📍 Karavali Maruta
  • LOGIN
  • BREAKING
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ ದಯಾಮರಣ ಕೇಳಿದ್ದ ತುಮಕೂರು ರಾಬಿಯಾ ಇನ್ನಿಲ್ಲ …!ಪರಮೇಶ್ವರ್ ಮುಂದೆ ಕಣ್ಣೀರಿಟ್ಟಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ವಿಷಸೇವಿಸಿ ಕೊನೆಯುಸಿರು…‘ಮನೆ’ ಸಿಕ್ಕರೂ ಬದುಕು ಉಳಿಯಲಿಲ್ಲ! ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್! ಮಹಿಳಾ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ ವಾಜಪೇಯಿ ಸರ್ಕಾರದ  ಕನಸಿನ ಯೋಜನೆ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಸಹಿ ಸಂಗ್ರಹ ಅಭಿಯಾನ
    ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಸಚಿವ ಜಮೀರ್ ಕಥೆ ಗೋವಿಂದ!!!?

    ದಾವಣಗೆರೆ ಬೈ ಎಲೆಕ್ಷನ್ ವಿಚಾರ ನಮಗೆ ಗೊತ್ತೇ ಇದೆ. ಅನವಶ್ಯಕವಾಗಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವಿಚಾರದಲ್ಲಿ ಮೂಗು ತೋರಿಸಿ ಗೊಂದಲವನ್ನು ಉಂಟು ಮಾಡಿರುವಂತಹ ವ್ಯಕ್ತಿ, ಇದೆ ಜಮೀರ್ ಅಹ್ಮದ್ ಖಾನ್. ಈ ಜಮೀರ್ ಅಹಮದ್ ಖಾನ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗ ಅಂತ  ಆಗಾಗ ತೋರಿಸಿಕೊಳ್ಳುತ್ತಾ ಬಂದಂತಹ ವ್ಯಕ್ತಿ. ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಜಮೀರ್ ಅಹ್ಮದ್ ಖಾನ್ ಅವರಿಗೆ  ಪಕ್ಷದಲ್ಲಿ ರಾಜ್ಯಮಟ್ಟದ ಯಾವುದೇ ಜವಾಬ್ದಾರಿಯು ಇಲ್ಲ. ಹಾಗಿದ್ದರೂ ಪಕ್ಷದ ಇತರ ಮುಸ್ಲಿಂ ನಾಯಕರನ್ನು ಓವರ್ ಟೇಕ್ ಮಾಡಿ ಮುಸ್ಲಿಂ ಸಮುದಾಯದ ಪ್ರಷ್ನತೀತ ನಾಯಕ ಎಂಬ ಸ್ಥಾನಕ್ಕೆ ಬಂದು ಕೂರುವ ಪ್ರಯತ್ನಕ್ಕೆ ಕೈ ಹಾಕಿದ್ದ. ಅದರ ಭಾಗವೇ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರಕರಣ.

    ಎಸ್ ಇದೀಗ ಸಚಿವ ಸ್ಥಾನಕ್ಕೆ ಸಂಚುಕಾರವನ್ನು ತಂದುಕೊಳ್ಳುತ್ತಿದ್ದಾರೆ ಸಚಿವ ಜಮೀರ್ ಅಹ್ಮದ್ ಖಾನ್. ಗೋವಿಂದಾನಿ ಗೋವಿಂದ ಎಂಬಂತಹ ಪರಿಸ್ಥಿತಿಗೆ ಸಿಲುಕಿಕೊಂಡಿದ್ದಾರೆ ಸಚಿವ ಜಮೀರ್ ಅಹಮದ್ ಖಾನ್. ಸಹಕರಿಸಿದಂತಹ ಎಂಎಲ್ಸಿ ನಸೀರ್ ಅಹ್ಮದ್ ಹಾಗೂ ಅಬ್ದುಲ್ ಜಬ್ಬಾರ್ ಎನ್ನುವವರು ಸಹ ಇದೀಗ ಅಡಗತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು?

    ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇದೇ ಪ್ರಥಮ ಬಾರಿಗೆ ಸೋಲುವ ಭಯ ಕಾಡುತ್ತಿದೆ. ಅಷ್ಟಕ್ಕೂ ಸೋಲುತ್ತಿರುವವರು ಸಣ್ಣವರೇನಲ್ಲ ಶಾಮನೂರು ಶಿವಶಂಕ್ರಪ್ಪ ಎಂಬ ದಾವಣಗೆರೆಯ ದನಿಯ ಮೊಮ್ಮಗ ಸೋಲಿನ ಅಂಚಿಗೆ ತಲುಪುತ್ತಿದ್ದಾರೆ.

    ಈ ಸೋಲು ಕೇವಲ ಶ್ಯಾಮನೂರು ಕುಟುಂಬಕ್ಕೆ ಸಲ್ಲುವಂತದ್ದಲ್ಲ, ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಿನ್ನಡೆಯನ್ನು ಉಂಟುಮಾಡುವಂತಹ ಸೋಲಾಗಲಿದೆ. ಒಂದೊಮ್ಮೆ ಈ ಸೋಲು ಖಚಿತವಾದರೆ ಅದರ ಎಲ್ಲಾಶಯ ಯಾವ ಮುಲಾಜು ಇಲ್ಲದೆ ಜಮೀರ್ ಅಹ್ಮದ್ ಖಾನ್ ಅವರಿಗೆ ಸಲ್ಲುತ್ತದೆ.

    ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇದೆ. ಸಂದರ್ಭದಲ್ಲಿ ನಡೆಯುವ ಎಲ್ಲಾ ಚುನಾವಣೆಯಲ್ಲೂ ಗೆಲುವು ಆಡಳಿತ ಪಕ್ಷದ ಪರವಾಗಿರಬೇಕು. ಆದರೆ ಯಾವ ಲಕ್ಷಣವು ಕಾಣುತ್ತಿಲ್ಲ ಅದಕ್ಕೆ ಕಾರಣ ಬೇರೇನೂ ಅಲ್ಲ ಕಾಂಗ್ರೆಸ್ ಒಳಗಿನಿಂದಲೇ ಗಣದಂತೆ ಕೆಲಸ ಮಾಡುತ್ತಿರುವವರೇ ಕಾರಣ. ಅಂತವರನ್ನು ಪಕ್ಷವು ಅಥವಾ ಸರ್ಕಾರವೋ ಅತಿ ಎತ್ತರ ಕೈ ಇಟ್ಟುಕೊಂಡ ಕಾರಣ ಸಾಕಷ್ಟು ಡ್ಯಾಮೇಜ್ ಈ ಕ್ಷೇತ್ರದ ಮೇಲಾಗುತ್ತಿದೆ.

    ಜಮೀರ್ ಅಹಮದ್ ಖಾನ್ ನಾನೊಬ್ಬ ಮುಸ್ಲಿಂ ಸಮಾಜದ ನಾಯಕನಾಗಬೇಕು ಅಂತಿದ್ದರೆ ಈ ಪಕ್ಷಗಳ ಅವಶ್ಯಕತೆ ಯಾಕೆ ಬೇಕಿತ್ತು? ಓವೈಸಿ ತರನೋ ಅಥವಾ ಮುಸ್ಲಿಂಲೀಗ್ ಪಕ್ಷಗಳ ಜೊತೆಗೆ ಕಾಣಿಸಿಕೊಳ್ಳಬಹುದಿತ್ತು.  ಆದರೆ ಜಮೀರ್ ಅಹಮದ್ ಖಾನ್ ಜೆಡಿಎಸ್ ಹಾಗೂ ಕಾಂಗ್ರೆಸ್ ಜೊತೆಗೆ ಗುರುತಿಸಿಕೊಂಡು ಅದರ ಲಾಭವನ್ನು ಪಡೆದುಕೊಂಡರು. ಇವತ್ತು ಮಿನಿಸ್ಟರ್ ಆಗಿದ್ದಾರೆ ಅಂದರೆ ಅದಕ್ಕೆ ಕಾರಣ ಈ ಎರಡು ಪಕ್ಷ ಕಾರಣ. ಅಂತಹ ಜಮೀರ್ ಅಹ್ಮದ್ ಖಾನ್, ಹಣಕಾಸಿನ ವಿಚಾರದಲ್ಲಿ ಏನೇ ಮಾಡಿರಲಿ ಎಷ್ಟೇ ಮಾಡಿರಲಿ ಅದು ಬೇರೆ ವಿಚಾರ. ಪವರ್ ಹಾಗೂ ರಾಜಕಾರಣದಲ್ಲಿ ಅವರಿಗೆ ಒಂದು ಸ್ಥಾನ ಕೊಟ್ಟಿದ್ದು ಜೆಡಿಎಸ್ ಮತ್ತು ಕಾಂಗ್ರೆಸ್ ಅನ್ನುವುದರಲ್ಲಿ ಎರಡು ಮಾತೇ ಇಲ್ಲ. ಅದೇ ಜಮೀರ್ ಅಹಮದ್ ಖಾನ್ ಈ ಬಾರಿ ಕಾಂಗ್ರೆಸ್ ಪಾಲಿಗೆ ವಿಲನ್ ಆದರ? ಕಾಂಗ್ರೆಸ್ ಪಕ್ಷಕ್ಕೆ ಬ್ಯಾಕ್ ಸ್ಟಾಬ್ ಮಾಡಿದರಾ?

    ಈಗ ಬರುತ್ತಿರುವ ಸುದ್ದಿ ಅದನ್ನೇ ಹೇಳುತ್ತಿದೆ ನೋಡಿ. ದಾವಣಗೆರೆ ವಿಧಾನಸಭಾ ಉಪಚುನಾವಣೆಯ ವಿಚಾರದಲ್ಲಿ ಕಾಂಗ್ರೆಸ್ ಕೆಂಡಮಂಡಲವಾಗಿದೆ. ಆಂತರಿಕ ಲೆಕ್ಕಾಚಾರದ ಪ್ರಕಾರ ಗೆಲವು ಕಷ್ಟ ಎಂಬ ವಿಚಾರ ತಿಳಿದು ಬಂದಿದೆ. ಹಾಗಾಗಿ ಪಕ್ಷವು ಅಲ್ಲಿ ನಡೆದ ವಿಚಾರ ಹಾಗೂ ಏನೆಲ್ಲಾ ಇಂಟರ್ನಲ್ ವ್ಯವಹಾರ ನಡೆದಿದೆ ಎಂಬುದರ ಬಗ್ಗೆ ಆಂತರಿಕ ವಾದಂತಹ ತನಿಖೆಯನ್ನು ಮಾಡಿದೆ. ನೇತೃತ್ವವನ್ನು  ಸಲೀಂ ಅಹಮದ್ ಅವರು ವಹಿಸಿದ್ದರು. ಒಟ್ಟಿನಲ್ಲಿ ಏನೆಲ್ಲಾ ಆಯಿತು ಅನ್ನುವುದರ ಸಂಪೂರ್ಣ ವಿವರವನ್ನು ಒಳಗೊಂಡ ವಿಚಾರವನ್ನು ಕಾಂಗ್ರೆಸ್ ಹೈಕಮಾಂಡ್ಗೆ ಉಸ್ತುವಾರಿ ನಾಯಕ ಸುರ್ಜೆವಾಲಾ ಥ್ರೂ ಕಳಿಸಲಾಗಿದೆ. 

    ತನಿಕಾ ವರದಿಯ ಆದಾರದ ಮೇಲೆ ಹೈಕಮಾಂಡ್ ಒಂದು ನಿರ್ಧಾರಕ್ಕೆ ಬರಲಿದೆ ಅಷ್ಟಕ್ಕೂ ವರದಿಯಲ್ಲಿ ಏನಿದೆ?

    ಆ ಪಕ್ಷದ ಆಂತರಿಕ ವಲಯದಿಂದ ಬಂದಿರುವ ಮಾಹಿತಿಯ ಪ್ರಕಾರ ಆತನಿಕ ವರದಿಯಲ್ಲಿ ದೊಡ್ಡ ಬಾಂಬೆ ಇದೆ. ಆ ವರದಿಯ ಆಧಾರದಲ್ಲಿ ಕ್ರಮವೇನಾರು ಆದರೆ, ಜಮೀರ್ ಅಹ್ಮದ್ ಖಾನ್ ತಮ್ಮ ಸಚಿವ ಸ್ಥಾನವನ್ನು ಕಳೆದುಕೊಳ್ಳುವುದು ಖಚಿತ. ಅಷ್ಟೇ ಅಲ್ಲ ಪಕ್ಷದಿಂದಲೂ ಹೊರ ಹೋಗಬೇಕಾಗುತ್ತದೆ. ಜಮೀರ್ ಅಹ್ಮದ್ ಖಾನ ಅಷ್ಟೇ ಅಲ್ಲ, ಎಂಎಲ್‌ಸಿಗಳಾದ ನಸಿರ್ ಅಹಮದ್ ಹಾಗೂ ಅಬ್ದುಲ್ ಜಬ್ಬಾರ್ ಸಹ ಜಮೀರ್ ಅಹ್ಮದ್ ಖಾನ್ ಮಾತು ಕೇಳಿದ ಕಾರಣದಿಂದಾಗಿ ಕಾಂಗ್ರೆಸ್ ನಿಂದ ಹೊರದಬ್ಬಲ್ಪಡುಬಹುದು ಎನ್ನಲಾಗುತ್ತಿದೆ.

    ಆ ವರದಿಯ ಪ್ರಕಾರ, ಮುಸ್ಲಿಂ ಸಮಾಜವನ್ನು ಕಾಂಗ್ರೆಸ್ ವಿರುದ್ಧ ಎತ್ತಿ ಕಟ್ಟಲು ಕಾರಣವೇ ಈ ಮೂವರು ನಾಯಕರು ಕಾರಣ. ಅವರು ಸಮುದಾಯಕ್ಕೆ ಟಿಕೆಟ್ ಕೇಳುವುದು ತಪ್ಪಲ್ಲ, ಆದರೆ ಪಕ್ಷವೂ ನಿರ್ಧಾರ ಮಾಡಿದ ಕ್ಯಾಂಡಿಡೇಟ್ ಪರವಾಗಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಬೇಕು ಆ ಕೆಲಸವು ಇವರಿಂದ ಆಗಿಲ್ಲ ಅನ್ನುವುದು ಆ ತನಿಖಾ ವರದಿಯಲ್ಲಿ ಇದೆಯಂತೆ. ಅಷ್ಟೇ ಅಲ್ಲ ಇನ್ನೂ ಒಂದು ಗಂಭೀರವಿದೆ. 

    ಇಲ್ಲಿ ಎಸ್ ಡಿ ಪಿ ಐ ದಿಂದ ಅಫ್ಜಲ್ ಕೊಡ್ಲಿಪೇಟೆ ಎನ್ನುವವರು ಅಭ್ಯರ್ಥಿಯಾಗಿದ್ದಾರೆ. ಅವರಿಗೆ ದೊಡ್ಡ ಮೊತ್ತದ ಹಣದ ಸಹಾಯವನ್ನು ಬೆನಾಮೀ ಮೂಲಕ ಈ ಮೂವರು ನಾಯಕರು ಮಾಡಿದ್ದಾರೆ ಎನ್ನುವುದು ಆಂತರಿಕ ತನಿಖೆಯ ವರದಿಯಲ್ಲಿ ಇದೆಯಂತೆ. ಹೇಗಿದ್ದಾಗ ಪಕ್ಷವು ಇಂತವರ ವಿರುದ್ಧ ಕ್ರಮ ತೆಗೆದುಕೊಳ್ಳದೇ ಇರುತ್ತದೆಯೇ? ಸಿದ್ದರಾಮಯ್ಯನವರು ಇಂತಹ ಸಂದರ್ಭದಲ್ಲಿ ತಮ್ಮ ಪರವಾಗಿ ಮಾತನಾಡುತ್ತಿದ್ದಾರೆ ಎಂಬ ಕಾರಣಕ್ಕೆ ಜಮೀರ ಅಹ್ಮದ್ ಖಾನ್ ರಕ್ಷಣೆಗೆ ನಿಲ್ಲಲು ಸಾಧ್ಯವೇ? ಕುತೂಹಲಕರ ವಿಚಾರವಾಗಿ ಮಾರ್ಪಾಡಾಗಿದೆ ಈ ಪ್ರಕರಣ ಏನಾಗುತ್ತದೋ ಕಾದು ನೋಡ್ಬೇಕು.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಅಕ್ರಮ ಗಡಿ ದಾಟಿದವರಿಗೆ ಈಗ ಭಾರತದಲ್ಲಿ ನೋ ಎಂಟ್ರಿ!ಬಾಂಗ್ಲಾ ಗಡಿಯಲ್ಲಿ ಎನ್‌ಆರ್‌ಸಿ ಅಸ್ತ್ರ: ರಾಜಕೀಯಕ್ಕಿಂತ ರಾಷ್ಟ್ರೀಯ ಭದ್ರತೆ ಮುಖ್ಯ
    ದುಬೈ ಕನಸು… ಜೈಲು ವಾಸ್ತವ!ಡ್ರಗ್ ಮಾಫಿಯಾದ ಗುರಿಯೇ ಯುವಕರು..!!ಭವಿಷ್ಯ ಕಳೆದುಕೊಳ್ಳುವ ಮುನ್ನ ಎಚ್ಚರ!
     ಮಗಳ ಗಂಡನೇ …ಅತ್ತೆಯ ಗಂಡ! ಹೌದು…ಅಳಿಯ-ಅತ್ತೆಯ ಪ್ರೇಮಕಥೆ ವೈರಲ್!ಕುಟುಂಬ ಸಂಬಂಧಗಳೇ ತಲೆಕೆಳಗು! ಉತ್ತರ ಪ್ರದೇಶದ ಈ ಮದುವೆ ಹಿಂದಿನ ರಹಸ್ಯ ಏನು?
    ಜಾಗತಿಕ ಸಂಘರ್ಷದ ಮಧ್ಯೆ ಭಾರತ–ಯುಎಇ ಬಿಗ್ ಡೀಲ್! ತಂತ್ರಜ್ಞಾನ, ಇಂಧನ ಮತ್ತು ಭದ್ರತೆಯಲ್ಲಿ ಐತಿಹಾಸಿಕ ಒಗ್ಗಟ್ಟು.
    ಪುತ್ತೂರಿನ ದೇವಸ್ಥಾನ ಪದಾಧಿಕಾರಿಗಳ ವಿರುದ್ಧ FIR ..!
    🚨4 ವರ್ಷಗಳಿಂದ ಪೊಲೀಸರಿಗೆ ತಪ್ಪಿಸಿಕೊಂಡಿದ್ದ 17 ಪ್ರಕರಣಗಳ ಆರೋಪಿಯ ಡ್ರಾಮಾಟಿಕ್ ಬಂಧನ!
    ತಾಯಿಯನ್ನೇ ಮದುವೆಗೆ ಆಹ್ವಾನಿಸದ ಕಾರಣಕ್ಕೆ ಉದ್ಯೋಗ ಕಳೆದುಕೊಂಡ ಯುವಕ…!
    ಬರ್ಗಿ ಅಣೆಕಟ್ಟಿನಲ್ಲಿ ಭೀಕರ ದುರಂತ-ಕರುಳು ಹಿಂಡುವ ದೃಶ್ಯ ಅಮ್ಮ-ಮಗು ಅಪ್ಪಿಕೊಂಡೇ ಜಲಸಮಾದಿ ಸಂತೋಷದ ಪ್ರವಾಸದಿಂದ ಶೋಕದ ಸಾಗರಕ್ಕೆ
    ದರ್ಬೆ ಗಲಾಟೆ: ಸಾಕ್ಷ್ಯಾಧಾರದ ಆಧಾರದಲ್ಲೇ ಕಾನೂನು ಕ್ರಮ – ಎಸ್ಪಿ ಅರುಣ್ ಕೆ
    ಕಾಂಗ್ರೆಸ್‌ಗೆ ದಾವಣಗೆರೆ ಬಿಸಿ ತುಪ್ಪ!..“ಸಮುದಾಯದ ಹೆಸರಿನಲ್ಲಿ ರಾಜಕೀಯ… ಅಥವಾ ರಾಜಕೀಯದ ಹೆಸರಿನಲ್ಲಿ ಸಮುದಾಯ?”
    ಭಾರತದಲ್ಲಿ ಎಚ್‌ಪಿವಿ (HPV) ಲಸಿಕೆ ಕಾರ್ಯಕ್ರಮ ಹೆಣ್ಣೆತ್ತವರು ತಿಳಿದುಕೊಳ್ಳಲೇಬೇಕಾದ ವಿಚಾರ
    ನಾಟಕ ಕಲಾವಿದೆ ಸೌಮ್ಯ ಶೆಟ್ಟಿ ಬಂಧನ
    ವಿಷ ಸೇವನೆ ಸ್ವಯಂ ಆಗಿತ್ತೇ ಅಥವಾ ಪ್ರಚೋದನೆ ಕಾರಣವೇ ….?!
    ಅಂಡಮಾನ್ ಜೈಲಿನ ಕರಾಳ ಕೋಣೆಯಿಂದ ಹೊರಬರಲಿದೆ ಕರ್ನಾಟಕದ 59 ರಕ್ತೇತಿಹಾಸ’ಯಾರೂ ಅರಿಯದ ವೀರರು’ …!
    ಬರದ ಭೀತಿ ಎದುರಿಸುತ್ತಿರುವ ಕರ್ನಾಟಕ ,ಮಳೆ ಇಲ್ಲ… ಬೆಳೆ ಇಲ್ಲ… ಅನ್ನ ಇಲ್ಲ!,ಕೇಂದ್ರಕ್ಕೆ ನೆರವಿಗಾಗಿ ಡಿ ಕೆ ಶಿ ಮನವಿ
    2026 ವಿಧಾನಸಭೆ ಚುನಾವಣೆ – ಮುಖ್ಯ ಮಾಹಿತಿ
    🔥 “Get out of here! — ಸೂಪರ್ women ವಿರುದ್ಧವೇ ಕೇಸ್?!!
    ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ ಡಾ. ಮೋಹನ್ ಆಳ್ವ
    ಸುಳ್ಯ:  ಕರ್ತವ್ಯದಲ್ಲಿದ್ದ ಉಪನ್ಯಾಸಕ ಕುಸಿದು ಬಿದ್ದು ಸಾವು
    ರಾಜ್ಯಮಟ್ಟದಲ್ಲಿ ಸದ್ದು ಮಾಡಿದ ತೆರಿಗೆ ವಂಚನೆ ಪ್ರಕರಣದ ನಂತರವೂ ಅಧಿಕಾರಿಗಳು ಪಾಠ ಕಲಿತಿಲ್ಲವೇ….!?
    ದಾವಣಗೆರೆ ಬೆಚ್ಚಿಬಿದ್ದಿದೆ! 41 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ..
    ಮಂಗಳೂರು ಗ್ರಾಮಾಂತರ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ
    ಆಪಲ್‌ಗೆ ಭಾರತದಲ್ಲಿ ದೊಡ್ಡ ಕಾನೂನು ಶಾಕ್? App Store ನಿಯಮಗಳ ಮೇಲೆ ಆಪಲ್ vs ಭಾರತ CCI ಜಟಾಪಟಿ 
    NEET ಹಂಗಾಮ ನೀಟಾಗಿ ಅಂತ್ಯ ಕಾಣುತ್ತಾ…?!ಮೋದಿಯ ‘ತಡವಾದ ಪ್ರತಿಕ್ರಿಯೆ’-ಕೊನೆಗೂ ವಾಂಗ್ಚುಕ್ ಉಪವಾಸ ಅಂತ್ಯ… ಆದರೆ … ‘ಕಾಕ್ರೋಚ್’ ಹೋರಾಟ ಮುಂದುವರಿಕೆ!ಮುಂದೇನು??
    ತೊಕ್ಕೊಟ್ಟು ವಿನಮ್ರ ಬಾರ್‌ನಲ್ಲಿ ತಲವಾರು ಹಿಡಿದು ದಾಂಧಲೆ!
    ಬೆಳ್ತಂಗಡಿ ಆನೆ ದಾಳಿ, ವ್ಯಕ್ತಿಯ ಬರ್ಬರ ಹತ್ಯೆ
    ಶಾಲೆಗಳ ಸುತ್ತ ಜಂಕ್ ಫುಡ್‌ಗೆ ಬ್ರೇಕ್: ಮಕ್ಕಳ ಆರೋಗ್ಯ ರಕ್ಷಣೆಗೆ FDA ಅಲರ್ಟ್!
    ಡೊನಾಲ್ಡ್ ಟ್ರoಪ್ ಮುಂದೆ ಮಂಡಿಯೂರಿ ಕೂತ ಜಗತ್ತು!
    ಕಾರ್ಕಳದಲ್ಲಿ  ಜಾಗ ಕಿತ್ತುಕೊಳ್ಳಲು ಮಾಡಿದ ಪ್ಲಾನ್, ರಿವರ್ಸಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದೆ
    ಧುರಂಧರ್ 2 ಕ್ರೇಜ್ ಓವರ್‌ಫ್ಲೋ ಕಲೆಕ್ಷನ್‌ನಲ್ಲಿಕರ್ನಾಟಕವೇ ಟಾಪ್… ದಕ್ಷಿಣ ಭಾರತದಲ್ಲಿ 300 ಕೋಟಿ ಕ್ಲಬ್!