📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಜಬಲ್ಪುರ್ ದುರಂತಕ್ಕೆ ಹೊಣೆ ಯಾರು? ಕ್ರಮ ಏನು?

ಪ್ರವಾಸೋದ್ಯಮ ಇಲಾಖೆಗೆ ಜವಾಬ್ದಾರಿ ಅಂತ ಏನಾದರೂ ಇದೆಯಾ? ಅಥವಾ ಯಾವುದೋ ವ್ಯಕ್ತಿಗಳಿಗೆ ಅಥವಾ ಕಂಪನಿಗೆ  ಟೆಂಡರ್ ನೀಡಿ ಕೈ ತೊಳೆದುಕೊಳ್ಳುವುದಕ್ಕಷ್ಟೇ ಅವರ ಕಾರ್ಯವು ಸೀಮಿತವಾ? ಹವಾಮಾನ ಇಲಾಖೆಯು ಮುನ್ಸೂಚನೆಯನ್ನು ಮೊದಲೇ ನೀಡಿತ್ತೋ ಅಥವಾ ಇಲ್ಲವೋ? ಇಲಾಖೆ ಮುನ್ಸೂಚನೆ ನೀಡಿದ್ದರೆ, ಅದರ ಪಾಲನೆ ಮಾಡಬೇಕಾದ್ದು ಯಾರು? ಸ್ಥಳೀಯ ಆಡಳಿತವು ಇಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವೇ?

ಮಧ್ಯ ಪ್ರದೇಶದ, ಜಬಲ್ಪುರ್ ನರ್ಮದಾ ನದಿಯಲ್ಲಿನ ದುರಂತಕ್ಕೆ ಇಲ್ಲಿಯವರೆಗೆ 13ಕ್ಕೂ ಹೆಚ್ಚು ಜನರು  ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ಮಹಿಳೆಯೊಬ್ಬರು, ಮಗುವನ್ನು ಎದೆಗೆವಚಿ ಹಿಡಿದು ಸಾವನ್ನಪ್ಪಿರುವ ಫೋಟೋ ವೈರಲ್ ಆಗಿತ್ತು. ಈಗಲೂ ಆ ಫೋಟೋ ಮನ ಕಲಕುವಂತಿದೆ. ಅದು ತಿದ್ದಿದ ಫೋಟೋ ಇರಲಿ, ಒರಿಜಿನಲ್ ಫೋಟೋನೇ ಇರಲಿ, ಆ ವಿಷಯ ಅನವಶ್ಯಕ ಈಗ. ಯಾಕೆಂದರೆ ತಾಯಿ ಮಗು ಇಬ್ಬರೂ ಮೃತಪಟ್ಟಿದ್ದಾರೆ.

ದುರ್ಘಟನೆ ನಡೆಯುವುದು ಇದೇ ಮೊದಲಿನಲ್ಲ. ಸಾಕಷ್ಟು ದುರ್ಘಟನೆಗಳು ನಡೆದಿದೆ. ಮುಂದೆಯೂ ನಡೆಯಬಹುದು. ಆದರೆ ಆ ದುರ್ಘಟನೆಗಳಿಗೆ ಕಾರಣ ಮತ್ತು ನಿಷ್ಕಾಳಜಿ ಇದೆ ಅಂತ ಗೊತ್ತಾದರೆ ಅದನ್ನು ಕ್ಷಮಿಸಲಾಗದು. ಈಗ ಮಧ್ಯ ಪ್ರದೇಶದ ಜಬಲ್ಪುರ್ ದುರ್ಘಟನೆಗೆ ಸಂಬಂಧಿಸಿದಂತೆ, ವ್ಯವಸ್ಥೆಯ ತಪ್ಪುಗಳ ಬಗ್ಗೆಯೂ ಬಹಿರಂಗ ತನಿಖೆಯಾಗಬೇಕು. ಯಾವುದೋ ಒಂದು ಬೋಟ್ ಮಾಲೀಕ ಅಥವಾ ನಾವಿಕನ ಮೇಲೆ ಕ್ರಮ ಕೈಗೊಂಡು ತಿಪ್ಪೆ ಸಾರಿಸುವ ಕೆಲಸ ಆಗಬಾರದು. ಬೋಟ್ ಮಾಲೀಕರು ಅಥವಾ ನಾವಿಕರು ತಮ್ಮ ಕೆಲಸವನ್ನು ಕಮರ್ಷಿಯಲ್ ಆಗಿ ಮಾಡುತ್ತಿರುತ್ತಾರೆ. ಅದರಲ್ಲಿ ತಪ್ಪು ಇಲ್ಲ. ಆದರೆ ಸಂಬಂಧಪಟ್ಟ ಇಲಾಖೆಯ ವತಿಯಿಂದ, ಅಲ್ಲಿ ನಿರ್ದೇಶನವು ಆಗಬೇಕಿತ್ತು ತಾನೆ? ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಿರ್ದೇಶಸಿದಂತೆಯೇ ಬೋಟ್ ಮಾಲೀಕರು, ನಾವಿಕರು ನಡೆದುಕೊಳ್ಳಬೇಕು. ಇಲಾಖೆಯ ಅಧಿಕಾರಿಗಳೇ ಅಲ್ಲಿರದಿದ್ದರೆ ಬೋಟ್ ಮಾಲೀಕರು ಅಥವಾ ನಾವಿಕರು ತಮಗೆ ಬೇಕಾದ ಹಾಗೆ ನಡೆದುಕೊಳ್ಳುತ್ತಾರೆ. ಬಹುಶಹ ಅಲ್ಲಿ ಆದದ್ದು ಅದೇ ಇರಬೇಕು.

ಹಾಗೆಯೇ, ಹವಾಮಾನ ವೈಪರಿತ್ಯದಿಂದಾಗಿ, ಇದ್ದಕ್ಕಿದ್ದಂತೆ ಬಿರುಬೀಸಾದ ಗಾಳಿ ಬೀಸಲು ಪ್ರಾರಂಭಿಸಿದ್ದರಿಂದ, ಬೋಟ್ ಮಗುಚಿ ಬಿತ್ತು ಅನ್ನೋದು ಸರಿಯೇ. ಆದರೆ ಹವಾಮಾನ ಇಲಾಖೆಗೆ ಇದರ ಅರಿವು ಇರಬೇಕಿತ್ತು ತಾನೆ? ಇಲಾಖೆಯು ತತಕ್ಷಣವೇ ಎಲ್ಲಾ ಕಡೆಯೂ ಮೆಸೇಜನ್ನು ಕಳುಹಿಸಿರಬೇಕಿತ್ತು. ಆ ಮೆಸೇಜನ್ನು ಆ ಇಲಾಖೆಯು ಕಳಿಸಿದೀಯೋ ಇಲ್ಲವೋ ಅದು  ಮುಖ್ಯ ಅನ್ನಿಸಿಕೊಳ್ಳುತ್ತದೆ. ಇಲಾಖೆಯ ವೈಪರಿತ್ಯದ ಮೆಸೇಜನ್ನು ಕಳುಹಿಸಿಲ್ಲ ಎಂದರೆ, ಹವಾಮಾನ ಇಲಾಖೆಯೇ ಈ ಎಲ್ಲಾ ಸಾವುಗಳಿಗೆ ಹೊಣೆ ಕೊರಬೇಕು.  ಹವಾಮಾನ ಇಲಾಖೆಯು ವೈಪರಿತ್ಯದ ಮೆಸೇಜನ್ನು ಕಳುಹಿಸಿದೆ ಅಂತಾದರೆ, ಆ ಮೆಸೇಜ್ ಯಾರಿಗೆ ಕಳುಹಿಸಿದ್ದು ಅನ್ನುವುದು ಇಲ್ಲಿ ಇಂಪಾರ್ಟೆಂಟ್ ಆಗುತ್ತದೆ.

ನೋ ಡೌಟ್, ಇದು ಪ್ರವಾಸೋದ್ಯಮ ಇಲಾಖೆಗೆ ಸಂಬಂಧಪಟ್ಟ ಮ್ಯಾಟರ್. ಅವರ ನಿಶಾರೆಯಲ್ಲಿ ಪ್ರವಾಸೋದ್ಯಮದ, ಇಂತಹ ಚಟುವಟಿಕೆಗಳು ನಡೆಯುತ್ತವೆ. ಇಲಾಖೆಯ ಪ್ರತಿನಿಧಿಗಳು ಇಂತಹ ಸ್ಥಳಗಳಲ್ಲಿ ಖುದ್ದಾಗಿ ಇರಬೇಕು, ಹಾಗೂ ಅವರು ಬೋಟ್ ಮಾಲಕರಿಗೆ ಅಥವಾ ನಾವಿಕರಿಗೆ, ಸಿಬ್ಬಂದಿಗಳಿಗೆ ಗೈಡ್ ಮಾಡಬೇಕು. ಹವಾಮಾನ ಇಲಾಖೆಯಿಂದ ಬರುವ ಮೆಸೇಜನ್ನು ಆಧರಿಸಿ ತತಕ್ಷಣದ ನಿರ್ಧಾರ ತೆಗೆದುಕೊಳ್ಳಬೇಕು. ಆ ಕೆಲಸ ಮಾಡಲು ಅಲ್ಲಿ ಅಧಿಕಾರಿಗಳನ್ನು ನೇಮಿಸಿದ್ದರಾ?

ಜನರು ಈ ದುರ್ಘಟನೆಯ ವಿಡಿಯೋ ಫೋಟೋಗಳನ್ನು ನೋಡಿ ಮನಸ್ಸು ಕೆಡಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಜನರು ಸಾಮಾನ್ಯವಾಗಿ , ಅಲ್ಲಿನ ಬೋಟ್ ಮಾಲೀಕ ಹಾಗೂ ನಾವಿಕರ ಬಗ್ಗೆ ಮಾತನಾಡುತ್ತಾರೆ ಎನ್ನುವುದು ತಿಳಿಯದ ವಿಚಾರವೇನಲ್ಲ. ಇದೇ ಕಾರಣಕ್ಕೆ ಅನೇಕ ಸತ್ಯಗಳು ಅಲ್ಲಿಯೇ ಹೂತು ಹೋಗುತ್ತವೆ. ತಪ್ಪಿತಸ್ಥರು ಬಚವಾಗುತ್ತಾರೆ ಕೂಡ. ಅದಕ್ಕೆ ಕಾರಣ, ವಿಷಯದ ಆಳಕ್ಕೆ ಹೋಗದೆ ಇರುವಂತದ್ದೇ ಆಗಿದೆ. ಮಧ್ಯಪ್ರದೇಶದ ಸರ್ಕಾರ, ಈ ವಿಚಾರದಲ್ಲಿ ಆಳವಾದ ತನಿಖೆಗೆ ಇಳಿಯಲೇಬೇಕು. ಹವಾಮಾನ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಇವೆರಡನ್ನೂ ಅಪರಾಧಿ ಸ್ಥಾನದಲ್ಲಿ ಕೂರಿಸಲೇಬೇಕಾಗುತ್ತದೆ. ಹಾಗೆಯೇ ಅವರು ತನಿಖೆಯನ್ನೂ ಎದುರಿಸಬೇಕು. ಅವರು ತನಿಖೆ ಎದುರಿಸಲು ರಾಜಕಾರಣಿಗಳು ಮತ್ತು ಸರ್ಕಾರ ಬಿಡುತ್ತದ?

COMMENTS

Login with Gmail to comment

ಇನ್ನಷ್ಟು ಸುದ್ದಿ

HSRP ರಿಲೀಫ್ + PUCC ಫೈನ್ ಮುಕ್ತ…ಡೀಟೇಲ್ಸ್ ಇಲ್ಲಿದೆ ಕರ್ನಾಟಕದ ಎಲ್ಲ ಡ್ರೈವರ್‌ಗಳಿಗೆ ಡಬಲ್ ಗುಡ್ ನ್ಯೂಸ್!???
₹119 ಕೋಟಿ ವ್ಯತ್ಯಾಸ ಸಣ್ಣ ವಿಷಯನಾ….ಏನಿದು ತಲೈವಾ..!
ವಿಮಾನ ಪ್ರಯಾಣ ದುಬಾರಿ: ಟಿಕೆಟ್ ದರ ಏರಿಕೆ ವಿರುದ್ಧ PIL: ಸರ್ಕಾರಕ್ಕೆ ಸುಪ್ರೀಂ ನೋಟಿಸ್
ಮಂಗಳೂರಲ್ಲಿ ಮಳೆಯ ಅಬ್ಬರ… ಗುಡುಗು-ಮಿಂಚಿನ ಆಟ ದಕ್ಷಿಣ ಕನ್ನಡದಲ್ಲಿ ಮತ್ತೆ pre-ಮಾನ್ಸೂನ್ ಮ್ಯಾಜಿಕ್!?
ಅವಿವಾಹಿತಗೆ ಗರ್ಭ ದಾನ ಮಾಡಿದವ ಜೈಲಿಗೆ
ಪ್ರತಿಭಟನಾ ಶಕ್ತಿಯನ್ನೇ ಕಳೆದುಕೊಂಡ ಭಾರತ… ನಿಶ್ಯಕ್ತವಾದ ವಿರೋಧ ಪಕ್ಷಗಳು
ಕಂದಾಯ ಸಚಿವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ
ಚಾಮನಗರದಲ್ಲೊಂದು ಅನಿಷ್ಠದ ಕ್ರೈಂ
ಶಿಕ್ಷಣದ ಹೆಸರಿನಲ್ಲಿ ಡ್ರಗ್ ವ್ಯವಹಾರ! ಬೆಚ್ಚಿಬಿದ್ದ ಮಂಗಳೂರು…
ಜೀತಕ್ಕಿಟ್ಟುಕೊಂಡು ದರ್ಬಾರ್ ನಡೆಸುತ್ತಿದ್ದ ರಜನಿಶೆಟ್ಟಿಯ ಬಂಧನ
ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಎತ್ತುಗಳನ್ನು ವಧೆಗೆ….!
ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಗೆ ಭೇಟಿ ನೀಡಿದ ಡಾ. ನಾಗಲಕ್ಷ್ಮಿ ಚೌಧರಿ – ಮಹಿಳಾ ಮೀನುಗಾರರ ಸಮಸ್ಯೆ ಆಲಿಕೆ
ಧೂಮಪಾನ ಮಾಡುತ್ತಿದ್ದೀರಾ? ನಿಮ್ಮ ಮುಖ ನಿಧಾನವಾಗಿ ನಾಶವಾಗುತ್ತಿದೆ…
ಪೆಟ್ರೋಲ್–ಡೀಸೆಲ್ ಬೆಲೆ ಏರಿಕೆ ..! ಸಾರ್ವಜನಿಕ ಸಾರಿಗೆ ಬಳಸಿ ,ಇಂಧನ ಉಳಿಸಿ ,Work From Home ಮಾಡಿ ಎಂದಿದ್ದ ಮೋದಿ… ಈಗ ಅದರ ಅರ್ಥ ಸ್ಪಷ್ಟವಾಗುತ್ತಿದೆಯೇ?
ಮೇ 29ರಿಂದ ತಣ್ಣೀರುಬಾವಿ ಬೀಚ್‌ನಲ್ಲಿ ಮೂರು ದಿನಗಳ ರಾಷ್ಟ್ರಮಟ್ಟದ ಸರ್ಫಿಂಗ್ ಸ್ಪರ್ಧೆ…
ಬೇಕಾದಾಗ, ಬೇಕಾದಂಗೆ ಸಂವಿಧಾನದ ಜಪ
ವೆಟ್-ವೆಲ್‌ಗಳ ಕಳಪೆ ನಿರ್ವಹಣೆಚರಂಡಿ-ಬಾವಿಗಳಿಗೆ ಡ್ರೈನೇಜ್ ನೀರು..
ಐಟಿ ಕ್ಷೇತ್ರದಲ್ಲಿ ಮತ್ತೆ ಲೇಆಫ್ ಭೀತಿ!
ರಾಜಕೀಯದಲ್ಲಿ ಅನುಭವ ಎಷ್ಟು ಮುಖ್ಯ?…  ತಮಿಳುನಾಡು ರಾಜಕಾರಣ ತೋರಿಸುತ್ತಿದೆ ನೋಡಿ
ಉಡುಪಿಯಲ್ಲಿ ಟ್ರೇಡಿಂಗ್ ಹೆಸರಲ್ಲಿ ಲಕ್ಷಗಟ್ಟಲೆ ಧೋಕಾ….
ನಾಸಿಕ್ TCS ಪ್ರಕರಣ-ಸತ್ಯ ಮರೆಮಾಚಿದವರಾರು?ಕಾರ್ಪೊರೇಟ್ ಜಗತ್ತಿನ ಕತ್ತಲೆ ಮುಖ:HRಮಹಿಳೆಯಾಗಿಯೂ…..
ಮೊಸಾದ್ ಏಜೆಂಟ್ ಇಸ್ಮಾಯಿಲ್ ಖಾನಿಯಿಂದ ಇರಾನಿ ಸರ್ವೋಚ್ಛ ನಾಯಕನ  ಹತ್ಯೆ
ತೈಲ ಟ್ಯಾಂಕರ್ ಮೇಲೆ ಇರಾನ್ ಆತ್ಮಹತ್ಯಾ ದೋಣಿ ದಾಳಿ – ಭಾರತೀಯ ನಾವಿಕ ಸಾವು
ಪಿಸ್ತೂಲ್ ತೋರಿಸಿ ಬೆದರಿಸಿ ಪರಾರಿಯಾಗಿದ್ದ ಯುವಕ ಬಂಧನ
ಹೋಟೆಲ್, ಕೆಫೆ ಬಿಸಿ ಬಿಸಿ ಪ್ಲಾಸ್ಟಿಕ್ ಲ್ಲಿ ಪಾರ್ಸೆಲ್‌ಗೆ ಬ್ರೇಕ್ –ಹಾಗೆ 5ರೂ 10ರೂ ಬೀಡಿ ಸಿಗರೇಟ್ ಗುಟ್ಕಾಕ್ಕೆ ₹1000 ದಂಡ ಕಟ್ಟಬೇಕಾದಿತು ಎಚ್ಚರ …!
ಚುನಾವಣಾ ಆಯೋಗ ಸರ್ವಾಧಿಕಾರಿಯಾಗುತ್ತಿದೆ ಎಂಬ ಅನುಮಾನದ ಸುತ್ತ….
ಪುತ್ತೂರು ಗ್ರಾಮಾಂತರದಲ್ಲಿ ಭೂ ವಿವಾದದ ಗಲಾಟೆ ತೀವ್ರತೆ: ಪರಸ್ಪರ ಹಲ್ಲೆ – ಎರಡು ಪ್ರಕರಣಗಳು ದಾಖಲು
ಮಂಗಳೂರುಗೆ ಹೈಕೋರ್ಟ್ ಸರ್ಕ್ಯೂಟ್ ಬೆಂಚ್: ಕರಾವಳಿಗೆ ಐತಿಹಾಸಿಕ ನ್ಯಾಯಾಂಗ ಶಕ್ತಿ ನೀಡುವ ಮಹತ್ವದ ಹೆಜ್ಜೆ..
ಸರ್ಕಾರಿ ವೈದ್ಯರ ಅನರ್ದಿಷ್ಟಾವಧಿ ಮುಷ್ಕರ ರದ್ದು
ಬ್ರೇಕಿಂಗ್ ನ್ಯೂಸ್