📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಕ್ರಿಮಿನಲ್ಸ್ ಸಪೋರ್ಟಿಗೆ ನಿಂತವರು ಯಾರ್ಯಾರು ಅನ್ನುವುದು ಈಗ ಗೊತ್ತಾಗುತ್ತಿದೆ ನೋಡಿ….!

ದೇಶದ ಭದ್ರತೆ ಹಾಗೂ ಶಾಂತಿ ಅತ್ಯಂತ ಮಹತ್ವದ್ದು. ಶಾಂತಿ ಕದಡಿದಾಗಲೇ ಭದ್ರತೆಗೆ ದಕ್ಕೆ ಬರುವುದು. ಶಾಂತಿ ಕದಡುವವರು ಅಪರಾಧಿಗಳಾಗಿರುತ್ತಾರೆ, ಕ್ರಿಮಿನಲ್ ಆಗಿರುತ್ತಾರೆ. ಅಂತಹ ಅಪರಾಧಿಗಳ ವಿಚಾರದಲ್ಲಿ ಹೇಳಿದ ಒಂದು ಹೇಳಿಕೆಯನ್ನು ಒಂದಷ್ಟು ಜನರು ತಮಗೆ ಬೇಕಾದ ಹಾಗೆ ಗುರುತಿಸಿಕೊಂಡು ವಿರೋಧಿಸುವ ಹಾಗೂ ಖಂಡಿಸುವ ಕೆಲಸ ಮಾಡುತ್ತಿರುವುದು ಸರಿಯೇ?
ಕರ್ನಾಟಕದ ಆರೋಗ್ಯ ಸಚಿವರಾದ ಯುಟಿ ಖಾದರ್ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಮಾತನಾಡುತ್ತಿರುವಾಗ ಆಡಿದ ಮಾತನ್ನು ವಿರೋಧಿಸುತ್ತಿರುವುದು ಸುಮ್ಮನೆ ಅಲ್ಲ. ಅದರ ಹಿಂದೆ ಯಾವುದೋ ಒಂದು ಅಜೆಂಡಾವಿದೆ. ಯುಟಿ ಖಾದರ್ ಅವರನ್ನು ನೇರವಾಗಿ ವಿರೋಧಿಸಲು ಸಾಧ್ಯವಾಗದೆ, ಅವರ ಆ ಒಂದು ಹೇಳಿಕೆಯ ವಿಚಾರವನ್ನು ತಮಗೆ ಬೇಕಾದ ಹಾಗೆ ಕಲ್ಪಿಸಿಕೊಂಡು, ತಮಗೆ ಬೇಕಾಗಿದ್ದನ್ನು ಮಾತ್ರ ಆಯ್ಕೆ ಮಾಡಿಕೊಂಡು, ಆ ವಿಚಾರವನ್ನೇ ಮುಂದಿಟ್ಟುಕೊಂಡು, ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಅಕ್ಷಮ್ಯ. ಅಷ್ಟೇ ಅಲ್ಲ, ಅಂಥವರನ್ನು ಕ್ರಿಮಿನಲ್ ಪರವಾಗಿ ನಿಂತವರು ಅನ್ನಲು ಯಾವುದೇ ಅಭ್ಯಂತರವಿಲ್ಲ ಅನ್ನಬಹುದು.


ಅಷ್ಟಕ್ಕೂ ಯುಟಿ ಖಾದರ್ ಹೇಳಿದ್ದೇನು?

ಕ್ರಿಮಿನಲ್ ಗಳನ್ನು ಹತೋಟಿಯಲ್ಲಿಡಬೇಕು ಎಂದರೆ, ಅಂತವರಲ್ಲಿ ವ್ಯವಸ್ಥೆಯ ವಿಚಾರವಾಗಿ ಭಯವಿರಬೇಕು. ಹಾಗೆ ಭಯ ಹುಟ್ಟಿಸಬೇಕು ಎಂದರೆ ಕೆಲವೊಮ್ಮೆ (ಆಗಾಗ)ಕಠಿಣ ಕ್ರಮ ಅನಿವಾರ್ಯವಾಗಿರುತ್ತದೆ. ಕ್ರಿಮಿನಲ್ಲ್ಸ್ ಗಳ ಮೇಲೆ ಗುಂಡುಗಳನ್ನು ಹಾರಿಸಿಯಾದರೂ ಅವರನ್ನು ಕಂಟ್ರೋಲ್ ಗೆ ತರಬೇಕು ಅಂತ ಹೇಳುತ್ತಲೇ, ಹಾಗಂತ ಈಗ ಗುಂಡು ಹೊಡೆಯಲು ಆಗುವುದಿಲ್ಲ ಅಂತಲೂ ಹೇಳುತ್ತಾರೆ ಸಚಿವ ಯು ಟಿ ಖಾದರ್.


ಇದರಲ್ಲಿ ತಪ್ಪೇನಿದೆ ಹೇಳಿ? ದೇಶದಲ್ಲಿ ಕ್ರಿಮಿನಲ್ ಆಕ್ಟಿವಿಟೀಸ್ ವಿಪರೀತವಾಗಿದೆ. ನಿಯಮಗಳನ್ನು ಗಾಳಿಗೆ ತೂರಿ ರಾಜಾರೋಷವಾಗಿ ಅಪರಾಧ ಚಟುವಟಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದ್ಯಾವುದರ ಬಗ್ಗೆಯೂ ಮಾತನಾಡುವುದಿಲ್ಲ ಈಗ ಖಾದರ್ ರವರ ವಿರುದ್ಧ ಧ್ವನಿ ಎತ್ತುತ್ತಿರುವ ಮಹಾನುಭಾವರು. ಎಲ್ಲವುದಕ್ಕೂ ಪೊಲೀಸರನ್ನು ಹೊಣೆಗಾರರನ್ನಾಗಿಸುವುದು ಇವತ್ತು ಸಾಮಾನ್ಯ ಸಂಗತಿಯಾಗಿ ಬಿಟ್ಟಿದೆ.

ಪೊಲೀಸರು ಅಪರಾಧಿಗಳನ್ನು ಬಂಧಿಸಿದರು, ಅವರಿಗೆ ಜಾಮೀನು ಸುಲಭವಾಗಿ ಸಿಗುತ್ತದೆ ಹೇಗೆ? ಇದರ ಬಗ್ಗೆ ಚಕಾರವಿಲ್ಲ. ಇವತ್ತು ಅನೇಕ ಪ್ರಕರಣಗಳಿಗೆ ಅದರಲ್ಲೂ ಗಂಭೀರ ಪ್ರಕರಣಗಳಿಗೂ ಮೇಲಿನ ನ್ಯಾಯಾಲಯಗಳಲ್ಲಿ ತಡೆಯಾಜ್ಞೆ ಸಿಗುತ್ತಿವೆ. ಹೀಗೆ ಹತ್ತು ಹಲವು ಸಂಗತಿಗಳು ಇವೆಯಾದರೂ, ಅದ್ಯಾವುದರ ಬಗ್ಗೆಯೂ ಚಕಾರವೆತ್ತದ ಈ ಮನುಷ್ಯರು, ಕೇವಲ ಖಾದರ್ ಹೇಳಿದ ಆ ಒಂದು “ಗುಂಡಿನ” ಮಾತಿಗೋಸ್ಕರ ವಿಪರೀತವಾಗಿ ಟೀಕಿಸುತ್ತಿರುವುದು, ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ?
ಯುಟಿ ಖಾದರ್ ಯಾವ ತಪ್ಪೂ ಮಾಡಿಲ್ಲ. ಪೊಲೀಸ್ ವ್ಯವಸ್ಥೆಗೆ ಬಲ ತುಂಬುವ ಕೆಲಸವನ್ನು ಮಾಡಬೇಕಾದದು ಕೇವಲ ಸರ್ಕಾರದ ಕೆಲಸ ಮಾತ್ರವಲ್ಲ, ಜನಸಾಮಾನ್ಯರ ಕೆಲಸವೂ ಆಗಿದೆ. ಇವತ್ತು ಪೊಲೀಸ್ ವ್ಯವಸ್ಥೆ ಇಲ್ಲ ಅಂದರೆ, ಸಮಾಜದಲ್ಲಿ ಈಗ ಮಾತನಾಡುತ್ತಿರುವವರಿಗೂ ಅಷ್ಟು ಈಜಿಯಾಗಿ ಮಾತನಾಡಲಾಗದು ಎನ್ನುವುದನ್ನು ಗಮನದಲ್ಲಿಡಬೇಕಾಗುತ್ತದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವವರಿಗೆ ಕೆಲವು ಅಧಿಕಾರಗಳು ಅವಶ್ಯವಾಗಿ ಬೇಕು. ಆ ಕಾರಣಕ್ಕಾಗಿ ಅವರಿಗೆ ಆಯುಧಗಳನ್ನು ನೀಡಲಾಗಿದೆ.

ಕೆಲವು ಬದಲಾಗದ ಅಪರಾಧಿಗಳ ಮೇಲೆ “ದಂಡಂ ದಶಗುಣಂ” ಅನಿವಾರ್ಯ. ಅವರ ಅಪರಾಧಕ್ಕೆ ಶಿಕ್ಷೆ ನೀಡಬೇಕಾದ್ದು ನ್ಯಾಯಾಲಯವೇ ಅನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ಕಾನೂನು ಹಾಗೂ ವ್ಯವಸ್ಥೆ ಇವೆರಡರ ಮೇಲೆ ಅಪರಾಧಿ ಪ್ರವೃತ್ತಿಯರಲ್ಲಿರುವವರಿಗೆ ಭಯ ಇಲ್ಲ ಅಂದರೆ, ಆಗ ಅವರಿಂದ ಜನಸಾಮಾನ್ಯರು ಭಯಪಡಬೇಕಾಗುತ್ತದೆ, ಅವರಿಂದ ಇಡೀ ಸಮಾಜದ ಪರಿಸ್ಥಿತಿ ಬಿಗಡಾಯಿಸುತ್ತದೆ, ಅವರಿಂದ ಸಮಾಜದ ಶಾಂತಿ ಕದಾಡುತ್ತದೆ. ಶಾಂತಿ ಕದಡುವುದರಿಂದ ಪ್ರದೇಶದ ಭದ್ರತೆ ಅಭದ್ರವಾಗುತ್ತದೆ.


ಈಗ ಮಣಿಪುರದ ವಿಚಾರವನ್ನು ಒಮ್ಮೆ ನೋಡಿ. ಅಲ್ಲಿ ಪ್ರಾರಂಭವಾದದ್ದು ಸಹ ಅಪರಾಧದ ಕೃತ್ಯವೇ. ಅಪರಾಧ ಕೃತ್ಯದ ಮೇಲೆ ನಿಯಂತ್ರಣ ಹೇರುವುದರಲ್ಲಿ ವ್ಯವಸ್ಥೆ ಸೋಲುತ್ತಿದ್ದಂತೆಯೇ ಆ ಅಪರಾಧ ವಲಯವು ವ್ಯವಸ್ಥೆಯನ್ನು ಆವರಿಸಿಕೊಳ್ಳುತ್ತದೆ ಅನ್ನುವುದಕ್ಕೆ ಆ ರಾಜ್ಯದ ಹಿಂಸೆಯು ಸಾಕ್ಷಿಯಾಗುತ್ತಿದೆ. ಈ ಹಿಂದೆ ಕಾಶ್ಮೀರವೂ ಸಹ ಇದೆ ತರಹದಲ್ಲಿತ್ತು. ಸರ್ಕಾರ ಮತ್ತು ವ್ಯವಸ್ಥೆ ಎಡವಟ್ಟು ಮಾಡಿಕೊಂಡರೆ, ಸರ್ಕಾರ ಹಾಗೂ ವ್ಯವಸ್ಥೆಯ ಮೇಲೆಯೇ ಈ ಅಪರಾಧಿಗಳು ಸವಾರಿ ಮಾಡಲು ಪ್ರಾರಂಭಿಸುತ್ತಾರೆ. ಇದಾಗಬಾರದು ಎಂಬ ಕಾರಣಕ್ಕೆ, ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವುದಾಗಿದೆ.

ಯು ಟಿ ಖಾದರ್, ಸರ್ಕಾರದ ಭಾಗವಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಕ್ರಿಮಿನಲ್ ಗಳ ಮೇಲೆ ಹಿಡಿತ ಸಾಧಿಸಬೇಕು ಎಂದು ಹೇಳುವ ಸಂದರ್ಭದಲ್ಲಿ ಗುಂಡು ಹೊಡೆಯುವ ಮಾತನಾಡಿದ್ದಾರೆ. ಅದನ್ನೂ ಸಹ, ಆಗಲೇ ಅವರು ಇವತ್ತಿನ ಸಮಯ ಗುಂಡನ್ನು ಡಿಫೆನ್ಸ್ ಹೊರತುಪಡಿಸಿ ಬೇರೆ ಸಮಯದಲ್ಲಿ ಹೊಡೆಯುವ ಹಾಗಿಲ್ಲ ಅಂತಲೂ ದನಿಗೂಡಿಸಿದ್ದಾರೆ. ಅದನ್ನು ಬಿಟ್ಟು, ತಮಗೆ ಬೇಕಾಗಿದ್ದನ್ನು ಮಾತ್ರ ಆರಿಸಿಕೊಂಡು ಸಚಿವ ಯುಟಿ ಖಾದರ್ ವಿರುದ್ಧ ಮಾತನಾಡುತ್ತಿರುವುದು, ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಅಕ್ಷಮ್ಯವಲ್ಲದೆ ಮತ್ತಿನ್ನೇನು? ಅಷ್ಟೇ ಅಲ್ಲ ಅವರೆಲ್ಲರೂ ಇಂಡೈರೆಕ್ಟ್ ಆಗಿ ಕ್ರಿಮಿನಲ್ ಗಳಿಗೆ ಸಪೋರ್ಟ್ ಮಾಡುವವರು ಅಂತ ತಾನೆ ಅರ್ಥ? ವ್ಯವಸ್ಥೆಯ ಭಾಗವಾಗಿರುವ ಪೊಲೀಸರನ್ನು ನಂಬದವರು, ಸಮಾಜ ಕಂಠಕರ ಮಾತನ್ನು ನಂಬುತ್ತಾರೆಂದರೆ ಅವರ ಹಿತ ಬಯಸುತ್ತಾರೆಂದರೆ ಮಹಾನುಭಾವರು ಎಂಥವರಿರಬಹುದು ಎಂಬ ಪ್ರಶ್ನೆಯು ಎದ್ದೇಳುತ್ತದೆ. ಏನೇ ಇರಲಿ, ಯುಟಿ ಖಾದರ್ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಪೊಲೀಸರಿಗೆ ಅಷ್ಟು ಸ್ವಾತಂತ್ರ್ಯ ಬೇಕು ಕೂಡ. ಪರಮನೆಂಟ್ ಅಪರಾಧಿಗಳಿಗೆ ಗುಂಡು ಅನಿವಾರ್ಯವಾಗಬೇಕು. ಏನಂತೀರಿ?
-ದತ್ತು

##UTKhader#KarnatakaPolitics#Mangaluru#LawAndOrder#RowdySheeters

COMMENTS

Login with Gmail to comment

ಇನ್ನಷ್ಟು ಸುದ್ದಿ

ತಪ್ಪೊಪ್ಪಿಕೊಂಡ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಆರೋಪಿ ಶಾರೀಕ್…!ಶಿಕ್ಷೆ ಏನು?
ನಿಶ್ಶಬ್ದ ಕೊಠಡಿ ಹೇಳುವ ನಿಗೂಢ ರಹಸ್ಯ …!ಮನೆಯ ಗೋಡೆಗಳ ಮೇಲೆ ಬರಹ,ಕಾಗದಗಳು ನೂರಾರು…! ಅಸಹಜ ಮರಣದ ಹಿಂದೆ ಅಡಗಿರುವ ಸತ್ಯ ಇನ್ನೂ ಅನಾವರಣವಾಗಿಲ್ಲ…”
ದೇಶಕ್ಕಾಗಿ ಹಾರಿದ ಯುವ ಪೈಲಟ್: ಅಸ್ಸಾಂ ದುರಂತದಲ್ಲಿ ಐಎಎಫ್ ಅಧಿಕಾರಿ ವೀರಮರಣ
🚢 “ಹಾರ್ಮುಝ್‌ನಿಂದ ಮಂಗಳೂರುವರೆಗೆ – 46,000 MT ಎಲ್‌ಪಿಜಿ ಯಮಹಾಯಾತ್ರೆ!
AI ಹವಾ-ಬೇಗನೆ ಫೈನಾನ್ಷಿಯಲ್ ಇಂಡಿಪೆಂಡೆಂಟ್ ಆಗೋ ಟ್ರೆಂಡ್- ಕೈಬಿಟ್ಟ  ಓದು!! ಇದು ಗಂಭೀರ ಸೂಚನೆ….
ಹಳ್ಳಿಯಿಂದ ಡೆಲ್ಲಿ ತನಕ ಉರಿ ಬಿಸಿಲು, ಮಾರ್ಚ್ ಆರಂಭದಲ್ಲೇ ಜನ ತತ್ತರ”
ಸಂಸದ ಸಂಜಯ್ ಅರೋರ ಬಂಧನ…. ಉಳಿದ ಮೂರು ಸಂಸದರನ್ನು ಸೆಳೆಯಲು ಈ ಅನೈತಿಕ ಮಾರ್ಗ ಎಂದು ಎಎಪಿ.
ಮಂಗಳೂರಿನಲ್ಲಿ ಪಕ್ಕಪ್ಲಾನ್ ಡ್ ಅಟ್ಯಾಕ್ ..!ರೌಡಿ ಶೀಟರ್ ಬರ್ಬರ ಹತ್ಯೆ…ವಿಶೇಷ ತಂಡ ರಚನೆ..!
ಕೇವಲ ₹5 ಕ್ಕೆ ಸಿಗಲಿದೆ ಬಿಸಿಬಿಸಿ ಮೀನು-ಊಟ! ಮಹಿಳೆಯರ ಖಾತೆಗೆ ಪ್ರತಿ ತಿಂಗಳು ₹3,000 ಫಿಕ್ಸ್! ಎಲ್ಲಿ ಯಾರು ಕೊಡ್ತಾರೆ …
Tata Consultancy Services (TCS) ನಾಶಿಕ್ ವಿವಾದ-ಬೆಚ್ಚಿಬೀಳಿಸಿದ 30 ದಿನಗಳ ಗುಪ್ತ ಪೊಲೀಸ್ ಆಪರೇಷನ್‌ ರಹಸ್ಯಗಳು…!
ಶಾಮ್ ಇನ್ಸ್ಟಿಟ್ಯೂಶನ್ ಪ್ರಸ್ತುತ ಪಡಿಸಿದ “ಕಜ್ಜ” ತುಳು ಸಿನಿಮಾದ ಆಡಿಯೋ, ಟೇಲರ್ ಬಿಡುಗಡೆ
“ಧುರಂಧರ್ “ಸಿನಿಮಾವನ್ನೂ ಮೀರಿದ ಪಾಕ್ ಸಂಚನ್ನ ಭೇದಿಸಿದ ಕೇಂದ್ರ ಗುಪ್ತಚರ ಇಲಾಖೆ ಮತ್ತು ಕರ್ನಾಟಕ ಖಾಕಿ..
ಆಡುತ್ತಾ ಆಡುತ್ತಲೇ ಜೀವ ಬಿಟ್ಟ ಫಿಟ್ ಆಗಿದ್ದ ಯುವಕ್ರಿಕೆಟಿಗ… ನೀರು ಕುಡಿದ ತಕ್ಷಣವೇ ಕುಸಿದು ಬಿದ್ದ ರಣಜಿ ಆಟಗಾರ… 
ಸಂಸತ್ ವಿಶೇಷ ಅಧಿವೇಶನ: ಮಹಿಳಾ ಮೀಸಲಾತಿಗೆ ಒಗ್ಗಟ್ಟು, ಡಿಲಿಮಿಟೇಶನ್ ಮೇಲೆ ಭಾರಿ ವಿವಾದ – ಕರ್ನಾಟಕಕ್ಕೂ ಪರಿಣಾಮದ ಚರ್ಚೆ 🔥
“ಅಪ್ರಾಪ್ತ ಅತ್ಯಾಚಾರ ಸಂತ್ರಸ್ತರಿಗೆ ಅಬಾರ್ಷನ್ ಮಾಡಲು ಆದ್ಯತೆ ,ಕಾನೂನು ತಿದ್ದುಪಡಿ”- ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್‌ನಲ್ಲಿ ಗದ್ದಲ: ದಾಖಲೆ ಎಸೆದು ಅವಾಚ್ಯ ಶಬ್ದ ಬಳಕೆ ಯಾಕೆ?- ಅರ್ಜಿದಾರನ ಅರ್ಜಿ ವಜಾ
ಆನ್‌ಲೈನ್ ಗೋಲ್ಡ್ ಮಾರ್ಕೆಟ್ ಹೂಡಿಕೆಯಲ್ಲಿ ಮೋಸ- ಮಹಿಳೆಗೆ ₹10.55 ಲಕ್ಷ ನಷ್ಟ
ಮೋದಿ ಅವರ ನಿರ್ಧಾರಗಳು“ದೀರ್ಘಕಾಲೀನ ಅಭಿವೃದ್ಧಿಗೆ ಜವಾಬ್ದಾರಿಯುತ ನೀತಿಗಳು” ಆತಂಕದ ಸೂಚನೆ ಅಲ್ಲ-ಎಸ್.ಎಸ್. ನಾಯಕ್
“ಟೀಕೆ ಮಾಡಿ, ತೇಜೋವಧೆ ಬೇಡ” – ಹೈಕೋರ್ಟ್‌ನಿಂದ ಗಿರೀಶ್ ಮಟ್ಟೆಣ್ಣನವರ್‌ಗೆ ಖಡಕ್ ಎಚ್ಚರಿಕೆ
ಹೊಸ ರಾಜಕೀಯ ಕ್ರಾಂತಿ! ಅಸ್ಸಾಂ ಕುದಿಯುತ್ತಿದೆ…ಹಿಂದುತ್ವ vs ಗುರುತು ರಾಜಕೀಯ…!
ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಎರಡು ಬಣಗಳ ರಣರಂಗ!ಮಾತಿನ ಚಕಮಕಿ ಹೊಡೆದಾಟಕ್ಕೆ ತಿರುಗಿದ ಕ್ಷಣ…
ತಮಿಳುನಾಡು ರಾಜಕೀಯದಲ್ಲಿ ಮೆಗಾ ಟ್ವಿಸ್ಟ್…ಸ್ಟಾಲಿನ್ DMKತಂಡದ ವಾಕ್‌ಔಟ್ ರಾಜಕೀಯ ಲೆಕ್ಕಾಚಾರವಾ?
ಬೀದಿ ನಾಯಿಗಳ ಹಾವಳಿ ಮಾನವ ಜೀವ ರಕ್ಷಣೆಗೆ ಮೊದಲ ಆದ್ಯತೆ — ಸುಪ್ರೀಂ ಕೋರ್ಟ್‌ನ ಕಠಿಣ ನಿಲುವು
ಜೈನ ಸನ್ಯಾಸ ದೀಕ್ಷೆ ನಿಯಮಗಳು ಏನು ಗೊತ್ತಾ?
ಸುಳ್ಳು ಸ್ಟೇಟ್ಮೆಂಟ್ ನೀಡಿದ ಎಚ್ ಪಿ ಸಿ ಎಲ್
ಕಾಂಗ್ರೆಸ್ ಜನರ ವಿಶ್ವಾಸದಿಂದ ದಿನದಿಂದ ದಿನಕ್ಕೂ ದೂರ ಹೋಗುತ್ತಿರುವುದಕ್ಕೆ ಸಾಕ್ಷಿನೇ ಇದು
ಲಿವ್-ಇನ್ ಸಂಬಂಧಗಳಲ್ಲಿ ಕಾನೂನು ಮಿತಿ ಎಲ್ಲಿದೆ?-ಸುಪ್ರೀಂ ಕೋರ್ಟ್‌ನ ಮಹತ್ವದ ಪ್ರಶ್ನೆ
ರಾಜ್ಯಮಟ್ಟದಲ್ಲಿ ಸದ್ದು ಮಾಡಿದ ತೆರಿಗೆ ವಂಚನೆ ಪ್ರಕರಣದ ನಂತರವೂ ಅಧಿಕಾರಿಗಳು ಪಾಠ ಕಲಿತಿಲ್ಲವೇ….!?
ಉಡುಪಿ ನಗರ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸಭೆ ಎರಡೂ ಕಮಾಯಿಗೆ ಕುಳಿತು ಕೊಂಡಿದೆಯಾ?
80 ಲಕ್ಷ ವಂಚನೆ ಪ್ರಕರಣ ದೂರು ದಾಖಲು