📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಸಾಮಾಜಿಕ‌ ಕಾರ್ಯಕರ್ತರಿಗೆ ಹಾಗೂ ನಗರ ಸಭೆ ಪೌರಯುಕ್ತರಿಗೆ ಬಹಿರಂಗ ಸವಾಲು.ಶ್ರೀಮಂತರ ಅಕ್ರಮಗಳ ಬಗ್ಗೆ ಮೌನವೇಕೆ.‌‌?

ಉಡುಪಿ ನಗರಸಭೆ ಬರೀ ಬಡವರ ಅಕ್ರಮಗಳ ವಿರುದ್ಧ ಹೌಹಾರುವುದು ಬಿಟ್ರೆ ,ಶ್ರೀ ಮಂತರ ಅಕ್ರಮಗಳ ಬಗ್ಗೆ ಕಣ್ಮುಚ್ಚಿ ಕುಳಿತಿದೆ. ಮೊನ್ನೆ ಮೊನ್ನೆಯಷ್ಟೇ ನಗರಸಭೆ ಪಕ್ಕದಲ್ಲಿರುವ ಪ್ರಾಥಮಿಕ ಅರೋಗ್ಯ ಕೇಂದ್ರ ದ ಭೂಮಿಯಲ್ಲಿ ಜನಸಮಾನ್ಯರ ತೆರಿಗೆ ಕಟ್ಟುವ ಕಚೇರಿ ಮಾಡುವ ಉದ್ದೇಶಕ್ಕಾಗಿ ತಾತ್ಕಲಿಕ ಶೆಡ್ ಒಂದನ್ನು‌ ಕಟ್ಟಲು ಪ್ರಾರಂಭಿಸಿದ್ದರು,ಇದು ಗೊತ್ತಾಗುತ್ತಿದ್ದಂತೆ ರೆಕ್ಕೆ ಪುಕ್ಕ ಕಟ್ಟಿಕೊಂಡು, ಸ್ಪೈಡರ್ ಮ್ಯಾನ್ ( ಸ್ವಯಂಘೊಷಿತ ಸಾಮಾಜಿಕ ಕಾರ್ಯಕರ್ತ) ಫೋಟೊ ತೆಗೆದು ನಗರಸಭೆ ಅರೋಗ್ಯ ಇಲಾಖೆಗೆ ದೂರು ನೀಡಿದ್ದರು, ನಗರ ಸಭೆ ಅದೇ ವೇಗದಲ್ಲಿ ಅದನ್ನು ತೆರವುಗೊಳಿಸಿದ್ದರು.

ಅದರೆ ನಮ್ಮ ಬಹಿರಂಗ ಪ್ರಶ್ನೆ ಏನು ಅಂದ್ರೆ ಉಡುಪಿಯಲ್ಲಿ ಇಷ್ಟೊಂದು ಅಕ್ರಮ ಕಟ್ಟಡಗಳು ತಲೆ ಎತ್ತಿವೆ . ಒಬ್ಬನೇ ಒಬ್ಬ ಸಾಮಾಜಿಕ‌ ಕಾರ್ಯಕರ್ತ ಧ್ವನಿ ಎತ್ತಿಲ್ಲ. ಪುಟ್ಟ ಶೆಡ್ ವಿರುದ್ದ ದೂರು‌ ಕೊಟ್ಟವರು ನಗರಸಭೆ ಪಕ್ಕದಲ್ಲೇ ಕಟ್ಟಿರುವ ಚರ್ಚಿನ ಅಕ್ರಮ‌ ಕಟ್ಟಡದ ವಿರುದ್ದ ಯಾಕೆ ದೂರು ಕೊಟ್ಟಿಲ್ಲ.? ನಗರಸಭೆ ಯಾಕೆ ಚರ್ಚ್ ವಿರುದ್ದ ಕ್ರಮ ಕೈಗೊಂಡಿಲ್ಲ. ನಗರ ಸಭೆ ಪೌರಯುಕ್ತರು ಚರ್ಚ್ ಅಡಳಿತ ಮಂಡಳಿಯೊಂದಿಗೆ ಕೈ ಜೋಡಿಸಿಕೊಂಡತ್ತಿದೆ.

ಅಲ್ಲ ಸ್ವಾಮೀ ಕಾನೂನು ಎಲ್ಲರಿಗೂ ಒಂದೇ ತಾನೇ…ಬಡವನ‌ ಶೆಡ್ ತೆರವು ಮಾಡುವುದಾದರೆ ಅಕ್ರಮ‌ ಚರ್ಚ್ ಕಟ್ಟಡ ಯಾಕೆ ತೆರವು ಮಾಡ್ತಾ ಇಲ್ಲ. ಪೌರಾ ಯುಕ್ತರು ಹಾಗೂ ಸಾಮಾಜಿಕ ಕಾರ್ಯ ಕರ್ತರ ಮೌನವೇಕೆ…?

ಇದೆಷ್ಟೇ ಅಲ್ಲ ನಗರದ ಸಿಟಿ ಸೆಂಟರ್ ಬಳಿ ನಿರ್ಮಾಣಗೊಂಡಿರುವ ಅಕ್ರಮ ಫುಡ್ ಸ್ಟಾಲ್ಗಳ ಬಗ್ಗೆ ಯಾಕೆ ಕ್ರಮ ಇಲ್ಲ.ಇದು ಕೂಡ ಅಕ್ರಮ ಅಲ್ಲವೇ…? ಅಭರಣ ಡೈಮಂಡ್ಸ್ ಕಟ್ಟಡ ಅಕ್ರಮ‌ ಅಲ್ಲವೇ…? ಇದನ್ನ ಯಾಕೆ ತೆರವುಗೊಳಿಸುತ್ತಿಲ್ಲ. ಬನ್ನಂಜೆ ಬಳಿ‌ ಡಿವೈಡರ್ ತೆರವುಗೊಳಿಸಿದ್ದು ಅಕ್ರಮ ಅಲ್ಲವೇ. ಕ್ರಮ ಯಾಕಿಲ್ಲ..?

ಮಲ್ಪೆ ಪೇಟೆಯಲ್ಲಿ ಬಂದರು ಇಲಾಖೆ ಭೂಮಿಯಲ್ಲಿ ಅಯ್ಯಪ್ಪ ಭಕ್ತರು ಕಟ್ಟಿರುವ ವಾಣಿಜ್ಯ‌ ಕಟ್ಟಡ ಅಕ್ರಮ ಅಲ್ಲವೇ….? ಮಲ್ಪೆ ಫಿಶ್ ಸೆಂಟರ್ ಎದುರುಗಡೆ ಕಟ್ಟಿರುವ ಫುಡ್ ಕಾರ್ನರ್ ಗಳು ಅಕ್ರಮ ಅಲ್ಲವೇ..?

ಕುಂಜಿಬೆಟ್ಟು ಬಳಿ ಮಾರ್ವಾಡಿಯೊಬ್ಬ ಕಟ್ಟುತ್ತಿರುವ ಅಕ್ರಮ ಕಟ್ಟಡ ವಿರುದ್ದ ಯಾಕೆ ನಗರಸಭೆ ಕಮ್ಮಿಷನರ್ ಅಬ್ಬರಿಸುವುದಿಲ್ಲ.
ಝಣ ಝಣ ಕಾಂಚಣಕ್ಕೆ ತಲೆ ಬಾಗಿದ್ದರಾ…..ಕಮ್ಮಿಷನರ್ …! ಅಥವಾ ಕಾಂಗ್ರೆಸ್ ಪುಢಾರಿಗಳ ಒತ್ತಡಕ್ಕೆ ಅಧಿಕಾರಿಗಳು ಮಣಿಯುತ್ತಿದ್ದಾರಾ..‌?
ವಿದ್ಯಾವಂತ ಅಧಿಕಾರಿಗಳು ಈ ರೀತಿ ಕೀಳು ಮಟ್ಟಕ್ಕೆ ಇಳಿದಿರುವುದು ಉಡುಪಿ ಜಿಲ್ಲೆಗೆ ಶೋಭೆ ತರುವಂತಹದ್ದಲ್ಲ. ನಗರಸಭೆ ಯುವ ಪೌರಯುಕ್ತರ ಮೇಲೆ ಜನ ವಿಶ್ವಾಸ ಕಳೆದುಕೊಳ್ಳುವ ಮಟ್ಟಕ್ಕೆ ಪರಿಸ್ಥಿತಿ ನಿರ್ಮಾಣವಾಗಿದೆ.ಅದಷ್ಟು ಬೇಗ ಪೌರಯುಕ್ತರು ಈ ಮೇಲಿನ ಎಲ್ಲ ಅಕ್ರಮ ಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ಸಣ್ಣ ಪುಟ್ಟ ವ್ಯವಹಾರ ಮಾಡುವವರ ಮೇಲೆ ಗದಾಪ್ರಹಾರ ಮಾಡುವ ಬದಲು ಚರ್ಚ್ ಬಿಲ್ಡಿಂಗ್ , ಸಿಟಿಸೆಂಟರ್ ಅಕ್ರಮ ಫುಡ್ ಸ್ಟಾಲ್ ಗಳು, ಅಭರಣ ಡೈಮಂಡ್ ಕಟ್ಟಡ, ಬನ್ನಂಜೆ‌ ಡಿವೈಡರ್ ಸೇರಿದಂತೆ ಹತ್ತಾರು ಅಕ್ರಮಗಳ‌ ವಿರುದ್ದ ಕ್ರಮ ಕೈಗೊಂಡು ಉಡುಪಿ ಜನ ನಿಮ್ಮ ಮೇಲೆ ಇಟ್ಟಿರುವ ಗೌರವವನ್ನು ಹೆಚ್ಚಿಸಿಕೊಳ್ಳಿ, ಇದು ಎಲ್ಲರಿಗೂ ಅನ್ವಯ.

##SocialWorkers #MunicipalCouncil#illegal construction#latest news#PublicChallenge #SilenceOnCorruption#SpeakUp#Udupi nagarasabhe#udupi news

COMMENTS

Login with Gmail to comment

ಇನ್ನಷ್ಟು ಸುದ್ದಿ

ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಲು ಯತ್ನಿಸಿದ ತಾಯಿಯ ಜೊತೆಗೆ ಮಗಳನ್ನು ಕಳುಹಿಸಲು ಕೋರ್ಟ್ ನಕಾರ 
ಬಾಲಕಾರ್ಮಿಕ ಪತ್ತೆ : ಮಾಲೀಕನಿಗೆ ಜೈಲು, ದಂಡ
ರಾಜಕೀಯ ಸುದ್ದಿ ಅಂದರೆ ಬೋರ್ ಅಂತ ಅನ್ನಿಸುವರಿಗೆ ಇದು ಒಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಎಪಿಸೋಡ್!!!
ಹಿರಿಯಡ್ಕದ ಬಾರಿನಲ್ಲಿ ಸರಿ ಕುಡಿದು ಗುಂಡಾಗಿರಿ, ಬಿಯರ್ ಬಾಟಲಿಯಿಂದ ಹಲ್ಲೆ
ಇ-ಸಿಗರೇಟ್‌ಗೆ ಭಾರಿ ಡಿಮ್ಯಾಂಡ್ – ಗೋಣಿ ಚೀಲದಲ್ಲಿಸಂಗ್ರಹಿಸಿಟ್ಟ ಆರೋಪಿ ಬಂಧನ..!
ವಿಟ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಯಲ್ಲಿ ಗಲಾಟೆ:
“ಆ್ಯಕ್ಷನ್ ಸಿಎಂ” ಡಿಕೆ ಶಿವಕುಮಾರ್ ತಾಳ್ಮೆಯಿಂದ ತಾಕತ್ತಿನವರೆಗೆ…ಆಡಳಿತದ ಅಬ್ಬರ ಶುರು!ಏನೇನ್ ಹೇಳಿದ್ರು ?ಕರ್ನಾಟಕದಲ್ಲಿ ಹೊಸ ಆಡಳಿತ ಶೈಲಿಯ ಆರಂಭವೇ?
ಪಿಸ್ತೂಲ್ ತೋರಿಸಿ ಬೆದರಿಸಿ ಪರಾರಿಯಾಗಿದ್ದ ಯುವಕ ಬಂಧನ
ಪುಲ್ವಾಮಾ ದಾಳಿಯ ಮಾಸ್ಟರ್ಮೈಂಡ್ ಹಮ್ಜಾ ಬುರ್ಹಾನ್ ಹತ್ಯೆ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ರಹಸ್ಯ ಗುಂಡಿನ ದಾಳಿ
ದೊಡ್ಡ ಬಜೇಟ್  ತುಳು ಸಿನಿಮಾ`ಗಜಾನನ ಕ್ರಿಕೆಟರ್ಸ್’ ಮೇ 22 ರಂದು ತೆರೆಗೆ
ಸುಬ್ರಹ್ಮಣ್ಯದಲ್ಲಿ ಭಟ್ಟರಿಗೆ ದಕ್ಷಿಣೆ ಕೊಡುವoತಿಲ್ಲ- ಸಿಟ್ಟಿಗೆಳುತ್ತಿರುವ ಪುರೋಹಿತರು
“ಕುಮಾರಸ್ವಾಮಿ ಅವರನ್ನು ಹರಕೆ ಕುರಿ ಮಾಡುತ್ತಿದ್ದಾರೆ” – ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷರ ವಾಗ್ದಾಳಿ
₹119 ಕೋಟಿ ವ್ಯತ್ಯಾಸ ಸಣ್ಣ ವಿಷಯನಾ….ಏನಿದು ತಲೈವಾ..!
ಮಂಡ್ಯಒಂದೇ ಕುಟುಂಬದ ಐವರ ಜಲಸಮಾಧಿ: ಕಾವೇರಿ ಒಡಲಲ್ಲಿವಿಧಿಯ ಕ್ರೂರ ಆಟಕ್ಕೆ ಕಣ್ಣೀರ ಕಡಲಾದ ಮುತ್ತತ್ತಿ!
ಗಾಯಕನಿಗಿಂತ ದೊಡ್ಡದಾಗಿ ಕಾಣಿಸಿಕೊಂಡ ನೋಟುಗಳ ರಾಶಿ!ನೋಟುಗಳ ಮಧ್ಯೆಯೂ ನಿಲ್ಲದ ಗೋಪಾಲ್ ಸಾಧು ಗಾನಾಸುಧೆ !
ಅಕ್ರಮ ಗಡಿ ದಾಟಿದವರಿಗೆ ಈಗ ಭಾರತದಲ್ಲಿ ನೋ ಎಂಟ್ರಿ!ಬಾಂಗ್ಲಾ ಗಡಿಯಲ್ಲಿ ಎನ್‌ಆರ್‌ಸಿ ಅಸ್ತ್ರ: ರಾಜಕೀಯಕ್ಕಿಂತ ರಾಷ್ಟ್ರೀಯ ಭದ್ರತೆ ಮುಖ್ಯ
ಮಾರ್ಕ್ಸ್ 90%, ಆದರೆ 19ಕ್ಕೆ ಕ್ರೂರ ಅಪರಾಧಿ!ಕನಸುಗಳಿದ್ದ ಹುಡುಗನೊಬ್ಬ ಕಟುಕನಾದ ದುರಂತ ಕಥೆ”
AYS TROPHY–2026 ಯಶಸ್ವಿಯಾಗಿಸಲು ನಿಮ್ಮ ಉಪಸ್ಥಿತಿ ಅಗತ್ಯ.
ಭೀಕರ ಅಪಘಾತ ಮಹಿಳೆ ಬಲಿ
ವಿದ್ಯಾರ್ಥಿಯೊಬ್ಬ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ..
ಮಂಗಳೂರು ಗ್ರಾಮಾಂತರ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ
ಸ್ವಯಂಪ್ರೇರಿತ ಲೈಂಗಿಕ ಕೆಲಸ -ವೇಶ್ಯಾವಾಟಿಕೆ ವೃತ್ತಿ ಅಪರಾಧವಲ್ಲ ಕಾನೂನುಬಾಹಿರವಲ್ಲ! -ಇತಿಹಾಸ ಸೃಷ್ಟಿಸಿದ ಸುಪ್ರೀಂ ಕೋರ್ಟ್!
ಮಕ್ಕಳ ಸುರಕ್ಷತೆಯೇ ಮುಖ್ಯ – ಸಂದೇಶ ಕೊಟ್ಟ ಹೈಕೋರ್ಟ್
ಮಹಿಳಾ ಕ್ರಿಕೆಟ್ ವಿಶ್ವಕಪ್ 2026 ಆರಂಭ:ಗಾಯ, ನೋವು, ಟೀಕೆ… ಎಲ್ಲವನ್ನೂ ಮೀರಿ ವಿಶ್ವಕಪ್‌ನಲ್ಲಿ ಭಾರತದ ಮಹಿಳಾ ಪಡೆ!
ಭಾರತದ 9 ರಾಜ್ಯದ 8.18 ಕೋಟಿ ಮತದಾರರನ್ನು ಕೈ ಬಿಡಲಾಗಿದ್ದು ,ಅವರ ಕಥೆ ಏನು?
ರೇಪ್ ಆರೋಪಿಗೆ ಹೂಮಳೆ, ಹೂವಿನಹಾರ,ಘೋಷಣೆ, ರಾಜಕೀಯ ರೀತಿ ರೋಡ್ ಶೋ! ಉತ್ತರ ಪ್ರದೇಶದ ವೈರಲ್ ವಿಡಿಯೋಗೆ ದೇಶಾದ್ಯಂತ ಆಕ್ರೋಶ
ಭಾರತದಲ್ಲಿ ಎಚ್‌ಪಿವಿ (HPV) ಲಸಿಕೆ ಕಾರ್ಯಕ್ರಮ ಹೆಣ್ಣೆತ್ತವರು ತಿಳಿದುಕೊಳ್ಳಲೇಬೇಕಾದ ವಿಚಾರ
ತಿರುಮಲ ತಿಮ್ಮಪ್ಪನ 3,550 ಮೆಟ್ಟಿಲು ಹತ್ತಿದ 116 ವರ್ಷದ ನವನೀತಮ್ಮ ಕರ್ನಾಟಕದ ಶತಾಯುಷಿ!
ಡ್ರೋನ್ ದಾಳಿಯ ನಂತರ ಬಹ್ರೇನ್‌ನಲ್ಲಿ ಕನಿಷ್ಠ 32 ಜನರಿಗೆ ಗಾಯ
ಆಂಧ್ರದ ಪುಟ್ಟಪರ್ತಿಯಲ್ಲಿ ಅಡಗಿದೆ ಆ ದೊಡ್ಡ ರಹಸ್ಯ!ಆಕಾಶದಲ್ಲಿ ಕಣ್ಣಿಗೆ ಕಾಣದಂತೆ ಬೇಟೆಯಾಡುವ ಸಮಯ ಹತ್ತಿರದಲ್ಲಿದೆ!