📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಸಾಮಾಜಿಕ‌ ಕಾರ್ಯಕರ್ತರಿಗೆ ಹಾಗೂ ನಗರ ಸಭೆ ಪೌರಯುಕ್ತರಿಗೆ ಬಹಿರಂಗ ಸವಾಲು.ಶ್ರೀಮಂತರ ಅಕ್ರಮಗಳ ಬಗ್ಗೆ ಮೌನವೇಕೆ.‌‌?

ಉಡುಪಿ ನಗರಸಭೆ ಬರೀ ಬಡವರ ಅಕ್ರಮಗಳ ವಿರುದ್ಧ ಹೌಹಾರುವುದು ಬಿಟ್ರೆ ,ಶ್ರೀ ಮಂತರ ಅಕ್ರಮಗಳ ಬಗ್ಗೆ ಕಣ್ಮುಚ್ಚಿ ಕುಳಿತಿದೆ. ಮೊನ್ನೆ ಮೊನ್ನೆಯಷ್ಟೇ ನಗರಸಭೆ ಪಕ್ಕದಲ್ಲಿರುವ ಪ್ರಾಥಮಿಕ ಅರೋಗ್ಯ ಕೇಂದ್ರ ದ ಭೂಮಿಯಲ್ಲಿ ಜನಸಮಾನ್ಯರ ತೆರಿಗೆ ಕಟ್ಟುವ ಕಚೇರಿ ಮಾಡುವ ಉದ್ದೇಶಕ್ಕಾಗಿ ತಾತ್ಕಲಿಕ ಶೆಡ್ ಒಂದನ್ನು‌ ಕಟ್ಟಲು ಪ್ರಾರಂಭಿಸಿದ್ದರು,ಇದು ಗೊತ್ತಾಗುತ್ತಿದ್ದಂತೆ ರೆಕ್ಕೆ ಪುಕ್ಕ ಕಟ್ಟಿಕೊಂಡು, ಸ್ಪೈಡರ್ ಮ್ಯಾನ್ ( ಸ್ವಯಂಘೊಷಿತ ಸಾಮಾಜಿಕ ಕಾರ್ಯಕರ್ತ) ಫೋಟೊ ತೆಗೆದು ನಗರಸಭೆ ಅರೋಗ್ಯ ಇಲಾಖೆಗೆ ದೂರು ನೀಡಿದ್ದರು, ನಗರ ಸಭೆ ಅದೇ ವೇಗದಲ್ಲಿ ಅದನ್ನು ತೆರವುಗೊಳಿಸಿದ್ದರು.

ಅದರೆ ನಮ್ಮ ಬಹಿರಂಗ ಪ್ರಶ್ನೆ ಏನು ಅಂದ್ರೆ ಉಡುಪಿಯಲ್ಲಿ ಇಷ್ಟೊಂದು ಅಕ್ರಮ ಕಟ್ಟಡಗಳು ತಲೆ ಎತ್ತಿವೆ . ಒಬ್ಬನೇ ಒಬ್ಬ ಸಾಮಾಜಿಕ‌ ಕಾರ್ಯಕರ್ತ ಧ್ವನಿ ಎತ್ತಿಲ್ಲ. ಪುಟ್ಟ ಶೆಡ್ ವಿರುದ್ದ ದೂರು‌ ಕೊಟ್ಟವರು ನಗರಸಭೆ ಪಕ್ಕದಲ್ಲೇ ಕಟ್ಟಿರುವ ಚರ್ಚಿನ ಅಕ್ರಮ‌ ಕಟ್ಟಡದ ವಿರುದ್ದ ಯಾಕೆ ದೂರು ಕೊಟ್ಟಿಲ್ಲ.? ನಗರಸಭೆ ಯಾಕೆ ಚರ್ಚ್ ವಿರುದ್ದ ಕ್ರಮ ಕೈಗೊಂಡಿಲ್ಲ. ನಗರ ಸಭೆ ಪೌರಯುಕ್ತರು ಚರ್ಚ್ ಅಡಳಿತ ಮಂಡಳಿಯೊಂದಿಗೆ ಕೈ ಜೋಡಿಸಿಕೊಂಡತ್ತಿದೆ.

ಅಲ್ಲ ಸ್ವಾಮೀ ಕಾನೂನು ಎಲ್ಲರಿಗೂ ಒಂದೇ ತಾನೇ…ಬಡವನ‌ ಶೆಡ್ ತೆರವು ಮಾಡುವುದಾದರೆ ಅಕ್ರಮ‌ ಚರ್ಚ್ ಕಟ್ಟಡ ಯಾಕೆ ತೆರವು ಮಾಡ್ತಾ ಇಲ್ಲ. ಪೌರಾ ಯುಕ್ತರು ಹಾಗೂ ಸಾಮಾಜಿಕ ಕಾರ್ಯ ಕರ್ತರ ಮೌನವೇಕೆ…?

ಇದೆಷ್ಟೇ ಅಲ್ಲ ನಗರದ ಸಿಟಿ ಸೆಂಟರ್ ಬಳಿ ನಿರ್ಮಾಣಗೊಂಡಿರುವ ಅಕ್ರಮ ಫುಡ್ ಸ್ಟಾಲ್ಗಳ ಬಗ್ಗೆ ಯಾಕೆ ಕ್ರಮ ಇಲ್ಲ.ಇದು ಕೂಡ ಅಕ್ರಮ ಅಲ್ಲವೇ…? ಅಭರಣ ಡೈಮಂಡ್ಸ್ ಕಟ್ಟಡ ಅಕ್ರಮ‌ ಅಲ್ಲವೇ…? ಇದನ್ನ ಯಾಕೆ ತೆರವುಗೊಳಿಸುತ್ತಿಲ್ಲ. ಬನ್ನಂಜೆ ಬಳಿ‌ ಡಿವೈಡರ್ ತೆರವುಗೊಳಿಸಿದ್ದು ಅಕ್ರಮ ಅಲ್ಲವೇ. ಕ್ರಮ ಯಾಕಿಲ್ಲ..?

ಮಲ್ಪೆ ಪೇಟೆಯಲ್ಲಿ ಬಂದರು ಇಲಾಖೆ ಭೂಮಿಯಲ್ಲಿ ಅಯ್ಯಪ್ಪ ಭಕ್ತರು ಕಟ್ಟಿರುವ ವಾಣಿಜ್ಯ‌ ಕಟ್ಟಡ ಅಕ್ರಮ ಅಲ್ಲವೇ….? ಮಲ್ಪೆ ಫಿಶ್ ಸೆಂಟರ್ ಎದುರುಗಡೆ ಕಟ್ಟಿರುವ ಫುಡ್ ಕಾರ್ನರ್ ಗಳು ಅಕ್ರಮ ಅಲ್ಲವೇ..?

ಕುಂಜಿಬೆಟ್ಟು ಬಳಿ ಮಾರ್ವಾಡಿಯೊಬ್ಬ ಕಟ್ಟುತ್ತಿರುವ ಅಕ್ರಮ ಕಟ್ಟಡ ವಿರುದ್ದ ಯಾಕೆ ನಗರಸಭೆ ಕಮ್ಮಿಷನರ್ ಅಬ್ಬರಿಸುವುದಿಲ್ಲ.
ಝಣ ಝಣ ಕಾಂಚಣಕ್ಕೆ ತಲೆ ಬಾಗಿದ್ದರಾ…..ಕಮ್ಮಿಷನರ್ …! ಅಥವಾ ಕಾಂಗ್ರೆಸ್ ಪುಢಾರಿಗಳ ಒತ್ತಡಕ್ಕೆ ಅಧಿಕಾರಿಗಳು ಮಣಿಯುತ್ತಿದ್ದಾರಾ..‌?
ವಿದ್ಯಾವಂತ ಅಧಿಕಾರಿಗಳು ಈ ರೀತಿ ಕೀಳು ಮಟ್ಟಕ್ಕೆ ಇಳಿದಿರುವುದು ಉಡುಪಿ ಜಿಲ್ಲೆಗೆ ಶೋಭೆ ತರುವಂತಹದ್ದಲ್ಲ. ನಗರಸಭೆ ಯುವ ಪೌರಯುಕ್ತರ ಮೇಲೆ ಜನ ವಿಶ್ವಾಸ ಕಳೆದುಕೊಳ್ಳುವ ಮಟ್ಟಕ್ಕೆ ಪರಿಸ್ಥಿತಿ ನಿರ್ಮಾಣವಾಗಿದೆ.ಅದಷ್ಟು ಬೇಗ ಪೌರಯುಕ್ತರು ಈ ಮೇಲಿನ ಎಲ್ಲ ಅಕ್ರಮ ಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ಸಣ್ಣ ಪುಟ್ಟ ವ್ಯವಹಾರ ಮಾಡುವವರ ಮೇಲೆ ಗದಾಪ್ರಹಾರ ಮಾಡುವ ಬದಲು ಚರ್ಚ್ ಬಿಲ್ಡಿಂಗ್ , ಸಿಟಿಸೆಂಟರ್ ಅಕ್ರಮ ಫುಡ್ ಸ್ಟಾಲ್ ಗಳು, ಅಭರಣ ಡೈಮಂಡ್ ಕಟ್ಟಡ, ಬನ್ನಂಜೆ‌ ಡಿವೈಡರ್ ಸೇರಿದಂತೆ ಹತ್ತಾರು ಅಕ್ರಮಗಳ‌ ವಿರುದ್ದ ಕ್ರಮ ಕೈಗೊಂಡು ಉಡುಪಿ ಜನ ನಿಮ್ಮ ಮೇಲೆ ಇಟ್ಟಿರುವ ಗೌರವವನ್ನು ಹೆಚ್ಚಿಸಿಕೊಳ್ಳಿ, ಇದು ಎಲ್ಲರಿಗೂ ಅನ್ವಯ.

##SocialWorkers #MunicipalCouncil#illegal construction#latest news#PublicChallenge #SilenceOnCorruption#SpeakUp#Udupi nagarasabhe#udupi news

COMMENTS

Login with Gmail to comment

ಇನ್ನಷ್ಟು ಸುದ್ದಿ

ಉಡುಪಿಯಲ್ಲಿ ಆಡಳಿತ ನಡೆಸುತ್ತಿರುವುದು ಜನವಿರೋಧಿ ಜಿಲ್ಲಾಡಳಿತವೇ?
“ಕಾಂತರಾ” ಖ್ಯಾತಿಯ ಸಪ್ತಮಿ ಗೌಡ, ದುಮುಕಿದ್ದು  ಹೋರಾಟದ ಅಂಗಳಕ್ಕೆ
ಕೊಲೆ ಆರೋಪಿಗಳ ಕಾರು ಮಾಣಿಯಲ್ಲಿ ಪತ್ತೆ ….!
ಮಣಿಪಾಲ ಜೆಇಇ ಮೇನ್ಸ್ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಪ್ರಯತ್ನ….
ಸಿಐಡಿ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್: ವಂಚಕರ ಬಲೆಯಿಂದ ಜಸ್ಟ್ ಎಸ್ಕೇಪ್
ವಿಟ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಯಲ್ಲಿ ಗಲಾಟೆ:
 “ಮೀನುಗಾರರ ಡೀಸೆಲ್ & ಸಿಲಿಂಡರ್ ಸಮಸ್ಯೆಗೆ ಸರ್ಕಾರದ ತುರ್ತು ಹಸ್ತಕ್ಷೇಪ -ಇಂಧನ ಭರವಸೆ: ಮಂಗಳೂರು ಬಂದರಿನಲ್ಲಿ ತುರ್ತು ಕ್ರಮ”-
ಒಂದೇ ಫ್ಲಾಟ್ ಇಬ್ಬಿಬ್ಬಿರ ಹೆಸರಲ್ಲಿ ..!ಡಬಲ್ ಡಾಕ್ಯುಮೆಂಟ್ ದಂಧೆ ಬಯಲು –ಕೋಟಿ ಕೋಟಿ ವಂಚನೆ ಮಾಡಿ ಆರೋಪಿ ಪರಾರಿ! ರಿಯಲ್ ಎಸ್ಟೇಟ್ ಶಾಕ್….
ಎಲ್ಲರಿಗೂ ಯುಗಾದಿ ಹಬ್ಬ… ಆದರೆ ಈ ಗ್ರಾಮಗಳಲ್ಲಿ ಭಯ ಮೌನ…ಹಬ್ಬ ಇಲ್ಲ…!ಒಂದು ವಿಚಿತ್ರ ಕಥೆ!
ಪಿಸ್ತೂಲ್ ತೋರಿಸಿ ಬೆದರಿಸಿ ಪರಾರಿಯಾಗಿದ್ದ ಯುವಕ ಬಂಧನ
ವಿಪರೀತ ಸೆಕೆಯಿಂದ ಬಳಲುತ್ತಿರುವಾಗಲೇ ಕರೆಂಟ್ ತೆಗೆದ ದುಷ್ಟ ಮೆಸ್ಕಾಂ
ಆನ್ಲೈನ್ ಶೇರಿಂಗ್ ಹಗರಣ: ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು.
ಕ್ರಿಕೆಟ್ pad gloves ಒಳಗೆ ಕೋಟಿ ಕೋಟಿ ಕೊಕೇನ್!
ಕೇವಲ “Aunty” ಅಂತ ಅಂದಿದಕ್ಕೆ 2 ಲಕ್ಷ ದಂಡ…!
ಕನ್ನಡದ ನೆಲದಲ್ಲಿ ಕನ್ನಡಕ್ಕೇ ಗೇಟ್ ಪಾಸ್: ಇವರು ಕರ್ನಾಟಕದ ಸಚಿವರೊ⁉️ಇಂಗ್ಲೆಂಡಿನ ಪ್ರತಿನಿಧಿಯೋ?
ಏಪ್ರಿಲ್ 1, 2026ರಿಂದಲೇ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ
ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಸಂಪನ್ಮೂಲ ಕೇಂದ್ರ ಉದ್ಘಾಟನೆ, ಜಾಗೃತಿ ಕಾರ್ಯಕ್ರಮ
ಐಪಿಎಲ್ ಇತಿಹಾಸದಲ್ಲೇ ಸುಮಾರು ₹230 ಕೋಟಿಗೂ ಅಧಿಕ ಒಟ್ಟು ಸಂಭಾವನೆ ಪಡೆದ ಆಟಗಾರನಾಗಿ ಕೊಹ್ಲಿ ದಾಖಲೆ…ಯ ಹಿಂದಿರುವ ಅಸಲಿ ಕಥೆ…!
ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಹೆಸರಲ್ಲಿ ನಡಿತಿರೋದೇನು?
35 ವಾರಂಟ್ ಇದ್ದ ಆರೋಪಿಯು ವಿದೇಶದಿಂದ ಮರಳುತ್ತಿದ್ದಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ
ಜನಿವಾರಕ್ಕೆ ಕೈ ಹಾಕಿದವರು, ಪರ್ಮನೆಂಟ್ ಮನೆಗೆ ಹೋಗುವ ದಾರಿಯಲ್ಲಿ….
ಕೊನೆಗೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಿತೀಶ್ ಕುಮಾರ್
ಪ್ರಧಾನಿ ಮೋದಿ ನೆದರ್ಲ್ಯಾಂಡ್ ಭೇಟಿ ಭಾರತ ಸಹಕಾರದ ಸೇತುವೆ ಕಟ್ಟುವ ದ್ವಿಪಕ್ಷೀಯ ಸಂಬಂಧಗಳ ವಿಸ್ತರಣೆ…
ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ
“ಧುರಂಧರ್” ನಟ ರಣವೀರ್ ಸಿಂಗ್‌ ವಿರುದ್ಧ ಇಡೀ ಬಾಲಿವುಡ್ ಒಕ್ಕೂಟವೇ ತಿರುಗಿಬಿದ್ದಿದ್ದೇಕೆ? shocking ₹45 ಕೋಟಿ ವಿವಾದದ ಅಸಲಿ ಕಥೆ ಇಲ್ಲಿದೆ!
🛑 ನಾಗರಮಠದಲ್ಲಿ ಅವೈಜ್ಞಾನಿಕ ಮರಳುಗಾರಿಕೆ ವಿರುದ್ಧ ಗ್ರಾಮಸ್ಥರ ಆಕ್ರೋಶ
ಹೆಸರು ಬದಲಾವಣೆ ಪಶ್ಚಿಮ ಬಂಗಾಳ ಪೆಂಡಿಂಗ್, ಕೇರಳ ಪ್ರಗತಿಯಲ್ಲಿ
ಗೃಹಲಕ್ಷ್ಮಿ ಫಲಾನುಭವಿಗಳೇ ಗಮನಿಸಿ: ಹಣ ಕ್ರೆಡಿಟ್ ಆಗ್ಬೇಕಾದ್ರೆ ಇನ್ಮುಂದೆ ಬಯೋಮೆಟ್ರಿಕ್ ಕಡ್ಡಾಯ!
ತೈಲ ಟ್ಯಾಂಕರ್ ಮೇಲೆ ಇರಾನ್ ಆತ್ಮಹತ್ಯಾ ದೋಣಿ ದಾಳಿ – ಭಾರತೀಯ ನಾವಿಕ ಸಾವು
🎬 ಸೀನ್ ಹಿಂದೆ ಇರುವ ಸೀಕ್ರೆಟ್ ಏನು?ಧುರಂಧರ್ ಚಿತ್ರದ ಈ ಸಣ್ಣ ಕ್ಷಣವೇ ಈಗ ದೊಡ್ಡ ಸೆನ್ಸೇಶನ್ ಆಗಿದೆ…ಮುಸ್ತಫಾ ಫುಲ್ ಖುಷ್