📍 Karavali Maruta
  • LOGIN
  • BREAKING
    ‘ಮೇಡ್ ಇನ್ ಮಂಗಳೂರು’ ಹಡಗು ಜರ್ಮನ್ ಸಂಸ್ಥೆಯ ತೆಕ್ಕೆಗೆ; ವಿಶ್ವದ ಗಮನ ಸೆಳೆದ ಚೌಗುಲೆ ಶಿಪ್‌ಯಾರ್ಡ್! ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ ದಯಾಮರಣ ಕೇಳಿದ್ದ ತುಮಕೂರು ರಾಬಿಯಾ ಇನ್ನಿಲ್ಲ …!ಪರಮೇಶ್ವರ್ ಮುಂದೆ ಕಣ್ಣೀರಿಟ್ಟಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ವಿಷಸೇವಿಸಿ ಕೊನೆಯುಸಿರು…‘ಮನೆ’ ಸಿಕ್ಕರೂ ಬದುಕು ಉಳಿಯಲಿಲ್ಲ! ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್! ಮಹಿಳಾ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ
    ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಮರಣದಂಡನೆ ಶಿಕ್ಷೆಗೆ ಈಡಾದ  ತಮಿಳುನಾಡು   ಪೊಲೀಸರು

    ಅತ್ಯಂತ ಅಪರೂಪದಲ್ಲಿಯೇ ಅಪರೂಪದ ಘಟನೆ ಇದು. ನ್ಯಾಯಾಲಯದಲ್ಲಿ ನ್ಯಾಯವು ಇನ್ನೂ ಇದೆ, ಅನ್ನೋದನ್ನು ಸಾಬೀತು ಪಡಿಸುವಂತಹ ಆದೇಶವು ಕೇಳ ನ್ಯಾಯಾಲಯದಿಂದ ಬಂದಿದೆ.

    ಅದು ಅಂತಿಂತಹ ಪ್ರಕರಣವಲ್ಲ, ಲಾಕಪ್ ಡೆತ್ ಪ್ರಕರಣ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಸೇರಿದಂತೆ ಒಂಬತ್ತು ಪೊಲೀಸರ ತಪ್ಪು ಸಾಬೀತಾಗಿದ್ದು, ಅವರಿಗೆ ನ್ಯಾಯಾಲಯವು ಮರಣದಂಡನೆಯ ಶಿಕ್ಷೆಯನ್ನು ವಿಧಿಸಿದೆ.

    ಇದು ಪಕ್ಕದ ತಮಿಳುನಾಡು ರಾಜ್ಯದ ಮಧುರೈ ಸಮೀಪದ ತೂತುಕುಡಿ ಜಿಲ್ಲೆಯಲ್ಲಿ ನಡೆದಂತಹ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ, ಇಂತಹದೊಂದು ಜಬರ್ದಸ್ತ್ ಆದೇಶವು ನ್ಯಾಯಾಲಯದಿಂದ ಬಂದಿದೆ.

    2020 ಜೂನ್ 19 ತೂತುಕುಡಿ ಜಿಲ್ಲೆಯ ಸತಮ್ ಕುಳಂ ಪೋಲಿಸ್ ಠಾಣೆಯಲ್ಲಿ ನಡೆದಂತಹ ಭೀಕರವಾದಂತಹ ಘಟನೆಇದು. ಇಡೀ ದೇಶದಲ್ಲಿ ಕರೋನ ಮಹಾಮಾರಿಯು ತನ್ನ ಅಟ್ಟಹಾಸ ಮೆರೆಯುತ್ತಿರುವಂತಹ ಸಮಯವದು. ಇಲ್ಲಿನ ಮೊಬೈಲ್ ಅಂಗಡಿ ಒಂದರ ಮಾಲೀಕ ಜಯರಾಜ್ ಹಾಗೂ ಅವರ ಮಗ  ಬೆನಿಕ್ಸ್  ತಮ್ಮ ಅಂಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಮಯದಲ್ಲಿ, ಅವರಿಬ್ಬರನ್ನು ಪೊಲೀಸರು ಕರೆದೊಯ್ಯುತ್ತಾರೆ.

    ಹಾಗೆ ಬಂಧಿಸಿ ಕರೆದೊಯ್ದ ಜಯರಾಜ್ ಹಾಗೂ ಬೆನಿಕ್ಸ್ ಇಬ್ಬರೂ ಜೀವಂತವಾಗಿ ಹೊರಗೆ ಬರುವುದಿಲ್ಲ. ಅವರಿಬ್ಬರೂ ಪೊಲೀಸ್ ಠಾಣೆಯಲ್ಲಿಯೇ  ಲಾಕಪ್ ಡೆತ್ ಆಗುತ್ತಾರೆ. ಪೊಲೀಸರ ವಿಪರೀತ ಚಿತ್ರಹಿಂಸೆಯಿಂದಾಗಿ ಪೊಲೀಸರ ಬಂದಿಯಾಗಿರುವಾಗಲೇ ಇಬ್ಬರೂ ಕೊಲೆಯಾಗುತ್ತಾರೆ. ಕಾನೂನು ಪಾಲಕರೇ, ಅಲ್ಲಿ ತಂದೆ ಮಗ ಇಬ್ಬರನ್ನು ಕೊಂದು ಹಾಕಿದ್ದರು.

    ಈ ಪ್ರಕರಣವು ಇಡೀ ದೇಶದಲ್ಲಿ ದೊಡ್ಡ ಸುದ್ದಿಯನ್ನಾಗಿ ಮಾಡಿತ್ತು ಅವತ್ತು. ಈ ಪ್ರಕರಣದ ಪರವಾಗಿ ಮತ್ತು ಪೊಲೀಸರ ವಿರುದ್ಧ ಸಾರ್ವಜನಿಕವಾಗಿ ಆಕ್ರೋಶವು ಮುಗಿಲು ಮುಟ್ಟಿದ್ದವು. ಪರಿಣಾಮ, ಈ ಬಗ್ಗೆ ಉನ್ನತ ತನಿಖೆಯು   ಪ್ರಾರಂಭವಾಗುತ್ತದೆ. ಆ ಉನ್ನತ ತನಿಖೆಯಲ್ಲಿ  ಪೊಲೀಸರ ತಪ್ಪು ಸ್ಪಷ್ಟವಾಗಿ ಕಾಣಿಸುತ್ತದೆ. ಅವರ ತಪ್ಪುಗಳು ಸಾಬೀತಾಗುತ್ತವೆ. ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್, ಇಬ್ಬರು ಸಬ್ ಇನ್ಸ್ಪೆಕ್ಟರ್, ಉಳಿದ ಪೊಲೀಸ್ ಕಾನ್ಸ್ಟೇಬಲ್ ಗಳು ತಂದೆ ಹಾಗೂ ಮಗನನ್ನು ಬೆತ್ತಲೆ ಗೊಳಿಸಿ ಥಳಿಸಿ ಕೊಂದಿದ್ದಾರೆ ಎನ್ನುವುದು ತನಿಖೆಯಲ್ಲಿ ಸಾಬೀತಾಗುತ್ತದೆ. ಈ ಪ್ರಕರಣಕ್ಕೆ  ಸಂಬಂಧಿಸಿದಂತೆ ಸುಮಾರು ನೂರಕ್ಕೂ ಹೆಚ್ಚು ಸಾಕ್ಷಿಗಳು, ಪೊಲೀಸರ ವಿರುದ್ಧವೇ  ಸ್ಪಷ್ಟವಾಗಿ ಸಾಕ್ಷಿ ಹೇಳಿದ್ದರು. ಇದರಲ್ಲಿ ಅದೇ ಪೊಲೀಸ್ ಠಾಣೆಯ ಮಹಿಳಾ ಕಾನ್ಸ್ಟೇಬಲ್ ಒಬ್ಬರು, ಪೊಲೀಸರ ವಿರುದ್ಧವೇ ಸಾಕ್ಷ್ಯ ನೋಡಿದ್ದರು.

    ಈ ಪ್ರಕರಣವು ಹತ್ತರಲಿ ಹನೊಂದಾಗಬಹುದು ಎಂಬ ಅನುಮಾನಗಳ ನಡುವೆ ನ್ಯಾಯದ ಚಿಲುಮೆ ಚಿಮ್ಮಿರುವುದು ಸಾರ್ವಜನಿಕವಾಗಿ ಸಂತೋಷಕ್ಕೆ ಕಾರಣವಾಗಿದೆ.  ಜಿಲ್ಲಾ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಒಳಗಾದ ಮೂವರು ಪೊಲೀಸ್ ಅಧಿಕಾರಿಗಳು ಆರು ಪೊಲೀಸ್ ಕಾನ್ಸ್ಟೇಬಲ್ಸ್, ಮೇಲಿನ ನ್ಯಾಯಾಲಯದ ಮೊರೆ ಹೋಗುತ್ತಾರೆ ಅನ್ನುವದರಲ್ಲಿ ಯಾವ ಅನುಮಾನವೂ ಇಲ್ಲ. ಇದು ಹೈ ಕೋರ್ಟ್ಗೆ ಹೋಗಲಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ.  ಆರೋಪಿತರಿಗೆ ತಮ್ಮ ವಾದ ಮಂಡನೆಗೆ ಇನ್ನೂ ಅವಕಾಶಗಳಿರುವ ಕಾರಣ, ಸದ್ಯಕ್ಕೆ ಮರಣದಂಡನೆ ಶಿಕ್ಷೆಯು ಜಾರಿಯಾಗುವುದಿಲ್ಲ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಆಸ್ಪತ್ರೆಯಲ್ಲೇ ಮೂರನೇ ಮಹಡಿಯಿಂದ ಬಿದ್ದು ಸಾವುನಿರ್ಲಕ್ಷ್ಯವೇ? ಸುರಕ್ಷತೆ ಪ್ರಶ್ನೆಗೊಳಗಾಗಿದೆ!
    ಎಲ್ಲೆಡೆ LPG ಗ್ಯಾಸ್ ಸಿಲಿಂಡರ್ ಸಂಕಷ್ಟ: ಇದು ಜೀವನೋಪಾಯದ ಪ್ರಶ್ನೆ… ತಕ್ಷಣ ಸಮರ್ಪಕ ಕ್ರಮ ಸರ್ಕಾರದ ಹೊಣೆ.
    ರಾಂಚಿ ‘ಜೆನ್-ಜಿ’ ಸಂಗ್ರಾಮ: ಪರೀಕ್ಷಾ ಅಕ್ರಮದ ವಿರುದ್ಧ ಉದ್ಯೋಗಾಕಾಂಕ್ಷಿಗಳ ರಣಕಹಳೆ…
    ಮಗಳ ಎಡವಟ್ಟಿಗೆ ಪಿಣರಾಯಿ ಬಲಿ…..ಕೇರಳ ರಾಜಕಾರಣದಲ್ಲಿ ಹೈವೋಲ್ಟೇಜ್ ಭೂಕಂಪ
    🚀 ಸ್ಪೇಸ್‌ನಲ್ಲಿ ಪೆಟ್ರೋಲ್ ಬಂಕ್‌ನಿಂದ..ಔಷಧ ತಯಾರಿಕೆಯವರೆಗೆ!
    ನೇತ್ರಾವತಿಯ ಬಂಗ್ಲೆಗುಡ್ಡೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ….
    ಇರಾನ್ ಬಿಕ್ಕಟ್ಟು ವೀಸಾ ವಿಸ್ತರಿಸಲು ವಿದೇಶಿ ಪ್ರಜೆಗಳು ಹತ್ತಿರದ FRRO ಅನ್ನು ಸಂಪರ್ಕಿಸಲು ಭಾರತ ಸಲಹೆ
    ಉದ್ಯಮಿ ಧೀರಜ್ ಜೈನ್ ಗಪ್ ಚುಪ್ಪಾಗಿ ನಡೆಸಿದ ಮಾನವೀಯ ನಡೆಗೆ ಸಾಕ್ಷಿ ನೋಡಿ
    ಸಚಿವ ಜಮೀರ್ ಕಥೆ ಗೋವಿಂದ!!!?
    “ಧುರಂಧರ್” ನಟ ರಣವೀರ್ ಸಿಂಗ್‌ ವಿರುದ್ಧ ಇಡೀ ಬಾಲಿವುಡ್ ಒಕ್ಕೂಟವೇ ತಿರುಗಿಬಿದ್ದಿದ್ದೇಕೆ? shocking ₹45 ಕೋಟಿ ವಿವಾದದ ಅಸಲಿ ಕಥೆ ಇಲ್ಲಿದೆ!
    ಕರ್ನಾಟಕದಲ್ಲಿ ಈಗ ಏನು ಟ್ರೆಂಡಿಂಗ್ ಗೊತ್ತಾ…! ಸಾಲು ಸಾಲು ಹಗರಣ, ಲಂಚವತಾರ , ಅಕ್ರಮ ನೇಮಕಾತಿ,ಟ್ರಾನ್ಸ್‌ಫರ್ ಮಾಫಿಯಾ ..ಒಂದೋ ಎರಡೋ….!??
    ಜಾಗತಿಕ ಸಂಘರ್ಷದ ಮಧ್ಯೆ ಭಾರತ–ಯುಎಇ ಬಿಗ್ ಡೀಲ್! ತಂತ್ರಜ್ಞಾನ, ಇಂಧನ ಮತ್ತು ಭದ್ರತೆಯಲ್ಲಿ ಐತಿಹಾಸಿಕ ಒಗ್ಗಟ್ಟು.
    ಪೂಜೆಗಾಗಿ ತೆರಳಿದ ಅರ್ಚಕರ ಶವ ನಾಲೆಯಲ್ಲಿ ಪತ್ತೆ
    ಮಂಗಳೂರು ನಗರದಲ್ಲಿ ಭಾರೀ ಪ್ರಮಾಣದ MDMA ವಶ – ಇಬ್ಬರು ಡ್ರಗ್ ಪೆಡ್ಲರ್‌ಗಳ ಬಂಧನ…
    “ಆ್ಯಕ್ಷನ್ ಸಿಎಂ” ಡಿಕೆ ಶಿವಕುಮಾರ್ ತಾಳ್ಮೆಯಿಂದ ತಾಕತ್ತಿನವರೆಗೆ…ಆಡಳಿತದ ಅಬ್ಬರ ಶುರು!ಏನೇನ್ ಹೇಳಿದ್ರು ?ಕರ್ನಾಟಕದಲ್ಲಿ ಹೊಸ ಆಡಳಿತ ಶೈಲಿಯ ಆರಂಭವೇ?
    ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಹೆಸರಲ್ಲಿ ನಡಿತಿರೋದೇನು?
    ಅಮೇರಿಕಾಕ್ಕೆ ಅಷ್ಟು ಧೈರ್ಯದಿಂದ ಎಲ್ಲಿಂದ ಬಂತು?
    ನಾಗಪ್ರತಿಷ್ಠಾ ಮಂಟಪದ ಎದುರು ನಡೆದಾಡಲು ಸ್ಥಳವಿಲ್ಲದಷ್ಟು ಭಕ್ತಾದಿಗಳು …
    ದ.ಕ ಜಿಲ್ಲಾಡಳಿತದಿಂದ ಮಂಗಳಮುಖಿಯರಲ್ಲದವರಿಗೂ ಗುರುತಿನ ಚೀಟಿ ವಿತರಣೆ – ಗಂಭೀರ ಆರೋಪ
    RSS ಕಾರ್ಯಕ್ರಮಕ್ಕೆ ಹೋದದ್ದಕ್ಕೆ ಅಮಾನತು: ಸರ್ಕಾರಿ ನೌಕರನ ಪರ ನಿಂತ KAT
    ವಯನಾಡಿನ ಮೇಪ್ಪಾಡಿ ವಲಯದಲ್ಲಿ ಮರುಕಳಿಸಿದ 2024ರ ಭೂಕುಸಿತದ ಕರಾಳತೆ
    ಅಲ್ಪಸಂಖ್ಯಾತರ ಘಟಕ ಬರ್ಕಾಸ್ತು- ಡಿಕೆ ಶಿವಕುಮಾರ್ ಗಟ್ಟಿ ನಿರ್ಧಾರ.
    “ಜೆನ್‌ ಜಿಯ ಧ್ವನಿ ದೇಶದ್ರೋಹವಲ್ಲ” – ಶಿಕ್ಷಣ ಸುಧಾರಣೆಗೆ ಎದ್ದ ಯುವ ಆಕ್ರೋಶಕ್ಕೆ RSS ಮೋಹನ್ ಭಾಗವತ್ ಬೆಂಬಲ…..
    ಕರಾವಳಿ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯ: “ಕರಾವಳಿ ಪಡೆ” ಹೋರಾಟ ತೀವ್ರಗೊಳಿಸಲು ನಿರ್ಧಾರ
    AI ವಿಶ್ವವಿದ್ಯಾಲಯಕ್ಕೂ ಮೊದಲು AI ಪರಿಣಾಮಗಳ ಅಧ್ಯಯನ ಅಗತ್ಯವೇ?
    ಜನಗಣತಿ 2026–27 – Self Enumeration ಮುಗಿದು ಈಗ ಮನೆ ಮನೆ ಭೇಟಿ ಹಂತ ಆರಂಭ!ನಮ್ಮ ಮಾಹಿತಿ = ನಮ್ಮ ದೇಶದ ಬೆಳವಣಿಗೆ…
    ದೇಶದ ಹಲವೆಡೆ ಭಾರೀ ಮಳೆ ಎಚ್ಚರಿಕೆ: ರೆಡ್ ಅಲರ್ಟ್ ಅಂದ್ರೆ ಮಳೆ ಗ್ಯಾರಂಟಿ ಅಲ್ಲ…IMD ಮುನ್ಸೂಚನೆಯನ್ನು ನಿರ್ಲಕ್ಷಿಸಬೇಡಿ!ಅದು  “ಅಪಾಯದ ಸಾಧ್ಯತೆಯ ಎಚ್ಚರಿಕೆ!”
    🔥 ಮಧ್ಯಪ್ರಾಚ್ಯ ಯುದ್ಧ: 17ನೇ ದಿನಕ್ಕೆ- ದುಬೈ ವಿಮಾನ ನಿಲ್ದಾಣದ ಬಳಿ ಬೆಂಕಿ!
    ಅಕ್ರಮ ಪ್ರವೇಶ, ದೌರ್ಜನ್ಯ, ಹಾಗೂ ಕೃಷಿ ಚಟುವಟಿಕೆಗೆ ತಡೆಯ ಬಗ್ಗೆ ದೂರು ದಾಖಲು