📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ವಿಶ್ವ ಸಂಸ್ಥೆಯು ಯಾವ ಪುರುಷಾರ್ಥಕ್ಕೆ? ಬಲವರ್ಧನೆಯ  ಅಗತ್ಯತೆ

ಕಳೆದ 37 ದಿನಗಳಿಂದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಅನವಶ್ಯಕವಾದಂತಹ ಆಕ್ರಮಣ ಹಾಗೂ ವಿದ್ವಂಸಕಾರಕ ಚಟುವಟಿಕೆಯ ವಿರುದ್ಧವಾಗಿ ವಿಶ್ವಸಂಸ್ಥೆಯಿಂದ ಯಾವುದೇ ಸ್ಪಂದನೆ ವ್ಯಕ್ತವಾಗಲಿಲ್ಲ, ಅಲ್ಲಿನ ಪರಿಸ್ಥಿತಿಯನ್ನು ತಿಳಿಗೊಳಿಸುವಂತಹ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಿದ್ದ ವಿಶ್ವ ಸಂಸ್ಥೆ ಮೌನವಾಗಿ ಕುಳಿತಿದ್ದು ಆಶ್ಚರ್ಯಕರವಾಗಿತ್ತು. ಇದೆಲ್ಲವದನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಂತಹ ನ್ಯಾಯ ಸಮ್ಮತವಲದಂತಹ ವಿಶ್ವ ಸಂಸ್ಥೆಯ ಅಗತ್ಯತೆ ಜಗತ್ತಿಗೆ ಇದಿಯಾ ಎಂಬ ಪ್ರಶ್ನೆ ಎದ್ದೇಳುತ್ತದೆ.

ಆಂಟೋನಿಯೋ ಗುಟೆರಸ್ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿರುವಂತಹ ವ್ಯಕ್ತಿ. ಇವರ ಅವಧಿಯು ಇನ್ನೊಂದು ವರ್ಷದಲ್ಲಿ ಮುಗಿಯಲಿದೆ. ಅದಕ್ಕೆ ಚುನಾವಣೆ ನಡೆದು ಹೊಸ ಆಡಳಿತ ಮಂಡಳಿಯ ರಚನೆಯು ಆಗುವುದಕ್ಕೆ ಇನ್ನೊಂದಿಷ್ಟು ಸಮಯ ಬಾಕಿ ಇದೆ ಅಷ್ಟೇ.

ಅಮೇರಿಕಾದ ನ್ಯೂ ಯಾರ್ಕ್ ಸಿಟಿಯಲ್ಲಿ ವಿಶ್ವಸಂಸ್ಥೆಯು ಪ್ರಧಾನ ಕಚೇರಿಯನ್ನು ಹೊಂದಿದೆ. ಅಲ್ಲದೆ ಕೆಲವು ದೇಶಗಳಲ್ಲಿ ಒಂದಿಷ್ಟು ಶಾಖಾ ಕಚೇರಿಗಳನ್ನು ವಿಶ್ವಸಂಸ್ಥೆಯು ಹೊಂದಿದೆ ಕೂಡ. ವಿಶ್ವಸಂಸ್ಥೆಯು ಹಲವು ವಿಭಾಗಗಳಲ್ಲಿ ಅಂತರರಾಷ್ಟ್ರೀಯ  ಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಹೆಚ್ಚಾಗಿ ಆರು ಕೌನ್ಸಿಲ್ ಗಳ ಮೂಲಕ ಕೆಲಸ ಮಾಡುತ್ತದೆ. ಹಾಗೆಯೇ ಒಂದಿಷ್ಟು ಉಪ ಸಂಸ್ಥೆ ಗಳು ಕೂಡ ಇವೆ.

ಮುಖ್ಯವಾಗಿ ಜನರಲ್ ಅಸೆಂಬ್ಲಿ, ಸೆಕ್ಯೂರಿಟಿ ಕೌನ್ಸಿಲ್, ಆರ್ಥಿಕ  ಮತ್ತು ಸಾಮಾಜಿಕ ಕೌನ್ಸಿಲ್, ಟ್ರಸ್ಟಿ  ಶಿಪ್ ಕೌನ್ಸಿಲ್, ರಾಷ್ಟ್ರೀಯ ನ್ಯಾಯಾಲಯ ಮತ್ತು ಸಚಿವಾಲಯ ಹೀಗೆ ಆರು ವಿಭಾಗದಲ್ಲಿ ಕೆಲಸ ಮಾಡುತ್ತದೆ. ಒಟ್ಟು 193 ರಾಷ್ಟ್ರಗಳ ಸದಸ್ಯತ್ವವನ್ನು ಹೊಂದಿರುವಂತಹ ವಿಶ್ವಸಂಸ್ಥೆಯು ಶಾಂತಿ ಭದ್ರತೆ ಹಾಗೂ ಮೂಲಭೂತ ಸೌಕರ್ಯಗಳ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ಭಾರತವು ವಿಶ್ವಸಂಸ್ಥೆಯ ಸ್ಥಾಪಕ ಸದಸ್ಯರಲ್ಲಿ ಒಂದಾಗಿದ್ದರು, ಭಾರತವನ್ನು ಖಾಯಂ ಸದಸ್ಯತ್ವದಿಂದ ಪ್ರಯತ್ನವನ್ನು ಹಲವು ರಾಷ್ಟ್ರಗಳು ಮಾಡುತ್ತಾ ಬಂದಿವೆ . ಅದರಲ್ಲಿ ಮುಖ್ಯವಾದದ್ದು ಚೀನಾ ಹಾಗೂ ಅಮೆರಿಕ. ಈ ಎರಡು ದೇಶವು ಭಾರತವನ್ನು ವಿಶ್ವಸಂಸ್ಥೆಯ ಕಾಯಂ ಸದಸ್ಯತ್ವದ ಹತ್ತಿರಕ್ಕೂ ಹೋಗಲು ಬಿಡುತ್ತಿರಲಿಲ್ಲ. ರಷ್ಯಾ ಬೆಂಬಲ ಇದ್ದರೂ ಸಹ, ವಿಶ್ವಸಂಸ್ಥೆ ಹಾಗೂ ಅದರ ಇತರ ಸದಸ್ಯರ ಮೇಲಿರುವ ಅಮೆರಿಕಾದ ಪ್ರಭಾವವು ಭಾರತಕ್ಕೆ ಸಹಕಾರ ನೀಡುತ್ತಾ ಬಂದಿತ್ತು.

ವಿಶ್ವಸಂಸ್ಥೆಯ ಮೇಲೆ ಅಮೆರಿಕವು ವಿಪರೀತವಾದಂತಹ ಪ್ರಭಾವವನ್ನು ಹೊಂದಿರುವಂತದ್ದನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಶ್ನಿಸುವ ಕೆಲಸವು ಯಾವತ್ತೂ ಆಗಬೇಕಿತ್ತು. ಆದರಿಗ ವಿಶ್ವಸಂಸ್ಥೆಯ ನಡೆಯನ್ನ ಪ್ರಶ್ನಿಸುವ ಸಮಯ ಬಂದಾಗಿದೆ.

ಎಸ್ ಒಂದನೇ ಮಹಾಯುದ್ಧದ ನಂತರ 20ನೇ ಶತಮಾನದ ಆದಿಯಲ್ಲಿ  ಹಲವು ಯುದ್ಧಗಳು ಹಿಂಸೆಗಳಿಂದ ಜಗತ್ತು ತಲ್ಲಣಗೊಂಡಿತ್ತು. ಯುದ್ಧದ ಪರಿಣಾಮ ಮನುಕುಲ ಸಂಕಷ್ಟದಲ್ಲಿತ್ತು. ಇಂತಹ ಸಂದರ್ಭದಲ್ಲಿ ಒಂದು ಬಲಿಷ್ಠ ಸಂಸ್ಥೆಯ ಬೇಕು ಎಂಬ ನಿರ್ಧಾರಕ್ಕೆ ಬಂದಂತಹ ಪ್ರಮುಖ ದೇಶಗಳು ಸೇರಿಕೊಂಡು ಲೀಗ್ ಆಫ್ ನೇಶನ್ ಸಂಸ್ಥೆಯನ್ನು ಹುಟ್ಟು ಹಾಕುತ್ತಾರೆ. ಈ ಸಂಸ್ಥೆಯ ಕಾರ್ಯವೈಕರಿ ಜಗತ್ತಿನ ದೇಶಗಳಿಗೆ ಹಿಡಿಸಲಿಲ್ಲ. ಈ ಒಂದು ಸಂಸ್ಥೆಯಿಂದ ಜಪಾನ್ ಜಪಾನ್ ಇಟಲಿ ಸಹಿತ ಸಾಕಷ್ಟು ರಾಷ್ಟ್ರಗಳು ಹಿಂದೆ ಸರಿದಿದ್ದವು. 1936ರಲ್ಲಿ ಇಟಲಿಯ ಆಕ್ರಮಣವನ್ನು ಲೀಗ್ ಆಫ್ ನೇಶನ್ ನಿಭಾಯಿಸುವಲ್ಲಿ ವಿಫಲವಾಗಿರುವುದನ್ನು ಇಡೀ ಜಗತ್ತು ನೋಡಿದ ಕಾರಣ ಈ ಸಂಸ್ಥೆಯ ಬಗ್ಗೆ ಜಗತ್ತೇ ಆಸಕ್ತಿ ಕಳೆದುಕೊಂಡಿತು. ಅಲ್ಲಿಂದ ಅದರ ಪಥನವೂ ಪ್ರಾರಂಭವಾಯಿತು. ಜಗತ್ತಿನ ಬಲಿಷ್ಠ ರಾಷ್ಟ್ರಗಳು ಲೀಗ್ ಆಫ್ ನೇಷನ್ ಜೊತೆಗೆ ಸಂಬಂಧವನ್ನು ಇಟ್ಟುಕೊಳ್ಳುವುದು ಬಿಡಿ, ಅದರಿಂದ ದೂರವೇ ಉಳಿದಿದ್ದವು. ಹಾಗಾಗಿ ಲೀಗ್ ಆಫ್ ನೇಶನ್ ತನ್ನ ಅಸ್ತಿತ್ವವನ್ನು ಹಂತ ಹಂತವಾಗಿ ಕಳೆದುಕೊಳ್ಳುತ್ತಾ ಹೋಯಿತು.

ಎರಡನೇ ಮಹಾಯುದ್ಧದ ನಂತರ ಜಗತ್ತಿಗೆ ಅಂತರರಾಷ್ಟ್ರೀಯ ಭದ್ರತಾ ಮಂಡಳಿಯ ಅವಶ್ಯಕತೆ ಇದೆ ಅನ್ನೋದನ್ನ ಹೇಳಿತು. ಪರಿಣಾಮ 1941 ರಿಂದಲೇ ಅಂತರಾಷ್ಟ್ರೀಯ ಸಂಸ್ಥೆಯ ಉಪರೇಷೆ ಬಗ್ಗೆ  ಪೂರ್ವಪರ ಚರ್ಚೆಗಳು ಪ್ರಾರಂಭವಾದವು. 1945 ರಲ್ಲಿ  ಅಧಿಕೃತವಾಗಿ ವಿಶ್ವಸಂಸ್ಥೆಯು ಜನ್ಮ ತಾಳಿತು.  ಹೀಗೆ ಜನ್ಮ ತಾಳಿದ ವಿಶ್ವಸಂಸ್ಥೆಯ ಮೇಲೆ ಆರಂಭದಿಂದಲೂ ಬ್ರಿಟನ್ ಹಾಗೂ ಅಮೆರಿಕಾದ ಪ್ರಭಾವ ಹೆಚ್ಚಾಗಿತ್ತು. ಸದ ನಂತರ ಬ್ರಿಟನ್ ಪ್ರಭಾವ ಕಡಿಮೆಯಾದರು ಅಮೇರಿಕಾದ ಪ್ರಭಾವ ಬಿಗೂ ಗೊಳ್ಳುತ್ತಲೇ ಹೋಯಿತು. ವಿಶ್ವಸಂಸ್ಥೆಯು ಒಂದು ಸ್ವಾಯತ್ತ ಸಂಸ್ಥೆಯಾಗಿ ಕಾಣಿಸಿಕೊಳ್ಳುವಲ್ಲಿ ವಿಫಲವಾಗಿದ್ದಂತು ಸತ್ಯವೇ. ಸಂದರ್ಭಗಳಲ್ಲಿ ಅಮೆರಿಕವು ಹಲವು ದೇಶಗಳ ಮೇಲೆ ಆಕ್ರಮಣ ಮಾಡಿದಾಗಲೂ ಅಲ್ಲಿ ಅಂತರರಾಷ್ಟ್ರೀಯ ಕಾನೂನಿನ ವಿರುದ್ಧವಾಗಿ ನಡೆದುಕೊಂಡಾಗಲು ವಿಶ್ವಸಂಸ್ಥೆಯಿಂದ ಯಾವುದೇ ಟೀಕೆ ಬಾರದೇ ಇರುವುದು ವಿಶ್ವಸಂಸ್ಥೆಯ ಬಗ್ಗೆ ಚರ್ಚೆಗೆ ಕಾರಣವಾಗಿದೆ.

ಈ ಹಿಂದೆ ಇರಾಕ್ ಮೇಲಿನ ದಾಳಿಯ ವಿಚಾರವಿರಲಿ, ವೆನಿಜುಗಳಾದ ಅಧ್ಯಕ್ಷರನ್ನ ಹೊತ್ತುಕೊಂಡು ಬಂದ ವಿಚಾರವಿರಲಿ, ಪ್ಯಾಲಿಸ್ಟೇನ್ ಹಾಗೂ ಲೆಬನಾನ್ ಮೇಲೆ ನಡೆಯುತ್ತಿರುವ ಕ್ರೌರ್ಯದ ದಾಳಿಯ ವಿಚಾರವಾಗಿರಲಿ ಇತ್ತೀಚೆಗೆ ನಡೆದ ಇರಾನ್ ಮೇಲಿನ ದಾಳಿಯ ವಿಚಾರದಲ್ಲಿರಲಿ ವಿಶ್ವಸಂಸ್ಥೆಯು ಎಲ್ಲೂ ಮಾತನಾಡಲಿಲ್ಲ. ಕಾರಣ ಇಷ್ಟೇ ಒಂದು ಕಡೆ ಅಮೆರಿಕ ಗಟ್ಟಿಯಾಗಿ ನಿಂತಿರುವ ಕಾರಣ ಅದರ ವಿರುದ್ಧ ಹೆಜ್ಜೆ ಇಡಲು ವಿಶ್ವಸಂಸ್ಥೆಯು ಭಯಪಡುತ್ತಿರುವುದೇ ಇದಕ್ಕೆ ಕಾರಣ. ವತಹ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವು ಬಾರಿ ಅಂತರರಾಷ್ಟ್ರೀಯ ಸಂಸ್ಥೆಗಳ ವಿರುದ್ಧ ಅತ್ಯಂತ ಕಟುವಾದ ರೀತಿಯಲ್ಲಿ ಮತ್ತು ಅಸಹ್ಯಕರವಾಗಿ ಬೈದಾಡಿರುವುದನ್ನು ಕಾಣುತ್ತೇವೆ. ಈ ಹಿಂದೆ ಡಬ್ಲ್ಯೂ ಎಚ್ ಓ ವಿರುದ್ಧವು ಹರಿಹಾಯ್ದಿದ್ದ ಈ ಡೊನಾಲ್ಡ್ ಟ್ರಂಪ್. ಒಟ್ಟಿನಲ್ಲಿ ವಿಶ್ವಸಂಸ್ಥೆಯು ಜಗತ್ತಿಗೆ ನ್ಯಾಯ ಸಮ್ಮತವಾಗಿಲ್ಲ ಅನ್ನುವುದನ್ನು ಈ ಮೂಲಕ ಬಹುತೇಕವಾಗಿ ತೋರ್ಪಡಿಸಿದೆ. 

ಜಗತ್ತಿಗೆ ಒಂದು ಬಲಿಷ್ಠ ವಾದಂತಹ ಹಾಗೂ ಅಷ್ಟೇ ನ್ಯಾಯೋಚಿತ ನಿಬಂಧನೆಗೆ ಒಳಪಟ್ಟಂತಹ ಸಂಸ್ಥೆಯ ಅಗತ್ಯತೆ ಖಂಡಿತವಾಗಿಯೂ ಇದೆ. ಕತ್ತಿನ ಎಲ್ಲಾ ದೇಶಗಳನ್ನು ಒಳಗೊಂಡಂತಹ ಸಂಸ್ಥೆಯು ಅದಾಗಿರಬೇಕು. ಅಂತರರಾಷ್ಟ್ರೀಯ ಮಟ್ಟದ ವ್ಯಾಜ್ಯಗಳನ್ನು ನಿಭಾಯಿಸುವಂತಹ ನ್ಯಾಯಾಂಗ ವ್ಯವಸ್ಥೆಯನ್ನು ಇದೇ ಸಂಸ್ಥೆಯ ಆಡಳಿತದಲ್ಲಿ ಇರಬೇಕು. ಯಾವುದೇ ಸದಸ್ಯ ರಾಷ್ಟ್ರದ ಮೇಲೆ ಯಾವುದೇ ಶಕ್ತಿಯ ಏಕಾಏಕಿ ದಾಳಿಯ ವಿರುದ್ಧ ಅಂತರಾಷ್ಟ್ರೀಯ ನಿಯಮಗಳ ವಿರುದ್ಧವಾಗಿ ನಡೆಯುವಂತಹ ದಾಳಿಗೆ ಪ್ರತ್ಯುತ್ತರ ನೀಡುವಂತಹ ಶಕ್ತಿಯನ್ನು ಆ ಒಂದು ಸಂಸ್ಥೆಯು ಹೊಂದಿರಬೇಕು. ಶಕ್ತಿಯನ್ನು ಜಗತ್ತಿನ ಎಲ್ಲಾ ರಾಷ್ಟ್ರವೂ ಆ ಸಂಸ್ಥೆಗೆ ನೀಡುವಂತಹ ಕೆಲಸ ಮಾಡಬೇಕು. ಯಾವ ದೇಶವನ್ನು ಮೇಲು-ಕೀಳು ಅಂತ ನೋಡದೆ ಜಗತ್ತಿನ ಮುಂದೆ ಎಲ್ಲರನ್ನೂ ಸರಿಸಮಾನವಾಗಿ ನೋಡುವಂತಹ ಶಕ್ತಿಯುತ ಸಂಸ್ಥೆ ಅತ್ಯವಶ್ಯಕವಾಗಿ ಬೇಕೇ ಬೇಕು. ನ್ಯಾಯೋಚಿತ ಸಂಸ್ಥೆ ಏನಾದರೂ ಈಗ ಇದ್ದಿದ್ದರೆ ಖಂಡಿತವಾಗಿಯೂ ಅಮೆರಿಕ ಹಾಗೂ ಇಸ್ರೇಲ್ ಎರಡು ದೇಶವು ಅಂತರರಾಷ್ಟ್ರೀಯ ಕಾನೂನಿನ ಮುಂದೆ ತಪ್ಪಿತಸ್ಥರಾಗಿ ನಿಲ್ಲುತ್ತಿದ್ದರು ಅನ್ನುವುದರಲ್ಲಿ ಎರಡು ಮಾತೇ ಇಲ್ಲ. ಏಕಾದಂತಹ ದೇಶಗಳು ತಮಗೆ ಬೇಕಾದ ಹಾಗೆ ನಡೆದುಕೊಳ್ಳುವುದನ್ನು, ಬಡ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ನಡೆಸುವುದನ್ನು, ಇನ್ನೊಂದು ರಾಷ್ಟ್ರದ ಸಂಪತ್ತನ್ನು ನಾಶ ಮಾಡಲು ಅಥವಾ ಕಬಳಿಸಲು ಪ್ರಯತ್ನಿಸುವ  ವ್ಯಕ್ತಿಗಳ ಮೇಲೆ ಅಥವಾ ರಾಷ್ಟ್ರಗಳ ಮೇಲೆ ಪ್ರಹಾರ ಮಾಡುವಂತಹ ಗಟ್ಟಿಗ ಸಂಸ್ಥೆಯ ಅವಶ್ಯಕತೆ ಇದೆ. ಆ ಸಂಸ್ಥೆಯನ್ನು ನಮ್ಮದೇ ದೇಶದ ನೇತೃತ್ವದಲ್ಲಿ ಪ್ರಾರಂಭವಾಗಲಿ  ಏನಂತೀರಿ

COMMENTS

Login with Gmail to comment

ಇನ್ನಷ್ಟು ಸುದ್ದಿ

ಮೈ ಜುಮ್ಮೆನ್ನಿಸುವ ಬೈಕ್–ಲಾರಿ ಡಿಕ್ಕಿ ಅಪಘಾತ… ಕ್ಷಣಾರ್ಧದಲ್ಲೇ ಜೀವ ಹೋದ ಹೃದಯವಿದ್ರಾವಕ ರಸ್ತೆ ದುರಂತ
ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಹೆಸರಲ್ಲಿ ನಡಿತಿರೋದೇನು?
ಎಸ್.ಎಸ್.ಎಲ್.ಸಿ. ಪರೀಕ್ಷೆ: ಮಂಗಳೂರಲ್ಲಿ ನಿಷೇಧಾಜ್ಞೆ ಜಾರಿ
ಎಚ್ಚರ… ನಿಮ್ಮಸುತ್ತಮುತ್ತ ಏನು ನಡೆಯುತ್ತಿದೆ ಗೊತ್ತಿರಲಿ! 🚨Be Aware… Stay Alert… Save Youth!
ಗಂಡನ ಮನೆಯಿಂದ ಯುವತಿಯನ್ನು ಎಳೆದೊಯ್ದರು
🚨4 ವರ್ಷಗಳಿಂದ ಪೊಲೀಸರಿಗೆ ತಪ್ಪಿಸಿಕೊಂಡಿದ್ದ 17 ಪ್ರಕರಣಗಳ ಆರೋಪಿಯ ಡ್ರಾಮಾಟಿಕ್ ಬಂಧನ!
ಮಕ್ಕಳ ಸುರಕ್ಷತೆಯೇ ಮುಖ್ಯ – ಸಂದೇಶ ಕೊಟ್ಟ ಹೈಕೋರ್ಟ್
ಪಿವಿ ಎಸ್ ಸಂಸ್ಥೆಯ ಆಡಳಿತದಲ್ಲಿ ಯಾರ ಹಸ್ತಕ್ಷೇಪವು ಇಲ್ಲ – ಸರೋಜಿನಿ ಕುಶೆ
ಯುಎಇಯಿಂದ ಯುರೋಪ್ ತನಕ ಮೋದಿ ಐತಿಹಾಸಿಕ ವಿದೇಶ ಪ್ರವಾಸ…ಡಿಪ್ಲೊಮಸಿ – ತೈಲದಿಂದ ತಂತ್ರಜ್ಞಾನವರೆಗೆ ಇದು ಭಾರತದ ಭವಿಷ್ಯದ ತಂತ್ರಾತ್ಮಕ ನಡೆ ?!
ಧುರಂಧರ್ 2 ಕ್ರೇಜ್ ಓವರ್‌ಫ್ಲೋ ಕಲೆಕ್ಷನ್‌ನಲ್ಲಿಕರ್ನಾಟಕವೇ ಟಾಪ್… ದಕ್ಷಿಣ ಭಾರತದಲ್ಲಿ 300 ಕೋಟಿ ಕ್ಲಬ್!
ಸಭೆಯ ನಡುವೆ ಬ್ಲಾಕ್ ಅಧ್ಯಕ್ಷ ಕಾಣೆ …ಕಾರ್ಯಕರ್ತರು ಗುಸು ಗುಸು – ಪಿಸುಪಿಸು
ಕಾರ್ಕಳ ಮಹಾಮಸ್ತಕಾಭಿಷೇಕಕ್ಕೆ ₹1.59 ಕೋಟಿ ಅನುದಾನ: ಮೊದಲ ಕಂತು ಬಿಡುಗಡೆ…
“ಮಂಗಳೂರಲ್ಲಿ ಡ್ರೈ ಡೇ ಘೋಷಣೆ -ಎರಡು ದಿನ ಬಾರ್‌ಗಳಿಗೆ ಲಾಕ್ ..!” ದಕ್ಷಿಣ ಕನ್ನಡದಲ್ಲಿ ಕಟ್ಟುನಿಟ್ಟಿನ ಆದೇಶ
ಪ್ರಮೋದ್ ಮಧ್ವರಾಜ್ ಅವರಿಗೆ ಕೊನೆಗೂ ಸಿಕ್ಕಿತು ಗೌರವ
ಕಾರಿಗೆ ಮಹಿಳೆ ಡಿಕ್ಕಿ..ಗುಳಿಗಜ್ಜನೆ ಕಾಪಾಡಿದ್ದ..! ಎದೆ ಜಲ್ಲೆನಿಸುವ ದೃಶ್ಯ
ಮೇ 29ರಿಂದ ತಣ್ಣೀರುಬಾವಿ ಬೀಚ್‌ನಲ್ಲಿ ಮೂರು ದಿನಗಳ ರಾಷ್ಟ್ರಮಟ್ಟದ ಸರ್ಫಿಂಗ್ ಸ್ಪರ್ಧೆ…
ಪಹಲ್ಗಾಂಮ್ ದಾಳಿಯ ಒಂದು ವರ್ಷ: ಇನ್ನೂ ಮುಗಿಯದ ನೋವು, ಮರೆಯಲಾಗದ ನೆನಪುಗಳು
ಬೆಂಗಳೂರಿನಿಂದ ಚೆನ್ನೈಗೆ ಹೊರಟ ವಿಮಾನದಲ್ಲಿ ಹೊಗೆ — ಎಲ್ಲಾ ವಿಮಾನಗಳು ವಿಳಂಬ ಪ್ರಯಾಣಿಕರಿಗೆ ತೊಂದರೆ
ಬೆಂಗಳೂರು ಟು ಮುಂಬೈ  ಐದೇ ಘಂಟೆ ಪ್ರಯಾಣ- ಎಕ್ಸ್ಪ್ರೆಸ್ ಹೈವೇಗೆ ಅಸ್ತು
ನಾಳೆ ಮಂಗಳೂರಲ್ಲಿ ಇಡೀ ದಿನ ಕರೆಂಟಿಲ್ಲ Power Cut.. ಎಲ್ಲೆಲ್ಲಿ?
ಮಧ್ಯಪ್ರಾಚ್ಯದಲ್ಲಿ ಯುದ್ಧ– ಸಂಕಷ್ಟದಲ್ಲಿ ಜಗತ್ತು-ಉಸಿರು ತಡೆದ ಪರಿಸ್ಥಿತಿ!ಏನಾಗ್ತಾ ಇದೆ…
ಬಂಗಾಳ ಚುನಾವಣೆ ಫಲಿತಾಂಶವೇ ಬದಲಾಗಿತ್ತಾ?ಬಂಗಾಳ ರಾಜಕೀಯದಲ್ಲಿ ಹೊಸ ಬಾಂಬ್!ಸುಪ್ರೀಂ ಕೋರ್ಟ್ ಮುಂದೆ ಬಿಜೆಪಿ ಜಯದ ಮೇಲೆ ಟಿಎಂಸಿ ದೊಡ್ಡ ಪ್ರಶ್ನೆ!
ಹಳಿಯಾಳದಲ್ಲಿ ನೀರಿನ ಹಾಹಾಕಾರ… ಮಾರ್ಚ್ 16ರಂದು ಬೃಹತ್ ಪ್ರತಿಭಟನೆ 
ಪಿಸ್ತೂಲ್ ತೋರಿಸಿ ಬೆದರಿಸಿ ಪರಾರಿಯಾಗಿದ್ದ ಯುವಕ ಬಂಧನ
ಬೃಹತ್ ಅಭಿಯಾನ….5.51 ಟನ್ ವಸ್ತುಗಳು..!5000ಕ್ಕೂ ಹೆಚ್ಚು ದೇವರ ಫೋಟೋಗಳು
ಮುಳುಗುತ್ತಿರುವ ಕಾಂಗ್ರೆಸ್ಸಿಗೆ ಇನ್ನೂ ಬುದ್ಧಿ ಬಂದಂತಿಲ್ಲ… ಡಿಜೆಪಿ ರಾಮಚಂದ್ರರಾವ್  ಅಮಾನತ್ ಆದೇಶ ಹಿಂಪಡೆದ  ಸರ್ಕಾರ
ಶಂಕರಾಚಾರ್ಯರ ಹೊಸ ಯೋಜನೆ ದೇಶವನ್ನೇ ಚರ್ಚೆಗೆ ತಳ್ಳಿದ ಕಾರಣ ಏನು?Go-LXಒಂದು ಕ್ಲಿಕ್‌ನಲ್ಲಿ ಹಸು ಮಾರಾಟ…
ಘರ್ ವಾಪ್ಸಿ ಯಾದ ಯೋಗೇಶ್ ಶೆಟ್ಟಿ ಜೆಪ್ಪು
ದರ್ಶನ್‌ಗೆ ಇನ್ನೊಂದು ವರ್ಷ ಜೈಲೇ ಗತಿ…ಜಾಮೀನು ನಿರಾಕರಣೆ.
ಸಿಐಡಿ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್: ವಂಚಕರ ಬಲೆಯಿಂದ ಜಸ್ಟ್ ಎಸ್ಕೇಪ್