📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ದೇವಳದ ಗೋಲ್ಮಾಲ್ ತಡೆಗೆ ಉಪ-ಮುಖ್ಯಮಂತ್ರಿ ಬುಲಾವ್!

ಕಾರ್ಕಳ: ಪ್ರತಿಷ್ಠಿತ ಮಾರಿಯಮ್ಮ ದೇವಳದ ತಕರಾರುಗಳ ಬಗೆಗಿನ ಮಾತುಕತೆಗೆಂದು ಉಪ-ಮುಖ್ಯಮಂತ್ರಿಗಳ ಕಛೇರಿಯಿಂದ ಕಾರ್ಕಳ ಸಾಮಾಜಿಕ ಕಾರ್ಯಕರ್ತರ ತಂಡಕ್ಕೆ ಬುಲಾವ್ ಬಂದಿದೆ. ಇಲ್ಲಿಯ ಹತ್ತು-ಹಲವು ಗೋಲ್ಮಾಲ್‌ಗಳನ್ನು ದಾಖಲೆ ಸಹಿತ ಜನಜ್ಜಾಹೀರು ಮಾಡಿದ್ದಲ್ಲದೆ, ಮಾನ್ಯ ನ್ಯಾಯಾಲಯಗಳಿಂದ ಹಾಗೂ ಹಿರಿಯ ಅಧಿಕಾರಿಗಳಿಂದ ಸೂಕ್ತ ತನಿಖೆಗೆ ಆದೇಶವಾಗುತ್ತಿದ್ದಂತೆ, ದೇವಳದಲ್ಲಾಗುತ್ತಿರುವ ಗೋಲ್ಮಾಲ್‌ಗಳ ಬಗ್ಗೆ ಮಾಹಿತಿ ಪಡೆದಿರುವ ಡಿ.ಕೆ.ಶಿವಕುಮಾರ್ ಪ್ರಕರಣದ ಸಂಪೂರ್ಣ ಮಾಹಿತಿ ಪಡೆಯಲು ಬೆಂಗಳೂರು ಕಛೇರಿಗೆ ವಾರಂತ್ಯದಲ್ಲಿ ಬರುವಂತೆ ತಿಳಿಸಿದ್ದಾರೆ.
ಜಗತ್ಪ್ರಸಿದ್ಧ ಮಾರಿಯಮ್ಮ ದೇವಳದ ಕಾಣಿಕೆ ಡಬ್ಬಿಯ ಲೆಕ್ಕಾಚಾರದ ಗೋಲ್ಮಾಲ್‌ಗಳಿಂದ ಹಿಡಿದು, ಜೀರ್ಣೋದ್ದಾರ ಸಮಯ ಬ್ಯಾಂಕ್ ಖಾತೆಗಳನ್ನು ರಚಿಸಿ ಗೋಲ್ಮಾಲ್‌ಗಳ ನಡೆಸಿರುವ ಹಾಗೇ ದೇವರ ಹರಕೆಗೊಪ್ಪಿಸಿದ ಒಡವೆಗಳು, ಹಣಕಾಸಿನ ಅವ್ಯವಹಾರ, ಜಾಗದ ತಕರಾರುಗಳು, ಪ್ರಾಂಗಣದಲ್ಲಿಯ ಅಂಗಡಿ ಮುಂಗಟ್ಟುಗಳ ವಿಚಾರ, ಅರ್ಚಕರ ಸಮಸ್ಯೆ, ಸ್ವಘೋಷಿತ ಆಡಳಿತ ಸಮಿತಿ ಮೊದಲಾಗಿ ಪ್ರತಿಯೊಂದು ವಿಚಾರಗಳನ್ನು ತೆಗೆದರೂ ಇಲ್ಲಿ ಗೋಲ್ಮಾಲ್‌ಗಳೇ ನಡೆಯುತ್ತಿದ್ದು ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರು ದಾಖಲೆ ಸಮೇತ ರುಜುವಾತು ಪಡಿಸಿದ್ದಾರೆ. ಹಾಗೇ ಮಾಧ್ಯಮಗಳು ಬೆಳಕು ಚೆಲ್ಲ್ಲಿವೆ. ಒಂದಷ್ಟು ನ್ಯಾಯಾಲಯಗಳು ತಪರಾಕಿ ನೀಡಿವೆ. ಹಿರಿಯ ಅಧಿಕಾರಿ ವರ್ಗ ಸೂಕ್ತ ಕಾನೂನು ಕ್ರಮಕ್ಕೆ ಆದೇಶಿಸಿವೆ.
ಇವೆಲ್ಲವನ್ನು ಗಮನಿಸಿದ ರಾಜ್ಯದ ಉಪ-ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ದೇವಸ್ಥಾನಗಳಲ್ಲೂ ಈ ಮಟ್ಟದ ಅವ್ಯವಹಾರಗಳ ಬಗ್ಗೆ ಕೇಳಿ ಚಕಿತಗೊಂಡಿದ್ದಲ್ಲದೆ, ಎಲ್ಲಾ ವಿಚಾರಗಳನ್ನು ತಿಳಿದುಕೊಂಡು, ಸರಿಯಾದ ಕ್ರಮ ಜರುಗಿಸುವರೇ ದಾಖಲೆಗಳೊಂದಿಗೆ ತಮ್ಮ ಕಛೇರಿಗೆ ಬರುವಂತೆ ಇಲ್ಲಿಯ ಸಾಮಾಜಿಕ ಕಾರ್ಯಕರ್ತರ ತಂಡಕ್ಕೆ ಆಹ್ವಾನ ನೀಡಿದ್ದಾರೆ.
ಉಪ-ಮುಖ್ಯಮಂತ್ರಿಗಳ ಕಾರ್ಯದರ್ಶಿ ವಾರದ ಹಿಂದೆಯೇ ಈ ಬಗ್ಗೆ ಸಾ. ಕಾರ್ಯಕರ್ತರ ತಂಡಕ್ಕೆ ಬೆಂಗಳೂರು ಕಛೇರಿಗೆ ಆಗಮಿಸುವಂತೆ ತಿಳಿಸಿದ್ದರು. ಅದೇ ಸಮಯ ಉಚ್ಚನ್ಯಾಯಾಲಯದ ತೀರ್ಪೊಂದನ್ನು ಕಾಯುತ್ತಿದ್ದ ತಂಡ ವಾರಾಂತ್ಯದವರೆಗೆ ಸಮಯ ಕೇಳಿದ್ದು, ಆ ಆದೇಶದೊಂದಿಗೆ ಬರುವಂತೆ ತಿಳಿಸಲಾಗಿದೆ.
ಕೂತರು-ನಿಂತರು ತಕರಾರು ನಡೆಸುತ್ತಿರುವ, ಹಾಗೇ ಎಲ್ಲೆಂದರಲ್ಲಿ ಗೋಲ್ಮಾಲ್ ಮಾಡುತ್ತಿರೋ ಆಡಳಿತ ಮಂಡಳಿಯ ಸಂಪೂರ್ಣ ಮಾಹಿತಿ ಮತ್ತು ದಾಖಲೆಗಳು ಕಟ್ಟ-ಕಡೆಗೂ ಸರಕಾರದ ಗಮನಕ್ಕೆ ಬಂದಿದೆ ಎಂದಾಯಿತು. ಸಾಮಾಜಿಕ ಕಾರ್ಯಕರ್ತರ ಅವಿರತ ಶ್ರಮಕ್ಕೆ ಕೊನೆಗೂ ಪರಿಹಾರ ದೊರಕುವ ಎಲ್ಲಾ ಲಕ್ಷಣಗಳು ಕಂಡುಬರುತ್ತದೆ. ಒಟ್ಟಿಗೆ ಸ್ವಘೋಷಿತ ಆಡಳಿತಗಾರರ ಅಧಿಕಾರದ ದರ್ಪ, ದುರಂಕಾರ ಮತ್ತು ಆಟಾಟೋಪಗಳಿಗೊಂದು ತಾರ್ಕಿಕ ಅಂತ್ಯ ಹಾಡುವ ಕಾಲ ಒದಗಿ ಬಂದAತಾಗಿದೆ.
ದಿನ ಬೆಳಗಾದರೆ ಪೂಜೆ-ಪುರಸ್ಕಾರಗಳೆಂಬ, ಧಾರ್ಮಿಕ ವಿಚಾರಗಳಲ್ಲಿ ಅವಿರತ ಭಕ್ತಿ-ಭಾವನೆಗಳ ಹೊಂದಿರುವ ಡಿ.ಕೆ.ಶಿವಕುಮಾರವರಿಗೆ ಈ ಜಗತ್ಪ್ರಿಸಿದ್ಧ ಮಾರಿಯಮ್ಮ ದೇಗುಲದ ಅನಾಚಾರಗಳು ಹಾಗೂ ಗೋಲಮಾಲ್‌ಗಳ ವಿಚಾರ ಗಮನಕ್ಕೆ ಬಂದಿದ್ದು ಒಳ್ಳೆಯದೇ ಆಯಿತು. ಇಲ್ಲಿಯ ಪೂರ್ತಿ ಅವ್ಯವಹಾರಗಳನ್ನು ತಿಳಿದರೆ ಅವರೇ ಸ್ವಯಂ ಪ್ರೇರಿತರಾಗಿ ಇದಕ್ಕೊಂದು ಅಂತ್ಯ ಹಾಡಲಿದ್ದಾರೆ ಅಂತೆನಿಸುತ್ತದೆ. ಧಾರ್ಮಿಕಥೆಯನ್ನು ತನ್ನ ಹೃದಯದಿಂದ ಪೂಜಿಸುವ ಡಿ.ಕೆ.ಶಿ.ಯವರು ಇಂತಹ ಪ್ರತಿಷ್ಠಿತ ದೇವಳವೊಂದನ್ನು ಈ ಮಟ್ಟಕ್ಕೆ ಲಗಾಡಿ ತೆಗೆಯಲು ಹೊರಟವರಿಗೊಂದು ಸರಿಯಾದ ಬುದ್ದಿ ಕಲಿಸ ಹೊರಟಂತಿದೆ. ಅದಕ್ಕಾಗಿಯೇ ಪೂರ್ತಿ ವಿವರಗಳು, ಅದಕ್ಕೆ ಬೇಕಾದ ದಾಖಲೆಗಳನ್ನು ತರುವಂತೆ ತಿಳಿಸಿದ್ದಾರೆ.
ಅಂತೂ, ಈ ಬಾರಿ ಜಗದೊಡತಿ ಮಾರಿಯಮ್ಮನಿಗೊಂದು ಶಾಪ ವಿಮೋಚನೆಯಾಗೋ ಎಲ್ಲಾ ಲಕ್ಷಣಗಳು ಕಂಡು ಬಂದಿದೆ. ಕಡೆಗೂ ಇಲ್ಲಿಯ ಅನಾಚಾರಗಳು ಸರಕಾರದ ಗಮನಕ್ಕೆ ಬಂದಿದ್ದು, ಅದಕ್ಕೊಂದು ತÁರ್ಕಿಕ ಅಂತ್ಯ ಹಾಡಲು ಉಪ-ಮಂತ್ರಿಗಳು, ಅವಿರತ ಶ್ರಮ ಪಟ್ಟಿರುವ ಕಾರ್ಯಕರ್ತರ ತಂಡದಿAದ ದೂರು ದುಮ್ಮಾನಗಳ ಕೇಳಿ ಇಲ್ಲೊಂದು ಶಾಶ್ವತ ಪರಿಹಾರ ಕಲ್ಪಿಸಲಿದ್ದಾರೆ ಡಿಕೆಶಿ ಎಂಬ ಆಶಾಭಾವನೆಯಲ್ಲಿದ್ದಾರೆ ಕಾರ್ಕಳದ ಜನತೆ. ಅವÀರ ಅಶೋತ್ತರಗಳು ಪೂರೈಸಲಿ ಎಂಬುದೇ ನಮ್ಮೆಲ್ಲರ ಅಭಿಪ್ರಾಯ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಕಾಂಗೋದಲ್ಲಿ ಎಬೋಲಾ ಅಟ್ಟಹಾಸ:ಜಗತ್ತಿಗೆ ಮತ್ತೆ ಸಾಂಕ್ರಾಮಿಕ ಭೀತಿಯ ಗಂಟೆ..!
ಕಾರ್ಕಳದಲ್ಲಿ  ಜಾಗ ಕಿತ್ತುಕೊಳ್ಳಲು ಮಾಡಿದ ಪ್ಲಾನ್, ರಿವರ್ಸಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದೆ
“ಬಾಂಬ್‌ಗಿಂತ ಅಪಾಯಕಾರಿ ಅಹಂಕಾರ …! ಜಗತ್ತೇ ಕಾಯುತ್ತಿದೆ… ಮುಂದೇನು?”
ಶಿಕ್ಷಣ ಸುಧಾರಣೆಗೆ ರಾಜ್ಯ ಸರ್ಕಾರದ ಭರ್ಜರಿ ಪ್ಲಾನ್ ಬಹಿರಂಗ!
ಟ್ರಂಪ್ ಮೇಲೆ ದಾಳಿ ಯತ್ನ -ಗನ್ ಸದ್ದು ಮತ್ತೆ ವೈಟ್ ಹೌಸ್ ರಾಜಕೀಯವನ್ನ ನಡುಗಿಸಿದೆ!ಭದ್ರತಾ ಪ್ರಶ್ನೆ!
ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಎತ್ತುಗಳನ್ನು ವಧೆಗೆ….!
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಮಾತ್ರ (ಅ)ವ್ಯವಸ್ಥೆ ಎಚ್ಚರಗೊಳ್ಳಬೇಕೇ? ಯಾರು ಹೊಣೆ? ಏನು ಕ್ರಮ?
ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯ ಬಂಧನ
ವೈರಲ್ ವೀಡಿಯೊ ….ನಗು ಆರೋಗ್ಯಕ್ಕೆ ಒಳ್ಳೆಯದು, ಆದ್ರೆ ಹೆಣ್ಣುಮಗುವಿನ ಹೆಣದ ಮುಂದೆ ನಕ್ಕರೆ.. ಏನಂತಾರೆ?ತಮಿಳುನಾಡಿನ ಜನ ಕಣ್ಣೀರಲ್ಲಿರುವಾಗ ಇವರಿಗೆ ಜೋಕ್ಸ್‌ ನೆನಪಾಯ್ತಾ? ಏನದು ಅಂತ ಜೋಕ್ಸ್ …
ಇಂದು ಮಾಜಿ ಸಚಿವರಿಂದ ಸೌಹಾರ್ದ ಇಫ್ತಾರ್ ಕೂಟ 
ದಕ್ಷಿಣ ಕನ್ನಡದ 14 ವರ್ಷದ ಎಲ್ಲ ಬಾಲಕಿಯರು ಉಚಿತ HPV ಲಸಿಕೆ ಹಾಕಿಸಿಕೊಳ್ಳಲು ಸಂಸದರ ಕರೆ
ಮುಳುಗುತ್ತಿರುವ ಕಾಂಗ್ರೆಸ್ಸಿಗೆ ಇನ್ನೂ ಬುದ್ಧಿ ಬಂದಂತಿಲ್ಲ… ಡಿಜೆಪಿ ರಾಮಚಂದ್ರರಾವ್  ಅಮಾನತ್ ಆದೇಶ ಹಿಂಪಡೆದ  ಸರ್ಕಾರ
ಮಂಗಳೂರಿಗರಿಗೆ ಎಚ್ಚರಿಕೆ: ನೀರನ್ನು ಜಾಣ್ಮೆಯಿಂದ ಬಳಸಿ –ಮಾರ್ಚ್ ನಲ್ಲೇ ರೇಷನಿಂಗ್ ಮಾಡುವ ಪರಿಸ್ಥಿತಿ ಇದೆ…
ಥಾರ್ ಕಾರ್ ನಲ್ಲಿ ಬಂದು ದೇವಸ್ಥಾನದಲ್ಲಿ ವಿಕೃತಿ ಮೆರೆದ ಕಿಡಿಗೇಡಿ!
ರೀಲ್ಸ್ ಮಾಡುವ ಕನಸು… ಕ್ಷಣದಲ್ಲೇ ದುರ್ಘಟನೆ,  ಜೀವವನ್ನೇ ಕಳೆದುಕೊಂಡ ಬಾಲಕ.
ನೀರು ಪೋಲು ಬೇಡ….ಈಗಲೇ ಎಚ್ಚೆತ್ತುಕೊಳ್ಳಿ!ಇಂದು ನಿರ್ಲಕ್ಷ್ಯ,ನಾಳೆ ಜಲ ಸಂಕಷ್ಟದ ಎಚ್ಚರಿಕೆ…!
🔴 ಪೊಲೀಸರ ಮೇಲಿನ ಹಿಡಿತ ಕಠಿಣ: PEBಗೆ ಹೆಚ್ಚಿದ ಅಧಿಕಾರ — ರಾಜ್ಯದ ದೊಡ್ಡ ಆಡಳಿತಾತ್ಮಕ ತೀರ್ಮಾನ
ಹೆಣ್ಣು ಎಂಬ ಕನಿಕರ, ಸಿಗದ ಹಾಗೆ ಮಾಡಿದ ಮಾಯಾಂಗನೇ…
ಅಪ್ರಾಪ್ತನ ಕ್ರೌರ್ಯಕ್ಕೆ ಬಳ್ಳಾರಿ ವಸತಿ ಶಾಲೆಯ ದೌರ್ಜನ್ಯವೇ ಸಾಕ್ಷಿ… ಈ ಕ್ರೌರ್ಯದ ಹಿಂದೆ ಮನೋರೋಗ ಅಡಗಿದೆಯಾ? 
ಪಿಸ್ತೂಲ್ ತೋರಿಸಿ ಬೆದರಿಸಿ ಪರಾರಿಯಾಗಿದ್ದ ಯುವಕ ಬಂಧನ
ಕೊಲೆ ಆರೋಪಿಯ ದೂರುದಾರನ ವಿಷ ಸೇವನೆಯ ಬಗ್ಗೆ  ಸ್ಪಷ್ಟನೆ
ತಿಮರೋಡಿ ಸೇರಿ ನಾಲ್ವರಿಗೆ ಕೇಸ್…
ಟೀಕೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಸೌಂದರ್ಯ – ಖಾದರ್
🔥 ಮಧ್ಯಪ್ರಾಚ್ಯ ಯುದ್ಧ: 17ನೇ ದಿನಕ್ಕೆ- ದುಬೈ ವಿಮಾನ ನಿಲ್ದಾಣದ ಬಳಿ ಬೆಂಕಿ!
ರಸ್ತೆಯ ವಿಚಾರಕ್ಕೆ ನೆರೆಹೊರೆಯರ ನಡುವೆ ಬಾರಿ ಗಲಾಟೆ !
ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿಗೆ  ಪ್ರತಿದಾಳಿ ಯುಎಇ, ಬಹ್ರೇನ್, ಸೌದಿಯಲ್ಲಿ ಅಮೆರಿಕದ ನೆಲೆಗಳಿಗೆ ನಡುಕ.
ಜೈಲಿನೊಳಗೆ ಮೊಬೈಲ್ ಮಾಫಿಯಾ: ಖತರ್ನಾಕ್ ಐಡಿಯಾ..!
ಆಯುಷ್ ಎಚ್ಚರಿಕೆ ಬಳಿಕ ಅಶ್ವಗಂಧ ನಿಯಂತ್ರಣ ಕ್ರಮಕ್ಕೆ ತಡೆ: ಹೈಕೋರ್ಟ್ ಮಹತ್ವದ ಆದೇಶ
ರಾಜಕೀಯದಲ್ಲಿ ಅನುಭವ ಎಷ್ಟು ಮುಖ್ಯ?…  ತಮಿಳುನಾಡು ರಾಜಕಾರಣ ತೋರಿಸುತ್ತಿದೆ ನೋಡಿ
“ಪ್ರಜಾಪ್ರಭುತ್ವದ ಮೇಲೆ ದಾಳಿ”ಸುಪ್ರೀಂ ಕೋರ್ಟ್ ಕಿಡಿ: ಇದು ಪ್ರತಿಭಟನೆ ಅಲ್ಲ, ಸಂಚು!”