📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ, ನಿರೀಕ್ಷಿತ ತನಿಖೆ

ರಿಯಲ್ ಎಸ್ಟೇಟ್ ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಕಡೆಗಳಿಂದ ಹಲವು ರೀತಿಯ ಅನುಮಾನಗಳು ಹುಟ್ಟಿಕೊಂಡಿದ್ದವು. ಆ ಅನುಮಾನಗಳಿಗೆಲ್ಲ ತೆರೆ ಎಳೆಯುವ ನಿಟ್ಟಿನಲ್ಲಿ ತನಿಖಾ ರಿಪೋರ್ಟ್ ಬಂದಿದೆ. ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್ ನಡೆಸಿದಂತಹ ಈ ತನಿಖೆಯಲ್ಲಿ, ಸಿಜೆ ರಾಯ್ ಮಾನಸಿಕ ಖಿನ್ನತೆಯ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ರಿಪೋರ್ಟ್ ಬಂದಿದೆ.

ನಿರೀಕ್ಷಿತವಾದಂತಹ ರಿಪೋರ್ಟ್ ಅದು ಅನ್ನುವುದು ಸಾರ್ವಜನಿಕರ ವಲಯದಿಂದ ಕೇಳಿ ಬರುತ್ತಿರುವಂತಹ ಮೊದಲ ಮಾತಾಗಿದೆ. ಉದ್ಯಮಿ ಸಿಜೆ ರಾಯ್  ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಂತಹ ಸಂದರ್ಭದಲ್ಲಿ, ಅವರ ಸಂಸ್ಥೆಯ ಮೇಲೆ ಈಡಿ ರೈಡ್ ಮಾಡಿತ್ತು. ಅದೇ ಸಂದರ್ಭದಲ್ಲಿ ಉದ್ಯಮಿ ತಮ್ಮದೇ ರಿವಲ್ವಾರಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು.

ಮಾನಸಿಕ ಖಿನ್ನತೆ ಕಾರಣಕ್ಕೆ ಉದ್ಯಮಿಯು ಆತ್ಮಹತ್ಯೆ ಮಾಡಿಕೊಂಡಿದ್ದು ಅನ್ನುವುದನ್ನು ಈಗ ಬಂದಿರೋ ತನಿಖಾ ರಿಪೋರ್ಟ್ ಹೇಳುತ್ತಿದೆ. ಆ ಮಾನಸಿಕ ಖಿನ್ನತೆ ಯಾವ ಕಾರಣದಿಂದ, ಯಾವ ಕಾರಣಕ್ಕೆ ಆತ್ಮಹತ್ಯೆಯ ಮಟ್ಟಕ್ಕೆ ಹೋಗುವಂತೆ ಮಾಡಿತು? ಯಾವ ಕಾರಣಕ್ಕೆ ಆ ಖಿನ್ನತೆಯು  ಈಡಿ ದಾಳಿಯ ಸಮಯದಲ್ಲೇ ಸ್ಪೋಟಗೊಂಡಿತು? ಇದರ ಹಿಂದಿನ ಮರ್ಮವನ್ನು ತನಿಖಾ ತಂಡವು ಬಿಚ್ಚಿಡಲಿಲ್ಲ ಅನ್ನುವುದು ಇಲ್ಲಿ ಇಂಪಾರ್ಟೆಂಟ್. ಉದ್ಯಮಿಯು ಬೇರೆ ಯಾವುದೋ ಖಿನ್ನತೆಯಿಂದ ಬಳಲುತ್ತಿದ್ದರೆ, ಒತ್ತಡಕ್ಕೆ ಒಳಗಾಗಿದ್ದರೆ ಈ ಡಿ ದಾಳಿಯ ಸಂದರ್ಭವನ್ನೇ ತಮ್ಮ ಆತ್ಮಹತ್ಯೆಗೆ ಆಯ್ಕೆ ಮಾಡಿಕೊಂಡಿದ್ದು ಯಾಕೆ? ಮಾನಸಿಕ ಖಿನ್ನತೆಯನ್ನು ಒಳಗೊಂಡ ವ್ಯಕ್ತಿ, ಇದಕ್ಕೂ ಮೊದಲು ಆತ್ಮಹತ್ಯೆಗೆ ಪ್ರಯತ್ನಿಸಿದ್ದರೆ? ಪ್ರಯತ್ನಿಸಿದ್ದರೆ ಅಂತಹ ಪ್ರಯತ್ನಗಳು ಎಷ್ಟು ಬಾರಿ ಆಗಿದ್ದವು? ಅವೆಲ್ಲವೂ ತನಿಖಾ ರಿಪೋರ್ಟಿನಲ್ಲಿ ಬಂದಿರಬೇಕು ತಾನೆ? ಇವೆಲ್ಲವನ್ನು ಒಳಗೊಂಡ ರಿಪೋರ್ಟ್ ಅದಾಗಿದ್ದರೆ ಖಂಡಿತವಾಗಿಯೂ ರಾಜ್ಯದ ಜನರು ಅದನ್ನು ಒಪ್ಪಿಕೊಳ್ಳುತ್ತಾರೆ. ಅದಿಲ್ಲದಿದ್ದರೆ ಜನಸಾಮಾನ್ಯರಲ್ಲಿನ ಅನುಮಾನ ಹೋಗುವುದೇ ಇಲ್ಲ. ಡಿಕೆ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನದ ಹುತ್ತವೇ ಜನಸಾಮಾನ್ಯರಲ್ಲಿ ಇದೆ. ಅದನ್ನು ಹೋಗಲಾಡಿಸುವ ಪ್ರಯತ್ನ ಸರ್ಕಾರದಿಂದ ಆಗಲೇ ಇಲ್ಲ. ತನಿಕಾ ಸಂಸ್ಥೆಗಳ ತನಿಖೆಯನ್ನು ಜನರು ಒಪ್ಪಲೂ ಇಲ್ಲ. ಜನಸಾಮಾನ್ಯರು ಆ ಪ್ರಕರಣಕ್ಕೆ ಸಂಬಂಧಿಸಿದಂತೆ, ಯಾರೆಲ್ಲಾ ಆರೋಪಿಗಳು ಅಂತ ಅಂದುಕೊಂಡಿದ್ದರೊ ಅವರು ಈಗಲೂ ರಾಜರಂತೆಯೇ ಮೆರೆಯುತ್ತಿದ್ದಾರೆ ಹೆಸರಿನಿಂದ ಹೇಳುತ್ತಿದ್ದಾರೆ. ಹಾಗಾಗಿ ಜನಸಾಮಾನ್ಯರಿಗೆ ಸರ್ಕಾರ ನಡೆಸುವಂತಹ ಈ ರೀತಿಯ ತನಿಖೆಗಳ ಮೇಲೆ ನಂಬಿಕೆ ಹೊರಟು ಹೋಗುತ್ತಿದೆ. ಒಳ್ಳೆಯ ಬೆಳವಣಿಗೆಯಂತೂ ಅಲ್ಲ, ಇದು ದುರದಷ್ಟಕರ ವಿಚಾರ. 

ಸಿಜೆ ರಾಯ್ ಪ್ರಕರಣದಲ್ಲೂ ಇದೇ ಆಗುತ್ತಿದೆ. ಜನಸಾಮಾನ್ಯರು ಅಂದುಕೊಳ್ಳುತ್ತಿರುವುದೇ ಬೇರೆ. ಜನಸಾಮಾನ್ಯರ ಪ್ರಕಾರ, ಸಿಜೆ ರಾಯ್ ಅವರನ್ನು ಒತ್ತಡಕ್ಕೆ ಸಿಲುಕಿಸುವ ಕೆಲಸವನ್ನು ಕಾಣದ ಕೈ, ವ್ಯವಸ್ಥೆಯ ಮೂಲಕವೇ ಮಾಡಿದೆ. ಆ ವ್ಯವಸ್ಥೆಯ ಮೂಲಕ ಮಾಡಲಾದ ಈ ಒತ್ತಡಕ್ಕೆ ಸಿಜೆ ಬಲಿಯಾಗಿದ್ದಾರೆ. ಆ ವಿಚಾರದಲ್ಲಿ ತನಿಖೆಯು ಸಾಗಿಯೇ ಇಲ್ಲ, ಕೇವಲ ನಿರ್ದಿಷ್ಟ ವಿಚಾರದ ನಿರ್ದೇಶನದಲ್ಲಿ ತನಿಖೆಯು ನಡೆದಂತೆ ಕಾಣುತ್ತಿದೆ ಅನ್ನೋದು ಸಾಮಾಜಿಕ ಚಟುವಟಿಕೆಯಲ್ಲಿ ಗುರುತಿಸಿಕೊಂಡಂತಹ ವ್ಯಕ್ತಿಗಳ ಅಭಿಪ್ರಾಯ. ಕೇವಲ ಅಭಿಪ್ರಾಯವಲ್ಲ ಆರೋಪವು ಹೌದು.  

COMMENTS

Login with Gmail to comment

ಇನ್ನಷ್ಟು ಸುದ್ದಿ

ಗಂಜಿಮಠದತ್ತಿರ ಕಣ್ಣಿಗೆ ಖಾರದ ಪುಡಿ ಎರಚಿ ಹಣ ದೋಚಿ ಪರಾರಿಯಾದ ಆರೋಪಿಗಳು ರಸ್ತೆ ಮಧ್ಯೆ ಯೋಜಿತ ದರೋಡೆ …!
ದೊಡ್ಡ ಬಜೇಟ್  ತುಳು ಸಿನಿಮಾ`ಗಜಾನನ ಕ್ರಿಕೆಟರ್ಸ್’ ಮೇ 22 ರಂದು ತೆರೆಗೆ
ಒಬ್ಬರೇ ಹಾಗಾಗಿ ಕಾರಿನಲ್ಲಿ ಯಾಕೆ? ಫ್ಲೈಟ್ ಫೇರ್ ಜಾಸ್ತಿ ಇದೆ..ಟ್ರೈನ್ ಲೇಟ್ ಆಗುತ್ತೆ..so ಹೆಗೋಗೋಣ….!? ಹೀಗೂ ಹೋಗ್ಬಹುದು ತಿಳ್ಕೊಳ್ಳಿ..
35 ವರ್ಷಗಳ ಬಳಿಕ ಮತ್ತೆ ಕಾಲೇಜಿಗೆ ಬಂದ 50 ವರ್ಷದ ಮಹಿಳೆ: ಇಂಟರ್ನೆಟ್‌ಗೆ ಸ್ಫೂರ್ತಿಯಾದ ಕಥೆ
ಜೈನ ಸನ್ಯಾಸ ದೀಕ್ಷೆ ನಿಯಮಗಳು ಏನು ಗೊತ್ತಾ?
ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಸಂಪನ್ಮೂಲ ಕೇಂದ್ರ ಉದ್ಘಾಟನೆ, ಜಾಗೃತಿ ಕಾರ್ಯಕ್ರಮ
ಅಕ್ರಮ ಡಿಸೇಲ್ ದಾಸ್ತಾನು ಪ್ರಕರಣ: 4,175 ಲೀಟರ್ ಡಿಸೇಲ್ ಕಂದಾಯ ಇಲಾಖೆಯಿಂದ ಹರಾಜು – ₹2.35 ಲಕ್ಷಕ್ಕೆ ಮಾರಾಟ!
ಅಲ್ಪಸಂಖ್ಯಾತರ ಘಟಕ ಬರ್ಕಾಸ್ತು- ಡಿಕೆ ಶಿವಕುಮಾರ್ ಗಟ್ಟಿ ನಿರ್ಧಾರ.
ಮೋದಿ ಅವರ ನಿರ್ಧಾರಗಳು“ದೀರ್ಘಕಾಲೀನ ಅಭಿವೃದ್ಧಿಗೆ ಜವಾಬ್ದಾರಿಯುತ ನೀತಿಗಳು” ಆತಂಕದ ಸೂಚನೆ ಅಲ್ಲ-ಎಸ್.ಎಸ್. ನಾಯಕ್
ಗಂಡನ ಮನೆಯಿಂದ ಯುವತಿಯನ್ನು ಎಳೆದೊಯ್ದರು
17ನೇ ಆಯವ್ಯಯ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
ವಿಶಾಖಪಟ್ಟಣಂ ಉಕ್ಕಿನ ಕಾರ್ಖಾನೆ ದುರಂತ:ಕೆಲವೇ ಕ್ಷಣಗಳಲ್ಲಿ ಎಂಟು ಜೀವಗಳನ್ನು ನುಂಗಿದ ಉಕ್ಕಿನ ಬೆಂಕಿ!ಕೆಲಸಕ್ಕೆ ಹೋದವರು ಮನೆಗೆ ಮರಳಲಿಲ್ಲ… 
ಅಂದು ಮುಖ್ಯ ಮಂತ್ರಿ, ಇಂದು ಪುಟ್ಟಪಾತ್ ವ್ಯಾಪಾರಿ!!
ಪುಲ್ವಾಮಾ ದಾಳಿಯ ಮಾಸ್ಟರ್ಮೈಂಡ್ ಹಮ್ಜಾ ಬುರ್ಹಾನ್ ಹತ್ಯೆ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ರಹಸ್ಯ ಗುಂಡಿನ ದಾಳಿ
ಎಂಡೋಸಲ್ಫಾನ್ ಸಂತ್ರಸ್ತರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರ
ಮೂಡಬಿದ್ರೆ: ಅಕ್ರಮ ಜಾನುವಾರು ಸಾಗಾಟ -ಆರೋಪಿಗಳ ಬಂಧನ, ವಾಹನ ಹಾಗೂ ಕರು ವಶಕ್ಕೆ.
ಮುಖವಾಡ ಧರಿಸಿದವರನ್ನು ನಂಬುವ ಮುನ್ನ ನೂರು ಬಾರಿ ಯೋಚಿಸಿ…!
146 ವರ್ಷಗಳಲ್ಲೇ ಅತ್ಯಂತ ಒಣ ಜೂನ್..ದೇಶಾದ್ಯಂತ 46% ಮಳೆ ಕೊರತೆ!
ಇ-ಸಿಗರೇಟ್‌ಗೆ ಭಾರಿ ಡಿಮ್ಯಾಂಡ್ – ಗೋಣಿ ಚೀಲದಲ್ಲಿಸಂಗ್ರಹಿಸಿಟ್ಟ ಆರೋಪಿ ಬಂಧನ..!
BRICS ನ ಡಿಜಿಟಲ್ ಕರೆನ್ಸಿ ವಿಶ್ವ ಆರ್ಥಿಕತೆಯನ್ನೇ ಬೆರಗಾಗಿಸುತ್ತಾ..?
“ಸಂತೋಷ್ Kumar” ಯಾರು? ಸಾವಿರ ಕಾರ್ಡ್‌ಗಳಲ್ಲಿ ಒಂದೇ ಹೆಸರು..!₹95 ಕೋಟಿ ಅಮೆರಿಕಾ ಹಣ,1000 ಡೆಬಿಟ್ ಕಾರ್ಡ್‌ಗಳು!ಬಯಲಾಯ್ತು ಕರ್ನಾಟಕದಲ್ಲಿ ಭಾರೀ ನಕ್ಸಲ್-ಮತಾಂತರ ಜಾಲ?
ದಕ್ಷಿಣ ಕನ್ನಡ–ಉಡುಪಿಯಲ್ಲಿ ಗೋಡಂಬಿ ಕ್ರಾಂತಿಗೆ ರಾಜ್ಯ ಸರ್ಕಾರ ಸಜ್ಜು..₹1 ಕೋಟಿ ಯೋಜನೆ ಘೋಷಿಸಿದ ಈಶ್ವರ್ ಖಂಡ್ರೆ…
ಪವಾಡವೇ? 33 ದಿನ ,775 ಗಂಟೆಗಳ ಬಳಿಕ ಸಮಾಧಿಯಿಂದ ಹೊರಬಂದ ಶಿವಯೋಗಿ ಶ್ರೀಗಳು……!!!!ಗದಗದಲ್ಲಿ ಅಪರೂಪದ ಆಧ್ಯಾತ್ಮಿಕ ಘಟನೆ!ಪರಮ ಯೋಗವೇ?
ಅಮೇರಿಕಾಕ್ಕೆ ಅಷ್ಟು ಧೈರ್ಯದಿಂದ ಎಲ್ಲಿಂದ ಬಂತು?
ಆಡುತ್ತಾ ಆಡುತ್ತಲೇ ಜೀವ ಬಿಟ್ಟ ಫಿಟ್ ಆಗಿದ್ದ ಯುವಕ್ರಿಕೆಟಿಗ… ನೀರು ಕುಡಿದ ತಕ್ಷಣವೇ ಕುಸಿದು ಬಿದ್ದ ರಣಜಿ ಆಟಗಾರ… 
ಮಂಗಳೂರು ಬೆಂಗಳೂರು ಮಧ್ಯೆ ಇನ್ನು ತಡರಾತ್ರಿಯೂ ವಿಮಾನ ಯಾನ
ಅವಮಾನವೇ ಯಶಸ್ಸಿನ ಇಂಧನ: ಕೋಮಲ್ ಗನಾತ್ರಾ ಎಂಬ ಅದಮ್ಯ ಚೇತನ ಕೇವಲ 2 ವಾರಗಳ ಸಂಸಾರ, ನಂತರ ಜೀವಮಾನದ ಸಾಧನೆ!
ಮನೆಯ ಮೇಲೆ ಪೊಲೀಸರ  ದಾಳಿ  ಮಾರಾಟಕ್ಕೆ ಇಡಲಾದ ಮಾದಕ ವಸ್ತು ಹಾಗೂ ಮಾರಕ ಆಯುಧ ವಶ
ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ….!!!!
ಪ್ರಧಾನಿ ಮೋದಿ ಯವರಿಗೆ ಡೈರೆಕ್ಟ್ ಬೆದರಿಕೆ ಹಾಕಿದ ಹೆಂಗಸು!!