📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಬೋಗಸ್ ದೂರು ಕೊಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಗಂಡಾಂತರ ಗ್ಯಾರೆಂಟಿ

ಇದು ಪೊಲೀಸ್ ಸ್ಟೋರಿ ನೋಡಿ, ಪಿಎಸ್ಐ ವೀರೇಶ್ ಎನ್ನುವವರ ವಿರುದ್ಧ, ಅತ್ಯಾಚಾರ, ಜಾತಿನಿಂದನೆ, ಅಪಹರಣ ದಂತಹ ಗಂಭೀರ ಪ್ರಕರಣವನ್ನು ದಾಖಲಿಸುವ ಮೂಲಕ  ಇಡೀ ರಾಜ್ಯವನ್ನು ತನ್ನತ್ತ ಸೆಳೆದಿದ್ದಾಳೆ ಕಾನ್ಸ್ಟೇಬಲ್ ಜಯಶ್ರೀ

       ಲೇಡಿ ಕಾನ್ಸ್ಟೇಬಲ್ ಜಯಶ್ರೀ ಎನ್ನುವವರೇ ಸಬ್ ಇನ್ಸ್ಪೆಕ್ಟರ್ ವೀರೇಶ್ ಮೇಲೆ ದೂರು ನೀಡಿದ ಮಹಿಳೆಯಾಗಿದ್ದಾಳೆ. ಇದಕ್ಕೂ ಮೊದಲೇ, ವೀರೇಶ್ ಈ ಮಹಿಳೆಯ ಮೇಲೆ ಗುರುತರವಾದಂತಹ ಆರೋಪ ಮಾಡಿದ್ದರು . ಹಲವು ಸಮಯಗಳಿಂದ ನಾವು ಸಂಬಂಧದಲ್ಲಿದ್ದೇವೆ, ಒಂದೇ ರೂಮಿನಲ್ಲಿ ಗಂಡ ಹೆಂಡತಿಯರಂತೆ ಇದ್ದೆವು, ಮದುವೆ ಯಾಗುತ್ತೇನೆ ಅಂತ ನನ್ನನ್ನು ನಂಬಿಸಿದ್ದಳು. ನನ್ನಿಂದ ಸರಿಸುಮಾರು 35 ಲಕ್ಷದಷ್ಟು ಹಣವನ್ನು ಪಡೆದು ವಂಚಿಸಿದ್ದಾಳೆ, ಅಲ್ಲದೆ ನಾನೇ ಇವಳಿಗೆ ಒಂದು ಮನೆಯನ್ನು ಕಟ್ಟಿಸಿ ಕೊಟ್ಟಿದ್ದೇನೆ, ಇವಳ ಸಹೋದರನಿಗೆ ಟ್ಯಾಕ್ಟರ್ ಒಂದು ತೆಗೆಸಿಕೊಟ್ಟಿದ್ದೇನೆ. ಇಷ್ಟೆಲ್ಲಾ ಬೆನಿಫಿಟ್ ಪಡೆದದ್ದು ಕುಟುಂಬಕ್ಕೂ ಗೊತ್ತಿದೆ, ಜೊತೆಗೆ ಎಲ್ಲಾ ರೀತಿಯಲ್ಲೂ ಹೊಂದಿಕೊಂಡಿದ್ದವಳು, ಈಗ ನನ್ನಿಂದ ದೂರವಾಗುತ್ತಿದ್ದಾಳೆಂದು ಆರೋಪಿಸಿದ್ದರು ಪಿಎಸ್ಐ ವೀರೇಶ್.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ, ಕೊಪ್ಪಳದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಇತರರು, ಇಬ್ಬರ ನಡುವೆ ರಾಜಿ ಪಂಚಾಯತಿಯನ್ನು ಮಾಡಿದ್ದರಂತೆ. ಆದರೆ ಈಗ ಇದ್ದಕ್ಕಿದ್ದಂತೆಯೇ ಜಯಶ್ರೀ, ವೀರೇಶ್ ಮೇಲೆ ಅಪಹರಣ, ಅತ್ಯಾಚಾರ ಹಾಗೂ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆಯಡಿ ದೂರನ್ನು ದಾಖಲಿಸಿದ್ದಾಳೆ.

ಮೇಲ್ನೋಟಕ್ಕೆನೆ ಜಯಶ್ರೀ ಕೊಟ್ಟ ದೂರು,  ಬೋಗಸ್ ಅನ್ನುವುದು ಯಂಥವರಿಗೂ ಗೊತ್ತಾಗುತ್ತದೆ. ಆದರೆ, ಕೆಲವು ಅನವಶ್ಯಕವಾದಂತಹ ಕಾನೂನುಗಳಿಂದಾಗಿ, ಪ್ರಕರಣವು ದಾಖಲಾಗಲೇ ಬೇಕಾಗುತ್ತದೆ. ಹಾಗಾಗಿ ಪ್ರಕರಣ ದಾಖಲಾಗಿದೆ. ಈಗ ಪಿಎಸ್ಐ ವೀರೇಶ್ ಗೆ ಬಂಧನದ ಭೀತಿ ಎದುರಾಗಿದೆ. ಬಹುಶಹ ಪಿಎಸ್ಐ ವೀರೇಶ್ ಅಮಾನತ್ತಿಗೆ ಒಳಗಾಗಬಹುದು.

ಈ ಪ್ರಕರಣದಲ್ಲಿ, ಕೆಲವು ವರುಷಗಳ ಕಾಲ, ಪಿಎಸ್ಐ ವೀರೇಶ್ ಜೊತೆಗೆ ಸಂಸಾರ ನಡೆಸಿಕೊಂಡಿದ್ದ ಜಯಶ್ರೀ, ಕೆಲವು ಬಾರಿ ವೀರೇಶನ ವಿರೋಧದ ನಡುವೆಯೂ ಗರ್ಭಪಾತ ಮಾಡಿಸಿಕೊಂಡಿದ್ದಾಳೆಂಬ ಆರೋಪವು ಇದೆ. ಇದನ್ನು ಸ್ವತಹ ವೀರೇಶ್ ಜಯಶ್ರೀ ದೂರು ಕೊಡುವ  ಮೊದಲೇ ಹೇಳಿದ್ದ ಕೂಡ. ಆದರೀಗ, ಜಯಶ್ರೀ ತನ್ನ ದಾಳವನ್ನು ಉರುಳಿಸಿದ್ದಾಳೆ. ಮಹಿಳೆ ಎಂಬ ವಿಚಾರ ಮುಂದಿಟ್ಟುಕೊಂಡು, ಅದರ ಲಾಭವನ್ನು ಪಡೆಯಲು ಹೊರಟಂತೆ ಕಾಣುತ್ತಿದೆ. ನ್ಯಾಯವು ಹೆಣ್ಣಿಗಿರಲಿ, ಗಂಡಿಗಿರಲಿ- ಬಡವನಿರಲಿ ಶ್ರೀಮಂತನಿರಲಿ ಅಥವಾ ಯಾರೇ ಇರಲಿ, ನ್ಯಾಯ ಅನ್ನೋದು ಒಂದೇ ಆಗಿರಬೇಕು ತಾನೆ? ಇಲ್ಲಿ, ಜಯಶ್ರೀ ಮಾಡುವುದನ್ನೇಲ್ಲ ಮಾಡಿ ಇದೀಗ ಸುಳ್ಳು ದೂರನ್ನು ನೀಡುವ ಮೂಲಕ ಇಡೀ ವ್ಯವಸ್ಥೆಯನ್ನೇ ಅಣಕಿಸುವಂತೆ ಮಾಡುತ್ತಿದ್ದಾಳೆ. ಕಾನೂನನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾಳೆ. ಇದು ಅಕ್ಷಮ್ಯ, ಸರ್ಕಾರ ಮತ್ತು ಕಾನೂನು ಪ್ರಾಧಿಕಾರವು ಇಂತಹ ಬೋಗಸ್ ದೂರುಗಳ ವಿಚಾರದಲ್ಲಿ  ದೂರುದಾರರ ಕೈಗೆನೆ ಕೊಳ ಹಾಕುವ ಕಾನೂನನ್ನು ತರುವ ಕೆಲಸ ಮಾಡಬೇಕು. ಇವರ ದುಷ್ಟ ಆಟದ ಕಾರಣದಿಂದ ಅನವಶ್ಯಕವಾಗಿ ಆರೋಪಿತನು ಎಲ್ಲಾ ರೀತಿಯಲ್ಲೂ ನೋವುಣ್ಣ ಬೇಕಾಗುತ್ತದೆ. ಆತನ ನೋವಿಗೆ ನ್ಯಾಯ ದೊರಕಿಸಿ ಕೊಳ್ಳುವವರು ಯಾರು? ಹಾಗಾಗಿ ದೂರು ಕೊಡುವವರಿಗೂ ಶಿಕ್ಷೆ ಆಗುವ ಭಯ ಇದ್ದರೆ, ಸುಳ್ಳುದುರು ನೀಡುವುದಕ್ಕೆ ಭಯಪಡುತ್ತಾರೆ. ಸುಳ್ಳು ದೂರುಗಳನ್ನು ನೀಡುವುದು ಅಪರಾಧ ಎಂದು ಘೋಷಿಸುವ ಸಮಯ ಬಂದಿದೆ. ಜಾತಿ, ಲಿಂಗ ಸಮುದಾಯ ಯಾವುದೇ ಇರಲಿ, ನೀಡುವ ದೂರಿನಲ್ಲಿ ಸತ್ಯ ಇರಬೇಕು. ಆದರೆ ಸಂಪೂರ್ಣ ಅಸತ್ಯವಾದ ದೂರಿನ ವಿರುದ್ಧ, ಬೇರೆ ಯಾವುದೋ ಕಾರಣಕ್ಕಾಗಿ ದೂರನ್ನು ನೀಡಿ ತೊಂದರೆ ಕೊಡಲು ಹೊರಟವರ ವಿರುದ್ಧ ಯಾವ ಮುಲಾಜೂ ಇಲ್ಲದೆ ಕಠಿಣ ಕ್ರಮ ಜರುಗಿಸಬೇಕು. ಅದಕ್ಕೂ ಮೊದಲು, ಪ್ರಕರಣವೂ ಇಲಾಖೆಯಿಂದಲೇ  ದಾಖಲಾಗಬೇಕು. ಏನಂತೀರಿ?

COMMENTS

Login with Gmail to comment

ಇನ್ನಷ್ಟು ಸುದ್ದಿ

ಬ್ಯಾಂಕಿಂಗ್ ಸೇವೆ ಸ್ಮಾರ್ಟ್‌ಫೋನ್ ನೇ ಬೇಕಂತಿಲ್ಲ .ಕೀಪ್ಯಾಡ್ ಫೋನ್ ಸಾಕು ಈಗ “ಸ್ಮಾರ್ಟ್” ಆಗಿದ್ದರೆ ಸಾಕು! 
ಅಮೆರಿಕಾ ವಿರುದ್ಧ ‘ಪೈರಸಿ’ ಆರೋಪ: ಇರಾನ್ ಯುಎನ್‌ಗೆ ದೂರು
MRPL ವಿರುದ್ಧ ಜನಹೋರಾಟದ ಎಚ್ಚರಿಕೆ – ಮೇ 1ರಿಂದ ಅನಿರ್ದಿಷ್ಟ ಧರಣಿಗೆ ಸಮಿತಿ ಸಜ್ಜು..
ನಿಶ್ಶಬ್ದ ಕೊಠಡಿ ಹೇಳುವ ನಿಗೂಢ ರಹಸ್ಯ …!ಮನೆಯ ಗೋಡೆಗಳ ಮೇಲೆ ಬರಹ,ಕಾಗದಗಳು ನೂರಾರು…! ಅಸಹಜ ಮರಣದ ಹಿಂದೆ ಅಡಗಿರುವ ಸತ್ಯ ಇನ್ನೂ ಅನಾವರಣವಾಗಿಲ್ಲ…”
ತಮಿಳುನಾಡು ಮುಖ್ಯಮಂತ್ರಿ ವಿಜಯ್, ಚಧುರಂಗದಾಟದಲ್ಲಿ ಲಾಂಗ್ ಟೈಮ್ ಉಳಿಯುವರೇ?
8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ
ದಾವಣಗೆರೆ & ಬಾಗಲಕೋಟೆ ಬೈಎಲೆಕ್ಷನ್ ಬಿಗ್ ಬ್ಲಾಸ್ಟ್!
ಮನೆಯ ಮೇಲೆ ಪೊಲೀಸರ  ದಾಳಿ  ಮಾರಾಟಕ್ಕೆ ಇಡಲಾದ ಮಾದಕ ವಸ್ತು ಹಾಗೂ ಮಾರಕ ಆಯುಧ ವಶ
 “ಮೀನುಗಾರರ ಡೀಸೆಲ್ & ಸಿಲಿಂಡರ್ ಸಮಸ್ಯೆಗೆ ಸರ್ಕಾರದ ತುರ್ತು ಹಸ್ತಕ್ಷೇಪ -ಇಂಧನ ಭರವಸೆ: ಮಂಗಳೂರು ಬಂದರಿನಲ್ಲಿ ತುರ್ತು ಕ್ರಮ”-
ಕಾಂಗ್ರೆಸ್ ದೇಶದ ಹಿತಾಸಕ್ತಿಯ ವಿರುದ್ಧ ನಡೆದುಕೊಳ್ಳುತ್ತಿದೆ- ಪ್ರಧಾನಿ ಮೋದಿ ಆರೋಪ
ಪ್ರಧಾನಿ ಮೋದಿ ಯವರಿಗೆ ಡೈರೆಕ್ಟ್ ಬೆದರಿಕೆ ಹಾಕಿದ ಹೆಂಗಸು!!
ತಪ್ಪೊಪ್ಪಿಕೊಂಡ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಆರೋಪಿ ಶಾರೀಕ್…!ಶಿಕ್ಷೆ ಏನು?
ಭಾರತದಲ್ಲಿ ಮೊದಲ ಬಾರಿಗೆ ಭಾರೀ ಕ್ಯಾಪ್ಟಾಗನ್ “ಜಿಹಾದಿ ಡ್ರಗ್”ಜಾಲ ಬಯಲಾಗಿದ್ದು, ಸುಮಾರು ₹182 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ!ಅಪಾಯಕಾರಿ ಡ್ರಗ್ ದೇಶದೊಳಗೆ ಹೇಗೆ ಪ್ರವೇಶಿಸಿತು ಎಂಬುದರ ಬಗ್ಗೆ ತನಿಖೆ ತೀವ್ರವಾಗಿದೆ.
ರಾಪಿಡೊ ಚಾಲಕನ ಖಾತೆಯಲ್ಲಿ 300 ಕೋಟಿ ರೂ. ವಹಿವಾಟು! ಶಾಕ್ ಅದ ED
ಪಹಲ್ಗಾಮ್ ದಾಳಿಗೆ ವರ್ಷ : ಮೋದಿ ಶ್ರದ್ಧಾಂಜಲಿ, ಉಗ್ರರಿಗೆ ಎಚ್ಚರಿಕೆ
ಮಾರ್ಚ್ 17 :ಮಂಗಳೂರಿನಲ್ಲಿ ವಿಶ್ವ ಗ್ರಾಹಕರ ದಿನಾಚರಣೆ-ಗ್ರಾಹಕರ ಹಕ್ಕುಗಳ ಜಾಗೃತಿ ಕಾರ್ಯಕ್ರಮ
ಮಧ್ಯಪ್ರಾಚ್ಯದಲ್ಲಿ ಯುದ್ಧ– ಸಂಕಷ್ಟದಲ್ಲಿ ಜಗತ್ತು-ಉಸಿರು ತಡೆದ ಪರಿಸ್ಥಿತಿ!ಏನಾಗ್ತಾ ಇದೆ…
ಮೋದಿ ನೇತೃತ್ವದಲ್ಲಿ ಇತಿಹಾಸಕ್ಕೆ ಮರಳಿದ ರಾಜರಾಜಚೋಳರ ಹೆಮ್ಮೆ — ಆನೈಮಂಗಲಂ ತಾಮ್ರಶಾಸನಗಳು! 1000 ವರ್ಷದ ಇತಿಹಾಸ 100 ವರ್ಷಗಳ ಬಳಿಕ ಚೋಳರ ಕಾಲದ ಅಪರೂಪದ ದಾಖಲೆ ನೆದರ್‌ಲ್ಯಾಂಡ್ಸ್‌ನಿಂದ ಭಾರತಕ್ಕೆ ವಾಪಸ್….
ಕಾಂಗ್ರೆಸ್ ಜನರ ವಿಶ್ವಾಸದಿಂದ ದಿನದಿಂದ ದಿನಕ್ಕೂ ದೂರ ಹೋಗುತ್ತಿರುವುದಕ್ಕೆ ಸಾಕ್ಷಿನೇ ಇದು
ಇಂಧನ ಬೆಲೆ ಏರಿಕೆ ಹೊಡೆತ Air India ಹೊಸ ತೀರ್ಮಾನ ಶಾಕಿಂಗ್ …!
ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ನಿರ್ಧಾರ ಬದಲಾಗುತ್ತದೆಯೇ? ಕರಾವಳಿ ಕಾದಿದೆ ಉಸಿರು ಹಿಡಿದು!
ಮಂಗಳೂರಿನಲ್ಲಿ ಪಕ್ಕಪ್ಲಾನ್ ಡ್ ಅಟ್ಯಾಕ್ ..!ರೌಡಿ ಶೀಟರ್ ಬರ್ಬರ ಹತ್ಯೆ…ವಿಶೇಷ ತಂಡ ರಚನೆ..!
ಮಂಗಳೂರು ಇನ್ಸ್ಟಾಮಾರ್ಟ ಕುಂಟಿಕಾನದಲ್ಲಿ ಲಿಫ್ಟ್ ದುರಂತ: ಡೆಲಿವರಿ ಸಿಬ್ಬಂದಿ ದುರ್ಮರಣ
ಸಹೋದರಿಯ ಎಲುಬುಗಳೊಂದಿಗೆ ಬ್ಯಾಂಕ್ ಗೆ ಬಂದ ಅಣ್ಣ…!ದಾಖಲೆ ನಿಯಮಗಳ ನಡುವೆ ಸೋತ ಮಾನವೀಯತೆ”
ಖಾಸಗಿ ಆಸ್ಪತ್ರೆಯ ಜೊತೆಗಿನ ಒಪ್ಪಂದ ರದ್ದುಪಡಿಸಲು ಆಗ್ರಹಿಸಿ ಪ್ರತಿಭಟನೆ
ಟ್ರಂಪ್ ಇರಾನ್ ಡೀಲ್ ಕಥೆ ಏನು?ಒಪ್ಪಂದವಾಗುತ್ತಾ? ಅಥವಾ ಯುದ್ಧ ಮುಂದುವರೆಯುತ್ತಾ?
ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಸಂಪನ್ಮೂಲ ಕೇಂದ್ರ ಉದ್ಘಾಟನೆ, ಜಾಗೃತಿ ಕಾರ್ಯಕ್ರಮ
ಡಿಕೆಎಮುಲ್‌ನಿಂದ ₹1,270 ಕೋಟಿ ದಾಖಲೆ ಬೆಳವಣಿಗೆ ಹೊಸ ಮೈಲುಗಲ್ಲು..!
ಅಮ್ಮಾ ಎದ್ದು ಬಾ… ಕಣ್ಣೀರಾಕಿ ಕರೆದರೂ, ಬರಲಾರದೇ ಒದ್ದಾಡಿದ ಅಮ್ಮ …ದುಬಾರೆ ಶಿಬಿರದಲ್ಲಿ ಮನಕಲುಕುವ ಘಟನೆ-ಆನೆಗಳ ಕಾದಾಟ… ಜೀವ ಕಳೆದುಕೊಂಡ ಮಹಿಳೆ
ರಾಜಕೀಯ ಸುದ್ದಿ ಅಂದರೆ ಬೋರ್ ಅಂತ ಅನ್ನಿಸುವರಿಗೆ ಇದು ಒಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಎಪಿಸೋಡ್!!!