📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಜಬಲ್ಪುರ್ ದುರಂತಕ್ಕೆ ಹೊಣೆ ಯಾರು? ಕ್ರಮ ಏನು?

ಪ್ರವಾಸೋದ್ಯಮ ಇಲಾಖೆಗೆ ಜವಾಬ್ದಾರಿ ಅಂತ ಏನಾದರೂ ಇದೆಯಾ? ಅಥವಾ ಯಾವುದೋ ವ್ಯಕ್ತಿಗಳಿಗೆ ಅಥವಾ ಕಂಪನಿಗೆ  ಟೆಂಡರ್ ನೀಡಿ ಕೈ ತೊಳೆದುಕೊಳ್ಳುವುದಕ್ಕಷ್ಟೇ ಅವರ ಕಾರ್ಯವು ಸೀಮಿತವಾ? ಹವಾಮಾನ ಇಲಾಖೆಯು ಮುನ್ಸೂಚನೆಯನ್ನು ಮೊದಲೇ ನೀಡಿತ್ತೋ ಅಥವಾ ಇಲ್ಲವೋ? ಇಲಾಖೆ ಮುನ್ಸೂಚನೆ ನೀಡಿದ್ದರೆ, ಅದರ ಪಾಲನೆ ಮಾಡಬೇಕಾದ್ದು ಯಾರು? ಸ್ಥಳೀಯ ಆಡಳಿತವು ಇಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವೇ?

ಮಧ್ಯ ಪ್ರದೇಶದ, ಜಬಲ್ಪುರ್ ನರ್ಮದಾ ನದಿಯಲ್ಲಿನ ದುರಂತಕ್ಕೆ ಇಲ್ಲಿಯವರೆಗೆ 13ಕ್ಕೂ ಹೆಚ್ಚು ಜನರು  ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ಮಹಿಳೆಯೊಬ್ಬರು, ಮಗುವನ್ನು ಎದೆಗೆವಚಿ ಹಿಡಿದು ಸಾವನ್ನಪ್ಪಿರುವ ಫೋಟೋ ವೈರಲ್ ಆಗಿತ್ತು. ಈಗಲೂ ಆ ಫೋಟೋ ಮನ ಕಲಕುವಂತಿದೆ. ಅದು ತಿದ್ದಿದ ಫೋಟೋ ಇರಲಿ, ಒರಿಜಿನಲ್ ಫೋಟೋನೇ ಇರಲಿ, ಆ ವಿಷಯ ಅನವಶ್ಯಕ ಈಗ. ಯಾಕೆಂದರೆ ತಾಯಿ ಮಗು ಇಬ್ಬರೂ ಮೃತಪಟ್ಟಿದ್ದಾರೆ.

ದುರ್ಘಟನೆ ನಡೆಯುವುದು ಇದೇ ಮೊದಲಿನಲ್ಲ. ಸಾಕಷ್ಟು ದುರ್ಘಟನೆಗಳು ನಡೆದಿದೆ. ಮುಂದೆಯೂ ನಡೆಯಬಹುದು. ಆದರೆ ಆ ದುರ್ಘಟನೆಗಳಿಗೆ ಕಾರಣ ಮತ್ತು ನಿಷ್ಕಾಳಜಿ ಇದೆ ಅಂತ ಗೊತ್ತಾದರೆ ಅದನ್ನು ಕ್ಷಮಿಸಲಾಗದು. ಈಗ ಮಧ್ಯ ಪ್ರದೇಶದ ಜಬಲ್ಪುರ್ ದುರ್ಘಟನೆಗೆ ಸಂಬಂಧಿಸಿದಂತೆ, ವ್ಯವಸ್ಥೆಯ ತಪ್ಪುಗಳ ಬಗ್ಗೆಯೂ ಬಹಿರಂಗ ತನಿಖೆಯಾಗಬೇಕು. ಯಾವುದೋ ಒಂದು ಬೋಟ್ ಮಾಲೀಕ ಅಥವಾ ನಾವಿಕನ ಮೇಲೆ ಕ್ರಮ ಕೈಗೊಂಡು ತಿಪ್ಪೆ ಸಾರಿಸುವ ಕೆಲಸ ಆಗಬಾರದು. ಬೋಟ್ ಮಾಲೀಕರು ಅಥವಾ ನಾವಿಕರು ತಮ್ಮ ಕೆಲಸವನ್ನು ಕಮರ್ಷಿಯಲ್ ಆಗಿ ಮಾಡುತ್ತಿರುತ್ತಾರೆ. ಅದರಲ್ಲಿ ತಪ್ಪು ಇಲ್ಲ. ಆದರೆ ಸಂಬಂಧಪಟ್ಟ ಇಲಾಖೆಯ ವತಿಯಿಂದ, ಅಲ್ಲಿ ನಿರ್ದೇಶನವು ಆಗಬೇಕಿತ್ತು ತಾನೆ? ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಿರ್ದೇಶಸಿದಂತೆಯೇ ಬೋಟ್ ಮಾಲೀಕರು, ನಾವಿಕರು ನಡೆದುಕೊಳ್ಳಬೇಕು. ಇಲಾಖೆಯ ಅಧಿಕಾರಿಗಳೇ ಅಲ್ಲಿರದಿದ್ದರೆ ಬೋಟ್ ಮಾಲೀಕರು ಅಥವಾ ನಾವಿಕರು ತಮಗೆ ಬೇಕಾದ ಹಾಗೆ ನಡೆದುಕೊಳ್ಳುತ್ತಾರೆ. ಬಹುಶಹ ಅಲ್ಲಿ ಆದದ್ದು ಅದೇ ಇರಬೇಕು.

ಹಾಗೆಯೇ, ಹವಾಮಾನ ವೈಪರಿತ್ಯದಿಂದಾಗಿ, ಇದ್ದಕ್ಕಿದ್ದಂತೆ ಬಿರುಬೀಸಾದ ಗಾಳಿ ಬೀಸಲು ಪ್ರಾರಂಭಿಸಿದ್ದರಿಂದ, ಬೋಟ್ ಮಗುಚಿ ಬಿತ್ತು ಅನ್ನೋದು ಸರಿಯೇ. ಆದರೆ ಹವಾಮಾನ ಇಲಾಖೆಗೆ ಇದರ ಅರಿವು ಇರಬೇಕಿತ್ತು ತಾನೆ? ಇಲಾಖೆಯು ತತಕ್ಷಣವೇ ಎಲ್ಲಾ ಕಡೆಯೂ ಮೆಸೇಜನ್ನು ಕಳುಹಿಸಿರಬೇಕಿತ್ತು. ಆ ಮೆಸೇಜನ್ನು ಆ ಇಲಾಖೆಯು ಕಳಿಸಿದೀಯೋ ಇಲ್ಲವೋ ಅದು  ಮುಖ್ಯ ಅನ್ನಿಸಿಕೊಳ್ಳುತ್ತದೆ. ಇಲಾಖೆಯ ವೈಪರಿತ್ಯದ ಮೆಸೇಜನ್ನು ಕಳುಹಿಸಿಲ್ಲ ಎಂದರೆ, ಹವಾಮಾನ ಇಲಾಖೆಯೇ ಈ ಎಲ್ಲಾ ಸಾವುಗಳಿಗೆ ಹೊಣೆ ಕೊರಬೇಕು.  ಹವಾಮಾನ ಇಲಾಖೆಯು ವೈಪರಿತ್ಯದ ಮೆಸೇಜನ್ನು ಕಳುಹಿಸಿದೆ ಅಂತಾದರೆ, ಆ ಮೆಸೇಜ್ ಯಾರಿಗೆ ಕಳುಹಿಸಿದ್ದು ಅನ್ನುವುದು ಇಲ್ಲಿ ಇಂಪಾರ್ಟೆಂಟ್ ಆಗುತ್ತದೆ.

ನೋ ಡೌಟ್, ಇದು ಪ್ರವಾಸೋದ್ಯಮ ಇಲಾಖೆಗೆ ಸಂಬಂಧಪಟ್ಟ ಮ್ಯಾಟರ್. ಅವರ ನಿಶಾರೆಯಲ್ಲಿ ಪ್ರವಾಸೋದ್ಯಮದ, ಇಂತಹ ಚಟುವಟಿಕೆಗಳು ನಡೆಯುತ್ತವೆ. ಇಲಾಖೆಯ ಪ್ರತಿನಿಧಿಗಳು ಇಂತಹ ಸ್ಥಳಗಳಲ್ಲಿ ಖುದ್ದಾಗಿ ಇರಬೇಕು, ಹಾಗೂ ಅವರು ಬೋಟ್ ಮಾಲಕರಿಗೆ ಅಥವಾ ನಾವಿಕರಿಗೆ, ಸಿಬ್ಬಂದಿಗಳಿಗೆ ಗೈಡ್ ಮಾಡಬೇಕು. ಹವಾಮಾನ ಇಲಾಖೆಯಿಂದ ಬರುವ ಮೆಸೇಜನ್ನು ಆಧರಿಸಿ ತತಕ್ಷಣದ ನಿರ್ಧಾರ ತೆಗೆದುಕೊಳ್ಳಬೇಕು. ಆ ಕೆಲಸ ಮಾಡಲು ಅಲ್ಲಿ ಅಧಿಕಾರಿಗಳನ್ನು ನೇಮಿಸಿದ್ದರಾ?

ಜನರು ಈ ದುರ್ಘಟನೆಯ ವಿಡಿಯೋ ಫೋಟೋಗಳನ್ನು ನೋಡಿ ಮನಸ್ಸು ಕೆಡಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಜನರು ಸಾಮಾನ್ಯವಾಗಿ , ಅಲ್ಲಿನ ಬೋಟ್ ಮಾಲೀಕ ಹಾಗೂ ನಾವಿಕರ ಬಗ್ಗೆ ಮಾತನಾಡುತ್ತಾರೆ ಎನ್ನುವುದು ತಿಳಿಯದ ವಿಚಾರವೇನಲ್ಲ. ಇದೇ ಕಾರಣಕ್ಕೆ ಅನೇಕ ಸತ್ಯಗಳು ಅಲ್ಲಿಯೇ ಹೂತು ಹೋಗುತ್ತವೆ. ತಪ್ಪಿತಸ್ಥರು ಬಚವಾಗುತ್ತಾರೆ ಕೂಡ. ಅದಕ್ಕೆ ಕಾರಣ, ವಿಷಯದ ಆಳಕ್ಕೆ ಹೋಗದೆ ಇರುವಂತದ್ದೇ ಆಗಿದೆ. ಮಧ್ಯಪ್ರದೇಶದ ಸರ್ಕಾರ, ಈ ವಿಚಾರದಲ್ಲಿ ಆಳವಾದ ತನಿಖೆಗೆ ಇಳಿಯಲೇಬೇಕು. ಹವಾಮಾನ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಇವೆರಡನ್ನೂ ಅಪರಾಧಿ ಸ್ಥಾನದಲ್ಲಿ ಕೂರಿಸಲೇಬೇಕಾಗುತ್ತದೆ. ಹಾಗೆಯೇ ಅವರು ತನಿಖೆಯನ್ನೂ ಎದುರಿಸಬೇಕು. ಅವರು ತನಿಖೆ ಎದುರಿಸಲು ರಾಜಕಾರಣಿಗಳು ಮತ್ತು ಸರ್ಕಾರ ಬಿಡುತ್ತದ?

COMMENTS

Login with Gmail to comment

ಇನ್ನಷ್ಟು ಸುದ್ದಿ

ಗೃಹ ಬಳಕೆಯ LPG ಗ್ರಾಹಕರಿಗೆ Aadhaar e-KYC ಕಡ್ಡಾಯ – PMUY ಫಲಾನುಭವಿಗಳಿಗೆ ವಾರ್ಷಿಕ ಬಯೋಮೆಟ್ರಿಕ್ ಪರಿಶೀಲನೆ
ಹಳ್ಳಿಯಿಂದ ಡೆಲ್ಲಿ ತನಕ ಉರಿ ಬಿಸಿಲು, ಮಾರ್ಚ್ ಆರಂಭದಲ್ಲೇ ಜನ ತತ್ತರ”
ಮಂಗಳೂರು ನಗರದಲ್ಲಿ ಭಾರೀ ಪ್ರಮಾಣದ MDMA ವಶ – ಇಬ್ಬರು ಡ್ರಗ್ ಪೆಡ್ಲರ್‌ಗಳ ಬಂಧನ…
ಪರಸ್ತ್ರೀ ಹುಂಡಿಗೆ  ಒಂದುವರೆ ಕೋಟಿ ಅಪಾರ್ಟ್ಮೆಂಟ್, ಮಾಜಿ ಶಾಸಕನ ರಂಗಿನಾಟ 
ಹೋಟೆಲ್ನಲ್ಲಿ ಅಗ್ನಿಯ ಜ್ವಾಲೆ-ಉಸಿರುಗಟ್ಟಿದ ಹೊಗೆಯೊಳಗೆ ಅಡಗಿಹೋದ ಜೀವಗಳು ..!
ನಾಟಕ ಕಲಾವಿದೆ ಸೌಮ್ಯ ಶೆಟ್ಟಿ ಬಂಧನ
ಇತಿಹಾಸ ಸೇರಿತು ಮಂಗಳೂರಿನ ಮೋತಿ ಮಹಲ್…..
NEET ಗೊಂದಲ, ಮರುಪರೀಕ್ಷೆ, ಮೌಲ್ಯಮಾಪನ ದೋಷಗಳು ಮತ್ತು ವಿದ್ಯಾರ್ಥಿ ಜೀವನದ ನೋವು..
ಬೆಂಗಳೂರಲ್ಲಿ Bowring Hospital ಬಳಿ ಗೋಡೆ ಕುಸಿತ ಮನ ಕಲುಕುವ ಘಟನೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಿಂತವರು… ಏಳು ಮಂದಿಯ ದುರಂತ ಅಂತ್ಯ.!
ರಾಮಮಂದಿರ ಟ್ರಸ್ಟ್‌ನ ಮಹತ್ವದ ಹೇಳಿಕೆ!ಎಲ್ಲಾ ಕಾಣಿಕೆಗಳು ,ದೇಣಿಗೆ,ಚಿನ್ನ-ಬೆಳ್ಳಿ ಸೇರಿ 2,800 ಅಮೂಲ್ಯ ವಸ್ತುಗಳುಸುರಕ್ಷಿತ
ಏಪ್ರಿಲ್ 1, 2026ರಿಂದಲೇ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ
ಸಾರ್ವಜನಿಕ ಸ್ಥಳದಲ್ಲಿ ಕೈಕೈ ಮಿಲಾಯಿಸಿ ಜಗಳ ಮಾಡಿದ್ರೇ ಹುಷಾರ್…!
ಹಿಂದೂ ಬುಡಕಟ್ಟು ಸಮಾಜದ ರುದ್ರಾಕ್ಷಿ ಸುಂದರಿ ಮುಸ್ಲಿಂ ಹುಡುಗನ ಮದುವೆಯಾದ್ಲು
ಆರ್‌ಸಿಬಿ ಎದುರಿಸಲು ರಾಯಲ್ಸ್ ರೆಡಿ??: ಕ್ರಿಕೆಟ್ ಜಗತ್ತಿಗೆ ಶಾಕ್ ಕೊಟ್ಟ ಬಿಹಾರದ ಬಾಲಕ-ಸಚಿನ್ ತೆಂಡೂಲ್ಕರ್ ಕೂಡ ಮೆಚ್ಚಿದ ಆ 29 ಎಸೆತಗಳ ರುದ್ರತಾಂಡವ!
ಮಂಗಳೂರು ಸಿಟಿ ಪೊಲೀಸರ ಭರ್ಜರಿ ಬೇಟೆ – ನಿಷೇಧಿತ ಎಂಡಿಎಂ, ಗಾಂಜಾ ಮರಾಟಗಾರರ ಬಂಧನ
ಅರೆ ವಾ..! ಕರ್ನಾಟಕದ ಜನರಿಗೆ ಫ್ಯಾನ್ಸಿ ನಂಬರ್‌ಗಳೇ ಫೇವರಿಟ್…RTOಗೆ ₹118 ಕೋಟಿ ಆದಾಯ!
“ನನ್ನ ಮೇಲೆ ನಂಬಿಕೆ ಇಲ್ಲದಿದ್ದರೆ ನಾನು ಅಧ್ಯಕ್ಷ ಸ್ಥಾನ ಬಿಡಲು ಸಿದ್ಧ”!-ಉದ್ಧವ್ ಠಾಕ್ರೆ ಕಣ್ಣೀರಿನ ಮನವಿ.
ಬಾಲಗರ್ಭಿಣಿಯರ ಸಂಖ್ಯೆ 5975….!!
ಮಂಗಳೂರು ಗ್ರಾಮಾಂತರ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ
ಕದನ ವಿರಾಮ ಹೇಳಿಕೆ ಮಾತ್ರ…“Middle East ಮತ್ತೆ ಸ್ಫೋಟಕ
🔴 ಪೊಲೀಸರ ಮೇಲಿನ ಹಿಡಿತ ಕಠಿಣ: PEBಗೆ ಹೆಚ್ಚಿದ ಅಧಿಕಾರ — ರಾಜ್ಯದ ದೊಡ್ಡ ಆಡಳಿತಾತ್ಮಕ ತೀರ್ಮಾನ
₹1270 ಕೋಟಿ ಕಾನ್ಟ್ರಾಕ್ಟ್ ಹಗರಣ -CM ಖಾಂಡು ಕುಟುಂಬ ವಿಚಾರಣೆ-ಸುಪ್ರೀಂಕೋರ್ಟ್ ಸಿಬಿಐಗೆ ಆದೇಶ..
ಡೆಲಿವರಿ ಬಾಯ್‌ಗೆ ಅಡ್ಡಗಟ್ಟಿ ಹಲ್ಲೆ – ಪ್ರಕರಣ ದಾಖಲು
ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ನಡುವೆ ತೀವ್ರ ವಾಕ್ಸಮರ, ಬಿಗುವಿನ ವಾತಾವರಣ
ಮೊಹಾಲಿ ಬೆಚ್ಚಿಬೀಳಿಸಿದ ಕಚೇರಿ ಕೊಲೆ: ಮಹಿಳೆ ಮೇಲೆ ಮಾರಣಾಂತಿಕ ದಾಳಿ, ದೇಶಾದ್ಯಂತ ಆಕ್ರೋಶ…
ಬೆಳ್ತಂಗಡಿ ಸ್ನಾನಕ್ಕೆ ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು…
ಪಿವಿ ಎಸ್ ಸಂಸ್ಥೆಯ ಆಡಳಿತದಲ್ಲಿ ಯಾರ ಹಸ್ತಕ್ಷೇಪವು ಇಲ್ಲ – ಸರೋಜಿನಿ ಕುಶೆ
ತೆರಿಗೆ ನಮ್ಮದು… ಪಾಲು ಬೇರೆ ರಾಜ್ಯಗಳಿಗೆ!
ಮಾಜಿ ಸಚಿವರಿಂದ ಮಂಗಳೂರು ವೈಭವಕ್ಕೆ ಬೃಹತ್ ಕೊಡುಗೆ
ಇರಾನ್–ಇಸ್ರೇಲ್ ಯುದ್ಧ: ಯುದ್ಧ ನಿಲ್ಲಿಸಲು ಇರಾನ್‌ನ 3 ಷರತ್ತುಗಳು… ಅಮೇರಿಕಾ ಕಂಗಾಲು