📍 Karavali Maruta
  • LOGIN
  • BREAKING
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ ದಯಾಮರಣ ಕೇಳಿದ್ದ ತುಮಕೂರು ರಾಬಿಯಾ ಇನ್ನಿಲ್ಲ …!ಪರಮೇಶ್ವರ್ ಮುಂದೆ ಕಣ್ಣೀರಿಟ್ಟಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ವಿಷಸೇವಿಸಿ ಕೊನೆಯುಸಿರು…‘ಮನೆ’ ಸಿಕ್ಕರೂ ಬದುಕು ಉಳಿಯಲಿಲ್ಲ! ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್! ಮಹಿಳಾ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ ವಾಜಪೇಯಿ ಸರ್ಕಾರದ  ಕನಸಿನ ಯೋಜನೆ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಸಹಿ ಸಂಗ್ರಹ ಅಭಿಯಾನ
    ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ದೇವಳದ ಗೋಲ್ಮಾಲ್ ತಡೆಗೆ ಉಪ-ಮುಖ್ಯಮಂತ್ರಿ ಬುಲಾವ್!

    ಕಾರ್ಕಳ: ಪ್ರತಿಷ್ಠಿತ ಮಾರಿಯಮ್ಮ ದೇವಳದ ತಕರಾರುಗಳ ಬಗೆಗಿನ ಮಾತುಕತೆಗೆಂದು ಉಪ-ಮುಖ್ಯಮಂತ್ರಿಗಳ ಕಛೇರಿಯಿಂದ ಕಾರ್ಕಳ ಸಾಮಾಜಿಕ ಕಾರ್ಯಕರ್ತರ ತಂಡಕ್ಕೆ ಬುಲಾವ್ ಬಂದಿದೆ. ಇಲ್ಲಿಯ ಹತ್ತು-ಹಲವು ಗೋಲ್ಮಾಲ್‌ಗಳನ್ನು ದಾಖಲೆ ಸಹಿತ ಜನಜ್ಜಾಹೀರು ಮಾಡಿದ್ದಲ್ಲದೆ, ಮಾನ್ಯ ನ್ಯಾಯಾಲಯಗಳಿಂದ ಹಾಗೂ ಹಿರಿಯ ಅಧಿಕಾರಿಗಳಿಂದ ಸೂಕ್ತ ತನಿಖೆಗೆ ಆದೇಶವಾಗುತ್ತಿದ್ದಂತೆ, ದೇವಳದಲ್ಲಾಗುತ್ತಿರುವ ಗೋಲ್ಮಾಲ್‌ಗಳ ಬಗ್ಗೆ ಮಾಹಿತಿ ಪಡೆದಿರುವ ಡಿ.ಕೆ.ಶಿವಕುಮಾರ್ ಪ್ರಕರಣದ ಸಂಪೂರ್ಣ ಮಾಹಿತಿ ಪಡೆಯಲು ಬೆಂಗಳೂರು ಕಛೇರಿಗೆ ವಾರಂತ್ಯದಲ್ಲಿ ಬರುವಂತೆ ತಿಳಿಸಿದ್ದಾರೆ.
    ಜಗತ್ಪ್ರಸಿದ್ಧ ಮಾರಿಯಮ್ಮ ದೇವಳದ ಕಾಣಿಕೆ ಡಬ್ಬಿಯ ಲೆಕ್ಕಾಚಾರದ ಗೋಲ್ಮಾಲ್‌ಗಳಿಂದ ಹಿಡಿದು, ಜೀರ್ಣೋದ್ದಾರ ಸಮಯ ಬ್ಯಾಂಕ್ ಖಾತೆಗಳನ್ನು ರಚಿಸಿ ಗೋಲ್ಮಾಲ್‌ಗಳ ನಡೆಸಿರುವ ಹಾಗೇ ದೇವರ ಹರಕೆಗೊಪ್ಪಿಸಿದ ಒಡವೆಗಳು, ಹಣಕಾಸಿನ ಅವ್ಯವಹಾರ, ಜಾಗದ ತಕರಾರುಗಳು, ಪ್ರಾಂಗಣದಲ್ಲಿಯ ಅಂಗಡಿ ಮುಂಗಟ್ಟುಗಳ ವಿಚಾರ, ಅರ್ಚಕರ ಸಮಸ್ಯೆ, ಸ್ವಘೋಷಿತ ಆಡಳಿತ ಸಮಿತಿ ಮೊದಲಾಗಿ ಪ್ರತಿಯೊಂದು ವಿಚಾರಗಳನ್ನು ತೆಗೆದರೂ ಇಲ್ಲಿ ಗೋಲ್ಮಾಲ್‌ಗಳೇ ನಡೆಯುತ್ತಿದ್ದು ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರು ದಾಖಲೆ ಸಮೇತ ರುಜುವಾತು ಪಡಿಸಿದ್ದಾರೆ. ಹಾಗೇ ಮಾಧ್ಯಮಗಳು ಬೆಳಕು ಚೆಲ್ಲ್ಲಿವೆ. ಒಂದಷ್ಟು ನ್ಯಾಯಾಲಯಗಳು ತಪರಾಕಿ ನೀಡಿವೆ. ಹಿರಿಯ ಅಧಿಕಾರಿ ವರ್ಗ ಸೂಕ್ತ ಕಾನೂನು ಕ್ರಮಕ್ಕೆ ಆದೇಶಿಸಿವೆ.
    ಇವೆಲ್ಲವನ್ನು ಗಮನಿಸಿದ ರಾಜ್ಯದ ಉಪ-ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ದೇವಸ್ಥಾನಗಳಲ್ಲೂ ಈ ಮಟ್ಟದ ಅವ್ಯವಹಾರಗಳ ಬಗ್ಗೆ ಕೇಳಿ ಚಕಿತಗೊಂಡಿದ್ದಲ್ಲದೆ, ಎಲ್ಲಾ ವಿಚಾರಗಳನ್ನು ತಿಳಿದುಕೊಂಡು, ಸರಿಯಾದ ಕ್ರಮ ಜರುಗಿಸುವರೇ ದಾಖಲೆಗಳೊಂದಿಗೆ ತಮ್ಮ ಕಛೇರಿಗೆ ಬರುವಂತೆ ಇಲ್ಲಿಯ ಸಾಮಾಜಿಕ ಕಾರ್ಯಕರ್ತರ ತಂಡಕ್ಕೆ ಆಹ್ವಾನ ನೀಡಿದ್ದಾರೆ.
    ಉಪ-ಮುಖ್ಯಮಂತ್ರಿಗಳ ಕಾರ್ಯದರ್ಶಿ ವಾರದ ಹಿಂದೆಯೇ ಈ ಬಗ್ಗೆ ಸಾ. ಕಾರ್ಯಕರ್ತರ ತಂಡಕ್ಕೆ ಬೆಂಗಳೂರು ಕಛೇರಿಗೆ ಆಗಮಿಸುವಂತೆ ತಿಳಿಸಿದ್ದರು. ಅದೇ ಸಮಯ ಉಚ್ಚನ್ಯಾಯಾಲಯದ ತೀರ್ಪೊಂದನ್ನು ಕಾಯುತ್ತಿದ್ದ ತಂಡ ವಾರಾಂತ್ಯದವರೆಗೆ ಸಮಯ ಕೇಳಿದ್ದು, ಆ ಆದೇಶದೊಂದಿಗೆ ಬರುವಂತೆ ತಿಳಿಸಲಾಗಿದೆ.
    ಕೂತರು-ನಿಂತರು ತಕರಾರು ನಡೆಸುತ್ತಿರುವ, ಹಾಗೇ ಎಲ್ಲೆಂದರಲ್ಲಿ ಗೋಲ್ಮಾಲ್ ಮಾಡುತ್ತಿರೋ ಆಡಳಿತ ಮಂಡಳಿಯ ಸಂಪೂರ್ಣ ಮಾಹಿತಿ ಮತ್ತು ದಾಖಲೆಗಳು ಕಟ್ಟ-ಕಡೆಗೂ ಸರಕಾರದ ಗಮನಕ್ಕೆ ಬಂದಿದೆ ಎಂದಾಯಿತು. ಸಾಮಾಜಿಕ ಕಾರ್ಯಕರ್ತರ ಅವಿರತ ಶ್ರಮಕ್ಕೆ ಕೊನೆಗೂ ಪರಿಹಾರ ದೊರಕುವ ಎಲ್ಲಾ ಲಕ್ಷಣಗಳು ಕಂಡುಬರುತ್ತದೆ. ಒಟ್ಟಿಗೆ ಸ್ವಘೋಷಿತ ಆಡಳಿತಗಾರರ ಅಧಿಕಾರದ ದರ್ಪ, ದುರಂಕಾರ ಮತ್ತು ಆಟಾಟೋಪಗಳಿಗೊಂದು ತಾರ್ಕಿಕ ಅಂತ್ಯ ಹಾಡುವ ಕಾಲ ಒದಗಿ ಬಂದAತಾಗಿದೆ.
    ದಿನ ಬೆಳಗಾದರೆ ಪೂಜೆ-ಪುರಸ್ಕಾರಗಳೆಂಬ, ಧಾರ್ಮಿಕ ವಿಚಾರಗಳಲ್ಲಿ ಅವಿರತ ಭಕ್ತಿ-ಭಾವನೆಗಳ ಹೊಂದಿರುವ ಡಿ.ಕೆ.ಶಿವಕುಮಾರವರಿಗೆ ಈ ಜಗತ್ಪ್ರಿಸಿದ್ಧ ಮಾರಿಯಮ್ಮ ದೇಗುಲದ ಅನಾಚಾರಗಳು ಹಾಗೂ ಗೋಲಮಾಲ್‌ಗಳ ವಿಚಾರ ಗಮನಕ್ಕೆ ಬಂದಿದ್ದು ಒಳ್ಳೆಯದೇ ಆಯಿತು. ಇಲ್ಲಿಯ ಪೂರ್ತಿ ಅವ್ಯವಹಾರಗಳನ್ನು ತಿಳಿದರೆ ಅವರೇ ಸ್ವಯಂ ಪ್ರೇರಿತರಾಗಿ ಇದಕ್ಕೊಂದು ಅಂತ್ಯ ಹಾಡಲಿದ್ದಾರೆ ಅಂತೆನಿಸುತ್ತದೆ. ಧಾರ್ಮಿಕಥೆಯನ್ನು ತನ್ನ ಹೃದಯದಿಂದ ಪೂಜಿಸುವ ಡಿ.ಕೆ.ಶಿ.ಯವರು ಇಂತಹ ಪ್ರತಿಷ್ಠಿತ ದೇವಳವೊಂದನ್ನು ಈ ಮಟ್ಟಕ್ಕೆ ಲಗಾಡಿ ತೆಗೆಯಲು ಹೊರಟವರಿಗೊಂದು ಸರಿಯಾದ ಬುದ್ದಿ ಕಲಿಸ ಹೊರಟಂತಿದೆ. ಅದಕ್ಕಾಗಿಯೇ ಪೂರ್ತಿ ವಿವರಗಳು, ಅದಕ್ಕೆ ಬೇಕಾದ ದಾಖಲೆಗಳನ್ನು ತರುವಂತೆ ತಿಳಿಸಿದ್ದಾರೆ.
    ಅಂತೂ, ಈ ಬಾರಿ ಜಗದೊಡತಿ ಮಾರಿಯಮ್ಮನಿಗೊಂದು ಶಾಪ ವಿಮೋಚನೆಯಾಗೋ ಎಲ್ಲಾ ಲಕ್ಷಣಗಳು ಕಂಡು ಬಂದಿದೆ. ಕಡೆಗೂ ಇಲ್ಲಿಯ ಅನಾಚಾರಗಳು ಸರಕಾರದ ಗಮನಕ್ಕೆ ಬಂದಿದ್ದು, ಅದಕ್ಕೊಂದು ತÁರ್ಕಿಕ ಅಂತ್ಯ ಹಾಡಲು ಉಪ-ಮಂತ್ರಿಗಳು, ಅವಿರತ ಶ್ರಮ ಪಟ್ಟಿರುವ ಕಾರ್ಯಕರ್ತರ ತಂಡದಿAದ ದೂರು ದುಮ್ಮಾನಗಳ ಕೇಳಿ ಇಲ್ಲೊಂದು ಶಾಶ್ವತ ಪರಿಹಾರ ಕಲ್ಪಿಸಲಿದ್ದಾರೆ ಡಿಕೆಶಿ ಎಂಬ ಆಶಾಭಾವನೆಯಲ್ಲಿದ್ದಾರೆ ಕಾರ್ಕಳದ ಜನತೆ. ಅವÀರ ಅಶೋತ್ತರಗಳು ಪೂರೈಸಲಿ ಎಂಬುದೇ ನಮ್ಮೆಲ್ಲರ ಅಭಿಪ್ರಾಯ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    “ಅಮ್ಮ”ನ ಕಾರ್ಯಕ್ರಮದಲ್ಲಿ  ಕೇಂದ್ರ ಸಚಿವರಿಂದ ರಾಜಕೀಯ ಭಾಷಣ
    ಪೊಲೀಸ್ ಇಲಾಖೆಯ ಜಯಶ್ರೀ ನೀಡಿದ ದೂರಿನಲ್ಲಿ ಮತ್ತೊಬ್ಬ ರೌಡಿ ಶೀಟರ್ ಹೆಸರು: ವಿಡಿಯೋ ಕಾಲ್ ಪ್ರಕರಣಕ್ಕೆ ಹೊಸ ತಿರುವು
    ಕಾಂಗ್ರೆಸ್‌ಗೆ ಹೊಸ ತಲೆನೋವು? ಅಹಿಂದ ಸಂಘಟನೆಯಿಂದ ‘ಪಕ್ಷ ವಿಭಜನೆ’ ಎಚ್ಚರಿಕೆ!
    ಮನೆ ಬಾಡಿಗೆ ಕೊಡುವಾಗ ನಿಗಾ ಇರಿಸಲು ಮಾಲಕರಿಗೆ ಎಚ್ಚರಿಕೆ ..!ಗಾಂಜಾ ಸೇವಿಸಿದ ಐದು ನರ್ಸಿಂಗ್ ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ….
    ಬಲಪಂಥೀಯರ ಜೊತೆ ಮುಖ್ಯಮಂತ್ರಿಗಳ ಸ್ನೇಹ : ಅಭದ್ರತೆ ಯಾರಿಗೆಲ್ಲ?
    ಪ್ರಧಾನಿ ಮೋದಿ ನೆದರ್ಲ್ಯಾಂಡ್ ಭೇಟಿ ಭಾರತ ಸಹಕಾರದ ಸೇತುವೆ ಕಟ್ಟುವ ದ್ವಿಪಕ್ಷೀಯ ಸಂಬಂಧಗಳ ವಿಸ್ತರಣೆ…
    ನೇಪಾಳ ಪ್ರವಾಹ: ಪ್ರಧಾನಿ ನರೇಂದ್ರ ಮೋದಿಯವರಿಂದ ಸಂತಾಪ- ನೇಪಾಳ ಪ್ರಧಾನಿಗೆ ಸಹಕಾರದ ಭರವಸೆ
    ಟೂರ್ plan ಮಾಡ್ತಿದ್ದೀರಾ ?ಸ್ಥಳವೇ ಇಲ್ಲದ address ಗೆ online book ಮಾಡಿ ಮೋಸ ಹೋಗ್ಬೇಡಿ…
    ಹೊಸ ರಾಜಕೀಯ ಕ್ರಾಂತಿ! ಅಸ್ಸಾಂ ಕುದಿಯುತ್ತಿದೆ…ಹಿಂದುತ್ವ vs ಗುರುತು ರಾಜಕೀಯ…!
    ಬೀಡಿ, ಗೋಡಂಬಿ ಮತ್ತು ಸ್ಕೀಮ್ ಕಾರ್ಮಿಕರಿಗೆ ಕನಿಷ್ಠ ಕೂಲಿ ನೀಡಿ: ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ.
    ಕೇಂದ್ರದ ಮೌನ ಮತ್ತು ಪ್ರಜಾಪ್ರಭುತ್ವದ ಅಣಕಕ್ಕೆ ಜಂತರ್ ಮಂತರ್‌ನಲ್ಲಿ ಧಗಧಗಿಸುತ್ತದ ನೀಟ್ (NEET) ಕಿಚ್ಚು…!
    “ಬೆಡ್‌ರೂಮ್ ರಾಜಕೀಯ”ಪಪ್ಪು ಯಾದವ್ ಹೇಳಿಕೆ ಸ್ಫೋಟಕ ಚರ್ಚೆ…!ಪಪ್ಪು ತಪ್ಪಾಗ್ ಮಾತಾಡಿದ್ದು ತಪ್ಪು 
    ದೊಡ್ಡ ಮಿಕವನ್ನೇ ಬಲೆಗೆ ಹಾಕಿದ  ಲೋಕಾಯುಕ್ತ ಪೊಲೀಸರು 
    🔴 ಪೊಲೀಸರ ಮೇಲಿನ ಹಿಡಿತ ಕಠಿಣ: PEBಗೆ ಹೆಚ್ಚಿದ ಅಧಿಕಾರ — ರಾಜ್ಯದ ದೊಡ್ಡ ಆಡಳಿತಾತ್ಮಕ ತೀರ್ಮಾನ
    ಆಯುಷ್ ಎಚ್ಚರಿಕೆ ಬಳಿಕ ಅಶ್ವಗಂಧ ನಿಯಂತ್ರಣ ಕ್ರಮಕ್ಕೆ ತಡೆ: ಹೈಕೋರ್ಟ್ ಮಹತ್ವದ ಆದೇಶ
    ಶಂಕರಾಚಾರ್ಯರ ನಿಂದನಾ ವಿಡಿಯೋ: ಉಡುಪಿ ಶಿರೂರು ಮಠದಿಂದ ವಿಷಾದ, ಬಾಲಕಿಯಿಂದ ಕ್ಷಮಾಪಣೆ
    ₹1270 ಕೋಟಿ ಕಾನ್ಟ್ರಾಕ್ಟ್ ಹಗರಣ -CM ಖಾಂಡು ಕುಟುಂಬ ವಿಚಾರಣೆ-ಸುಪ್ರೀಂಕೋರ್ಟ್ ಸಿಬಿಐಗೆ ಆದೇಶ..
    ಆರು ಲಕ್ಷ ರೂ. ಶುಲ್ಕದ ಸಂಕಷ್ಟಕ್ಕೆ ಮಾನವೀಯ ಸ್ಪಂದನೆ: ವಿದ್ಯಾರ್ಥಿನಿಯ ಕನಸಿಗೆ ಸಚಿವ ಬಾಲಕೃಷ್ಣ ಬೆನ್ನೆಲುಬು
    ಒಂದು ಕ್ಲಿಕ್, ಒಂದು ಆಟ… ಕುಟುಂಬದ ಭವಿಷ್ಯವೇ ನಾಶವಾಗುವ ಅಪಾಯದ ಬೆಟ್ಟಿಂಗ್ ಜಾಲ -!ಸಾವಿರಾರು ಬೆಟ್ಟಿಂಗ್ ಆ್ಯಪ್‌ಗಳಿಗೆ ಸದ್ಯದಲ್ಲೇ ಬ್ರೇಕ್ ….
    ಪ್ರಮೋದ್ ಮಧ್ವರಾಜ್ ಅವರಿಗೆ ಕೊನೆಗೂ ಸಿಕ್ಕಿತು ಗೌರವ
    ಮಾರ್ಕ್ಸ್ 90%, ಆದರೆ 19ಕ್ಕೆ ಕ್ರೂರ ಅಪರಾಧಿ!ಕನಸುಗಳಿದ್ದ ಹುಡುಗನೊಬ್ಬ ಕಟುಕನಾದ ದುರಂತ ಕಥೆ”
    ಅಸ್ಸಾಂನಲ್ಲಿ ಮತದಾನದ ಹಿನ್ನೆಲೆ ಹಿಂಸಾಚಾರ: 30ಕ್ಕೂ ಹೆಚ್ಚು ಮಂದಿ ಗಾಯ, 7 ಜನರ ಬಂಧನ
    “Arvind Kejriwal: ‘ಸತ್ಯಾಗ್ರಹ’ದಿಂದ ನ್ಯಾಯದ ಬೇಡಿಕೆ.”
    ಮಂಗಳೂರು ಯೂಟ್ಯೂಬರ್‌ಗಳ ವಿರುದ್ಧ ಬಿಎನ್‌ಎಸ್ ಅಸ್ತ್ರ ಪ್ರಯೋಗಿಸಿದ ಖಾಕಿ!….
    ನಂದಿಬೆಟ್ಟದ ಬಳಿ ಪ್ರೇಯಸಿ ಕೊಲೆಗೈದು ಪ್ರಿಯಕರನ ಆತ್ಮಹತ್ಯೆ ಯತ್ನ?ಲವ್ ಜಿಹಾದ್’ ಆರೋಪ ಹೊರಿಸಿದ ತಾಯಿ!
    ಮೀನುಗಳ ಮಾರಣಹೋಮ, ಕಪ್ಪಾದ ನೀರು,ಉಸಿರುಗಟ್ಟಿಸುವ ದುರ್ವಾಸನೆ — ಜನರ ಬದುಕಿಗೆ ದೊಡ್ಡ ಎಚ್ಚರಿಕೆ!
    ಸ್ವಯಂಪ್ರೇರಿತ ಲೈಂಗಿಕ ಕೆಲಸ -ವೇಶ್ಯಾವಾಟಿಕೆ ವೃತ್ತಿ ಅಪರಾಧವಲ್ಲ ಕಾನೂನುಬಾಹಿರವಲ್ಲ! -ಇತಿಹಾಸ ಸೃಷ್ಟಿಸಿದ ಸುಪ್ರೀಂ ಕೋರ್ಟ್!
    ಸಂಸತ್ ವಿಶೇಷ ಅಧಿವೇಶನ: ಮಹಿಳಾ ಮೀಸಲಾತಿಗೆ ಒಗ್ಗಟ್ಟು, ಡಿಲಿಮಿಟೇಶನ್ ಮೇಲೆ ಭಾರಿ ವಿವಾದ – ಕರ್ನಾಟಕಕ್ಕೂ ಪರಿಣಾಮದ ಚರ್ಚೆ 🔥
    ಜೈನ ಮುನಿ… ಇರಾನ್‌ನ ಇಸ್ಲಾಮಿಕ್ ಸರ್ವೋಚ್ಚ ನಾಯಕನ ಅಂತ್ಯಕ್ರಿಯೆಯಲ್ಲಿ?
    ಕೇಂದ್ರ ಸಚಿವ ಸೋಮಣ್ಣರ ವಿರುದ್ಧ  ವಾಗ್ದಾಳಿ: “ನಡೆದು ಬಂದ ದಾರಿ ಮರೆತು ಮಾತನಾಡಬೇಡಿ”