📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಬೇಕಾದಾಗ, ಬೇಕಾದಂಗೆ ಸಂವಿಧಾನದ ಜಪ

ರಾಜ್ಯಪಾಲರು

ವರ್ಷದ ಮೊದಲ ಕಲಾಪಕ್ಕೆ ರಾಜ್ಯಪಾಲರ ಆಗಮನ ಹಾಗೂ ಜಂಟಿ ಅಧಿವೇಶನದ ಭಾಷಣವು ತತ್ಸಸಂಪ್ರದಾಯ. ಆ ಒಂದು ಸಂಪ್ರದಾಯವನ್ನು ಮುರಿದು ಹಾಕುವ ನಿಟ್ಟಿನಲ್ಲಿ ಸಾಗಲು ಅಡಿಗಲ್ಲನ್ನು ಇಟ್ಟಿದ್ದಾರೆ ಎನ್ನುವುದು  ಇತ್ತೀಚಿಗಿನ ದಿನದಲ್ಲಿನ ಕೆಲವು ಘಟನೆಗಳಿಂದ ನೇರಾನೇರವಾಗಿ ಕಾಣಲು ಸಾಧ್ಯವಾಗುತ್ತಿದೆ. ಕರ್ನಾಟಕದ ವಿಧಾನ ಮಂಡಲ ಜಂಟಿ ಅಧಿವೇಶನವು ಜನವರಿ 22ರಂದು ನಡೆಯಿತು. ಅಲ್ಲಿ ಗೊಂದಲವಾಯಿತು, ವಿವಾದದ ಕಾವು ಎದ್ದಿತು, ರಾಷ್ಟ್ರಮಟ್ಟದಲ್ಲಿ ಈ ವಾರಕ್ಕೆ ಆಗುವಷ್ಟು ಬಿಸಿಬಿಸಿ ಚರ್ಚೆಗೆ ಕಾರಣವೂ ಆಯಿತು. ಅನವಶ್ಯಕವಾದಂತಹ ವಿವಾದ ಇದು. ಎರಡು ಕಡೆಯಿಂದಲೂ ನಡೆದ ತಪ್ಪು ಮತ್ತು, ತಮ್ಮದೇ ನಡೆಯಬೇಕೆಂಬ ಹಠದ ಕಾರಣಕ್ಕೆ ಕರ್ನಾಟಕದ ವಿಧಾನಸಭೆಯ ವಿಚಾರ ರಾಷ್ಟ್ರದಲ್ಲಿ ಕಪ್ಪು ಲೈನಿನಲ್ಲಿ ಚರ್ಚೆಯಾಗಲು ಕಾರಣವಾಗಿದೆ.

ಪ್ರತಿ ವರ್ಷ ನಡೆಯುವ ಜಂಟಿ ಅಧಿವೇಶನದ ಭಾಷಣವನ್ನು ಸನ್ಮಾನ್ಯ ರಾಜ್ಯಪಾಲರು, ಸರ್ಕಾರ ಬರೆದುಕೊಟ್ಟಿರುವುದನ್ನೇ, ಓದುವುದು ಸಾಮಾನ್ಯವಾದಂತಹ ಪ್ರಕ್ರಿಯೆ ಮತ್ತು ಹಿಂದಿನಿಂದಲೂ ನಡೆದುಕೊಂಡು ಬಂದಂತಹ ಪದ್ಧತಿ. ಸರ್ಕಾರವು ತನ್ನ ಆಡಳಿತದ ಕಾರ್ಯವೈಖರಿಯನ್ನು, ತನ್ನ ಅಭಿವೃದ್ಧಿಯ ಯೋಜನೆಯನ್ನು ಈ ಸಂದರ್ಭದಲ್ಲಿ ಆ ಒಂದು ಭಾಷಣದಲ್ಲಿ ಸೇರಿಸುವುದು ಮತ್ತು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವುದಕ್ಕೆ ರಾಜ್ಯಪಾಲರ ಮೂಲಕ ಭಾಷಣವನ್ನು ಮಾಡಿಸುವ ಪರಿಪಾಠ ಮೊದಲಿಂದಲೂ ರೂಢಿಯಲ್ಲಿದೆ. ಅದು ಸರಿ ತಪ್ಪು ಅನ್ನುವುದು ಬೇರೆ ವಿಚಾರ. ಆದರೆ ರಾಜ್ಯಪಾಲರು ಕೇಂದ್ರದಿಂದ ನೇಮಕರಾಗಿ ಬರುವಂತವರು. ಅವರ ಬಾಯಿಂದ ಕೇಂದ್ರ ಸರ್ಕಾರದ ನಡೆ ಹಾಗೂ ಯೋಜನೆಯನ್ನು ವಿರೋಧಿಸುವ ಹಠಕ್ಕೆ ರಾಜ್ಯ ಸರ್ಕಾರ ಬಿದ್ದರೆ, ಇನ್ನೇನು ಆದಿತು?

ಸರ್ಕಾರ ಯಾವುದೇ ಪಕ್ಷದ್ದಿರಲಿ, ಸದ್ಯಕ್ಕೆ ಕೇಂದ್ರದಲ್ಲಿ ಬಿಜೆಪಿಯ ಸರ್ಕಾರವಿದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ವಯಕ್ತಿಕ ಹೋಯ್ದಾಟ ಮತ್ತು ಹಾವು ಮುಂಗಿಸಿ ಆಟಕ್ಕೆ ರಾಜ ಭವನವನ ಬಳಕೆಯಾಗುತ್ತಿರುವುದು ದುರದಷ್ಟಕರ ವಿಚಾರ. ಜನವರಿ 22ರ ಜಂಟಿ ಅಧಿವೇಶನದ ರಾಜ್ಯಪಾಲರ ಭಾಷಣದಲ್ಲಿ ಏನೆಲ್ಲಾ ಇರಲಿದೆ ಎಷ್ಟು ಪುಟಗಳಿವೆ ಎಲ್ಲವೂ ಮೊದಲಿಗೆ ಗೊತ್ತಿತ್ತು. ಅದರಲ್ಲಿನ 11 ಅಂಶಗಳನ್ನು ರಾಜ್ಯಪಾಲರಾದ ತಾವರ್ಚಂದ್ ಗೆಲ್ಲೋಟ್ ಅವರು ತೆಗೆದುಹಾಕಿ ಎಂದು ಸರ್ಕಾರದ ಅಧಿಕೃತ ವಕ್ತಾರರಿಗೆ ತಿಳಿಸಿದರಂತೆ. ಅದಕ್ಕೆ ಸರ್ಕಾರವು ಚಾನ್ಸೇ ಇಲ್ಲ ಅನ್ನುವಂತೆ ನಡೆದುಕೊಂಡಿತು.

ಪರಿಣಾಮ ರಾಜ್ಯಪಾಲರು ಸಮಯಕ್ಕೆ ಸರಿಯಾಗಿ ವಿಧಾನಸಭೆಯ ಅಧಿವೇಶನದ ಹಾಲ್ ಗೆ ಬರುತ್ತಾರೆ. ಅವರನ್ನು ಕ್ರಮಬದ್ಧವಾಗಿ ಸಂಪ್ರದಾಯದಂತೆಯೇ ಸ್ವಾಗತಿಸಲಾಗುತ್ತದೆ. ಇದೆಲ್ಲವೋ ಸುಗಮವಾಗಿ ನಡೆದಿದೆ. ಸದನದಲ್ಲಿ ಒಂದೇ ಮಾತರಂ ಗೀತೆಯು ಮೊಳಗಿದೆ.  ನಂತರ ರಾಜ್ಯಪಾಲರು ಎಲ್ಲರಿಗೂ ನನ್ನ ನಮಸ್ಕಾರ ಅಂತ ಭಾಷಣವನ್ನು ಶುರು ಮಾಡಿದ್ದ ಕೆಲವೇ ಸೆಕೆಂಡುಗಳಲ್ಲಿ ನಾಲ್ಕೈದು ಶಬ್ದಗಳನ್ನಷ್ಟೇ ಓದಿ ಜೈ ಹಿಂದ್ ಅಂತ ಭಾಷಣವನ್ನು ಮುಗಿಸುತ್ತಾರೆ. ಹಾಗೆ ಭಾಷಣವನ್ನು ಮುಗಿಸಿ ಎದ್ದು ಹೊರ ನಡೆಯುತ್ತಾರೆ.

ಈ ಸಂದರ್ಭದಲ್ಲಿ ರಾಜ್ಯಪಾಲರು ಸರ್ಕಾರ ಬರೆದುಕೊಟ್ಟ ಭಾಷಣವನ್ನು ಸಂಪೂರ್ಣವಾಗಿ ಓದಿಲ್ಲ ಎಂಬ ಕಾರಣಕ್ಕೆ ಆಡಳಿತ ಪಕ್ಷದ ಸದಸ್ಯರುಗಳಲ್ಲಿ ಕೆಲವರು ಅತಿರೇಕವಾಗಿ ನಡೆದುಕೊಂಡದ್ದು ಸುಳ್ಳಲ್ಲ. ರಾಜ್ಯಪಾಲರ ನಡೆಯನ್ನು ವಿರೋಧಿಸುವ ಬರದಲ್ಲಿ, ಅವರಿಗೆ ತಮ್ಮ ಪ್ರತಿಭಟನೆಯನ್ನು ತೋರಿಸುವ ಭರದಲ್ಲಿ ವ್ಯಕ್ತಪಡಿಸಿದ ಕೆಲವು ಸಂಜ್ಞೆಗಳು ಅಸಂಪ್ರದಾಯಕವಾಗಿತ್ತು ಮತ್ತು ಅದು ಆಡಳಿತ ಪಕ್ಷಕ್ಕೆ ಶೋಭೆ ತರುವ ರೀತಿಯಲ್ಲಿ ಇರಲಿಲ್ಲ.

ಖಂಡಿತವಾಗಿಯೂ ಆಡಳಿತ ಪಕ್ಷಕ್ಕೆ ತನ್ನ ಸರ್ಕಾರದ ನೀತಿ ರೀತಿ ನಡೆ ಎಲ್ಲವನ್ನು ಗಟ್ಟಿಯಾಗಿ ಹೇಳುವ ಹಕ್ಕು ಇದೆ ಅದರಲ್ಲಿ ಎರಡು ಮಾತೇ ಇಲ್ಲ. ಆದರೆ ಇಲ್ಲಿ ರಾಜ ಭವನದ ಜೊತೆ ಬಹಿರಂಗವಾಗಿ ಕಿತ್ತಾಟ ನಡೆಸುವಂಥದ್ದು ಯಾವುದೇ ಸರ್ಕಾರಕ್ಕೂ ಶೋಭೆಯಲ್ಲ. ಹಾಗೆಯೇ ರಾಜ್ಯಪಾಲರು ಸಹ ತಮ್ಮ ಕುರ್ಚಿಯ ಘನತೆಯನ್ನು  ಕುಂದಿಸುವ ಪ್ರೀತಿಯಲ್ಲಿ ನಡೆದುಕೊಳ್ಳುವುದು ಅಕ್ಷಮ್ಯವೂ ಹೌದು. ಯಾವುದೇ ಸರ್ಕಾರ ಇರಲಿ, ಸರ್ಕಾರ, ರಾಜ್ಯಭವನ, ಕೇಂದ್ರ ಸರ್ಕಾರ, ರಾಷ್ಟ್ರಪತಿ ಭವನ ಇದೆಲ್ಲವುದರ ಜೊತೆಯೂ ನಿಕಟ ವಾದಂತಹ ಬಾಂಧವ್ಯ ಆರೋಗ್ಯಕರವಾದಂತಹ ಹೆಜ್ಜೆ ಹೊಂದಿರಬೇಕು. ಆದರೆ ಇತ್ತೀಚೆಗಿನ ದಿನದಲ್ಲಿ ಆಗುತ್ತಿರುವುದೇ ಬೇರೆ. ಈ ಹಿಂದೆ ಪಂಜಾಬ್ ರಾಜ್ಯದಲ್ಲಿ ರಾಜ್ಯಪಾಲರು ಮತ್ತು ಅಲ್ಲಿನ ಸರ್ಕಾರದ ನಡುವೆ ನಡೆದ ಬಹಿರಂಗ ಕದನವು ನ್ಯಾಯಾಲಯದ ಮೆಟ್ಟಿಲನ್ನು ಹತ್ತಿತ್ತು. ಅವತ್ತು ನ್ಯಾಯಾಲಯದಲ್ಲಿ ಕೂಡ ರಾಜ್ಯಪಾಲರಿಗೆ ಇರಿಸು ಮುರು ಸಾಗುವಂತಹ ಆರ್ಡರ್ ಬಂದಿತ್ತು. ಅದೇ ರೀತಿ ಪಕ್ಕದ ತಮಿಳ್ ನಾಡು ಮತ್ತು ಕೇರಳದಲ್ಲೂ, ಅಲ್ಲಿನ ಸರ್ಕಾರ ಹಾಗೂ ರಾಜಭವನದ ನಡುವೆ ಸಮರ ವೇರ್ಪಟ್ಟಿತ್ತು. ಈಗ ಕರ್ನಾಟಕದಲ್ಲೂ ಅದೇ ರೀತಿಯ ಸಮರ ಕಾಣಿಸಿಕೊಂಡಿದೆ. ಈ ಸಮರವನ್ನು ರಾಜ್ಯ ಸರ್ಕಾರವು ಈಜಿಯಾಗಿ ತಟಸ್ಥ ಗೊಳಿಸಬಹುದಿತ್ತು. ಆದರೆ ಸರ್ಕಾರವು ಹಠಕ್ಕೆ ಬಿದ್ದು ವಿವಾದಕ್ಕೆ ತುಪ್ಪ ಸುರಿತು ಅಂದ್ರೆ ತಪ್ಪಿಲ್ಲ. ರಾಜ್ಯಪಾಲರು ಜಂಟಿ ಅಧಿವೇಶನಕ್ಕೆ ಬಾರದೇ ಇದ್ದಿದ್ದರೆ ಅದು ಅಕ್ಷಮ್ಯ ಅಂತ ಅನ್ನಿಸಿಕೊಳ್ಳುತ್ತಿತ್ತು. ಆದರೆ ಅವರು ಆಗಮಿಸಿ  ಸರ್ಕಾರವು ಬರೆದುಕೊಟ್ಟ  ಭಾಷಣದಲ್ಲಿ ಕೇವಲ ಎರಡು ಸಾಲನ್ನಷ್ಟೇ ಓದಿ ಕೈ ಮುಗಿದು ಹೊರಟುಬಿಟ್ಟರು. ಆದರೆ ರಾಜ್ಯಪಾಲರು ಒಂದು ಅಕ್ಷರ ಓದಿದರೂ ಸಹ ಆ ಒಂದು ಭಾಷಣದ ಪ್ರತಿಯನ್ನು ರಾಜ್ಯಪಾಲರು ಓದಿದ ಹಾಗೆಯೇ ಅನ್ನುವುದು ಪ್ರತಿತಿ. ಹಾಗಾಗಿ ಸರ್ಕಾರವು ಬರೆದುಕೊಟ್ಟ ಭಾಷಣವು ಆಗಲೇ ಅಕ್ಸೆಪ್ಟೆಬಲ್ ಆಗಿದೆ ಹೀಗಿರುವಾಗ ರಾಜ್ಯಪಾಲ ರೊಟ್ಟಿಗೆ ಸರ್ಕಾರದ ಭಾಗವಾಗಿದ್ದುಕೊಂಡು ಗುದ್ದಾಟಕ್ಕಿಳಿಯುವ ಅಗತ್ಯತೆ ಇತ್ತೆ, ಎಂಬುದು ಪ್ರಶ್ನೆ.

ಈ ಹಿಂದೆ ಹಂಸರಾಜ್ ಭಾರದ್ವಾಜ್ ರಾಜ್ಯಪಾಲರಾಗಿದ್ದಾಗಲೂ ಅವತ್ತಿನ ಯಡಿಯೂರಪ್ಪ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಾಕಷ್ಟು ಬಿಸಿಬಿಸಿ ವಾತಾವರಣ ಸೃಷ್ಟಿಯಾಗಿತ್ತು. ಅವತ್ತಿನ ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರ್ಕಾರವು ಭಾರದ್ವಾಜ್ ಅವರ ಮೂಲಕ ರಾಜ್ಯ ಸರ್ಕಾರವನ್ನು ನಿಯಂತ್ರಿಸಲು ಪ್ರಯತ್ನ ನಡೆಸಿದ್ದು ಸುಳ್ಳಲ್ಲ. ಈಗ ಅದೇ ಕೆಲಸವು ಈಗ  ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರದ ಕಡೆಯಿಂದ ಆಗುತ್ತಿರಬಹುದು. ಅವತ್ತಿಂದು ಅಂದರೆ ಹಂಸರಾಜ್ ಭಾರದ್ವಾಜ್ ರವರ ನಡೆ ಎಷ್ಟು ತಪ್ಪು ಅಂತ ಹೇಳಲಾಗುತ್ತದೆಯೋ ಅಷ್ಟೇ ತಪ್ಪು ತವಾರ್ ಚಂದೆಲೋಟ್ರವರ ನಡೆ ಅಂತಲೂ ಹೇಳಬೇಕಾಗುತ್ತದೆ. ಆದರೆ ಆವತ್ತು ಯಡಿಯೂರಪ್ಪ ಸರ್ಕಾರ ತೀರ ಈ ಮಟ್ಟಕ್ಕೆ ಅಗೌರವ ಕೊಟ್ಟಿರಲಿಲ್ಲವೇನೋ. ಬಿಕೆ ಹರಿಪ್ರಸಾದ್ ರಂತಹ ಹಿರಿಯ ನಾಯಕರು ನಡೆದುಕೊಂಡ ರೀತಿಯು ಅವರ ಹಿರಿತನಕ್ಕೆ ಯೋಗ್ಯವಾಗಿರಲಿಲ್ಲ. ಸದನದ ಎಲ್ಲಾ ಕಿರಿಯ ಸದಸ್ಯರುಗಳಿಗೆ ಮಾದರಿ ಯಾಗಿ ಇರಬೇಕಾಗಿದ್ದ ಹರಿಪ್ರಸಾದರು ತೀರ ಈ ಮಟ್ಟದಲ್ಲಿ ಕಾಣಿಸಿಕೊಳ್ಳಬಾರದಿತ್ತು ಏನಂತೀರಿ?

-ದತ್ತು

COMMENTS

Login with Gmail to comment

ಇನ್ನಷ್ಟು ಸುದ್ದಿ

Political Heatwave 2026:ದಕ್ಷಿಣದಲ್ಲಿ ಅಧಿಕಾರ ಆಟ, ಅಸ್ಸಾಂನಲ್ಲಿ ಅಬ್ಬರ..!
🚨 ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ – ಕಟಪಾಡಿ ರಾಷ್ಟ್ರೀಯ ಹೆದ್ದಾರಿ ಅಪಘಾತ
ಕನ್ನಡ ಫಿಲಂ ಇಂಡಸ್ಟ್ರಿ ಮರ್ಯಾದೆ “ಒಂದು ಬಾಟ್ಲು ಸಾರಾಯಿ, ಒಂದು ಚಮಚ ಉಪ್ಪಿನ ಕಾಯಿಗೆ”ಆನ್‌ಲೈನ್‌ನಲ್ಲಿ (Online) ಹರಾಜು..!
ಬ್ರಹ್ಮಾವರ ಅಪಾರ್ಟ್‌ಮೆಂಟ್ ರೂಮಿನಲ್ಲಿ ಯುವತಿಯ ನಿಗೂಢ ಸಾವು
ಬೆಳ್ಳಂಬೆಳಗ್ಗೆ ಸಿದ್ದರಾಮಯ್ಯ ಮನೆಗೆ ಡಿ.ಕೆ. ಶಿವಕುಮಾರ್ ಸರ್ಪ್ರೈಸ್ ವಿಸಿಟ್!
ಜಗಳ ನಿಲ್ಲಿಸಲು ಹೋದವನ ಜೀವ ಹರಣ: ಮಾನವೀಯತೆ ಕುಸಿದರೆ ಸಮಾಜದ ನೆಮ್ಮದಿ ಎಲ್ಲಿ?”
ಮೇ 20ರ ಬಸ್ ಸ್ಟ್ರೈಕ್‌ಗೆ ಹೈಕೋರ್ಟ್ ಬ್ರೇಕ್..! KSRTC-BMTC ಬಸ್‌ಗಳು ನಿಲ್ಲೋದಿಲ್ಲ! ಹೈಕೋರ್ಟ್ ಮಹತ್ವದ ಆದೇಶ..
ಮಂಗಳೂರಿಗರಿಗೆ ಎಚ್ಚರಿಕೆ: ನೀರನ್ನು ಜಾಣ್ಮೆಯಿಂದ ಬಳಸಿ –ಮಾರ್ಚ್ ನಲ್ಲೇ ರೇಷನಿಂಗ್ ಮಾಡುವ ಪರಿಸ್ಥಿತಿ ಇದೆ…
₹1270 ಕೋಟಿ ಕಾನ್ಟ್ರಾಕ್ಟ್ ಹಗರಣ -CM ಖಾಂಡು ಕುಟುಂಬ ವಿಚಾರಣೆ-ಸುಪ್ರೀಂಕೋರ್ಟ್ ಸಿಬಿಐಗೆ ಆದೇಶ..
ಗಂಜಿಮಠದತ್ತಿರ ಕಣ್ಣಿಗೆ ಖಾರದ ಪುಡಿ ಎರಚಿ ಹಣ ದೋಚಿ ಪರಾರಿಯಾದ ಆರೋಪಿಗಳು ರಸ್ತೆ ಮಧ್ಯೆ ಯೋಜಿತ ದರೋಡೆ …!
ಭೋಪಾಲ್ ತ್ವಿಷಾ ಶರ್ಮಾ ಪ್ರಕರಣ ಪೋಷಕರ ಪಟ್ಟು-ಅಂತ್ಯಕ್ರಿಯೆ ಮಾಡುವುದಿಲ್ಲ “ನ್ಯಾಯ ಸಿಗುವವರೆಗೂ ನಾವು ದೇಹವನ್ನು ಸ್ವೀಕರಿಸುವುದಿಲ್ಲ” 
ತಿರುಮಲ ತಿಮ್ಮಪ್ಪನ 3,550 ಮೆಟ್ಟಿಲು ಹತ್ತಿದ 116 ವರ್ಷದ ನವನೀತಮ್ಮ ಕರ್ನಾಟಕದ ಶತಾಯುಷಿ!
“ಅಮ್ಮ”ನ ಕಾರ್ಯಕ್ರಮದಲ್ಲಿ  ಕೇಂದ್ರ ಸಚಿವರಿಂದ ರಾಜಕೀಯ ಭಾಷಣ
ಸಂಸತ್ತಿನಲ್ಲಿ ಇತಿಹಾಸ ಸೃಷ್ಟಿಸುವ ಚರ್ಚೆ-ಮಹಿಳಾ ಮೀಸಲು ಬಿಲ್ಲಿನ ಸುತ್ತ ಕಂಗೊಳಿಸಿದ ಸಂಸತ್ !
sdfdf
ಮೂರನೇ ಮಹಾಯುದ್ಧದ ಭೀತಿ: ಇರಾನ್ ಹೊಸ ನಾಯಕನಾಗಿ ಮೊಜ್ತಬಾ ಖಮೇನಿ –ನೂತನ ನಾಯಕನಿಗೆ ರಷ್ಯಾ, ಚೀನಾ ಬೆಂಬಲ
ಗ್ಯಾಸ್ ಪೈಪ್‍ಲೈನ್ ಸೋರಿಕೆ: ಅಣಕು ಪ್ರದರ್ಶನ
ಗೃಹಲಕ್ಷ್ಮಿ ಫಲಾನುಭವಿಗಳೇ ಗಮನಿಸಿ: ಹಣ ಕ್ರೆಡಿಟ್ ಆಗ್ಬೇಕಾದ್ರೆ ಇನ್ಮುಂದೆ ಬಯೋಮೆಟ್ರಿಕ್ ಕಡ್ಡಾಯ!
ದೇವಳದ ಗೋಲ್ಮಾಲ್ ತಡೆಗೆ ಉಪ-ಮುಖ್ಯಮಂತ್ರಿ ಬುಲಾವ್!
ಕಪ್ಪೆ ಚಿಪ್ಪು ದುರಂತಕ್ಕೆ ಮತ್ತೆರಡು ಜೀವ ಬಲಿ, ಬಲಿಯ ಸಂಖ್ಯೆ ಏರುವ ಸಾಧ್ಯತೆ
“ಪ್ರಜಾಪ್ರಭುತ್ವದ ಮೇಲೆ ದಾಳಿ”ಸುಪ್ರೀಂ ಕೋರ್ಟ್ ಕಿಡಿ: ಇದು ಪ್ರತಿಭಟನೆ ಅಲ್ಲ, ಸಂಚು!”
ಬಿಜೆಪಿಯನ್ನು ಹಿಂದಿಕ್ಕಿದ   ಜಿರಳೆ ಪಕ್ಷ..”ಕಾಕ್ರೋಚ್ ಜನತಾ ಪಾರ್ಟಿ”
AAP ಸದ್ದು ಮಂಗಳೂರಲ್ಲೂ! ಜನರ ಸಮಸ್ಯೆಗೆ ನೇರ ಹೋರಾಟ
“ವಿ ದಿ ಲೀಡರ್ಸ್”ಅಣ್ಣಾಮಲೈ ಮಾಸ್ಟರ್ ಪ್ಲಾನ್!ಸಿನಿಮಾ ವರ್ಚಸ್ಸಿನ ಟಿವಿಕೆ (TVk) ಯನ್ನ ಮಕಾಡೆ ಮಲಗಿಸಲು ಸಜ್ಜಾಗ್ತಾ ಇದೆಯಾ..?
ಜೀತಕ್ಕಿಟ್ಟುಕೊಂಡು ದರ್ಬಾರ್ ನಡೆಸುತ್ತಿದ್ದ ರಜನಿಶೆಟ್ಟಿಯ ಬಂಧನ
ಮುಂಜಾನೆ ಹೊತ್ತಿ ಉರಿದ ಆಸ್ಪತ್ರೆ…ಜೀವ ಉಳಿಸಿಕೊಳ್ಳಲು ರೋಗಿಗಳ ಪರದಾಟ.ಬಿಹಾರದಲ್ಲಿ ಹೃದಯವಿದ್ರಾವಕ ಘಟನೆ.
17 ವರ್ಷದ ಯುವಕ ಸಂಸತ್ತಿನ ಕದ ತಟ್ಟಬಲ್ಲ ಎಂದಾದರೆ, ನಿಮ್ಮ ಧ್ವನಿಗೆ ಎಷ್ಟು ಶಕ್ತಿಯಿದೆ ಯೋಚಿಸಿ!..ವ್ಯವಸ್ಥೆಯ ಲೋಪದ ವಿರುದ್ಧ ಧ್ವನಿ ಎತ್ತದಿದ್ದರೆ ಬದಲಾವಣೆ ಸಾಧ್ಯವಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಕಮೆಂಟ್ ಗಳನ್ನು ಹಾಕಿದ ಆರೋಪಿಯ ಬಂಧನ
ಎಥೆನಾಲ್ ಮಿಶ್ರಿತ ಇಂಧನದಿಂದ ವಾಹನಗಳಿಗೆ ಸಮಸ್ಯೆ ಇಲ್ಲ – ನಿತಿನ್ ಗಡ್ಕರಿ
ಬೆಂಗಳೂರಿನಲ್ಲಿ ಉದ್ಯಮಿಯ₹1.9 ಕೋಟಿ ದರೋಡೆ:ಬೆಚ್ಚಿಬೀಳಿಸಿದ ಥ್ರಿಲ್ಲರ್ ಸಿನಿಮಾವನ್ನೇ ಮೀರಿಸಿದ ಸಸ್ಪೆನ್ಸ್!
ಮುಂಬೈ ಬೀದಿಯಲ್ಲಿ ನಾರಿ ಶಕ್ತಿಯ ಸಿಡಿಲು!ಜನರ ಬದುಕು ಅಡ್ಡಗಟ್ಟಿದರೆ ಎದುರಿಸುವವರು ಹೀಗೆ ಒಬ್ಬೊಬ್ಬರೇ ಇನ್ನೂ ಹುಟ್ಟುತ್ತಾರೆ..