನ್ನು ಡೈರೆಕ್ಟ್ ಆಗಿ ಹತ್ತರದ ಚರಂಡಿಗೇ ಕೊಡಲಾಗಿದೆ. ಹಾಗಾಗಿ ಇಲ್ಲಿ ಒಂದಷ್ಟು ಗಬ್ಬು ವಾಸನೆ ಬಂದು ನಾರುತ್ತಿರುವುದಲ್ಲದೆ, ಸಾಂಕ್ರಾಮಿಕ ರೋಗಕ್ಕೆ ರಹದಾರಿ ನೀಡಿದಂತಾಗಿದೆ.
ಈ ಬಗ್ಗೆ, ನಾಗರಿಕರು ಹತ್ತು ಹಲವು ಬಾರಿ ನಗರ ಪಾಲಿಕೆ ದೂರು ನೀಡಿದ್ದಾರೆ ಅಲ್ಲೇನು ಆಗ್ತಾ ಇಲ್ಲ. ಅಧಿಕಾರಿಗಳಿಗೆ ದೂರ್ ನೀಡಿದ್ದಾರೆ ಅಲ್ಲೂ ಏನು ಆಗ್ತಾ ಇಲ್ಲ. ಈ ಬಾರಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ಸಂತ್ರಸ್ತರ ತಂಡವೊಂದು ತಯಾರಾಗಿದೆ. ಸದ್ಯ ಜಿಲ್ಲಾಧಿಕಾರಿಗಳೇ ನಗರ ಪಾಲಿಕೆ ಆಡಳಿತಾಧಿಕಾರಿಯಾಗಿದ್ದು ಅದೇನು ಕ್ರಮ ವಹಿಸುತ್ತಾರೋ ಕಾದು ನೋಡಬೇಕಾಗಿದೆ. ಅಲ್ಲಿದೆ ಕೆಲವು ಚರಂಡಿಗಳು ನೇರವಾಗಿ ನದಿಗಳಿಗೆ ಲಿಂಕ್ ಇರೋದಕ್ಕೆ ನದಿ ನೀರುಗಳು ಕೂಡ ಕಲುಷಿತಗೊಂಡಿವೆ ಜಲಚರಗಳು ಸತ್ತಿವೆ ಹಾಗಾಗಿ ಈ ವಿಚಾರವಾಗಿ ಜಿಲ್ಲಾಡಳಿತ ಪ್ರಯಾರಿಟಿಯಾಗಿ, ತುರ್ತಾಗಿ ಈ ಕೆಲಸ ಮಾಡುವ ಅತ್ಯವಶ್ಯಕತೆ ಇದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಸುಳ್ಯ:  ಕರ್ತವ್ಯದಲ್ಲಿದ್ದ ಉಪನ್ಯಾಸಕ ಕುಸಿದು ಬಿದ್ದು ಸಾವು
ಬ್ಯಾಂಕುಗಳ ಮೇಲೆ ಭೀಕರ ದಾಳಿಯ ಮುನ್ಸೂಚನೆ ನೀಡಿದ ಇರಾನ್- ಮಿನಿಮಮ್ 1000 ಮೀಟರ್ ದೂರವಿರಿ
ಟೂರಿಸಂ ಡೆವಲಪ್‌ಮೆಂಟ್‌ಗೆ ಅಧಿಕಾರಿಗಳೇ ಮಾರಕ
ಆನ್ ಲೈನ್ ವಂಚನೆ ಶಿರ್ವದ ಯುವತಿಗೆ ಲಕ್ಷ ಲಕ್ಷ ಉಂಡೆನಾಮ… ಬ್ಯಾಂಕ್ ನಿಯಮ ವಂಚಕರಿಗೆ  ಸಹಕಾರಿ?
ದೇವಳದ ಗೋಲ್ಮಾಲ್ ತಡೆಗೆ ಉಪ-ಮುಖ್ಯಮಂತ್ರಿ ಬುಲಾವ್!
ಎಸ್.ಎಸ್.ಎಲ್.ಸಿ. ಪರೀಕ್ಷೆ: ಮಂಗಳೂರಲ್ಲಿ ನಿಷೇಧಾಜ್ಞೆ ಜಾರಿ
“ಮಂಗಳೂರಲ್ಲಿ ಡ್ರೈ ಡೇ ಘೋಷಣೆ -ಎರಡು ದಿನ ಬಾರ್‌ಗಳಿಗೆ ಲಾಕ್ ..!” ದಕ್ಷಿಣ ಕನ್ನಡದಲ್ಲಿ ಕಟ್ಟುನಿಟ್ಟಿನ ಆದೇಶ
ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿಗೆ  ಪ್ರತಿದಾಳಿ ಯುಎಇ, ಬಹ್ರೇನ್, ಸೌದಿಯಲ್ಲಿ ಅಮೆರಿಕದ ನೆಲೆಗಳಿಗೆ ನಡುಕ.
ತುರ್ತು ಎಚ್ಚರಿಕೆ ‼️ಹಿಪ್ನೋಟೈಸಿಂಗ್ ಸ್ವಾಮಿಗಳು ನಿಮ್ಮ ಬಳಿಯೂ ಬರಬಹುದು
“ಪ್ರೇಮ ಕಥೆ ತಿರುವು: ಗಂಡನ ಜೀವವೇ ಟಾರ್ಗೆಟ್!”ಬ್ಯಾಂಕ್ ಅಧಿಕಾರಿ ಪತ್ನಿ taxi ಚಾಲಕನೊಂದಿಗೆ ಸೇರಿ killing plan
ನಾಟಕ ಕಲಾವಿದೆ ಸೌಮ್ಯ ಶೆಟ್ಟಿ ಬಂಧನ
ನಿಶ್ಚಿತಾರ್ಥ ಮಾಡಿಕೊಂಡು, ಫೈನಾನ್ಸಿಯಲ್ ವಂಚನೆ ದೂರು ದಾಖಲು
ಮಂಗಳೂರು ಸಿಟಿ ಪೊಲೀಸರ ಭರ್ಜರಿ ಬೇಟೆ – ನಿಷೇಧಿತ ಎಂಡಿಎಂ, ಗಾಂಜಾ ಮರಾಟಗಾರರ ಬಂಧನ
ಅಮೆರಿಕ–ಇಸ್ರೇಲ್ ದಾಳಿ ಬಳಿಕ ಇರಾನ್‌ನಲ್ಲಿ ಉದ್ವಿಗ್ನತೆ ತಾರಕಕ್ಕೆ
ಅಂದು ಮುಖ್ಯ ಮಂತ್ರಿ, ಇಂದು ಪುಟ್ಟಪಾತ್ ವ್ಯಾಪಾರಿ!!
ಉದ್ಯಮಿ, ಕಾಲೇಜ್ topper,  ಕೋಟ್ಯದೀಶರೇ…ಕಠಿಣ ಜೈನ ಸನ್ಯಾಸದತ್ತ…!
🚨 ಬೈಂದೂರಿನಲ್ಲಿ ಭಯಾನಕ ದಾಳಿ! ಕತ್ತಿಯಿಂದ ಹಲ್ಲೆ – ಆರೋಪಿ ಬಂಧನ
🚨 ದೇಶಾದ್ಯಂತ ಉಗ್ರ ಜಾಲದ ಮೇಲೆ ದೊಡ್ಡ ದಾಳಿ: ಕರ್ನಾಟಕದ ಬಳ್ಳಾರಿಯ ಅಬ್ದುಲ್ ಸಲಾಂ ಸೇರಿದಂತೆ 7 ರಾಜ್ಯಗಳಲ್ಲಿ 12 ಮಂದಿ ಬಂಧನ — ಯುವಕರಿಗೆ ಎಚ್ಚರಿಕೆ!
ಮನೆಯ ಲಾಕ್ ವ್ಯವಸ್ಥೆ ಇದ್ದರೂ, ಸುರಕ್ಷತೆ ಭೇದಿಸಲಾಗಿದೆ….!ಕುಟುಂಬ ದೇವಸ್ಥಾನಕ್ಕೆ -ಕಳ್ಳರು ಅದೇ ಮನೆ ಟಾರ್ಗೆಟ್..!
ಮರಣದಂಡನೆ ಶಿಕ್ಷೆಗೆ ಈಡಾದ  ತಮಿಳುನಾಡು   ಪೊಲೀಸರು
ಮಕ್ಕಳ ಸುರಕ್ಷತೆಯೇ ಮುಖ್ಯ – ಸಂದೇಶ ಕೊಟ್ಟ ಹೈಕೋರ್ಟ್
ಹಾವು ಮುಂಗುಸಿ ಅಂತಾಗಿದ್ದವರು ಒಂದಾದರು
ರಾಜಕೀಯ ಸುದ್ದಿ ಅಂದರೆ ಬೋರ್ ಅಂತ ಅನ್ನಿಸುವರಿಗೆ ಇದು ಒಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಎಪಿಸೋಡ್!!!
ವಿವಾಹಿತ ದಂಪತಿಗಳಿಗೆ ಜಂಟಿ ITR ವ್ಯವಸ್ಥೆ ತರಲು- ಸಂಸತ್ತಿನಲ್ಲಿ Raghav Chadha ಆಗ್ರಹ.
ವಿಟ್ಲ ಪಟಾಕಿ ತಯಾರಿಕಾ ಘಟಕದಲ್ಲಿ ಪಟಾಕಿ ಸ್ಫೋಟ
“ಗ್ಯಾರಂಟಿ “ಹಣದ ಮೇಲೆ ಆಯೋಗದ ಕಣ್ಣು: ಸಿಎಂ ಸಿಡಿಮಿಡಿ ..ರಾಜಕೀಯ ಕಿಡಿ!
ಏರ್ ಇಂಡಿಯಾದಿಂದ ದೈನಂದಿನ ವಿಮಾನ ಹಾರಾಟದ ಬಗ್ಗೆ ನೂತನ ಪ್ರಕಟಣೆ
ಹತ್ತು ವರ್ಷದಿಂದ ಪೊಲೀಸರಿಗೆ ಬೇಕಾದ ಆರೋಪಿಯನ್ನು ಕೊನೆಗೂ ಬಂಧಿಸಿದ ಪೊಲೀಸರು
ಕೊನೆಗೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಿತೀಶ್ ಕುಮಾರ್