📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಯಕ್ಷಗಾನದಲ್ಲಿ ಶಿಳ್ಳೆ ಹಾಕ್ಲಿಕ್ಕೆ ಪರ್ಮಿಶನ್ ಬೇಕಾ..…!?

ಧರ್ಮಸ್ಥಳ ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ನಡೆದ ಈ ಘಟನೆ, ಅವರವರ ಭಾವಕ್ಕೆ ಅವರವರ ಭಕುತಿಗೆ…ಕುಂದಾಪುರದ ಹೆನ್ನಾಬೈಲು ಪ್ರದೇಶದಲ್ಲಿ ನಡೆದ ಪ್ರಸಂಗ, ಸಾಂಸ್ಕೃತಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಹಿರಿಯ ಯಕ್ಷಗಾನ ಕಲಾವಿದ ಅಶೋಕ್ ಭಟ್ ಅವರು ಭಾಗವತಿಕೆ ವೇಳೆ ಪ್ರೇಕ್ಷಕರೊಬ್ಬರು ಶಿಳ್ಳೆ ಹಾಕಿದ ಹಿನ್ನೆಲೆಯಲ್ಲಿ ಕಿಡಿಕಾರಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನಾಭಿಪ್ರಾಯಗಳ ಅಲೆ ಎಬ್ಬಿಸಿದೆ.

ಮೊದಲನೆಯದಾಗಿ, ಕಲಾವಿದರ ನಡೆಗೆ ವಿರೋಧ ವ್ಯಕ್ತವಾಗಿದೆ. “ವೇದಿಕೆಯ ಮೇಲೆ ಪಾತ್ರಧಾರಿಯಾಗಿ ಇದ್ದಾಗ, ವೈಯಕ್ತಿಕ ಭಾವನೆಗಳನ್ನು ಹೊರಹಾಕುವುದು ತಪ್ಪು” ಎಂಬುದು ಈ ಗುಂಪಿನ ಪ್ರಮುಖ ವಾದ. ಕೆಲವರು ತೀಕ್ಷ್ಣವಾಗಿ ಟೀಕಿಸಿ, “ಅಷ್ಟು ದೊಡ್ಡ ಕಲಾವಿದ ಆಗಿದ್ದರೂ ಸಹನೆ ಇರಬೇಕು” ಎಂದು ಹೇಳಿದ್ದಾರೆ. “ಪ್ರೇಕ್ಷಕರಿಲ್ಲದೆ ಕಲೆ ಉಳಿಯುವುದಿಲ್ಲ, ‘ನಿಮ್ಮಂಥವರ ಅಗತ್ಯ ಇಲ್ಲ’ ಎನ್ನುವುದು ಅಹಂಕಾರ” ಎಂಬ ಕಮೆಂಟ್‌ಗಳು ಕೂಡ ಕಾಣಿಸಿಕೊಂಡಿವೆ. ಈ ಅಭಿಪ್ರಾಯದಲ್ಲಿ, ಕಲಾವಿದನ ಪ್ರತಿಕ್ರಿಯೆ ಹೆಚ್ಚು ತೀವ್ರವಾಗಿದೆ ಎಂಬ ಧ್ವನಿ ಕೇಳಿಬರುತ್ತಿದೆ. 

ಇನ್ನೊಂದು ವಲಯದಲ್ಲಿ, ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು ಪ್ರೇಕ್ಷಕರ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಯಕ್ಷಗಾನ ಅನ್ನೋದು ಕೇವಲ ಮನರಂಜನೆ ಅಲ್ಲ, ಅದು ಭಕ್ತಿ ಮತ್ತು ಸಂಪ್ರದಾಯದ ಕಲೆಯಾಗಿದೆ” ಎಂಬ ಅಭಿಪ್ರಾಯ ವ್ಯಾಪಕವಾಗಿ ಕಾಣಿಸಿಕೊಂಡಿದೆ. ಕೆಲವರು ನೇರವಾಗಿ ಟೀಕಿಸಿ, “ಶಿಳ್ಳೆ ಹಾಕೋದು ಸಿನಿಮಾ ಥಿಯೇಟರ್‌ನಲ್ಲಿ ಸರಿಹೋಗಬಹುದು, ಯಕ್ಷಗಾನದಲ್ಲಿ ಅಲ್ಲ” ಎಂದು ಬರೆದಿದ್ದಾರೆ. ಇನ್ನೂ ಕೆಲವರು “ಇಂತಹ ಅಸಭ್ಯ ಪ್ರೇಕ್ಷಕರಿಂದಲೇ ಕಲೆ ಕುಸಿಯುತ್ತಿದೆ” ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಗುಂಪಿನವರು ಕಲಾವಿದನ ಪ್ರತಿಕ್ರಿಯೆಯನ್ನು ಸಮರ್ಥಿಸುತ್ತಾ, “ಅವರು ಕೋಪಗೊಂಡದ್ದು ಸಹಜ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಧ್ಯಮ ನಿಲುವಿನವರು ಎರಡೂ ಬದಿಗಳ ತಪ್ಪನ್ನು ಗುರುತಿಸಿದ್ದಾರೆ. “ಪ್ರೇಕ್ಷಕರು ಶಿಸ್ತು ಪಾಲಿಸಬೇಕು, ಆದರೆ ಕಲಾವಿದರು ಸಹ ತಾಳ್ಮೆ ಕಾಪಾಡಬೇಕು” ಎಂಬ ಸಮತೋಲನದ ಅಭಿಪ್ರಾಯಗಳು ಗಮನ ಸೆಳೆಯುತ್ತವೆ. “ಇದು ಒಂದು ತಪ್ಪು-ಪ್ರತಿಕ್ರಿಯೆಯ ಸರಪಳಿ, ಇಬ್ಬರೂ ಸ್ವಲ್ಪ ಮಿತಿಮೀರಿ ವರ್ತಿಸಿದ್ದಾರೆ” ಎಂದು ಕೆಲವರು ವಿಶ್ಲೇಷಿಸಿದ್ದಾರೆ. ಇಂತಹ ಪ್ರತಿಕ್ರಿಯೆಗಳು ಸಮಾಜದಲ್ಲಿ ಸಮತೋಲನದ ಚಿಂತನೆ ಇನ್ನೂ ಜೀವಂತವಾಗಿದೆ ಎಂಬುದನ್ನು ಸೂಚಿಸುತ್ತವೆ.

ಇನ್ನೂ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಘಟನೆಯನ್ನು ದೊಡ್ಡ ಸಾಂಸ್ಕೃತಿಕ ಸಂಕಟದ ಲಕ್ಷಣವಾಗಿ ನೋಡಿದ್ದಾರೆ. “ನಮ್ಮ ಸಂಸ್ಕೃತಿಯ ಬಗ್ಗೆ ಗೌರವ ಕಡಿಮೆಯಾಗುತ್ತಿದೆ” ಎಂಬ ಆತಂಕ ವ್ಯಕ್ತವಾಗಿದೆ. “ಯಕ್ಷಗಾನ ನೋಡಲು ಬರುವವರು ಅದರ ಮಹತ್ವ ಅರಿತು ಬರಬೇಕು” ಎಂಬ ಸಲಹೆಗಳು ಕೂಡ ಹರಿದಾಡಿವೆ. ಕೆಲವರು ಶಿಕ್ಷಣ ಮತ್ತು ಜಾಗೃತಿ ಅಭಿಯಾನಗಳ ಅಗತ್ಯವಿದೆ ಎಂದು ಸೂಚಿಸಿದ್ದಾರೆ.

ಶಿಳ್ಳೆ ಚಪ್ಪಾಳೆಗಳನ್ನು ದಿಕ್ಕರಿಸುವ ಪಾತ್ರಧಾರಿ ಕಲಾವಿದನೇ ಅಲ್ಲ. ಕಲೆ ಜೀವಂತವಾಗಿರುವುದೇ ಕಲೆಯನ್ನು ಆರಾಧಿಸುವ ಪ್ರೇಕ್ಷಕರಿಂದಲೇ.ಅನೇಕ ಕಡೆಗಳಲ್ಲಿ ಮಳೆಗಾಳಿಯನ್ನೂ ಲೆಕ್ಕಿಸದೇ ಕಲಾವಿದರು ರಂಗದಲ್ಲಿ ತಮ್ಮ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನಡೆಸಿಕೊಟ್ಟದ್ದಿದೆ. ಅದೇರೀತಿ ಅದೇತರಹದ ಮಳೆಗಾಳಿಯನ್ನೂ ಲೆಕ್ಕಿಸದೇ ಪ್ರೇಕ್ಷಕರೂ ವೀಕ್ಷಿಸಿದ್ದಿದೆ.ಒಟ್ಟಿನಲ್ಲಿ ಕಲಾವಿದರ ಹಾಗೂ ಕಲಾಭಿಮಾನಿಗಳ ನಡುವೆ ಸಮರವಾಗುವ ಬದಲು ಸಮರಸದ ಬದುಕು ಜೀವಿಸುವಂತಾಗಲಿ ಅನ್ನುವ ಮಾತುಗಳು ಕೇಳಿಬರ್ತಿದೆ.

ಒಟ್ಟಿನಲ್ಲಿ, ಈ ಘಟನೆ ಕೇವಲ ಒಬ್ಬ ಪ್ರೇಕ್ಷಕ ಮತ್ತು ಒಬ್ಬ ಕಲಾವಿದ ನಡುವಿನ ಘರ್ಷಣೆಯಲ್ಲ-ನಡುವಿನ ಸಂಬಂಧ, ಸಂಸ್ಕೃತಿ, ಶಿಸ್ತು, ಮತ್ತು ಸಾರ್ವಜನಿಕ ವೇದಿಕೆಯ ವರ್ತನೆಗಳ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಗಿ ಸಾಮಾಜಿಕ ಜಾಲತಾಣಗಳ ಪ್ರತಿಕ್ರಿಯೆಗಳು ಜನಮನದ ವಿಭಿನ್ನ ಮುಖಗಳನ್ನು ತೆರೆದಿಟ್ಟಿದ್ದು  ಅಭಿಪ್ರಾಯ ವ್ಯಕ್ತಪಡಿಸೋದು “ಪ್ರತಿಯೊಬ್ಬರ ಜನ್ಮ ಸಿದ್ಧ  “ಹಕ್ಕಂತೆ ಕಾಣಿಸುತ್ತಿದೆ.

#arrogant artist#artist and audience#conflict#mangalore news#overact audience#respect yakshagana#ಕರಾವಳಿ culture

COMMENTS

Login with Gmail to comment

ಇನ್ನಷ್ಟು ಸುದ್ದಿ

ಬ್ರೇಕಿಂಗ್ ನ್ಯೂಸ್
ಏರ್ ಇಂಡಿಯಾದಿಂದ ದೈನಂದಿನ ವಿಮಾನ ಹಾರಾಟದ ಬಗ್ಗೆ ನೂತನ ಪ್ರಕಟಣೆ
“Arvind Kejriwal: ‘ಸತ್ಯಾಗ್ರಹ’ದಿಂದ ನ್ಯಾಯದ ಬೇಡಿಕೆ.”
ಮೇ 29ರಿಂದ ತಣ್ಣೀರುಬಾವಿ ಬೀಚ್‌ನಲ್ಲಿ ಮೂರು ದಿನಗಳ ರಾಷ್ಟ್ರಮಟ್ಟದ ಸರ್ಫಿಂಗ್ ಸ್ಪರ್ಧೆ…
ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆಯ ಕ್ರೆಡಿಟ್ ಪಡೆದುಕೊಳ್ಳಲು ಶುರುವಾಯಿತು ಫೈಟ್
🚨 ಬ್ರೇಕಿಂಗ್ ‼️ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ: ಜುಲೈ 2 (ಗುರುವಾರ) ರಜೆ ಘೋಷಣೆ
Top 5, ಹೆಚ್ಚು ಅನುದಾನ ಪಡೆದ ಇಲಾಖೆಗಳು ಯಾವವು ಗೊತ್ತಾ?
8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ
ಲಕ್ಷ ಫೀಸ್ ಕೊಟ್ಟರೂ ಸಿಗದ ಶಿಕ್ಷಣ ಇಲ್ಲಿ ಉಚಿತ! 15 ಮಕ್ಕಳ ಪುಟ್ಟ ಶಾಲೆಯ ದೊಡ್ಡ ಸಾಧನೆ
ಸಚಿವ ಜಮೀರ್ ಕಥೆ ಗೋವಿಂದ!!!?
ರಾಜಕೀಯದಲ್ಲಿ ಅನುಭವ ಎಷ್ಟು ಮುಖ್ಯ?…  ತಮಿಳುನಾಡು ರಾಜಕಾರಣ ತೋರಿಸುತ್ತಿದೆ ನೋಡಿ
‘₹1ಕ್ಕೆ ಫ್ಯಾಷನ್’ ಜಾಹೀರಾತು ವೈರಲ್… ಮಾಲಾಡ್ ಮಾಲ್‌ನಲ್ಲಿ ನಿಯಂತ್ರಣ ತಪ್ಪಿದ ಜನಸಾಗರ-ಸ್ಟ್ಯಾಂಪೀಡ್ ಭೀತಿ ಮೂಡಿಸಿದ ಜನಸಂದಣಿ!
ವಿಷ ಸೇವನೆ ಸ್ವಯಂ ಆಗಿತ್ತೇ ಅಥವಾ ಪ್ರಚೋದನೆ ಕಾರಣವೇ ….?!
ಮಹಿಳೆಯರೇ, ಬಿರುಬಿಸಿಲು ಹಾಗಂತ ನೀರು ಕೇಳ್ಕೊಂಡು ಬಂದ್ರು… ಯಾರೋ ಪಾಪ ಅಂದ್ರೆ ಅಪರಿಚಿತರಿಗೆ…!ಒಂಟಿಯಾಗಿ ಇದ್ದಾಗ ಹೆಚ್ಚು ಜಾಗ್ರತಾಗಿರಿ.
ಮಂಗಳೂರು- ಕೊಲ್ಲೂರಿನವರೆಗೆ ಹೈ ಅಲರ್ಟ್!ಕ.ರ.ವೇ ಕಪ್ಪು ಬಾವುಟ .!!ತಮಿಳುನಾಡು ಸಿಎಂ ವಿಜಯ್ ಭೇಟಿ-ಕೊಲ್ಲೂರಿನಲ್ಲಿ ಹೈವೋಲ್ಟೇಜ್ ದಿನ! 
AYS TROPHY–2026 ಯಶಸ್ವಿಯಾಗಿಸಲು ನಿಮ್ಮ ಉಪಸ್ಥಿತಿ ಅಗತ್ಯ.
ಆನ್ಲೈನ್ ವಂಚಕರಿಂದ ಮಂಗಳೂರು ಡಾಕ್ಟರ್ ಒಬ್ಬರ ಏಳು ದಿನಗಳ ಕಾಲ ಹೌಸ್ ಅರೆಸ್ಟ್
ಅಜಿತ್ ಅಗರ್ಕರ್ ಗೆ ಜಾಕ್ಪಾಟ್
🚨 ಬೈಂದೂರಿನಲ್ಲಿ ಭಯಾನಕ ದಾಳಿ! ಕತ್ತಿಯಿಂದ ಹಲ್ಲೆ – ಆರೋಪಿ ಬಂಧನ
ಪಂಜಿಮೊಗರುವಿನಲ್ಲಿ ಹೆಂಡತಿಯ ಅಕ್ರಮ ಸಂಬಂಧಕ್ಕೆ, ಗಂಡ ಫಿನಿಶ್!
ಎಲ್ಲರಿಗೂ ಯುಗಾದಿ ಹಬ್ಬ… ಆದರೆ ಈ ಗ್ರಾಮಗಳಲ್ಲಿ ಭಯ ಮೌನ…ಹಬ್ಬ ಇಲ್ಲ…!ಒಂದು ವಿಚಿತ್ರ ಕಥೆ!
ಕುಂದಾಪುರದಲ್ಲಿ ಯುವತಿ ಆತ್ಮಹತ್ಯೆಗೆ ಪ್ರಿಯಕರನ ಕುಮ್ಮಕ್ಕು
ಡೈಮಂಡ್ ನೆಕ್ಲೇಸ್, ಕಿವಿಯೋಲೆಗಳು, ಚಿನ್ನದ ಚೈನ್, ಪ್ಲಾಟಿನಂ ಉಂಗುರ ಕಳವು…!
ಅಂಡಮಾನ್ ಜೈಲಿನ ಕರಾಳ ಕೋಣೆಯಿಂದ ಹೊರಬರಲಿದೆ ಕರ್ನಾಟಕದ 59 ರಕ್ತೇತಿಹಾಸ’ಯಾರೂ ಅರಿಯದ ವೀರರು’ …!
ಏಳು ವರ್ಷದ ನಂತರ ಮಂಗಳೂರಿಗೆ “ಅಮ್ಮ” ಬರುತ್ತಿದ್ದಾರೆ…. 50ಸಾವಿರ ಜನರ ನಿರೀಕ್ಷೆ
ಸದ್ಯದಲ್ಲೇ ಬರುತ್ತೆ ತಣ್ಣೀರ್ಬಾವಿ ಬೀಚ್‌ಗೆ shortcut ಮಾರ್ಗ!30 ನಿಮಿಷ ಕಡಿಮೆ ಪ್ರಯಾಣ..!
ವಿಟ್ಲ ಪಟಾಕಿ ತಯಾರಿಕಾ ಘಟಕದಲ್ಲಿ ಪಟಾಕಿ ಸ್ಫೋಟ
ಎಲಾನ್ ಮಸ್ಕ್: ವಿಶ್ವದ ಮೊದಲ ಟ್ರಿಲಿಯನೇರ್‌ನಿಂದ ಇನ್ನೂ ಎತ್ತರದತ್ತ!
5.5 ವರ್ಷದ ಹೆಣ್ಣುಮಗಳ ಕೊಲೆ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್!ಮಗು ಸತ್ತು 3 ತಿಂಗಳು…ಆದ್ರೆ FIR ಇಲ್ಲ! 3 ಪೊಲೀಸರು ಸಸ್ಪೆಂಡ್
ಮೂಡಬಿದ್ರಿ ಪುರಸಭೆಯ ಬೇಜವಾಬ್ದಾರಿ ಹಾಗೂ ವೇಸ್ಟ್ ಆಗುತ್ತಿರುವ ನೀರು