📍 Karavali Maruta
  • LOGIN
  • BREAKING
    ‘ಮೇಡ್ ಇನ್ ಮಂಗಳೂರು’ ಹಡಗು ಜರ್ಮನ್ ಸಂಸ್ಥೆಯ ತೆಕ್ಕೆಗೆ; ವಿಶ್ವದ ಗಮನ ಸೆಳೆದ ಚೌಗುಲೆ ಶಿಪ್‌ಯಾರ್ಡ್! ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ ದಯಾಮರಣ ಕೇಳಿದ್ದ ತುಮಕೂರು ರಾಬಿಯಾ ಇನ್ನಿಲ್ಲ …!ಪರಮೇಶ್ವರ್ ಮುಂದೆ ಕಣ್ಣೀರಿಟ್ಟಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ವಿಷಸೇವಿಸಿ ಕೊನೆಯುಸಿರು…‘ಮನೆ’ ಸಿಕ್ಕರೂ ಬದುಕು ಉಳಿಯಲಿಲ್ಲ! ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್! ಮಹಿಳಾ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ
    ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಬೇಕಾದಾಗ, ಬೇಕಾದಂಗೆ ಸಂವಿಧಾನದ ಜಪ

    ರಾಜ್ಯಪಾಲರು

    ವರ್ಷದ ಮೊದಲ ಕಲಾಪಕ್ಕೆ ರಾಜ್ಯಪಾಲರ ಆಗಮನ ಹಾಗೂ ಜಂಟಿ ಅಧಿವೇಶನದ ಭಾಷಣವು ತತ್ಸಸಂಪ್ರದಾಯ. ಆ ಒಂದು ಸಂಪ್ರದಾಯವನ್ನು ಮುರಿದು ಹಾಕುವ ನಿಟ್ಟಿನಲ್ಲಿ ಸಾಗಲು ಅಡಿಗಲ್ಲನ್ನು ಇಟ್ಟಿದ್ದಾರೆ ಎನ್ನುವುದು  ಇತ್ತೀಚಿಗಿನ ದಿನದಲ್ಲಿನ ಕೆಲವು ಘಟನೆಗಳಿಂದ ನೇರಾನೇರವಾಗಿ ಕಾಣಲು ಸಾಧ್ಯವಾಗುತ್ತಿದೆ. ಕರ್ನಾಟಕದ ವಿಧಾನ ಮಂಡಲ ಜಂಟಿ ಅಧಿವೇಶನವು ಜನವರಿ 22ರಂದು ನಡೆಯಿತು. ಅಲ್ಲಿ ಗೊಂದಲವಾಯಿತು, ವಿವಾದದ ಕಾವು ಎದ್ದಿತು, ರಾಷ್ಟ್ರಮಟ್ಟದಲ್ಲಿ ಈ ವಾರಕ್ಕೆ ಆಗುವಷ್ಟು ಬಿಸಿಬಿಸಿ ಚರ್ಚೆಗೆ ಕಾರಣವೂ ಆಯಿತು. ಅನವಶ್ಯಕವಾದಂತಹ ವಿವಾದ ಇದು. ಎರಡು ಕಡೆಯಿಂದಲೂ ನಡೆದ ತಪ್ಪು ಮತ್ತು, ತಮ್ಮದೇ ನಡೆಯಬೇಕೆಂಬ ಹಠದ ಕಾರಣಕ್ಕೆ ಕರ್ನಾಟಕದ ವಿಧಾನಸಭೆಯ ವಿಚಾರ ರಾಷ್ಟ್ರದಲ್ಲಿ ಕಪ್ಪು ಲೈನಿನಲ್ಲಿ ಚರ್ಚೆಯಾಗಲು ಕಾರಣವಾಗಿದೆ.

    ಪ್ರತಿ ವರ್ಷ ನಡೆಯುವ ಜಂಟಿ ಅಧಿವೇಶನದ ಭಾಷಣವನ್ನು ಸನ್ಮಾನ್ಯ ರಾಜ್ಯಪಾಲರು, ಸರ್ಕಾರ ಬರೆದುಕೊಟ್ಟಿರುವುದನ್ನೇ, ಓದುವುದು ಸಾಮಾನ್ಯವಾದಂತಹ ಪ್ರಕ್ರಿಯೆ ಮತ್ತು ಹಿಂದಿನಿಂದಲೂ ನಡೆದುಕೊಂಡು ಬಂದಂತಹ ಪದ್ಧತಿ. ಸರ್ಕಾರವು ತನ್ನ ಆಡಳಿತದ ಕಾರ್ಯವೈಖರಿಯನ್ನು, ತನ್ನ ಅಭಿವೃದ್ಧಿಯ ಯೋಜನೆಯನ್ನು ಈ ಸಂದರ್ಭದಲ್ಲಿ ಆ ಒಂದು ಭಾಷಣದಲ್ಲಿ ಸೇರಿಸುವುದು ಮತ್ತು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವುದಕ್ಕೆ ರಾಜ್ಯಪಾಲರ ಮೂಲಕ ಭಾಷಣವನ್ನು ಮಾಡಿಸುವ ಪರಿಪಾಠ ಮೊದಲಿಂದಲೂ ರೂಢಿಯಲ್ಲಿದೆ. ಅದು ಸರಿ ತಪ್ಪು ಅನ್ನುವುದು ಬೇರೆ ವಿಚಾರ. ಆದರೆ ರಾಜ್ಯಪಾಲರು ಕೇಂದ್ರದಿಂದ ನೇಮಕರಾಗಿ ಬರುವಂತವರು. ಅವರ ಬಾಯಿಂದ ಕೇಂದ್ರ ಸರ್ಕಾರದ ನಡೆ ಹಾಗೂ ಯೋಜನೆಯನ್ನು ವಿರೋಧಿಸುವ ಹಠಕ್ಕೆ ರಾಜ್ಯ ಸರ್ಕಾರ ಬಿದ್ದರೆ, ಇನ್ನೇನು ಆದಿತು?

    ಸರ್ಕಾರ ಯಾವುದೇ ಪಕ್ಷದ್ದಿರಲಿ, ಸದ್ಯಕ್ಕೆ ಕೇಂದ್ರದಲ್ಲಿ ಬಿಜೆಪಿಯ ಸರ್ಕಾರವಿದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ವಯಕ್ತಿಕ ಹೋಯ್ದಾಟ ಮತ್ತು ಹಾವು ಮುಂಗಿಸಿ ಆಟಕ್ಕೆ ರಾಜ ಭವನವನ ಬಳಕೆಯಾಗುತ್ತಿರುವುದು ದುರದಷ್ಟಕರ ವಿಚಾರ. ಜನವರಿ 22ರ ಜಂಟಿ ಅಧಿವೇಶನದ ರಾಜ್ಯಪಾಲರ ಭಾಷಣದಲ್ಲಿ ಏನೆಲ್ಲಾ ಇರಲಿದೆ ಎಷ್ಟು ಪುಟಗಳಿವೆ ಎಲ್ಲವೂ ಮೊದಲಿಗೆ ಗೊತ್ತಿತ್ತು. ಅದರಲ್ಲಿನ 11 ಅಂಶಗಳನ್ನು ರಾಜ್ಯಪಾಲರಾದ ತಾವರ್ಚಂದ್ ಗೆಲ್ಲೋಟ್ ಅವರು ತೆಗೆದುಹಾಕಿ ಎಂದು ಸರ್ಕಾರದ ಅಧಿಕೃತ ವಕ್ತಾರರಿಗೆ ತಿಳಿಸಿದರಂತೆ. ಅದಕ್ಕೆ ಸರ್ಕಾರವು ಚಾನ್ಸೇ ಇಲ್ಲ ಅನ್ನುವಂತೆ ನಡೆದುಕೊಂಡಿತು.

    ಪರಿಣಾಮ ರಾಜ್ಯಪಾಲರು ಸಮಯಕ್ಕೆ ಸರಿಯಾಗಿ ವಿಧಾನಸಭೆಯ ಅಧಿವೇಶನದ ಹಾಲ್ ಗೆ ಬರುತ್ತಾರೆ. ಅವರನ್ನು ಕ್ರಮಬದ್ಧವಾಗಿ ಸಂಪ್ರದಾಯದಂತೆಯೇ ಸ್ವಾಗತಿಸಲಾಗುತ್ತದೆ. ಇದೆಲ್ಲವೋ ಸುಗಮವಾಗಿ ನಡೆದಿದೆ. ಸದನದಲ್ಲಿ ಒಂದೇ ಮಾತರಂ ಗೀತೆಯು ಮೊಳಗಿದೆ.  ನಂತರ ರಾಜ್ಯಪಾಲರು ಎಲ್ಲರಿಗೂ ನನ್ನ ನಮಸ್ಕಾರ ಅಂತ ಭಾಷಣವನ್ನು ಶುರು ಮಾಡಿದ್ದ ಕೆಲವೇ ಸೆಕೆಂಡುಗಳಲ್ಲಿ ನಾಲ್ಕೈದು ಶಬ್ದಗಳನ್ನಷ್ಟೇ ಓದಿ ಜೈ ಹಿಂದ್ ಅಂತ ಭಾಷಣವನ್ನು ಮುಗಿಸುತ್ತಾರೆ. ಹಾಗೆ ಭಾಷಣವನ್ನು ಮುಗಿಸಿ ಎದ್ದು ಹೊರ ನಡೆಯುತ್ತಾರೆ.

    ಈ ಸಂದರ್ಭದಲ್ಲಿ ರಾಜ್ಯಪಾಲರು ಸರ್ಕಾರ ಬರೆದುಕೊಟ್ಟ ಭಾಷಣವನ್ನು ಸಂಪೂರ್ಣವಾಗಿ ಓದಿಲ್ಲ ಎಂಬ ಕಾರಣಕ್ಕೆ ಆಡಳಿತ ಪಕ್ಷದ ಸದಸ್ಯರುಗಳಲ್ಲಿ ಕೆಲವರು ಅತಿರೇಕವಾಗಿ ನಡೆದುಕೊಂಡದ್ದು ಸುಳ್ಳಲ್ಲ. ರಾಜ್ಯಪಾಲರ ನಡೆಯನ್ನು ವಿರೋಧಿಸುವ ಬರದಲ್ಲಿ, ಅವರಿಗೆ ತಮ್ಮ ಪ್ರತಿಭಟನೆಯನ್ನು ತೋರಿಸುವ ಭರದಲ್ಲಿ ವ್ಯಕ್ತಪಡಿಸಿದ ಕೆಲವು ಸಂಜ್ಞೆಗಳು ಅಸಂಪ್ರದಾಯಕವಾಗಿತ್ತು ಮತ್ತು ಅದು ಆಡಳಿತ ಪಕ್ಷಕ್ಕೆ ಶೋಭೆ ತರುವ ರೀತಿಯಲ್ಲಿ ಇರಲಿಲ್ಲ.

    ಖಂಡಿತವಾಗಿಯೂ ಆಡಳಿತ ಪಕ್ಷಕ್ಕೆ ತನ್ನ ಸರ್ಕಾರದ ನೀತಿ ರೀತಿ ನಡೆ ಎಲ್ಲವನ್ನು ಗಟ್ಟಿಯಾಗಿ ಹೇಳುವ ಹಕ್ಕು ಇದೆ ಅದರಲ್ಲಿ ಎರಡು ಮಾತೇ ಇಲ್ಲ. ಆದರೆ ಇಲ್ಲಿ ರಾಜ ಭವನದ ಜೊತೆ ಬಹಿರಂಗವಾಗಿ ಕಿತ್ತಾಟ ನಡೆಸುವಂಥದ್ದು ಯಾವುದೇ ಸರ್ಕಾರಕ್ಕೂ ಶೋಭೆಯಲ್ಲ. ಹಾಗೆಯೇ ರಾಜ್ಯಪಾಲರು ಸಹ ತಮ್ಮ ಕುರ್ಚಿಯ ಘನತೆಯನ್ನು  ಕುಂದಿಸುವ ಪ್ರೀತಿಯಲ್ಲಿ ನಡೆದುಕೊಳ್ಳುವುದು ಅಕ್ಷಮ್ಯವೂ ಹೌದು. ಯಾವುದೇ ಸರ್ಕಾರ ಇರಲಿ, ಸರ್ಕಾರ, ರಾಜ್ಯಭವನ, ಕೇಂದ್ರ ಸರ್ಕಾರ, ರಾಷ್ಟ್ರಪತಿ ಭವನ ಇದೆಲ್ಲವುದರ ಜೊತೆಯೂ ನಿಕಟ ವಾದಂತಹ ಬಾಂಧವ್ಯ ಆರೋಗ್ಯಕರವಾದಂತಹ ಹೆಜ್ಜೆ ಹೊಂದಿರಬೇಕು. ಆದರೆ ಇತ್ತೀಚೆಗಿನ ದಿನದಲ್ಲಿ ಆಗುತ್ತಿರುವುದೇ ಬೇರೆ. ಈ ಹಿಂದೆ ಪಂಜಾಬ್ ರಾಜ್ಯದಲ್ಲಿ ರಾಜ್ಯಪಾಲರು ಮತ್ತು ಅಲ್ಲಿನ ಸರ್ಕಾರದ ನಡುವೆ ನಡೆದ ಬಹಿರಂಗ ಕದನವು ನ್ಯಾಯಾಲಯದ ಮೆಟ್ಟಿಲನ್ನು ಹತ್ತಿತ್ತು. ಅವತ್ತು ನ್ಯಾಯಾಲಯದಲ್ಲಿ ಕೂಡ ರಾಜ್ಯಪಾಲರಿಗೆ ಇರಿಸು ಮುರು ಸಾಗುವಂತಹ ಆರ್ಡರ್ ಬಂದಿತ್ತು. ಅದೇ ರೀತಿ ಪಕ್ಕದ ತಮಿಳ್ ನಾಡು ಮತ್ತು ಕೇರಳದಲ್ಲೂ, ಅಲ್ಲಿನ ಸರ್ಕಾರ ಹಾಗೂ ರಾಜಭವನದ ನಡುವೆ ಸಮರ ವೇರ್ಪಟ್ಟಿತ್ತು. ಈಗ ಕರ್ನಾಟಕದಲ್ಲೂ ಅದೇ ರೀತಿಯ ಸಮರ ಕಾಣಿಸಿಕೊಂಡಿದೆ. ಈ ಸಮರವನ್ನು ರಾಜ್ಯ ಸರ್ಕಾರವು ಈಜಿಯಾಗಿ ತಟಸ್ಥ ಗೊಳಿಸಬಹುದಿತ್ತು. ಆದರೆ ಸರ್ಕಾರವು ಹಠಕ್ಕೆ ಬಿದ್ದು ವಿವಾದಕ್ಕೆ ತುಪ್ಪ ಸುರಿತು ಅಂದ್ರೆ ತಪ್ಪಿಲ್ಲ. ರಾಜ್ಯಪಾಲರು ಜಂಟಿ ಅಧಿವೇಶನಕ್ಕೆ ಬಾರದೇ ಇದ್ದಿದ್ದರೆ ಅದು ಅಕ್ಷಮ್ಯ ಅಂತ ಅನ್ನಿಸಿಕೊಳ್ಳುತ್ತಿತ್ತು. ಆದರೆ ಅವರು ಆಗಮಿಸಿ  ಸರ್ಕಾರವು ಬರೆದುಕೊಟ್ಟ  ಭಾಷಣದಲ್ಲಿ ಕೇವಲ ಎರಡು ಸಾಲನ್ನಷ್ಟೇ ಓದಿ ಕೈ ಮುಗಿದು ಹೊರಟುಬಿಟ್ಟರು. ಆದರೆ ರಾಜ್ಯಪಾಲರು ಒಂದು ಅಕ್ಷರ ಓದಿದರೂ ಸಹ ಆ ಒಂದು ಭಾಷಣದ ಪ್ರತಿಯನ್ನು ರಾಜ್ಯಪಾಲರು ಓದಿದ ಹಾಗೆಯೇ ಅನ್ನುವುದು ಪ್ರತಿತಿ. ಹಾಗಾಗಿ ಸರ್ಕಾರವು ಬರೆದುಕೊಟ್ಟ ಭಾಷಣವು ಆಗಲೇ ಅಕ್ಸೆಪ್ಟೆಬಲ್ ಆಗಿದೆ ಹೀಗಿರುವಾಗ ರಾಜ್ಯಪಾಲ ರೊಟ್ಟಿಗೆ ಸರ್ಕಾರದ ಭಾಗವಾಗಿದ್ದುಕೊಂಡು ಗುದ್ದಾಟಕ್ಕಿಳಿಯುವ ಅಗತ್ಯತೆ ಇತ್ತೆ, ಎಂಬುದು ಪ್ರಶ್ನೆ.

    ಈ ಹಿಂದೆ ಹಂಸರಾಜ್ ಭಾರದ್ವಾಜ್ ರಾಜ್ಯಪಾಲರಾಗಿದ್ದಾಗಲೂ ಅವತ್ತಿನ ಯಡಿಯೂರಪ್ಪ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಾಕಷ್ಟು ಬಿಸಿಬಿಸಿ ವಾತಾವರಣ ಸೃಷ್ಟಿಯಾಗಿತ್ತು. ಅವತ್ತಿನ ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರ್ಕಾರವು ಭಾರದ್ವಾಜ್ ಅವರ ಮೂಲಕ ರಾಜ್ಯ ಸರ್ಕಾರವನ್ನು ನಿಯಂತ್ರಿಸಲು ಪ್ರಯತ್ನ ನಡೆಸಿದ್ದು ಸುಳ್ಳಲ್ಲ. ಈಗ ಅದೇ ಕೆಲಸವು ಈಗ  ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರದ ಕಡೆಯಿಂದ ಆಗುತ್ತಿರಬಹುದು. ಅವತ್ತಿಂದು ಅಂದರೆ ಹಂಸರಾಜ್ ಭಾರದ್ವಾಜ್ ರವರ ನಡೆ ಎಷ್ಟು ತಪ್ಪು ಅಂತ ಹೇಳಲಾಗುತ್ತದೆಯೋ ಅಷ್ಟೇ ತಪ್ಪು ತವಾರ್ ಚಂದೆಲೋಟ್ರವರ ನಡೆ ಅಂತಲೂ ಹೇಳಬೇಕಾಗುತ್ತದೆ. ಆದರೆ ಆವತ್ತು ಯಡಿಯೂರಪ್ಪ ಸರ್ಕಾರ ತೀರ ಈ ಮಟ್ಟಕ್ಕೆ ಅಗೌರವ ಕೊಟ್ಟಿರಲಿಲ್ಲವೇನೋ. ಬಿಕೆ ಹರಿಪ್ರಸಾದ್ ರಂತಹ ಹಿರಿಯ ನಾಯಕರು ನಡೆದುಕೊಂಡ ರೀತಿಯು ಅವರ ಹಿರಿತನಕ್ಕೆ ಯೋಗ್ಯವಾಗಿರಲಿಲ್ಲ. ಸದನದ ಎಲ್ಲಾ ಕಿರಿಯ ಸದಸ್ಯರುಗಳಿಗೆ ಮಾದರಿ ಯಾಗಿ ಇರಬೇಕಾಗಿದ್ದ ಹರಿಪ್ರಸಾದರು ತೀರ ಈ ಮಟ್ಟದಲ್ಲಿ ಕಾಣಿಸಿಕೊಳ್ಳಬಾರದಿತ್ತು ಏನಂತೀರಿ?

    -ದತ್ತು

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಕರ್ನಾಟಕದಲ್ಲಿ ಹೆಚ್ಚುತ್ತಿರುವ ಹೆಚ್‌ಐವಿ ಪ್ರಕರಣಗಳು..!ಯುವ ಪೀಳಿಗೆಯನ್ನು ಗುರಿಯಾಗಿಸಿ “ಹೈ-ಅಲರ್ಟ್ ಘೋಷಿಸಿದ ಆರೋಗ್ಯ ಇಲಾಖೆ.”
    ರಾಜಧಾನಿಯ ಫುಟ್‌ಪಾತ್ ಮೇಲಿದ್ದ ಮಗುವನ್ನು ಎತ್ತಿಕೊಂಡು ಹೋಗಿ ಕ್ರೌರ್ಯ ಮೆರೆದ ಕಾಮುಕನ ಧೈರ್ಯ ಮತ್ತು ಭೀಕರ ಹತ್ಯೆ ಬಿಚ್ಚಿಟ್ಟ ಸತ್ಯ!
    ಸಂಸತ್ತಿನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಚರ್ಚೆ-ಕಾನೂನು ಬರೋ ಮುನ್ನವೇ ಮತ್ತೊಂದು ಲೀಕ್!
    ಕರ್ನಾಟಕ ಪ್ರವಾಸೋದ್ಯಮದ ರಾಯಭಾರಿಯಾಗಿ ರಿಷಬ್ ಶೆಟ್ಟಿ…
    ಭೀಕರ ಅಪಘಾತ ಮಹಿಳೆ ಬಲಿ
    ತಮಿಳುನಾಡು ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್ -TVK wave ಎಷ್ಟು ದೂರ ಸಾಗುತ್ತದೆ?
    ಡಿ.ಕೆ. ಶಿವಕುಮಾರ್ ಪ್ರಮಾಣ ವಚನ  ಜೂನ್ 3ಕ್ಕೆ, ರಾಜ್ಯಪಾಲರಿಂದ ಆಹ್ವಾನ
    “ಧುರಂಧರ್ “ಸಿನಿಮಾವನ್ನೂ ಮೀರಿದ ಪಾಕ್ ಸಂಚನ್ನ ಭೇದಿಸಿದ ಕೇಂದ್ರ ಗುಪ್ತಚರ ಇಲಾಖೆ ಮತ್ತು ಕರ್ನಾಟಕ ಖಾಕಿ..
    ಪತ್ರಿಕೋದ್ಯಮವೇ? ಪ್ರಚೋದನೆಯೇ? ಸುಳ್ಳು ಸುದ್ದಿಗೆ ಕೋಮು ಬಣ್ಣ ಆರೋಪದಲ್ಲಿ 7 ಮಾಧ್ಯಮಗಳ ವಿರುದ್ಧ FIR…!
    ಮೀನುಗಳ ಮಾರಣಹೋಮ, ಕಪ್ಪಾದ ನೀರು,ಉಸಿರುಗಟ್ಟಿಸುವ ದುರ್ವಾಸನೆ — ಜನರ ಬದುಕಿಗೆ ದೊಡ್ಡ ಎಚ್ಚರಿಕೆ!
    ಕರ್ನಾಟಕದಲ್ಲಿ ಮಳೆ ಅಬ್ಬರಕ್ಕೆ ರೆಡ್ ಅಲರ್ಟ್ ಸನ್ನಾಹ!8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ – ಜನರಿಗೆ ಎಚ್ಚರಿಕೆ
    ಮಕ್ಕಳ ಕೈಯಿಂದ ಮೊಬೈಲ್ ಕಸಿಯಲು ಮುಂದಾದ ಬ್ರಿಟನ್!ಯುಕೆಯ ನಿರ್ಧಾರಕ್ಕೆ ವಿಶ್ವದ ಗಮನ…
    ‘ಅಮರ್ ಜವಾನ್ ಪಾರ್ಕ್’ಗೆ ಯುದ್ಧ ಟ್ಯಾಂಕ್, ಯುದ್ಧವಿಮಾನ ಸ್ಥಾಪನೆಗೆ ರಕ್ಷಣಾ ಸಚಿವರಿಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಮನವಿ
    ಸಾಲದ ಭಾರವೂ ಶಿಸ್ತಿನ ಮುಂದೆ ಸೋಲುತ್ತದೆ…! ಇದಕ್ಕೆ ಸಾಕ್ಷಿಯೇ ಸಾಕ್ಷಿ..!₹80 ಲಕ್ಷ ಸಾಲ-1 ವರ್ಷ ಮತ್ತು ಒಂದು ಡೆಡಿಕೇಟೆಡ್ ಟಾರ್ಗೆಟ್..!
    ಕರಾವಳಿ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯ: “ಕರಾವಳಿ ಪಡೆ” ಹೋರಾಟ ತೀವ್ರಗೊಳಿಸಲು ನಿರ್ಧಾರ
    ನಾರ್ವೇ ಪತ್ರಕರ್ತರಿಗೆ ತಿರುಗೇಟು: “ಭಾರತದ ವಾಸ್ತವತೆ ಅರಿವಿಲ್ಲ” ಎಂದ MEA ಕಾರ್ಯದರ್ಶಿ ಸಿಬಿ ಜಾರ್ಜ್…
    ಪ್ರಧಾನಿ ಮೋದಿ ಇಂದು ಬಂಟ್ವಾಳ ಸೇರಿ ಕರ್ನಾಟಕದ 4 ನವೀಕೃತ ರೈಲುನಿಲ್ದಾಣಗಳು ಲೋಕಾರ್ಪಣೆ..!
    “ಹಿಜಾಬ್ ಆದೇಶಕ್ಕೆ ಕರಾವಳಿಯಲ್ಲಿ ಬಿಜೆಪಿ ಸಿಡಿದೆದ್ದಿದೆ!ಓಲೈಕೆಗಾಗಿ ಶಿಕ್ಷಣವನ್ನೇ ಬಲಿ ಕೊಟ್ಟ ಕಾಂಗ್ರೆಸ್” – ಬಿಜೆಪಿ ವಾಗ್ದಾಳಿ.
    ಕರ್ನಾಟಕ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: 123 ಕೇಂದ್ರಗಳ ಪಾಸ್ ವಿತರಣ –ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ, ಬಸ್‌ಗಳ ಸಂಖ್ಯೆಯೂ ಹೆಚ್ಚುತ್ತದೆಯೇ?
    ಉಡುಪಿ ಜಿಲ್ಲಾಆಸ್ಪತ್ರೆಯಲ್ಲಿ ಹಗರಣ, ತಾರತಮ್ಯದ ಆರೋಪ: ವೀಣಾದೇವಿ ವಿರುದ್ಧದಕ್ರಮ ಕಣ್ಣೊರೆಸುವ ತಂತ್ರ
    ದೆಹಲಿ ಕೆಂಪುಕೋಟೆ ಸ್ಫೋಟಕ್ಕೆ AQIS ಸಂಪರ್ಕ: UNSC ವರದಿಯಿಂದ ಬೆಚ್ಚಿಬಿದ್ದ ಭದ್ರತಾ ವಲಯ
    ಶಿಕ್ಷಕರು ಹೊಡೆಯುತ್ತಾರೆಂಬ ಭಯಕ್ಕೆ ಮನೆ ಬಿಟ್ಟ 9ನೇ–10ನೇ ತರಗತಿ ವಿದ್ಯಾರ್ಥಿನಿಯರು..!ಎಲ್ಲಿದ್ದರು ಗೊತ್ತಾ..!
    60 ದಿನಗಳ ಸ್ಟಾಕ್ – ಭಾರತಕ್ಕೆ ಎಲ್‌ಪಿಜಿ ಚಿಂತೆ ಇಲ್ಲ!
    ಸಿಟಿ ಬಸ್ ಫೋಲ್ಡಿಂಗ್ ಬಾಗಿಲು ಕಡ್ಡಾಯ: ಸುರಕ್ಷತೆಗೆ ಹೆಜ್ಜೆ, ಆದರೆ ಸವಾಲುಗಳೇನು? ಪರಿಹಾರ ಹೇಗೆ?
    ಫ್ರಿಡ್ಜ್ ರಿಪೇರಿಗೆ ಬಂದವ ಮನೆ ಲೂಟಿ ಪರಾರಿ…!ಬಿ ಅಲರ್ಟ್ ‼️
    ಶಾಲಾ ವಾಹನಗಳ ಸುರಕ್ಷತೆ ಬಗ್ಗೆ ಜೆಡಿಎಸ್ ಆಗ್ರಹ
    ಶಾಲಾ ವಾಹನಗಳ ಸುರಕ್ಷತೆ ಬಗ್ಗೆ ಜೆಡಿಎಸ್ ಆಗ್ರಹ
    ಕುಂದಾಪುರದಲ್ಲಿ ಎರಡು ಮಕ್ಕಳ ತಾಯಿ ನಾಪತ್ತೆ. ಸ್ನೇಹಿತರ ಜೊತೆಯಲ್ಲಿ ಹೋಗಿರುವ ಶಂಕೆ
    🚨 ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ – ಕಟಪಾಡಿ ರಾಷ್ಟ್ರೀಯ ಹೆದ್ದಾರಿ ಅಪಘಾತ
    “ಅಮ್ಮ”ನ ಕಾರ್ಯಕ್ರಮದಲ್ಲಿ  ಕೇಂದ್ರ ಸಚಿವರಿಂದ ರಾಜಕೀಯ ಭಾಷಣ