📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ನೀವು Fit…ಆದ್ರೆ ನಿಮ್ಮ ಹೃದಯ ?ಮನೆಯಲ್ಲಿಯೇ 5 ನಿಮಿಷದಲ್ಲಿ ಪರೀಕ್ಷಿಸಿಕೊಳ್ಳಿ ನಿಮ್ಮ ಹೃದಯದ ಆರೋಗ್ಯ!

ಹಿಂದೆ ಸಾಮಾನ್ಯವಾಗಿ 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಕಾಣುತ್ತಿದ್ದ ಹೃದಯ ಸಮಸ್ಯೆಗಳು ಈಗ 25 ರಿಂದ 40 ವರ್ಷದ ಯುವಕರಲ್ಲಿಯೂ ಕಾಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.ಯುವಕರಲ್ಲಿ ಹೃದಯಾಘಾತ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳು ಹೆಚ್ಚುತ್ತಿರುವುದು ವೈದ್ಯಕೀಯ ವಲಯದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ.

ಆಧುನಿಕ ಜೀವನಶೈಲಿ, ಕೆಲಸದ ಒತ್ತಡ, ಅಸ್ವಸ್ಥ ಆಹಾರ ಪದ್ಧತಿ, ವ್ಯಾಯಾಮದ ಕೊರತೆ ಮತ್ತು ನಿದ್ರೆಯ ಅಭಾವವು ಹೃದಯದ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿವೆ. ಆಧುನಿಕ ಜೀವನಶೈಲಿಯ ಪರಿಣಾಮವಾಗಿ ಹೃದಯ ಸಮಸ್ಯೆಗಳು ಈಗ ಯುವಕರಲ್ಲಿಯೂ ಹೆಚ್ಚುತ್ತಿರುವುದು ವೈದ್ಯರ ಗಮನ ಸೆಳೆಯುತ್ತಿದೆ. ಹಲವಾರು ವೈದ್ಯರು ಇದನ್ನು “ಹೊಸ ಸಾಮಾನ್ಯ” (New Normal) ಎಂದು ಕರೆಯುತ್ತಿದ್ದಾರೆ.

ವೈದ್ಯರು ಹೇಳುವಂತೆ, ಆಸ್ಪತ್ರೆಗಳಿಗೆ ಹೋಗುವ ಮುನ್ನ ಮನೆಯಲ್ಲಿಯೇ ಕೆಲವು ಸರಳ ಪರೀಕ್ಷೆಗಳ ಮೂಲಕ ಹೃದಯದ ಆರೋಗ್ಯದ ಬಗ್ಗೆ ಪ್ರಾಥಮಿಕ ಮಾಹಿತಿ ಪಡೆಯಬಹುದು.

ಇವು ವೈದ್ಯಕೀಯ ಪರೀಕ್ಷೆಗೆ ಪರ್ಯಾಯವಲ್ಲದಿದ್ದರೂ, ಹೃದಯದ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ನೀಡುವ ಸೂಚನೆಗಳಾಗಬಹುದು.

ಮನೆಯಲ್ಲಿಯೇ ಮಾಡಬಹುದಾದ 5 ಸರಳ ಹೃದಯ ಆರೋಗ್ಯ ಟೆಸ್ಟ್‌ಗಳು

1. ಮೆಟ್ಟಿಲು ಏರುವ ಪರೀಕ್ಷೆ (Stair Test)

ಮನೆಯಲ್ಲಿರುವ ಮೆಟ್ಟಿಲುಗಳನ್ನು ಬಳಸಿಕೊಂಡು ಈ ಪರೀಕ್ಷೆಯನ್ನು ಮಾಡಬಹುದು.

  • ಮೂರು ಅಥವಾ ನಾಲ್ಕು ಮಹಡಿಗಳಷ್ಟು ಮೆಟ್ಟಿಲುಗಳನ್ನು ಸಾಮಾನ್ಯ ವೇಗದಲ್ಲಿ ಏರಿ.
  • ಈ ಸಮಯದಲ್ಲಿ ಉಸಿರಾಟದ ವೇಗ, ದಣಿವು ಅಥವಾ ಎದೆ ಬಿಗಿದಂತೆ ಅನಿಸುತ್ತಿದೆಯೇ ಎಂಬುದನ್ನು ಗಮನಿಸಿ.

ಗಮನಿಸಿ:
ಮೆಟ್ಟಿಲು ಏರಿದಾಗ ಹೆಚ್ಚು ಉಸಿರಾಟದ ತೊಂದರೆ, ತಲೆ ಸುತ್ತುವುದು ಅಥವಾ ಎದೆ ನೋವು ಕಂಡುಬಂದರೆ, ಹೃದಯದ ಸಾಮರ್ಥ್ಯ ಕಡಿಮೆಯಿರುವ ಸಾಧ್ಯತೆ ಇದೆ.


2. ಪಲ್ಸ್ ರೇಟ್ ಪರೀಕ್ಷೆ (Pulse Rate Test)

ನಿಮ್ಮ ಹೃದಯ ಬಡಿತವನ್ನು ತಿಳಿಯಲು ಇದು ಸರಳ ವಿಧಾನ.

  • ಕೈಮಣಿಯ ಮೇಲೆ ಅಥವಾ ಕುತ್ತಿಗೆಯ ಬಳಿ ಪಲ್ಸ್ ಕಂಡುಹಿಡಿಯಿರಿ.
  • ಒಂದು ನಿಮಿಷದಲ್ಲಿ ಎಷ್ಟು ಬಡಿತಗಳಿವೆ ಎಂದು ಎಣಿಸಿ.

ಸಾಮಾನ್ಯ ಪಲ್ಸ್:
ವಿಶ್ರಾಂತಿಯಲ್ಲಿರುವಾಗ ಒಂದು ನಿಮಿಷಕ್ಕೆ 60 ರಿಂದ 100 ಬಡಿತಗಳು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ.ಇದಕ್ಕಿಂತ ಹೆಚ್ಚು ಅಥವಾ ಕಡಿಮೆ ಇದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

3. ಟಾಕ್ ಟೆಸ್ಟ್ (Talk Test)

ಇದು ಹೃದಯದ ಸಾಮರ್ಥ್ಯವನ್ನು ಅಂದಾಜು ಮಾಡಲು ಬಳಸುವ ಸರಳ ವಿಧಾನ.

  • ಎರಡು ನಿಮಿಷಗಳಷ್ಟು ವೇಗವಾಗಿ ನಡೆದು ನೋಡಿ.
  • ಈ ವೇಳೆ ನೀವು ಸುಲಭವಾಗಿ ಮಾತನಾಡಲು ಸಾಧ್ಯವಾಗುತ್ತಿದೆಯೇ ಎಂದು ಪರಿಶೀಲಿಸಿ.

ಫಲಿತಾಂಶ:
ನಡೆಯುವಾಗ ಮಾತನಾಡಲು ತುಂಬಾ ಕಷ್ಟವಾಗುತ್ತಿದ್ದರೆ ಅಥವಾ ಉಸಿರಾಟ ತುಂಬಾ ವೇಗವಾಗಿದ್ದರೆ, ಹೃದಯದ ಫಿಟ್ನೆಸ್ ಕಡಿಮೆ ಇರಬಹುದು.


4. ರಿಕವರಿ ಟೆಸ್ಟ್ (Heart Recovery Test)

  • ಒಂದು ಅಥವಾ ಎರಡು ನಿಮಿಷ ವೇಗವಾಗಿ ನಡೆದು ಅಥವಾ ಸಣ್ಣ ವ್ಯಾಯಾಮ ಮಾಡಿ.
  • ನಂತರ ತಕ್ಷಣ ನಿಮ್ಮ ಪಲ್ಸ್ ಅನ್ನು ಮತ್ತೆ ಪರಿಶೀಲಿಸಿ.

ಸಾಮಾನ್ಯವಾಗಿ:
ಒಂದು ನಿಮಿಷದೊಳಗೆ ಹೃದಯ ಬಡಿತ ನಿಧಾನವಾಗಿ ಕಡಿಮೆಯಾಗಬೇಕು.
ಹೃದಯ ಬಡಿತ ಕಡಿಮೆಯಾಗಲು ಹೆಚ್ಚು ಸಮಯ ತೆಗೆದುಕೊಂಡರೆ, ಹೃದಯದ ಫಿಟ್ನೆಸ್ ಕಡಿಮೆಯಿರಬಹುದು.


5. ದೇಹದ ಸೂಚನೆಗಳನ್ನು ಗಮನಿಸಿ

ಕೆಲವೊಮ್ಮೆ ನಮ್ಮ ದೇಹವೇ ಹೃದಯದ ಸಮಸ್ಯೆಗಳ ಬಗ್ಗೆ ಮುಂಚಿತವಾಗಿ ಸೂಚನೆ ನೀಡುತ್ತದೆ.

  1. ಎದೆ ಬಿಗಿದಂತೆ ಅಥವಾ ಒತ್ತಡದ ಅನುಭವ
  2. ಎಡಗೈ, ಕುತ್ತಿಗೆ ಅಥವಾ ಭುಜಕ್ಕೆ ಹರಡುವ ನೋವು
  3. ಉಸಿರಾಟದ ತೊಂದರೆ
  4. ಅಸಹಜ ದಣಿವು
  5. ಹೃದಯ ಬಡಿತದಲ್ಲಿ ಅಸಮಾನತೆ

ಈ ಲಕ್ಷಣಗಳನ್ನು ನಿರ್ಲಕ್ಷಿಸದೇ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.

ಈ ಪರಿಸ್ಥಿತಿಗೆ ಪ್ರಮುಖ ಕಾರಣಗಳು ,ಜಂಕ್ ಫುಡ್ ಮತ್ತು ಫಾಸ್ಟ್ ಫುಡ್ ಹೆಚ್ಚು ಸೇವನೆ

  • ದಿನಪೂರ್ತಿ ಕುಳಿತಿರುವ ಜೀವನಶೈಲಿ
  • ವ್ಯಾಯಾಮದ ಕೊರತೆ
  • ಕೆಲಸದ ಒತ್ತಡ ಮತ್ತು ಮಾನಸಿಕ ತಾಣ
  • ನಿದ್ರೆಯ ಕೊರತೆ
  • ಧೂಮಪಾನ ಮತ್ತು ಮದ್ಯಪಾನ

ಈ ಎಲ್ಲ ಕಾರಣಗಳಿಂದ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳು ವೇಗವಾಗಿ ಹೆಚ್ಚುತ್ತಿವೆ.

ಹೃದಯವನ್ನು ಆರೋಗ್ಯವಾಗಿಡಲು ಪಾಲಿಸಬೇಕಾದ ಮುನ್ನೆಚ್ಚರಿಕೆಗಳು

ನಿಯಮಿತ ವ್ಯಾಯಾಮ

ಪ್ರತಿ ದಿನ ಕನಿಷ್ಠ 30 ನಿಮಿಷ ನಡೆಯುವುದು ಅಥವಾ ಲಘು ವ್ಯಾಯಾಮ ಮಾಡುವುದು ಹೃದಯಕ್ಕೆ ಉತ್ತಮ.

ಆರೋಗ್ಯಕರ ಆಹಾರ ಪದ್ಧತಿ

  • ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ,
  • ಜಂಕ್ ಫುಡ್ ಮತ್ತು ಫಾಸ್ಟ್ ಫುಡ್ ಕಡಿಮೆ ಮಾಡಿ, ಎಣ್ಣೆ ಮತ್ತು ಉಪ್ಪಿನ ಪ್ರಮಾಣ ಕಡಿಮೆ ಮಾಡಿ.ಒತ್ತಡ ನಿಯಂತ್ರಣ ಮಾಡೋದು ಹೇಗೆ?ಯೋಗ, ಧ್ಯಾನ ಮತ್ತು ಉಸಿರಾಟ ವ್ಯಾಯಾಮಗಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.ಸಾಕಷ್ಟು ನಿದ್ರೆ,ಪ್ರತಿ ದಿನ ಕನಿಷ್ಠ 7 ರಿಂದ 8 ಗಂಟೆಗಳ ನಿದ್ರೆ ಅಗತ್ಯ.ನಿಯಮಿತ ಆರೋಗ್ಯ ತಪಾಸಣೆ ವರ್ಷಕ್ಕೆ ಕನಿಷ್ಠ ಒಂದು ಬಾರಿ ಈ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ:
  • ರಕ್ತದೊತ್ತಡ (BP),ರಕ್ತದಲ್ಲಿನ ಸಕ್ಕರೆ ,(Blood Sugar)ಕೊಲೆಸ್ಟ್ರಾಲ್ ಮಟ್ಟ…

ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ

ಈ ಸಮಸ್ಯೆಗಳು ಅಥವಾ ಲಕ್ಷಣಗಳ ಕಂಡುಬಂದರೆ ನಿರ್ಲಕ್ಷಿಸಬೇಡಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು:ಎದೆ ನೋವು,ಉಸಿರಾಟದ ತೊಂದರೆ,ತಲೆ ಸುತ್ತುವುದು,ಹೃದಯ ಬಡಿತ ಅಸಮಾನವಾಗುವುದು

ಇವು ಹೃದಯ ಸಂಬಂಧಿತ ಸಮಸ್ಯೆಗಳ ಆರಂಭಿಕ ಲಕ್ಷಣಗಳಾಗಿರಬಹುದು.

ವಿಶೇಷವಾಗಿ ಯುವಕರು ತಮ್ಮ ಜೀವನಶೈಲಿಯನ್ನು ಸುಧಾರಿಸಿಕೊಂಡು ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮವನ್ನು ತಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳಬೇಕು.

ಮನೆಯಲ್ಲಿಯೇ ಮಾಡಬಹುದಾದ ಈ ಸರಳ ಪರೀಕ್ಷೆಗಳು ನಿಮ್ಮ ಹೃದಯದ ಆರೋಗ್ಯದ ಬಗ್ಗೆ ಪ್ರಾಥಮಿಕ ಮಾಹಿತಿ ನೀಡಬಹುದು. ಆದರೆ ಯಾವುದೇ ಅನುಮಾನಾಸ್ಪದ ಲಕ್ಷಣಗಳು ಕಂಡುಬಂದರೆ ವೈದ್ಯಕೀಯ ಸಲಹೆ ಪಡೆಯುವುದು ಅತ್ಯಂತ ಮುಖ್ಯ.

ಸ್ವಸ್ಥ ಹೃದಯ – ಆರೋಗ್ಯಕರ ಜೀವನದ ಮೊದಲ ಹೆಜ್ಜೆ. ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

#cardiac arrest#exercise#fitness#healthy habbits#heart attack#junkfood habit

COMMENTS

Login with Gmail to comment

ಇನ್ನಷ್ಟು ಸುದ್ದಿ

ಮೈ ಜುಮ್ಮೆನ್ನಿಸುವ ಬೈಕ್–ಲಾರಿ ಡಿಕ್ಕಿ ಅಪಘಾತ… ಕ್ಷಣಾರ್ಧದಲ್ಲೇ ಜೀವ ಹೋದ ಹೃದಯವಿದ್ರಾವಕ ರಸ್ತೆ ದುರಂತ
ಶಿಕ್ಷಣ ಸುಧಾರಣೆಗೆ ರಾಜ್ಯ ಸರ್ಕಾರದ ಭರ್ಜರಿ ಪ್ಲಾನ್ ಬಹಿರಂಗ!
ಎಚ್ಚರ… ನಿಮ್ಮಸುತ್ತಮುತ್ತ ಏನು ನಡೆಯುತ್ತಿದೆ ಗೊತ್ತಿರಲಿ! 🚨Be Aware… Stay Alert… Save Youth!
ಗಂಡನಿಗೆ ಚಿನ್ನ ಕಳ್ಳತನದ ಪಿಎಚ್‌ಡಿ, ಹೆಂಡತಿಗೆ ಮಾರ್ಕೆಟಿಂಗ್ ಜಾಣ್ಮೆ…ಆಹಾ ಒಮ್ಮೆ ಓದಿ ಎಂಥಾ ಜೋಡಿ..
ಅವಮಾನವೇ ಯಶಸ್ಸಿನ ಇಂಧನ: ಕೋಮಲ್ ಗನಾತ್ರಾ ಎಂಬ ಅದಮ್ಯ ಚೇತನ ಕೇವಲ 2 ವಾರಗಳ ಸಂಸಾರ, ನಂತರ ಜೀವಮಾನದ ಸಾಧನೆ!
ಹುಬ್ಬಳ್ಳಿ ಲವ್ ಜಿಹಾದ್..!?ಮೂರು ವರ್ಷದ ಸಂಬಂಧ, friendship, ಫ್ಯಾಮಿಲಿ closeness-ಕ್ಷಣದಲ್ಲೇ ಬಾರಿ ಸಂಘರ್ಷ..!
ಮುಂದಿನ ಕೆಲವು ದಿನ ಭಾರಿ ಗಾಳಿ ಮಳೆ ಗುಡುಗು -ಮಿಂಚಿನ ಎಚ್ಚರಿಕೆ 
ಸಿಐಡಿ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್: ವಂಚಕರ ಬಲೆಯಿಂದ ಜಸ್ಟ್ ಎಸ್ಕೇಪ್
ಪರಸ್ತ್ರೀ ಹುಂಡಿಗೆ  ಒಂದುವರೆ ಕೋಟಿ ಅಪಾರ್ಟ್ಮೆಂಟ್, ಮಾಜಿ ಶಾಸಕನ ರಂಗಿನಾಟ 
ಕಾಂಗ್ರೆಸ್–ಮುಸ್ಲಿಂ ಸಮುದಾಯ ಸಂಬಂಧದಲ್ಲಿ ದೊಡ್ಡ ಬಿರುಕು?
ವಂಚಕನ ಬೆನ್ನಿಗೆ ನಿಂತರೆ, ಕೊರಳಿಗೆ ಉರುಳಾದೀತು!
“ದಪ್ಪ, ಕಪ್ಪು ಎಂಬ ಅವಹೇಳನ… ವರದಕ್ಷಿಣೆ ಕಿರುಕುಳ… ಕೊನೆಗೆ ಕತ್ತು ಹಿಸುಕಿ ಹತ್ಯೆ! ಧಾರವಾಡದ ಘಟನೆ ಸಮಾಜದ ಮನಸ್ಸನ್ನೇ ನಡುಗಿಸಿದೆ”
ಮಧ್ಯಪ್ರಾಚ್ಯದಲ್ಲಿ ರೆಡ್ ಅಲರ್ಟ್!3 ತಿಂಗಳ ಯುದ್ಧಕ್ಕೆ ಮಹಾ ಟ್ವಿಸ್ಟ್ ಇರಾನ್ ಸೇನಾ ನೆಲೆಗಳನ್ನು ಧೂಳೀಪಟ ಮಾಡಿದ ಅಮೆರಿಕ!
ಸರ್ಕಾರಿ ಸ್ವಾಮ್ಯದ ಬೇಲಿ ಕಂಬ ಕಿತ್ತಾಕಲು DYFI ಕುಮ್ಮಕ್ಕು….!
ನನ್ನನ್ನು ದುರ್ಬಲ ವ್ಯಕ್ತಿ ಅಂದುಕೊಳ್ಳಬೇಡಿ- U.T ಖಾದರ್
ಹೋಟೆಲ್ ಉದ್ಯಮ ಉಳಿಸಲು ಜಿಎಸ್‌ಟಿ ಕಡಿತ ಅಗತ್ಯ-ಕರ್ನಾಟಕ ಹೋಟೆಲ್ ಸಂಘದ ಆಗ್ರಹ
ಕರ್ನಾಟಕದಲ್ಲಿ ಮಳೆ ಅಲರ್ಟ್! 13 ಜಿಲ್ಲೆಗಳಿಗೆ ಯೆಲ್ಲೋ ವಾರ್ನಿಂಗ್ – ಜನರು ಎಚ್ಚರಿಕೆ ಅಗತ್ಯ
ಕಳುವಾದ ವಾಹನ ಸಮೇತ ಕಳ್ಳರ ಬಂಧನ…!
ಯುಎಇಯಿಂದ ಯುರೋಪ್ ತನಕ ಮೋದಿ ಐತಿಹಾಸಿಕ ವಿದೇಶ ಪ್ರವಾಸ…ಡಿಪ್ಲೊಮಸಿ – ತೈಲದಿಂದ ತಂತ್ರಜ್ಞಾನವರೆಗೆ ಇದು ಭಾರತದ ಭವಿಷ್ಯದ ತಂತ್ರಾತ್ಮಕ ನಡೆ ?!
ಕಣ್ಣೀರಾದ ಕಣ್ಣಾಲಿಗಳು ಹೊಟ್ಟೆ ತುಂಬಾ ಊಟ ಮಾಡಿ ನಿದ್ರಿಸುವಂತೆ ಮಾಡುವ  “ಕಾರುಣ್ಯ ಸೇವಾಕ್ಕೀಗ 3000 ದಿನಗಳು…!!!”
ಸೂರತ್‌ನಲ್ಲಿ ಮಳೆಯ ರೌದ್ರನರ್ತನ: 200ಕ್ಕೂ ಹೆಚ್ಚು ಅಂಗಡಿಗಳಿಗೆ ನೀರು ನುಗ್ಗಿ ₹200 ಕೋಟಿ ನಷ್ಟ – ಕಣ್ಣೀರಿನಲ್ಲಿ ಮುಳುಗಿದ ವ್ಯಾಪಾರಿಗಳು
ಮುಂಬೈ ಮಳೆ ಅವಾಂತರ: ಒಂದು ನಗರವೇ ಜಲಾವೃತ… ದುರಂತ, ಮಾನವೀಯತೆ ಮತ್ತು ಹೋರಾಟದ ಹಲವು ಮುಖಗಳು
ವಿಶ್ವದ ಅತ್ಯುತ್ತಮ ಶಾಲೆಗಳ ಪಟ್ಟಿಯಲ್ಲಿ ಭಾರತದ 7 ಶಾಲೆಗಳು …!ವಿಶ್ವದ ಗಮನ ಸೆಳೆದ ಸಾಧನೆ ಅಂಥದ್ದೇನಿದೆ!?
“ವಾಹನ ಮಾರಾಟ-RC ಬದಲಾವಣೆ  ಅಗತ್ಯ.. ಇಲ್ಲವಾದರೆ ಕಾನೂನು ಸಮಸ್ಯೆಗಳು ತಪ್ಪಿದ್ದಲ್ಲ..!” ಹೈಕೋರ್ಟ್
ಮಹಿಳೆಯರೇ, ಬಿರುಬಿಸಿಲು ಹಾಗಂತ ನೀರು ಕೇಳ್ಕೊಂಡು ಬಂದ್ರು… ಯಾರೋ ಪಾಪ ಅಂದ್ರೆ ಅಪರಿಚಿತರಿಗೆ…!ಒಂಟಿಯಾಗಿ ಇದ್ದಾಗ ಹೆಚ್ಚು ಜಾಗ್ರತಾಗಿರಿ.
ಮೇ 22 ಮಂಗಳೂರು ಎಂದಿಗೂ ಮರೆಯದ ದಿನ…
*ಬೈಕಂಪಾಡಿ ಹೆದ್ದಾರಿ ಡಕಾಯಿತಿ, 23 ಲಕ್ಷ ಮೌಲ್ಯದ ಸೊತ್ತು ದರೋಡೆ ಪ್ರಕರಣ: 3 ಆರೋಪಿಗಳು ಸೆರೆ.
ಮಂಗಳೂರು ಸರ್ಕಾರಿ ಕಾಲೇಜಿನಲ್ಲಿ ಎಬಿವಿಪಿ, ಎನ್ ಎಸ್ ಯು ಐ ವಿದ್ಯಾರ್ಥಿಗಳ ಘರ್ಷಣೆ 
ಭಾರತೀಯ ಸೇನೆಯ ನೆರವಿಗೆ ಡ್ರೋನ್ ನರ್ಸಿಂಗ್ ಹೋಮ್! ದುರ್ಗಮ ಪ್ರದೇಶಗಳಲ್ಲೂ ಸಿಗಲಿದೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ
ಕಾಂಗ್ರೆಸ್ ಹೈಕಮಾಂಡ್ ಖಡಕ್ ವಾರ್ನಿಂಗ್: ಸ್ವಾಮೀಜಿ, ಧಾರ್ಮಿಕ ಮುಖಂಡರ ಶಿಫಾರಸುಗಳಿಗೆ ಸಿಗಲ್ಲ ಮನ್ನಣೆ!