📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಹೆಣ್ಣು ಎಂಬ ಕನಿಕರ, ಸಿಗದ ಹಾಗೆ ಮಾಡಿದ ಮಾಯಾಂಗನೇ…

ಇತ್ತೀಚೆಗಿನ ದಿನದಲ್ಲಿ ನಡೆಯುತ್ತಿರುವ ಅನೇಕ ಕ್ರಿಮಿನಲ್ ಪ್ರಕರಣಗಳಲ್ಲಿ ಹೆಣ್ಣು ಮಕ್ಕಳ ಪಾತ್ರ ಪ್ರಮುಖವಾಗಿ ಕಂಡುಬರುತ್ತದೆ. ಯಾವ ಮಟ್ಟಕ್ಕೂ ಇಳಿಯಬಲ್ಲರು ಅನ್ನುವುದನ್ನು ಅವರ ವರ್ತನೆಯು ಪ್ರೂವ್ ಮಾಡುತ್ತಿದೆ. ಅಂತಹುದೇ ಒಂದು ಪ್ರಕರಣವು ರಾಷ್ಟ್ರ ರಾಜಧಾನಿಯಲ್ಲಿ ಪತ್ತೆಯಾಗಿದೆ ನೋಡಿ.
2016ರಲ್ಲಿ ಹರಿಯಾಣದ ಕೌಶಂಬಿ ಜಿಲ್ಲೆಯ ಮಹಾ ವಾಗತ್ ಪೊಲೀಸ್ ಠಾಣಾ ವ್ಯಾಪ್ತಿಯ ಅಲ್ವಾರ ಗ್ರಾಮದ ನಿವಾಸಿ ರಾಜು ತಿವಾರಿ ಎಂಬವರ ಜೊತೆಗೆ ಸದರ್ ಕೊತ್ವಾಲಿಯ ತೇವಾಂ ಗ್ರಾಮದ ಅಂಕಿತ ಶರ್ಮ ವಿವಾಹವು ಅದ್ದೂರಿಯಾಗಿ ನಡೆಯುತ್ತದೆ. ರಾಜು ತಿವಾರಿಯನ್ನು ಮದುವೆಯಾದ ಅಂಕಿತ ಶರ್ಮ, ತಿವಾರಿ ಮನೆಯ ಸೊಸೆಯಾಗಿ ಉತ್ತಮ ಹೆಸರನ್ನು ಸಂಪಾದಿಸಲಿಲ್ಲ. ಈ ಕಾರಣದಿಂದಾಗಿ ಕುಟುಂಬದಲ್ಲಿ ಒಂದಷ್ಟು ಗೊಂದಲಗಳು ಇದ್ದವು . ಅಷ್ಟೇ ಅಲ್ಲ, ಅಂಕಿತ ಶರ್ಮ ನಡತೆ ತೀವ್ರ ಚರ್ಚೆಗೂ ಕಾರಣವಾಗಿತ್ತು. ಪದೇ ಪದೇ ತವರು ಮನೆಗೆ ಹೋಗುತ್ತಿದ್ದ ಅಂಕಿತ್ ಶರ್ಮ, ಈ ಸಂದರ್ಭದಲ್ಲಿ ಇನ್ನೊಬ್ಬನ ಜೊತೆಗೆ ಸರಸವಾಡುತ್ತಿದ್ದಳು. ಈ ವಿಚಾರವಾಗಿ ರಾಜು ತಿವಾರಿ ಮನನೊಂದಿದ್ದ. ಅಂಕಿತ್ ಶರ್ಮಾ ತಂದೆ ತಾಯಿಯರಿಗೂ ತಿಳುವಳಿಕೆ ಹೇಳಲು ಹೇಳಿದ್ದರು ಪರಿಣಾಮ ಶೂನ್ಯವಾಗಿತ್ತು.
2024ರಲ್ಲಿ ಈ ಅಂಕಿತ್ ಶರ್ಮ, ಸ್ವತಃ ತನ್ನ ಚಿಕ್ಕಮ್ಮನ ಮಗ ರಾಮ್ ಆಲಿಯಾಸ್ ಸಂಕಲ್ಪ ಮಿಶ್ರ ಜೊತೆಗೆ ಓಡಿ ಹೋಗಿದ್ದಳು. ಈ ಸಂದರ್ಭದಲ್ಲಿ ಪಂಚಾಯಿತಿಗೆ ನಡೆದು ಎರಡು ಕುಟುಂಬದ ಹಿರಿಯರು ಮಾತನಾಡಿ ಇನ್ನು ಮುಂದೆ ಈ ರೀತಿಯ ತಪ್ಪು ಮಾಡುವುದಿಲ್ಲ ಎಂದು ಅಂಕಿತ್ ಶರ್ಮ ಕ್ಷಮೆ ಕೋರಿದ ನಂತರ ಅವತ್ತಿನ ಪ್ರಕರಣ ಸುಖಾಂತ್ಯವಾಗಿತ್ತು.
ಆದರೆ, ಇದೇ 2026ರ ಜನವರಿ 21ರಂದು ಅಂಕಿತ್ ಶರ್ಮ ಮನೆಯಲ್ಲಿದ್ದ ಚಿನ್ನ ಹಾಗೂ ನಗದು ಹಣವನ್ನು ದೋಚಿಕೊಂಡು ಪರಾರಿಯಾಗುತ್ತಾಳೆ. ಹಾಗೆ ಪರಾರಿಯಾದ ವಿಚಾರದಲ್ಲಿ ರಾಜು ತಿವಾರಿ ಮಹಾ ವಾಗತ್ ಪೊಲೀಸ್ ಠಾಣೆಯಲ್ಲಿ ಹೆಂಡತಿ ಕಾಣೆಯಾಗಿದ್ದರ ಬಗ್ಗೆ ದೂರು ದಾಖಲಿಸಿರುತ್ತಾರೆ.
ಯಾವಾಗ ಅಂಕಿತ್ ಶರ್ಮ ಕಾಣೆಯಾಗಿದ್ದಾಳೆ ಎನ್ನುವುದು ಗೊತ್ತಾಗುತ್ತದೆಯೋ, ಆಗ ಅಂಕಿತ್ ಶರ್ಮಾ ತಂದೆ ಸಹಿತ ಕೆಲವರು ಬಂದು ರಾಜು ತಿವಾರಿಯ ಮೇಲೆ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಪ್ರಕರಣವನ್ನು ದಾಖಲಿಸುತ್ತಾರೆ. ಇದರಿಂದಾಗಿ ರಾಜು ತಿವಾರಿ ಜೈಲು ಪಾಲಾಗುತ್ತಾರೆ. ಕಳೆದ ಜನವರಿಯಲ್ಲಿ ಜೈಲು ಪಾಲಾದ ರಾಜು ತಿವಾರಿಗೆ, ಈಗ ಜೈಲಿನಿಂದ ಬಿಡುಗಡೆಯಾಗುವ ಭಾಗ್ಯ ಬಂದಿದೆ. ಅಂಕಿತ ಶರ್ಮಾ ಹಾಗೂ ಆತನ ಪ್ರಿಯಕರ ಮತ್ತು ಅವಳ ತಂದೆಯು ಸೇರಿದಂತೆ ನಾಲ್ಕು ಜನರ ಮೇಲೆ ಗಂಭೀರ ಪ್ರಕರಣ ದಾಖಲಾಗಿದೆ ಮತ್ತು ಜೈಲಿನ ಹೊಳಕ್ಕೆ ಹೋಗಿದ್ದಾರೆ.
ಅಷ್ಟಕ್ಕೂ ಆಗಿದ್ದೇನು ಗೊತ್ತಾ?
ಅಂಕಿತ್ ಶರ್ಮಾ ಜನವರಿ 21ರಂದು ಒಡವೆ ಹಾಗೂ ಹಣದೊಂದಿಗೆ ಅದೇ ತನ್ನ ಚಿಕ್ಕಮ್ಮನ ಮಗ ಸಂಕಲ್ಪ ಮಿಶ್ರ ಜೊತೆ ದೆಹಲಿಗೆ ಪರಾರಿ ಯಾಗುತ್ತಾಳೆ. ಇತ್ತ ಈ ವಿಚಾರ ಅವಳ ತಂದೆಗೆ ಗೊತ್ತಿದ್ದರೂ ಸಹ, ಅವರು ರಾಜು ತಿವಾರಿಯ ಮೇಲೆ ವರದಕ್ಷಿಣೆ ಹಾಗೂ ಕೊಲೆ ಪ್ರಕರಣವನ್ನು ದಾಖಲಿಸುತ್ತಾರೆ. ರಾಜು ತಿವಾರಿ ಜೈಲಿಗೆ ಹೋಗುತ್ತಿದ್ದಂತೆಯೇ ಅಂಕಿತ್ ಶರ್ಮ ಸಂಕಲ್ಪ ಶರ್ಮನ ಜೊತೆ ದೆಹಲಿಯಲ್ಲಿ ಬಿಂದಾಸಾಗಿ ಎಂಜಾಯ್ ಮಾಡುತ್ತಿದ್ದಲು. ಈ ಒಂದು ವಿಚಾರ ಕೌಶಂಬಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅನಾಮಧೇಯ ವ್ಯಕ್ತಿಯಿಂದ ತಿಳಿದು ಬರುತ್ತದೆ. ಆ ಒಂದು ಮೆಸೇಜಿನ ಆಧಾರದ ಮೇಲೆ ಮಹಾವಾಗ ಪೊಲೀಸ್ ಠಾಣೆಯ ಪೊಲೀಸರು ದೆಹಲಿಯಲ್ಲಿ, ಸಕತ್ತಾಗಿ ಎಂಜಾಯ್ ಮಾಡುತ್ತಿದ್ದ ಅಂಕಿತ್ ಶರ್ಮಾ ಮನೆಯ ಬಾಗಿಲನ್ನು ಬಡಿಯುತ್ತಾರೆ. ಎದುರುಗಡೆ ಪೊಲೀಸರನ್ನು ಕಾಣುತ್ತಿದ್ದಂತೆಯೇ ಅಂಕಿತ್ ಶರ್ಮ ನಡುಗಿ ಹೋಗುತ್ತಾಳೆ. ತನ್ನ ಜೊತೆಗೆ ಕರೆದು ತಂದಿದ್ದ ಸಂಕಲ್ಪ ಶರ್ಮ, ತಪ್ಪಿಸಿಕೊಳ್ಳಲು ಹೆಣಗಾಡಿದರು ಪೊಲೀಸರು ಬಿಡಲಿಲ್ಲ. ಅವರಿಬ್ಬರನ್ನು ಹೆಡೆಮರಿ ಕಟ್ಟಿ ಹರಿಯಾಣಕ್ಕೆ ಕರೆದೊಯ್ದಿದ್ದಾರೆ ಪೊಲೀಸರು. ಈ ಎಲ್ಲಾ ವಿಚಾರವನ್ನು ಕೌಶಂಬಿ ಎಸ್ ಪಿ ರಾಜೇಂದ್ರ ಕುಮಾರ್ ತಿಳಿಸಿದ್ದಾರೆ. ವಿನಾಕಾರಣ ಜೈಲಿನೊಳಗಿದ್ದ ರಾಜ್ ತಿವಾರಿ ಬಂದ ಮುಕ್ತರಾಗಿದ್ದಾನೆ.

##CrimeCase #FalseAllegations #DowryCase##SocialAwareness#JusticeServed #HaryanaCase

COMMENTS

Login with Gmail to comment

ಇನ್ನಷ್ಟು ಸುದ್ದಿ

ಸಾಮಾಜಿಕ‌ ಕಾರ್ಯಕರ್ತರಿಗೆ ಹಾಗೂ ನಗರ ಸಭೆ ಪೌರಯುಕ್ತರಿಗೆ ಬಹಿರಂಗ ಸವಾಲು.ಶ್ರೀಮಂತರ ಅಕ್ರಮಗಳ ಬಗ್ಗೆ ಮೌನವೇಕೆ.‌‌?
ಘರ್ ವಾಪ್ಸಿ ಯಾದ ಯೋಗೇಶ್ ಶೆಟ್ಟಿ ಜೆಪ್ಪು
ಇರಾನ್ ದಾಳಿಗೆ ಬೆಂಜಿಮನೇತನ್ಯಹೋ ಕೊಲ್ಲಲ್ಪಟ್ಟಿದ್ದಾರಾ?
ಗ್ಯಾಸ್ ಪೈಪ್‍ಲೈನ್ ಸೋರಿಕೆ: ಅಣಕು ಪ್ರದರ್ಶನ
ಅಸ್ಸಾಂನಲ್ಲಿ ಮತದಾನದ ಹಿನ್ನೆಲೆ ಹಿಂಸಾಚಾರ: 30ಕ್ಕೂ ಹೆಚ್ಚು ಮಂದಿ ಗಾಯ, 7 ಜನರ ಬಂಧನ
🔴 ಪೊಲೀಸರ ಮೇಲಿನ ಹಿಡಿತ ಕಠಿಣ: PEBಗೆ ಹೆಚ್ಚಿದ ಅಧಿಕಾರ — ರಾಜ್ಯದ ದೊಡ್ಡ ಆಡಳಿತಾತ್ಮಕ ತೀರ್ಮಾನ
ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡಿಪಾರು ಆದೇಶ….
ವಿಷಪ್ರಾಶನ  ಪ್ರಕರಣದಲ್ಲಿ ಕಾರ್ಕಳ ಗಜರಿಯ ಹಾಸ್ಪಿಟಲ್ ತಪ್ಪು ಮಾಡಿತೇ?
ಹೋಳಿ ಮತ್ತು ರಂಜಾನ್ ಒಂದು ಜೀವವನ್ನೇ ನುಂಗಿತು..!
ಮನೆಯ ಲಾಕ್ ವ್ಯವಸ್ಥೆ ಇದ್ದರೂ, ಸುರಕ್ಷತೆ ಭೇದಿಸಲಾಗಿದೆ….!ಕುಟುಂಬ ದೇವಸ್ಥಾನಕ್ಕೆ -ಕಳ್ಳರು ಅದೇ ಮನೆ ಟಾರ್ಗೆಟ್..!
ಕಾರ್ಕಳದ ವೈದ್ಯಕೀಯ ವಿದ್ಯಾರ್ಥಿನಿ ಭೀಕರ  ಅಪಘಾತಕ್ಕೆ ಬಲಿ
🚨 “ಮಂಗಳೂರು ಜಿಲ್ಲಾಕಾರಾಗೃಹದಲ್ಲಿ ಗಲಾಟೆ: ಜೈಲು ಅಧೀಕ್ಷಕರ ಮೇಲೆಯೇ ಕೈದಿಗಳ ಹಲ್ಲೆಯತ್ನ!”
ರಾಜ್ಯಸಭೆಗೆ ಬಿಜೆಪಿಯಿಂದ 9 ಜನರ ಪಟ್ಟಿ ಬಿಡುಗಡೆ
50 ಸಾವಿರ ಸಾಲಕ್ಕೆ ಸವಣೂರು ಪೇಟೆಯಲ್ಲಿ ರಕ್ತಸಿಕ್ತ ಘರ್ಷಣೆ ..
ಪೆಟ್ರೋಲ್ ಡೀಸೆಲ್ ದರ ಏರಿಕೆ ತಡೆಯಲು ಕೇಂದ್ರದ ಮಹತ್ವದ ಕ್ರಮ 
ಇರಾನ್ ಬಿಕ್ಕಟ್ಟು ವೀಸಾ ವಿಸ್ತರಿಸಲು ವಿದೇಶಿ ಪ್ರಜೆಗಳು ಹತ್ತಿರದ FRRO ಅನ್ನು ಸಂಪರ್ಕಿಸಲು ಭಾರತ ಸಲಹೆ
🚢 “ಹಾರ್ಮುಝ್‌ನಿಂದ ಮಂಗಳೂರುವರೆಗೆ – 46,000 MT ಎಲ್‌ಪಿಜಿ ಯಮಹಾಯಾತ್ರೆ!
🚨 ಬೈಂದೂರಿನಲ್ಲಿ ಭಯಾನಕ ದಾಳಿ! ಕತ್ತಿಯಿಂದ ಹಲ್ಲೆ – ಆರೋಪಿ ಬಂಧನ
ಪ.ಪಂ ಮುಖ್ಯಾಧಿಕಾರಿ – 1 ಲಕ್ಷ ಲಂಚ ಸ್ವೀಕಾರದ ವೇಳೆ ರೆಡ್ ಹ್ಯಾಂಡ್!
ಸುರತ್ಕಲ್ ಹುಡುಗಿ ವಿಚಾರದಲ್ಲಿ ಹಲ್ಲೆ
ರಾಜ್ಯದ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಾಗಿ ಉನ್ನತೀಕರಿಸಲು 3900 ಕೋಟಿ ಮೀಸಲು
ಸುಳ್ಳು ಸ್ಟೇಟ್ಮೆಂಟ್ ನೀಡಿದ ಎಚ್ ಪಿ ಸಿ ಎಲ್
ಟಾಟಾ ಸನ್ಸ್ IPOಗೆ ಒತ್ತಾಯ: ಟ್ರಸ್ಟಿಗಳಲ್ಲಿ ಭಿನ್ನಾಭಿಪ್ರಾಯ ಹೆಚ್ಚಳ…!
ಅಗತ್ಯ ಮಾಹಿತಿ ಇಲ್ಲಿದೆ ಓದಿ..!“ಎಲ್‌ಪಿಜಿ ಬುಕಿಂಗ್‌ಗೆ ಹೊಸ ನಂಬರ್‌ಗಳು: ಆತಂಕ ಬೇಡ, ಸರಬರಾಜು ಶೀಘ್ರ ಸಾಮಾನ್ಯಕ್ಕೆ!”
ಮೂಡಬಿದಿರೆ ಇನ್‌ಸ್ಪೆಕ್ಟರ್ ಪ್ರಕರಣಕ್ಕೆ ಟ್ವಿಸ್ಟ್: ಆರೋಪ ಮಾಡಿದ ಮಹಿಳೆಯ ವಿರುದ್ಧವೇ ಸಹೋದರಿಯ ಬಾಂಬ್!
“ಗ್ಯಾರಂಟಿ “ಹಣದ ಮೇಲೆ ಆಯೋಗದ ಕಣ್ಣು: ಸಿಎಂ ಸಿಡಿಮಿಡಿ ..ರಾಜಕೀಯ ಕಿಡಿ!
“ಮಂಜಿನ ನಡುವೆ ಕ್ಷಣಾರ್ಧದಲ್ಲಿ ಮಾಯವಾದ ಮಗಳು”ಶ್ರೀನಂದಾ ಶವವಾಗಿ ಪತ್ತೆ…!
ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿಗೆ  ಪ್ರತಿದಾಳಿ ಯುಎಇ, ಬಹ್ರೇನ್, ಸೌದಿಯಲ್ಲಿ ಅಮೆರಿಕದ ನೆಲೆಗಳಿಗೆ ನಡುಕ.
ಡೇಟಾದಲ್ಲಿ ಸತ್ತಿದ್ದಾರೆ: ಬಡ ಮಹಿಳೆ ತಾನು ಜೀವಂತ ಸಾಬೀತುಪಡಿಸಲು ಹರಸಾಹಸ…ಬಡಜನರು “ಡೇಟಾ” ಅಲ್ಲ — ಅವರು ಜೀವಂತ ಮಾನವರು. 
ಹೆಚ್.ಪಿ.ವಿ. ಚುಚ್ಚು ಮದ್ದಿನ ಬಗ್ಗೆ ಗೊಂದಲ ಬೇಡ: ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ