📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಜನಪ್ರತಿನಿಧಿಗಳಿಗೆ ಕೆಲಸ ,ಜನಸೇವೆ ಬೇಡ ,ಪ್ಲೆಕ್ಸ್ ಮಾತ್ರ ಫುಲ್ ಸೈಜ್ …ಕಾನೂನು ಇದೆ… ಪಾಲನೆ ಮಾತ್ರ ಇಲ್ಲ!

ಅವಿವೇಕದ ಅತಿರೇಕ — “ಜನಪ್ರತಿನಿಧಿ” ಎಂಬ ಹೆಸರಿನಲ್ಲಿ ಸಾರ್ವಜನಿಕ ಶಿಸ್ತಿಗೆ ಧಕ್ಕೆ

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅನಧಿಕೃತ ಪ್ಲೆಕ್ಸ್, ಕಟೌಟ್ ಮತ್ತು ಬ್ಯಾನರ್ ಸಂಸ್ಕೃತಿ ಕೇವಲ ಅಸಹ್ಯಕರವಾಗಿರುವುದಲ್ಲ, ಸಾರ್ವಜನಿಕ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತಿರುವ ಗಂಭೀರ ಸಮಸ್ಯೆಯಾಗಿದೆ. ಕಾನೂನು, ನ್ಯಾಯಾಲಯದ ಆದೇಶ, ಪರಿಸರ—allವನ್ನು ನಿರ್ಲಕ್ಷಿಸಿ ತಮ್ಮ ಸ್ವಾರ್ಥದ ಪ್ರಚಾರಕ್ಕಾಗಿ ರಸ್ತೆಗಳು, ವೃತ್ತಗಳು, ಸರ್ಕಾರಿ ಜಾಗಗಳು ತುಂಬಿಸುವ ಈ “ಸೋ-ಕಾಲ್ಡ್” ಜನಪ್ರತಿನಿಧಿಗಳ ವರ್ತನೆ ವಿಷಾದ ಕರ.

ಇನ್ನಷ್ಟು ವಿಷಾದಕರ ಸಂಗತಿ ಎಂದರೆ, ಇಂತಹ ಅಕ್ರಮಗಳಿಗೆ ಬೆಂಬಲ ನೀಡುವ ಕೆಲ ಸಂಘ ಸಂಸ್ಥೆಗಳು ಮತ್ತು ಅರಿವು ಇಲ್ಲದ ಅನುಯಾಯಿಗಳು. ಸಮಾಜಕ್ಕೆ ಮಾದರಿ ಆಗಬೇಕಾದವರು ನಿಯಮ ಮೀರಿ ನಡೆದುಕೊಂಡರೆ, ಸಾಮಾನ್ಯ ಜನರಲ್ಲಿ ತಪ್ಪು ಸಂದೇಶವೇ ಹೋಗುತ್ತದೆ. ಇದು ನಾಯಕತ್ವವಲ್ಲ—ಇದು ಜವಾಬ್ದಾರಿಯಿಲ್ಲದ, ಅಸಂವೇದನಶೀಲ careless ನಡೆ.dontcare ಮನಸ್ಥಿತಿ.

ಇಂದಿನ ಯುಗದಲ್ಲಿ ಸಾಮಾಜಿಕ ಜಾಲತಾಣಗಳೇ ಸಾಕು ಪ್ರಚಾರಕ್ಕೆ. ಹೆಸರು-ಖ್ಯಾತಿ ಬೇಕಾದರೆ ಉತ್ತಮ ಕೆಲಸ ಮಾಡಿ, ಅದನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಿ. ಜನರಿಗೆ ತೊಂದರೆ ಕೊಟ್ಟು, ನಗರವನ್ನು ಕುರೂಪಗೊಳಿಸಿ ಗಮನ ಸೆಳೆಯುವ ಪ್ರಯತ್ನಗಳು ಅಸಹ್ಯಕರ.


ಮುಖ್ಯ ಸಮಸ್ಯೆಗಳು:

  • ಪರಿಸರಕ್ಕೆ ಭಾರೀ ಹಾನಿ ಉಂಟುಮಾಡುವ ಪ್ಲಾಸ್ಟಿಕ್ ಪ್ಲೆಕ್ಸ್
  • ರಸ್ತೆ ತಿರುವುಗಳು, ಪ್ರಮುಖ ಸ್ಥಳಗಳಲ್ಲಿ ಚಾಲನೆಗೆ ಅಡ್ಡಿ → ಅಪಘಾತಗಳ ಅಪಾಯ
  • ಸಾರ್ವಜನಿಕ ಆಸ್ತಿಯ ದುರ್ಬಳಕೆ
  • ಕಾನೂನು ಹಾಗೂ ನ್ಯಾಯಾಲಯದ ಆದೇಶಗಳ ನಿರ್ಲಕ್ಷ್ಯ
  • ತೆರವು ಮಾಡಿದ ನಂತರ ಸರಿಯಾದ ವಿಲೇವಾರಿ ಇಲ್ಲದೆ ಮತ್ತಷ್ಟು ಮಾಲಿನ್ಯ
  • ಹಬ್ಬ-ಉತ್ಸವಗಳ ಹೆಸರಿನಲ್ಲಿ ಹಣದ ದುರುಪಯೋಗ

ಅಧಿಕಾರಿಗಳ ನಿಷ್ಕ್ರಿಯತೆ ಕೂಡ ಖಂಡನೀಯ. ಕಾನೂನು ಅಧಿಕಾರ ಇದ್ದೂ ಕ್ರಮ ಕೈಗೊಳ್ಳದಿರುವುದು ಈ ಸಮಸ್ಯೆಯನ್ನು ಮತ್ತಷ್ಟು ಗಂಭೀರವಾಗಿಸುತ್ತಿದೆ.


ಕಟ್ಟುನಿಟ್ಟಿನ ಕ್ರಮ ಅಗತ್ಯ:

  • ಭಾರೀ ದಂಡ ಕಡ್ಡಾಯ:
    ಅನಧಿಕೃತ ಪ್ಲೆಕ್ಸ್‌ನಲ್ಲಿ ಯಾರ ಫೋಟೋ/ಹೆಸರು ಇದ್ದರೂ, ಹಾಗೆಯೇ ಅದನ್ನು ಅಳವಡಿಸಿದವರ ಮೇಲೂ ದೊಡ್ಡ ಪ್ರಮಾಣದ ದಂಡ ವಿಧಿಸಬೇಕು.
  • ಹೆಸರನ್ನು ಬಹಿರಂಗಪಡಿಸುವ ಕ್ರಮ:
    ನಿಯಮ ಉಲ್ಲಂಘಿಸಿದವರ ಹೆಸರುಗಳನ್ನು ಪತ್ರಿಕೆ, ಮಾಧ್ಯಮಗಳಲ್ಲಿ ಪ್ರಕಟಿಸಬೇಕು.
  • ತಕ್ಷಣ ತೆರವು + ವೆಚ್ಚ ವಸೂಲಿ:
    ಪ್ಲೆಕ್ಸ್ ತೆಗೆದುಹಾಕುವ ವೆಚ್ಚವನ್ನು ಸಂಬಂಧಿಸಿದವರಿಂದಲೇ ವಸೂಲಿ ಮಾಡಬೇಕು.

ಜನಸಾಮಾನ್ಯರ ಪಾಲ್ಗೊಳ್ಳಿಕೆ — ಫ್ಲೆಕ್ಸ್ ಫ್ರೀ ನಗರಕ್ಕೆ ಮಾರ್ಗ:

  • ಹೆಲ್ಪ್‌ಲೈನ್ ವ್ಯವಸ್ಥೆ:
    ಅನಧಿಕೃತ ಪ್ಲೆಕ್ಸ್ ಕಂಡರೆ ತಕ್ಷಣ ದೂರು ನೀಡಲು ವಿಶೇಷ ಹೆಲ್ಪ್‌ಲೈನ್ ಅಥವಾ ಮೊಬೈಲ್ ಆಪ್ ವ್ಯವಸ್ಥೆ ಇರಬೇಕು.
  • ಪ್ರಮಾಣದೊಂದಿಗೆ ದೂರು → ಪ್ರೋತ್ಸಾಹ ಧನ:
    ಫೋಟೋ/ವೀಡಿಯೋ ಸಾಕ್ಷ್ಯಗಳೊಂದಿಗೆ ದೂರು ನೀಡಿದ ನಾಗರಿಕರಿಗೆ ಪ್ರೋತ್ಸಾಹ ಧನ (reward) ನೀಡುವ ವ್ಯವಸ್ಥೆ ಮಾಡಿದರೆ ಜನರು ಸಕ್ರಿಯವಾಗಿ ಭಾಗವಹಿಸುತ್ತಾರೆ.
  • ಜನಜಾಗೃತಿ ಅಭಿಯಾನ:
    “Flex-Free City” ಎಂಬ ಅಭಿಯಾನವನ್ನು ಪ್ರಚಾರ ಮಾಡಿ, ಶಾಲೆ-ಕಾಲೇಜುಗಳು, ಯುವ ಸಂಘಟನೆಗಳು, ಸ್ಥಳೀಯ ನಿವಾಸಿಗಳನ್ನು ಒಳಗೊಂಡಂತೆ ಜಾಗೃತಿ ಮೂಡಿಸಬೇಕು.
  • ಸಾಮಾಜಿಕ ಹೊಣೆಗಾರಿಕೆ ನಿರ್ಮಾಣ:
    ಪ್ಲೆಕ್ಸ್ ಹಾಕಿಸುವವರನ್ನು ಪ್ರಶ್ನಿಸುವ ಧೈರ್ಯ ಸಾಮಾನ್ಯ ಜನರಲ್ಲಿ ಬರಬೇಕು. ಇದು ಕೇವಲ ಸರ್ಕಾರದ ಕೆಲಸವಲ್ಲ—ಪ್ರತಿ ನಾಗರಿಕರ ಜವಾಬ್ದಾರಿ.

ರಚನಾತ್ಮಕ ಸಲಹೆಗಳು:

  • ಸರಿಯಾದ ಜಾಗಗಳಲ್ಲಿ ಮಾತ್ರ ಬಳಕೆ:
    ಸಾರ್ವಜನಿಕ ಶೌಚಾಲಯ, ಗೋಡೆಗಳ ರಕ್ಷಣೆ, ಸ್ವಚ್ಛತಾ ಜಾಗೃತಿ, ಟ್ರಾಫಿಕ್ ನಿಯಮಗಳ ಬಗ್ಗೆ ಮಾಹಿತಿ ನೀಡಲು ಪ್ಲೆಕ್ಸ್ ಬಳಸಬಹುದು.
  • ಅಕ್ರಮ ಪ್ರದೇಶಗಳಲ್ಲಿ ನಿಗಾವಳಿ:
    ಪ್ಲೆಕ್ಸ್ ಜೊತೆಗೆ CCTV ಕ್ಯಾಮೆರಾ, “ನಿಗಾವಳಿ ಪ್ರದೇಶ” ಫಲಕ, ಉತ್ತಮ ಬೆಳಕು ವ್ಯವಸ್ಥೆ.
  • ಪರಿಸರ ಸ್ನೇಹಿ ಪರ್ಯಾಯಗಳು:
    ಡಿಜಿಟಲ್ ಡಿಸ್ಪ್ಲೇ, ಬಟ್ಟೆಯ ಬ್ಯಾನರ್—ಪ್ಲಾಸ್ಟಿಕ್ ಸಂಪೂರ್ಣ ನಿಷೇಧ.

ಜನಪ್ರತಿನಿಧಿ ಎಂದರೆ ಜನರಿಗಾಗಿ ಕೆಲಸ ಮಾಡುವವರು—ಜನರಿಗೆ ತೊಂದರೆ ಕೊಡುವವರು ಅಲ್ಲ.
ಜನಸಾಮಾನ್ಯರು, ಅಧಿಕಾರಿಗಳು, ಮತ್ತು ನಾಯಕರು—ಎಲ್ಲರೂ ಒಂದಾಗಿ ಕೆಲಸ ಮಾಡಿದರೆ ಮಾತ್ರ “Flex-Free City” ಸಾಧ್ಯ.
ಪ್ರಚಾರಕ್ಕಿಂತ ಜವಾಬ್ದಾರಿ ಮುಖ್ಯ — ಇದೇ ನಿಜವಾದ ನಾಯಕತ್ವ.

##FlexFreeCity #StopIllegalFlex #RealLeadersNoFlex#dakshina Kannada news#public voice

COMMENTS

Login with Gmail to comment

ಇನ್ನಷ್ಟು ಸುದ್ದಿ

ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿ ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕೊನೆಗೂ ಪತ್ತೆ ಹಚ್ಚಲಾಗಿದೆ.
ತೆರಿಗೆ ನಮ್ಮದು… ಪಾಲು ಬೇರೆ ರಾಜ್ಯಗಳಿಗೆ!
ಪಿವಿ ಎಸ್ ಸಂಸ್ಥೆಯ ಆಡಳಿತದಲ್ಲಿ ಯಾರ ಹಸ್ತಕ್ಷೇಪವು ಇಲ್ಲ – ಸರೋಜಿನಿ ಕುಶೆ
ದವಳ ಕೋ- ಆಪರೇಟಿವ್ನ ಈ ಸಾಲಿನ ವ್ಯವಹಾರ ಎರಡುನೂರು ಕೋಟಿ
ಸರ್ಕಾರಿ ವೈದ್ಯರ ಅನರ್ದಿಷ್ಟಾವಧಿ ಮುಷ್ಕರ ರದ್ದು
 “ತಪ್ಪು ಮಾಡಿದ್ರೆ ಕೈ-ಕಾಲು ಕತ್ತರಿಸ್ಬೇಕು, ಆಗಲೇ ಕಾನೂನಿನ ಭಯ ಬರೋದು! “ಗಲ್ಫ್ ದೇಶಗಳ ಮಾದರಿ ಶಿಕ್ಷೆ ಜಾರಿಯಾಗ್ಬೇಕು ಅನ್ನೋ ನ್ಯಾಯಮೂರ್ತಿಗಳ ನಿಲುವಿಗೆ ಇಡೀ ರಾಜ್ಯವೇ ಜೈ ಅಂತಿದೆ!
NEET ಗೊಂದಲ, ಮರುಪರೀಕ್ಷೆ, ಮೌಲ್ಯಮಾಪನ ದೋಷಗಳು ಮತ್ತು ವಿದ್ಯಾರ್ಥಿ ಜೀವನದ ನೋವು..
ಬಳ್ಳಾರಿ “ಪೊಲೀಸ್ ಗನ್‌ಮನ್ ಎಕ್ಸ್‌ಟಾರ್ಷನ್”ಇಲಾಖೆಗೆ ಕಳಂಕ: ಗನ್‌ಮನ್ ಸೇರಿ ಮೂವರ ವಿರುದ್ಧ ಪ್ರಕರಣ!
ಭಾರತದ ಟ್ರಾಫಿಕ್ ಕಿರಿಕಿರಿಗೆ ಇದುವರೆಗೂ ಯಾರೂ ಯೋಚಿಸದ ಮಾಸ್ಟರ್ ಪ್ಲಾನ್!ಉಬರ್ ಡ್ರೈವರ್ ಕೊಟ್ಟ ಐಡಿಯಾ ಕೇಳಿದ್ರೆ ನೀವೂ ಹೌದಲ್ವಾ ಅಂತೀರಾ….
ವಿವಾಹಿತ ದಂಪತಿಗಳಿಗೆ ಜಂಟಿ ITR ವ್ಯವಸ್ಥೆ ತರಲು- ಸಂಸತ್ತಿನಲ್ಲಿ Raghav Chadha ಆಗ್ರಹ.
ಶಿಶಿಲದಲ್ಲಿ ವಿಷಪೂರಿತ ಹಾವು ಕಚ್ಚಿ 65 ವರ್ಷದ ರೈತ ಮೃತ್ಯು
ತಪ್ಪೊಪ್ಪಿಕೊಂಡ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಆರೋಪಿ ಶಾರೀಕ್…!ಶಿಕ್ಷೆ ಏನು?
ದೇಶಾದ್ಯಂತ ಇಂದು ಮೊಬೈಲ್‌ನಲ್ಲಿ ತುರ್ತು ಎಚ್ಚರಿಕೆ ಡ್ರಿಲ್ – ಗಾಬರಿ ಬೇಡ
AAP ಸದ್ದು ಮಂಗಳೂರಲ್ಲೂ! ಜನರ ಸಮಸ್ಯೆಗೆ ನೇರ ಹೋರಾಟ
ಪ್ರಜ್ಞಾನಂದನ ದಿಗ್ವಿಜಯ…ಚೆಸ್ ಚಕ್ರವ್ಯೂಹದಲ್ಲಿ ದಿಗ್ಗಜರನ್ನೆಲ್ಲಾ ಮಣಿಸಿ ಸಿಂಹಾಸನಕ್ಕೇರಿದ ಭಾರತೀಯ ಬಾಲಪ್ರತಿಭೆ! 
ಮೋದಿ ನೇತೃತ್ವದಲ್ಲಿ ಇತಿಹಾಸಕ್ಕೆ ಮರಳಿದ ರಾಜರಾಜಚೋಳರ ಹೆಮ್ಮೆ — ಆನೈಮಂಗಲಂ ತಾಮ್ರಶಾಸನಗಳು! 1000 ವರ್ಷದ ಇತಿಹಾಸ 100 ವರ್ಷಗಳ ಬಳಿಕ ಚೋಳರ ಕಾಲದ ಅಪರೂಪದ ದಾಖಲೆ ನೆದರ್‌ಲ್ಯಾಂಡ್ಸ್‌ನಿಂದ ಭಾರತಕ್ಕೆ ವಾಪಸ್….
8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ
🎬 ಜೈಲರ್ 2 ಸೆಟ್‌ನಲ್ಲಿ ವಿದ್ಯುತ್ ಅವಘಡ…28 ವರ್ಷದ ಕಾರ್ತಿಕೇಯನ್ ವಿದ್ಯುತ್ ಶಾಕ್‌ಗೆ ಬಲಿ..
ಜೈಲಿನೊಳಗೆ ಮೊಬೈಲ್ ಮಾಫಿಯಾ: ಖತರ್ನಾಕ್ ಐಡಿಯಾ..!
ಮಂಗಳೂರು ಸರ್ಕಾರಿ ಕಾಲೇಜಿನಲ್ಲಿ ಎಬಿವಿಪಿ, ಎನ್ ಎಸ್ ಯು ಐ ವಿದ್ಯಾರ್ಥಿಗಳ ಘರ್ಷಣೆ 
ಭಾರತ ಬಗ್ಗೆ ಟ್ರಂಪ್ ಡಬಲ್ ಸ್ಟ್ಯಾಂಡ್…!ವಿವಾದ ಸೃಷ್ಟಿಸಿ, ಬಳಿಕ ಸಮಾಧಾನದ ಮಾತು
ಪರಮೇಶ್ವರ ವಿರುದ್ಧ FIR-₹500 ಬೆಟ್ಟಿಂಗ್ ಹೇಳಿಕೆಗೆ ಕಾನೂನು ಕ್ರಮ.
ಅಪ್ರಾಪ್ತನ ಕ್ರೌರ್ಯಕ್ಕೆ ಬಳ್ಳಾರಿ ವಸತಿ ಶಾಲೆಯ ದೌರ್ಜನ್ಯವೇ ಸಾಕ್ಷಿ… ಈ ಕ್ರೌರ್ಯದ ಹಿಂದೆ ಮನೋರೋಗ ಅಡಗಿದೆಯಾ? 
ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿಗೆ  ಪ್ರತಿದಾಳಿ ಯುಎಇ, ಬಹ್ರೇನ್, ಸೌದಿಯಲ್ಲಿ ಅಮೆರಿಕದ ನೆಲೆಗಳಿಗೆ ನಡುಕ.
717 ಮದ್ಯದಂಗಡಿಗಳಿಗೆ ವಿಜಯ್ ಬ್ರೇಕ್‌! ತಮಿಳುನಾಡು ಖಜಾನೆಗೆ ಸಾವಿರಾರು ಕೋಟಿ ಶಾಕ್!
 ಡೊನಾಲ್ಡ್ ಟ್ರಂಪ್ ಟೆರರ್ ನಡೆ      ವಿಶ್ವದ ಆರ್ಥಿಕತೆ ಪಾತಾಳದ ಕೆಡೆ
ಪುತ್ತೂರಿನ ದೇವಸ್ಥಾನ ಪದಾಧಿಕಾರಿಗಳ ವಿರುದ್ಧ FIR ..!
ಗೃಹಲಕ್ಷ್ಮಿ ಫಲಾನುಭವಿಗಳೇ ಗಮನಿಸಿ: ಹಣ ಕ್ರೆಡಿಟ್ ಆಗ್ಬೇಕಾದ್ರೆ ಇನ್ಮುಂದೆ ಬಯೋಮೆಟ್ರಿಕ್ ಕಡ್ಡಾಯ!
ನಿರ್ಮಾಣ ಹಂತ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು-  ಶಣೈ ಮೇಲೆ ಕೇಸು
ಆಡುತ್ತಾ ಆಡುತ್ತಲೇ ಜೀವ ಬಿಟ್ಟ ಫಿಟ್ ಆಗಿದ್ದ ಯುವಕ್ರಿಕೆಟಿಗ… ನೀರು ಕುಡಿದ ತಕ್ಷಣವೇ ಕುಸಿದು ಬಿದ್ದ ರಣಜಿ ಆಟಗಾರ…