📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಬೋಗಸ್ ದೂರು ಕೊಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಗಂಡಾಂತರ ಗ್ಯಾರೆಂಟಿ

ಇದು ಪೊಲೀಸ್ ಸ್ಟೋರಿ ನೋಡಿ, ಪಿಎಸ್ಐ ವೀರೇಶ್ ಎನ್ನುವವರ ವಿರುದ್ಧ, ಅತ್ಯಾಚಾರ, ಜಾತಿನಿಂದನೆ, ಅಪಹರಣ ದಂತಹ ಗಂಭೀರ ಪ್ರಕರಣವನ್ನು ದಾಖಲಿಸುವ ಮೂಲಕ  ಇಡೀ ರಾಜ್ಯವನ್ನು ತನ್ನತ್ತ ಸೆಳೆದಿದ್ದಾಳೆ ಕಾನ್ಸ್ಟೇಬಲ್ ಜಯಶ್ರೀ

       ಲೇಡಿ ಕಾನ್ಸ್ಟೇಬಲ್ ಜಯಶ್ರೀ ಎನ್ನುವವರೇ ಸಬ್ ಇನ್ಸ್ಪೆಕ್ಟರ್ ವೀರೇಶ್ ಮೇಲೆ ದೂರು ನೀಡಿದ ಮಹಿಳೆಯಾಗಿದ್ದಾಳೆ. ಇದಕ್ಕೂ ಮೊದಲೇ, ವೀರೇಶ್ ಈ ಮಹಿಳೆಯ ಮೇಲೆ ಗುರುತರವಾದಂತಹ ಆರೋಪ ಮಾಡಿದ್ದರು . ಹಲವು ಸಮಯಗಳಿಂದ ನಾವು ಸಂಬಂಧದಲ್ಲಿದ್ದೇವೆ, ಒಂದೇ ರೂಮಿನಲ್ಲಿ ಗಂಡ ಹೆಂಡತಿಯರಂತೆ ಇದ್ದೆವು, ಮದುವೆ ಯಾಗುತ್ತೇನೆ ಅಂತ ನನ್ನನ್ನು ನಂಬಿಸಿದ್ದಳು. ನನ್ನಿಂದ ಸರಿಸುಮಾರು 35 ಲಕ್ಷದಷ್ಟು ಹಣವನ್ನು ಪಡೆದು ವಂಚಿಸಿದ್ದಾಳೆ, ಅಲ್ಲದೆ ನಾನೇ ಇವಳಿಗೆ ಒಂದು ಮನೆಯನ್ನು ಕಟ್ಟಿಸಿ ಕೊಟ್ಟಿದ್ದೇನೆ, ಇವಳ ಸಹೋದರನಿಗೆ ಟ್ಯಾಕ್ಟರ್ ಒಂದು ತೆಗೆಸಿಕೊಟ್ಟಿದ್ದೇನೆ. ಇಷ್ಟೆಲ್ಲಾ ಬೆನಿಫಿಟ್ ಪಡೆದದ್ದು ಕುಟುಂಬಕ್ಕೂ ಗೊತ್ತಿದೆ, ಜೊತೆಗೆ ಎಲ್ಲಾ ರೀತಿಯಲ್ಲೂ ಹೊಂದಿಕೊಂಡಿದ್ದವಳು, ಈಗ ನನ್ನಿಂದ ದೂರವಾಗುತ್ತಿದ್ದಾಳೆಂದು ಆರೋಪಿಸಿದ್ದರು ಪಿಎಸ್ಐ ವೀರೇಶ್.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ, ಕೊಪ್ಪಳದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಇತರರು, ಇಬ್ಬರ ನಡುವೆ ರಾಜಿ ಪಂಚಾಯತಿಯನ್ನು ಮಾಡಿದ್ದರಂತೆ. ಆದರೆ ಈಗ ಇದ್ದಕ್ಕಿದ್ದಂತೆಯೇ ಜಯಶ್ರೀ, ವೀರೇಶ್ ಮೇಲೆ ಅಪಹರಣ, ಅತ್ಯಾಚಾರ ಹಾಗೂ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆಯಡಿ ದೂರನ್ನು ದಾಖಲಿಸಿದ್ದಾಳೆ.

ಮೇಲ್ನೋಟಕ್ಕೆನೆ ಜಯಶ್ರೀ ಕೊಟ್ಟ ದೂರು,  ಬೋಗಸ್ ಅನ್ನುವುದು ಯಂಥವರಿಗೂ ಗೊತ್ತಾಗುತ್ತದೆ. ಆದರೆ, ಕೆಲವು ಅನವಶ್ಯಕವಾದಂತಹ ಕಾನೂನುಗಳಿಂದಾಗಿ, ಪ್ರಕರಣವು ದಾಖಲಾಗಲೇ ಬೇಕಾಗುತ್ತದೆ. ಹಾಗಾಗಿ ಪ್ರಕರಣ ದಾಖಲಾಗಿದೆ. ಈಗ ಪಿಎಸ್ಐ ವೀರೇಶ್ ಗೆ ಬಂಧನದ ಭೀತಿ ಎದುರಾಗಿದೆ. ಬಹುಶಹ ಪಿಎಸ್ಐ ವೀರೇಶ್ ಅಮಾನತ್ತಿಗೆ ಒಳಗಾಗಬಹುದು.

ಈ ಪ್ರಕರಣದಲ್ಲಿ, ಕೆಲವು ವರುಷಗಳ ಕಾಲ, ಪಿಎಸ್ಐ ವೀರೇಶ್ ಜೊತೆಗೆ ಸಂಸಾರ ನಡೆಸಿಕೊಂಡಿದ್ದ ಜಯಶ್ರೀ, ಕೆಲವು ಬಾರಿ ವೀರೇಶನ ವಿರೋಧದ ನಡುವೆಯೂ ಗರ್ಭಪಾತ ಮಾಡಿಸಿಕೊಂಡಿದ್ದಾಳೆಂಬ ಆರೋಪವು ಇದೆ. ಇದನ್ನು ಸ್ವತಹ ವೀರೇಶ್ ಜಯಶ್ರೀ ದೂರು ಕೊಡುವ  ಮೊದಲೇ ಹೇಳಿದ್ದ ಕೂಡ. ಆದರೀಗ, ಜಯಶ್ರೀ ತನ್ನ ದಾಳವನ್ನು ಉರುಳಿಸಿದ್ದಾಳೆ. ಮಹಿಳೆ ಎಂಬ ವಿಚಾರ ಮುಂದಿಟ್ಟುಕೊಂಡು, ಅದರ ಲಾಭವನ್ನು ಪಡೆಯಲು ಹೊರಟಂತೆ ಕಾಣುತ್ತಿದೆ. ನ್ಯಾಯವು ಹೆಣ್ಣಿಗಿರಲಿ, ಗಂಡಿಗಿರಲಿ- ಬಡವನಿರಲಿ ಶ್ರೀಮಂತನಿರಲಿ ಅಥವಾ ಯಾರೇ ಇರಲಿ, ನ್ಯಾಯ ಅನ್ನೋದು ಒಂದೇ ಆಗಿರಬೇಕು ತಾನೆ? ಇಲ್ಲಿ, ಜಯಶ್ರೀ ಮಾಡುವುದನ್ನೇಲ್ಲ ಮಾಡಿ ಇದೀಗ ಸುಳ್ಳು ದೂರನ್ನು ನೀಡುವ ಮೂಲಕ ಇಡೀ ವ್ಯವಸ್ಥೆಯನ್ನೇ ಅಣಕಿಸುವಂತೆ ಮಾಡುತ್ತಿದ್ದಾಳೆ. ಕಾನೂನನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾಳೆ. ಇದು ಅಕ್ಷಮ್ಯ, ಸರ್ಕಾರ ಮತ್ತು ಕಾನೂನು ಪ್ರಾಧಿಕಾರವು ಇಂತಹ ಬೋಗಸ್ ದೂರುಗಳ ವಿಚಾರದಲ್ಲಿ  ದೂರುದಾರರ ಕೈಗೆನೆ ಕೊಳ ಹಾಕುವ ಕಾನೂನನ್ನು ತರುವ ಕೆಲಸ ಮಾಡಬೇಕು. ಇವರ ದುಷ್ಟ ಆಟದ ಕಾರಣದಿಂದ ಅನವಶ್ಯಕವಾಗಿ ಆರೋಪಿತನು ಎಲ್ಲಾ ರೀತಿಯಲ್ಲೂ ನೋವುಣ್ಣ ಬೇಕಾಗುತ್ತದೆ. ಆತನ ನೋವಿಗೆ ನ್ಯಾಯ ದೊರಕಿಸಿ ಕೊಳ್ಳುವವರು ಯಾರು? ಹಾಗಾಗಿ ದೂರು ಕೊಡುವವರಿಗೂ ಶಿಕ್ಷೆ ಆಗುವ ಭಯ ಇದ್ದರೆ, ಸುಳ್ಳುದುರು ನೀಡುವುದಕ್ಕೆ ಭಯಪಡುತ್ತಾರೆ. ಸುಳ್ಳು ದೂರುಗಳನ್ನು ನೀಡುವುದು ಅಪರಾಧ ಎಂದು ಘೋಷಿಸುವ ಸಮಯ ಬಂದಿದೆ. ಜಾತಿ, ಲಿಂಗ ಸಮುದಾಯ ಯಾವುದೇ ಇರಲಿ, ನೀಡುವ ದೂರಿನಲ್ಲಿ ಸತ್ಯ ಇರಬೇಕು. ಆದರೆ ಸಂಪೂರ್ಣ ಅಸತ್ಯವಾದ ದೂರಿನ ವಿರುದ್ಧ, ಬೇರೆ ಯಾವುದೋ ಕಾರಣಕ್ಕಾಗಿ ದೂರನ್ನು ನೀಡಿ ತೊಂದರೆ ಕೊಡಲು ಹೊರಟವರ ವಿರುದ್ಧ ಯಾವ ಮುಲಾಜೂ ಇಲ್ಲದೆ ಕಠಿಣ ಕ್ರಮ ಜರುಗಿಸಬೇಕು. ಅದಕ್ಕೂ ಮೊದಲು, ಪ್ರಕರಣವೂ ಇಲಾಖೆಯಿಂದಲೇ  ದಾಖಲಾಗಬೇಕು. ಏನಂತೀರಿ?

COMMENTS

Login with Gmail to comment

ಇನ್ನಷ್ಟು ಸುದ್ದಿ

ಕದನ ವಿರಾಮ ಚೂರುಚೂರು-ಮಧ್ಯಪ್ರಾಚ್ಯ ಮತ್ತೆ ಯುದ್ಧದ ಅಂಚಿನಲ್ಲಿ!ಜೋರ್ಡಾನ್, ಬಹ್ರೇನ್, ಕುವೈತ್‌ನಲ್ಲಿ ಕ್ಷಿಪಣಿ ಅಲರ್ಟ್ !!
🚨 BREAKING: ಬಿಜೆಪಿಯಿಂದ ಅಣ್ಣಾಮಲೈ ಔಟ್?!…ರಾತ್ರೋರಾತ್ರಿ ರಾರಾಜಿಸಿದ ಬಂಡಾಯದ ಪೋಸ್ಟರ್‌ಗಳು! 
“ವಿ ದಿ ಲೀಡರ್ಸ್”ಅಣ್ಣಾಮಲೈ ಮಾಸ್ಟರ್ ಪ್ಲಾನ್!ಸಿನಿಮಾ ವರ್ಚಸ್ಸಿನ ಟಿವಿಕೆ (TVk) ಯನ್ನ ಮಕಾಡೆ ಮಲಗಿಸಲು ಸಜ್ಜಾಗ್ತಾ ಇದೆಯಾ..?
ಮಂಗಳೂರು ಇನ್ಸ್ಟಾಮಾರ್ಟ ಕುಂಟಿಕಾನದಲ್ಲಿ ಲಿಫ್ಟ್ ದುರಂತ: ಡೆಲಿವರಿ ಸಿಬ್ಬಂದಿ ದುರ್ಮರಣ
ರಾಜಿ ಮಾಡಲು ಬಂದವನಿಗೇ ಚೂರಿ ಇರಿತ
ಸ್ಕ್ಯಾಮರ್‌ಗೆ 60 ಸೆಕೆಂಡ್ ಸಾಕು… RBIಗೆ ಈಗ 60 ನಿಮಿಷ ಬೇಕಂತೆ!ಹಣ ಕಳಿಸುವ ಮುನ್ನ ಯೋಚಿಸಲು 1 ಗಂಟೆ!
ಮೈ ಜುಮ್ಮೆನ್ನಿಸುವ ಬೈಕ್–ಲಾರಿ ಡಿಕ್ಕಿ ಅಪಘಾತ… ಕ್ಷಣಾರ್ಧದಲ್ಲೇ ಜೀವ ಹೋದ ಹೃದಯವಿದ್ರಾವಕ ರಸ್ತೆ ದುರಂತ
ಟ್ರಂಪ್ ಇರಾನ್ ಡೀಲ್ ಕಥೆ ಏನು?ಒಪ್ಪಂದವಾಗುತ್ತಾ? ಅಥವಾ ಯುದ್ಧ ಮುಂದುವರೆಯುತ್ತಾ?
ಬಂಟ್ಸ್ ಹಾಗೂ ಬಿಲ್ಲವ ಸಮುದಾಯವನ್ನೇ ಅವಹೇಳಿಸಿ ಮಾತಾಡಿ ವಿಡಿಯೋ ವೈರಲ್ ರಾತ್ರೋರಾತ್ರಿ… ..ಫೇಮಸ್ ಆದ ಅನಿತಾಳ ಬಂಧನ ..!
ಕ್ರಿಕೆಟ್ pad gloves ಒಳಗೆ ಕೋಟಿ ಕೋಟಿ ಕೊಕೇನ್!
ಇಂದು ಮಾಜಿ ಸಚಿವರಿಂದ ಸೌಹಾರ್ದ ಇಫ್ತಾರ್ ಕೂಟ 
ಕರ್ನಾಟಕದಲ್ಲಿ ಅತಿ ಕನಿಷ್ಠ ಮಟ್ಟಕ್ಕೆ ಕುಸಿದ ‘ಟೀನ್ ಪ್ರೆಗ್ನೆನ್ಸಿ’! 70% ಕೇಸ್‌ಗಳು ಮಾಯವಾಗಿದ್ದು ಹೇಗೆ?
ಜಮೀರ್ ಅಹಮದ್ ಉಚ್ಛಾಟನೆಗೆ ಕ್ಷಣಗಣನೆ
ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣಕ್ಕೆ ಅಂತಿಮ ತೀರ್ಪು – ಶಾರೀಕ್ ಗೆ 10 ವರ್ಷ ಜೈಲು..
ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ….!!!!
ಯುದ್ಧದ ಹೊಡೆತ: ಹಣ ಕೊಟ್ಟರೂ ಗ್ಯಾಸ್ ಇಲ್ಲ! ಕಾರವಾರ ಬಂದರು ಸ್ತಬ್ಧ — ಜನಜೀವನ ಅಸ್ತವ್ಯಸ್ತ 🔥
35 ವಾರಂಟ್ ಇದ್ದ ಆರೋಪಿಯು ವಿದೇಶದಿಂದ ಮರಳುತ್ತಿದ್ದಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ
ಇಂಧನ ಬೆಲೆ ಏರಿಕೆ ಹೊಡೆತ Air India ಹೊಸ ತೀರ್ಮಾನ ಶಾಕಿಂಗ್ …!
ಮತ್ತೊಂದು ಭೀಕರ ದುರಂತ: ಬಂಡೆ ಕುಸಿದು 7 ಕಾರ್ಮಿಕರ ದುರ್ಮರಣ
🎬 ಜೈಲರ್ 2 ಸೆಟ್‌ನಲ್ಲಿ ವಿದ್ಯುತ್ ಅವಘಡ…28 ವರ್ಷದ ಕಾರ್ತಿಕೇಯನ್ ವಿದ್ಯುತ್ ಶಾಕ್‌ಗೆ ಬಲಿ..
ಒಂದು ರಾಷ್ಟ್ರ, ಒಂದು ಚುನಾವಣೆ’ಗೆ ಡಿಕೆಶಿ ಸಿಡಿದೆದ್ದೇಕೆ?
ಸಾಯಿ ಚಿರಾಗ್ ಚಿಕಿತ್ಸೆಗೆ ಹರಿದುಬಂತು 2 ಕೋಟಿ ರೂ. ಜನಸಾಗರದ ನಿಧಿ!
90 ನಿಮಿಷದ ರೋಚಕ ರಕ್ಷಣಾ ಕಾರ್ಯಾಚರಣೆ – 6 ಮೀನುಗಾರರ ಜೀವ ಉಳಿಸಿದ ಇಂಡಿಯನ್ ಕೋಸ್ಟ್ ಗಾರ್ಡ್ ಸಾಹಸ!ಪ್ರಕ್ಷುಬ್ಧ ಸಮುದ್ರಕ್ಕೂ ಸವಾಲು
17 ವರ್ಷದ ಯುವಕ ಸಂಸತ್ತಿನ ಕದ ತಟ್ಟಬಲ್ಲ ಎಂದಾದರೆ, ನಿಮ್ಮ ಧ್ವನಿಗೆ ಎಷ್ಟು ಶಕ್ತಿಯಿದೆ ಯೋಚಿಸಿ!..ವ್ಯವಸ್ಥೆಯ ಲೋಪದ ವಿರುದ್ಧ ಧ್ವನಿ ಎತ್ತದಿದ್ದರೆ ಬದಲಾವಣೆ ಸಾಧ್ಯವಿಲ್ಲ.
ರಾಜಕೀಯದಲ್ಲಿ ಅನುಭವ ಎಷ್ಟು ಮುಖ್ಯ?…  ತಮಿಳುನಾಡು ರಾಜಕಾರಣ ತೋರಿಸುತ್ತಿದೆ ನೋಡಿ
ಕನ್ನಡ ಫಿಲಂ ಇಂಡಸ್ಟ್ರಿ ಮರ್ಯಾದೆ “ಒಂದು ಬಾಟ್ಲು ಸಾರಾಯಿ, ಒಂದು ಚಮಚ ಉಪ್ಪಿನ ಕಾಯಿಗೆ”ಆನ್‌ಲೈನ್‌ನಲ್ಲಿ (Online) ಹರಾಜು..!
ಪುತ್ತೂರು ಘಟನೆ ಚಾಕು ಕಂಡು ಆತಂಕ…ಏನಾಯಿತು?ತನಿಖೆಯಲ್ಲಿ ಬಯಲಾಯ್ತು ಮತ್ತೊಂದು ಸತ್ಯ!
ಮಕ್ಕಳಿಗೆ ಪ್ರಕೃತಿ ಮತ್ತು ಸಕಲ ಜೀವಿಗಳನ್ನು ಪ್ರೀತಿಸುವುದನ್ನು ಕಲಿಸಿ
ಬಾಲ್ಯದ ಗೆಳೆಯನ ಬಲೆಗೆ ಬಿದ್ದ ವಾಯುಸೇನೆ ಅಧಿಕಾರಿಯ ಪತ್ನಿ?! ಲೈಂಗಿಕ ಬ್ಲ್ಯಾಕ್‌ಮೇಲ್,’ಕಬೂಲ್ ಹೈ’ ಹೇಳುವಂತೆ ಒತ್ತಾಯ!
ತಿರುಪತಿಗೆ ಹೋದ ಗಂಡ… ಗೋವಾಗೆ ಹೋದ ಯುವಕ…! ಮನೆಗೆ ಬಂದದ್ದು ಶವವಾಗಿ! ಪ್ರವಾಸವೇ ಭಯ ಹುಟ್ಟಿಸುತ್ತಿದೆಯೇ?