📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಜೀತಕ್ಕಿಟ್ಟುಕೊಂಡು ದರ್ಬಾರ್ ನಡೆಸುತ್ತಿದ್ದ ರಜನಿಶೆಟ್ಟಿಯ ಬಂಧನ

30 ವರ್ಷ ದನದ ಕೊಟ್ಟಿಗೆಯಲ್ಲಿ ಬದುಕಿದ ನಾಗ!! ಒಂದು ನಯಾ ಪೈಸೆಯೂ ಸಂಬಳ ಕೊಡದೆ ಮೂರು ದಶಕದಿಂದ ದುಡಿಸಿ ಕೊಳ್ಳಲಾಗುತ್ತಿದ್ದ ಪ್ರಕರಣ.. ಉಡುಪಿಯಲ್ಲಿ ಶಾಕ್… ಆರೋಪಿ –ಮಹಿಳೆ ಬಂಧನ

ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಹೆಮ್ಮಾಡಿ ಸಮೀಪದ ಕಬೈಲು ಗ್ರಾಮದಲ್ಲಿ ಅಮಾನವೀಯತೆಯನ್ನು ಕಂಗೊಳಿಸುವಂತಹ ಘಟನೆ ಬೆಳಕಿಗೆ ಬಂದಿದೆ. ಕೊರಗ ಸಮುದಾಯದ ವ್ಯಕ್ತಿಯೊಬ್ಬರನ್ನು ಸುಮಾರು 30 ವರ್ಷಗಳಿಂದ ಜೀತದಾಳಾಗಿ ಮನೆಯಲ್ಲಿ ಕೆಲಸ ಮಾಡಿಸಿಕೊಂಡು ದೌರ್ಜನ್ಯ ನಡೆಸಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.ಈ ಘಟನೆ ಇದೀಗ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು,  ದಾಸ್ಯ ವ್ಯವಸ್ಥೆಯಂತಹ ಪರಿಸ್ಥಿತಿ ಇನ್ನೂ ಸಮಾಜದಲ್ಲಿ ಇರುವುದನ್ನು ಈ ಪ್ರಕರಣ ಮತ್ತೆ ನೆನಪಿಸಿದೆ.

30 ವರ್ಷ ಕೆಲಸ ಮಾಡಿದರೂ ಸಂಬಳ ಇಲ್ಲ. ದನದ ಕೊಟ್ಟಿಗೆಯಲ್ಲೇ ವಾಸ – ಮಾನವೀಯತೆ ಮರೆತ ವರ್ತನೆ, ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಜೀತದಾಳು ಪದ್ಧತಿ, ಜೀತಕ್ಕೆ ಇಟ್ಟುಕೊಂಡವರು ಪುಗಸಟ್ಟೆ ಕೆಲಸ ಮಾಡಿಸಿಕೊಂಡು  ದರ್ಬಾರ್ ನಡೆಸುತ್ತಿದ್ದರು.

65 ವರ್ಷದ ನಾಗನಿಗೆ ಅವನ ಹರೆಯದ ಕಾಲದಲ್ಲೇ ಕೆಲಸ ಕೊಡುತ್ತೇವೆ ಎಂದು ಕರೆದುಕೊಂಡು ಹೋಗಿ ಬಂಧನದ ಬದುಕು ಕೊಟ್ಟ ಕುಟುಂಬವೇ ಈ ರಜನಿ ಶೆಟ್ಟಿಯ ಕುಟುಂಬ ನೋಡಿ , ದನ ಕಾಯುವುದು, ತೋಟದ ಕೆಲಸ – ವಿಶ್ರಾಂತಿ ಇಲ್ಲದ ದಿನಗಳು ಆ ನಾಗನದ್ದಾಗಿತ್ತು

ಮೂಲತಃ ಕನ್ಯಾನ ಗ್ರಾಮದ ನಿವಾಸಿಯಾದ ನಾಗ (65) ಅವರು ಸುಮಾರು 30 ವರ್ಷಗಳ ಹಿಂದೆ ಕೆಲಸದ ಹುಡುಕಾಟದಲ್ಲಿದ್ದಾಗ ಹೆಮ್ಮಾಡಿಯ ನಿವಾಸಿ ಸುಬ್ಬಣ್ಣ ಶೆಟ್ಟಿ ಅವರು ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಕೆಲಸಕ್ಕೆ ಇಟ್ಟಿದ್ದರು. ಆದರೆ ಕೆಲಸದ ಹೆಸರಿನಲ್ಲಿ ಆರಂಭವಾದುದು ನಾಗನಿಗೆ ಬದುಕಿನ ಬಂಧನವಾಗಿಯೇ ಮಾರ್ಪಟ್ಟಿತು ಎಂದು ಆರೋಪಿಸಲಾಗಿದೆ.

ದನ ಕಾಯುವುದು, ತೋಟದ ಕೆಲಸ – ವಿಶ್ರಾಂತಿ ಇಲ್ಲದ ದಿನಗಳು
ನಾಗ ಅವರಿಗೆ ಪ್ರತಿದಿನ ವಿವಿಧ ಕಠಿಣ ಕೆಲಸಗಳನ್ನು ಮಾಡಿಸಲಾಗುತ್ತಿತ್ತು.ಅವರಿಂದ ಮಾಡಿಸಲಾದ ಕೆಲಸಗಳು,ದನ ಹಾಗೂ ಎಮ್ಮೆಗಳನ್ನು ಕಾಯುವುದು,ಗದ್ದೆ ಮತ್ತು ತೋಟದ ಕೆಲಸ ದನದ ಸೆಗಣಿ ತೆಗೆದು ಸ್ವಚ್ಛಗೊಳಿಸುವುದು
ಮನೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು.ಈ ಎಲ್ಲಾ ಕೆಲಸಗಳನ್ನು ದಿನವೂ ನಿರಂತರವಾಗಿ ಮಾಡಬೇಕಾಗುತ್ತಿತ್ತು ಎಂದು ಹೇಳಲಾಗಿದೆ.

ದನದ ಕೊಟ್ಟಿಗೆಯಲ್ಲೇ ವಾಸ – ಮಾನವೀಯತೆ ಮರೆತ ವರ್ತನೆ
ನಾಗ ಅವರಿಗೆ ಮನೆಯೊಳಗೆ ವಾಸಿಸಲು ಅವಕಾಶ ನೀಡಲಾಗಲಿಲ್ಲ ಎಂದು ದೂರಲಾಗಿದೆ. ಅವರಿಗೆ ದನದ ಕೊಟ್ಟಿಗೆಯಲ್ಲೇ ವಾಸ ಮಾಡಲು ಬಲವಂತ ಮಾಡಲಾಗಿತ್ತು.

ಅವರ ಪರಿಸ್ಥಿತಿ ಹೇಗಿತ್ತೆಂದರೆ
ಮಲಗುವ ಸ್ಥಳ – ದನದ ಕೊಟ್ಟಿಗೆ
ಊಟ – ಕೊಟ್ಟಿಗೆಯಲ್ಲೇ
ಬಟ್ಟೆ ಮತ್ತು ಪಾತ್ರೆಗಳು – ಕೊಟ್ಟಿಗೆಯಲ್ಲೇ ಇಡಬೇಕು
ಊಟವನ್ನು ಬಾಳೆ ಎಲೆಯಲ್ಲಿ ನೀಡಲಾಗುತ್ತಿತ್ತು.ಇದು ಮನುಷ್ಯನಿಗಿಂತ ಕಡಿಮೆ ಗೌರವದ ಜೀವನ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

30 ವರ್ಷ ಕೆಲಸ ಮಾಡಿದರೂ ಸಂಬಳ ಇಲ್ಲ. …ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ನಾಗ ಅವರು ಸುಮಾರು ಮೂರು ದಶಕಗಳ ಕಾಲ ಕೆಲಸ ಮಾಡಿದರೂ ಅವರಿಗೆ ಯಾವುದೇ ಸಂಬಳ ನೀಡಲಾಗಲಿಲ್ಲ.
ಅದರ ಜೊತೆಗೆ,ಮನೆಯಿಂದ ಹೊರಗೆ ಹೋಗಲು ಅವಕಾಶ ನೀಡಲಾಗಲಿಲ್ಲ
ಸ್ವತಂತ್ರವಾಗಿ ಬದುಕಲು ಅವಕಾಶ ಇರಲಿಲ್ಲ. ಇದು ಜೀತದಾಳು ಪದ್ಧತಿಯ ಗಂಭೀರ ಉದಾಹರಣೆ ಎಂದು ಸಾಮಾಜಿಕ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.

ಮಹಿಳೆ ಬಂಧನ – ಪೊಲೀಸ್ ತನಿಖೆ ಮುಂದುವರಿಕೆ

ಸುಬ್ಬಣ್ಣ ಶೆಟ್ಟಿ ಮೃತಪಟ್ಟ ನಂತರ ಅವರ ಮಗಳು ರಜನಿ ಶೆಟ್ಟಿ ಮತ್ತು ಅಳಿಯ ಕರುಣಾಕರ ಶೆಟ್ಟಿ ನಾಗ ಅವರಿಂದ ಕೆಲಸ ಮಾಡಿಸುತ್ತಿದ್ದರು ಎಂದು ಹೇಳಲಾಗಿದೆ.

ಈ ಪ್ರಕರಣದ ಸಂಬಂಧ ಪೊಲೀಸರು ರಜನಿ ಶೆಟ್ಟಿಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿ ಮುಂದಿನ ತನಿಖೆ ಮುಂದುವರಿಸಿದ್ದಾರೆ.

ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಜೀತದಾಳು ಪದ್ಧತಿ

ಈ ಘಟನೆ ಮತ್ತೊಮ್ಮೆ ಸಮಾಜದಲ್ಲಿ ಇನ್ನೂ ಕೆಲವೆಡೆ ಜೀತದಾಳು ಪದ್ಧತಿ ಮತ್ತು ಸಮುದಾಯದ ಮೇಲೆ ನಡೆಯುವ ಅನ್ಯಾಯಗಳು ಮುಂದುವರಿಯುತ್ತಿರುವುದನ್ನು ಸ್ಪಷ್ಟಪಡಿಸಿದೆ.

ನಾಗ ಅವರಂತಹ ಅನೇಕ ಜನರ ಕಥೆಗಳು ಇನ್ನೂ ಹೊರಬರದೇ ಇರುವ ಸಾಧ್ಯತೆಯೂ ಇದೆ ಎಂದು ಸಾಮಾಜಿಕ ಸಂಘಟನೆಗಳು ಆತಂಕ ವ್ಯಕ್ತಪಡಿಸುತ್ತಿವೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿಗೆ  ಪ್ರತಿದಾಳಿ ಯುಎಇ, ಬಹ್ರೇನ್, ಸೌದಿಯಲ್ಲಿ ಅಮೆರಿಕದ ನೆಲೆಗಳಿಗೆ ನಡುಕ.
ಅನ್ನಭಾಗ್ಯ ಅಕ್ಕಿಯ ಅಕ್ರಮ ದಾಸ್ತಾನು ಪತ್ತೆ – ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಮಹಿಳಾ ಕ್ರೀಡಾಪಟುಗಳ ಹೋರಾಟಕ್ಕೆ ಹೊಸ ತಿರುವು ಕೊಟ್ಟ ದೆಹಲಿ ಹೈಕೋರ್ಟ್!
ರಾಜಕೀಯ ಬದಲಾಗುತ್ತಿದೆ -ಪಂಚರಾಜ್ಯ election ರಿಸಲ್ಟ್ “ಗೆಲುವು-ಸೋಲಿನ ಶಕ್ತಿ ಪಕ್ಷದಲ್ಲಲ್ಲ… ಜನರ ಕೈಯಲ್ಲಿ”
ಮುಂದಿನ ಕೆಲವು ದಿನ ಭಾರಿ ಗಾಳಿ ಮಳೆ ಗುಡುಗು -ಮಿಂಚಿನ ಎಚ್ಚರಿಕೆ 
ಬೆಂಗಳೂರಲ್ಲಿ Bowring Hospital ಬಳಿ ಗೋಡೆ ಕುಸಿತ ಮನ ಕಲುಕುವ ಘಟನೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಿಂತವರು… ಏಳು ಮಂದಿಯ ದುರಂತ ಅಂತ್ಯ.!
ಆಯುಷ್ ಎಚ್ಚರಿಕೆ ಬಳಿಕ ಅಶ್ವಗಂಧ ನಿಯಂತ್ರಣ ಕ್ರಮಕ್ಕೆ ತಡೆ: ಹೈಕೋರ್ಟ್ ಮಹತ್ವದ ಆದೇಶ
ಕಾಪು ಮಹಿಳೆ ಹತ್ಯೆ – ಇಬ್ಬರು ಪೊಲೀಸ್ ವಶಕ್ಕೆ
ಹೆಸರು ಬದಲಾವಣೆ ಪಶ್ಚಿಮ ಬಂಗಾಳ ಪೆಂಡಿಂಗ್, ಕೇರಳ ಪ್ರಗತಿಯಲ್ಲಿ
ಬಾವಿ ಮುಖ್ಯಮಂತ್ರಿ ಆಪ್ತನ ಭೀಕರ ಹತ್ಯೆ ಹಿಂದೆ ಯಾರು?
ಹಾಡುಹಗಲೇ ಉಡುಪಿಯ ಕರಾವಳಿ ಬೈಪಾಸ್ ನಲ್ಲಿ ಗುಂಡಾಗಿರಿ
ತುರ್ತು ಎಚ್ಚರಿಕೆ ‼️ಹಿಪ್ನೋಟೈಸಿಂಗ್ ಸ್ವಾಮಿಗಳು ನಿಮ್ಮ ಬಳಿಯೂ ಬರಬಹುದು
108 ಆರೋಗ್ಯ ಕವಚ'”ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ಇನ್ಮುಂದೆ ಆಂಬ್ಯುಲೆನ್ಸ್ ನಿಮ್ಮ ಮನೆಬಾಗಿಲಿಗೆ! 
ಸೋಶಿಯಲ್ ಮೀಡಿಯಾ ಮೂಲಕ ಸಾರ್ವಜನಿಕರಲ್ಲಿ ಭಯ ಸೃಷ್ಠಿ -45 ಜನರ ಬಂಧನ
ಸನ್ಯಾಸಿಗೆ ಕಾಡಿದ ಸುಂದರಿಯ  ಬಂಧನ
ಮಂಡ್ಯದಲ್ಲಿ ವೈರಲ್ ವಿಡಿಯೋ!ಜಿಂಕೆ ಸಂಪೂರ್ಣ ಮಾಯ!ಈ ದೃಶ್ಯ ನೋಡಿದ್ರೆ ಗಾಬರಿಯಾಗ್ತೀರಾ!ಜೀವಂತ ಪ್ರಕೃತಿ ಡಾಕ್ಯುಮೆಂಟರಿ…
ಬಂಟರ ಸಮುದಾಯದಲ್ಲೊಂದು ಹೀನ ಸಂಪ್ರದಾಯ-ವರದಕ್ಷಿಣೆಗಾಗಿ ಹಿಂಸೆ, ಹಲ್ಲೆ.. ಬೆದರಿಕೆ!
ಒಂದು ಚಿನ್ನದ ಸರಕ್ಕಾಗಿ ನಿದ್ರೆಯಲ್ಲಿದ್ದ ಗೆಳತಿಯನ್ನೇ ಕೊಲ್ಲಲೆತ್ನಿಸಿದ ಆಕೆಗೆ ಜೈಲೆ ಗತಿ …..ನಂಬಿಕೆಯೇ ರಕ್ತಸಿಕ್ತವಾದ ಮಣಿಪಾಲದ ಭೀಕರ ಘಟನೆ…
Political Heatwave 2026:ದಕ್ಷಿಣದಲ್ಲಿ ಅಧಿಕಾರ ಆಟ, ಅಸ್ಸಾಂನಲ್ಲಿ ಅಬ್ಬರ..!
ಮಂಗಳೂರಿನಲ್ಲಿ ಪಕ್ಕಪ್ಲಾನ್ ಡ್ ಅಟ್ಯಾಕ್ ..!ರೌಡಿ ಶೀಟರ್ ಬರ್ಬರ ಹತ್ಯೆ…ವಿಶೇಷ ತಂಡ ರಚನೆ..!
🚨 ಮಂಗಳೂರು ನಿವಾಸಿಗಳಿಗೆ ಮಹತ್ವದ ಮಾಹಿತಿ – 2026 ಘನತ್ಯಾಜ್ಯ ನಿರ್ವಹಣೆ ಹೊಸ ನಿಯಮ  🚨
War update-ಕಂಪ್ಲೀಟ್ ಡೀಟೇಲ್ಸ್ …ಮುಂದೇನು? ceasefire ಮುಂದುವರಿಯುತ್ತದೆಯಾ?ಶಾಂತಿ ಅಥವಾ ಸಂಘರ್ಷ? ಮುಂದಿನ ಕೆಲ ದಿನಗಳು ವಿಶ್ವದ ಭವಿಷ್ಯ ತೀರ್ಮಾನಿಸುತ್ತದೆ.
ಹತ್ತು ವರ್ಷದ ಮಗಳ ಹುಟ್ಟುಹಬ್ಬದ ಸಂಭ್ರಮ…  ವಿಧಿಯಾಟದಲ್ಲಿ ಕಣ್ಣೀರಾಗಿ ಮಾರ್ಪಟ್ಟ ದುರಂತ ಕಥೆ
ಚುನಾವಣೆ ಗೆಲ್ಲುವುದು ಸಾಕಿನ್ನು, ರಾಷ್ಟ್ರದ ಸಣ್ಣ ಮತ್ತು ಮಧ್ಯಮ ವ್ಯವಹಾರ ಸ್ಥರ ಹಿತ ಕಾಪಾಡಿ
ಕರ್ನಾಟಕದ ಮಾಜಿ ಸಚಿವರಿಗೆ ಜೈಲು ಜೈಲು ಶಿಕ್ಷೆಗೆ ಉಪಮುಖ್ಯಮಂತ್ರಿ ಡಿಕೆಯ ಶಾಕ್ ಸ್ಟೇಟ್ಮೆಂಟ್
ಇನ್ನು ಹೈವೇಯಲ್ಲಿ ಲಿಮಿಟ್ ಗಿಂತ ವೇಗವಾಗಿ ಹೋಗುವವರು ಹುಷಾರಾಗಿರಿ…
ಬಾಲಕಾರ್ಮಿಕ ಪತ್ತೆ : ಮಾಲೀಕನಿಗೆ ಜೈಲು, ದಂಡ
ಶಿಶಿಲದಲ್ಲಿ ವಿಷಪೂರಿತ ಹಾವು ಕಚ್ಚಿ 65 ವರ್ಷದ ರೈತ ಮೃತ್ಯು
ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡಿಪಾರು ಆದೇಶ….
ತೈಲ ಟ್ಯಾಂಕರ್ ಮೇಲೆ ಇರಾನ್ ಆತ್ಮಹತ್ಯಾ ದೋಣಿ ದಾಳಿ – ಭಾರತೀಯ ನಾವಿಕ ಸಾವು