📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ವಿಶ್ವ ಸಂಸ್ಥೆಯು ಯಾವ ಪುರುಷಾರ್ಥಕ್ಕೆ? ಬಲವರ್ಧನೆಯ  ಅಗತ್ಯತೆ

ಕಳೆದ 37 ದಿನಗಳಿಂದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಅನವಶ್ಯಕವಾದಂತಹ ಆಕ್ರಮಣ ಹಾಗೂ ವಿದ್ವಂಸಕಾರಕ ಚಟುವಟಿಕೆಯ ವಿರುದ್ಧವಾಗಿ ವಿಶ್ವಸಂಸ್ಥೆಯಿಂದ ಯಾವುದೇ ಸ್ಪಂದನೆ ವ್ಯಕ್ತವಾಗಲಿಲ್ಲ, ಅಲ್ಲಿನ ಪರಿಸ್ಥಿತಿಯನ್ನು ತಿಳಿಗೊಳಿಸುವಂತಹ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಿದ್ದ ವಿಶ್ವ ಸಂಸ್ಥೆ ಮೌನವಾಗಿ ಕುಳಿತಿದ್ದು ಆಶ್ಚರ್ಯಕರವಾಗಿತ್ತು. ಇದೆಲ್ಲವದನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಂತಹ ನ್ಯಾಯ ಸಮ್ಮತವಲದಂತಹ ವಿಶ್ವ ಸಂಸ್ಥೆಯ ಅಗತ್ಯತೆ ಜಗತ್ತಿಗೆ ಇದಿಯಾ ಎಂಬ ಪ್ರಶ್ನೆ ಎದ್ದೇಳುತ್ತದೆ.

ಆಂಟೋನಿಯೋ ಗುಟೆರಸ್ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿರುವಂತಹ ವ್ಯಕ್ತಿ. ಇವರ ಅವಧಿಯು ಇನ್ನೊಂದು ವರ್ಷದಲ್ಲಿ ಮುಗಿಯಲಿದೆ. ಅದಕ್ಕೆ ಚುನಾವಣೆ ನಡೆದು ಹೊಸ ಆಡಳಿತ ಮಂಡಳಿಯ ರಚನೆಯು ಆಗುವುದಕ್ಕೆ ಇನ್ನೊಂದಿಷ್ಟು ಸಮಯ ಬಾಕಿ ಇದೆ ಅಷ್ಟೇ.

ಅಮೇರಿಕಾದ ನ್ಯೂ ಯಾರ್ಕ್ ಸಿಟಿಯಲ್ಲಿ ವಿಶ್ವಸಂಸ್ಥೆಯು ಪ್ರಧಾನ ಕಚೇರಿಯನ್ನು ಹೊಂದಿದೆ. ಅಲ್ಲದೆ ಕೆಲವು ದೇಶಗಳಲ್ಲಿ ಒಂದಿಷ್ಟು ಶಾಖಾ ಕಚೇರಿಗಳನ್ನು ವಿಶ್ವಸಂಸ್ಥೆಯು ಹೊಂದಿದೆ ಕೂಡ. ವಿಶ್ವಸಂಸ್ಥೆಯು ಹಲವು ವಿಭಾಗಗಳಲ್ಲಿ ಅಂತರರಾಷ್ಟ್ರೀಯ  ಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಹೆಚ್ಚಾಗಿ ಆರು ಕೌನ್ಸಿಲ್ ಗಳ ಮೂಲಕ ಕೆಲಸ ಮಾಡುತ್ತದೆ. ಹಾಗೆಯೇ ಒಂದಿಷ್ಟು ಉಪ ಸಂಸ್ಥೆ ಗಳು ಕೂಡ ಇವೆ.

ಮುಖ್ಯವಾಗಿ ಜನರಲ್ ಅಸೆಂಬ್ಲಿ, ಸೆಕ್ಯೂರಿಟಿ ಕೌನ್ಸಿಲ್, ಆರ್ಥಿಕ  ಮತ್ತು ಸಾಮಾಜಿಕ ಕೌನ್ಸಿಲ್, ಟ್ರಸ್ಟಿ  ಶಿಪ್ ಕೌನ್ಸಿಲ್, ರಾಷ್ಟ್ರೀಯ ನ್ಯಾಯಾಲಯ ಮತ್ತು ಸಚಿವಾಲಯ ಹೀಗೆ ಆರು ವಿಭಾಗದಲ್ಲಿ ಕೆಲಸ ಮಾಡುತ್ತದೆ. ಒಟ್ಟು 193 ರಾಷ್ಟ್ರಗಳ ಸದಸ್ಯತ್ವವನ್ನು ಹೊಂದಿರುವಂತಹ ವಿಶ್ವಸಂಸ್ಥೆಯು ಶಾಂತಿ ಭದ್ರತೆ ಹಾಗೂ ಮೂಲಭೂತ ಸೌಕರ್ಯಗಳ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ಭಾರತವು ವಿಶ್ವಸಂಸ್ಥೆಯ ಸ್ಥಾಪಕ ಸದಸ್ಯರಲ್ಲಿ ಒಂದಾಗಿದ್ದರು, ಭಾರತವನ್ನು ಖಾಯಂ ಸದಸ್ಯತ್ವದಿಂದ ಪ್ರಯತ್ನವನ್ನು ಹಲವು ರಾಷ್ಟ್ರಗಳು ಮಾಡುತ್ತಾ ಬಂದಿವೆ . ಅದರಲ್ಲಿ ಮುಖ್ಯವಾದದ್ದು ಚೀನಾ ಹಾಗೂ ಅಮೆರಿಕ. ಈ ಎರಡು ದೇಶವು ಭಾರತವನ್ನು ವಿಶ್ವಸಂಸ್ಥೆಯ ಕಾಯಂ ಸದಸ್ಯತ್ವದ ಹತ್ತಿರಕ್ಕೂ ಹೋಗಲು ಬಿಡುತ್ತಿರಲಿಲ್ಲ. ರಷ್ಯಾ ಬೆಂಬಲ ಇದ್ದರೂ ಸಹ, ವಿಶ್ವಸಂಸ್ಥೆ ಹಾಗೂ ಅದರ ಇತರ ಸದಸ್ಯರ ಮೇಲಿರುವ ಅಮೆರಿಕಾದ ಪ್ರಭಾವವು ಭಾರತಕ್ಕೆ ಸಹಕಾರ ನೀಡುತ್ತಾ ಬಂದಿತ್ತು.

ವಿಶ್ವಸಂಸ್ಥೆಯ ಮೇಲೆ ಅಮೆರಿಕವು ವಿಪರೀತವಾದಂತಹ ಪ್ರಭಾವವನ್ನು ಹೊಂದಿರುವಂತದ್ದನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಶ್ನಿಸುವ ಕೆಲಸವು ಯಾವತ್ತೂ ಆಗಬೇಕಿತ್ತು. ಆದರಿಗ ವಿಶ್ವಸಂಸ್ಥೆಯ ನಡೆಯನ್ನ ಪ್ರಶ್ನಿಸುವ ಸಮಯ ಬಂದಾಗಿದೆ.

ಎಸ್ ಒಂದನೇ ಮಹಾಯುದ್ಧದ ನಂತರ 20ನೇ ಶತಮಾನದ ಆದಿಯಲ್ಲಿ  ಹಲವು ಯುದ್ಧಗಳು ಹಿಂಸೆಗಳಿಂದ ಜಗತ್ತು ತಲ್ಲಣಗೊಂಡಿತ್ತು. ಯುದ್ಧದ ಪರಿಣಾಮ ಮನುಕುಲ ಸಂಕಷ್ಟದಲ್ಲಿತ್ತು. ಇಂತಹ ಸಂದರ್ಭದಲ್ಲಿ ಒಂದು ಬಲಿಷ್ಠ ಸಂಸ್ಥೆಯ ಬೇಕು ಎಂಬ ನಿರ್ಧಾರಕ್ಕೆ ಬಂದಂತಹ ಪ್ರಮುಖ ದೇಶಗಳು ಸೇರಿಕೊಂಡು ಲೀಗ್ ಆಫ್ ನೇಶನ್ ಸಂಸ್ಥೆಯನ್ನು ಹುಟ್ಟು ಹಾಕುತ್ತಾರೆ. ಈ ಸಂಸ್ಥೆಯ ಕಾರ್ಯವೈಕರಿ ಜಗತ್ತಿನ ದೇಶಗಳಿಗೆ ಹಿಡಿಸಲಿಲ್ಲ. ಈ ಒಂದು ಸಂಸ್ಥೆಯಿಂದ ಜಪಾನ್ ಜಪಾನ್ ಇಟಲಿ ಸಹಿತ ಸಾಕಷ್ಟು ರಾಷ್ಟ್ರಗಳು ಹಿಂದೆ ಸರಿದಿದ್ದವು. 1936ರಲ್ಲಿ ಇಟಲಿಯ ಆಕ್ರಮಣವನ್ನು ಲೀಗ್ ಆಫ್ ನೇಶನ್ ನಿಭಾಯಿಸುವಲ್ಲಿ ವಿಫಲವಾಗಿರುವುದನ್ನು ಇಡೀ ಜಗತ್ತು ನೋಡಿದ ಕಾರಣ ಈ ಸಂಸ್ಥೆಯ ಬಗ್ಗೆ ಜಗತ್ತೇ ಆಸಕ್ತಿ ಕಳೆದುಕೊಂಡಿತು. ಅಲ್ಲಿಂದ ಅದರ ಪಥನವೂ ಪ್ರಾರಂಭವಾಯಿತು. ಜಗತ್ತಿನ ಬಲಿಷ್ಠ ರಾಷ್ಟ್ರಗಳು ಲೀಗ್ ಆಫ್ ನೇಷನ್ ಜೊತೆಗೆ ಸಂಬಂಧವನ್ನು ಇಟ್ಟುಕೊಳ್ಳುವುದು ಬಿಡಿ, ಅದರಿಂದ ದೂರವೇ ಉಳಿದಿದ್ದವು. ಹಾಗಾಗಿ ಲೀಗ್ ಆಫ್ ನೇಶನ್ ತನ್ನ ಅಸ್ತಿತ್ವವನ್ನು ಹಂತ ಹಂತವಾಗಿ ಕಳೆದುಕೊಳ್ಳುತ್ತಾ ಹೋಯಿತು.

ಎರಡನೇ ಮಹಾಯುದ್ಧದ ನಂತರ ಜಗತ್ತಿಗೆ ಅಂತರರಾಷ್ಟ್ರೀಯ ಭದ್ರತಾ ಮಂಡಳಿಯ ಅವಶ್ಯಕತೆ ಇದೆ ಅನ್ನೋದನ್ನ ಹೇಳಿತು. ಪರಿಣಾಮ 1941 ರಿಂದಲೇ ಅಂತರಾಷ್ಟ್ರೀಯ ಸಂಸ್ಥೆಯ ಉಪರೇಷೆ ಬಗ್ಗೆ  ಪೂರ್ವಪರ ಚರ್ಚೆಗಳು ಪ್ರಾರಂಭವಾದವು. 1945 ರಲ್ಲಿ  ಅಧಿಕೃತವಾಗಿ ವಿಶ್ವಸಂಸ್ಥೆಯು ಜನ್ಮ ತಾಳಿತು.  ಹೀಗೆ ಜನ್ಮ ತಾಳಿದ ವಿಶ್ವಸಂಸ್ಥೆಯ ಮೇಲೆ ಆರಂಭದಿಂದಲೂ ಬ್ರಿಟನ್ ಹಾಗೂ ಅಮೆರಿಕಾದ ಪ್ರಭಾವ ಹೆಚ್ಚಾಗಿತ್ತು. ಸದ ನಂತರ ಬ್ರಿಟನ್ ಪ್ರಭಾವ ಕಡಿಮೆಯಾದರು ಅಮೇರಿಕಾದ ಪ್ರಭಾವ ಬಿಗೂ ಗೊಳ್ಳುತ್ತಲೇ ಹೋಯಿತು. ವಿಶ್ವಸಂಸ್ಥೆಯು ಒಂದು ಸ್ವಾಯತ್ತ ಸಂಸ್ಥೆಯಾಗಿ ಕಾಣಿಸಿಕೊಳ್ಳುವಲ್ಲಿ ವಿಫಲವಾಗಿದ್ದಂತು ಸತ್ಯವೇ. ಸಂದರ್ಭಗಳಲ್ಲಿ ಅಮೆರಿಕವು ಹಲವು ದೇಶಗಳ ಮೇಲೆ ಆಕ್ರಮಣ ಮಾಡಿದಾಗಲೂ ಅಲ್ಲಿ ಅಂತರರಾಷ್ಟ್ರೀಯ ಕಾನೂನಿನ ವಿರುದ್ಧವಾಗಿ ನಡೆದುಕೊಂಡಾಗಲು ವಿಶ್ವಸಂಸ್ಥೆಯಿಂದ ಯಾವುದೇ ಟೀಕೆ ಬಾರದೇ ಇರುವುದು ವಿಶ್ವಸಂಸ್ಥೆಯ ಬಗ್ಗೆ ಚರ್ಚೆಗೆ ಕಾರಣವಾಗಿದೆ.

ಈ ಹಿಂದೆ ಇರಾಕ್ ಮೇಲಿನ ದಾಳಿಯ ವಿಚಾರವಿರಲಿ, ವೆನಿಜುಗಳಾದ ಅಧ್ಯಕ್ಷರನ್ನ ಹೊತ್ತುಕೊಂಡು ಬಂದ ವಿಚಾರವಿರಲಿ, ಪ್ಯಾಲಿಸ್ಟೇನ್ ಹಾಗೂ ಲೆಬನಾನ್ ಮೇಲೆ ನಡೆಯುತ್ತಿರುವ ಕ್ರೌರ್ಯದ ದಾಳಿಯ ವಿಚಾರವಾಗಿರಲಿ ಇತ್ತೀಚೆಗೆ ನಡೆದ ಇರಾನ್ ಮೇಲಿನ ದಾಳಿಯ ವಿಚಾರದಲ್ಲಿರಲಿ ವಿಶ್ವಸಂಸ್ಥೆಯು ಎಲ್ಲೂ ಮಾತನಾಡಲಿಲ್ಲ. ಕಾರಣ ಇಷ್ಟೇ ಒಂದು ಕಡೆ ಅಮೆರಿಕ ಗಟ್ಟಿಯಾಗಿ ನಿಂತಿರುವ ಕಾರಣ ಅದರ ವಿರುದ್ಧ ಹೆಜ್ಜೆ ಇಡಲು ವಿಶ್ವಸಂಸ್ಥೆಯು ಭಯಪಡುತ್ತಿರುವುದೇ ಇದಕ್ಕೆ ಕಾರಣ. ವತಹ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವು ಬಾರಿ ಅಂತರರಾಷ್ಟ್ರೀಯ ಸಂಸ್ಥೆಗಳ ವಿರುದ್ಧ ಅತ್ಯಂತ ಕಟುವಾದ ರೀತಿಯಲ್ಲಿ ಮತ್ತು ಅಸಹ್ಯಕರವಾಗಿ ಬೈದಾಡಿರುವುದನ್ನು ಕಾಣುತ್ತೇವೆ. ಈ ಹಿಂದೆ ಡಬ್ಲ್ಯೂ ಎಚ್ ಓ ವಿರುದ್ಧವು ಹರಿಹಾಯ್ದಿದ್ದ ಈ ಡೊನಾಲ್ಡ್ ಟ್ರಂಪ್. ಒಟ್ಟಿನಲ್ಲಿ ವಿಶ್ವಸಂಸ್ಥೆಯು ಜಗತ್ತಿಗೆ ನ್ಯಾಯ ಸಮ್ಮತವಾಗಿಲ್ಲ ಅನ್ನುವುದನ್ನು ಈ ಮೂಲಕ ಬಹುತೇಕವಾಗಿ ತೋರ್ಪಡಿಸಿದೆ. 

ಜಗತ್ತಿಗೆ ಒಂದು ಬಲಿಷ್ಠ ವಾದಂತಹ ಹಾಗೂ ಅಷ್ಟೇ ನ್ಯಾಯೋಚಿತ ನಿಬಂಧನೆಗೆ ಒಳಪಟ್ಟಂತಹ ಸಂಸ್ಥೆಯ ಅಗತ್ಯತೆ ಖಂಡಿತವಾಗಿಯೂ ಇದೆ. ಕತ್ತಿನ ಎಲ್ಲಾ ದೇಶಗಳನ್ನು ಒಳಗೊಂಡಂತಹ ಸಂಸ್ಥೆಯು ಅದಾಗಿರಬೇಕು. ಅಂತರರಾಷ್ಟ್ರೀಯ ಮಟ್ಟದ ವ್ಯಾಜ್ಯಗಳನ್ನು ನಿಭಾಯಿಸುವಂತಹ ನ್ಯಾಯಾಂಗ ವ್ಯವಸ್ಥೆಯನ್ನು ಇದೇ ಸಂಸ್ಥೆಯ ಆಡಳಿತದಲ್ಲಿ ಇರಬೇಕು. ಯಾವುದೇ ಸದಸ್ಯ ರಾಷ್ಟ್ರದ ಮೇಲೆ ಯಾವುದೇ ಶಕ್ತಿಯ ಏಕಾಏಕಿ ದಾಳಿಯ ವಿರುದ್ಧ ಅಂತರಾಷ್ಟ್ರೀಯ ನಿಯಮಗಳ ವಿರುದ್ಧವಾಗಿ ನಡೆಯುವಂತಹ ದಾಳಿಗೆ ಪ್ರತ್ಯುತ್ತರ ನೀಡುವಂತಹ ಶಕ್ತಿಯನ್ನು ಆ ಒಂದು ಸಂಸ್ಥೆಯು ಹೊಂದಿರಬೇಕು. ಶಕ್ತಿಯನ್ನು ಜಗತ್ತಿನ ಎಲ್ಲಾ ರಾಷ್ಟ್ರವೂ ಆ ಸಂಸ್ಥೆಗೆ ನೀಡುವಂತಹ ಕೆಲಸ ಮಾಡಬೇಕು. ಯಾವ ದೇಶವನ್ನು ಮೇಲು-ಕೀಳು ಅಂತ ನೋಡದೆ ಜಗತ್ತಿನ ಮುಂದೆ ಎಲ್ಲರನ್ನೂ ಸರಿಸಮಾನವಾಗಿ ನೋಡುವಂತಹ ಶಕ್ತಿಯುತ ಸಂಸ್ಥೆ ಅತ್ಯವಶ್ಯಕವಾಗಿ ಬೇಕೇ ಬೇಕು. ನ್ಯಾಯೋಚಿತ ಸಂಸ್ಥೆ ಏನಾದರೂ ಈಗ ಇದ್ದಿದ್ದರೆ ಖಂಡಿತವಾಗಿಯೂ ಅಮೆರಿಕ ಹಾಗೂ ಇಸ್ರೇಲ್ ಎರಡು ದೇಶವು ಅಂತರರಾಷ್ಟ್ರೀಯ ಕಾನೂನಿನ ಮುಂದೆ ತಪ್ಪಿತಸ್ಥರಾಗಿ ನಿಲ್ಲುತ್ತಿದ್ದರು ಅನ್ನುವುದರಲ್ಲಿ ಎರಡು ಮಾತೇ ಇಲ್ಲ. ಏಕಾದಂತಹ ದೇಶಗಳು ತಮಗೆ ಬೇಕಾದ ಹಾಗೆ ನಡೆದುಕೊಳ್ಳುವುದನ್ನು, ಬಡ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ನಡೆಸುವುದನ್ನು, ಇನ್ನೊಂದು ರಾಷ್ಟ್ರದ ಸಂಪತ್ತನ್ನು ನಾಶ ಮಾಡಲು ಅಥವಾ ಕಬಳಿಸಲು ಪ್ರಯತ್ನಿಸುವ  ವ್ಯಕ್ತಿಗಳ ಮೇಲೆ ಅಥವಾ ರಾಷ್ಟ್ರಗಳ ಮೇಲೆ ಪ್ರಹಾರ ಮಾಡುವಂತಹ ಗಟ್ಟಿಗ ಸಂಸ್ಥೆಯ ಅವಶ್ಯಕತೆ ಇದೆ. ಆ ಸಂಸ್ಥೆಯನ್ನು ನಮ್ಮದೇ ದೇಶದ ನೇತೃತ್ವದಲ್ಲಿ ಪ್ರಾರಂಭವಾಗಲಿ  ಏನಂತೀರಿ

COMMENTS

Login with Gmail to comment

ಇನ್ನಷ್ಟು ಸುದ್ದಿ

ಉಡುಪಿಯಲ್ಲಿ ಟ್ರೇಡಿಂಗ್ ಹೆಸರಲ್ಲಿ ಲಕ್ಷಗಟ್ಟಲೆ ಧೋಕಾ….
ಭಾರತ ಬಗ್ಗೆ ಟ್ರಂಪ್ ಡಬಲ್ ಸ್ಟ್ಯಾಂಡ್…!ವಿವಾದ ಸೃಷ್ಟಿಸಿ, ಬಳಿಕ ಸಮಾಧಾನದ ಮಾತು
ಜೈನ ಮುನಿ… ಇರಾನ್‌ನ ಇಸ್ಲಾಮಿಕ್ ಸರ್ವೋಚ್ಚ ನಾಯಕನ ಅಂತ್ಯಕ್ರಿಯೆಯಲ್ಲಿ?
ರಾಜ್ಯದ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಾಗಿ ಉನ್ನತೀಕರಿಸಲು 3900 ಕೋಟಿ ಮೀಸಲು
ಶಿಕ್ಷಣ ಸುಧಾರಣೆಗೆ ರಾಜ್ಯ ಸರ್ಕಾರದ ಭರ್ಜರಿ ಪ್ಲಾನ್ ಬಹಿರಂಗ!
ರಾಜ್ಯವ್ಯಾಪಿ ಖೋಟಾ ನೋಟು ಜಾಲ ಭೇದಿಸಿದ ಖಾಕಿಯ ಚಾಣಾಕ್ಷ ಕಾರ್ಯಾಚರಣೆ..!
ಹೋಟೆಲ್, ಕೆಫೆ ಬಿಸಿ ಬಿಸಿ ಪ್ಲಾಸ್ಟಿಕ್ ಲ್ಲಿ ಪಾರ್ಸೆಲ್‌ಗೆ ಬ್ರೇಕ್ –ಹಾಗೆ 5ರೂ 10ರೂ ಬೀಡಿ ಸಿಗರೇಟ್ ಗುಟ್ಕಾಕ್ಕೆ ₹1000 ದಂಡ ಕಟ್ಟಬೇಕಾದಿತು ಎಚ್ಚರ …!
ಪುತ್ತೂರಿನ ಕೃಷ್ಣ ಜೆ. ರಾವ್ ಪ್ರಕರಣಕ್ಕೆ ಹೈಕೋರ್ಟ್ ಬ್ರೇಕ್!“ಮಧ್ಯಂತರ ತೀರ್ಪು: ₹75K ತಿಂಗಳ ಸಹಾಯ ಷರತ್ತು”
ಭಾರತದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಅನ್ನೋ ಇತಿಹಾಸ ಬರೆಯಲಿದ್ದಾರೆ ‘ಡಿ ಕೆ ಶಿ’!
ಧುರಂಧರ್ 2 ಕ್ರೇಜ್ ಓವರ್‌ಫ್ಲೋ ಕಲೆಕ್ಷನ್‌ನಲ್ಲಿಕರ್ನಾಟಕವೇ ಟಾಪ್… ದಕ್ಷಿಣ ಭಾರತದಲ್ಲಿ 300 ಕೋಟಿ ಕ್ಲಬ್!
ಬಂಗಾಳದ ಸಿಂಹಾಸನಕ್ಕೆ ಸುವೇಂದು ಏರಿಕೆ — 15 ವರ್ಷದ ಮಮತಾ ಯುಗಕ್ಕೆ ಬ್ರೇಕ್!ಟಿಎಂಸಿ ಕೋಟೆ ಕುಸಿತ…
ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ನಡುವೆ ತೀವ್ರ ವಾಕ್ಸಮರ, ಬಿಗುವಿನ ವಾತಾವರಣ
ಧರ್ಮಸ್ಥಳ-ಚಿಕ್ಕಮಗಳೂರು ಟ್ರಿಪ್‌ಗೆ ಹೊರಟ ಸ್ವಿಗ್ಗಿ ಡೆಲಿವರಿ ಬಾಯ್ಸ್… ಅರಬೈಲ್ ಘಾಟ್‌ನಲ್ಲಿ ಭೀಕರ ಅಪಘಾತ, 6 ಜೀವಗಳು ಅಂತ್ಯ!
146 ವರ್ಷಗಳಲ್ಲೇ ಅತ್ಯಂತ ಒಣ ಜೂನ್..ದೇಶಾದ್ಯಂತ 46% ಮಳೆ ಕೊರತೆ!
Pahalgam ದಾಳಿಗೆ ಪ್ರತೀಕಾರ ತೀರಿಸಿದ್ದ ‘ಆಪರೇಷನ್ ಸಿಂದೂರ್’: ವರ್ಷದ ಬಳಿಕ ಹುತಾತ್ಮ ಯೋಧರ ವಿವರ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ…
ಸುಳ್ಯ:  ಕರ್ತವ್ಯದಲ್ಲಿದ್ದ ಉಪನ್ಯಾಸಕ ಕುಸಿದು ಬಿದ್ದು ಸಾವು
ಈ ‘ಗೋಲ್ಡನ್ ಇನ್ನರ್‌ವೇರ್ ಸೆಟ್ ‘ಯಾರದ್ದು ?ಜಗತ್ತನ್ನೇ ಬೆಚ್ಚಿಬೀಳಿಸಿದ ಇರಾಕ್ ಸಂಸದೆ ಅಲಿಯಾ ನಸೀಫ್ ದ್ದಾ ..!?
ಹನಿಟ್ರ್ಯಾಪ್ ಕ್ವೀನ್ ಜೀನತ್ ಇಬ್ರಾಹಿಂ ಗೆ ನ್ಯಾಯಾಂಗ ಬಂಧನ- ಟ್ರ್ಯಾಪ್ ನಲ್ಲಿ ಹೊಸ ಹೊಸ ಹೆಸರುಗಳು !!!?
“ಮಂಜಿನ ನಡುವೆ ಕ್ಷಣಾರ್ಧದಲ್ಲಿ ಮಾಯವಾದ ಮಗಳು”ಶ್ರೀನಂದಾ ಶವವಾಗಿ ಪತ್ತೆ…!
ಕೊನೆಕ್ಷಣದ ಹೃದಯ ಕಲುಕುವ ಹರೀಶ್ ರಾಣಾ – ದಯಾಮರಣvedio
ಅಮೇರಿಕಾ ಅಧ್ಯಕ್ಷರ ಮೇಲೆ ಎರಡನೆಯ ಬಾರಿ ಗುಂಡಿನ ದಾಳಿ
108 ಆರೋಗ್ಯ ಕವಚ'”ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ಇನ್ಮುಂದೆ ಆಂಬ್ಯುಲೆನ್ಸ್ ನಿಮ್ಮ ಮನೆಬಾಗಿಲಿಗೆ! 
ದೆಹಲಿ: ₹21.40 ಕೋಟಿ ಮೌಲ್ಯದ 15 ಕೆ.ಜಿ. ಚಿನ್ನ ವಶ ಅಂತರರಾಷ್ಟ್ರೀಯ ಕಳ್ಳಸಾಗಣೆ ಜಾಲ ಭೇದಿಸಿದ DR
ಲಕ್ಷ ಫೀಸ್ ಕೊಟ್ಟರೂ ಸಿಗದ ಶಿಕ್ಷಣ ಇಲ್ಲಿ ಉಚಿತ! 15 ಮಕ್ಕಳ ಪುಟ್ಟ ಶಾಲೆಯ ದೊಡ್ಡ ಸಾಧನೆ
ಅಲ್ಪಸಂಖ್ಯಾತರ ಘಟಕ ಬರ್ಕಾಸ್ತು- ಡಿಕೆ ಶಿವಕುಮಾರ್ ಗಟ್ಟಿ ನಿರ್ಧಾರ.
ಮೇ 20ರ ಬಸ್ ಸ್ಟ್ರೈಕ್‌ಗೆ ಹೈಕೋರ್ಟ್ ಬ್ರೇಕ್..! KSRTC-BMTC ಬಸ್‌ಗಳು ನಿಲ್ಲೋದಿಲ್ಲ! ಹೈಕೋರ್ಟ್ ಮಹತ್ವದ ಆದೇಶ..
2 ಲಕ್ಷಕ್ಕೆ ಮಗುವಿನ ಜೀವದ ಬೆಲೆ ಕಟ್ಟಬೇಡಿ!” – ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನರ ಮಾನವೀಯ ನಿಲುವಿಗೆ ದೇಶಾದ್ಯಂತ ಮೆಚ್ಚುಗೆ
ಹೊರಗೆ ಕ್ಯಾಂಟೀನ್…ಆದ್ರೆ ಒಳಗೆ ನಡೆಯುತ್ತಿತ್ತು ಬೇರೆದ್ದೇ ಆಟ..!ಬಯಲಾಯ್ತು ಬೆಚ್ಚಿಬೀಳಿಸುವ ದಂಧೆ. 
ಮಹಿಳಾ ಕ್ರಿಕೆಟ್ ವಿಶ್ವಕಪ್ 2026 ಆರಂಭ:ಗಾಯ, ನೋವು, ಟೀಕೆ… ಎಲ್ಲವನ್ನೂ ಮೀರಿ ವಿಶ್ವಕಪ್‌ನಲ್ಲಿ ಭಾರತದ ಮಹಿಳಾ ಪಡೆ!
AI ಹವಾ-ಬೇಗನೆ ಫೈನಾನ್ಷಿಯಲ್ ಇಂಡಿಪೆಂಡೆಂಟ್ ಆಗೋ ಟ್ರೆಂಡ್- ಕೈಬಿಟ್ಟ  ಓದು!! ಇದು ಗಂಭೀರ ಸೂಚನೆ….