📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಕನ್ನಡದ ನೆಲದಲ್ಲಿ ಕನ್ನಡಕ್ಕೇ ಗೇಟ್ ಪಾಸ್: ಇವರು ಕರ್ನಾಟಕದ ಸಚಿವರೊ⁉️ಇಂಗ್ಲೆಂಡಿನ ಪ್ರತಿನಿಧಿಯೋ?

ಕರ್ನಾಟಕದ ಮಣ್ಣಿನಲ್ಲಿ ನಿಂತು, ಕನ್ನಡದ ಅನ್ನ ಉಣ್ಣುತ್ತಾ, ಕನ್ನಡದ ಗಾಳಿಯನ್ನು ಉಸಿರಾಡುತ್ತಾ, ಕರ್ನಾಟಕದ ಮಂತ್ರಿಯಾಗಿ ಮೆರೆಯುತ್ತಾ, ಅಧಿಕಾರದ ಕುರ್ಚಿಯಲ್ಲಿ ಕುಳಿತಿರುವ ವ್ಯಕ್ತಿಯೊಬ್ಬರು “ಕಾಲೇಜು ಕ್ಯಾಂಪಸ್‌ನಲ್ಲಿ ಕನ್ನಡ ಮಾತನಾಡಬೇಡಿ” ಎನ್ನುತ್ತಾರೆ ಎಂದರೆ ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ. ಅವರ ಈ ಇತ್ತೀಚಿನ ಹೇಳಿಕೆ ಕೇವಲ ಒಂದು ಸೂಚನೆಯಲ್ಲ, ಇದು ಆರು ಕೋಟಿ ಕನ್ನಡಿಗರ ಅಸ್ಮಿತೆಗೆ ಬಗೆದ ದ್ರೋಹ.
ಇವರು ಯಾರ ಪ್ರತಿನಿಧಿ?
ಸಚಿವರ ಈ ಹೇಳಿಕೆಯನ್ನು ಕೇಳಿದರೆ ಒಂದು ಅನುಮಾನ ಕಾಡುತ್ತದೆ—”ಇವರು ಕರ್ನಾಟಕದ ಮಂತ್ರಿಯೋ, ಅಥವಾ ವಿದೇಶದ ಯಾವುದೋ ಜನಪ್ರತಿನಿಧಿಯೋ ಅಥವಾ ರಾಜ್ಯಪಾಲನೋ? ಕರ್ನಾಟಕದ ನೆಲದಲ್ಲಿ ಕನ್ನಡ ಬೇಡ ಎನ್ನುವ ಇವರಿಗೆ ಇಲ್ಲಿನ ಭಾಷೆ, ಸೊಗಡು ಮತ್ತು ಸಂಸ್ಕೃತಿಯ ಬಗ್ಗೆ ಕಿಂಚಿತ್ತೂ ಗೌರವ ಇಲ್ಲದಂತಿದೆ. ಬ್ರಿಟಿಷರು ಹೋದರೂ ಇವರಂತಹವರಲ್ಲಿ ಇನ್ನೂ ಆ ‘ಗುಲಾಮಿ ಮಾನಸಿಕತೆ’ ಜೀವಂತವಾಗಿದೆ ಎಂಬುದು ಈ ಹೇಳಿಕೆಯಿಂದ ಸಾಬೀತಾಗಿದೆ.
ಕನ್ನಡ ಇಲ್ಲದಿದ್ದರೆ ಕರ್ನಾಟಕ ರಾಜ್ಯವೇಕೆ?
ಸಚಿವರಿಗೆ ಒಂದು ನೇರ ಪ್ರಶ್ನೆ “ಈ ನೆಲದಲ್ಲಿ ಕನ್ನಡವೇ ಇಲ್ಲ ಎಂದಮೇಲೆ ಕರ್ನಾಟಕ ಎಂಬ ರಾಜ್ಯವೇಕೆ ಇರಬೇಕು?” ಭಾಷೆಯ ಆಧಾರದ ಮೇಲೆ ಪ್ರಾಂತ್ಯಗಳು ವಿಂಗಡಣೆಯಾದ ಇತಿಹಾಸ ಸಚಿವರಿಗೆ ತಿಳಿದಿಲ್ಲವೇ? ಈ ರಾಜ್ಯದ ಅಸ್ತಿತ್ವವೇ ಕನ್ನಡದ ಮೇಲಿದೆ. ಅಂತಹದರಲ್ಲಿ ಶಿಕ್ಷಣ ಸಂಸ್ಥೆಗಳಿಂದ ಕನ್ನಡವನ್ನು ಹೊರದಬ್ಬುವುದು ಎಂದರೆ ಕರ್ನಾಟಕದ ಆತ್ಮವನ್ನೇ ಕೊಂದಂತೆ ಆಗುವುದಿಲ್ಲವೇ?
ಯಾರ ಖುಷಿಗಾಗಿ ಈ ಹೇಳಿಕೆ?
ಸಚಿವರು ಈ ಉದ್ಧಟತನದ ಹೇಳಿಕೆಯನ್ನು ಯಾರ ಪ್ರೀತಿ ಗಳಿಸಲು ನೀಡಿದ್ದಾರೆ? ಬಂಡವಾಳಶಾಹಿಗಳ ಲಾಭಕ್ಕಾಗಿ ಅಥವಾ ಪರಭಾಷಿಕ ಉದ್ಯಮಿಗಳ ಮೆಚ್ಚುಗೆ ಗಳಿಸುವುದಕ್ಕಾಗಿಯೇ? ಶಿಕ್ಷಣ ಇಂದು ಉದ್ಯಮಿಗಳ ಪಾಲಿಗೆ ಲಾಭದಾಯಕ “ಮಾರಾಟದ ವಸ್ತು”ವಾಗಿ ಮಾರ್ಪಟ್ಟಿದೆ. ಅಂತಹ ಉದ್ಯಮಿಗಳ ಹಿತ ಕಾಯಲು ಹೋಗಿ, ನಮ್ಮ ನಾಡಿನ ಸಂಸ್ಕೃತಿಯನ್ನು ಬಲಿ ಕೊಡುತ್ತಿರುವ ಸಚಿವರು ಕನ್ನಡಕ್ಕೆ ದೊಡ್ಡ ಆಪತ್ತಾಗಿ ಪರಿಣಮಿಸಿದ್ದಾರೆ. ಶಿಕ್ಷಣದ ವ್ಯಾಪಾರೀಕರಣ ಮತ್ತು ಕನ್ನಡದ ಅಸ್ತಿತ್ವ ಪ್ರತಿ ಮಗುವಿನ ಮೂಲಭೂತ ಹಕ್ಕಾಗಬೇಕಿದ್ದ ಶಿಕ್ಷಣವನ್ನು ಇಂದು ದಂಧೆಯನ್ನಾಗಿ ಮಾಡಿಕೊಂಡಿರುವ ಶಿಕ್ಷಣ ಮಾಫಿಯಾದ ಹಿತ ಕಾಯಲು ಸರ್ಕಾರ ನಿಂತಂತಿದೆ.
ಖಾಸಗಿ ಕಾಲೇಜುಗಳಲ್ಲಿ ಕನ್ನಡಕ್ಕೆ ಬೆಲೆ ಇಲ್ಲದಂತೆ ಮಾಡಿ, ಪಾಶ್ಚಾತ್ಯ ಸಂಸ್ಕೃತಿಯನ್ನು ಹೇರುವ ಮೂಲಕ ನಮ್ಮ ಮಣ್ಣಿನ ಬೇರುಗಳನ್ನು ಕಿತ್ತುಹಾಕುವ ಸಂಚು ಇದರ ಹಿಂದೆ ಅಡಗಿದೆ.
ಉನ್ನತ ಸ್ಥಾನಕ್ಕೆ ಇವರು ಅರ್ಹರೇ?
ಕನ್ನಡ ವಿರೋಧಿ ಧೋರಣೆ ಹೊಂದಿರುವ ವ್ಯಕ್ತಿ ಉನ್ನತ ಶಿಕ್ಷಣ ಮಂತ್ರಿಯಾಗಿ ಮುಂದುವರಿಯುವುದು ಕರ್ನಾಟಕಕ್ಕೆ ಮಾಡುವ ಅಪಮಾನ. ಸಚಿವರ ಈ ನಿಲುವು ಕನ್ನಡಿಗರ ಸ್ವಾಭಿಮಾನಕ್ಕೆ ಎಸೆದ ಸವಾಲಾಗಿದೆ.
ಗೊತ್ತಿಲ್ಲದಿದ್ದರೆ ತಿಳಿದುಕೊಳ್ಳಲಿ
ಕನ್ನಡ ಭಾಷೆಯನ್ನು ಕೀಳಾಗಿ ಕಾಣುವ ಮತ್ತು ನಿರ್ಬಂಧಿಸುವ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು.
ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡದ ಹಕ್ಕನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನ ನಡೆದರೆ ಕನ್ನಡಿಗರು ಸುಮ್ಮನಿರಲಾರರು.
ಮೂಲಭೂತ ಹಕ್ಕಾದ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುವುದನ್ನು ನಿಲ್ಲಿಸಿ, ಕನ್ನಡದ ಅಸ್ತಿತ್ವ ಕಾಪಾಡಲು ಮುಂದಾಗಬೇಕು.
ಕನ್ನಡ ಎಂದರೆ ಬರಿ ಭಾಷೆಯಲ್ಲ, ಅದು ನಮ್ಮ ಉಸಿರು. ಆ ಉಸಿರನ್ನೇ ಕಟ್ಟುವ ಕೆಲಸಕ್ಕೆ ಕೈ ಹಾಕಿದರೆ ಕನ್ನಡಿಗರ ಆಕ್ರೋಶದ ಮುನಿಸಿಗೆ ಸಚಿವರು ಉತ್ತರಿಸಬೇಕಾಗುತ್ತದೆ.
ಕನ್ನಡವೇ ಸತ್ಯ, ಕನ್ನಡವೇ ನಿತ್ಯ

COMMENTS

Login with Gmail to comment

ಇನ್ನಷ್ಟು ಸುದ್ದಿ

ತುಮಕೂರಿನಲ್ಲಿ ಬೆಚ್ಚಿಬೀಳಿಸುವ ತಂದೆ-ಮಗಳು ದುರಂತ
ಅಮೇರಿಕಾ ಅಧ್ಯಕ್ಷರ ಮೇಲೆ ಎರಡನೆಯ ಬಾರಿ ಗುಂಡಿನ ದಾಳಿ
ದಾವಣಗೆರೆ & ಬಾಗಲಕೋಟೆ ಬೈಎಲೆಕ್ಷನ್ ಬಿಗ್ ಬ್ಲಾಸ್ಟ್!
ಆಡುತ್ತಾ ಆಡುತ್ತಲೇ ಜೀವ ಬಿಟ್ಟ ಫಿಟ್ ಆಗಿದ್ದ ಯುವಕ್ರಿಕೆಟಿಗ… ನೀರು ಕುಡಿದ ತಕ್ಷಣವೇ ಕುಸಿದು ಬಿದ್ದ ರಣಜಿ ಆಟಗಾರ… 
🚨 ಬೈಂದೂರಿನಲ್ಲಿ ಭಯಾನಕ ದಾಳಿ! ಕತ್ತಿಯಿಂದ ಹಲ್ಲೆ – ಆರೋಪಿ ಬಂಧನ
ತಮಿಳುನಾಡು ರಾಜಕೀಯದಲ್ಲಿ ಮೆಗಾ ಟ್ವಿಸ್ಟ್…ಸ್ಟಾಲಿನ್ DMKತಂಡದ ವಾಕ್‌ಔಟ್ ರಾಜಕೀಯ ಲೆಕ್ಕಾಚಾರವಾ?
ಬೇಕಾದಾಗ, ಬೇಕಾದಂಗೆ ಸಂವಿಧಾನದ ಜಪ
ನೆತನ್ಯಾಹು ಎಲ್ಲಿದ್ದಾರೆ? ಬದುಕಿದ್ದರೆ ಹಿಂಬಾಲಿಸಿ ಕೊಲ್ಲುತ್ತೇವೆ ಎಂದ ಇರಾನ್
ಗ್ಯಾಸ್ ಪೈಪ್‍ಲೈನ್ ಸೋರಿಕೆ: ಅಣಕು ಪ್ರದರ್ಶನ
ಪ್ರೀತಿಸಿ ಓಡಿಹೋದ ಸೇಡಿನ ಬೆಂಕಿಗೆ ಬಲಿಯಾದ ನಿರ್ದೋಷಿ ಅಣ್ಣ..!
ಕರ್ನಾಟಕದಲ್ಲಿ ಯುಗಾದಿ ಹಬ್ಬಕ್ಕೂ ಮುನ್ನವೇ  ಮುಂಗಾರು  ಮಳೆರಂಗು – 5 ಜಿಲ್ಲೆಗಳಲ್ಲಿ ಆಲಿಕಲ್ಲು ಅಬ್ಬರ!
ಜೆಡಿಎಸ್  ಜನರಲ್ ಸೆಕ್ರೆಟರಿಯಾಗಿ ಯೋಗೇಶ್ ಶೆಟ್ಟಿ ಜಪ್ಪು ಆಯ್ಕೆಯ ಲೆಕ್ಕಾಚಾರವೇನು?
ಹೋಟೆಲ್ನಲ್ಲಿ ಅಗ್ನಿಯ ಜ್ವಾಲೆ-ಉಸಿರುಗಟ್ಟಿದ ಹೊಗೆಯೊಳಗೆ ಅಡಗಿಹೋದ ಜೀವಗಳು ..!
ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿ ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕೊನೆಗೂ ಪತ್ತೆ ಹಚ್ಚಲಾಗಿದೆ.
ಲಿವ್-ಇನ್ ಸಂಬಂಧಗಳಲ್ಲಿ ಕಾನೂನು ಮಿತಿ ಎಲ್ಲಿದೆ?-ಸುಪ್ರೀಂ ಕೋರ್ಟ್‌ನ ಮಹತ್ವದ ಪ್ರಶ್ನೆ
ಬೃಹತ್ ಅಭಿಯಾನ….5.51 ಟನ್ ವಸ್ತುಗಳು..!5000ಕ್ಕೂ ಹೆಚ್ಚು ದೇವರ ಫೋಟೋಗಳು
ನೀರು ಪೋಲು ಬೇಡ….ಈಗಲೇ ಎಚ್ಚೆತ್ತುಕೊಳ್ಳಿ!ಇಂದು ನಿರ್ಲಕ್ಷ್ಯ,ನಾಳೆ ಜಲ ಸಂಕಷ್ಟದ ಎಚ್ಚರಿಕೆ…!
“ಯೋಗೇಶ್ ಗೌಡ ಪ್ರಕರಣದಲ್ಲಿ ಕಾನೂನು ಗರ್ಜನೆ!”ಕಾನೂನು ಕಾಯುವವರೇ ಬೂಟು ನೆಕ್ಕಿಕಾನೂನು ಮುರಿದಾಗ-7 ವರ್ಷಗಳ ಜೈಲು!ಕಾನೂನು ಇನ್ನೂ ಜೀವಂತ!”
ಡಾನ್ -3 ಸಿನಿಮಾ ಕಥೆ ಗೋವಿಂದ….!
ಮಣಿಪಾಲ ಜೆಇಇ ಮೇನ್ಸ್ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಪ್ರಯತ್ನ….
ಬ್ಯಾಂಕುಗಳ ಮೇಲೆ ಭೀಕರ ದಾಳಿಯ ಮುನ್ಸೂಚನೆ ನೀಡಿದ ಇರಾನ್- ಮಿನಿಮಮ್ 1000 ಮೀಟರ್ ದೂರವಿರಿ
ಉಡುಪಿಯಲ್ಲಿ ಆಡಳಿತ ನಡೆಸುತ್ತಿರುವುದು ಜನವಿರೋಧಿ ಜಿಲ್ಲಾಡಳಿತವೇ?
ಗುರು ಬ್ರಹ್ಮ – ಗುರು ವಿಷ್ಣು ಅನ್ನುವ ಕಾಲ ಮುಗಿದು ಹೋಯ್ತೇ?
ಶಿರಸಿ ಮಾರಿಯಮ್ಮನ ಜಾತ್ರೆ ಪ್ರಾರಂಭ
ಆಂಬುಲೆನ್ಸ್ ಡ್ರೈವರ್ ನ ಸಮಾಜ ಸೇವೆಯ ಕಾರ್ಯ ಶ್ಲಾಘನಿಯ – ಸುದೇಶ್ ಕುಮಾರ್
ಮೇ 29ರಿಂದ ತಣ್ಣೀರುಬಾವಿ ಬೀಚ್‌ನಲ್ಲಿ ಮೂರು ದಿನಗಳ ರಾಷ್ಟ್ರಮಟ್ಟದ ಸರ್ಫಿಂಗ್ ಸ್ಪರ್ಧೆ…
60 ದಿನಗಳ ಸ್ಟಾಕ್ – ಭಾರತಕ್ಕೆ ಎಲ್‌ಪಿಜಿ ಚಿಂತೆ ಇಲ್ಲ!
ಭಾರತೀಯ ಸೇನೆಯ ನೆರವಿಗೆ ಡ್ರೋನ್ ನರ್ಸಿಂಗ್ ಹೋಮ್! ದುರ್ಗಮ ಪ್ರದೇಶಗಳಲ್ಲೂ ಸಿಗಲಿದೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ
ಅಲ್ಲಿ ಸೌಮೆಂದು ಅಧಿಕಾರಿ…. ಇಲ್ಲಿ ಸಾಮ್ರಾಟ್ ಚೌದರಿ, ಹೆಲ್ತ್ ಮಿನಿಸ್ಟರ್ ನಿಶಾಂತ್….
ತುರ್ತು ಎಚ್ಚರಿಕೆ ‼️ಹಿಪ್ನೋಟೈಸಿಂಗ್ ಸ್ವಾಮಿಗಳು ನಿಮ್ಮ ಬಳಿಯೂ ಬರಬಹುದು