📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಪರಸ್ತ್ರೀ ಹುಂಡಿಗೆ  ಒಂದುವರೆ ಕೋಟಿ ಅಪಾರ್ಟ್ಮೆಂಟ್, ಮಾಜಿ ಶಾಸಕನ ರಂಗಿನಾಟ 

ಇದು ಇಂದು ನಿನ್ನಯ ಕಥೆಯಲ್ಲ, ಬಹಳ ಸಮಯದಿಂದ ನಡೆದುಕೊಂಡು ಬಂದಂತಹ ಇಲ್ಲಿಗಲ್ ರಿಲೇಷನ್ಶಿಪ್ ಕಥೆ. ಇಂತಹದೊಂದು ಅನಾಹುತಕಾರಿ ಕೆಲಸವನ್ನು ಮಾಜಿ ಶಾಸಕನೊಬ್ಬ ಮಾಡಿ ಸುದ್ದಿಯಾಗುತ್ತಿದ್ದಾನೆ. ಆತ ಮಾಡಿದ ಘನಂದಾರಿ ಕೆಲಸದಿಂದ ಒಬ್ಬ ಸಾಮಾನ್ಯ ಗಂಡಸು , ಮಾನಸಿಕ ವೇದನೆಗೆ ತುತ್ತಾಗಿದ್ದಾನೆ. ಅವನ ವೇದನೆಗೆ ನ್ಯಾಯ ಕೊಡಬೇಕಾದಂತಹ ಅನಿವಾರ್ಯತೆಗೆ ಸಿಲುಕಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ

ಮಂಡ್ಯದ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಿಶಾ ಸಭೆ ನಡೆಯುತ್ತಿತ್ತು. ಆ ಸಭೆಯಲ್ಲಿ ಕುದ್ದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಅಚಾನಕ್ಕಾಗಿ ಬಂದಂತಹ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಪ್ರಸನ್ನ ಎಂಬ ಯುವಕ, ಎಚ್ ಡಿ ಕುಮಾರಸ್ವಾಮಿ ಅವರಲ್ಲಿ ಕಣ್ಣೀರನ ಮನವಿ ಒಂದನ್ನು ನೀಡುತ್ತಾರೆ. ನನಗೆ ನ್ಯಾಯ ಕೊಡಿ ಅಂತ ಅತ್ತು ಕರೆದು ಬೇಡಿಕೊಳ್ಳುತ್ತಾರೆ. ಯಾರಿಗೂ ಶಿಕ್ಷೆ ಬೇಡ, ನನಗೆ ಮುಕ್ತಿ ಕೊಡಿಸಿ ಅಂತ ಬೇಡಿಕೊಳ್ಳುತ್ತಾರೆ. ಅಷ್ಟಕ್ಕೂ ಆಗಿದ್ದು ಏನು?

ಜೆಡಿಎಸ್ ಪಕ್ಷದ ಮಾಜಿ ಶಾಸಕ ಡಾಕ್ಟರ್ ಕೆ ಅನ್ನದಾನಿ ಈ ಒಂದು ಪ್ರಕರಣದಲ್ಲಿ ಪ್ರಮುಖವಾಗಿ ಗೋಚರಿಸುತ್ತಾರೆ. ಪ್ರಸನ್ನ ಎಂಬ ಯುವಕನ ಹೆಂಡತಿಯನ್ನು ಡಾಕ್ಟರ್ ಕೆ ಅನ್ನದಾನಿ ತನ್ನ ಕಾಮದಾಟಕ್ಕೆ ಬಳಸಿಕೊಳ್ಳುತ್ತಾರೆ ಅನ್ನುವುದು ಆ ಹೆಂಗಸಿನ ಸ್ವಂತ ಗಂಡ ಪ್ರಸನ್ನನ ಗಂಭೀರ ಆರೋಪ . ಶಾಸಕರು ತನ್ನ ಹೆಂಡತಿಯನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ, ಬಹುತೇಕವಾಗಿ ಜೊತೆಗೂ ಇದ್ದಾರೆ ಅನ್ನುವುದು ಸ್ವತಃ ಆ ಹೆಂಗಸಿನ ಗಂಡನ ಅಧಿಕೃತ ಸ್ಟೇಟ್ಮೆಂಟ್. ಒಂದು ಮೂಲದ ಪ್ರಕಾರ ಆ ಹೆಂಗಸು ನಡತೆಗಟ್ಟು ಬಹಳ ಸಮಯವೇ ಆಗಿ ಹೋಯಿತು. ಅವಳ ಈ ನಡತೆಗೆಟ್ಟ ಜೀವನಕ್ಕೆ ಸ್ವತಹ ಅವಳ ತವರು ಮನೆಯವರು ಸಹಕಾರ ಕೊಡುತ್ತಿದ್ದಾರೆ ಎನ್ನುವುದು ಆ ಹೆಂಗಸಿನ ಸ್ವಂತ ಪತಿಯ ಆರೋಪವೂ ಹೌದು 

ಮೈಸೂರಿನಲ್ಲಿ ಸುಮಾರು ಒಂದುವರೆ ಕೋಟಿ ಮೌಲ್ಯದ ಅಪಾರ್ಟ್ಮೆಂಟ್ ಒಂದರಲ್ಲಿ ಈ ಹೆಂಗಸನ್ನು ಇಟ್ಟುಕೊಂಡಿದ್ದಾನೆ  ಈ ಮಾಜಿ ಶಾಸಕ ಅನ್ನುವುದು ನೊಂದು ಬೆಂದು ಹೋಗಿರುವಂತಹ ಪ್ರಸನ್ನ ಆರೋಪ. ಅದಕ್ಕೆ ಬೇಕಾದಂತಹ ಒಂದಷ್ಟು ಸಾಕ್ಷಿಗಳನ್ನು ಜೊತೆಗಿಟ್ಟುಕೊಂಡಿದ್ದಾನೆ. ಪೊಲೀಸರು ತನ್ನ ಮಾತನ್ನು ಕೇಳುತ್ತಿಲ್ಲ, ತನ್ನ ದೂರನ್ನು ತೆಗೆದುಕೊಳ್ಳುತ್ತಿಲ್ಲ ಎನ್ನುವುದು ಪ್ರಸನ್ನನ ಗಂಭೀರ ದೂರು . ನನಗೆ ಆ ಹೆಂಗಸಿನ ಮೇಲೆ ಕ್ರಮವಾಗಬೇಕು, ಮಾಜಿ ಶಾಸಕರನ್ನು ಬಂಧಿಸಬೇಕು ಅನ್ನುವುದು ಉದ್ದೇಶವಲ್ಲ, ನನಗೆ ಆ ಹೆಂಗಸಿನಿಂದ ಮುಕ್ತಿ ಕೊಡಿಸಿ. ಕಣ್ಣೆದುರೇ ಹೆಂಡತಿಯು ಇನ್ನೊಬ್ಬರ ಸಹವಾಸದಲ್ಲಿರುವುದನ್ನು ನೋಡಿಯೂ ಬದುಕಬೇಕಾದಂತಹ ದುಸ್ಥಿತಿ ನನ್ನದಾಗಿದೆ. ವಿಚ್ಛೇದನ ಕೊಡು ಅಂದರೆ 30 ಲಕ್ಷ ಕೊಡಲು ಹೇಳುತ್ತಾಳೆ. ನಾನು ಅಷ್ಟು ದುಡ್ಡನ್ನು ಎಲ್ಲಿಂದ ತರಲಿ ಅನ್ನೋದು ಆ ಬಡಪ್ರಸನ್ನನ ಗೋಳು. ನಾನು ಅವರಿಂದ ಏನನ್ನು ಬಯಸುತ್ತಿಲ್ಲ. ನನಗೆ ವಿಚ್ಛೇದನ ಕೊಟ್ಟು ಸಂಬಂಧದಿಂದ ಮುಕ್ತವಾದರೆ ಸಾಕು ಅನ್ನುವುದಷ್ಟೇ ಪ್ರಸನ್ನನ ಮನವಿಯಾಗಿದೆ. ಇದೇ ಮನವಿಯನ್ನು ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರಲ್ಲಿ ಮೊನ್ನೆ ಮಾಡಿರುವಂತದ್ದು. ಆ ಮನವಿಯನ್ನು ಸ್ವೀಕರಿಸಿದ ಹೆಚ್ ಡಿ ಕುಮಾರಸ್ವಾಮಿ, ನೊಂದು ಬೆಂದಿರುವ ಪ್ರಸನ್ನನನ್ನು ಸಂತೈಸಿ , ನ್ಯಾಯ ಕೊಡಿಸುವ ಭರವಸೆಯನ್ನು ನೀಡಿದ್ದಾರೆ. ಇಲ್ಲಿಗಲ್ ರಿಲೇಶನ್ಶಿಪ್ಗಿಂತ ಅವರಿಬ್ಬರೂ ಒಟ್ಟಾಗಿಯೇ ಇರಲಿ, ನನಗೆ ವಿಚ್ಛೇದನ ಕೊಟ್ಟು ಅವರ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳಲಿ ಅನ್ನೋದು ಪ್ರಸನ್ನನ ಆಗ್ರಹವಾಗಿದೆ. ಅದು ಸರಿಯೂ ಹೌದು. ಒಬ್ಬ ಮಾಜಿ ಶಾಸಕ ತನ್ನ ಪ್ರೇಯಸಿಯನ್ನು  ಜೊತೆಗಿಟ್ಟುಕೊಳ್ಳಬೇಕೆಂಬ ಬಯಕೆ ಇದ್ದಲ್ಲಿ ಅದರಿಂದ ಇನ್ನೊಬ್ಬ ವ್ಯಕ್ತಿಗೆ ಚುತಿ ಬರದ ಹಾಗೆ ನೋಡಿಕೊಳ್ಳಬೇಕು. ಆ ಹೆಂಗಸಿಗೆ ಮಾನವೂ ಇಲ್ಲ ಮರ್ಯಾದೆಯೂ ಇಲ್ಲ.  ಹಾಳಾಗಿ ಹೋಗಲಿ. ಮಾಜಿ ಶಾಸಕರಿಗಾದರೂ ಬುದ್ಧಿ ಬೇಡ್ವಾ? ಹೇಳಿಕೊಳ್ಳಲು ಪ್ರಸನ್ನ ಗಂಡ, ಚಕ್ಕಂದ ಆಡಲಿಕ್ಕೆ ಮಾಜಿ ಶಾಸಕರು ಅನ್ನುವಂತಾಗಿದೆ ಈಗಿನ ಇವರ ಸಂಬಂಧ. ಇದು ಅಕ್ಷಮ್ಯವೂ ಹೌದು . ಪ್ರಸನ್ನ ಹೇಳಿದ್ದೆಲ್ಲವೂ ಸತ್ಯವಾದರೆ, ಮಾಜಿ ಶಾಸಕ ಹಾಗೂ ಆ ಹೇಂಗಸು ಇಬ್ಬರು ಕ್ರಿಮಿನಲ್ ಅಪರಾಧಿಗಳು ಆಗುತ್ತಾರೆ. ಇವರ ವೈಯಕ್ತಿಕ ಜೀವನ ಏನೇ ಇದ್ದರೂ ಅದರಿಂದ ಇನ್ನೊಬ್ಬರ ಮನಸ್ಸಿಗೆ ಘಾಸಿಯಾಗಬಾರದು ಅಷ್ಟೇ ಅನ್ನುತ್ತಿದ್ದಾರೆ ಮಂಡ್ಯದ ಸಾರ್ವಜನಿಕರು.

COMMENTS

Login with Gmail to comment

ಇನ್ನಷ್ಟು ಸುದ್ದಿ

ರಾಜಕೀಯ ಸುದ್ದಿ ಅಂದರೆ ಬೋರ್ ಅಂತ ಅನ್ನಿಸುವರಿಗೆ ಇದು ಒಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಎಪಿಸೋಡ್!!!
“ವೇತನಕ್ಕಾಗಿ ಹೋರಾಟದಿಂದ ಆರಂಭವಾದ ಪ್ರತಿಭಟನೆ… ನೋಯ್ಡಾ ರಸ್ತೆಗಳಲ್ಲಿ ಅರಾಜಕತೆ, ಬೆಂಕಿ, ಘರ್ಷಣೆ — ಈಗ ಸರ್ಕಾರವೇ ತನಿಖೆ ನಡೆಸುವಷ್ಟು ಗಂಭೀರ ಪರಿಸ್ಥಿತಿ!” 🔥🚨
ಶಿಕ್ಷಣದ ಹೆಸರಿನಲ್ಲಿ ಡ್ರಗ್ ವ್ಯವಹಾರ! ಬೆಚ್ಚಿಬಿದ್ದ ಮಂಗಳೂರು…
“ಅಪ್ರಾಪ್ತ ಅತ್ಯಾಚಾರ ಸಂತ್ರಸ್ತರಿಗೆ ಅಬಾರ್ಷನ್ ಮಾಡಲು ಆದ್ಯತೆ ,ಕಾನೂನು ತಿದ್ದುಪಡಿ”- ಸುಪ್ರೀಂ ಕೋರ್ಟ್
ಬರ್ಗಿ ಅಣೆಕಟ್ಟಿನಲ್ಲಿ ಭೀಕರ ದುರಂತ-ಕರುಳು ಹಿಂಡುವ ದೃಶ್ಯ ಅಮ್ಮ-ಮಗು ಅಪ್ಪಿಕೊಂಡೇ ಜಲಸಮಾದಿ ಸಂತೋಷದ ಪ್ರವಾಸದಿಂದ ಶೋಕದ ಸಾಗರಕ್ಕೆ
ಪ್ರೀತಿಸಿ ಓಡಿಹೋದ ಸೇಡಿನ ಬೆಂಕಿಗೆ ಬಲಿಯಾದ ನಿರ್ದೋಷಿ ಅಣ್ಣ..!
ತುಮಕೂರಿನಲ್ಲಿ ಬೆಚ್ಚಿಬೀಳಿಸುವ ತಂದೆ-ಮಗಳು ದುರಂತ
ಘೋರ ಭಾನುವಾರ, ಒಂದೇ ಕುಟುಂಬದ ಎಂಟು ಮಹಿಳೆಯರ ದುರ್ಮರಣ
BRICS ನ ಡಿಜಿಟಲ್ ಕರೆನ್ಸಿ ವಿಶ್ವ ಆರ್ಥಿಕತೆಯನ್ನೇ ಬೆರಗಾಗಿಸುತ್ತಾ..?
ಕೋವಿಡ್ ಶೀಲ್ಡ್ ಸೈಡ್ ಎಫೆಕ್ಟ್ ಒಪ್ಪಿಕೊಂಡ ಕಂಪನಿ
ಗೃಹಲಕ್ಷ್ಮಿ ಹಣ ಉಳಿಸಿ ದೇವಿಗೆ ₹17 ಲಕ್ಷ ದೇಣಿಗೆ!
ಮಂಗಳೂರು -ವೆನ್ಲಾಕ್ ಮಾಸ್ಟರ್ ಪ್ಲ್ಯಾನ್…!
Anticipatory Bail ಗೆ ಹೊಸ ರಕ್ಷಣೆ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಆಕ್ಷೇಪ
ದವಳ ಕೋ- ಆಪರೇಟಿವ್ನ ಈ ಸಾಲಿನ ವ್ಯವಹಾರ ಎರಡುನೂರು ಕೋಟಿ
ಜೈನ ಸನ್ಯಾಸ ದೀಕ್ಷೆ ನಿಯಮಗಳು ಏನು ಗೊತ್ತಾ?
ಕರ್ನಾಟಕದಲ್ಲಿ ಅತಿ ಕನಿಷ್ಠ ಮಟ್ಟಕ್ಕೆ ಕುಸಿದ ‘ಟೀನ್ ಪ್ರೆಗ್ನೆನ್ಸಿ’! 70% ಕೇಸ್‌ಗಳು ಮಾಯವಾಗಿದ್ದು ಹೇಗೆ?
“ಬರ್ಕಾಸ್ತು ಘಟಕಕ್ಕೆ ‘ಬೋಗಸ್ ನಾಯಕತ್ವ’ – ಕರವೇ ಮಹಿಳಾ ಘಟಕದಲ್ಲಿ ಭಿನ್ನಮತ ಸ್ಫೋಟ!”
ಪರಿಸರ ನಾಶಕ್ಕಾಗಿ ಸುಳ್ಳು ಸರ್ಟಿಫಿಕೇಟ್ ರೆಡಿಮಾಡಿಕೊಂಡು ಒಂದು ಊರನ್ನೇ ಭಯದಲ್ಲಿರಿಸಿದ ಉಡುಪಿ ಜಿಲ್ಲಾ ಆಡಳಿತ
“ಮಂಗಳೂರಲ್ಲಿ ಡ್ರೈ ಡೇ ಘೋಷಣೆ -ಎರಡು ದಿನ ಬಾರ್‌ಗಳಿಗೆ ಲಾಕ್ ..!” ದಕ್ಷಿಣ ಕನ್ನಡದಲ್ಲಿ ಕಟ್ಟುನಿಟ್ಟಿನ ಆದೇಶ
ಸುಳ್ಯ:  ಕರ್ತವ್ಯದಲ್ಲಿದ್ದ ಉಪನ್ಯಾಸಕ ಕುಸಿದು ಬಿದ್ದು ಸಾವು
ಮುಳುಗುತ್ತಿರುವ ಕಾಂಗ್ರೆಸ್ಸಿಗೆ ಇನ್ನೂ ಬುದ್ಧಿ ಬಂದಂತಿಲ್ಲ… ಡಿಜೆಪಿ ರಾಮಚಂದ್ರರಾವ್  ಅಮಾನತ್ ಆದೇಶ ಹಿಂಪಡೆದ  ಸರ್ಕಾರ
8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಕ್ರಿಕೆಟ್ pad gloves ಒಳಗೆ ಕೋಟಿ ಕೋಟಿ ಕೊಕೇನ್!
ಪೂಜೆಗಾಗಿ ತೆರಳಿದ ಅರ್ಚಕರ ಶವ ನಾಲೆಯಲ್ಲಿ ಪತ್ತೆ
ನೀರು ಪೋಲು ಬೇಡ….ಈಗಲೇ ಎಚ್ಚೆತ್ತುಕೊಳ್ಳಿ!ಇಂದು ನಿರ್ಲಕ್ಷ್ಯ,ನಾಳೆ ಜಲ ಸಂಕಷ್ಟದ ಎಚ್ಚರಿಕೆ…!
ED ₹2,178 ಕೋಟಿ ಆಸ್ತಿ ಜಪ್ತಿ ನಿರವ್ ಮೋದಿ–ವಿಜಯ್ ಮಲ್ಯ ಸೇರಿ 21 ಜನರ ಆರ್ಥಿಕ ಅಪರಾಧಿಗಳ ವಿರುದ್ಧ ದೊಡ್ಡ ಮಟ್ಟದ ಕ್ರಮ
ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಕಮೆಂಟ್ ಗಳನ್ನು ಹಾಕಿದ ಆರೋಪಿಯ ಬಂಧನ
ಕನಸು ಹೊತ್ತ ಯುವತಿಯರ ಮೇಲೆ ಕಾಮುಕ ಸಮಾಜದ ಕಣ್ಣು! ಮೌನವಾಗಿರುವ ಸಾವಿರಾರು ಕಥೆಗಳಲ್ಲೊಂದು ಬೆಂಗಳೂರು ಘಟನೆ!
ಕಾಂಗ್ರೆಸ್ ದೇಶದ ಹಿತಾಸಕ್ತಿಯ ವಿರುದ್ಧ ನಡೆದುಕೊಳ್ಳುತ್ತಿದೆ- ಪ್ರಧಾನಿ ಮೋದಿ ಆರೋಪ
AYS TROPHY–2026 ಯಶಸ್ವಿಯಾಗಿಸಲು ನಿಮ್ಮ ಉಪಸ್ಥಿತಿ ಅಗತ್ಯ.