📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಸಚಿವ ಜಮೀರ್ ಕಥೆ ಗೋವಿಂದ!!!?

ದಾವಣಗೆರೆ ಬೈ ಎಲೆಕ್ಷನ್ ವಿಚಾರ ನಮಗೆ ಗೊತ್ತೇ ಇದೆ. ಅನವಶ್ಯಕವಾಗಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವಿಚಾರದಲ್ಲಿ ಮೂಗು ತೋರಿಸಿ ಗೊಂದಲವನ್ನು ಉಂಟು ಮಾಡಿರುವಂತಹ ವ್ಯಕ್ತಿ, ಇದೆ ಜಮೀರ್ ಅಹ್ಮದ್ ಖಾನ್. ಈ ಜಮೀರ್ ಅಹಮದ್ ಖಾನ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗ ಅಂತ  ಆಗಾಗ ತೋರಿಸಿಕೊಳ್ಳುತ್ತಾ ಬಂದಂತಹ ವ್ಯಕ್ತಿ. ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಜಮೀರ್ ಅಹ್ಮದ್ ಖಾನ್ ಅವರಿಗೆ  ಪಕ್ಷದಲ್ಲಿ ರಾಜ್ಯಮಟ್ಟದ ಯಾವುದೇ ಜವಾಬ್ದಾರಿಯು ಇಲ್ಲ. ಹಾಗಿದ್ದರೂ ಪಕ್ಷದ ಇತರ ಮುಸ್ಲಿಂ ನಾಯಕರನ್ನು ಓವರ್ ಟೇಕ್ ಮಾಡಿ ಮುಸ್ಲಿಂ ಸಮುದಾಯದ ಪ್ರಷ್ನತೀತ ನಾಯಕ ಎಂಬ ಸ್ಥಾನಕ್ಕೆ ಬಂದು ಕೂರುವ ಪ್ರಯತ್ನಕ್ಕೆ ಕೈ ಹಾಕಿದ್ದ. ಅದರ ಭಾಗವೇ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರಕರಣ.

ಎಸ್ ಇದೀಗ ಸಚಿವ ಸ್ಥಾನಕ್ಕೆ ಸಂಚುಕಾರವನ್ನು ತಂದುಕೊಳ್ಳುತ್ತಿದ್ದಾರೆ ಸಚಿವ ಜಮೀರ್ ಅಹ್ಮದ್ ಖಾನ್. ಗೋವಿಂದಾನಿ ಗೋವಿಂದ ಎಂಬಂತಹ ಪರಿಸ್ಥಿತಿಗೆ ಸಿಲುಕಿಕೊಂಡಿದ್ದಾರೆ ಸಚಿವ ಜಮೀರ್ ಅಹಮದ್ ಖಾನ್. ಸಹಕರಿಸಿದಂತಹ ಎಂಎಲ್ಸಿ ನಸೀರ್ ಅಹ್ಮದ್ ಹಾಗೂ ಅಬ್ದುಲ್ ಜಬ್ಬಾರ್ ಎನ್ನುವವರು ಸಹ ಇದೀಗ ಅಡಗತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು?

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇದೇ ಪ್ರಥಮ ಬಾರಿಗೆ ಸೋಲುವ ಭಯ ಕಾಡುತ್ತಿದೆ. ಅಷ್ಟಕ್ಕೂ ಸೋಲುತ್ತಿರುವವರು ಸಣ್ಣವರೇನಲ್ಲ ಶಾಮನೂರು ಶಿವಶಂಕ್ರಪ್ಪ ಎಂಬ ದಾವಣಗೆರೆಯ ದನಿಯ ಮೊಮ್ಮಗ ಸೋಲಿನ ಅಂಚಿಗೆ ತಲುಪುತ್ತಿದ್ದಾರೆ.

ಈ ಸೋಲು ಕೇವಲ ಶ್ಯಾಮನೂರು ಕುಟುಂಬಕ್ಕೆ ಸಲ್ಲುವಂತದ್ದಲ್ಲ, ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಿನ್ನಡೆಯನ್ನು ಉಂಟುಮಾಡುವಂತಹ ಸೋಲಾಗಲಿದೆ. ಒಂದೊಮ್ಮೆ ಈ ಸೋಲು ಖಚಿತವಾದರೆ ಅದರ ಎಲ್ಲಾಶಯ ಯಾವ ಮುಲಾಜು ಇಲ್ಲದೆ ಜಮೀರ್ ಅಹ್ಮದ್ ಖಾನ್ ಅವರಿಗೆ ಸಲ್ಲುತ್ತದೆ.

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇದೆ. ಸಂದರ್ಭದಲ್ಲಿ ನಡೆಯುವ ಎಲ್ಲಾ ಚುನಾವಣೆಯಲ್ಲೂ ಗೆಲುವು ಆಡಳಿತ ಪಕ್ಷದ ಪರವಾಗಿರಬೇಕು. ಆದರೆ ಯಾವ ಲಕ್ಷಣವು ಕಾಣುತ್ತಿಲ್ಲ ಅದಕ್ಕೆ ಕಾರಣ ಬೇರೇನೂ ಅಲ್ಲ ಕಾಂಗ್ರೆಸ್ ಒಳಗಿನಿಂದಲೇ ಗಣದಂತೆ ಕೆಲಸ ಮಾಡುತ್ತಿರುವವರೇ ಕಾರಣ. ಅಂತವರನ್ನು ಪಕ್ಷವು ಅಥವಾ ಸರ್ಕಾರವೋ ಅತಿ ಎತ್ತರ ಕೈ ಇಟ್ಟುಕೊಂಡ ಕಾರಣ ಸಾಕಷ್ಟು ಡ್ಯಾಮೇಜ್ ಈ ಕ್ಷೇತ್ರದ ಮೇಲಾಗುತ್ತಿದೆ.

ಜಮೀರ್ ಅಹಮದ್ ಖಾನ್ ನಾನೊಬ್ಬ ಮುಸ್ಲಿಂ ಸಮಾಜದ ನಾಯಕನಾಗಬೇಕು ಅಂತಿದ್ದರೆ ಈ ಪಕ್ಷಗಳ ಅವಶ್ಯಕತೆ ಯಾಕೆ ಬೇಕಿತ್ತು? ಓವೈಸಿ ತರನೋ ಅಥವಾ ಮುಸ್ಲಿಂಲೀಗ್ ಪಕ್ಷಗಳ ಜೊತೆಗೆ ಕಾಣಿಸಿಕೊಳ್ಳಬಹುದಿತ್ತು.  ಆದರೆ ಜಮೀರ್ ಅಹಮದ್ ಖಾನ್ ಜೆಡಿಎಸ್ ಹಾಗೂ ಕಾಂಗ್ರೆಸ್ ಜೊತೆಗೆ ಗುರುತಿಸಿಕೊಂಡು ಅದರ ಲಾಭವನ್ನು ಪಡೆದುಕೊಂಡರು. ಇವತ್ತು ಮಿನಿಸ್ಟರ್ ಆಗಿದ್ದಾರೆ ಅಂದರೆ ಅದಕ್ಕೆ ಕಾರಣ ಈ ಎರಡು ಪಕ್ಷ ಕಾರಣ. ಅಂತಹ ಜಮೀರ್ ಅಹ್ಮದ್ ಖಾನ್, ಹಣಕಾಸಿನ ವಿಚಾರದಲ್ಲಿ ಏನೇ ಮಾಡಿರಲಿ ಎಷ್ಟೇ ಮಾಡಿರಲಿ ಅದು ಬೇರೆ ವಿಚಾರ. ಪವರ್ ಹಾಗೂ ರಾಜಕಾರಣದಲ್ಲಿ ಅವರಿಗೆ ಒಂದು ಸ್ಥಾನ ಕೊಟ್ಟಿದ್ದು ಜೆಡಿಎಸ್ ಮತ್ತು ಕಾಂಗ್ರೆಸ್ ಅನ್ನುವುದರಲ್ಲಿ ಎರಡು ಮಾತೇ ಇಲ್ಲ. ಅದೇ ಜಮೀರ್ ಅಹಮದ್ ಖಾನ್ ಈ ಬಾರಿ ಕಾಂಗ್ರೆಸ್ ಪಾಲಿಗೆ ವಿಲನ್ ಆದರ? ಕಾಂಗ್ರೆಸ್ ಪಕ್ಷಕ್ಕೆ ಬ್ಯಾಕ್ ಸ್ಟಾಬ್ ಮಾಡಿದರಾ?

ಈಗ ಬರುತ್ತಿರುವ ಸುದ್ದಿ ಅದನ್ನೇ ಹೇಳುತ್ತಿದೆ ನೋಡಿ. ದಾವಣಗೆರೆ ವಿಧಾನಸಭಾ ಉಪಚುನಾವಣೆಯ ವಿಚಾರದಲ್ಲಿ ಕಾಂಗ್ರೆಸ್ ಕೆಂಡಮಂಡಲವಾಗಿದೆ. ಆಂತರಿಕ ಲೆಕ್ಕಾಚಾರದ ಪ್ರಕಾರ ಗೆಲವು ಕಷ್ಟ ಎಂಬ ವಿಚಾರ ತಿಳಿದು ಬಂದಿದೆ. ಹಾಗಾಗಿ ಪಕ್ಷವು ಅಲ್ಲಿ ನಡೆದ ವಿಚಾರ ಹಾಗೂ ಏನೆಲ್ಲಾ ಇಂಟರ್ನಲ್ ವ್ಯವಹಾರ ನಡೆದಿದೆ ಎಂಬುದರ ಬಗ್ಗೆ ಆಂತರಿಕ ವಾದಂತಹ ತನಿಖೆಯನ್ನು ಮಾಡಿದೆ. ನೇತೃತ್ವವನ್ನು  ಸಲೀಂ ಅಹಮದ್ ಅವರು ವಹಿಸಿದ್ದರು. ಒಟ್ಟಿನಲ್ಲಿ ಏನೆಲ್ಲಾ ಆಯಿತು ಅನ್ನುವುದರ ಸಂಪೂರ್ಣ ವಿವರವನ್ನು ಒಳಗೊಂಡ ವಿಚಾರವನ್ನು ಕಾಂಗ್ರೆಸ್ ಹೈಕಮಾಂಡ್ಗೆ ಉಸ್ತುವಾರಿ ನಾಯಕ ಸುರ್ಜೆವಾಲಾ ಥ್ರೂ ಕಳಿಸಲಾಗಿದೆ. 

ತನಿಕಾ ವರದಿಯ ಆದಾರದ ಮೇಲೆ ಹೈಕಮಾಂಡ್ ಒಂದು ನಿರ್ಧಾರಕ್ಕೆ ಬರಲಿದೆ ಅಷ್ಟಕ್ಕೂ ವರದಿಯಲ್ಲಿ ಏನಿದೆ?

ಆ ಪಕ್ಷದ ಆಂತರಿಕ ವಲಯದಿಂದ ಬಂದಿರುವ ಮಾಹಿತಿಯ ಪ್ರಕಾರ ಆತನಿಕ ವರದಿಯಲ್ಲಿ ದೊಡ್ಡ ಬಾಂಬೆ ಇದೆ. ಆ ವರದಿಯ ಆಧಾರದಲ್ಲಿ ಕ್ರಮವೇನಾರು ಆದರೆ, ಜಮೀರ್ ಅಹ್ಮದ್ ಖಾನ್ ತಮ್ಮ ಸಚಿವ ಸ್ಥಾನವನ್ನು ಕಳೆದುಕೊಳ್ಳುವುದು ಖಚಿತ. ಅಷ್ಟೇ ಅಲ್ಲ ಪಕ್ಷದಿಂದಲೂ ಹೊರ ಹೋಗಬೇಕಾಗುತ್ತದೆ. ಜಮೀರ್ ಅಹ್ಮದ್ ಖಾನ ಅಷ್ಟೇ ಅಲ್ಲ, ಎಂಎಲ್‌ಸಿಗಳಾದ ನಸಿರ್ ಅಹಮದ್ ಹಾಗೂ ಅಬ್ದುಲ್ ಜಬ್ಬಾರ್ ಸಹ ಜಮೀರ್ ಅಹ್ಮದ್ ಖಾನ್ ಮಾತು ಕೇಳಿದ ಕಾರಣದಿಂದಾಗಿ ಕಾಂಗ್ರೆಸ್ ನಿಂದ ಹೊರದಬ್ಬಲ್ಪಡುಬಹುದು ಎನ್ನಲಾಗುತ್ತಿದೆ.

ಆ ವರದಿಯ ಪ್ರಕಾರ, ಮುಸ್ಲಿಂ ಸಮಾಜವನ್ನು ಕಾಂಗ್ರೆಸ್ ವಿರುದ್ಧ ಎತ್ತಿ ಕಟ್ಟಲು ಕಾರಣವೇ ಈ ಮೂವರು ನಾಯಕರು ಕಾರಣ. ಅವರು ಸಮುದಾಯಕ್ಕೆ ಟಿಕೆಟ್ ಕೇಳುವುದು ತಪ್ಪಲ್ಲ, ಆದರೆ ಪಕ್ಷವೂ ನಿರ್ಧಾರ ಮಾಡಿದ ಕ್ಯಾಂಡಿಡೇಟ್ ಪರವಾಗಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಬೇಕು ಆ ಕೆಲಸವು ಇವರಿಂದ ಆಗಿಲ್ಲ ಅನ್ನುವುದು ಆ ತನಿಖಾ ವರದಿಯಲ್ಲಿ ಇದೆಯಂತೆ. ಅಷ್ಟೇ ಅಲ್ಲ ಇನ್ನೂ ಒಂದು ಗಂಭೀರವಿದೆ. 

ಇಲ್ಲಿ ಎಸ್ ಡಿ ಪಿ ಐ ದಿಂದ ಅಫ್ಜಲ್ ಕೊಡ್ಲಿಪೇಟೆ ಎನ್ನುವವರು ಅಭ್ಯರ್ಥಿಯಾಗಿದ್ದಾರೆ. ಅವರಿಗೆ ದೊಡ್ಡ ಮೊತ್ತದ ಹಣದ ಸಹಾಯವನ್ನು ಬೆನಾಮೀ ಮೂಲಕ ಈ ಮೂವರು ನಾಯಕರು ಮಾಡಿದ್ದಾರೆ ಎನ್ನುವುದು ಆಂತರಿಕ ತನಿಖೆಯ ವರದಿಯಲ್ಲಿ ಇದೆಯಂತೆ. ಹೇಗಿದ್ದಾಗ ಪಕ್ಷವು ಇಂತವರ ವಿರುದ್ಧ ಕ್ರಮ ತೆಗೆದುಕೊಳ್ಳದೇ ಇರುತ್ತದೆಯೇ? ಸಿದ್ದರಾಮಯ್ಯನವರು ಇಂತಹ ಸಂದರ್ಭದಲ್ಲಿ ತಮ್ಮ ಪರವಾಗಿ ಮಾತನಾಡುತ್ತಿದ್ದಾರೆ ಎಂಬ ಕಾರಣಕ್ಕೆ ಜಮೀರ ಅಹ್ಮದ್ ಖಾನ್ ರಕ್ಷಣೆಗೆ ನಿಲ್ಲಲು ಸಾಧ್ಯವೇ? ಕುತೂಹಲಕರ ವಿಚಾರವಾಗಿ ಮಾರ್ಪಾಡಾಗಿದೆ ಈ ಪ್ರಕರಣ ಏನಾಗುತ್ತದೋ ಕಾದು ನೋಡ್ಬೇಕು.

COMMENTS

Login with Gmail to comment

ಇನ್ನಷ್ಟು ಸುದ್ದಿ

ಭಾರತದ 9 ರಾಜ್ಯದ 8.18 ಕೋಟಿ ಮತದಾರರನ್ನು ಕೈ ಬಿಡಲಾಗಿದ್ದು ,ಅವರ ಕಥೆ ಏನು?
ಕರ್ನಾಟಕದಲ್ಲಿ ಮಳೆ ಅಲರ್ಟ್! 13 ಜಿಲ್ಲೆಗಳಿಗೆ ಯೆಲ್ಲೋ ವಾರ್ನಿಂಗ್ – ಜನರು ಎಚ್ಚರಿಕೆ ಅಗತ್ಯ
Trump ಮಾತಿಗೆ Iran ಸಂಸತ್ ಸ್ಪೀಕರ್‌ನ ಕಠಿಣ ಸಂದೇಶ ವಿಶ್ವದ ಗಮನ ಸೆಳೆದಿದೆ!
ಎಷ್ಟೇ ಚಾಣಾಕ್ಷತನ ತೋರಿದರೂ, ಡಿಜಿಟಲ್ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.” AI ಸಣ್ಣ ಸುಳಿವು’ → ‘ನಿಖರ ಪತ್ತೆ’ ಜನರ ಭದ್ರತೆಗಾಗಿ ತಂತ್ರಜ್ಞಾನವೇ ಶಕ್ತಿಯುತ ಆಯುಧ ..!
“ಭಾರತೀಯ ಕುಟುಂಬ ಆಸ್ತಿ ವಿವಾದಗಳಲ್ಲಿ ಮಧ್ಯಸ್ಥಿಕೆಯ ಮಹತ್ವವನ್ನು ಮತ್ತೊಮ್ಮೆ ಎತ್ತಿಹಿಡಿದ ಸುಪ್ರೀಂ ಕೋರ್ಟ್”
ದೆಹಲಿಯನ್ನು ನಡುಗಿಸಿದ ಸೈಕೋಪಾತ್ ಘಟನೆಯ ಕ್ರೂರ ಸತ್ಯ…. ಆನ್‌ಲೈನ್ ಬೆಟ್ಟಿಂಗ್ ಮತ್ತು ಆಟಗಳ ಅಡಿಕ್ಟ್ – ಸಾಲ …ಮನೋವೈಕಲ್ಯ ಲಕ್ಷಣ!
ಗಂಜಿಮಠದತ್ತಿರ ಕಣ್ಣಿಗೆ ಖಾರದ ಪುಡಿ ಎರಚಿ ಹಣ ದೋಚಿ ಪರಾರಿಯಾದ ಆರೋಪಿಗಳು ರಸ್ತೆ ಮಧ್ಯೆ ಯೋಜಿತ ದರೋಡೆ …!
ಘರ್ಷಣೆಗಳ ನಡುವೆಯೂ ಜನರ ಮತದ ಹಕ್ಕು ಅಚಲ…ಸಂಕ್ಷಿಪ್ತ ನೋಟ..
ನಾಸಿಕ್‌ನ Tata Consultancy Services ಕಚೇರಿಯಲ್ಲಿ ಗಂಭೀರ ಆರೋಪಗಳ ನಡುವೆ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ — ಸುರಕ್ಷತೆಗೆ ಮೊದಲ ಆದ್ಯತೆ.
ಶಂಕರಾಚಾರ್ಯರ ಹೊಸ ಯೋಜನೆ ದೇಶವನ್ನೇ ಚರ್ಚೆಗೆ ತಳ್ಳಿದ ಕಾರಣ ಏನು?Go-LXಒಂದು ಕ್ಲಿಕ್‌ನಲ್ಲಿ ಹಸು ಮಾರಾಟ…
ED ₹2,178 ಕೋಟಿ ಆಸ್ತಿ ಜಪ್ತಿ ನಿರವ್ ಮೋದಿ–ವಿಜಯ್ ಮಲ್ಯ ಸೇರಿ 21 ಜನರ ಆರ್ಥಿಕ ಅಪರಾಧಿಗಳ ವಿರುದ್ಧ ದೊಡ್ಡ ಮಟ್ಟದ ಕ್ರಮ
ಗ್ಯಾಸ್ ಅಭಾವ ಮತ್ತು ಬೆಲೆ ಏರಿಕೆ, ಸುಳ್ಳು ಎನ್ನುತ್ತಿದೆ-HPCL
ಬ್ರಹ್ಮಾವರ, ಮಂದಾರ್ತಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಹೇಳೋರು ಕೇಳೋರು ಯಾರು ಇಲ್ವಾ?
ಬೃಹತ್ ಅಭಿಯಾನ….5.51 ಟನ್ ವಸ್ತುಗಳು..!5000ಕ್ಕೂ ಹೆಚ್ಚು ದೇವರ ಫೋಟೋಗಳು
ಒಂದು ತಪ್ಪು ಹೆಜ್ಜೆ…25 ಅಡಿ ಬಾವಿಗೆ ಬಿದ್ದ ಆನೆ …ನೋಡಿ ಈ ಸ್ಮಾರ್ಟ್ ಆಪರೇಷನ್!
ರೇಪ್ ಆರೋಪಿಗೆ ಹೂಮಳೆ, ಹೂವಿನಹಾರ,ಘೋಷಣೆ, ರಾಜಕೀಯ ರೀತಿ ರೋಡ್ ಶೋ! ಉತ್ತರ ಪ್ರದೇಶದ ವೈರಲ್ ವಿಡಿಯೋಗೆ ದೇಶಾದ್ಯಂತ ಆಕ್ರೋಶ
ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಸಿಪಿಐಎಂ ರಣಕಹಳೆ!”
ಹಾರ್ಮುಜ್‌ನಲ್ಲಿ ಹಡಗು ಸಂಚಾರ ಹೆಚ್ಚಳ—ಇಂಧನ ಪೂರೈಕೆಗೆ ದೊಡ್ಡ ಮುನ್ನಡೆ 🚢
ಮಂಗಳೂರು ದಸರಾ ಮೆರವಣಿಗೆಗೆ ವಿದ್ಯುತ್ ತಂತಿಗಳ ಸಮಸ್ಯೆಗೆ ಗುಡ್‌ಬೈ!
ವಿವಾಹಿತ ದಂಪತಿಗಳಿಗೆ ಜಂಟಿ ITR ವ್ಯವಸ್ಥೆ ತರಲು- ಸಂಸತ್ತಿನಲ್ಲಿ Raghav Chadha ಆಗ್ರಹ.
ತಸ್ಲಿಮಳ ಹಣೆಗೆ ಸಿಂಧೂರವಿಟ್ಟ ಕೇಶವ, ಬುರ್ಖಾ ತೆಗೆದಿಟ್ಟ ತಸ್ಲೀಮಾ
ಮಂಗಳೂರು ಕಮಿಷನರ್ ವಿರುದ್ಧ ಎಸ್ಪಿ ಕಾಶಿನಾಥ್ ದೂರು ಕೊಡುತ್ತಿರುವುದು ಯಾಕೆ?
ಬ್ರೇಕಿಂಗ್ ನ್ಯೂಸ್
ಚುನಾವಣಾ ಆಯೋಗ ಸರ್ವಾಧಿಕಾರಿಯಾಗುತ್ತಿದೆ ಎಂಬ ಅನುಮಾನದ ಸುತ್ತ….
ಕನಕಪುರ ಬಂಡೆ ಬಿಜೆಪಿಗೆ ಎಂಬ ಬೋಗಸ್ ಸುದ್ದಿ
ಜನಗಣತಿ 2026–27 – Self Enumeration ಮುಗಿದು ಈಗ ಮನೆ ಮನೆ ಭೇಟಿ ಹಂತ ಆರಂಭ!ನಮ್ಮ ಮಾಹಿತಿ = ನಮ್ಮ ದೇಶದ ಬೆಳವಣಿಗೆ…
“ಧುರಂಧರ್” ನಟ ರಣವೀರ್ ಸಿಂಗ್‌ ವಿರುದ್ಧ ಇಡೀ ಬಾಲಿವುಡ್ ಒಕ್ಕೂಟವೇ ತಿರುಗಿಬಿದ್ದಿದ್ದೇಕೆ? shocking ₹45 ಕೋಟಿ ವಿವಾದದ ಅಸಲಿ ಕಥೆ ಇಲ್ಲಿದೆ!
ಹೈಕೋರ್ಟ್ ತೀರ್ಪಿನಿಂದ ದಕ್ಷಿಣ ಕನ್ನಡ ಇ-ರಿಕ್ಷಾ ಚಾಲಕರಿಗೆ favour
ಶಿಕ್ಷಣ ಸುಧಾರಣೆಗೆ ರಾಜ್ಯ ಸರ್ಕಾರದ ಭರ್ಜರಿ ಪ್ಲಾನ್ ಬಹಿರಂಗ!
ಏರ್ ಇಂಡಿಯಾ ವಿಮಾನ ಸೇವೆ ಸ್ಥಗಿತ…40,000ಕ್ಕೂ ಹೆಚ್ಚು ಟೆಲ್ ಅವೀವ್‌ ಭಾರತೀಯರ ಪ್ರಯಾಣ ಅತಂತ್ರ…!