📍 Karavali Maruta
  • LOGIN
  • BREAKING
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ ದಯಾಮರಣ ಕೇಳಿದ್ದ ತುಮಕೂರು ರಾಬಿಯಾ ಇನ್ನಿಲ್ಲ …!ಪರಮೇಶ್ವರ್ ಮುಂದೆ ಕಣ್ಣೀರಿಟ್ಟಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ವಿಷಸೇವಿಸಿ ಕೊನೆಯುಸಿರು…‘ಮನೆ’ ಸಿಕ್ಕರೂ ಬದುಕು ಉಳಿಯಲಿಲ್ಲ! ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್! ಮಹಿಳಾ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ ವಾಜಪೇಯಿ ಸರ್ಕಾರದ  ಕನಸಿನ ಯೋಜನೆ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಸಹಿ ಸಂಗ್ರಹ ಅಭಿಯಾನ
    ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಒಂದು ವಾಟ್ಸ್ಯಾಪ್ ಮೆಸೇಜ್… ಕೋರ್ಟ್ ವರೆಗೂ ಎಳೆದ ಶಾಕ್ ಘಟನೆಯ ಸುತ್ತ..

    ಲಭ್ಯ ಮಾಹಿತಿ ಪ್ರಕಾರ 2026ರ ಮೇ ತಿಂಗಳಲ್ಲಿ, ಶಾಸಕ ಪೊನ್ನಣ್ಣ ಅವರ ಕುಟುಂಬವನ್ನು ಉಲ್ಲೇಖಿಸಿ ವಾಟ್ಸ್ಯಾಪ್‌ ಗ್ರೂಪ್‌ನಲ್ಲಿ ವಿವಾದಾತ್ಮಕ ಸಂದೇಶ ಪೋಸ್ಟ್‌ ಮಾಡಿದ ಆರೋಪದ ಮೇಲೆ ದೇವಯ್ಯ ವಿರುದ್ಧ ಪ್ರಕರಣ ದಾಖಲಾಗಿತ್ತು. ‘ಕೊಡಗಿನ ಸಮಸ್ಯೆಗಳು’ ಎಂಬ ವಾಟ್ಸ್ಯಾಪ್‌ ಗ್ರೂಪ್‌ನಲ್ಲಿ ನಡೆದ ಚರ್ಚೆಯ ವೇಳೆ ದೇವಯ್ಯ, “ಪೊನ್ನಣ್ಣನಿಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಾದು ನೋಡಿ ಕರ್ಮ ಹಿಂದಿರುಗಲಿದೆ” ಎಂದು ಬರೆದಿದ್ದು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಂಬಂಧ ಕೆಪಿಸಿಸಿ ಕಾನೂನು ಘಟಕ ನೀಡಿದ ದೂರಿನ ಮೇರೆಗೆ ಹೈಗ್ರೌಂಡ್ಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ನಂತರ ತನಿಖೆಯನ್ನು ಸಿಸಿಬಿ ಸೈಬರ್‌ ಠಾಣೆಗೆ ವರ್ಗಾಯಿಸಲಾಯಿತು. ಬಂಧನದ ಭೀತಿಯ ನಡುವೆ ದೇವಯ್ಯ ಬೆಂಗಳೂರಿನ 1ನೇ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಶರಣಾಗಿ ಜಾಮೀನು ಪಡೆದಿದ್ದಾನೆ. ಇದೇ ವೇಳೆ, ದೇವಯ್ಯ ವಿರುದ್ಧ ಈ ಹಿಂದೆ ಯುವತಿಗೆ ಅಸಭ್ಯ ಸಂದೇಶ ಕಳುಹಿಸಿದ ಪ್ರಕರಣವೂ ದಾಖಲಾಗಿದ್ದು, ಅದರಲ್ಲಿ ಶಿಕ್ಷೆಯಾಗಿದ್ದರೂ ಬಳಿಕ 2025ರಲ್ಲಿ ಹೈಕೋರ್ಟ್‌ ರಾಜಿ ಒಪ್ಪಂದದ ಆಧಾರದ ಮೇಲೆ ಶಿಕ್ಷೆಯನ್ನು ರದ್ದುಪಡಿಸಿತ್ತು.

    ಈ ಘಟನೆ ಕೇವಲ ಒಂದು ವಾಟ್ಸ್ಯಾಪ್ ಮೆಸೇಜ್‌ನ ವಿಷಯವಲ್ಲ. ಇದು ಇಂದಿನ ಡಿಜಿಟಲ್ ಸಮಾಜದಲ್ಲಿ “ಮಾತಿನ ಶಕ್ತಿ”, “ಕಾನೂನಿನ ಆಯ್ಕೆಮಾಡಿದ ಕಾರ್ಯಾಚರಣೆ” ಮತ್ತು “ಸಾಮಾಜಿಕ ಸಮಾನತೆಯ ಕೊರತೆ” ಎಲ್ಲವನ್ನೂ ಒಟ್ಟಿಗೆ ಎತ್ತಿ ಹಿಡಿಯುವ ಒಂದು ಕನ್ನಡಿ.

    ಒಂದು ಮೆಸೇಜ್, ಆದರೆ ದೊಡ್ಡ ಪ್ರತಿಕ್ರಿಯೆ

    ಒಬ್ಬ ವ್ಯಕ್ತಿ ಗ್ರೂಪ್‌ನಲ್ಲಿ ಬರೆದ一ಸಂದೇಶ, post ವೈಯಕ್ತಿಕ ಮಾತು—ಕುಟುಂಬವನ್ನು ಉಲ್ಲೇಖಿಸಿ ಮಾಡಿದ ಒಂದು ವ್ಯಂಗ್ಯ—ಕ್ಷಣಾರ್ಧದಲ್ಲೇ ವಿವಾದವಾಗಿ ಬದಲಾಗುತ್ತದೆ. ಸಾಮಾನ್ಯ ದಿನಗಳಲ್ಲಿ ಸಾವಿರಾರು ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತವೆ. ಕೆಲವು ಅಸಹ್ಯ ಅನಿಸುವಷ್ಟು ಅಸಭ್ಯ, ಕೆಲವು ಅವಮಾನಕಾರಿ, ಕೆಲವು ನೇರ ದ್ವೇಷದಿಂದ cheap ಮೆಂಟಾಲಿಟಿ ಯಿಂದ ತುಂಬಿರುತ್ತವೆ. ಆ ತರಹದ ಒಂದು ವರ್ಗವೇ ಸಕ್ರಿಯವಾಗಿದೆ.ಆದರೆ ಅವುಗಳಲ್ಲಿ ಬಹುಪಾಲು “ನಗಣ್ಯ” ಆಗಿ ಮರೆತುಹೋಗುತ್ತವೆ. ಆದರೆ ಕೆಲವೊಂದು ಮಾತ್ರ ದೊಡ್ಡ ಮಟ್ಟದಲ್ಲಿ ಗಮನ ಸೆಳೆಯುತ್ತವೆ, ಪ್ರಕರಣವಾಗುತ್ತವೆ, ತನಿಖೆಗೆ ಹೋಗುತ್ತವೆ. ಈ ವ್ಯತ್ಯಾಸವೇ ಜನರಲ್ಲಿ ಮೊದಲ ಪ್ರಶ್ನೆಯನ್ನು ಹುಟ್ಟಿಸುತ್ತದೆ—“ಇದು ಮಾತ್ರ ಯಾಕೆ?”

    ಕಾನೂನು ಎಲ್ಲರಿಗೂ ಒಂದೇ, ಆದರೆ ಕಾರ್ಯದಲ್ಲಿ ಒಂದೇ ಅಲ್ಲ

    ಭಾರತದಲ್ಲಿ ಸೈಬರ್ ಕಾನೂನುಗಳು ಸ್ಪಷ್ಟವಾಗಿವೆ. ಮಾನಹಾನಿ, ಪ್ರಚೋದನೆ, ಅಸಭ್ಯ ಸಂದೇಶಗಳು—ಇವುಗಳಿಗೆ ಸ್ಪಷ್ಟ ನಿಯಮಗಳಿವೆ. ಆದರೆ ನಿಜ ಜೀವನದಲ್ಲಿ ಅವುಗಳ ಅನುಷ್ಠಾನ ಸಮಾನವಾಗಿಲ್ಲ. ಕೆಲ ಪ್ರಕರಣಗಳಲ್ಲಿ FIR ತಕ್ಷಣ ದಾಖಲಾಗುತ್ತದೆ, ಸೈಬರ್ ವಿಭಾಗ ಚುರುಕಾಗಿ ಕೆಲಸ ಆರಂಭಿಸುತ್ತದೆ. ಇನ್ನೂ ಕೆಲವು ಪ್ರಕರಣಗಳು ದೂರು ಕೊಟ್ಟರೂ ಫೈಲ್‌ನಲ್ಲೇ ನಿಲ್ಲುತ್ತವೆ. ಈ ಅಸಮತೋಲನವೇ ಜನರಲ್ಲಿ “ಕಾನೂನು ಎಲ್ಲರಿಗೂ ಒಂದೇನಾ ಅಥವಾ ಪ್ರಭಾವ ಇದ್ದವರಿಗೆ ಮಾತ್ರವೇ ಜಾಗೃತವಾಗುತ್ತದೆಯಾ?” ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.

    ಸಾಮಾಜಿಕ ಮಾಧ್ಯಮ ಒಂದು ವಿಚಿತ್ರ ಜಗತ್ತು. ಇಲ್ಲಿ ಒಬ್ಬರು ಹೇಳಿದ ಮಾತು ಕ್ಷಣದಲ್ಲಿ ಸಾವಿರಾರು ಜನರಿಗೆ ತಲುಪುತ್ತದೆ. ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ, ಆದರೆ ಅದೇ ಸಮಯದಲ್ಲಿ ಮಾತಿನ ದುರುಪಯೋಗವೂ ಇದೆ. ದಿನನಿತ್ಯ ನಾವು ನೋಡುವುದು ಏನೆಂದರೆ—ಕೆಲವರು ಯಾವುದೇ ಮಿತಿಯಿಲ್ಲದೆ ಮಾತನಾಡುತ್ತಾರೆ, ಕುಟುಂಬಗಳನ್ನು ಗುರಿಯಾಗಿಸುತ್ತಾರೆ, ವ್ಯಕ್ತಿತ್ವ ಹಾಳುಮಾಡುವ ರೀತಿಯಲ್ಲಿ ಕಾಮೆಂಟ್ ಮಾಡುತ್ತಾರೆ. ಆದರೆ ಆ ಮಾತುಗಳು ಬಹುಪಾಲು ಸಮಯದಲ್ಲಿ ಯಾವುದೇ ಕಾನೂನು ಕ್ರಮಕ್ಕೆ ಒಳಪಡುವುದಿಲ್ಲ. ಇದರಿಂದ ಜನರಲ್ಲಿ “ನ್ಯಾಯ ಆಯ್ಕೆಮಾಡಲ್ಪಡುತ್ತಿದೆಯೇ?” ಉತ್ತರವಿಲ್ಲದ ಪ್ರಶ್ನೆ.

    ಶಕ್ತಿ ಮತ್ತು ಪ್ರಭಾವದ ಅಸಮಾನತೆ

    ಯಾವಾಗಲಾದರೂ ಪ್ರಭಾವಶಾಲಿ ವ್ಯಕ್ತಿ ಅಥವಾ ರಾಜಕೀಯ ಸಂಬಂಧಿತ ವಿಷಯಗಳು ಒಳಗೊಂಡಾಗ ಮಾತ್ರ ಪ್ರಕರಣಗಳು ತಕ್ಷಣ ಬೆಳಕು ಕಾಣುತ್ತವೆ. ಸಾಮಾನ್ಯ ವ್ಯಕ್ತಿಯ ವಿರುದ್ಧದ ದ್ವೇಷಪೂರಿತ ಕಾಮೆಂಟ್‌ಗಳು ಅನೇಕ ಬಾರಿ ಗಮನಕ್ಕೇ ಬರುವುದಿಲ್ಲ.—“ಬಲಶಾಲಿಗಳ ಮೇಲೆ ಮಾತು ಬಂದಾಗ ಮಾತ್ರ ವ್ಯವಸ್ಥೆ ಕೆಲಸ ಮಾಡುತ್ತದೆಯಾ?” ಎಂಬ ಪ್ರಶ್ನೆ.

    ಇಂದಿನ ಸಮಾಜದಲ್ಲಿ ಮತ್ತೊಂದು ವಾಸ್ತವತೆ ಇದೆ. ಜನರು ಪ್ರತಿಯೊಂದು ಘಟನೆಗೆ ಸಮಾನವಾಗಿ ಪ್ರತಿಕ್ರಿಯಿಸುವುದಿಲ್ಲ. ಕೆಲವರು ಧರ್ಮಾಧಾರಿತ ವೈಯಕ್ತಿಕ ಪ್ರತಿಕ್ರಿಯೆಗಳಲ್ಲಿ ಸಕ್ರಿಯವಾದರೆ ಇನ್ನುಳಿದವರು ಕೆಲವೊಂದು ಘಟನೆಗಳು ರಾಜಕೀಯ, ವ್ಯಕ್ತಿತ್ವ ಅಥವಾ ಮಾಧ್ಯಮದ ಗಮನದಿಂದ ದೊಡ್ಡದಾಗುತ್ತವೆ. ಉಳಿದವುಗಳು ಮೌನವಾಗುತ್ತವೆ. ಈ “selective outrage” ಸಮಾಜದ ನಿಜವಾದ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸುತ್ತದೆ.

    ಈ ಘಟನೆಯ ನಿಜವಾದ ಪಾಠ

    ಈ ಪ್ರಕರಣವನ್ನು ಕೇವಲ “ಒಂದು ಮೆಸೇಜ್‌ಗೆ ಬಂಧನ” ಎಂದು ನೋಡಿದರೆ ಅದು ಅಪೂರ್ಣ ಚಿತ್ರಣ. ಇದು ಒಂದು ದೊಡ್ಡ ವ್ಯವಸ್ಥೆಯ ಪ್ರತಿಬಿಂಬ. ಇಲ್ಲಿ ಪ್ರಶ್ನೆ ಆರೋಪಿ ಯಾರು ಎಂಬುದಲ್ಲ, ಪ್ರಶ್ನೆ ಇದು—“ನಮ್ಮ ವ್ಯವಸ್ಥೆ ಎಲ್ಲರಿಗೂ ಸಮಾನವಾಗಿ ಕೆಲಸ ಮಾಡುತ್ತಿದೆಯಾ?” ಎಂಬುದು.

    ಸಾಮಾಜಿಕ ಮಾಧ್ಯಮ ಈಗ ಕೇವಲ ಸಂವಹನ ಸಾಧನವಲ್ಲ, ಅದು ನ್ಯಾಯ, ಅನ್ಯಾಯ, ಪ್ರಭಾವ ಮತ್ತು ಪ್ರತಿಕ್ರಿಯೆಯ ವೇದಿಕೆಯಾಗಿದೆ. ಆದರೆ ಆ ವೇದಿಕೆಯಲ್ಲಿ ಎಲ್ಲರಿಗೂ ಒಂದೇ ಮಟ್ಟದ ನ್ಯಾಯ ಸಿಗುತ್ತಿಲ್ಲ ಎಂಬುದು ಸ್ಪಷ್ಟ.

    ಇದೇ ಕಾರಣಕ್ಕೆ ಪ್ರತಿಯೊಂದು ಇಂತಹ ಘಟನೆಗಳು ಮತ್ತೆ ಮತ್ತೆ ಒಂದು ಗಂಭೀರ ಪ್ರಶ್ನೆಯನ್ನು ಎತ್ತುತ್ತವೆ


    “ಕೆಲವು ಮಾತಿನ ತಪ್ಪಿಗೆ ಕಾನೂನು ತಕ್ಷಣ ಜಾಗೃತವಾಗುತ್ತದೆ, ಆದರೆ ಅದೇ ಮಾತು ಸಾವಿರಾರು ಬಾರಿ ನಡೆದಾಗ ಯಾಕೆ ಮೌನವಾಗುತ್ತದೆ?”

    ##MadikeriCase #KodaguNews #DevaiahCase #WhatsAppControversy #CCBCyberCrime #KarnatakaNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಭಾರತೀಯ ಸೇನೆಯ ನೆರವಿಗೆ ಡ್ರೋನ್ ನರ್ಸಿಂಗ್ ಹೋಮ್! ದುರ್ಗಮ ಪ್ರದೇಶಗಳಲ್ಲೂ ಸಿಗಲಿದೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ
    ಉಡುಪಿಯ ಪ್ರತಿಷ್ಠಿತರನ್ನೇ ಟಾರ್ಗೆಟ್ ಮಾಡಿದ ಜೀನತ್ ವಿರುದ್ಧ ಮತ್ತೊಂದು ದೂರು? ₹15 ಲಕ್ಷ ಮೋಸದ ಹೊಸ ಆರೋಪ!?
    ರಾಹುಲ್ ಗಾಂಧಿ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್!
    ಜಸ್ಟ್ one click ನಲ್ಲೇ ಎಲ್ಲಾ ಸರ್ಟಿಫಿಕೇಟ್…!2026–27ರಿಂದ ಅಂಕಪಟ್ಟಿ ಹಾರ್ಡ್ ಕಾಪಿ ಇಲ್ಲ..
    ಜೀವನ್ಮರಣ ಹೋರಾಟದಲ್ಲೂ ಗೆಳೆಯರ ಬದುಕಿಸಿದ 14ರ ಬಾಲಕನ ರೋಚಕ  ಸ್ಟೋರಿ 
    ಕರಾವಳಿ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯ: “ಕರಾವಳಿ ಪಡೆ” ಹೋರಾಟ ತೀವ್ರಗೊಳಿಸಲು ನಿರ್ಧಾರ
    ರೆಸ್ಯೂಮ್ ಅಲ್ಲ, ಪ್ರಾಜೆಕ್ಟ್ ಮಾತಾಡಿತು! ಒಂದೇ ವರ್ಷದಲ್ಲಿ ₹10 ಲಕ್ಷ ಸಂಬಳದಿಂದ ₹80 LPA ಗಳಿಸಿದ ಯುವತಿಯ ಯಶಸ್ಸಿನ ಸೂತ್ರ ವೈರಲ್..!!
    ರಾಮಮಂದಿರ ಟ್ರಸ್ಟ್‌ನ ಮಹತ್ವದ ಹೇಳಿಕೆ!ಎಲ್ಲಾ ಕಾಣಿಕೆಗಳು ,ದೇಣಿಗೆ,ಚಿನ್ನ-ಬೆಳ್ಳಿ ಸೇರಿ 2,800 ಅಮೂಲ್ಯ ವಸ್ತುಗಳುಸುರಕ್ಷಿತ
    ಮೂಡುಬಿದಿರೆಯಲ್ಲಿ ಖರೀದಿಸಿದ ಕೆಲವೇ ಗಂಟೆಗಳಲ್ಲಿ ಕಾರಿಗೆ ಬೆಂಕಿ! ತಪ್ಪಿದ ಭಾರೀ ದುರಂತ ..ಏಕಾಏಕಿ ಬೆಂಕಿ.ಕಾರಿನಲ್ಲಿದ್ದ ಕುಟುಂಬ ಅಪಾಯದಿಂದ ಪಾರು.
    ಹಾಡುಹಗಲೇ ಉಡುಪಿಯ ಕರಾವಳಿ ಬೈಪಾಸ್ ನಲ್ಲಿ ಗುಂಡಾಗಿರಿ
    Must read…ನಾಗಪ್ರಸನ್ನರ ನ್ಯಾಯಾಲಯದಲ್ಲಿ ‘ಸುಳ್ಳು ಜಾತಿ-ಆದಾಯ ಪ್ರಮಾಣಪತ್ರ ಮುಂದಿಟ್ಟ ಸಾಹುಕಾರ್ ಪುತ್ರಿಗೆ ಕ್ಲಾಸ್! ಅರುಣ್ ಶ್ಯಾಮ್ ವಾದಕ್ಕೆ ನಾಗಪ್ರಸನ್ನರ ಒಂದೊಂದು ಪ್ರಶ್ನೆಯೂ ವ್ಯವಸ್ಥೆಗೆ ಕನ್ನಡಿಯಾಯಿತು!”
    ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾ ‘ರಾಮಾಯಣ’: ಟ್ರೇಲರ್ ಬಂದ ಕ್ಷಣದಿಂದಲೇ ದೇಶವ್ಯಾಪಿ ಚರ್ಚೆ!
    ”ಮೋದಿ ಭರವಸೆ ಪೊಳ್ಳು” : ನೀಟ್ ಪತ್ರಿಕೆ ಸೋರಿಕೆ ಪ್ರಕರಣದ ಬಗ್ಗೆ ಕೇಜ್ರಿವಾಲ್ ವಾಗ್ದಾಳಿ
    ಕೌಶಾಂಬಿಯಲ್ಲಿ ಭೀಕರ LPG ಟ್ಯಾಂಕರ್ ದುರಂತ: ಸಿಸಿಟಿವಿಯಲ್ಲಿ ಸೆರೆಯಾದ ಜೀವಭಯದ ಕ್ಷಣಗಳು – ಮೃತರ ಸಂಖ್ಯೆ 4ಕ್ಕೆ ಏರಿಕೆ
    ಬ್ರೇಕಿಂಗ್ ನ್ಯೂಸ್..!final‘ಸಚಿವರ ಪಟ್ಟಿ’ ವೈರಲ್: ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ!
    ಇರಾನ್–ಇಸ್ರೇಲ್ ಯುದ್ಧ: ಯುದ್ಧ ನಿಲ್ಲಿಸಲು ಇರಾನ್‌ನ 3 ಷರತ್ತುಗಳು… ಅಮೇರಿಕಾ ಕಂಗಾಲು
    ನಾರ್ವೇ ಪತ್ರಕರ್ತರಿಗೆ ತಿರುಗೇಟು: “ಭಾರತದ ವಾಸ್ತವತೆ ಅರಿವಿಲ್ಲ” ಎಂದ MEA ಕಾರ್ಯದರ್ಶಿ ಸಿಬಿ ಜಾರ್ಜ್…
    ಕಾಂಗೋದಲ್ಲಿ ಎಬೋಲಾ ಅಟ್ಟಹಾಸ:ಜಗತ್ತಿಗೆ ಮತ್ತೆ ಸಾಂಕ್ರಾಮಿಕ ಭೀತಿಯ ಗಂಟೆ..!
    ಹೆತ್ತ ಮಗಳನ್ನೇ ಉಸಿರುಗಟ್ಟಿಸಿ ಕೊಂದ  ಪಾಪಿ ತಾಯಿ
    ಉಡುಪಿಯಲ್ಲಿ  ಹರಿಕಥಾ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಶಂಕರಾಚಾರ್ಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ- ಯುಟಿಕ್ಷಮೆ ಯಾಚನೆ
    ವಿಜಯ್ ತಳಪತಿ ಸಂಗೀತಾ ವಿಚ್ಛೇದನ ವಿಚಾರ: 27 ವರ್ಷದ ದಾಂಪತ್ಯಕ್ಕೆ ತೆರೆ? ₹250 ಕೋಟಿ ಸೆಟ್ಲ್‌ಮೆಂಟ್ ಚರ್ಚೆ!!
    ಮಲ್ಪೆ ಬಂದರಿನಲ್ಲಿ ಮೀನುಗಾರ ಕಾರ್ಮಿಕನ ಬರ್ಬರ ಹತ್ಯೆ: ಗಲಾಟೆ ವಿಕೋಪಕ್ಕೆ ತಿರುಗಿ ಚೂರಿ ಇರಿತ…!
    ಭಾರತೀಯ ಸೇನೆಯ ಚಲನವಲನದ ವಿಡಿಯೋಗಳು ಪಾಕಿಸ್ತಾನಕ್ಕೆ ಹೇಗೆ ತಲುಪಿದವು?
    “ಕುನಾಲ್ ಶಾ ವಾಟ್ಸಾಪ್ ಗ್ಲೋಬಲ್ ಹೆಡ್! ಸುಂದರ್ ಪಿಚೈ, ಸತ್ಯ ನಾಡೆಲ್ಲಾ ಸಾಲಿಗೆ ಮತ್ತೊಬ್ಬ ಭಾರತೀಯನ ಸೇರ್ಪಡೆ.
    Forex ಟ್ರೇಡಿಂಗ್ ಹೆಸರಲ್ಲಿ 3.5 ಲಕ್ಷ ವಂಚನೆ – ಆರೋಪಿ ವಿರುದ್ಧ ಪ್ರಕರಣ ದಾಖಲು
    ತಸ್ಲಿಮಳ ಹಣೆಗೆ ಸಿಂಧೂರವಿಟ್ಟ ಕೇಶವ, ಬುರ್ಖಾ ತೆಗೆದಿಟ್ಟ ತಸ್ಲೀಮಾ
    ಸಿಎಂ ಡಿಕೆ ಶಿವಕುಮಾರ್ ಕರೆದ ಸಭೆಗೆ ರಾಮಲಿಂಗಾರೆಡ್ಡಿ, ಜಮೀರ್ ಗೈರು…
    ಸಿಎಂ ಕುರ್ಚಿಯನ್ನು, ಡಿಕೆಗೆ ಮಗ್ಗಲ ಮುಳ್ಳನ್ನಾಗಿಸಲು ಸಕಲ ತಯಾರಿ
    ರಾಷ್ಟ್ರೀಯ ಭದ್ರತೆಗೆ ಎದುರಾಗುವ ಬೆದರಿಕೆಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ಭದ್ರತಾ ಪಡೆ ಮುಖ್ಯಸ್ಥರಿಗೆ ಗೃಹ ಸಚಿವ ‘ಶಾ’ ಸೂಚನೆ
    ಒಂದು ತಪ್ಪು ಹೆಜ್ಜೆ…25 ಅಡಿ ಬಾವಿಗೆ ಬಿದ್ದ ಆನೆ …ನೋಡಿ ಈ ಸ್ಮಾರ್ಟ್ ಆಪರೇಷನ್!