📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಸುಬ್ರಹ್ಮಣ್ಯದಲ್ಲಿ ಭಟ್ಟರಿಗೆ ದಕ್ಷಿಣೆ ಕೊಡುವoತಿಲ್ಲ- ಸಿಟ್ಟಿಗೆಳುತ್ತಿರುವ ಪುರೋಹಿತರು

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಪವಿತ್ರತೆಯ ಬಗ್ಗೆ ಆಸ್ತಿಕ ವರ್ಗದಲ್ಲಿ ಸಾಕಷ್ಟು  ಗೌರವವಿದೆ. ಪ್ರತಿದಿನ ನೂರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ತಮ್ಮದೇ ಆದ ಸೇವಾ ಕೈಂಕರ್ಯಗಳನ್ನು ಪೂರೈಸಿ ವಾಪಸ್ ಆಗುತ್ತಿದ್ದಾರೆ. ಅಂತಹ ಕ್ಷೇತ್ರದಲ್ಲಿ ಆಡಳಿತ ಮಂಡಳಿಯು ಭಕ್ತರಿಗೆ ಕೊಡುತ್ತಿರುವ ಮೆಸೇಜು ಇಂದು  ಬಹಳಷ್ಟು ಚರ್ಚೆಗೆ ಕಾರಣವಾಗಿದೆ. ಇದು ಹಲವು ರೀತಿಯಲ್ಲಿ ಭಕ್ತರು ಹಾಗೂ ಅರ್ಚಕರಲ್ಲಿ ಗೊಂದಲಕ್ಕು ಕಾರಣವಾಗಿದೆ. ಈ ಗೊಂದಲವನ್ನು ಸ್ವತಹ ಇಲ್ಲಿನ ಆಡಳಿತ ಮಂಡಳಿಯೇ ಸೃಷ್ಟಿಸಿದೆ ಅನ್ನುವುದಂತೂ ಸತ್ಯ

ಅಷ್ಟಕ್ಕೂ ಆಡಳಿತ ಮಂಡಳಿಯು ಸೃಷ್ಟಿಸಿದ ಗೊಂದಲವಾದರೂ ಎಂತಹುದು? ಸರ್ಪ ಸಂಸ್ಕಾರದ ಪೂಜೆಯನ್ನು ಭಕ್ತರು ಆನ್ಲೈನ್ನಲ್ಲಿ ಬುಕ್ ಮಾಡುತ್ತಾರೆ ಅಥವಾ ಬಂದ ತಕ್ಷಣವೇ ಚೀಟಿ ಬರೆಸುತ್ತಾರೆ. ಆಗಲೇ 4,200 ಹಣವನ್ನು ಪಾವತಿಸಿಕೊಳ್ಳುತ್ತಾರೆ. ಈ ಹಣದಲ್ಲಿ ಈ ಒಂದು ಪೂಜೆಯ ಎಲ್ಲಾ ವೆಚ್ಚಗಳು ಒಳಗೊಂಡಿರುತ್ತವೆ ಅನ್ನುವುದು ಆಡಳಿತ ಮಂಡಳಿಯ ಪ್ರಕಟಣೆಯಾಗಿದೆ. ಹಾಗಾಗಿ ಯಾವುದೇ ಭಕ್ತರು ಪೂಜೆಯ ಸಮಯದಲ್ಲಿ ಅಥವಾ ನಂತರ ಯಾವುದೇ ಸಂಭಾವನೆಯನ್ನು ಯಾರಿಗೂ ನೀಡಬೇಕಾಗಿಲ್ಲ. ಯಾವುದಾದರೂ ಪುರೋಹಿತರು ಡಿಮ್ಯಾಂಡ್ ಮಾಡಿದರೆ ತಕ್ಷಣವೇ ದೇವಸ್ಥಾನದ ಆಡಳಿತ ಕಚೇರಿಗೆ ಬಂದು ದೂರು ನೀಡಿ ಎನ್ನುವ ಸಂದೇಶವನ್ನು ಬಹಿರಂಗವಾಗಿ ವಿವಿಧ ಭಾಷೆಗಳಲ್ಲಿ ಬಿತ್ತರಿಸಲಾಗುತ್ತಿದೆ.

ಅದರಿಂದ ಈಗ, ಭಕ್ತರು ಹಾಗೂ ಪುರೋಹಿತ ವರ್ಗ ಎರಡರಲ್ಲೂ ಗೊಂದಲ ವೇರ್ಪಟ್ಟಿದೆ. ಪ್ರತಿ ಸರ್ಪಸಂಸ್ಕಾರಕ್ಕೂ, ಅದನ್ನು ನಿರ್ವಹಿಸಿದ ಪುರೋಹಿತರಿಗೆ ಆಡಳಿತ ಮಂಡಳಿಯಿಂದಲೇ ಅವರ ಸಂಭಾವನೆ ಹೋಗುತ್ತದೆ. ಹಾಗೆಯೇ ಬ್ರಹ್ಮಚಾರಿಗೂ ಆಡಳಿತ ಮಂಡಳಿಯಿಂದಲೇ ಸಂಭಾವನೆ ಹೋಗುತ್ತದೆ. ಹಾಗಾಗಿ ಪುರೋಹಿತರಾಗಲಿ ಬ್ರಹ್ಮಚಾರಿಯಾಗಲಿ ಪೂಜಾ ಕರ್ತರಿಂದ ಹಣ ಕೇಳುವ ಹಾಗಿಲ್ಲ ಎನ್ನುವುದು ಆಡಳಿತ ಮಂಡಳಿಯ ಕಟ್ಟಪ್ಪಣೆ. ಇದು ಸರಿಯೂ ಹೌದು.

ಆದರೆ ಇದು ಧಾರ್ಮಿಕ ಕಾರ್ಯಕ್ರಮ. ಇಲ್ಲಿ ಯಾವುದೇ ಭಕ್ತನು ತಾನು ಸಲ್ಲಿಸಿದ ಸೇವೆಯ ನಂತರ ಅರ್ಚಕರಿಗೆ ಸಂಭಾವನೆ ಕೊಟ್ಟು ಅವರಿಂದ ಮಂತ್ರಾಕ್ಷತೆಯನ್ನು ಪಡೆಯುವುದು ಧಾರ್ಮಿಕ ಪರಂಪರೆಯ ಭಾಗವಾಗಿದೆ. ಜೊತೆಗೆ ಹಸ್ತೋದಕದ ಮೂಲಕ ಊಟ ಬಡಿಸುವುದು ಕೂಡ ಅದರ ಭಾಗವಾಗಿರುತ್ತದೆ.

ಆದ್ರೆ ಇದ್ಯಾವುದನ್ನು ಮಾಡಲಾಗದಿದ್ರೆ, ಸೇವೆ ಮಾಡಿಸುವಾತನಿಗೆ ಫಲ ಇಲ್ಲ ಅನ್ನುವ ತಿಳುವಳಿಕೆ ಹೊಂದಿದವರು ಇದ್ದಾರೆ. ಇದರಿಂದ ಇರುಸು ಮುರುಸು ಆಗುತ್ತದೆ. ಇದು ಭಕ್ತರರ ವಲಯದಲ್ಲಿರೋ ಗೊಂದಲ.

ಒಟ್ಟಿನಲ್ಲಿ ಭಕ್ತರು ಮತ್ತು ಪುರೋಹಿತರು ಇಬ್ಬರವಲಯದಲ್ಲೂ ಈ ಗೊಂದಲ ಆಗಿದ್ದು ನಿಜ. ಆದ್ರಿಲ್ಲಿ ಪುರೋಹಿತರು ಒತ್ತಡ ಹೇರುವ ಹಾಗಿಲ್ಲ. ಡಿಮ್ಯಾಂಡ್ ಮಾಡುವ ಹಾಗಿಲ್ಲ. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಯೇ ಯೋಗ್ಯ ತೀರ್ಮಾನ ಕೈಗೊಳ್ಳಬೇಕು. ಭಕ್ತರ ಮನದಲ್ಲಿ ಯಾವುದೇ ಅಸoತೃಪ್ತಿಯ ಭಾವನೆ ಮೂಡದಂತೆ ನೋಡಿಕೊಳ್ಳಬೇಕು…..ಅದಕ್ಕಾಗಿ ಒಬ್ಬರನ್ನು ನೇಮಿಸಿಕೊಂಡು ಪೂಜಾ ಸ್ಥಳದಲ್ಲಿಯೇ ಪುರೋಹಿತರಿಗೆ ನೀಡುವ ದಕ್ಷಿಣೆ, ಬ್ರಾಹ್ಮಚಾರಿಗೆ ನೀಡುವ ದಕ್ಷಿಣೆಯನ್ನು ಭಕ್ತರ ಕೈನಿಂದಲೇ ನೀಡಿಸಿದರೆ ಒಳ್ಳೆಯದು ಅನ್ನುವುದು ಅನೇಕ ಹಿರಿಯರ ಅನಿಸಿಕೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

17ನೇ ಆಯವ್ಯಯ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
ದಕ್ಷಿಣಕನ್ನಡ ಜಿಲ್ಲಾಡಳಿತ ರೈತರ ಪರವಾಗಿ ನಿಲ್ಲುತ್ತಿಲ್ಲ ಎಂಬ ಅಸಮಾಧಾನ
“ಕೃಷ್ಣ ಜೆ. ರಾವ್‌ ಡಿಎನ್ಎ ಸತ್ಯ ಬಯಲು — ಮಗುವಿಗೆ ನ್ಯಾಯ ಬೇಕು ಎಂದ ಹೈಕೋರ್ಟ್!”
ತಮಿಳುನಾಡು ಮುಖ್ಯಮಂತ್ರಿ ವಿಜಯ್, ಚಧುರಂಗದಾಟದಲ್ಲಿ ಲಾಂಗ್ ಟೈಮ್ ಉಳಿಯುವರೇ?
ಬೀಡಿ, ಗೋಡಂಬಿ ಮತ್ತು ಸ್ಕೀಮ್ ಕಾರ್ಮಿಕರಿಗೆ ಕನಿಷ್ಠ ಕೂಲಿ ನೀಡಿ: ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ.
ಡಾನ್ -3 ಸಿನಿಮಾ ಕಥೆ ಗೋವಿಂದ….!
ಬಂಗಾಳದಲ್ಲಿ ಈಗಲೂ ದೀದಿನೇ ಫೇವರೆಟ್, ಬಲ ಹೆಚ್ಚಿಸಿ ಕೊಂಡ ಬಿಜೆಪಿ
ಎಲ್ಪಿಜಿ ಗ್ಯಾಸ್ ದರದಲ್ಲಿ ಏರಿಕೆ:  ಮಧ್ಯಮ ವರ್ಗದವರಲ್ಲಿ ಹತಾಶೆ
ಅಕ್ರಮ ಮರಳುಗಾರಿಕೆ, ಕ್ರಮ ಕೈಗೊಂಡ ವೇಣೂರು ಪೊಲೀಸರು
ಥಾರ್ ಕಾರ್ ನಲ್ಲಿ ಬಂದು ದೇವಸ್ಥಾನದಲ್ಲಿ ವಿಕೃತಿ ಮೆರೆದ ಕಿಡಿಗೇಡಿ!
ಎಲ್ಲರಿಗೂ ಯುಗಾದಿ ಹಬ್ಬ… ಆದರೆ ಈ ಗ್ರಾಮಗಳಲ್ಲಿ ಭಯ ಮೌನ…ಹಬ್ಬ ಇಲ್ಲ…!ಒಂದು ವಿಚಿತ್ರ ಕಥೆ!
ನಾಳೆ ಮಂಗಳೂರಲ್ಲಿ ಇಡೀ ದಿನ ಕರೆಂಟಿಲ್ಲ Power Cut.. ಎಲ್ಲೆಲ್ಲಿ?
ಮಂಗಳೂರು ಸಿಟಿ ಪೊಲೀಸರ ಭರ್ಜರಿ ಬೇಟೆ – ನಿಷೇಧಿತ ಎಂಡಿಎಂ, ಗಾಂಜಾ ಮರಾಟಗಾರರ ಬಂಧನ
ಎಸ್ ಪಿ ಅರುಣ್ ಕುಮಾರ್ ಗೆ ಮುಖ್ಯಮಂತ್ರಿ ಪದಕ
ಮಸೀದಿ ಹುಂಡಿಗೂ ಲಗ್ಗೆ ಇಟ್ಟ ಕಳ್ಳರು….!
ಬಾವಿ ಮುಖ್ಯಮಂತ್ರಿ ಆಪ್ತನ ಭೀಕರ ಹತ್ಯೆ ಹಿಂದೆ ಯಾರು?
ಚಿಕ್ಕಸ್ವಾಮಿ-ದೊಡ್ಡಸ್ವಾಮಿ ಭಕ್ತರ ಮಿಲನ! ಕಾಶಿಮಠ ವಿವಾದಕ್ಕೆ ಸಂಯಮೇ೦ದ್ರ ಮದ್ದು
ಕರ್ನಾಟಕದಲ್ಲಿ ಯುಗಾದಿ ಹಬ್ಬಕ್ಕೂ ಮುನ್ನವೇ  ಮುಂಗಾರು  ಮಳೆರಂಗು – 5 ಜಿಲ್ಲೆಗಳಲ್ಲಿ ಆಲಿಕಲ್ಲು ಅಬ್ಬರ!
ಮದರಸಾದಲ್ಲಿ ದೌರ್ಜನ್ಯ ಮತ್ತು ಬಲವಂತದ ಕೂಲಿ ಆರೋಪ-24 ಮಕ್ಕಳ ರಕ್ಷಣೆ
ರೇಪ್ ಆರೋಪಿಗೆ ಹೂಮಳೆ, ಹೂವಿನಹಾರ,ಘೋಷಣೆ, ರಾಜಕೀಯ ರೀತಿ ರೋಡ್ ಶೋ! ಉತ್ತರ ಪ್ರದೇಶದ ವೈರಲ್ ವಿಡಿಯೋಗೆ ದೇಶಾದ್ಯಂತ ಆಕ್ರೋಶ
ಅಪ್ರಾಪ್ತನ ಕ್ರೌರ್ಯಕ್ಕೆ ಬಳ್ಳಾರಿ ವಸತಿ ಶಾಲೆಯ ದೌರ್ಜನ್ಯವೇ ಸಾಕ್ಷಿ… ಈ ಕ್ರೌರ್ಯದ ಹಿಂದೆ ಮನೋರೋಗ ಅಡಗಿದೆಯಾ? 
ಇಂದು ಮಾಜಿ ಸಚಿವರಿಂದ ಸೌಹಾರ್ದ ಇಫ್ತಾರ್ ಕೂಟ 
ಹೋಟೆಲ್, ಕೆಫೆ ಬಿಸಿ ಬಿಸಿ ಪ್ಲಾಸ್ಟಿಕ್ ಲ್ಲಿ ಪಾರ್ಸೆಲ್‌ಗೆ ಬ್ರೇಕ್ –ಹಾಗೆ 5ರೂ 10ರೂ ಬೀಡಿ ಸಿಗರೇಟ್ ಗುಟ್ಕಾಕ್ಕೆ ₹1000 ದಂಡ ಕಟ್ಟಬೇಕಾದಿತು ಎಚ್ಚರ …!
ಗಾಯಕನಿಗಿಂತ ದೊಡ್ಡದಾಗಿ ಕಾಣಿಸಿಕೊಂಡ ನೋಟುಗಳ ರಾಶಿ!ನೋಟುಗಳ ಮಧ್ಯೆಯೂ ನಿಲ್ಲದ ಗೋಪಾಲ್ ಸಾಧು ಗಾನಾಸುಧೆ !
ಹೆಣ್ಣು ಎಂಬ ಕನಿಕರ, ಸಿಗದ ಹಾಗೆ ಮಾಡಿದ ಮಾಯಾಂಗನೇ…
“ತಲೈವಾ”ಗೂ ಭಯವಾ? ಹೂವಿನ ಚೆಂಡು ಕಂಡು ವಿಜಯ್ ರನ್! ಒಂದು ಕ್ಷಣದ ಥ್ರಿಲ್ಲರ್!
ಪೆಟ್ರೋಲ್ ಡೀಸೆಲ್ ದರ ಏರಿಕೆ ತಡೆಯಲು ಕೇಂದ್ರದ ಮಹತ್ವದ ಕ್ರಮ 
ಶೈಕ್ಷಣಿಕ ವರ್ಷ ಆರಂಭ, ನೋಟ್‌ಬುಕ್‌ನಿಂದ ಆಟೋವರೆಗೆ ಎಲ್ಲ ಖರ್ಚು ಗಗನಕ್ಕೆ….ಪೋಷಕರಿಗೆ ದುಬಾರಿ ಹೊರೆ
ಗ್ಯಾಸ್ ಅಭಾವ ಮತ್ತು ಬೆಲೆ ಏರಿಕೆ, ಸುಳ್ಳು ಎನ್ನುತ್ತಿದೆ-HPCL
8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ