📍 Karavali Maruta
  • LOGIN
  • BREAKING
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ ದಯಾಮರಣ ಕೇಳಿದ್ದ ತುಮಕೂರು ರಾಬಿಯಾ ಇನ್ನಿಲ್ಲ …!ಪರಮೇಶ್ವರ್ ಮುಂದೆ ಕಣ್ಣೀರಿಟ್ಟಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ವಿಷಸೇವಿಸಿ ಕೊನೆಯುಸಿರು…‘ಮನೆ’ ಸಿಕ್ಕರೂ ಬದುಕು ಉಳಿಯಲಿಲ್ಲ! ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್! ಮಹಿಳಾ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ ವಾಜಪೇಯಿ ಸರ್ಕಾರದ  ಕನಸಿನ ಯೋಜನೆ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಸಹಿ ಸಂಗ್ರಹ ಅಭಿಯಾನ
    ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಕ್ರಿಮಿನಲ್ಸ್ ಸಪೋರ್ಟಿಗೆ ನಿಂತವರು ಯಾರ್ಯಾರು ಅನ್ನುವುದು ಈಗ ಗೊತ್ತಾಗುತ್ತಿದೆ ನೋಡಿ….!

    ದೇಶದ ಭದ್ರತೆ ಹಾಗೂ ಶಾಂತಿ ಅತ್ಯಂತ ಮಹತ್ವದ್ದು. ಶಾಂತಿ ಕದಡಿದಾಗಲೇ ಭದ್ರತೆಗೆ ದಕ್ಕೆ ಬರುವುದು. ಶಾಂತಿ ಕದಡುವವರು ಅಪರಾಧಿಗಳಾಗಿರುತ್ತಾರೆ, ಕ್ರಿಮಿನಲ್ ಆಗಿರುತ್ತಾರೆ. ಅಂತಹ ಅಪರಾಧಿಗಳ ವಿಚಾರದಲ್ಲಿ ಹೇಳಿದ ಒಂದು ಹೇಳಿಕೆಯನ್ನು ಒಂದಷ್ಟು ಜನರು ತಮಗೆ ಬೇಕಾದ ಹಾಗೆ ಗುರುತಿಸಿಕೊಂಡು ವಿರೋಧಿಸುವ ಹಾಗೂ ಖಂಡಿಸುವ ಕೆಲಸ ಮಾಡುತ್ತಿರುವುದು ಸರಿಯೇ?
    ಕರ್ನಾಟಕದ ಆರೋಗ್ಯ ಸಚಿವರಾದ ಯುಟಿ ಖಾದರ್ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಮಾತನಾಡುತ್ತಿರುವಾಗ ಆಡಿದ ಮಾತನ್ನು ವಿರೋಧಿಸುತ್ತಿರುವುದು ಸುಮ್ಮನೆ ಅಲ್ಲ. ಅದರ ಹಿಂದೆ ಯಾವುದೋ ಒಂದು ಅಜೆಂಡಾವಿದೆ. ಯುಟಿ ಖಾದರ್ ಅವರನ್ನು ನೇರವಾಗಿ ವಿರೋಧಿಸಲು ಸಾಧ್ಯವಾಗದೆ, ಅವರ ಆ ಒಂದು ಹೇಳಿಕೆಯ ವಿಚಾರವನ್ನು ತಮಗೆ ಬೇಕಾದ ಹಾಗೆ ಕಲ್ಪಿಸಿಕೊಂಡು, ತಮಗೆ ಬೇಕಾಗಿದ್ದನ್ನು ಮಾತ್ರ ಆಯ್ಕೆ ಮಾಡಿಕೊಂಡು, ಆ ವಿಚಾರವನ್ನೇ ಮುಂದಿಟ್ಟುಕೊಂಡು, ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಅಕ್ಷಮ್ಯ. ಅಷ್ಟೇ ಅಲ್ಲ, ಅಂಥವರನ್ನು ಕ್ರಿಮಿನಲ್ ಪರವಾಗಿ ನಿಂತವರು ಅನ್ನಲು ಯಾವುದೇ ಅಭ್ಯಂತರವಿಲ್ಲ ಅನ್ನಬಹುದು.


    ಅಷ್ಟಕ್ಕೂ ಯುಟಿ ಖಾದರ್ ಹೇಳಿದ್ದೇನು?

    ಕ್ರಿಮಿನಲ್ ಗಳನ್ನು ಹತೋಟಿಯಲ್ಲಿಡಬೇಕು ಎಂದರೆ, ಅಂತವರಲ್ಲಿ ವ್ಯವಸ್ಥೆಯ ವಿಚಾರವಾಗಿ ಭಯವಿರಬೇಕು. ಹಾಗೆ ಭಯ ಹುಟ್ಟಿಸಬೇಕು ಎಂದರೆ ಕೆಲವೊಮ್ಮೆ (ಆಗಾಗ)ಕಠಿಣ ಕ್ರಮ ಅನಿವಾರ್ಯವಾಗಿರುತ್ತದೆ. ಕ್ರಿಮಿನಲ್ಲ್ಸ್ ಗಳ ಮೇಲೆ ಗುಂಡುಗಳನ್ನು ಹಾರಿಸಿಯಾದರೂ ಅವರನ್ನು ಕಂಟ್ರೋಲ್ ಗೆ ತರಬೇಕು ಅಂತ ಹೇಳುತ್ತಲೇ, ಹಾಗಂತ ಈಗ ಗುಂಡು ಹೊಡೆಯಲು ಆಗುವುದಿಲ್ಲ ಅಂತಲೂ ಹೇಳುತ್ತಾರೆ ಸಚಿವ ಯು ಟಿ ಖಾದರ್.


    ಇದರಲ್ಲಿ ತಪ್ಪೇನಿದೆ ಹೇಳಿ? ದೇಶದಲ್ಲಿ ಕ್ರಿಮಿನಲ್ ಆಕ್ಟಿವಿಟೀಸ್ ವಿಪರೀತವಾಗಿದೆ. ನಿಯಮಗಳನ್ನು ಗಾಳಿಗೆ ತೂರಿ ರಾಜಾರೋಷವಾಗಿ ಅಪರಾಧ ಚಟುವಟಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದ್ಯಾವುದರ ಬಗ್ಗೆಯೂ ಮಾತನಾಡುವುದಿಲ್ಲ ಈಗ ಖಾದರ್ ರವರ ವಿರುದ್ಧ ಧ್ವನಿ ಎತ್ತುತ್ತಿರುವ ಮಹಾನುಭಾವರು. ಎಲ್ಲವುದಕ್ಕೂ ಪೊಲೀಸರನ್ನು ಹೊಣೆಗಾರರನ್ನಾಗಿಸುವುದು ಇವತ್ತು ಸಾಮಾನ್ಯ ಸಂಗತಿಯಾಗಿ ಬಿಟ್ಟಿದೆ.

    ಪೊಲೀಸರು ಅಪರಾಧಿಗಳನ್ನು ಬಂಧಿಸಿದರು, ಅವರಿಗೆ ಜಾಮೀನು ಸುಲಭವಾಗಿ ಸಿಗುತ್ತದೆ ಹೇಗೆ? ಇದರ ಬಗ್ಗೆ ಚಕಾರವಿಲ್ಲ. ಇವತ್ತು ಅನೇಕ ಪ್ರಕರಣಗಳಿಗೆ ಅದರಲ್ಲೂ ಗಂಭೀರ ಪ್ರಕರಣಗಳಿಗೂ ಮೇಲಿನ ನ್ಯಾಯಾಲಯಗಳಲ್ಲಿ ತಡೆಯಾಜ್ಞೆ ಸಿಗುತ್ತಿವೆ. ಹೀಗೆ ಹತ್ತು ಹಲವು ಸಂಗತಿಗಳು ಇವೆಯಾದರೂ, ಅದ್ಯಾವುದರ ಬಗ್ಗೆಯೂ ಚಕಾರವೆತ್ತದ ಈ ಮನುಷ್ಯರು, ಕೇವಲ ಖಾದರ್ ಹೇಳಿದ ಆ ಒಂದು “ಗುಂಡಿನ” ಮಾತಿಗೋಸ್ಕರ ವಿಪರೀತವಾಗಿ ಟೀಕಿಸುತ್ತಿರುವುದು, ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ?
    ಯುಟಿ ಖಾದರ್ ಯಾವ ತಪ್ಪೂ ಮಾಡಿಲ್ಲ. ಪೊಲೀಸ್ ವ್ಯವಸ್ಥೆಗೆ ಬಲ ತುಂಬುವ ಕೆಲಸವನ್ನು ಮಾಡಬೇಕಾದದು ಕೇವಲ ಸರ್ಕಾರದ ಕೆಲಸ ಮಾತ್ರವಲ್ಲ, ಜನಸಾಮಾನ್ಯರ ಕೆಲಸವೂ ಆಗಿದೆ. ಇವತ್ತು ಪೊಲೀಸ್ ವ್ಯವಸ್ಥೆ ಇಲ್ಲ ಅಂದರೆ, ಸಮಾಜದಲ್ಲಿ ಈಗ ಮಾತನಾಡುತ್ತಿರುವವರಿಗೂ ಅಷ್ಟು ಈಜಿಯಾಗಿ ಮಾತನಾಡಲಾಗದು ಎನ್ನುವುದನ್ನು ಗಮನದಲ್ಲಿಡಬೇಕಾಗುತ್ತದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವವರಿಗೆ ಕೆಲವು ಅಧಿಕಾರಗಳು ಅವಶ್ಯವಾಗಿ ಬೇಕು. ಆ ಕಾರಣಕ್ಕಾಗಿ ಅವರಿಗೆ ಆಯುಧಗಳನ್ನು ನೀಡಲಾಗಿದೆ.

    ಕೆಲವು ಬದಲಾಗದ ಅಪರಾಧಿಗಳ ಮೇಲೆ “ದಂಡಂ ದಶಗುಣಂ” ಅನಿವಾರ್ಯ. ಅವರ ಅಪರಾಧಕ್ಕೆ ಶಿಕ್ಷೆ ನೀಡಬೇಕಾದ್ದು ನ್ಯಾಯಾಲಯವೇ ಅನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ಕಾನೂನು ಹಾಗೂ ವ್ಯವಸ್ಥೆ ಇವೆರಡರ ಮೇಲೆ ಅಪರಾಧಿ ಪ್ರವೃತ್ತಿಯರಲ್ಲಿರುವವರಿಗೆ ಭಯ ಇಲ್ಲ ಅಂದರೆ, ಆಗ ಅವರಿಂದ ಜನಸಾಮಾನ್ಯರು ಭಯಪಡಬೇಕಾಗುತ್ತದೆ, ಅವರಿಂದ ಇಡೀ ಸಮಾಜದ ಪರಿಸ್ಥಿತಿ ಬಿಗಡಾಯಿಸುತ್ತದೆ, ಅವರಿಂದ ಸಮಾಜದ ಶಾಂತಿ ಕದಾಡುತ್ತದೆ. ಶಾಂತಿ ಕದಡುವುದರಿಂದ ಪ್ರದೇಶದ ಭದ್ರತೆ ಅಭದ್ರವಾಗುತ್ತದೆ.


    ಈಗ ಮಣಿಪುರದ ವಿಚಾರವನ್ನು ಒಮ್ಮೆ ನೋಡಿ. ಅಲ್ಲಿ ಪ್ರಾರಂಭವಾದದ್ದು ಸಹ ಅಪರಾಧದ ಕೃತ್ಯವೇ. ಅಪರಾಧ ಕೃತ್ಯದ ಮೇಲೆ ನಿಯಂತ್ರಣ ಹೇರುವುದರಲ್ಲಿ ವ್ಯವಸ್ಥೆ ಸೋಲುತ್ತಿದ್ದಂತೆಯೇ ಆ ಅಪರಾಧ ವಲಯವು ವ್ಯವಸ್ಥೆಯನ್ನು ಆವರಿಸಿಕೊಳ್ಳುತ್ತದೆ ಅನ್ನುವುದಕ್ಕೆ ಆ ರಾಜ್ಯದ ಹಿಂಸೆಯು ಸಾಕ್ಷಿಯಾಗುತ್ತಿದೆ. ಈ ಹಿಂದೆ ಕಾಶ್ಮೀರವೂ ಸಹ ಇದೆ ತರಹದಲ್ಲಿತ್ತು. ಸರ್ಕಾರ ಮತ್ತು ವ್ಯವಸ್ಥೆ ಎಡವಟ್ಟು ಮಾಡಿಕೊಂಡರೆ, ಸರ್ಕಾರ ಹಾಗೂ ವ್ಯವಸ್ಥೆಯ ಮೇಲೆಯೇ ಈ ಅಪರಾಧಿಗಳು ಸವಾರಿ ಮಾಡಲು ಪ್ರಾರಂಭಿಸುತ್ತಾರೆ. ಇದಾಗಬಾರದು ಎಂಬ ಕಾರಣಕ್ಕೆ, ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವುದಾಗಿದೆ.

    ಯು ಟಿ ಖಾದರ್, ಸರ್ಕಾರದ ಭಾಗವಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಕ್ರಿಮಿನಲ್ ಗಳ ಮೇಲೆ ಹಿಡಿತ ಸಾಧಿಸಬೇಕು ಎಂದು ಹೇಳುವ ಸಂದರ್ಭದಲ್ಲಿ ಗುಂಡು ಹೊಡೆಯುವ ಮಾತನಾಡಿದ್ದಾರೆ. ಅದನ್ನೂ ಸಹ, ಆಗಲೇ ಅವರು ಇವತ್ತಿನ ಸಮಯ ಗುಂಡನ್ನು ಡಿಫೆನ್ಸ್ ಹೊರತುಪಡಿಸಿ ಬೇರೆ ಸಮಯದಲ್ಲಿ ಹೊಡೆಯುವ ಹಾಗಿಲ್ಲ ಅಂತಲೂ ದನಿಗೂಡಿಸಿದ್ದಾರೆ. ಅದನ್ನು ಬಿಟ್ಟು, ತಮಗೆ ಬೇಕಾಗಿದ್ದನ್ನು ಮಾತ್ರ ಆರಿಸಿಕೊಂಡು ಸಚಿವ ಯುಟಿ ಖಾದರ್ ವಿರುದ್ಧ ಮಾತನಾಡುತ್ತಿರುವುದು, ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಅಕ್ಷಮ್ಯವಲ್ಲದೆ ಮತ್ತಿನ್ನೇನು? ಅಷ್ಟೇ ಅಲ್ಲ ಅವರೆಲ್ಲರೂ ಇಂಡೈರೆಕ್ಟ್ ಆಗಿ ಕ್ರಿಮಿನಲ್ ಗಳಿಗೆ ಸಪೋರ್ಟ್ ಮಾಡುವವರು ಅಂತ ತಾನೆ ಅರ್ಥ? ವ್ಯವಸ್ಥೆಯ ಭಾಗವಾಗಿರುವ ಪೊಲೀಸರನ್ನು ನಂಬದವರು, ಸಮಾಜ ಕಂಠಕರ ಮಾತನ್ನು ನಂಬುತ್ತಾರೆಂದರೆ ಅವರ ಹಿತ ಬಯಸುತ್ತಾರೆಂದರೆ ಮಹಾನುಭಾವರು ಎಂಥವರಿರಬಹುದು ಎಂಬ ಪ್ರಶ್ನೆಯು ಎದ್ದೇಳುತ್ತದೆ. ಏನೇ ಇರಲಿ, ಯುಟಿ ಖಾದರ್ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಪೊಲೀಸರಿಗೆ ಅಷ್ಟು ಸ್ವಾತಂತ್ರ್ಯ ಬೇಕು ಕೂಡ. ಪರಮನೆಂಟ್ ಅಪರಾಧಿಗಳಿಗೆ ಗುಂಡು ಅನಿವಾರ್ಯವಾಗಬೇಕು. ಏನಂತೀರಿ?
    -ದತ್ತು

    ##UTKhader#KarnatakaPolitics#Mangaluru#LawAndOrder#RowdySheeters

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಚಿನ್ನ ಖರೀದಿಸುವ ಕಾಲ ಹೋಯ್ತಾ? ಗಗನಕ್ಕೇರಿದ ದರ ಕೇಳಿ ಬೆಚ್ಚಿಬಿದ್ದ ಜನ!ಒಂದೂವರೆ ಲಕ್ಷ ರೂಪಾಯಿ ಗಡಿದಾಟಿತಾ …?ಬೆಳ್ಳಿಎರಡೇ ದಿನದಲ್ಲಿ ಆರು ಸಾವಿರ ಏರಿಕೆ
    ಕಿಡ್ನಿ ಕಾಯಿಲೆಯ ಬಗ್ಗೆ ಎಚ್ಚರಿಕೆ ಅಗತ್ಯ- ಡಾಕ್ಟರ್ ಅಶೋಕ್ ಭಟ್
    ಹತ್ತು ವರ್ಷದಿಂದ ಪೊಲೀಸರಿಗೆ ಬೇಕಾದ ಆರೋಪಿಯನ್ನು ಕೊನೆಗೂ ಬಂಧಿಸಿದ ಪೊಲೀಸರು
    ಕೊಲೆ ಆರೋಪಿಯ ದೂರುದಾರನ ವಿಷ ಸೇವನೆಯ ಬಗ್ಗೆ  ಸ್ಪಷ್ಟನೆ
    ಪೆರ್ವಾಜೆ ಮಹಾಲಿಂಗೇಶ್ವರ ದೇವಸ್ಥಾನದ ಚೆಕ್‌ಗೆ ನಕಲಿ ಸಹಿ! ನಕಲಿ ಚೆಕ್‌ಗಳೊಂದಿಗೆ ಸಿಕ್ಕಿಬಿದ್ದ ಮಾಜಿ ಸಿಬ್ಬಂದಿ…
    ಕನಸು ಹೊತ್ತ ಯುವತಿಯರ ಮೇಲೆ ಕಾಮುಕ ಸಮಾಜದ ಕಣ್ಣು! ಮೌನವಾಗಿರುವ ಸಾವಿರಾರು ಕಥೆಗಳಲ್ಲೊಂದು ಬೆಂಗಳೂರು ಘಟನೆ!
    ಇತಿಹಾಸ ಸೃಷ್ಟಿಸಿದ ಈಶಾಂಕ್ ಸಮುದ್ರವನ್ನೇ ಸವಾಲಾಗಿ ತೆಗೆದುಕೊಂಡ 7 ವರ್ಷದ ಹೀರೋ ..!
    ಸರಸಕ್ಕೆ ಅಡ್ಡಿಪಡಿಸಿದ ಯುವಕನ ಮೇಲೆ  ಭೀಕರ ದಾಳಿ: ಗುಜರಾತ್‌ನಲ್ಲಿ 21 ವರ್ಷದ ಯುವಕ ಬಲಿ
    ಗೃಹಿಣಿ ಅಲ್ಲ, ರಾಷ್ಟ್ರ ನಿರ್ಮಾಣಕಾರಿ”ಮನೆಯ ಕೆಲಸ ಕೆಲಸವೇ ಅಲ್ಲ ಎನ್ನುವವರೇ… ಈ ಸುದ್ದಿ ಒಮ್ಮೆ ಓದಿ!ಆಕೆಯ ಶ್ರಮಕ್ಕೆ-₹30,000 ಮೌಲ್ಯ!– ಸುಪ್ರೀಂ ಕೋರ್ಟ್ ಮಹತ್ವದ ಸಂದೇಶ
    ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಮಾತ್ರ (ಅ)ವ್ಯವಸ್ಥೆ ಎಚ್ಚರಗೊಳ್ಳಬೇಕೇ? ಯಾರು ಹೊಣೆ? ಏನು ಕ್ರಮ?
    ಗ್ರಾಹಕರ ಮಾತು ಕೇಳಿ, ₹900 ಕೋಟಿಯ ರೆಸ್ಟೋರೆಂಟ್ ಸಾಮ್ರಾಜ್ಯ ನಿರ್ಮಿಸಿದ ಉದ್ಯಮಿ..
    ಉಡುಪಿ ಜಿಲ್ಲಾಆಸ್ಪತ್ರೆಯಲ್ಲಿ ಹಗರಣ, ತಾರತಮ್ಯದ ಆರೋಪ: ವೀಣಾದೇವಿ ವಿರುದ್ಧದಕ್ರಮ ಕಣ್ಣೊರೆಸುವ ತಂತ್ರ
    ರೂಪಾಯಿಗೆ ತೈಲದ ಬಿಸಿ! RBI ಅಖಾಡಕ್ಕಿಳಿಯುತ್ತಾ?ತೈಲ ಬೆಲೆ ಏರಿಕೆ ಎಫೆಕ್ಟ್ -ಡಾಲರ್ ಎದುರು ರೂಪಾಯಿ ದುರ್ಬಲ!
    “ಪಾಲಕ್ಕಾಡ್‌ನಲ್ಲಿ ಮೋದಿ ಚಂಡೆ ಸದ್ದು—ಕೇರಳದಲ್ಲಿ ಚುನಾವಣಾ ಕಹಳೆ!” 
    594 ಕಿಮೀ ಗಂಗಾ ಎಕ್ಸ್‌ಪ್ರೆಸ್‌ ವೇ ..!ಮೀರಟ್‌ನಿಂದ ಪ್ರಯಾಗರಾಜ್‌ವರೆಗೆ -ದೇಶದ ಪ್ರಗತಿಗೆ ಮತ್ತೊಂದು ಮೈಲುಗಲ್ಲು 
    ಬೃಹತ್ ಅಭಿಯಾನ….5.51 ಟನ್ ವಸ್ತುಗಳು..!5000ಕ್ಕೂ ಹೆಚ್ಚು ದೇವರ ಫೋಟೋಗಳು
    ಬ್ರಹ್ಮಾವರದ ಹಲಸು ಮೇಳ ಮಾಡಿದ ಹೊಲಸು – ಸಾರ್ವಜನಿಕರ ಆಕ್ರೋಶ
    ಪಾಕಿಸ್ತಾನದಿಂದ ನೀರಿನ ವಿಚಾರದಲ್ಲಿ ಕಠಿಣ ಎಚ್ಚರಿಕೆ; ನೀರಿಗಾಗಿ ಯುದ್ದಕ್ಕೂ ಸಿದ್ದವೆಂದ ಪಾಕ್ ….!
    ಶಾಲೆ ಹತ್ತಿರವಿದ್ದರೂ,ಮಕ್ಕಳ ಹೆಲ್ಮೆಟ್ ನಿರ್ಲಕ್ಷಿಸಬೇಡಿ!4 ವರ್ಷದೊಳಗಿನ ಮಗುಗೂ ಹೆಲ್ಮೆಟ್ ಕಡ್ಡಾಯ!
    ಮುಗ್ಧ ಮಗು ಮೇಲೆ ನಡೆದ ಅಮಾನವೀಯ ಕ್ರೌರ್ಯ… ನ್ಯಾಯಕ್ಕಾಗಿ ಸಮಾಜದ ಒಕ್ಕೊರಲ ಹೋರಾಟ
    ಜೈಲಿನೊಳಗೆ ಮೊಬೈಲ್ ಮಾಫಿಯಾ: ಖತರ್ನಾಕ್ ಐಡಿಯಾ..!
    ದೇವರ ಮುಂದೆ ಸಾಲಿನಲ್ಲಿ ನಿಲ್ಲಲೇಬೇಕು! ಮಂತ್ರಿ ಇರಲಿ, ಸೆಲೆಬ್ರಿಟಿ ಇರಲಿ…ಅಧಿಕಾರ ಇರಲಿ, ಅಂತಸ್ತು ಇರಲಿ…”ವಿಐಪಿ ದರ್ಶನ”ಕ್ಕೆ ಹೈಕೋರ್ಟ್ ಕೊಟ್ಟ ಚಾವಟಿ ಏಟು!
    ಇಎಸ್ಐ ರೋಗಿಗಳಿಗೆ ತೊಂದರೆ ನೀಡದೇ ಚಿಕಿತ್ಸೆ ನೀಡಿ ಎಂದ ಕೇಂದ್ರ ಸರ್ಕಾರ- ಸಚಿವೆಗೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕೃತಜ್ಞತೆ
    ಕೇಂದ್ರದ ಮೌನ ಮತ್ತು ಪ್ರಜಾಪ್ರಭುತ್ವದ ಅಣಕಕ್ಕೆ ಜಂತರ್ ಮಂತರ್‌ನಲ್ಲಿ ಧಗಧಗಿಸುತ್ತದ ನೀಟ್ (NEET) ಕಿಚ್ಚು…!
    ಸುಬ್ರಹ್ಮಣ್ಯದಲ್ಲಿ ಭಟ್ಟರಿಗೆ ದಕ್ಷಿಣೆ ಕೊಡುವoತಿಲ್ಲ- ಸಿಟ್ಟಿಗೆಳುತ್ತಿರುವ ಪುರೋಹಿತರು
    ಪಶ್ಚಿಮ ಘಟ್ಟದ ಕಸ್ತೂರಿರಂಗನ್ ವರದಿಗೆ ಬ್ರೇಕ್?…ವಿಶೇಷ ಅಧಿವೇಶನಕ್ಕೆ ಸರ್ಕಾರ ಸಿದ್ಧತೆ
    ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ – 10 ರೋಗಿಗಳ ದುರ್ಮರಣ-11 ಸಿಬ್ಬಂದಿಗೆ ಗಾಯ
    ಇಂಧನ ಬೆಲೆ ಏರಿಕೆ ಹೊಡೆತ Air India ಹೊಸ ತೀರ್ಮಾನ ಶಾಕಿಂಗ್ …!
    ಈಶ್ವರ್ ಮಲ್ಪೆ ತಂಡಕ್ಕೆ MAHE ಸಂಸ್ಥೆಯಿಂದ ಅಮೂಲ್ಯ ರಕ್ಷಣಾ ವಾಹನ ಕೊಡುಗೆ-ಜೀವ ಉಳಿಸುವ ಸೇವೆಗೆ ಮತ್ತಷ್ಟು ಶಕ್ತಿ
    ವಿದ್ಯಾರ್ಥಿ ಪ್ರತಿಭಟನಾ ಪ್ರಕರಣಗಳು: ಎಫ್‌ಐಆರ್‌ ಹಿಂಪಡೆಯಲು ಸುಪ್ರೀಂ ಕೋರ್ಟ್‌ ಮಹತ್ವದ ಸ್ಪಷ್ಟನೆ