📍 Karavali Maruta
  • LOGIN
  • BREAKING
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ ದಯಾಮರಣ ಕೇಳಿದ್ದ ತುಮಕೂರು ರಾಬಿಯಾ ಇನ್ನಿಲ್ಲ …!ಪರಮೇಶ್ವರ್ ಮುಂದೆ ಕಣ್ಣೀರಿಟ್ಟಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ವಿಷಸೇವಿಸಿ ಕೊನೆಯುಸಿರು…‘ಮನೆ’ ಸಿಕ್ಕರೂ ಬದುಕು ಉಳಿಯಲಿಲ್ಲ! ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್! ಮಹಿಳಾ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ ವಾಜಪೇಯಿ ಸರ್ಕಾರದ  ಕನಸಿನ ಯೋಜನೆ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಸಹಿ ಸಂಗ್ರಹ ಅಭಿಯಾನ
    ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಜಬಲ್ಪುರ್ ದುರಂತಕ್ಕೆ ಹೊಣೆ ಯಾರು? ಕ್ರಮ ಏನು?

    ಪ್ರವಾಸೋದ್ಯಮ ಇಲಾಖೆಗೆ ಜವಾಬ್ದಾರಿ ಅಂತ ಏನಾದರೂ ಇದೆಯಾ? ಅಥವಾ ಯಾವುದೋ ವ್ಯಕ್ತಿಗಳಿಗೆ ಅಥವಾ ಕಂಪನಿಗೆ  ಟೆಂಡರ್ ನೀಡಿ ಕೈ ತೊಳೆದುಕೊಳ್ಳುವುದಕ್ಕಷ್ಟೇ ಅವರ ಕಾರ್ಯವು ಸೀಮಿತವಾ? ಹವಾಮಾನ ಇಲಾಖೆಯು ಮುನ್ಸೂಚನೆಯನ್ನು ಮೊದಲೇ ನೀಡಿತ್ತೋ ಅಥವಾ ಇಲ್ಲವೋ? ಇಲಾಖೆ ಮುನ್ಸೂಚನೆ ನೀಡಿದ್ದರೆ, ಅದರ ಪಾಲನೆ ಮಾಡಬೇಕಾದ್ದು ಯಾರು? ಸ್ಥಳೀಯ ಆಡಳಿತವು ಇಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವೇ?

    ಮಧ್ಯ ಪ್ರದೇಶದ, ಜಬಲ್ಪುರ್ ನರ್ಮದಾ ನದಿಯಲ್ಲಿನ ದುರಂತಕ್ಕೆ ಇಲ್ಲಿಯವರೆಗೆ 13ಕ್ಕೂ ಹೆಚ್ಚು ಜನರು  ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ಮಹಿಳೆಯೊಬ್ಬರು, ಮಗುವನ್ನು ಎದೆಗೆವಚಿ ಹಿಡಿದು ಸಾವನ್ನಪ್ಪಿರುವ ಫೋಟೋ ವೈರಲ್ ಆಗಿತ್ತು. ಈಗಲೂ ಆ ಫೋಟೋ ಮನ ಕಲಕುವಂತಿದೆ. ಅದು ತಿದ್ದಿದ ಫೋಟೋ ಇರಲಿ, ಒರಿಜಿನಲ್ ಫೋಟೋನೇ ಇರಲಿ, ಆ ವಿಷಯ ಅನವಶ್ಯಕ ಈಗ. ಯಾಕೆಂದರೆ ತಾಯಿ ಮಗು ಇಬ್ಬರೂ ಮೃತಪಟ್ಟಿದ್ದಾರೆ.

    ದುರ್ಘಟನೆ ನಡೆಯುವುದು ಇದೇ ಮೊದಲಿನಲ್ಲ. ಸಾಕಷ್ಟು ದುರ್ಘಟನೆಗಳು ನಡೆದಿದೆ. ಮುಂದೆಯೂ ನಡೆಯಬಹುದು. ಆದರೆ ಆ ದುರ್ಘಟನೆಗಳಿಗೆ ಕಾರಣ ಮತ್ತು ನಿಷ್ಕಾಳಜಿ ಇದೆ ಅಂತ ಗೊತ್ತಾದರೆ ಅದನ್ನು ಕ್ಷಮಿಸಲಾಗದು. ಈಗ ಮಧ್ಯ ಪ್ರದೇಶದ ಜಬಲ್ಪುರ್ ದುರ್ಘಟನೆಗೆ ಸಂಬಂಧಿಸಿದಂತೆ, ವ್ಯವಸ್ಥೆಯ ತಪ್ಪುಗಳ ಬಗ್ಗೆಯೂ ಬಹಿರಂಗ ತನಿಖೆಯಾಗಬೇಕು. ಯಾವುದೋ ಒಂದು ಬೋಟ್ ಮಾಲೀಕ ಅಥವಾ ನಾವಿಕನ ಮೇಲೆ ಕ್ರಮ ಕೈಗೊಂಡು ತಿಪ್ಪೆ ಸಾರಿಸುವ ಕೆಲಸ ಆಗಬಾರದು. ಬೋಟ್ ಮಾಲೀಕರು ಅಥವಾ ನಾವಿಕರು ತಮ್ಮ ಕೆಲಸವನ್ನು ಕಮರ್ಷಿಯಲ್ ಆಗಿ ಮಾಡುತ್ತಿರುತ್ತಾರೆ. ಅದರಲ್ಲಿ ತಪ್ಪು ಇಲ್ಲ. ಆದರೆ ಸಂಬಂಧಪಟ್ಟ ಇಲಾಖೆಯ ವತಿಯಿಂದ, ಅಲ್ಲಿ ನಿರ್ದೇಶನವು ಆಗಬೇಕಿತ್ತು ತಾನೆ? ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಿರ್ದೇಶಸಿದಂತೆಯೇ ಬೋಟ್ ಮಾಲೀಕರು, ನಾವಿಕರು ನಡೆದುಕೊಳ್ಳಬೇಕು. ಇಲಾಖೆಯ ಅಧಿಕಾರಿಗಳೇ ಅಲ್ಲಿರದಿದ್ದರೆ ಬೋಟ್ ಮಾಲೀಕರು ಅಥವಾ ನಾವಿಕರು ತಮಗೆ ಬೇಕಾದ ಹಾಗೆ ನಡೆದುಕೊಳ್ಳುತ್ತಾರೆ. ಬಹುಶಹ ಅಲ್ಲಿ ಆದದ್ದು ಅದೇ ಇರಬೇಕು.

    ಹಾಗೆಯೇ, ಹವಾಮಾನ ವೈಪರಿತ್ಯದಿಂದಾಗಿ, ಇದ್ದಕ್ಕಿದ್ದಂತೆ ಬಿರುಬೀಸಾದ ಗಾಳಿ ಬೀಸಲು ಪ್ರಾರಂಭಿಸಿದ್ದರಿಂದ, ಬೋಟ್ ಮಗುಚಿ ಬಿತ್ತು ಅನ್ನೋದು ಸರಿಯೇ. ಆದರೆ ಹವಾಮಾನ ಇಲಾಖೆಗೆ ಇದರ ಅರಿವು ಇರಬೇಕಿತ್ತು ತಾನೆ? ಇಲಾಖೆಯು ತತಕ್ಷಣವೇ ಎಲ್ಲಾ ಕಡೆಯೂ ಮೆಸೇಜನ್ನು ಕಳುಹಿಸಿರಬೇಕಿತ್ತು. ಆ ಮೆಸೇಜನ್ನು ಆ ಇಲಾಖೆಯು ಕಳಿಸಿದೀಯೋ ಇಲ್ಲವೋ ಅದು  ಮುಖ್ಯ ಅನ್ನಿಸಿಕೊಳ್ಳುತ್ತದೆ. ಇಲಾಖೆಯ ವೈಪರಿತ್ಯದ ಮೆಸೇಜನ್ನು ಕಳುಹಿಸಿಲ್ಲ ಎಂದರೆ, ಹವಾಮಾನ ಇಲಾಖೆಯೇ ಈ ಎಲ್ಲಾ ಸಾವುಗಳಿಗೆ ಹೊಣೆ ಕೊರಬೇಕು.  ಹವಾಮಾನ ಇಲಾಖೆಯು ವೈಪರಿತ್ಯದ ಮೆಸೇಜನ್ನು ಕಳುಹಿಸಿದೆ ಅಂತಾದರೆ, ಆ ಮೆಸೇಜ್ ಯಾರಿಗೆ ಕಳುಹಿಸಿದ್ದು ಅನ್ನುವುದು ಇಲ್ಲಿ ಇಂಪಾರ್ಟೆಂಟ್ ಆಗುತ್ತದೆ.

    ನೋ ಡೌಟ್, ಇದು ಪ್ರವಾಸೋದ್ಯಮ ಇಲಾಖೆಗೆ ಸಂಬಂಧಪಟ್ಟ ಮ್ಯಾಟರ್. ಅವರ ನಿಶಾರೆಯಲ್ಲಿ ಪ್ರವಾಸೋದ್ಯಮದ, ಇಂತಹ ಚಟುವಟಿಕೆಗಳು ನಡೆಯುತ್ತವೆ. ಇಲಾಖೆಯ ಪ್ರತಿನಿಧಿಗಳು ಇಂತಹ ಸ್ಥಳಗಳಲ್ಲಿ ಖುದ್ದಾಗಿ ಇರಬೇಕು, ಹಾಗೂ ಅವರು ಬೋಟ್ ಮಾಲಕರಿಗೆ ಅಥವಾ ನಾವಿಕರಿಗೆ, ಸಿಬ್ಬಂದಿಗಳಿಗೆ ಗೈಡ್ ಮಾಡಬೇಕು. ಹವಾಮಾನ ಇಲಾಖೆಯಿಂದ ಬರುವ ಮೆಸೇಜನ್ನು ಆಧರಿಸಿ ತತಕ್ಷಣದ ನಿರ್ಧಾರ ತೆಗೆದುಕೊಳ್ಳಬೇಕು. ಆ ಕೆಲಸ ಮಾಡಲು ಅಲ್ಲಿ ಅಧಿಕಾರಿಗಳನ್ನು ನೇಮಿಸಿದ್ದರಾ?

    ಜನರು ಈ ದುರ್ಘಟನೆಯ ವಿಡಿಯೋ ಫೋಟೋಗಳನ್ನು ನೋಡಿ ಮನಸ್ಸು ಕೆಡಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಜನರು ಸಾಮಾನ್ಯವಾಗಿ , ಅಲ್ಲಿನ ಬೋಟ್ ಮಾಲೀಕ ಹಾಗೂ ನಾವಿಕರ ಬಗ್ಗೆ ಮಾತನಾಡುತ್ತಾರೆ ಎನ್ನುವುದು ತಿಳಿಯದ ವಿಚಾರವೇನಲ್ಲ. ಇದೇ ಕಾರಣಕ್ಕೆ ಅನೇಕ ಸತ್ಯಗಳು ಅಲ್ಲಿಯೇ ಹೂತು ಹೋಗುತ್ತವೆ. ತಪ್ಪಿತಸ್ಥರು ಬಚವಾಗುತ್ತಾರೆ ಕೂಡ. ಅದಕ್ಕೆ ಕಾರಣ, ವಿಷಯದ ಆಳಕ್ಕೆ ಹೋಗದೆ ಇರುವಂತದ್ದೇ ಆಗಿದೆ. ಮಧ್ಯಪ್ರದೇಶದ ಸರ್ಕಾರ, ಈ ವಿಚಾರದಲ್ಲಿ ಆಳವಾದ ತನಿಖೆಗೆ ಇಳಿಯಲೇಬೇಕು. ಹವಾಮಾನ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಇವೆರಡನ್ನೂ ಅಪರಾಧಿ ಸ್ಥಾನದಲ್ಲಿ ಕೂರಿಸಲೇಬೇಕಾಗುತ್ತದೆ. ಹಾಗೆಯೇ ಅವರು ತನಿಖೆಯನ್ನೂ ಎದುರಿಸಬೇಕು. ಅವರು ತನಿಖೆ ಎದುರಿಸಲು ರಾಜಕಾರಣಿಗಳು ಮತ್ತು ಸರ್ಕಾರ ಬಿಡುತ್ತದ?

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    “ಫುಟ್‌ಪಾತ್ ಯಾರದ್ದು? ಪಾದಚಾರಿಗಳ ಹಕ್ಕೋ, ಹೊಟ್ಟೆಪಾಡಿನ ಹೋರಾಟವೋ?”
    ಹನಿಟ್ರ್ಯಾಪ್ ಕ್ವೀನ್ ಜೀನತ್ ಇಬ್ರಾಹಿಂ ಗೆ ನ್ಯಾಯಾಂಗ ಬಂಧನ- ಟ್ರ್ಯಾಪ್ ನಲ್ಲಿ ಹೊಸ ಹೊಸ ಹೆಸರುಗಳು !!!?
    ಬುಡಕಟ್ಟು ಹೆಣ್ಣುಮಕ್ಕಳ ಬದುಕು ಬದಲಿಸಿದ ಗಾರ್ಗಿ ಜೈನ್ ‘ಮೇಡಂ ಕಲೆಕ್ಟರ್’ನಿಂದ ‘ಕಲೆಕ್ಟರ್ ದೀದಿ’ವರೆಗೆ…
    ಗೃಹಸಚಿವ ಪ್ರಿಯಾಂಕ್ ಖರ್ಗೆಗೆ ಅವಹೇಳನ ಜಾತಿ ನಿಂದನೆ  ಆರೋಪದಲ್ಲಿ ಕಾರ್ಕಳ ವ್ಯಕ್ತಿಯ ಬಂಧನ !
    “ಕೃಷ್ಣ ಜೆ. ರಾವ್‌ ಡಿಎನ್ಎ ಸತ್ಯ ಬಯಲು — ಮಗುವಿಗೆ ನ್ಯಾಯ ಬೇಕು ಎಂದ ಹೈಕೋರ್ಟ್!”
    ಅಂಡಮಾನ್ ಸಮುದ್ರದಲ್ಲಿ ಸಿಕ್ಕಿದ ಖಜಾನೆ! ಭಾರತದ ಇಂಧನ ಭವಿಷ್ಯ ಬದಲಾಗುತ್ತಿದೆಯೇ?
     ಡೊನಾಲ್ಡ್ ಟ್ರಂಪ್ ಟೆರರ್ ನಡೆ      ವಿಶ್ವದ ಆರ್ಥಿಕತೆ ಪಾತಾಳದ ಕೆಡೆ
    ವಿಮಾನದಲ್ಲಿ ಭಾರೀ ಟರ್ಬುಲೆನ್ಸ್:300 ಅಡಿ ಹಠಾತ್ ಕುಸಿದ ಏರ್ ಇಂಡಿಯಾ ವಿಮಾನ..!ಪ್ರಯಾಣಿಕರು-ಸಿಬ್ಬಂದಿಗೆ ಗಾಯ..
    ಕಮ್ ಬ್ಯಾಕ್ ಮಾಡಿದ ಮುಂಬೈ ಇಂಡಿಯನ್, ಕ್ಯಾಪ್ಟನ್ ಪ್ರೇರಣೆಗೆ ವರ್ಮಾ ಬ್ಯಾಟಿನಿಂದ  ಮೊದಲ ಸೆಂಚುರಿ
    ಮೂಡಬಿದಿರೆ ಇನ್‌ಸ್ಪೆಕ್ಟರ್ ಪ್ರಕರಣಕ್ಕೆ ಟ್ವಿಸ್ಟ್: ಆರೋಪ ಮಾಡಿದ ಮಹಿಳೆಯ ವಿರುದ್ಧವೇ ಸಹೋದರಿಯ ಬಾಂಬ್!
    ಉದ್ಯಮಿ, ಕಾಲೇಜ್ topper,  ಕೋಟ್ಯದೀಶರೇ…ಕಠಿಣ ಜೈನ ಸನ್ಯಾಸದತ್ತ…!
    “ಮಂಗಳೂರಲ್ಲಿ ಡ್ರೈ ಡೇ ಘೋಷಣೆ -ಎರಡು ದಿನ ಬಾರ್‌ಗಳಿಗೆ ಲಾಕ್ ..!” ದಕ್ಷಿಣ ಕನ್ನಡದಲ್ಲಿ ಕಟ್ಟುನಿಟ್ಟಿನ ಆದೇಶ
    ಚಿಕ್ಕಸ್ವಾಮಿ-ದೊಡ್ಡಸ್ವಾಮಿ ಭಕ್ತರ ಮಿಲನ! ಕಾಶಿಮಠ ವಿವಾದಕ್ಕೆ ಸಂಯಮೇ೦ದ್ರ ಮದ್ದು
    ಬಿಡದಿ ಟೌನ್‌ಶಿಪ್‌ಗೆ ಮರುಜೀವ: ವಿಶ್ವದರ್ಜೆಯ ‘ಎಐ ಸಿಟಿ’ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ .. ಜನರನ್ನು ಉದ್ದೇಶಿಸಿ ಮಾತನಾಡಿದ ಸಿಎಂ
    ವಿಶ್ವಸಂಸ್ಥೆಗೆ ಜೀವ ಬಂತು ನೋಡಿ…
    ನಿಶ್ಚಿತಾರ್ಥ ಮಾಡಿಕೊಂಡು, ಫೈನಾನ್ಸಿಯಲ್ ವಂಚನೆ ದೂರು ದಾಖಲು
    ಅವಮಾನವೇ ಯಶಸ್ಸಿನ ಇಂಧನ: ಕೋಮಲ್ ಗನಾತ್ರಾ ಎಂಬ ಅದಮ್ಯ ಚೇತನ ಕೇವಲ 2 ವಾರಗಳ ಸಂಸಾರ, ನಂತರ ಜೀವಮಾನದ ಸಾಧನೆ!
    ಹತ್ತು ವರ್ಷದ ಮಗಳ ಹುಟ್ಟುಹಬ್ಬದ ಸಂಭ್ರಮ…  ವಿಧಿಯಾಟದಲ್ಲಿ ಕಣ್ಣೀರಾಗಿ ಮಾರ್ಪಟ್ಟ ದುರಂತ ಕಥೆ
    ಮೋದಿ ಸಂಪುಟದ ಒಂದು ವಿಕೆಟ್ ಪತನವಾಗುತ್ತಾ?
    ಶಾಸಕ ಸ್ಥಾನಕ್ಕೆ ರಾಜೀನಾಮೆ, ಯಶ್ವಂತರಾಯಗೌಡರ ನಡೆ  ಸಸ್ಪೆನ್ಸ್
    ಕಾರು ಸ್ಟೀರಿಂಗ್ ಹಿಡಿದ ಬಾಲಕಿ… ಪಕ್ಕದಲ್ಲೇ ಕುಳಿತಿದ್ದ ಪೊಲೀಸ್ ಅಧಿಕಾರಿ! ವೈರಲ್ ವಿಡಿಯೋ ಎಬ್ಬಿಸಿದ ದೊಡ್ಡ ಪ್ರಶ್ನೆ
    ಡಾನ್ -3 ಸಿನಿಮಾ ಕಥೆ ಗೋವಿಂದ….!
    ಸ್ಟರ್ಲಿಂಗ್ ವಸತಿ ಶಾಲೆಯ ಶಿಸ್ತಿನ ಹೆಸರಲ್ಲಿ 12 ವರ್ಷದ ಮುಗ್ಧನ ಜೀವ ಕಸಿದ ಕ್ರೌರ್ಯ!ಅನುಮಾನಾಸ್ಪದ ಸಾವಿನ ಸುತ್ತ ಹರಡಿದ ಆಘಾತಕಾರಿ ಸತ್ಯ…ಇಲ್ಲಿದೆ
    ಒಂದು ಕ್ಲಿಕ್, ಒಂದು ಆಟ… ಕುಟುಂಬದ ಭವಿಷ್ಯವೇ ನಾಶವಾಗುವ ಅಪಾಯದ ಬೆಟ್ಟಿಂಗ್ ಜಾಲ -!ಸಾವಿರಾರು ಬೆಟ್ಟಿಂಗ್ ಆ್ಯಪ್‌ಗಳಿಗೆ ಸದ್ಯದಲ್ಲೇ ಬ್ರೇಕ್ ….
    ಬಿಜೆಪಿಯ ಹೊಸ ರಾಷ್ಟ್ರೀಯ ಪದಾಧಿಕಾರಿಗಳ ತಂಡ ready…!
    *ಬೈಕಂಪಾಡಿ ಹೆದ್ದಾರಿ ಡಕಾಯಿತಿ, 23 ಲಕ್ಷ ಮೌಲ್ಯದ ಸೊತ್ತು ದರೋಡೆ ಪ್ರಕರಣ: 3 ಆರೋಪಿಗಳು ಸೆರೆ.
    “ಯೋಗೇಶ್ ಗೌಡ ಪ್ರಕರಣದಲ್ಲಿ ಕಾನೂನು ಗರ್ಜನೆ!”ಕಾನೂನು ಕಾಯುವವರೇ ಬೂಟು ನೆಕ್ಕಿಕಾನೂನು ಮುರಿದಾಗ-7 ವರ್ಷಗಳ ಜೈಲು!ಕಾನೂನು ಇನ್ನೂ ಜೀವಂತ!”
    ವಿಶ್ವದ ನಂಬರ್ ವನ್ ಜನನಾಯಕನಾದ ಪ್ರಧಾನಿ ಮೋದಿ
    ಪರಿಸರ ಕಾಪಾಡುವವರೇ ನಿಜವಾದ ಹೀರೋಗಳು! ‘ಇಕೋಪ್ರಿನ್ಯೂರ್ ಅವಾರ್ಡ್ಸ್ 2026’ ಮೂಲಕ ಹಸಿರು ಸಾಧಕರಿಗೆ ಗೌರವ
    ಒಂದು ವಾಟ್ಸ್ಯಾಪ್ ಮೆಸೇಜ್… ಕೋರ್ಟ್ ವರೆಗೂ ಎಳೆದ ಶಾಕ್ ಘಟನೆಯ ಸುತ್ತ..