📍 Karavali Maruta
  • LOGIN
  • BREAKING
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ ದಯಾಮರಣ ಕೇಳಿದ್ದ ತುಮಕೂರು ರಾಬಿಯಾ ಇನ್ನಿಲ್ಲ …!ಪರಮೇಶ್ವರ್ ಮುಂದೆ ಕಣ್ಣೀರಿಟ್ಟಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ವಿಷಸೇವಿಸಿ ಕೊನೆಯುಸಿರು…‘ಮನೆ’ ಸಿಕ್ಕರೂ ಬದುಕು ಉಳಿಯಲಿಲ್ಲ! ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್! ಮಹಿಳಾ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ ವಾಜಪೇಯಿ ಸರ್ಕಾರದ  ಕನಸಿನ ಯೋಜನೆ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಸಹಿ ಸಂಗ್ರಹ ಅಭಿಯಾನ
    ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಯಕ್ಷಗಾನದಲ್ಲಿ ಶಿಳ್ಳೆ ಹಾಕ್ಲಿಕ್ಕೆ ಪರ್ಮಿಶನ್ ಬೇಕಾ..…!?

    ಧರ್ಮಸ್ಥಳ ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ನಡೆದ ಈ ಘಟನೆ, ಅವರವರ ಭಾವಕ್ಕೆ ಅವರವರ ಭಕುತಿಗೆ…ಕುಂದಾಪುರದ ಹೆನ್ನಾಬೈಲು ಪ್ರದೇಶದಲ್ಲಿ ನಡೆದ ಪ್ರಸಂಗ, ಸಾಂಸ್ಕೃತಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಹಿರಿಯ ಯಕ್ಷಗಾನ ಕಲಾವಿದ ಅಶೋಕ್ ಭಟ್ ಅವರು ಭಾಗವತಿಕೆ ವೇಳೆ ಪ್ರೇಕ್ಷಕರೊಬ್ಬರು ಶಿಳ್ಳೆ ಹಾಕಿದ ಹಿನ್ನೆಲೆಯಲ್ಲಿ ಕಿಡಿಕಾರಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನಾಭಿಪ್ರಾಯಗಳ ಅಲೆ ಎಬ್ಬಿಸಿದೆ.

    ಮೊದಲನೆಯದಾಗಿ, ಕಲಾವಿದರ ನಡೆಗೆ ವಿರೋಧ ವ್ಯಕ್ತವಾಗಿದೆ. “ವೇದಿಕೆಯ ಮೇಲೆ ಪಾತ್ರಧಾರಿಯಾಗಿ ಇದ್ದಾಗ, ವೈಯಕ್ತಿಕ ಭಾವನೆಗಳನ್ನು ಹೊರಹಾಕುವುದು ತಪ್ಪು” ಎಂಬುದು ಈ ಗುಂಪಿನ ಪ್ರಮುಖ ವಾದ. ಕೆಲವರು ತೀಕ್ಷ್ಣವಾಗಿ ಟೀಕಿಸಿ, “ಅಷ್ಟು ದೊಡ್ಡ ಕಲಾವಿದ ಆಗಿದ್ದರೂ ಸಹನೆ ಇರಬೇಕು” ಎಂದು ಹೇಳಿದ್ದಾರೆ. “ಪ್ರೇಕ್ಷಕರಿಲ್ಲದೆ ಕಲೆ ಉಳಿಯುವುದಿಲ್ಲ, ‘ನಿಮ್ಮಂಥವರ ಅಗತ್ಯ ಇಲ್ಲ’ ಎನ್ನುವುದು ಅಹಂಕಾರ” ಎಂಬ ಕಮೆಂಟ್‌ಗಳು ಕೂಡ ಕಾಣಿಸಿಕೊಂಡಿವೆ. ಈ ಅಭಿಪ್ರಾಯದಲ್ಲಿ, ಕಲಾವಿದನ ಪ್ರತಿಕ್ರಿಯೆ ಹೆಚ್ಚು ತೀವ್ರವಾಗಿದೆ ಎಂಬ ಧ್ವನಿ ಕೇಳಿಬರುತ್ತಿದೆ. 

    ಇನ್ನೊಂದು ವಲಯದಲ್ಲಿ, ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು ಪ್ರೇಕ್ಷಕರ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಯಕ್ಷಗಾನ ಅನ್ನೋದು ಕೇವಲ ಮನರಂಜನೆ ಅಲ್ಲ, ಅದು ಭಕ್ತಿ ಮತ್ತು ಸಂಪ್ರದಾಯದ ಕಲೆಯಾಗಿದೆ” ಎಂಬ ಅಭಿಪ್ರಾಯ ವ್ಯಾಪಕವಾಗಿ ಕಾಣಿಸಿಕೊಂಡಿದೆ. ಕೆಲವರು ನೇರವಾಗಿ ಟೀಕಿಸಿ, “ಶಿಳ್ಳೆ ಹಾಕೋದು ಸಿನಿಮಾ ಥಿಯೇಟರ್‌ನಲ್ಲಿ ಸರಿಹೋಗಬಹುದು, ಯಕ್ಷಗಾನದಲ್ಲಿ ಅಲ್ಲ” ಎಂದು ಬರೆದಿದ್ದಾರೆ. ಇನ್ನೂ ಕೆಲವರು “ಇಂತಹ ಅಸಭ್ಯ ಪ್ರೇಕ್ಷಕರಿಂದಲೇ ಕಲೆ ಕುಸಿಯುತ್ತಿದೆ” ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಗುಂಪಿನವರು ಕಲಾವಿದನ ಪ್ರತಿಕ್ರಿಯೆಯನ್ನು ಸಮರ್ಥಿಸುತ್ತಾ, “ಅವರು ಕೋಪಗೊಂಡದ್ದು ಸಹಜ” ಎಂದು ಅಭಿಪ್ರಾಯಪಟ್ಟಿದ್ದಾರೆ.

    ಮಧ್ಯಮ ನಿಲುವಿನವರು ಎರಡೂ ಬದಿಗಳ ತಪ್ಪನ್ನು ಗುರುತಿಸಿದ್ದಾರೆ. “ಪ್ರೇಕ್ಷಕರು ಶಿಸ್ತು ಪಾಲಿಸಬೇಕು, ಆದರೆ ಕಲಾವಿದರು ಸಹ ತಾಳ್ಮೆ ಕಾಪಾಡಬೇಕು” ಎಂಬ ಸಮತೋಲನದ ಅಭಿಪ್ರಾಯಗಳು ಗಮನ ಸೆಳೆಯುತ್ತವೆ. “ಇದು ಒಂದು ತಪ್ಪು-ಪ್ರತಿಕ್ರಿಯೆಯ ಸರಪಳಿ, ಇಬ್ಬರೂ ಸ್ವಲ್ಪ ಮಿತಿಮೀರಿ ವರ್ತಿಸಿದ್ದಾರೆ” ಎಂದು ಕೆಲವರು ವಿಶ್ಲೇಷಿಸಿದ್ದಾರೆ. ಇಂತಹ ಪ್ರತಿಕ್ರಿಯೆಗಳು ಸಮಾಜದಲ್ಲಿ ಸಮತೋಲನದ ಚಿಂತನೆ ಇನ್ನೂ ಜೀವಂತವಾಗಿದೆ ಎಂಬುದನ್ನು ಸೂಚಿಸುತ್ತವೆ.

    ಇನ್ನೂ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಘಟನೆಯನ್ನು ದೊಡ್ಡ ಸಾಂಸ್ಕೃತಿಕ ಸಂಕಟದ ಲಕ್ಷಣವಾಗಿ ನೋಡಿದ್ದಾರೆ. “ನಮ್ಮ ಸಂಸ್ಕೃತಿಯ ಬಗ್ಗೆ ಗೌರವ ಕಡಿಮೆಯಾಗುತ್ತಿದೆ” ಎಂಬ ಆತಂಕ ವ್ಯಕ್ತವಾಗಿದೆ. “ಯಕ್ಷಗಾನ ನೋಡಲು ಬರುವವರು ಅದರ ಮಹತ್ವ ಅರಿತು ಬರಬೇಕು” ಎಂಬ ಸಲಹೆಗಳು ಕೂಡ ಹರಿದಾಡಿವೆ. ಕೆಲವರು ಶಿಕ್ಷಣ ಮತ್ತು ಜಾಗೃತಿ ಅಭಿಯಾನಗಳ ಅಗತ್ಯವಿದೆ ಎಂದು ಸೂಚಿಸಿದ್ದಾರೆ.

    ಶಿಳ್ಳೆ ಚಪ್ಪಾಳೆಗಳನ್ನು ದಿಕ್ಕರಿಸುವ ಪಾತ್ರಧಾರಿ ಕಲಾವಿದನೇ ಅಲ್ಲ. ಕಲೆ ಜೀವಂತವಾಗಿರುವುದೇ ಕಲೆಯನ್ನು ಆರಾಧಿಸುವ ಪ್ರೇಕ್ಷಕರಿಂದಲೇ.ಅನೇಕ ಕಡೆಗಳಲ್ಲಿ ಮಳೆಗಾಳಿಯನ್ನೂ ಲೆಕ್ಕಿಸದೇ ಕಲಾವಿದರು ರಂಗದಲ್ಲಿ ತಮ್ಮ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನಡೆಸಿಕೊಟ್ಟದ್ದಿದೆ. ಅದೇರೀತಿ ಅದೇತರಹದ ಮಳೆಗಾಳಿಯನ್ನೂ ಲೆಕ್ಕಿಸದೇ ಪ್ರೇಕ್ಷಕರೂ ವೀಕ್ಷಿಸಿದ್ದಿದೆ.ಒಟ್ಟಿನಲ್ಲಿ ಕಲಾವಿದರ ಹಾಗೂ ಕಲಾಭಿಮಾನಿಗಳ ನಡುವೆ ಸಮರವಾಗುವ ಬದಲು ಸಮರಸದ ಬದುಕು ಜೀವಿಸುವಂತಾಗಲಿ ಅನ್ನುವ ಮಾತುಗಳು ಕೇಳಿಬರ್ತಿದೆ.

    ಒಟ್ಟಿನಲ್ಲಿ, ಈ ಘಟನೆ ಕೇವಲ ಒಬ್ಬ ಪ್ರೇಕ್ಷಕ ಮತ್ತು ಒಬ್ಬ ಕಲಾವಿದ ನಡುವಿನ ಘರ್ಷಣೆಯಲ್ಲ-ನಡುವಿನ ಸಂಬಂಧ, ಸಂಸ್ಕೃತಿ, ಶಿಸ್ತು, ಮತ್ತು ಸಾರ್ವಜನಿಕ ವೇದಿಕೆಯ ವರ್ತನೆಗಳ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಗಿ ಸಾಮಾಜಿಕ ಜಾಲತಾಣಗಳ ಪ್ರತಿಕ್ರಿಯೆಗಳು ಜನಮನದ ವಿಭಿನ್ನ ಮುಖಗಳನ್ನು ತೆರೆದಿಟ್ಟಿದ್ದು  ಅಭಿಪ್ರಾಯ ವ್ಯಕ್ತಪಡಿಸೋದು “ಪ್ರತಿಯೊಬ್ಬರ ಜನ್ಮ ಸಿದ್ಧ  “ಹಕ್ಕಂತೆ ಕಾಣಿಸುತ್ತಿದೆ.

    #arrogant artist#artist and audience#conflict#mangalore news#overact audience#respect yakshagana#ಕರಾವಳಿ culture

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    Cyber ವಂಚನೆಯ ಹೊಸ ತಂತ್ರ “ಸಿಮ್ ನವೀಕರಣ,5ಜಿ ಅಪ್‌ಗ್ರೇಡ್,ಸಿಮ್ ಸ್ವಾಪ್”ಹೆಸರಲ್ಲಿ ಮಂಗಳೂರಿನ ವ್ಯಕ್ತಿಗೆ 23.98 ಲಕ್ಷ ರೂ. ನಾಮ!
    ಜಾಗತಿಕ ಯುದ್ಧ ಭೀತಿ:ಟ್ರಂಪ್ ಎಫೆಕ್ಟ್‌ಗೆ ಭಾರೀ ಆರ್ಥಿಕ ಭೂಕಂಪ! — ಒಂದೇ ದಿನ ₹6 ಲಕ್ಷ ಕೋಟಿ ನಷ್ಟ!ಸೆನ್ಸೆಕ್ಸ್ ಧರೆಗುರುಳಿ, ರೂಪಾಯಿ ದಾಖಲೆ ಪತನ!
    AAP ಸದ್ದು ಮಂಗಳೂರಲ್ಲೂ! ಜನರ ಸಮಸ್ಯೆಗೆ ನೇರ ಹೋರಾಟ
    420 ವಂಚನೆ ಪ್ರಕರಣದಲ್ಲಿ ಮಹಿಳೆಯ ಬಂಧನ – ಪೊಲೀಸ್ ತನಿಖೆ
    ಅಂಗಳ, ಶೆಡ್, ಗೋದಾಮು ಮಾತ್ರವಲ್ಲ… ಡೈನಿಂಗ್ ಹಾಲ್‌ಗೂ ಬಂದ 8 ಅಡಿ ಕಾಳಿಂಗ!
    ವಿಮಾನದಲ್ಲಿ ಭಾರೀ ಟರ್ಬುಲೆನ್ಸ್:300 ಅಡಿ ಹಠಾತ್ ಕುಸಿದ ಏರ್ ಇಂಡಿಯಾ ವಿಮಾನ..!ಪ್ರಯಾಣಿಕರು-ಸಿಬ್ಬಂದಿಗೆ ಗಾಯ..
    ಪೊರಕೆ ಹಿಡಿದ ಕೈಯಲ್ಲಿ ಫಾರ್ಚೂನರ್ ಕನಸು! SI ಬೆಳ್ಳಿಯಪ್ಪ ,ಸೇಸಪ್ಪನ ಬದುಕಿಗೆ ಹೊಸ ತಿರುವು….?!!!
    ಪ್ರಧಾನಿ ಮೋದಿ ನೆದರ್ಲ್ಯಾಂಡ್ ಭೇಟಿ ಭಾರತ ಸಹಕಾರದ ಸೇತುವೆ ಕಟ್ಟುವ ದ್ವಿಪಕ್ಷೀಯ ಸಂಬಂಧಗಳ ವಿಸ್ತರಣೆ…
    AI ವಿಶ್ವವಿದ್ಯಾಲಯಕ್ಕೂ ಮೊದಲು AI ಪರಿಣಾಮಗಳ ಅಧ್ಯಯನ ಅಗತ್ಯವೇ?
    ಇಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ಪ್ರತಿಭಟನೆ
    ಮಾರ್ಕ್ಸ್ 90%, ಆದರೆ 19ಕ್ಕೆ ಕ್ರೂರ ಅಪರಾಧಿ!ಕನಸುಗಳಿದ್ದ ಹುಡುಗನೊಬ್ಬ ಕಟುಕನಾದ ದುರಂತ ಕಥೆ”
    ಹಿರಿಯಡ್ಕದ ಬಾರಿನಲ್ಲಿ ಸರಿ ಕುಡಿದು ಗುಂಡಾಗಿರಿ, ಬಿಯರ್ ಬಾಟಲಿಯಿಂದ ಹಲ್ಲೆ
    ಅಮೆರಿಕಾ ವಿರುದ್ಧ ‘ಪೈರಸಿ’ ಆರೋಪ: ಇರಾನ್ ಯುಎನ್‌ಗೆ ದೂರು
    ಒಂದು iPhoneಗಾಗಿ ಆರಂಭವಾದ ಮಗನ ಹಠ… ಕೊನೆಗೆ ಒಂದೇ ಕುಟುಂಬದ ಮೂವರ ಜೀವವೇ ಹೋಯ್ತು!
    ನೈಸ್ ಟೋಲ್ ವಿವಾದ: ಕುಮಾರಸ್ವಾಮಿ ಹೇಳಿಕೆಗೆ ಅಶೋಕ್ ಖೇಣಿ ತಿರುಗೇಟು.. ಇವರಿಬ್ಬರಲ್ಲಿ ಸತ್ಯವಂತರು ಯಾರು?
    ವಿಶ್ವ ಸಂಸ್ಥೆಯು ಯಾವ ಪುರುಷಾರ್ಥಕ್ಕೆ? ಬಲವರ್ಧನೆಯ  ಅಗತ್ಯತೆ
    ವಿಶ್ವದ ಅತ್ಯುತ್ತಮ ಶಾಲೆಗಳ ಪಟ್ಟಿಯಲ್ಲಿ ಭಾರತದ 7 ಶಾಲೆಗಳು …!ವಿಶ್ವದ ಗಮನ ಸೆಳೆದ ಸಾಧನೆ ಅಂಥದ್ದೇನಿದೆ!?
    ವರದಕ್ಷಿಣ ಪ್ರಕರಣ:5.5 ತಿಂಗಳ ಮಗುವಿಗೂ ದೈಹಿಕ ಹಿಂಸೆ….!
    ಒಂದೂವರೆ ವರ್ಷ ಫ್ರೀ ಬಸ್  ಪ್ರಯಾಣ…ಕೊನೆಯಲ್ಲಿ ದಂಡ ಮತ್ತು ಜೈಲು ಶಿಕ್ಷೆ!
    ಹಳ್ಳಿಯಿಂದ ಡೆಲ್ಲಿ ತನಕ ಉರಿ ಬಿಸಿಲು, ಮಾರ್ಚ್ ಆರಂಭದಲ್ಲೇ ಜನ ತತ್ತರ”
    ಅಜಿತ್ ಅಗರ್ಕರ್ ಗೆ ಜಾಕ್ಪಾಟ್
    35 ವಾರಂಟ್ ಇದ್ದ ಆರೋಪಿಯು ವಿದೇಶದಿಂದ ಮರಳುತ್ತಿದ್ದಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ
    ಸಾಮಾಜಿಕ‌ ಕಾರ್ಯಕರ್ತರಿಗೆ ಹಾಗೂ ನಗರ ಸಭೆ ಪೌರಯುಕ್ತರಿಗೆ ಬಹಿರಂಗ ಸವಾಲು.ಶ್ರೀಮಂತರ ಅಕ್ರಮಗಳ ಬಗ್ಗೆ ಮೌನವೇಕೆ.‌‌?
    ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯ ಬಂಧನ
    ಪಶ್ಚಿಮ ಬಂಗಾಳ ಅಪ್ರಾಪ್ತೆಯ ಸಾವು, ಸಾರ್ವಜನಿಕರಿಂದ ಶಂಕಿತನ ಲಿಂಚಿಂಗ್ ..!ಬಾಲಕಿಯ ಹತ್ಯೆ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರ;
    ಬೆಳಗ್ಗೆಯೇ ಲೋಕಾಯುಕ್ತ ಬಿಗ್ ಬ್ಲಾಸ್ಟ್!54 ಕಡೆ ಏಕಕಾಲದಲ್ಲಿ ರೇಡ್… ಚಿನ್ನ, ನಗದು, ಮನೆ, ಜಮೀನುಗಳ ಮಹಾಪರ್ವತ ಪತ್ತೆ!
    ಜಾಗತಿಕ ಸಂಘರ್ಷದ ಮಧ್ಯೆ ಭಾರತ–ಯುಎಇ ಬಿಗ್ ಡೀಲ್! ತಂತ್ರಜ್ಞಾನ, ಇಂಧನ ಮತ್ತು ಭದ್ರತೆಯಲ್ಲಿ ಐತಿಹಾಸಿಕ ಒಗ್ಗಟ್ಟು.
    ನೀಟ್ ಪರೀಕ್ಷೆಯ ಎಡವಟ್ಟು….ಸುಳ್ಳು ತನಿಖಾ ವರದಿಯನ್ನು ಸರ್ಕಾರಕ್ಕೆ ನೀಡಿದ ಅಧಿಕಾರಿಗಳು!!?
    ಸಾರ್ವಜನಿಕ ಸ್ಥಳದಲ್ಲಿ ಕೈಕೈ ಮಿಲಾಯಿಸಿ ಜಗಳ ಮಾಡಿದ್ರೇ ಹುಷಾರ್…!