📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಪರಸ್ತ್ರೀ ಹುಂಡಿಗೆ  ಒಂದುವರೆ ಕೋಟಿ ಅಪಾರ್ಟ್ಮೆಂಟ್, ಮಾಜಿ ಶಾಸಕನ ರಂಗಿನಾಟ 

ಇದು ಇಂದು ನಿನ್ನಯ ಕಥೆಯಲ್ಲ, ಬಹಳ ಸಮಯದಿಂದ ನಡೆದುಕೊಂಡು ಬಂದಂತಹ ಇಲ್ಲಿಗಲ್ ರಿಲೇಷನ್ಶಿಪ್ ಕಥೆ. ಇಂತಹದೊಂದು ಅನಾಹುತಕಾರಿ ಕೆಲಸವನ್ನು ಮಾಜಿ ಶಾಸಕನೊಬ್ಬ ಮಾಡಿ ಸುದ್ದಿಯಾಗುತ್ತಿದ್ದಾನೆ. ಆತ ಮಾಡಿದ ಘನಂದಾರಿ ಕೆಲಸದಿಂದ ಒಬ್ಬ ಸಾಮಾನ್ಯ ಗಂಡಸು , ಮಾನಸಿಕ ವೇದನೆಗೆ ತುತ್ತಾಗಿದ್ದಾನೆ. ಅವನ ವೇದನೆಗೆ ನ್ಯಾಯ ಕೊಡಬೇಕಾದಂತಹ ಅನಿವಾರ್ಯತೆಗೆ ಸಿಲುಕಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ

ಮಂಡ್ಯದ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಿಶಾ ಸಭೆ ನಡೆಯುತ್ತಿತ್ತು. ಆ ಸಭೆಯಲ್ಲಿ ಕುದ್ದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಅಚಾನಕ್ಕಾಗಿ ಬಂದಂತಹ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಪ್ರಸನ್ನ ಎಂಬ ಯುವಕ, ಎಚ್ ಡಿ ಕುಮಾರಸ್ವಾಮಿ ಅವರಲ್ಲಿ ಕಣ್ಣೀರನ ಮನವಿ ಒಂದನ್ನು ನೀಡುತ್ತಾರೆ. ನನಗೆ ನ್ಯಾಯ ಕೊಡಿ ಅಂತ ಅತ್ತು ಕರೆದು ಬೇಡಿಕೊಳ್ಳುತ್ತಾರೆ. ಯಾರಿಗೂ ಶಿಕ್ಷೆ ಬೇಡ, ನನಗೆ ಮುಕ್ತಿ ಕೊಡಿಸಿ ಅಂತ ಬೇಡಿಕೊಳ್ಳುತ್ತಾರೆ. ಅಷ್ಟಕ್ಕೂ ಆಗಿದ್ದು ಏನು?

ಜೆಡಿಎಸ್ ಪಕ್ಷದ ಮಾಜಿ ಶಾಸಕ ಡಾಕ್ಟರ್ ಕೆ ಅನ್ನದಾನಿ ಈ ಒಂದು ಪ್ರಕರಣದಲ್ಲಿ ಪ್ರಮುಖವಾಗಿ ಗೋಚರಿಸುತ್ತಾರೆ. ಪ್ರಸನ್ನ ಎಂಬ ಯುವಕನ ಹೆಂಡತಿಯನ್ನು ಡಾಕ್ಟರ್ ಕೆ ಅನ್ನದಾನಿ ತನ್ನ ಕಾಮದಾಟಕ್ಕೆ ಬಳಸಿಕೊಳ್ಳುತ್ತಾರೆ ಅನ್ನುವುದು ಆ ಹೆಂಗಸಿನ ಸ್ವಂತ ಗಂಡ ಪ್ರಸನ್ನನ ಗಂಭೀರ ಆರೋಪ . ಶಾಸಕರು ತನ್ನ ಹೆಂಡತಿಯನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ, ಬಹುತೇಕವಾಗಿ ಜೊತೆಗೂ ಇದ್ದಾರೆ ಅನ್ನುವುದು ಸ್ವತಃ ಆ ಹೆಂಗಸಿನ ಗಂಡನ ಅಧಿಕೃತ ಸ್ಟೇಟ್ಮೆಂಟ್. ಒಂದು ಮೂಲದ ಪ್ರಕಾರ ಆ ಹೆಂಗಸು ನಡತೆಗಟ್ಟು ಬಹಳ ಸಮಯವೇ ಆಗಿ ಹೋಯಿತು. ಅವಳ ಈ ನಡತೆಗೆಟ್ಟ ಜೀವನಕ್ಕೆ ಸ್ವತಹ ಅವಳ ತವರು ಮನೆಯವರು ಸಹಕಾರ ಕೊಡುತ್ತಿದ್ದಾರೆ ಎನ್ನುವುದು ಆ ಹೆಂಗಸಿನ ಸ್ವಂತ ಪತಿಯ ಆರೋಪವೂ ಹೌದು 

ಮೈಸೂರಿನಲ್ಲಿ ಸುಮಾರು ಒಂದುವರೆ ಕೋಟಿ ಮೌಲ್ಯದ ಅಪಾರ್ಟ್ಮೆಂಟ್ ಒಂದರಲ್ಲಿ ಈ ಹೆಂಗಸನ್ನು ಇಟ್ಟುಕೊಂಡಿದ್ದಾನೆ  ಈ ಮಾಜಿ ಶಾಸಕ ಅನ್ನುವುದು ನೊಂದು ಬೆಂದು ಹೋಗಿರುವಂತಹ ಪ್ರಸನ್ನ ಆರೋಪ. ಅದಕ್ಕೆ ಬೇಕಾದಂತಹ ಒಂದಷ್ಟು ಸಾಕ್ಷಿಗಳನ್ನು ಜೊತೆಗಿಟ್ಟುಕೊಂಡಿದ್ದಾನೆ. ಪೊಲೀಸರು ತನ್ನ ಮಾತನ್ನು ಕೇಳುತ್ತಿಲ್ಲ, ತನ್ನ ದೂರನ್ನು ತೆಗೆದುಕೊಳ್ಳುತ್ತಿಲ್ಲ ಎನ್ನುವುದು ಪ್ರಸನ್ನನ ಗಂಭೀರ ದೂರು . ನನಗೆ ಆ ಹೆಂಗಸಿನ ಮೇಲೆ ಕ್ರಮವಾಗಬೇಕು, ಮಾಜಿ ಶಾಸಕರನ್ನು ಬಂಧಿಸಬೇಕು ಅನ್ನುವುದು ಉದ್ದೇಶವಲ್ಲ, ನನಗೆ ಆ ಹೆಂಗಸಿನಿಂದ ಮುಕ್ತಿ ಕೊಡಿಸಿ. ಕಣ್ಣೆದುರೇ ಹೆಂಡತಿಯು ಇನ್ನೊಬ್ಬರ ಸಹವಾಸದಲ್ಲಿರುವುದನ್ನು ನೋಡಿಯೂ ಬದುಕಬೇಕಾದಂತಹ ದುಸ್ಥಿತಿ ನನ್ನದಾಗಿದೆ. ವಿಚ್ಛೇದನ ಕೊಡು ಅಂದರೆ 30 ಲಕ್ಷ ಕೊಡಲು ಹೇಳುತ್ತಾಳೆ. ನಾನು ಅಷ್ಟು ದುಡ್ಡನ್ನು ಎಲ್ಲಿಂದ ತರಲಿ ಅನ್ನೋದು ಆ ಬಡಪ್ರಸನ್ನನ ಗೋಳು. ನಾನು ಅವರಿಂದ ಏನನ್ನು ಬಯಸುತ್ತಿಲ್ಲ. ನನಗೆ ವಿಚ್ಛೇದನ ಕೊಟ್ಟು ಸಂಬಂಧದಿಂದ ಮುಕ್ತವಾದರೆ ಸಾಕು ಅನ್ನುವುದಷ್ಟೇ ಪ್ರಸನ್ನನ ಮನವಿಯಾಗಿದೆ. ಇದೇ ಮನವಿಯನ್ನು ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರಲ್ಲಿ ಮೊನ್ನೆ ಮಾಡಿರುವಂತದ್ದು. ಆ ಮನವಿಯನ್ನು ಸ್ವೀಕರಿಸಿದ ಹೆಚ್ ಡಿ ಕುಮಾರಸ್ವಾಮಿ, ನೊಂದು ಬೆಂದಿರುವ ಪ್ರಸನ್ನನನ್ನು ಸಂತೈಸಿ , ನ್ಯಾಯ ಕೊಡಿಸುವ ಭರವಸೆಯನ್ನು ನೀಡಿದ್ದಾರೆ. ಇಲ್ಲಿಗಲ್ ರಿಲೇಶನ್ಶಿಪ್ಗಿಂತ ಅವರಿಬ್ಬರೂ ಒಟ್ಟಾಗಿಯೇ ಇರಲಿ, ನನಗೆ ವಿಚ್ಛೇದನ ಕೊಟ್ಟು ಅವರ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳಲಿ ಅನ್ನೋದು ಪ್ರಸನ್ನನ ಆಗ್ರಹವಾಗಿದೆ. ಅದು ಸರಿಯೂ ಹೌದು. ಒಬ್ಬ ಮಾಜಿ ಶಾಸಕ ತನ್ನ ಪ್ರೇಯಸಿಯನ್ನು  ಜೊತೆಗಿಟ್ಟುಕೊಳ್ಳಬೇಕೆಂಬ ಬಯಕೆ ಇದ್ದಲ್ಲಿ ಅದರಿಂದ ಇನ್ನೊಬ್ಬ ವ್ಯಕ್ತಿಗೆ ಚುತಿ ಬರದ ಹಾಗೆ ನೋಡಿಕೊಳ್ಳಬೇಕು. ಆ ಹೆಂಗಸಿಗೆ ಮಾನವೂ ಇಲ್ಲ ಮರ್ಯಾದೆಯೂ ಇಲ್ಲ.  ಹಾಳಾಗಿ ಹೋಗಲಿ. ಮಾಜಿ ಶಾಸಕರಿಗಾದರೂ ಬುದ್ಧಿ ಬೇಡ್ವಾ? ಹೇಳಿಕೊಳ್ಳಲು ಪ್ರಸನ್ನ ಗಂಡ, ಚಕ್ಕಂದ ಆಡಲಿಕ್ಕೆ ಮಾಜಿ ಶಾಸಕರು ಅನ್ನುವಂತಾಗಿದೆ ಈಗಿನ ಇವರ ಸಂಬಂಧ. ಇದು ಅಕ್ಷಮ್ಯವೂ ಹೌದು . ಪ್ರಸನ್ನ ಹೇಳಿದ್ದೆಲ್ಲವೂ ಸತ್ಯವಾದರೆ, ಮಾಜಿ ಶಾಸಕ ಹಾಗೂ ಆ ಹೇಂಗಸು ಇಬ್ಬರು ಕ್ರಿಮಿನಲ್ ಅಪರಾಧಿಗಳು ಆಗುತ್ತಾರೆ. ಇವರ ವೈಯಕ್ತಿಕ ಜೀವನ ಏನೇ ಇದ್ದರೂ ಅದರಿಂದ ಇನ್ನೊಬ್ಬರ ಮನಸ್ಸಿಗೆ ಘಾಸಿಯಾಗಬಾರದು ಅಷ್ಟೇ ಅನ್ನುತ್ತಿದ್ದಾರೆ ಮಂಡ್ಯದ ಸಾರ್ವಜನಿಕರು.

COMMENTS

Login with Gmail to comment

ಇನ್ನಷ್ಟು ಸುದ್ದಿ

ವೆಟ್-ವೆಲ್‌ಗಳ ಕಳಪೆ ನಿರ್ವಹಣೆಚರಂಡಿ-ಬಾವಿಗಳಿಗೆ ಡ್ರೈನೇಜ್ ನೀರು..
ರಾಜ್ಯದ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಾಗಿ ಉನ್ನತೀಕರಿಸಲು 3900 ಕೋಟಿ ಮೀಸಲು
ಉದ್ಯಮಿ, ಕಾಲೇಜ್ topper,  ಕೋಟ್ಯದೀಶರೇ…ಕಠಿಣ ಜೈನ ಸನ್ಯಾಸದತ್ತ…!
ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡಿಪಾರು ಆದೇಶ….
ಸುರತ್ಕಲ್ ಹುಡುಗಿ ವಿಚಾರದಲ್ಲಿ ಹಲ್ಲೆ
ಬ್ರಹ್ಮಾವರ, ಮಂದಾರ್ತಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಹೇಳೋರು ಕೇಳೋರು ಯಾರು ಇಲ್ವಾ?
ಜನರ ಹಾಹಾ ಕಾರಕ್ಕೆ ಬೆಚ್ಚಿಬಿದ್ದ ಸರ್ಕಾರ –  ಎಸ್ಮ ಕಾಯ್ದೆ ಜಾರಿಗೆ
ಆರೋಪಿ ಸಮೀರ್ ಮುಲ್ಲಾ ಸ್ಫೋಟಕ ಹೇಳಿಕೆ-ಖುಷಿ ಒಳ್ಳೆ ಹುಡುಗಿ-🔥 ಹುಬ್ಬಳ್ಳಿ ಲವ್ ಜಿಹಾದ್ ಅಲ್ಲ ಎಂದ ಪೊಲೀಸರು : ಇದೀಗ ಹೊಸ ಟ್ವಿಸ್ಟ್!
ವಿಶ್ವಸಂಸ್ಥೆಗೆ ಜೀವ ಬಂತು ನೋಡಿ…
ತಪ್ಪೊಪ್ಪಿಕೊಂಡ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಆರೋಪಿ ಶಾರೀಕ್…!ಶಿಕ್ಷೆ ಏನು?
ಕಳುವಾದ ವಾಹನ ಸಮೇತ ಕಳ್ಳರ ಬಂಧನ…!
ಸುಳ್ಯದಲ್ಲಿ ಚಿನ್ನಾಭರಣ ಕಳವು,  ಮಹಿಳೆಯ ಮೇಲೆ ಶಂಕೆ
ಬೇಕಾದಾಗ, ಬೇಕಾದಂಗೆ ಸಂವಿಧಾನದ ಜಪ
ದೊಡ್ಡ ಮಿಕವನ್ನೇ ಬಲೆಗೆ ಹಾಕಿದ  ಲೋಕಾಯುಕ್ತ ಪೊಲೀಸರು 
ಶಿರಸಿ ಮಾರಿಯಮ್ಮನ ಜಾತ್ರೆ ಪ್ರಾರಂಭ
ಘರ್ ವಾಪ್ಸಿ ಯಾದ ಯೋಗೇಶ್ ಶೆಟ್ಟಿ ಜೆಪ್ಪು
ಸುಬ್ರಹ್ಮಣ್ಯದಲ್ಲಿ ಭಟ್ಟರಿಗೆ ದಕ್ಷಿಣೆ ಕೊಡುವoತಿಲ್ಲ- ಸಿಟ್ಟಿಗೆಳುತ್ತಿರುವ ಪುರೋಹಿತರು
ಮನೆಗಣತಿ ಮಂಗಳೂರು ಮಹಾನಗರ ಪಾಲಿಕೆ-ಸ್ಪೀಕರ್ ಯು ಟಿ ಖಾದರ್ ಚಾಲನೆ
Top 5, ಹೆಚ್ಚು ಅನುದಾನ ಪಡೆದ ಇಲಾಖೆಗಳು ಯಾವವು ಗೊತ್ತಾ?
ಮನೆಯ ಮೇಲೆ ಪೊಲೀಸರ  ದಾಳಿ  ಮಾರಾಟಕ್ಕೆ ಇಡಲಾದ ಮಾದಕ ವಸ್ತು ಹಾಗೂ ಮಾರಕ ಆಯುಧ ವಶ
Online payments ಹೊಸ ಸುರಕ್ಷತಾ ನಿಯಮಗಳು: ನಿಮ್ಮ ಹಣಕ್ಕೆ ‘ಅದೃಶ್ಯ ಕವಚ’
ರಾಜಕೀಯ ಸುದ್ದಿ ಅಂದರೆ ಬೋರ್ ಅಂತ ಅನ್ನಿಸುವರಿಗೆ ಇದು ಒಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಎಪಿಸೋಡ್!!!
ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿ ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕೊನೆಗೂ ಪತ್ತೆ ಹಚ್ಚಲಾಗಿದೆ.
ಗೃಹ ಸಚಿವರಾದ ಜಿ ಪರಮೇಶ್ವರ್ ರವರ ಒಡೆತನದ ಸಂಸ್ಥೆಯಲ್ಲಿ ನಡೆದಿದೆ ಎಂಬ ವಿಡಿಯೋ ವೈರಲ್….!
ದೇವಳದ ಗೋಲ್ಮಾಲ್ ತಡೆಗೆ ಉಪ-ಮುಖ್ಯಮಂತ್ರಿ ಬುಲಾವ್!
ನೇತ್ರಾವತಿಯ ಬಂಗ್ಲೆಗುಡ್ಡೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ….
50 ಸಾವಿರ ಸಾಲಕ್ಕೆ ಸವಣೂರು ಪೇಟೆಯಲ್ಲಿ ರಕ್ತಸಿಕ್ತ ಘರ್ಷಣೆ ..
ತಪ್ಪುಅರ್ಥಕ್ಕೆಕ್ಷಮೆ, ಹೊಸರೂಪದಲ್ಲಿಮತ್ತೆ ‘ಸರ್ಸೆಸೆರಗು’”-ಪ್ರೇಮ್
ಭೀಕರ ಅಪಘಾತ ಮಹಿಳೆ ಬಲಿ
ಬೆಳ್ತಂಗಡಿ ಸ್ನಾನಕ್ಕೆ ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು…