📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ದುರಂತ ಸಂಭವಿಸುವ ಮುನ್ನ ಮೆಸ್ಕಾಂ ಎಚ್ಚೆತ್ತುಕೊಳ್ಳುವುದೇ? ಮಂಗಳೂರಿನ PVS ರಸ್ತೆಯಲ್ಲೇ ಮೆಸ್ಕಾಂ ಟ್ರಾನ್ಸ್‌ಫಾರ್ಮರ್ ಅಡಿಯಲ್ಲೇ ಸುತ್ತಲೂ ಒಣ ಕಸದ ಪ್ಲಾಸ್ಟಿಕ್ ಟಾರ್ಪಾಲಿನ್ ಮತ್ತು ಬಾಕ್ಸ್ ರಾಶಿ!

ಪಿ.ವಿ.ಎಸ್ ಸರ್ಕಲ್‌ನ ಸಿಟಿ ಪ್ಲಾಜಾ ಮುಂಭಾಗದಲ್ಲಿ ದಿನದ 24 ಗಂಟೆಯೂ ಭಾರಿ ಪ್ರಮಾಣದ ವಿದ್ಯುತ್ ಲೋಡ್ ಹೊಂದಿರುವ ಮೆಸ್ಕಾಂ (MESCOM) ಟ್ರಾನ್ಸ್‌ಫಾರ್ಮರ್ ಇದೆ. ಈ ಟ್ರಾನ್ಸ್‌ಫಾರ್ಮರ್‌ನ ತಳಭಾಗದಲ್ಲಿ ಮತ್ತು ಅದರ ಮುಂಭಾಗದ ಜಾಗದಲ್ಲೇ ಖಾಸಗಿ ಬಸ್ ಏಜೆನ್ಸಿಗಳು ಪಾರ್ಸೆಲ್ ಪ್ಯಾಕಿಂಗ್‌ಗೆ ಬಳಸುವ ಒಣ ಕಾರ್ಡ್‌ಬೋರ್ಡ್ ಬಾಕ್ಸ್‌ಗಳು (Carton Boxes), ಪ್ಲಾಸ್ಟಿಕ್ ಟಾರ್ಪಾಲಿನ್ ಪೇಪರ್‌ಗಳು ಮತ್ತು ಥರ್ಮಕೋಲ್ ಕಸದ ರಾಶಿಯನ್ನು ಬೇಜವಾಬ್ದಾರಿತನದಿಂದ ಸುರಿಯುತ್ತಿದ್ದಾರೆ.

“ಪಿ.ವಿ.ಎಸ್ ಸರ್ಕಲ್ ಅಂದ್ರೆ ಮಂಗಳೂರಿನ ಹಾರ್ಟ್ ಇದ್ದ ಹಾಗೆ…ಇದೆ ಜಾಗದಲ್ಲಿ ಸದಾ ನೂರಾರು ಜನ ಓಡಾಡುತ್ತಿರುತ್ತಾರೆ. ಹಾಗೇನೆ ಹತ್ತಾರು ಬಹುಮಹಡಿ ಕಟ್ಟಡಗಳೂ ಇವೆ…ಇಂತಹ ಪ್ರೈಮ್ ಕ್ರೌಡ್ ಏರಿಯಾದಲ್ಲಿ ಹಗಲು-ರಾತ್ರಿ ವಿದ್ಯುತ್ ಏರಿಳಿತ (Fluctuations) ಅಥವಾ ಶಾರ್ಟ್ ಸರ್ಕ್ಯೂಟ್ ಆಗಿ ಟ್ರಾನ್ಸ್‌ಫಾರ್ಮರ್‌ನಿಂದ ಸಣ್ಣದೊಂದು ಕಿಡಿ ಕೆಳಗೆ ಬಿದ್ದರೂ ಸಾಕು,ಕ್ಷಣಾರ್ಧದಲ್ಲಿ ಅವಘಡ ಸಂಭವಿಸುವ ಲಕ್ಷಣಗಳು ಕಾಣಿಸ್ತದೆ !”

ಸಿಟಿ ಪ್ಲಾಜಾ ಫ್ರಂಟ್ ಸೈಡ್ ಕಾದಿದೆ ಆಕಸ್ಮಿಕ ಬೆಂಕಿಯ ಅಪಾಯ..!

ಸಿಟಿ ಪ್ಲಾಜಾದ ಫ್ರಂಟ್ ಸೈಡ್‌ನಲ್ಲಿ ಪಾರ್ಸೆಲ್ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಮಾಡುವ ಕಾರ್ಮಿಕರು ಹಾಗೂ ಅಲ್ಲಿಗೆ ಬರುವ ಸಾರ್ವಜನಿಕರು ಅಜಾಗರೂಕತೆಯಿಂದ ಧೂಮಪಾನ (Smoking) ಮಾಡಿ ಎಸೆಯುವ ಸಿಗರೇಟ್ ತುಂಡುಗಳು ಅಥವಾ ಕಿಡಿಗಳು ಈ ಪ್ಲಾಸ್ಟಿಕ್ ಟಾರ್ಪಾಲಿನ್ ಹಾಗೂ ಕಾರ್ಟನ್ ಬಾಕ್ಸ್‌ಗಳ ರಾಶಿಗೆ ತಗುಲುವ ಸಾಧ್ಯತೆ ದಟ್ಟವಾಗಿದೆ. ಬಸ್ ಮಾಲೀಕರು ಕೇವಲ ತಮ್ಮ ಪಾರ್ಸೆಲ್ ಲಗೇಜ್ businessವ್ಯಾಪಾರದ ಹಣ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ ವಿನಃ, ಟ್ರಾನ್ಸ್‌ಫಾರ್ಮರ್ ಮುಂಭಾಗ ಇಷ್ಟೊಂದು ಕಸ ಹಾಕಿ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿರುವುದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಕ್ಷಣದ ಕ್ರಮಕ್ಕಾಗಿ ಆಗ್ರಹ (Immediate Call to Action)

ದೊಡ್ಡದೊಂದು ಭೀಕರ ದುರಂತ ಸಂಭವಿಸಿ ಅಮಾಯಕ ಸಾರ್ವಜನಿಕರು ಬಲಿಯಾಗುವ ಮುನ್ನ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಗಳು ಈ ಕೆಳಗಿನ ಕ್ರಮಗಳನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಬೇಕು:

  • ಮೆಸ್ಕಾಂ (MESCOM) ಕಠಿಣ ಮುನ್ನೆಚ್ಚರಿಕೆ: ಪಿ.ವಿ.ಎಸ್ ಸರ್ಕಲ್‌ನ ಸಿಟಿ ಪ್ಲಾಜಾ ಮುಂದಿರುವ ತನ್ನ ಟ್ರಾನ್ಸ್‌ಫಾರ್ಮರ್ ಸುತ್ತಲೂ ಯಾವುದೇ ಒಣ ಕಸ, ಪ್ಲಾಸ್ಟಿಕ್ ಮತ್ತು ಕಾರ್ಟನ್ ಬಾಕ್ಸ್ ಜಮೆಯಾಗದಂತೆ ಮೆಸ್ಕಾಂ ತಕ್ಷಣವೇ ಅಲ್ಲಿ ಭದ್ರತಾ ಬೇಲಿ ಅಳವಡಿಸಬೇಕು ಹಾಗೂ ಕಸ ಹಾಕುವ ಏಜೆನ್ಸಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.
  • ಮಹಾನಗರ ಪಾಲಿಕೆ ಮತ್ತು ಸಾರಿಗೆ ಇಲಾಖೆ ದಾಳಿ: ಸಿಟಿ ಪ್ಲಾಜಾ ಮುಂಭಾಗದ ರಸ್ತೆಯನ್ನೇ ಪಾರ್ಸೆಲ್ ಯಾರ್ಡ್ ಮಾಡಿಕೊಂಡಿರುವ ಖಾಸಗಿ ಬಸ್ ಆಫೀಸ್‌ಗಳ ಮೇಲೆ ತಕ್ಷಣ ರಿಯಾಲಿಟಿ ಚೆಕ್ ನಡೆಸಿ, ಅಲ್ಲಿನ ಒಣ ಕಸವನ್ನು ವಿಲೇವಾರಿ ಮಾಡಿಸಿ ಭಾರಿ ದಂಡ ವಿಧಿಸಬೇಕು.

ಜೂನ್ 27, 2026 ರ ‘ವಿಜಯ ಕರ್ನಾಟಕ’ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿರುವ “5 ಬಸ್ ಹತ್ತಿ ಉಂಟಾದ್ರೆ ಮಾಲೀಕರಿಗೆ ಬಿಸಿ ತಟ್ಟಲ್ಲ!” ಎಂಬ ರಿಯಾಲಿಟಿ ಚೆಕ್ ವರದಿ ಖಾಸಗಿ ಬಸ್‌ಗಳ ಅಕ್ರಮ ಪಾರ್ಸೆಲ್ bussiness ನ್ನು ಬಯಲಿಗೆಳೆದಿದೆ. ಆದರೆ, ಈ ದಂಧೆಯ ಬೆನ್ನಲ್ಲೇ ಮಂಗಳೂರಿನ ಅತ್ಯಂತ ಜನನಿಬಿಡ ಪ್ರದೇಶವಾದ ಪಿ.ವಿ.ಎಸ್ ಸರ್ಕಲ್ (PVS Circle) ಹತ್ತಿರವಿರುವ ‘ಸಿಟಿ ಪ್ಲಾಜಾ’ (City Plaza) ಕಟ್ಟಡದ ಮುಂಭಾಗ ಮತ್ತು ಅದರ front ಸೈಡ್‌ನಲ್ಲಿ ಸೃಷ್ಟಿಯಾಗಿರುವ ಅಗ್ನಿ ಆಪತ್ತು ಸ್ಥಳೀಯ ನಾಗರಿಕರ ಮತ್ತು ವ್ಯಾಪಾರಿಗಳ ನಿದ್ದೆ ಗೆಡಿಸಿದೆ. ಅಲ್ಲಿನ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸುತ್ತಲೂ ಖಾಸಗಿ ಕಾರ್ಗೊ ಸಂಸ್ಥೆಗಳು ಎಸೆಯುತ್ತಿರುವ ಒಣ ಕಸದ ರಾಶಿ, ನಗರದ ಹೃದಯಭಾಗದಲ್ಲೇ ದೊಡ್ಡದೊಂದು ದುರಂತಕ್ಕೆ ಆಹ್ವಾನ ನೀಡುತ್ತಿದೆ.

ಈ ಅಪಾಯ ಕಣ್ಣಮುಂದೆ ಕಾಣಿಸುತ್ತಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತರೆ, ಪಿ.ವಿ.ಎಸ್ ಸರ್ಕಲ್‌ನಲ್ಲಿ ನಡೆಯುವ ಅಗ್ನಿ ದುರಂತಕ್ಕೆ ನೇರ ಹೊಣೆಯಾಗಬೇಕಾಗುತ್ತದೆ. ಅಧಿಕಾರಿಗಳೇ ತಕ್ಷಣ ಎಚ್ಚೆತ್ತುಕೊಳ್ಳಿ, ಸಂಬಂಧಪಟ್ಟ ಇಲಾಖೆಗಳು ಎಲ್ಲಾ ಕಡೆ ನಿರಂತರ ಕಣ್ಗಾವಲಿನಲ್ಲಿ ನಿಯಮಿತ ತಪಾಸಣೆ ನಡೆಸುವುದು ಅನಿವಾರ್ಯವೂ ಹೌದು..ಸದ್ಯ PVS ಸುತ್ತಮುತ್ತ ಪರಿಸರವನ್ನ ಅಪಾಯದಿಂದ ಮುಕ್ತಗೊಳಿಸಿ!”

##LuxuryBusParcel#Tags) #PVSCircleFireHazard #MescomTransformerDanger

COMMENTS

Login with Gmail to comment

ಇನ್ನಷ್ಟು ಸುದ್ದಿ

ಮಾಜಿ ಸಚಿವರಿಂದ ಮಂಗಳೂರು ವೈಭವಕ್ಕೆ ಬೃಹತ್ ಕೊಡುಗೆ
5.5 ವರ್ಷದ ಹೆಣ್ಣುಮಗಳ ಕೊಲೆ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್!ಮಗು ಸತ್ತು 3 ತಿಂಗಳು…ಆದ್ರೆ FIR ಇಲ್ಲ! 3 ಪೊಲೀಸರು ಸಸ್ಪೆಂಡ್
ಸಾಲದ ಹಣ ಕೇಳಿದ ವಿಚಾರಕ್ಕೆ ಚೂರಿಯಿಂದ ಕೊಲೆ ಯತ್ನ..
165 ಹೆಣ್ಮಕ್ಕಳು ತಮ್ಮದಲ್ಲದ ತಪ್ಪಿಗೆ ಹತ್ಯೆಗೆ ಒಳಗಾದರು 
ಕಂಬಳಕ್ಕೆ ಘೋಷಿತ ಅನುದಾನ ಕೊಡುವಂತೆ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ..
ರಾಜ್ಯದ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಾಗಿ ಉನ್ನತೀಕರಿಸಲು 3900 ಕೋಟಿ ಮೀಸಲು
ಒಂದು ತಪ್ಪು ಹೆಜ್ಜೆ…25 ಅಡಿ ಬಾವಿಗೆ ಬಿದ್ದ ಆನೆ …ನೋಡಿ ಈ ಸ್ಮಾರ್ಟ್ ಆಪರೇಷನ್!
ಬ್ರಹ್ಮಾವರ, ಮಂದಾರ್ತಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಹೇಳೋರು ಕೇಳೋರು ಯಾರು ಇಲ್ವಾ?
ಜೀತಕ್ಕಿಟ್ಟುಕೊಂಡು ದರ್ಬಾರ್ ನಡೆಸುತ್ತಿದ್ದ ರಜನಿಶೆಟ್ಟಿಯ ಬಂಧನ
ಕರ್ನಾಟಕ ಎಸ್‌ಎಸ್‌ಎಲ್‌ಸಿ 2026 ಫಲಿತಾಂಶ: ಇತಿಹಾಸದ ಅತ್ಯಧಿಕ ಉತ್ತೀರ್ಣ ಪ್ರಮಾಣ ಮತ್ತು ಟಾಪರ್‌ಗಳ ಸಾಧನೆ
ಅಯೋಧ್ಯೆಯಲ್ಲಿ ನ್ಯಾಯಕ್ಕಾಗಿ ವಕೀಲರ ಮೆರವಣಿಗೆ..ಭುಗಿಲೆದ್ದ ಪ್ರತಿಭಟನೆ..ಕಠಿಣ ಕ್ರಮಕ್ಕೆ ಆಗ್ರಹ
ಹೆತ್ತ ಮಗಳನ್ನೇ ಉಸಿರುಗಟ್ಟಿಸಿ ಕೊಂದ  ಪಾಪಿ ತಾಯಿ
ಮಾಜಿ ಮುಖ್ಯಮಂತ್ರಿಯ ಮೇಲೆ ಗುಂಡಿನ ದಾಳಿ,- Z+ ಭದ್ರತೆಯ ನಡುವೆ ದಾಳಿಕೋರ ಹೇಗೆ  ಬಂದ?
ಸುಳ್ಯ:  ಕರ್ತವ್ಯದಲ್ಲಿದ್ದ ಉಪನ್ಯಾಸಕ ಕುಸಿದು ಬಿದ್ದು ಸಾವು
108 ಆರೋಗ್ಯ ಕವಚ'”ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ಇನ್ಮುಂದೆ ಆಂಬ್ಯುಲೆನ್ಸ್ ನಿಮ್ಮ ಮನೆಬಾಗಿಲಿಗೆ! 
ಉದ್ಯಮಿ, ಕಾಲೇಜ್ topper,  ಕೋಟ್ಯದೀಶರೇ…ಕಠಿಣ ಜೈನ ಸನ್ಯಾಸದತ್ತ…!
ಯಾರದ್ದೋ ಹಠ, ಮತ್ತ್ಯಾರದೋ ಚಟ, ಹೆತ್ತವರ ಜಗಳಕ್ಕೆ ಬಲಿಯಾಯ್ತು ಮಗುವಿನ ಬಾಲ್ಯ -ಭವಿಷ್ಯ!
‘₹1ಕ್ಕೆ ಫ್ಯಾಷನ್’ ಜಾಹೀರಾತು ವೈರಲ್… ಮಾಲಾಡ್ ಮಾಲ್‌ನಲ್ಲಿ ನಿಯಂತ್ರಣ ತಪ್ಪಿದ ಜನಸಾಗರ-ಸ್ಟ್ಯಾಂಪೀಡ್ ಭೀತಿ ಮೂಡಿಸಿದ ಜನಸಂದಣಿ!
ಮಸೀದಿ ಹುಂಡಿಗೂ ಲಗ್ಗೆ ಇಟ್ಟ ಕಳ್ಳರು….!
🚨 “ಮಂಗಳೂರು ಜಿಲ್ಲಾಕಾರಾಗೃಹದಲ್ಲಿ ಗಲಾಟೆ: ಜೈಲು ಅಧೀಕ್ಷಕರ ಮೇಲೆಯೇ ಕೈದಿಗಳ ಹಲ್ಲೆಯತ್ನ!”
ಆರ್‌ಸಿಬಿ ಎದುರಿಸಲು ರಾಯಲ್ಸ್ ರೆಡಿ??: ಕ್ರಿಕೆಟ್ ಜಗತ್ತಿಗೆ ಶಾಕ್ ಕೊಟ್ಟ ಬಿಹಾರದ ಬಾಲಕ-ಸಚಿನ್ ತೆಂಡೂಲ್ಕರ್ ಕೂಡ ಮೆಚ್ಚಿದ ಆ 29 ಎಸೆತಗಳ ರುದ್ರತಾಂಡವ!
ದಲಿತ ವಿಧವೆ ಮೇಲೆ ಸಾಮೂಹಿಕ ಅತ್ಯಾಚಾರ – ಮೂವರು ಆರೋಪಿಗಳು ಬಂಧನ
ಬೆಂಗಳೂರು ಟು ಮುಂಬೈ  ಐದೇ ಘಂಟೆ ಪ್ರಯಾಣ- ಎಕ್ಸ್ಪ್ರೆಸ್ ಹೈವೇಗೆ ಅಸ್ತು
ಎಷ್ಟೇ ಚಾಣಾಕ್ಷತನ ತೋರಿದರೂ, ಡಿಜಿಟಲ್ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.” AI ಸಣ್ಣ ಸುಳಿವು’ → ‘ನಿಖರ ಪತ್ತೆ’ ಜನರ ಭದ್ರತೆಗಾಗಿ ತಂತ್ರಜ್ಞಾನವೇ ಶಕ್ತಿಯುತ ಆಯುಧ ..!
ಇನ್ಮುಂದೆ ಏರ್‌ಪೋರ್ಟ್‌ನಲ್ಲಿ ಇಷ್ಟ ಬಂದಂತೆ ವಿಡಿಯೋ ಮಾಡುವಂತಿಲ್ಲ! ಇನ್ಸ್ಟಾರೀಲ್ಸ್, ವಿಡಿಯೋ ಮಾಡಿದರೆ ‘ನೋ-ಫ್ಲೈ ಲಿಸ್ಟ್’ ಸೇರುವ ಮುನ್ನೆಚ್ಚರಿಕೆ ನೀಡಿದ DGCA! ಲೇಟೆಸ್ಟ್ ಅಪ್ಡೇಟ್ ಹೊಸ ರೂಲ್ಸ್ ಇಲ್ಲಿದೆ.. ಓದಿ..
ಬಾಗಲಕೋಟೆ ಜಿಲ್ಲೆ ಕೆರೂರು ಠಾಣೆಯಲ್ಲಿ ಪಿಎಸ್ಐ & ಪೇದೆ ₹1.70 ಲಕ್ಷ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಬಲೆಗೆ!
ಮಂಗಳೂರು ಕಮಿಷನರ್ ವಿರುದ್ಧ ಎಸ್ಪಿ ಕಾಶಿನಾಥ್ ದೂರು ಕೊಡುತ್ತಿರುವುದು ಯಾಕೆ?
ಆರೋಪಿ ಸಮೀರ್ ಮುಲ್ಲಾ ಸ್ಫೋಟಕ ಹೇಳಿಕೆ-ಖುಷಿ ಒಳ್ಳೆ ಹುಡುಗಿ-🔥 ಹುಬ್ಬಳ್ಳಿ ಲವ್ ಜಿಹಾದ್ ಅಲ್ಲ ಎಂದ ಪೊಲೀಸರು : ಇದೀಗ ಹೊಸ ಟ್ವಿಸ್ಟ್!
Cocktail 2 ಸುತ್ತ ರಶ್ಮಿಕಾ ಮಂದಣ್ಣ ಕ್ರಿಯೇಟ್ ಮಾಡಿದ ಹೈಪ್ ಎಷ್ಟು ಗೊತ್ತಾ?ಅನ್ಟೋಲ್ಡ್ ಮಸಾಲೆ ಸ್ಟೋರಿಗಳು ಇಲ್ಲಿವೆ!
ಜಾಗತಿಕ ಸಂಘರ್ಷದ ಮಧ್ಯೆ ಭಾರತ–ಯುಎಇ ಬಿಗ್ ಡೀಲ್! ತಂತ್ರಜ್ಞಾನ, ಇಂಧನ ಮತ್ತು ಭದ್ರತೆಯಲ್ಲಿ ಐತಿಹಾಸಿಕ ಒಗ್ಗಟ್ಟು.