📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಬೋಗಸ್ ದೂರು ಕೊಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಗಂಡಾಂತರ ಗ್ಯಾರೆಂಟಿ

ಇದು ಪೊಲೀಸ್ ಸ್ಟೋರಿ ನೋಡಿ, ಪಿಎಸ್ಐ ವೀರೇಶ್ ಎನ್ನುವವರ ವಿರುದ್ಧ, ಅತ್ಯಾಚಾರ, ಜಾತಿನಿಂದನೆ, ಅಪಹರಣ ದಂತಹ ಗಂಭೀರ ಪ್ರಕರಣವನ್ನು ದಾಖಲಿಸುವ ಮೂಲಕ  ಇಡೀ ರಾಜ್ಯವನ್ನು ತನ್ನತ್ತ ಸೆಳೆದಿದ್ದಾಳೆ ಕಾನ್ಸ್ಟೇಬಲ್ ಜಯಶ್ರೀ

       ಲೇಡಿ ಕಾನ್ಸ್ಟೇಬಲ್ ಜಯಶ್ರೀ ಎನ್ನುವವರೇ ಸಬ್ ಇನ್ಸ್ಪೆಕ್ಟರ್ ವೀರೇಶ್ ಮೇಲೆ ದೂರು ನೀಡಿದ ಮಹಿಳೆಯಾಗಿದ್ದಾಳೆ. ಇದಕ್ಕೂ ಮೊದಲೇ, ವೀರೇಶ್ ಈ ಮಹಿಳೆಯ ಮೇಲೆ ಗುರುತರವಾದಂತಹ ಆರೋಪ ಮಾಡಿದ್ದರು . ಹಲವು ಸಮಯಗಳಿಂದ ನಾವು ಸಂಬಂಧದಲ್ಲಿದ್ದೇವೆ, ಒಂದೇ ರೂಮಿನಲ್ಲಿ ಗಂಡ ಹೆಂಡತಿಯರಂತೆ ಇದ್ದೆವು, ಮದುವೆ ಯಾಗುತ್ತೇನೆ ಅಂತ ನನ್ನನ್ನು ನಂಬಿಸಿದ್ದಳು. ನನ್ನಿಂದ ಸರಿಸುಮಾರು 35 ಲಕ್ಷದಷ್ಟು ಹಣವನ್ನು ಪಡೆದು ವಂಚಿಸಿದ್ದಾಳೆ, ಅಲ್ಲದೆ ನಾನೇ ಇವಳಿಗೆ ಒಂದು ಮನೆಯನ್ನು ಕಟ್ಟಿಸಿ ಕೊಟ್ಟಿದ್ದೇನೆ, ಇವಳ ಸಹೋದರನಿಗೆ ಟ್ಯಾಕ್ಟರ್ ಒಂದು ತೆಗೆಸಿಕೊಟ್ಟಿದ್ದೇನೆ. ಇಷ್ಟೆಲ್ಲಾ ಬೆನಿಫಿಟ್ ಪಡೆದದ್ದು ಕುಟುಂಬಕ್ಕೂ ಗೊತ್ತಿದೆ, ಜೊತೆಗೆ ಎಲ್ಲಾ ರೀತಿಯಲ್ಲೂ ಹೊಂದಿಕೊಂಡಿದ್ದವಳು, ಈಗ ನನ್ನಿಂದ ದೂರವಾಗುತ್ತಿದ್ದಾಳೆಂದು ಆರೋಪಿಸಿದ್ದರು ಪಿಎಸ್ಐ ವೀರೇಶ್.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ, ಕೊಪ್ಪಳದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಇತರರು, ಇಬ್ಬರ ನಡುವೆ ರಾಜಿ ಪಂಚಾಯತಿಯನ್ನು ಮಾಡಿದ್ದರಂತೆ. ಆದರೆ ಈಗ ಇದ್ದಕ್ಕಿದ್ದಂತೆಯೇ ಜಯಶ್ರೀ, ವೀರೇಶ್ ಮೇಲೆ ಅಪಹರಣ, ಅತ್ಯಾಚಾರ ಹಾಗೂ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆಯಡಿ ದೂರನ್ನು ದಾಖಲಿಸಿದ್ದಾಳೆ.

ಮೇಲ್ನೋಟಕ್ಕೆನೆ ಜಯಶ್ರೀ ಕೊಟ್ಟ ದೂರು,  ಬೋಗಸ್ ಅನ್ನುವುದು ಯಂಥವರಿಗೂ ಗೊತ್ತಾಗುತ್ತದೆ. ಆದರೆ, ಕೆಲವು ಅನವಶ್ಯಕವಾದಂತಹ ಕಾನೂನುಗಳಿಂದಾಗಿ, ಪ್ರಕರಣವು ದಾಖಲಾಗಲೇ ಬೇಕಾಗುತ್ತದೆ. ಹಾಗಾಗಿ ಪ್ರಕರಣ ದಾಖಲಾಗಿದೆ. ಈಗ ಪಿಎಸ್ಐ ವೀರೇಶ್ ಗೆ ಬಂಧನದ ಭೀತಿ ಎದುರಾಗಿದೆ. ಬಹುಶಹ ಪಿಎಸ್ಐ ವೀರೇಶ್ ಅಮಾನತ್ತಿಗೆ ಒಳಗಾಗಬಹುದು.

ಈ ಪ್ರಕರಣದಲ್ಲಿ, ಕೆಲವು ವರುಷಗಳ ಕಾಲ, ಪಿಎಸ್ಐ ವೀರೇಶ್ ಜೊತೆಗೆ ಸಂಸಾರ ನಡೆಸಿಕೊಂಡಿದ್ದ ಜಯಶ್ರೀ, ಕೆಲವು ಬಾರಿ ವೀರೇಶನ ವಿರೋಧದ ನಡುವೆಯೂ ಗರ್ಭಪಾತ ಮಾಡಿಸಿಕೊಂಡಿದ್ದಾಳೆಂಬ ಆರೋಪವು ಇದೆ. ಇದನ್ನು ಸ್ವತಹ ವೀರೇಶ್ ಜಯಶ್ರೀ ದೂರು ಕೊಡುವ  ಮೊದಲೇ ಹೇಳಿದ್ದ ಕೂಡ. ಆದರೀಗ, ಜಯಶ್ರೀ ತನ್ನ ದಾಳವನ್ನು ಉರುಳಿಸಿದ್ದಾಳೆ. ಮಹಿಳೆ ಎಂಬ ವಿಚಾರ ಮುಂದಿಟ್ಟುಕೊಂಡು, ಅದರ ಲಾಭವನ್ನು ಪಡೆಯಲು ಹೊರಟಂತೆ ಕಾಣುತ್ತಿದೆ. ನ್ಯಾಯವು ಹೆಣ್ಣಿಗಿರಲಿ, ಗಂಡಿಗಿರಲಿ- ಬಡವನಿರಲಿ ಶ್ರೀಮಂತನಿರಲಿ ಅಥವಾ ಯಾರೇ ಇರಲಿ, ನ್ಯಾಯ ಅನ್ನೋದು ಒಂದೇ ಆಗಿರಬೇಕು ತಾನೆ? ಇಲ್ಲಿ, ಜಯಶ್ರೀ ಮಾಡುವುದನ್ನೇಲ್ಲ ಮಾಡಿ ಇದೀಗ ಸುಳ್ಳು ದೂರನ್ನು ನೀಡುವ ಮೂಲಕ ಇಡೀ ವ್ಯವಸ್ಥೆಯನ್ನೇ ಅಣಕಿಸುವಂತೆ ಮಾಡುತ್ತಿದ್ದಾಳೆ. ಕಾನೂನನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾಳೆ. ಇದು ಅಕ್ಷಮ್ಯ, ಸರ್ಕಾರ ಮತ್ತು ಕಾನೂನು ಪ್ರಾಧಿಕಾರವು ಇಂತಹ ಬೋಗಸ್ ದೂರುಗಳ ವಿಚಾರದಲ್ಲಿ  ದೂರುದಾರರ ಕೈಗೆನೆ ಕೊಳ ಹಾಕುವ ಕಾನೂನನ್ನು ತರುವ ಕೆಲಸ ಮಾಡಬೇಕು. ಇವರ ದುಷ್ಟ ಆಟದ ಕಾರಣದಿಂದ ಅನವಶ್ಯಕವಾಗಿ ಆರೋಪಿತನು ಎಲ್ಲಾ ರೀತಿಯಲ್ಲೂ ನೋವುಣ್ಣ ಬೇಕಾಗುತ್ತದೆ. ಆತನ ನೋವಿಗೆ ನ್ಯಾಯ ದೊರಕಿಸಿ ಕೊಳ್ಳುವವರು ಯಾರು? ಹಾಗಾಗಿ ದೂರು ಕೊಡುವವರಿಗೂ ಶಿಕ್ಷೆ ಆಗುವ ಭಯ ಇದ್ದರೆ, ಸುಳ್ಳುದುರು ನೀಡುವುದಕ್ಕೆ ಭಯಪಡುತ್ತಾರೆ. ಸುಳ್ಳು ದೂರುಗಳನ್ನು ನೀಡುವುದು ಅಪರಾಧ ಎಂದು ಘೋಷಿಸುವ ಸಮಯ ಬಂದಿದೆ. ಜಾತಿ, ಲಿಂಗ ಸಮುದಾಯ ಯಾವುದೇ ಇರಲಿ, ನೀಡುವ ದೂರಿನಲ್ಲಿ ಸತ್ಯ ಇರಬೇಕು. ಆದರೆ ಸಂಪೂರ್ಣ ಅಸತ್ಯವಾದ ದೂರಿನ ವಿರುದ್ಧ, ಬೇರೆ ಯಾವುದೋ ಕಾರಣಕ್ಕಾಗಿ ದೂರನ್ನು ನೀಡಿ ತೊಂದರೆ ಕೊಡಲು ಹೊರಟವರ ವಿರುದ್ಧ ಯಾವ ಮುಲಾಜೂ ಇಲ್ಲದೆ ಕಠಿಣ ಕ್ರಮ ಜರುಗಿಸಬೇಕು. ಅದಕ್ಕೂ ಮೊದಲು, ಪ್ರಕರಣವೂ ಇಲಾಖೆಯಿಂದಲೇ  ದಾಖಲಾಗಬೇಕು. ಏನಂತೀರಿ?

COMMENTS

Login with Gmail to comment

ಇನ್ನಷ್ಟು ಸುದ್ದಿ

ಮುಂಬೈ ಮಳೆ ಅವಾಂತರ: ಒಂದು ನಗರವೇ ಜಲಾವೃತ… ದುರಂತ, ಮಾನವೀಯತೆ ಮತ್ತು ಹೋರಾಟದ ಹಲವು ಮುಖಗಳು
ಕಳುವಾದ ವಾಹನ ಸಮೇತ ಕಳ್ಳರ ಬಂಧನ…!
ವಿಟ್ಲದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮ
ಜಗಳ ನಿಲ್ಲಿಸಲು ಹೋದವನ ಜೀವ ಹರಣ: ಮಾನವೀಯತೆ ಕುಸಿದರೆ ಸಮಾಜದ ನೆಮ್ಮದಿ ಎಲ್ಲಿ?”
ಕಾಂಗ್ರೆಸ್ ಜನರ ವಿಶ್ವಾಸದಿಂದ ದಿನದಿಂದ ದಿನಕ್ಕೂ ದೂರ ಹೋಗುತ್ತಿರುವುದಕ್ಕೆ ಸಾಕ್ಷಿನೇ ಇದು
ಸ್ಕ್ಯಾಮರ್‌ಗೆ 60 ಸೆಕೆಂಡ್ ಸಾಕು… RBIಗೆ ಈಗ 60 ನಿಮಿಷ ಬೇಕಂತೆ!ಹಣ ಕಳಿಸುವ ಮುನ್ನ ಯೋಚಿಸಲು 1 ಗಂಟೆ!
‘ನನ್ನ ಮೇಲ್‌ಗೆ ಉತ್ತರವೇ ಬರಲಿಲ್ಲ…’ ಸಭೆಯಲ್ಲೇ ಮಹಿಳೆಯ ಪ್ರಶ್ನೆ; ನಿಖಿಲ್ ಕಾಮತ್ ನೀಡಿದ ಪ್ರತಿಕ್ರಿಯೆಗೆ ದೇಶವೇ ಫಿದಾ!
NEET ಗೊಂದಲ, ಮರುಪರೀಕ್ಷೆ, ಮೌಲ್ಯಮಾಪನ ದೋಷಗಳು ಮತ್ತು ವಿದ್ಯಾರ್ಥಿ ಜೀವನದ ನೋವು..
ಪ್ರತಿಭಟನಾ ಶಕ್ತಿಯನ್ನೇ ಕಳೆದುಕೊಂಡ ಭಾರತ… ನಿಶ್ಯಕ್ತವಾದ ವಿರೋಧ ಪಕ್ಷಗಳು
ಡಿಕೆಶಿ ಸೈಲೆಂಟ್ ಆಪರೇಷನ್ ಮಿಸ್ ಫೈರ್ ಆಗಿದ್ದೆಲ್ಲಿ?ರಾಷ್ಟ್ರ ರಾಜಧಾನಿಯಲ್ಲಿ ಕರ್ನಾಟಕ ಕಾಂಗ್ರೆಸ್ ಹೈ-ವೋಲ್ಟೇಜ್ ಹರಟೆ…!
ತೈಲ, ಯುದ್ಧ ಮತ್ತು ಆರ್ಥಿಕತೆ: ಭಾರತದ ಮುಂದೆ ಹೊಸ ಸವಾಲು
ಮಂಗಳೂರು ದಸರಾ ಮೆರವಣಿಗೆಗೆ ವಿದ್ಯುತ್ ತಂತಿಗಳ ಸಮಸ್ಯೆಗೆ ಗುಡ್‌ಬೈ!
ಮಂಗಳೂರಿಗರಿಗೆ ಎಚ್ಚರಿಕೆ: ನೀರನ್ನು ಜಾಣ್ಮೆಯಿಂದ ಬಳಸಿ –ಮಾರ್ಚ್ ನಲ್ಲೇ ರೇಷನಿಂಗ್ ಮಾಡುವ ಪರಿಸ್ಥಿತಿ ಇದೆ…
50ಕ್ಕೂ ಹೆಚ್ಚು ಆಟೋ ಚಾಲಕರ ದಿನನಿತ್ಯದ ಆರೋಗ್ಯದ ಬದುಕಿಗೆ ಮುಳುವಾದ ದೇರಳಕಟ್ಟೆ ಜಂಕ್ಷನ್ ದುರ್ನಾತ! 
ಗಾಯಕನಿಗಿಂತ ದೊಡ್ಡದಾಗಿ ಕಾಣಿಸಿಕೊಂಡ ನೋಟುಗಳ ರಾಶಿ!ನೋಟುಗಳ ಮಧ್ಯೆಯೂ ನಿಲ್ಲದ ಗೋಪಾಲ್ ಸಾಧು ಗಾನಾಸುಧೆ !
ಗ್ಯಾಸ್ ಪೈಪ್‍ಲೈನ್ ಸೋರಿಕೆ: ಅಣಕು ಪ್ರದರ್ಶನ
ಜನರ ಹಾಹಾ ಕಾರಕ್ಕೆ ಬೆಚ್ಚಿಬಿದ್ದ ಸರ್ಕಾರ –  ಎಸ್ಮ ಕಾಯ್ದೆ ಜಾರಿಗೆ
ಅವಿವಾಹಿತಗೆ ಗರ್ಭ ದಾನ ಮಾಡಿದವ ಜೈಲಿಗೆ
ಬ್ಯಾಂಕ್ ಸಾಲವಿದ್ದ ಮನೆ ಮಾರಾಟ ಮಾರಿ ವಂಚನೆ
ಎಂಡೋಸಲ್ಫಾನ್ ಸಂತ್ರಸ್ತರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರ
ಕೇರಳ ಸರ್ಕಾರ ರಚನೆಯ ಕಗ್ಗಂಟು.. ಸಿಎಂ ಅಭ್ಯರ್ಥಿ ಆಯ್ಕೆಗೆ ಕಸರತ್ತು… ಕಾಂಗ್ರೆಸ್ ದುರ್ಬಲತೆಗೆ ಸಾಕ್ಷಿ
ಪುತ್ತೂರು ಗ್ರಾಮಾಂತರದಲ್ಲಿ ಭೂ ವಿವಾದದ ಗಲಾಟೆ ತೀವ್ರತೆ: ಪರಸ್ಪರ ಹಲ್ಲೆ – ಎರಡು ಪ್ರಕರಣಗಳು ದಾಖಲು
HSRP ರಿಲೀಫ್ + PUCC ಫೈನ್ ಮುಕ್ತ…ಡೀಟೇಲ್ಸ್ ಇಲ್ಲಿದೆ ಕರ್ನಾಟಕದ ಎಲ್ಲ ಡ್ರೈವರ್‌ಗಳಿಗೆ ಡಬಲ್ ಗುಡ್ ನ್ಯೂಸ್!???
ಪಾಕಿಸ್ತಾನದಿಂದ ನೀರಿನ ವಿಚಾರದಲ್ಲಿ ಕಠಿಣ ಎಚ್ಚರಿಕೆ; ನೀರಿಗಾಗಿ ಯುದ್ದಕ್ಕೂ ಸಿದ್ದವೆಂದ ಪಾಕ್ ….!
ಕಸ ಎಸೆದರೆ ದುಪ್ಪಟ್ಟು ದಂಡ: ಬೆಂಗಳೂರು ಶುರು ಮಾಡಿದೆ, ಮಂಗಳೂರು ಯಾವಾಗ? ಈಗ ಮಾತಲ್ಲ, ಕಠಿಣ ಕಾರ್ಯಾಚರಣೆ ಬೇಕು,ಕಟ್ಟುನಿಟ್ಟಿನ ಕ್ರಮಗಳಾಗ್ಬೆಕ್ ..
ಮತ್ತೆ ಹೊತ್ತಿ ಉರಿದ ಮಧ್ಯಪ್ರಾಚ್ಯ: ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿಕೆ ಬೆನ್ನಲ್ಲೇ ಲೆಬನಾನ್ ಮತ್ತು ಗಾಜಾದಲ್ಲಿ ಹೆಚ್ಚಿದ ಭೀಕರ ಯುದ್ಧದ ತೀವ್ರತೆ.
ಮೂಡುಬಿದಿರೆಯಲ್ಲಿ ಖರೀದಿಸಿದ ಕೆಲವೇ ಗಂಟೆಗಳಲ್ಲಿ ಕಾರಿಗೆ ಬೆಂಕಿ! ತಪ್ಪಿದ ಭಾರೀ ದುರಂತ ..ಏಕಾಏಕಿ ಬೆಂಕಿ.ಕಾರಿನಲ್ಲಿದ್ದ ಕುಟುಂಬ ಅಪಾಯದಿಂದ ಪಾರು.
ಆಂಬ್ಯುಲೆನ್ಸ್‌ನಲ್ಲೇ ನಡೆದ ಭೀಕರ ಘಟನೆ… ನಂಬಲು ಕಷ್ಟ, ಆದರೆ ಸತ್ಯ!
ಬೈಜು ರವೀಂದ್ರನ್ ಗೆ ಕೊನೆಗೂ ಜೈಲು ಶಿಕ್ಷೆ …!ಮುಳುಗಿಯೇ ಹೋಯ್ತು ಬೈಜೂಸ್!ಕೋಟಿ ಕೋಟಿ ಲೂಟಿ ಮಾಡಿ ಕ್ರಿಕೆಟ್ ಜರ್ಸಿಯಿಂದ ಜೈಲಿನ ಕೈದಿ ನಂಬರ್ ವರೆಗೆ….ಬೈಜೂಸ್ ಸಾಮ್ರಾಜ್ಯದ ರೋಚಕ ಪತನದ inside story
ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆ ಜಿಗಿತ-ಸುಂಕ ಏರಿಕೆಯಿಂದ ಬೆಲೆಯಲ್ಲಿ ಭಾರೀ ಏರಿಕೆ ಗ್ರಾಹಕರಿಗೆ ಹೊರೆ.