📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಗೃಹಲಕ್ಷ್ಮಿ ಹಣ ಉಳಿಸಿ ದೇವಿಗೆ ₹17 ಲಕ್ಷ ದೇಣಿಗೆ!

ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ  ಯೋಜನೆ ಇಂದ ಬಂದಂತಹ 2000 ಹಣವನ್ನು  ಸೌದತ್ತಿ ಎಲ್ಲಮ್ಮ  ದೇವಿಗೆ ಸಮರ್ಪಣೆ ಮಾಡಲು ಗದಗ ಜಿಲ್ಲೆಯ ಲಕ್ಕುಂಡಿ ಸಮೀಪದ – ತಿಮ್ಮಾಪುರದ 850 ಮಹಿಳೆಯರು ಸ್ವಯಂ ನಿರ್ಧಾರ ಮಾಡಿ ಒಟ್ಟು  ₹17 ಲಕ್ಷ ರೂಪಾಯಿಯನ್ನು  ಎಲ್ಲಮ್ಮ ದೇವಿಯ ಪದತಲದಡಿ ಅರ್ಪಿಸಿದ್ದಾರೆ ! /Grihalakshmi – 850 women from Thimmapur donate ₹17 lakh! To Yallama temple Gadaga

ಇಂತಹುದೊಂದು  ಅಭೂತಪೂರ್ವ ಘಟನೆ ಗದಗ ಜಿಲ್ಲೆಯ ಲಕ್ಕುಂಡಿ ಸಮೀಪದ  ತಿಮ್ಮಾಪುರ ಗ್ರಾಮದ  ಸುಮಾರು 850 ಮಹಿಳೆಯರ ಸ್ವಯಂ ನಿರ್ಧಾರದಿಂದ ನಡೆದಿದೆ. 

ಆ ಮಹಿಳೆಯರು ಯಾರ ಒತ್ತಡಕ್ಕೂ ಒಳಗಾಗದೆ ತಮ್ಮೊಳಗೆ ತಾವು ನಿರ್ಧರಿಸಿಕೊಂಡು ಆ ಊರಿನ ಗ್ರಹಲಕ್ಷ್ಮಿ ಯೋಜನೆಯ ಬಹುತೇಕ 850 ಫಲಾನುಭವಿಗಳು ಒಟ್ಟಾಗಿ ತಮ್ಮ ಒಂದು ತಿಂಗಳ ಯೋಜನೆಯ ಹಣವನ್ನು ಎಲ್ಲಮ್ಮ ದೇವಿಯ ಕಟ್ಟಡ ನಿರ್ಮಾಣಕ್ಕೆ ದೇಣಿಗೆಯಾಗಿ ನೀಡಲು ನಿರ್ಧರಿಸಿದರು ಹಾಗೂ ಅದರಂತೆಯೇ ನಡೆದುಕೊಂಡರು. ಆ ಎಲ್ಲಾ 850 ಮಹಿಳೆಯರ ಒಂದು ತಿಂಗಳ ಗ್ರಹಲಕ್ಷ್ಮಿ ಯೋಜನೆಯ ಮೊತ್ತ ₹17 ಲಕ್ಷ ಆಗುತ್ತದೆ. ಅದನ್ನು Yellamma Templeಗೆ ದೇಣಿಗೆಯಾಗಿ ನೀಡಿದ್ದಾರೆ. ಸರ್ಕಾರ ನೀಡಿದ ಸಹಾಯ ನಮ್ಮ ಕುಟುಂಬದ ನೆರವಿಗೆ. ಅದರಲ್ಲಿ ಒಂದು ಭಾಗವನ್ನು ದೇವಿಗೆ ಅರ್ಪಿಸೋಣ” ಎಂಬ ಆಲೋಚನೆ ಗ್ರಾಮದಲ್ಲಿ ಒಗ್ಗಟ್ಟಿನ ಸಂಕಲ್ಪವಾಗಿ ರೂಪುಗೊಂಡಿತು.
ಭಕ್ತಿ ಮತ್ತು ಏಕತೆಯ ಮೇಳೈಸಿತು.

ಇತಿಹಾಸ ಪ್ರಸಿದ್ಧ  ಯಲ್ಲಮ್ಮ ದೇವಿಯ ಮೇಲಿನ ಭಕ್ತಿಯೇ ಈ ಕಾರ್ಯಕ್ಕೆ ಮೂಲ ಪ್ರೇರಣೆ. ದೇವಾಲಯದ ಅಭಿವೃದ್ಧಿ ಮತ್ತು ಧಾರ್ಮಿಕ ಕಾರ್ಯಗಳಿಗೆ ನೆರವಾಗಬೇಕು ಎಂಬ ಮನೋಭಾವದಿಂದ ತಿಮ್ಮಾಪುರದ  ಮಹಿಳೆಯರು ಈ ದೇಣಿಗೆಯನ್ನು ಸಮರ್ಪಿಸಿದ್ದಾರೆ.

ಗ್ರಾಮೀಣ ಮಹಿಳೆಯರ ಸಂಘಟನಾ ಶಕ್ತಿ ಹಾಗೂ ಸಮಾಜಮುಖಿ ಮನೋಭಾವ ಈ ಘಟನೆಯ ಮೂಲಕ ಸ್ಪಷ್ಟವಾಗಿದೆ. 

ಸರ್ಕಾರದ ಯೋಜನೆಗಳನ್ನು ಜವಾಬ್ದಾರಿಯಿಂದ ಬಳಸುವ ಮೂಲಕ  ಈ ಮಹಿಳೆಯರು ಮಾದರಿಯಾಗಿ ಕಾಣುತ್ತಾರೆ. ಮಹಿಳಾ ಸಬಲೀಕರಣದ ನಿಜವಾದ ಶಕ್ತಿಗೆ ಸಾಕ್ಷಿಯಾಗುತ್ತಲೇ, ಭಕ್ತಿ ಮತ್ತು ಸಮಾಜಮುಖಿ ಚಿಂತನೆಯ ಸಂಯೋಜನೆ ಅದ್ಭುತವಾಗಿ ಗೋಚರಿಸುತ್ತದೆ.  ಬಹಳ ಮುಖ್ಯವಾಗಿ ಗ್ರಾಮೀಣ  ಮಟ್ಟದಲ್ಲಿನ ಮಹಿಳೆಯರ ಏಕತೆಯ ಈ ಶಕ್ತಿಯು ರಾಜ್ಯದ ಇತರ ಮಹಿಳೆಯರಿಗೆಷ್ಟೇ ಅಲ್ಲ ಪುರುಷರಿಗೂ ಮಾದರಿ ಎನಿಸುವಂತಿದೆ.

ತಿಮ್ಮಾಪುರದ ಈ 850 ಮಹಿಳೆಯರ ಮಹಾಸಂಕಲ್ಪ  ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.
ಒಬ್ಬಳ ಗ್ರಾಹಲಕ್ಷ್ಮಿಯ 2000ರೂ ಚಿಕ್ಕದಾಗಿ ಕಾಣಬಹುದು, ಆದರೆ 850 ಮಹಿಳೆಯರ ಒಗ್ಗಟ್ಟಿನ  ಸಂಕಲ್ಪ ದಿಂದಾಗಿ ಅದು 17 ಲಕ್ಷ ರೂಪಾಯಿಗಳ ಮಹಾಸಾಗರವಾಗಿ ಪರಿವರ್ತಿತವಾಗಿದೆ! ಇದು ಕೇವಲ ಹಣದ ಸಂಗ್ರಹವಲ್ಲ, ಇದು ಮಹಿಳಾ ಶಕ್ತಿ, ಆತ್ಮವಿಶ್ವಾಸ ಮತ್ತು ಸಂಘಟನೆಯ ಸಂಕೇತವಾಗಿದೆ. ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಮತ್ತು ಧಾರ್ಮಿಕ ಕಾರ್ಯಗಳಿಗಾಗಿ ಮಹಿಳೆಯರು Gruha Lakshmi ಯೋಜನೆಯ ಅಡಿಯಲ್ಲಿ ರಾಜ್ಯ ಸರ್ಕಾರ ನೀಡುತ್ತಿರುವ ಮಾಸಿಕ ನೆರವು 2000ರೂ ಹಣವನ್ನು  ಭಕ್ತಿಭಾವದಿಂದ ಮತ್ತು ದೇವಿಯ ಆಶೀರ್ವಾದಕ್ಕಾಗಿ  ಈ ದೇಣಿಗೆಯನ್ನು ನೀಡಿದರು. ಮಹಿಳೆಯರು “ಈ ಹಣ ನಮ್ಮ ಮನೆಗೆ ಸರ್ಕಾರ ನೀಡಿದ ನೆರವು, ಅದರಲ್ಲಿ ಒಂದು ತಿಂಗಳ ನೆರವನ್ನು ದೇವಿಗೆ ಅರ್ಪಿಸುತ್ತೇವೆ” ಎಂದು ಹೇಳಿದ್ದಾರೆ

ತಿಮ್ಮಾಪುರ ಗ್ರಾಮದ ಮಹಿಳೆಯರು  ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೊಡುಗೆ ನೀಡಿ, “ನಾವು ಒಂದಾದರೆ ಅಸಾಧ್ಯವೆಂಬುದೇ ಇಲ್ಲ” ಎಂಬ ಸಂದೇಶವನ್ನು ಘೋಷಿಸಿದ್ದಾರೆ.
ಸಾಮಾನ್ಯವಾಗಿ “ಏಕತೆ” ಎಂಬ ಪದವನ್ನು ನಾವು ಕೇಳುತ್ತೇವೆ. ಆದರೆ ಅದನ್ನು ಕೃತ್ಯದಲ್ಲಿ ತೋರಿಸಿದರೆ ಅದು ಇತಿಹಾಸವಾಗುತ್ತದೆ. ಇಂತಹ ಇತಿಹಾಸವನ್ನು ನಿರ್ಮಿಸಿರುವುದು  ತಿಮ್ಮಾಪುರದ ಹೆಮ್ಮೆಯ ಮಹಿಳೆಯರು ಅನ್ನಬಹುದು.

  • -ಪ್ರಿಯಾ

COMMENTS

Login with Gmail to comment

ಇನ್ನಷ್ಟು ಸುದ್ದಿ

ಸಾರ್ವಜನಿಕ ಸ್ಥಳದಲ್ಲಿ ಕೈಕೈ ಮಿಲಾಯಿಸಿ ಜಗಳ ಮಾಡಿದ್ರೇ ಹುಷಾರ್…!
ಪಕ್ಷದಿಂದ ಪಕ್ಕಕ್ಕೆ? ರಾಘವ್ ಚಡ್ಡಾ ಹಿಂದೆ ಏನಿದೆ ದೊಡ್ಡ ರಾಜಕೀಯ ಆಟ!”ಮೌನಗೊಳಿಸಿದರೂ ನಿಲ್ಲದ ಧ್ವನಿ – ರಾಘವ್ ಚಡ್ಡಾ!”
ಚಿಕ್ಕಸ್ವಾಮಿ-ದೊಡ್ಡಸ್ವಾಮಿ ಭಕ್ತರ ಮಿಲನ! ಕಾಶಿಮಠ ವಿವಾದಕ್ಕೆ ಸಂಯಮೇ೦ದ್ರ ಮದ್ದು
ಘರ್ ವಾಪ್ಸಿ ಯಾದ ಯೋಗೇಶ್ ಶೆಟ್ಟಿ ಜೆಪ್ಪು
ರಸ್ತೆಯ ವಿಚಾರಕ್ಕೆ ನೆರೆಹೊರೆಯರ ನಡುವೆ ಬಾರಿ ಗಲಾಟೆ !
ಘರ್ಷಣೆಗಳ ನಡುವೆಯೂ ಜನರ ಮತದ ಹಕ್ಕು ಅಚಲ…ಸಂಕ್ಷಿಪ್ತ ನೋಟ..
BRICS ನ ಡಿಜಿಟಲ್ ಕರೆನ್ಸಿ ವಿಶ್ವ ಆರ್ಥಿಕತೆಯನ್ನೇ ಬೆರಗಾಗಿಸುತ್ತಾ..?
ರಾಜ್ಯಸಭೆಗೆ ಬಿಜೆಪಿಯಿಂದ 9 ಜನರ ಪಟ್ಟಿ ಬಿಡುಗಡೆ
ವಿಶ್ವಸಂಸ್ಥೆಗೆ ಜೀವ ಬಂತು ನೋಡಿ…
ನ್ಯಾಯಾಂಗಕ್ಕೆ ಕಳಂಕ ತರುವುದನ್ನು ನೋಡಿಯೂ ಕೈಕಟ್ಟಿ ಕೂರಲಾಗದು
ಸಂಕಷ್ಟದಲ್ಲಿರುವ ರಾಜ್ಯದ ಜನತೆಗೆ ಬರೆ ಹಾಕಿದ ರಾಜ್ಯ ಸರ್ಕಾರ!
ಜಸ್ಟ್ one click ನಲ್ಲೇ ಎಲ್ಲಾ ಸರ್ಟಿಫಿಕೇಟ್…!2026–27ರಿಂದ ಅಂಕಪಟ್ಟಿ ಹಾರ್ಡ್ ಕಾಪಿ ಇಲ್ಲ..
ಸಾಮಾಜಿಕ‌ ಕಾರ್ಯಕರ್ತರಿಗೆ ಹಾಗೂ ನಗರ ಸಭೆ ಪೌರಯುಕ್ತರಿಗೆ ಬಹಿರಂಗ ಸವಾಲು.ಶ್ರೀಮಂತರ ಅಕ್ರಮಗಳ ಬಗ್ಗೆ ಮೌನವೇಕೆ.‌‌?
ಎಲ್ಲೆಡೆ LPG ಗ್ಯಾಸ್ ಸಿಲಿಂಡರ್ ಸಂಕಷ್ಟ: ಇದು ಜೀವನೋಪಾಯದ ಪ್ರಶ್ನೆ… ತಕ್ಷಣ ಸಮರ್ಪಕ ಕ್ರಮ ಸರ್ಕಾರದ ಹೊಣೆ.
ರಾಪಿಡೊ ಚಾಲಕನ ಖಾತೆಯಲ್ಲಿ 300 ಕೋಟಿ ರೂ. ವಹಿವಾಟು! ಶಾಕ್ ಅದ ED
ಸರ್ಕಾರಿ ಸ್ವಾಮ್ಯದ ಬೇಲಿ ಕಂಬ ಕಿತ್ತಾಕಲು DYFI ಕುಮ್ಮಕ್ಕು….!
60 ದಿನಗಳ ಸ್ಟಾಕ್ – ಭಾರತಕ್ಕೆ ಎಲ್‌ಪಿಜಿ ಚಿಂತೆ ಇಲ್ಲ!
ಏಪ್ರಿಲ್ 1, 2026ರಿಂದಲೇ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ
₹1270 ಕೋಟಿ ಕಾನ್ಟ್ರಾಕ್ಟ್ ಹಗರಣ -CM ಖಾಂಡು ಕುಟುಂಬ ವಿಚಾರಣೆ-ಸುಪ್ರೀಂಕೋರ್ಟ್ ಸಿಬಿಐಗೆ ಆದೇಶ..
ತೈಲ ಟ್ಯಾಂಕರ್ ಮೇಲೆ ಇರಾನ್ ಆತ್ಮಹತ್ಯಾ ದೋಣಿ ದಾಳಿ – ಭಾರತೀಯ ನಾವಿಕ ಸಾವು
ವಿಶ್ವ ಸಂಸ್ಥೆಯು ಯಾವ ಪುರುಷಾರ್ಥಕ್ಕೆ? ಬಲವರ್ಧನೆಯ  ಅಗತ್ಯತೆ
ಪರಸ್ತ್ರೀ ಹುಂಡಿಗೆ  ಒಂದುವರೆ ಕೋಟಿ ಅಪಾರ್ಟ್ಮೆಂಟ್, ಮಾಜಿ ಶಾಸಕನ ರಂಗಿನಾಟ 
ತಪ್ಪೊಪ್ಪಿಕೊಂಡ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಆರೋಪಿ ಶಾರೀಕ್…!ಶಿಕ್ಷೆ ಏನು?
ಕಾಂಗ್ರೆಸ್ ದೇಶದ ಹಿತಾಸಕ್ತಿಯ ವಿರುದ್ಧ ನಡೆದುಕೊಳ್ಳುತ್ತಿದೆ- ಪ್ರಧಾನಿ ಮೋದಿ ಆರೋಪ
ಅಸ್ಸಾಂನಲ್ಲಿ ಮತದಾನದ ಹಿನ್ನೆಲೆ ಹಿಂಸಾಚಾರ: 30ಕ್ಕೂ ಹೆಚ್ಚು ಮಂದಿ ಗಾಯ, 7 ಜನರ ಬಂಧನ
ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆಯ ಪೋಸ್ಟ್ ಗಳನ್ನು ಹಾಕಿದ ಆರೋಪಿಯ ಬಂಧನ
ಉದ್ಯಮಿ ಧೀರಜ್ ಜೈನ್ ಗಪ್ ಚುಪ್ಪಾಗಿ ನಡೆಸಿದ ಮಾನವೀಯ ನಡೆಗೆ ಸಾಕ್ಷಿ ನೋಡಿ
ಶಿಕ್ಷಣದ ಹೆಸರಿನಲ್ಲಿ ಡ್ರಗ್ ವ್ಯವಹಾರ! ಬೆಚ್ಚಿಬಿದ್ದ ಮಂಗಳೂರು…
ಮನೆಗಣತಿ ಮಂಗಳೂರು ಮಹಾನಗರ ಪಾಲಿಕೆ-ಸ್ಪೀಕರ್ ಯು ಟಿ ಖಾದರ್ ಚಾಲನೆ
ಹೈಕೋರ್ಟ್ ತೀರ್ಪಿನಿಂದ ದಕ್ಷಿಣ ಕನ್ನಡ ಇ-ರಿಕ್ಷಾ ಚಾಲಕರಿಗೆ favour