📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ, ನಿರೀಕ್ಷಿತ ತನಿಖೆ

ರಿಯಲ್ ಎಸ್ಟೇಟ್ ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಕಡೆಗಳಿಂದ ಹಲವು ರೀತಿಯ ಅನುಮಾನಗಳು ಹುಟ್ಟಿಕೊಂಡಿದ್ದವು. ಆ ಅನುಮಾನಗಳಿಗೆಲ್ಲ ತೆರೆ ಎಳೆಯುವ ನಿಟ್ಟಿನಲ್ಲಿ ತನಿಖಾ ರಿಪೋರ್ಟ್ ಬಂದಿದೆ. ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್ ನಡೆಸಿದಂತಹ ಈ ತನಿಖೆಯಲ್ಲಿ, ಸಿಜೆ ರಾಯ್ ಮಾನಸಿಕ ಖಿನ್ನತೆಯ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ರಿಪೋರ್ಟ್ ಬಂದಿದೆ.

ನಿರೀಕ್ಷಿತವಾದಂತಹ ರಿಪೋರ್ಟ್ ಅದು ಅನ್ನುವುದು ಸಾರ್ವಜನಿಕರ ವಲಯದಿಂದ ಕೇಳಿ ಬರುತ್ತಿರುವಂತಹ ಮೊದಲ ಮಾತಾಗಿದೆ. ಉದ್ಯಮಿ ಸಿಜೆ ರಾಯ್  ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಂತಹ ಸಂದರ್ಭದಲ್ಲಿ, ಅವರ ಸಂಸ್ಥೆಯ ಮೇಲೆ ಈಡಿ ರೈಡ್ ಮಾಡಿತ್ತು. ಅದೇ ಸಂದರ್ಭದಲ್ಲಿ ಉದ್ಯಮಿ ತಮ್ಮದೇ ರಿವಲ್ವಾರಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು.

ಮಾನಸಿಕ ಖಿನ್ನತೆ ಕಾರಣಕ್ಕೆ ಉದ್ಯಮಿಯು ಆತ್ಮಹತ್ಯೆ ಮಾಡಿಕೊಂಡಿದ್ದು ಅನ್ನುವುದನ್ನು ಈಗ ಬಂದಿರೋ ತನಿಖಾ ರಿಪೋರ್ಟ್ ಹೇಳುತ್ತಿದೆ. ಆ ಮಾನಸಿಕ ಖಿನ್ನತೆ ಯಾವ ಕಾರಣದಿಂದ, ಯಾವ ಕಾರಣಕ್ಕೆ ಆತ್ಮಹತ್ಯೆಯ ಮಟ್ಟಕ್ಕೆ ಹೋಗುವಂತೆ ಮಾಡಿತು? ಯಾವ ಕಾರಣಕ್ಕೆ ಆ ಖಿನ್ನತೆಯು  ಈಡಿ ದಾಳಿಯ ಸಮಯದಲ್ಲೇ ಸ್ಪೋಟಗೊಂಡಿತು? ಇದರ ಹಿಂದಿನ ಮರ್ಮವನ್ನು ತನಿಖಾ ತಂಡವು ಬಿಚ್ಚಿಡಲಿಲ್ಲ ಅನ್ನುವುದು ಇಲ್ಲಿ ಇಂಪಾರ್ಟೆಂಟ್. ಉದ್ಯಮಿಯು ಬೇರೆ ಯಾವುದೋ ಖಿನ್ನತೆಯಿಂದ ಬಳಲುತ್ತಿದ್ದರೆ, ಒತ್ತಡಕ್ಕೆ ಒಳಗಾಗಿದ್ದರೆ ಈ ಡಿ ದಾಳಿಯ ಸಂದರ್ಭವನ್ನೇ ತಮ್ಮ ಆತ್ಮಹತ್ಯೆಗೆ ಆಯ್ಕೆ ಮಾಡಿಕೊಂಡಿದ್ದು ಯಾಕೆ? ಮಾನಸಿಕ ಖಿನ್ನತೆಯನ್ನು ಒಳಗೊಂಡ ವ್ಯಕ್ತಿ, ಇದಕ್ಕೂ ಮೊದಲು ಆತ್ಮಹತ್ಯೆಗೆ ಪ್ರಯತ್ನಿಸಿದ್ದರೆ? ಪ್ರಯತ್ನಿಸಿದ್ದರೆ ಅಂತಹ ಪ್ರಯತ್ನಗಳು ಎಷ್ಟು ಬಾರಿ ಆಗಿದ್ದವು? ಅವೆಲ್ಲವೂ ತನಿಖಾ ರಿಪೋರ್ಟಿನಲ್ಲಿ ಬಂದಿರಬೇಕು ತಾನೆ? ಇವೆಲ್ಲವನ್ನು ಒಳಗೊಂಡ ರಿಪೋರ್ಟ್ ಅದಾಗಿದ್ದರೆ ಖಂಡಿತವಾಗಿಯೂ ರಾಜ್ಯದ ಜನರು ಅದನ್ನು ಒಪ್ಪಿಕೊಳ್ಳುತ್ತಾರೆ. ಅದಿಲ್ಲದಿದ್ದರೆ ಜನಸಾಮಾನ್ಯರಲ್ಲಿನ ಅನುಮಾನ ಹೋಗುವುದೇ ಇಲ್ಲ. ಡಿಕೆ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನದ ಹುತ್ತವೇ ಜನಸಾಮಾನ್ಯರಲ್ಲಿ ಇದೆ. ಅದನ್ನು ಹೋಗಲಾಡಿಸುವ ಪ್ರಯತ್ನ ಸರ್ಕಾರದಿಂದ ಆಗಲೇ ಇಲ್ಲ. ತನಿಕಾ ಸಂಸ್ಥೆಗಳ ತನಿಖೆಯನ್ನು ಜನರು ಒಪ್ಪಲೂ ಇಲ್ಲ. ಜನಸಾಮಾನ್ಯರು ಆ ಪ್ರಕರಣಕ್ಕೆ ಸಂಬಂಧಿಸಿದಂತೆ, ಯಾರೆಲ್ಲಾ ಆರೋಪಿಗಳು ಅಂತ ಅಂದುಕೊಂಡಿದ್ದರೊ ಅವರು ಈಗಲೂ ರಾಜರಂತೆಯೇ ಮೆರೆಯುತ್ತಿದ್ದಾರೆ ಹೆಸರಿನಿಂದ ಹೇಳುತ್ತಿದ್ದಾರೆ. ಹಾಗಾಗಿ ಜನಸಾಮಾನ್ಯರಿಗೆ ಸರ್ಕಾರ ನಡೆಸುವಂತಹ ಈ ರೀತಿಯ ತನಿಖೆಗಳ ಮೇಲೆ ನಂಬಿಕೆ ಹೊರಟು ಹೋಗುತ್ತಿದೆ. ಒಳ್ಳೆಯ ಬೆಳವಣಿಗೆಯಂತೂ ಅಲ್ಲ, ಇದು ದುರದಷ್ಟಕರ ವಿಚಾರ. 

ಸಿಜೆ ರಾಯ್ ಪ್ರಕರಣದಲ್ಲೂ ಇದೇ ಆಗುತ್ತಿದೆ. ಜನಸಾಮಾನ್ಯರು ಅಂದುಕೊಳ್ಳುತ್ತಿರುವುದೇ ಬೇರೆ. ಜನಸಾಮಾನ್ಯರ ಪ್ರಕಾರ, ಸಿಜೆ ರಾಯ್ ಅವರನ್ನು ಒತ್ತಡಕ್ಕೆ ಸಿಲುಕಿಸುವ ಕೆಲಸವನ್ನು ಕಾಣದ ಕೈ, ವ್ಯವಸ್ಥೆಯ ಮೂಲಕವೇ ಮಾಡಿದೆ. ಆ ವ್ಯವಸ್ಥೆಯ ಮೂಲಕ ಮಾಡಲಾದ ಈ ಒತ್ತಡಕ್ಕೆ ಸಿಜೆ ಬಲಿಯಾಗಿದ್ದಾರೆ. ಆ ವಿಚಾರದಲ್ಲಿ ತನಿಖೆಯು ಸಾಗಿಯೇ ಇಲ್ಲ, ಕೇವಲ ನಿರ್ದಿಷ್ಟ ವಿಚಾರದ ನಿರ್ದೇಶನದಲ್ಲಿ ತನಿಖೆಯು ನಡೆದಂತೆ ಕಾಣುತ್ತಿದೆ ಅನ್ನೋದು ಸಾಮಾಜಿಕ ಚಟುವಟಿಕೆಯಲ್ಲಿ ಗುರುತಿಸಿಕೊಂಡಂತಹ ವ್ಯಕ್ತಿಗಳ ಅಭಿಪ್ರಾಯ. ಕೇವಲ ಅಭಿಪ್ರಾಯವಲ್ಲ ಆರೋಪವು ಹೌದು.  

COMMENTS

Login with Gmail to comment

ಇನ್ನಷ್ಟು ಸುದ್ದಿ

ಏಪ್ರಿಲ್ 1, 2026ರಿಂದಲೇ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ
ಮೂಡುಬಿದಿರೆಯಲ್ಲಿ ಖರೀದಿಸಿದ ಕೆಲವೇ ಗಂಟೆಗಳಲ್ಲಿ ಕಾರಿಗೆ ಬೆಂಕಿ! ತಪ್ಪಿದ ಭಾರೀ ದುರಂತ ..ಏಕಾಏಕಿ ಬೆಂಕಿ.ಕಾರಿನಲ್ಲಿದ್ದ ಕುಟುಂಬ ಅಪಾಯದಿಂದ ಪಾರು.
ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ₹50 ಸಾವಿರ ಮಾಸಾಶನ: ಆಸಿಡ್ ಮಾರಾಟಕ್ಕೆ ಕಡಿವಾಣ ಹಾಕಲು ಸರ್ಕಾರ ಕ್ರಮ
ಪಡ್ಡೆ ರೌಡಿಗಳ ಅಟ್ಟಹಾಸಕ್ಕೆ ಕಡಿವಾಣ ಬೀಳುವುದು ಯಾವಾಗ ಗ್ರಹಸಚಿವರೆ?
ಮಂಡ್ಯದಲ್ಲಿ ವೈರಲ್ ವಿಡಿಯೋ!ಜಿಂಕೆ ಸಂಪೂರ್ಣ ಮಾಯ!ಈ ದೃಶ್ಯ ನೋಡಿದ್ರೆ ಗಾಬರಿಯಾಗ್ತೀರಾ!ಜೀವಂತ ಪ್ರಕೃತಿ ಡಾಕ್ಯುಮೆಂಟರಿ…
ತಿರುಮಲ ತಿಮ್ಮಪ್ಪನ 3,550 ಮೆಟ್ಟಿಲು ಹತ್ತಿದ 116 ವರ್ಷದ ನವನೀತಮ್ಮ ಕರ್ನಾಟಕದ ಶತಾಯುಷಿ!
ಸಾಲ ಮರುಪಾವತಿ ವಿಚಾರಕ್ಕೆ ಜಾಲ್ಸೂರು ರಸ್ತೆಯಲ್ಲೇ ಗಲಾಟೆ ಹಲ್ಲೆ
ಸಾಯಿ ಚಿರಾಗ್ ಚಿಕಿತ್ಸೆಗೆ ಹರಿದುಬಂತು 2 ಕೋಟಿ ರೂ. ಜನಸಾಗರದ ನಿಧಿ!
50 ಸಾವಿರ ಸಾಲಕ್ಕೆ ಸವಣೂರು ಪೇಟೆಯಲ್ಲಿ ರಕ್ತಸಿಕ್ತ ಘರ್ಷಣೆ ..
ಮಂಗಳೂರು ಸಿಟಿ ಪೊಲೀಸರ ಭರ್ಜರಿ ಬೇಟೆ – ನಿಷೇಧಿತ ಎಂಡಿಎಂ, ಗಾಂಜಾ ಮರಾಟಗಾರರ ಬಂಧನ
ಕರ್ನಾಟಕದಲ್ಲಿ ಬೇಸಿಗೆ ಬೆಂಕಿ ತೀವ್ರ ಬಿಸಿಗಾಳಿ ಹೈ ಅಲರ್ಟ್
ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ….!!!!
ಹತ್ತು ವರ್ಷದ ಮಗಳ ಹುಟ್ಟುಹಬ್ಬದ ಸಂಭ್ರಮ…  ವಿಧಿಯಾಟದಲ್ಲಿ ಕಣ್ಣೀರಾಗಿ ಮಾರ್ಪಟ್ಟ ದುರಂತ ಕಥೆ
ಚುನಾವಣೆ ಗೆಲ್ಲುವುದು ಸಾಕಿನ್ನು, ರಾಷ್ಟ್ರದ ಸಣ್ಣ ಮತ್ತು ಮಧ್ಯಮ ವ್ಯವಹಾರ ಸ್ಥರ ಹಿತ ಕಾಪಾಡಿ
ಸುಪ್ರೀಂ ಕೋರ್ಟ್‌ನಲ್ಲಿ ಗದ್ದಲ: ದಾಖಲೆ ಎಸೆದು ಅವಾಚ್ಯ ಶಬ್ದ ಬಳಕೆ ಯಾಕೆ?- ಅರ್ಜಿದಾರನ ಅರ್ಜಿ ವಜಾ
ಪ್ರೀತಿಸಿ ಓಡಿಹೋದ ಸೇಡಿನ ಬೆಂಕಿಗೆ ಬಲಿಯಾದ ನಿರ್ದೋಷಿ ಅಣ್ಣ..!
ಟೆನಿಸ್ ಕೋರ್ಟ್‌ನಲ್ಲಿ ಡಿಸೈನರ್ ಉಡುಪುಗಳ ಧಮಾಕಾ!
ಗ್ಯಾಸ್ ಅಭಾವ ಮತ್ತು ಬೆಲೆ ಏರಿಕೆ, ಸುಳ್ಳು ಎನ್ನುತ್ತಿದೆ-HPCL
ರಾಮನ ಹೆಸರಲ್ಲಿ ‘ರಾವಣ’ ರಾಜ್ಯ-ಕರ್ನಾಟಕಕ್ಕೂ ತಟ್ಟಿದ ಕಳಂಕ!ರಾಮನ ಹೆಸರಲ್ಲಿ ಭಕ್ತರಿಗೇ ನಾಮ-ಅಯೋಧ್ಯೆಯ ಕೋಟಿಕೋಟಿ ಲೂಟಿಗೆ ಬೀದರ್ ಕನೆಕ್ಷನ್!
ನೇತ್ರಾವತಿಯ ಬಂಗ್ಲೆಗುಡ್ಡೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ….
ಅಳಕೆ ಮಾರುಕಟ್ಟೆ ಬಳಿ ಕಸ ಸುರಿದ ಮಹಿಳೆಗೆ ₹1,000 ದಂಡ..ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದರೆ ದಂಡ ಖಚಿತ! 
ಕ್ರಿಮಿನಲ್ಸ್ ಸಪೋರ್ಟಿಗೆ ನಿಂತವರು ಯಾರ್ಯಾರು ಅನ್ನುವುದು ಈಗ ಗೊತ್ತಾಗುತ್ತಿದೆ ನೋಡಿ….!
ಒಂದು ರಾಷ್ಟ್ರ, ಒಂದು ಚುನಾವಣೆ’ಗೆ ಡಿಕೆಶಿ ಸಿಡಿದೆದ್ದೇಕೆ?
ಕಮ್ ಬ್ಯಾಕ್ ಮಾಡಿದ ಮುಂಬೈ ಇಂಡಿಯನ್, ಕ್ಯಾಪ್ಟನ್ ಪ್ರೇರಣೆಗೆ ವರ್ಮಾ ಬ್ಯಾಟಿನಿಂದ  ಮೊದಲ ಸೆಂಚುರಿ
₹10,000ಕ್ಕೆ NEET-UG 2026 ಪ್ರಶ್ನೆಪತ್ರಿಕೆ? ದೇಶವೇ ಬೆಚ್ಚಿಬಿದ್ದ ಲೀಕ್ ಸ್ಕಾಂಡಲ್!ಟೆಲಿಗ್ರಾಂ ಸೀಕ್ರೆಟ್ ಚಾಟ್ ವೈರಲ್…22 ಲಕ್ಷ ವಿದ್ಯಾರ್ಥಿಗಳ ಕನಸಿಗೆ ದೊಡ್ಡ ಹೊಡೆತ — NEET 2026 ರದ್ದು!
ಸಾರ್ವಜನಿಕರಲ್ಲಿ ವಿನಂತಿ …!
ಎಚ್ಚರ… ನಿಮ್ಮಸುತ್ತಮುತ್ತ ಏನು ನಡೆಯುತ್ತಿದೆ ಗೊತ್ತಿರಲಿ! 🚨Be Aware… Stay Alert… Save Youth!
“ಗ್ಯಾರಂಟಿ “ಹಣದ ಮೇಲೆ ಆಯೋಗದ ಕಣ್ಣು: ಸಿಎಂ ಸಿಡಿಮಿಡಿ ..ರಾಜಕೀಯ ಕಿಡಿ!
ಕಾರ್ಕಳದ ವಂಚನೆ ಪ್ರಕರಣ, ದೂರುದಾರನ ಮೇಲೂ ಶಂಕೆ
“ಕಾಂತರಾ” ಖ್ಯಾತಿಯ ಸಪ್ತಮಿ ಗೌಡ, ದುಮುಕಿದ್ದು  ಹೋರಾಟದ ಅಂಗಳಕ್ಕೆ