📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ವೆಟ್-ವೆಲ್‌ಗಳ ಕಳಪೆ ನಿರ್ವಹಣೆಚರಂಡಿ-ಬಾವಿಗಳಿಗೆ ಡ್ರೈನೇಜ್ ನೀರು..

ಮಂಗಳೂರು : ನಗರದ 50 ವರ್ಷ ಹಳೆಯದಾದ ಡ್ರೈನೇಜ್ ಸಿಸ್ಟಮ್‌ಗೆ ಇನ್ನೂ ಕಾಯಕಲ್ಪ ಸಿಕ್ಕಿಲ್ಲ. ನಗರ ಪಾಲಿಕೆ ವ್ಯಾಪ್ತಿಯಲ್ಲಿ ೨೨ ವೆಟ್‌ವೆಲ್‌ಗಳಿದ್ದರೂ ಅಲ್ಲಿಯ ತೊಂದರೆಗಳಿAದ, ಟ್ರೀಟ್ಮೆಂಟ್ ಆಗದ ಸಿವೇಜ್ ನೀರು ಸರಾಗವಾಗಿ ನಗರದ ತೋಡುಗಳಿಗೆ, ಬಾವಿಗಳಿಗೆ ಹೋಗುತ್ತಿರೋದು ಗೌಪ್ಯವಾಗಿ ಉಳಿದಿಲ್ಲ. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದರೂ.. ದೂರರ್ಜಿಗಳ ನೀಡಿದರೂ ಏನೊಂದು ಕ್ರಮ ಮಹಾನಗರ ಪಾಲಿಕೆಯಿಂದ ಆಗುತ್ತಿಲ್ಲ. ಇದರಿಂದಾಗಿ ನಗರದೊಳಗಿನ ಬಾವಿಗಳು ಕಲುಷಿತಗೊಳ್ಳುವುದರೊಂದಿಗೆ ಸಾಂಕ್ರಾಮಿಕ ರೋಗಗಳು ಹರಡುವುದರಲ್ಲಿ ಎರಡು ಮಾತಿಲ್ಲ. ಸದ್ಯ ಮಹಾನಗರ ಪಾಲಿಕೆ ಆಡಳಿತಾಧಿಕಾರಿUಳಾದ ಜಿಲ್ಲಾಧಿಕಾರಿಗಳೇ ಈ ಬಗ್ಗೆ ಮುತುವರ್ಜಿ ವಹಿಸಬೇಕಾಗಿದೆ.
ನಗರದ ಡ್ರೈನೇಜ್ ಸಿಸ್ಟಮ್ ಮತ್ತು ವೆಟ್‌ವೆಲ್‌ಗಳ ನಿರ್ವಹಣೆ ಸಂಪೂರ್ಣ ಹದಗೆಟ್ಟಿದೆ. ಈ ವೆಟ್‌ವೆಲ್ ಸಿಸ್ಟಮ್‌ಗಳಿಗೆ ಅಳವಡಿಸಿದ್ದ ಪೈಪ್‌ಲೈನ್‌ಗಳು ೫೦ ವರ್ಷ ಹಳೆಯದಾಗಿವೆ. ಈ ಪೈಪ್‌ಲೈನ್ ಗಳಿಂದ ಪಂಪಿAಗ್ ಆಗುತ್ತಿರೋ ಸೀವೇಜï ನೀರನ್ನು ತಡೆಯಲು ಅಸಾಧ್ಯವಾಗಿದ್ದು ಅಲ್ಲೇ ಒಡೆದು ಹೋಗುತ್ತಿರೋದಲ್ಲದೆ, ಒಡೆದು ಹೋದ ಪೈಪಲೈನ್ ನೀರು ನೇರವಾಗಿ ಚರಂಡಿಗಳಿಗೆ ಹೋಗುತ್ತಿರೋದು ಒಂದೆಡೆಯಾದರೆ, ಸುತ್ತಮುತ್ತಲಿನ ಬಾವಿಗಳಿಗೂ ಹೊಕ್ಕುತ್ತಿರೋದು ಕೂಡ ಕಣ್ಣಿಗೆ ರಾಚುವಂತಿದೆ.

ಇಲ್ಲಿ ಬಾವಿ ನೀರು ಕಲುಷಿತವಾಗುವುದರೊಂದಿಗೆ, ಸಾಲು-ಸಾಲು ಸಾಂಕ್ರಾಮಿಕ ರೋಗಗಳು ಬರುವ ಎಲ್ಲಾ ಅವಕಾಶಗಳಿರೋದರಿಂದ ಈ ಸಮಸ್ಯೆಗಳನ್ನು ಮಂಗಳೂರು ಮಹಾನಗರ ಪಾಲಿಕೆ ಅಗತ್ಯವಾಗಿ ವಿಶೇಷ ಮುತುವರ್ಜಿ ವಹಿಸಿ ಕೆಲಸ ಮಾಡಬೇಕಾಗಿದೆ.
ಮತ್ತೊಂದೆಡೆ, ವೆಟ್‌ವೇಲ್‌ಗಳು ಫುಲ್ ಆಗ್ತಾ ಇದ್ದಂತೆ ಸೀವೇಜ್ ನೀರನ್ನ ನೇರವಾಗಿ ಕಾವೂರಿನ ಮುಲ್ಲಕಾಡು ಟ್ರೀಟ್ಮೆಂಟ್ ಪ್ಲಾಂಟ್‌ಗೆ ಪಂಪಿಂಗ್ ಮಾಡಬೇಕು. ಅಲ್ಲಿ ಈ ಸೀವೇಜ್ ನೀರನ್ನು ಟ್ರೀಟ್ಮೆಂಟ್ ಮಾಡುತ್ತಾರೆ, ಆವಾಗ ಫ್ರಶ್ ನೀರನ್ನು ನದಿಗೆ ಬಿಡಬಹುದು ಅಥವಾ ಮರುಬಳಕೆ ಮಾಡಬಹುದು, ಹಾಗೇ ಇಲ್ಲಿ ಬರೋ ಗೊಬ್ಬರ ಹಾಗು ವೇಸ್ಟನ್ನು ಕೂಡ ಮರುಬಳಕೆಗೆ ಬಳಸಬಹುದಾಗಿದೆ. ಆದರೆ ನಮ್ಮಲ್ಲಿ ಇದ್ಯಾವುದೂ ಸರಿ ಇಲ್ಲ. ಮ್ಯಾನ್ ಹೋಲ್‌ಗಳಿಂದ ಗ್ರಾವಿಟಿಯಲ್ಲಿ ವೆಟ್‌ವೆಲ್‌ಗಳಿಗೆ ಬರೋ ಲೈನ್‌ಗಳೆಲ್ಲ ಹಳೇ ಲೈನ್‌ಗಳಾಗಿದ್ದು ಅಲ್ಲೂ ಸೀವೇಜ್ ನೀರು ನೇರ ಚರಂಡಿಗೆ ಹೋಗುತ್ತಿದೆ. ಈ ಬಗ್ಗೆ ಸ್ಥಳೀಯರು ಹೇಳೋ ಪ್ರಕಾರ ಕೆಲವಮ್ಮೆ ಓವರ್ ಫ್ಲೋ ಆಗುತ್ತೆ. ಆದರೇ ಎಲ್ಲಾ ಬಾರಿ ಆಗಲ್ಲಾ ಆದರಿದು ನೇರವಾಗಿ ಚರಂಡಿಗೆ ಬಂದು ಅಲ್ಲಿಂದ ನದಿಗೆ ಸೇರುತ್ತಿದೆ, ಈ ಮದ್ಯೆ ಬರೋ ಎಲ್ಲಾ ಬಾವಿಗಳೂ ಕೂಡಾ ಇಲ್ಲಿ ಕಲುಷಿತವಾಗಿವೆ ಅನ್ನುತ್ತಿದ್ದಾರವರು.
ನಗರದಲ್ಲಿ 22 ವೆಟ್ ವೆಲ್‌ಗಳಿದ್ದು ಇವುಗಳಿಗೆ ಆಯಾ ಪ್ರದೇಶದ ಡ್ರೈನೇಜ್ ಲೈನ್‌ಗಳಿಂದ ಸೀವೇಜ್ ಹರಿದು ಬರೋದಾದರೂ, ಈ ಸರ್ಕ್ಯೂಟ್ ಅದೇನಿಲ್ಲ ಅಂದ್ರು 525 ರಿಂದ 550 ಕಿ.ಮಿ ಗಳಷ್ಟು ಉದ್ದದ ಪೈಪ್ ಲೈನ್‌ಗಳಿವೆ. ಇಲ್ಲಿ ವೆಟ್ ವೆಲ್ ಕೂಡ ಹಳೆದಿದೆ ಅದರೊಂದಿಗೆ ಪೈಪ್‌ಲೈನ್ ಗಳು ಮಾತ್ರ, ಅದೇನಿಲ್ಲ ಅಂದ್ರು  ೫೦ ವರ್ಷದ ಹಳೆಯದ್ದು ಆಗಿವೆ. ಲೈನ್‌ಗಳಿಗೆ ಪಂಪ್ ಹಾಕಿ ಪ್ರೆಶರ್ ಕೊಟ್ಟು ಸೇವೆಜ್ ನೀರು ಪಾಸ್ ಮಾಡಲು ಹೊರಟರೆ ಇಡೀ ಪೈಪ್‌ಲೈನ್‌ಗಳೇ ಒಡೆದು ಹೋಗುತ್ತಿವೆ. ಮತ್ತೆ ಕೆಲವು ಲೈನ್ಗಲ್ಲಿ ನೀರೇ ಪಾಸ್ ಆಗಲ್ಲ ಅಂತವುವನ್ನು ಡೈರೆಕ್ಟ್ ಆಗಿ ಹತ್ತರದ ಚರಂಡಿಗೇ ಕೊಡಲಾಗಿದೆ. ಹಾಗಾಗಿ ಇಲ್ಲಿ ಒಂದಷ್ಟು ಗಬ್ಬು ವಾಸನೆ ಬಂದು ನಾರುತ್ತಿರುವುದಲ್ಲದೆ, ಸಾಂಕ್ರಾಮಿಕ ರೋಗಕ್ಕೆ ರಹದಾರಿ ನೀಡಿದಂತಾಗಿದೆ.
ಈ ಬಗ್ಗೆ, ನಾಗರಿಕರು ಹತ್ತು ಹಲವು ಬಾರಿ ನಗರ ಪಾಲಿಕೆ ದೂರು ನೀಡಿದ್ದಾರೆ ಅಲ್ಲೇನು ಆಗ್ತಾ ಇಲ್ಲ. ಅಧಿಕಾರಿಗಳಿಗೆ ದೂರ್ ನೀಡಿದ್ದಾರೆ ಅಲ್ಲೂ ಏನು ಆಗ್ತಾ ಇಲ್ಲ. ಈ ಬಾರಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ಸಂತ್ರಸ್ತರ ತಂಡವೊಂದು ತಯಾರಾಗಿದೆ. ಸದ್ಯ ಜಿಲ್ಲಾಧಿಕಾರಿಗಳೇ ನಗರ ಪಾಲಿಕೆ ಆಡಳಿತಾಧಿಕಾರಿಯಾಗಿದ್ದು ಅದೇನು ಕ್ರಮ ವಹಿಸುತ್ತಾರೋ ಕಾದು ನೋಡಬೇಕಾಗಿದೆ. ಅಲ್ಲಿದೆ ಕೆಲವು ಚರಂಡಿಗಳು ನೇರವಾಗಿ ನದಿಗಳಿಗೆ ಲಿಂಕ್ ಇರೋದಕ್ಕೆ ನದಿ ನೀರುಗಳು ಕೂಡ ಕಲುಷಿತಗೊಂಡಿವೆ ಜಲಚರಗಳು ಸತ್ತಿವೆ ಹಾಗಾಗಿ ಈ ವಿಚಾರವಾಗಿ ಜಿಲ್ಲಾಡಳಿತ ಪ್ರಯಾರಿಟಿಯಾಗಿ, ತುರ್ತಾಗಿ ಈ ಕೆಲಸ ಮಾಡುವ ಅತ್ಯವಶ್ಯಕತೆ ಇದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಪೆಟ್ರೋಲ್ ಡೀಸೆಲ್ ದರ ಏರಿಕೆ ತಡೆಯಲು ಕೇಂದ್ರದ ಮಹತ್ವದ ಕ್ರಮ 
ಕನಸು ಹೊತ್ತ ಯುವತಿಯರ ಮೇಲೆ ಕಾಮುಕ ಸಮಾಜದ ಕಣ್ಣು! ಮೌನವಾಗಿರುವ ಸಾವಿರಾರು ಕಥೆಗಳಲ್ಲೊಂದು ಬೆಂಗಳೂರು ಘಟನೆ!
ಕೇರಳ ಸರ್ಕಾರ ರಚನೆಯ ಕಗ್ಗಂಟು.. ಸಿಎಂ ಅಭ್ಯರ್ಥಿ ಆಯ್ಕೆಗೆ ಕಸರತ್ತು… ಕಾಂಗ್ರೆಸ್ ದುರ್ಬಲತೆಗೆ ಸಾಕ್ಷಿ
AI ಹವಾ-ಬೇಗನೆ ಫೈನಾನ್ಷಿಯಲ್ ಇಂಡಿಪೆಂಡೆಂಟ್ ಆಗೋ ಟ್ರೆಂಡ್- ಕೈಬಿಟ್ಟ  ಓದು!! ಇದು ಗಂಭೀರ ಸೂಚನೆ….
ಕರ್ನಾಟಕದ ಮಾಜಿ ಸಚಿವರಿಗೆ ಜೈಲು ಜೈಲು ಶಿಕ್ಷೆಗೆ ಉಪಮುಖ್ಯಮಂತ್ರಿ ಡಿಕೆಯ ಶಾಕ್ ಸ್ಟೇಟ್ಮೆಂಟ್
ಪಂಚ ಗ್ಯಾರಂಟಿ ಯೋಜನೆಯಿಂದ ಕರ್ನಾಟಕ ಸಾಲದ ಸುಳಿಗೆ……..
Tesla Experience Centre ಬೆಂಗಳೂರು ಈಗ EV ಕ್ರೇಜ್ ಹಬ್!car craze ಇರುವವರು ಮುಗಿಬೀಳುತ್ತಿದ್ದಾರೆ..
ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಕಮೆಂಟ್ ಗಳನ್ನು ಹಾಕಿದ ಆರೋಪಿಯ ಬಂಧನ
ಬೃಹತ್ ಅಭಿಯಾನ….5.51 ಟನ್ ವಸ್ತುಗಳು..!5000ಕ್ಕೂ ಹೆಚ್ಚು ದೇವರ ಫೋಟೋಗಳು
ಒಂದು ಚಿನ್ನದ ಸರಕ್ಕಾಗಿ ನಿದ್ರೆಯಲ್ಲಿದ್ದ ಗೆಳತಿಯನ್ನೇ ಕೊಲ್ಲಲೆತ್ನಿಸಿದ ಆಕೆಗೆ ಜೈಲೆ ಗತಿ …..ನಂಬಿಕೆಯೇ ರಕ್ತಸಿಕ್ತವಾದ ಮಣಿಪಾಲದ ಭೀಕರ ಘಟನೆ…
ಭೋಪಾಲ್ ತ್ವಿಷಾ ಶರ್ಮಾ ಪ್ರಕರಣ ಪೋಷಕರ ಪಟ್ಟು-ಅಂತ್ಯಕ್ರಿಯೆ ಮಾಡುವುದಿಲ್ಲ “ನ್ಯಾಯ ಸಿಗುವವರೆಗೂ ನಾವು ದೇಹವನ್ನು ಸ್ವೀಕರಿಸುವುದಿಲ್ಲ” 
ಸಚಿವ ಜಮೀರ್ ಅಹಮದ್ ಹಚ್ಚಿದ ಪಟಾಕಿಗೆ ಕಾಂಗ್ರೆಸ್ ಕೋಟೆಯಲ್ಲಿ ಬಿರುಕು..!?
ಸ್ಮಾರ್ಟ್ ಲಾಕ್ ಇದ್ದ ಸುರಕ್ಷಿತ ಮನೆಯಲ್ಲೇ ಯುವತಿಯ ರೇಪ್ ಅಂಡ್ ಮರ್ಡರ್…!ನಗರವನ್ನು ಬೆಚ್ಚಿಬೀಳಿಸಿದ ಘಟನೆ”
ಟಾಟಾ ಸನ್ಸ್ IPOಗೆ ಒತ್ತಾಯ: ಟ್ರಸ್ಟಿಗಳಲ್ಲಿ ಭಿನ್ನಾಭಿಪ್ರಾಯ ಹೆಚ್ಚಳ…!
Online payments ಹೊಸ ಸುರಕ್ಷತಾ ನಿಯಮಗಳು: ನಿಮ್ಮ ಹಣಕ್ಕೆ ‘ಅದೃಶ್ಯ ಕವಚ’
ತಪ್ಪುಅರ್ಥಕ್ಕೆಕ್ಷಮೆ, ಹೊಸರೂಪದಲ್ಲಿಮತ್ತೆ ‘ಸರ್ಸೆಸೆರಗು’”-ಪ್ರೇಮ್
ಕೊಲೆ ಆರೋಪಿಗಳ ಕಾರು ಮಾಣಿಯಲ್ಲಿ ಪತ್ತೆ ….!
ಯುಎಇಯಿಂದ ಯುರೋಪ್ ತನಕ ಮೋದಿ ಐತಿಹಾಸಿಕ ವಿದೇಶ ಪ್ರವಾಸ…ಡಿಪ್ಲೊಮಸಿ – ತೈಲದಿಂದ ತಂತ್ರಜ್ಞಾನವರೆಗೆ ಇದು ಭಾರತದ ಭವಿಷ್ಯದ ತಂತ್ರಾತ್ಮಕ ನಡೆ ?!
ಎಲ್ಲೆಡೆ LPG ಗ್ಯಾಸ್ ಸಿಲಿಂಡರ್ ಸಂಕಷ್ಟ: ಇದು ಜೀವನೋಪಾಯದ ಪ್ರಶ್ನೆ… ತಕ್ಷಣ ಸಮರ್ಪಕ ಕ್ರಮ ಸರ್ಕಾರದ ಹೊಣೆ.
ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ SIR ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಅಳಿಸಬಹುದಾ? ಈಗಲೇ ಎಚ್ಚರ!
ಮಗಳ ಎಡವಟ್ಟಿಗೆ ಪಿಣರಾಯಿ ಬಲಿ…..ಕೇರಳ ರಾಜಕಾರಣದಲ್ಲಿ ಹೈವೋಲ್ಟೇಜ್ ಭೂಕಂಪ
Trump ಮಾತಿಗೆ Iran ಸಂಸತ್ ಸ್ಪೀಕರ್‌ನ ಕಠಿಣ ಸಂದೇಶ ವಿಶ್ವದ ಗಮನ ಸೆಳೆದಿದೆ!
ಗುಜರಾತ್ ಪೊಲೀಸರಲ್ಲಿ ಆಗದ ಕೆಲಸ, ಒಬ್ಬ ಮಂತ್ರವಾದಿಯಿಂದ ಆಯ್ತು
ಕನಕಪುರ ಬಂಡೆ ಬಿಜೆಪಿಗೆ ಎಂಬ ಬೋಗಸ್ ಸುದ್ದಿ
ಕಾರ್ಕಳದಲ್ಲಿ 2027ರ ಬಾಹುಬಲಿ ಮಹಾ ಮಜ್ಜನದ ಮಹೋತ್ಸವಕ್ಕೆ ದಿನ ಘೋಷಣೆ!
Top 5, ಹೆಚ್ಚು ಅನುದಾನ ಪಡೆದ ಇಲಾಖೆಗಳು ಯಾವವು ಗೊತ್ತಾ?
ಪಕ್ಷದಿಂದ ಪಕ್ಕಕ್ಕೆ? ರಾಘವ್ ಚಡ್ಡಾ ಹಿಂದೆ ಏನಿದೆ ದೊಡ್ಡ ರಾಜಕೀಯ ಆಟ!”ಮೌನಗೊಳಿಸಿದರೂ ನಿಲ್ಲದ ಧ್ವನಿ – ರಾಘವ್ ಚಡ್ಡಾ!”
ಕರ್ನಾಟಕದಲ್ಲಿ 2 ಲಕ್ಷಕ್ಕೂ ಹೆಚ್ಚು ನಾಯಿ ಕಚ್ಚಿದ ಪ್ರಕರಣಗಳು …!ನಗರಗಳಲ್ಲಿ ‘ಸ್ಟ್ರೇ ಡಾಗ್ ಟೆರರ್’ — ಜನರು ಭಯದಲ್ಲಿ ಬದುಕುತ್ತಿದ್ದಾರೆ!
ಆನ್‌ಲೈನ್ ಗೋಲ್ಡ್ ಮಾರ್ಕೆಟ್ ಹೂಡಿಕೆಯಲ್ಲಿ ಮೋಸ- ಮಹಿಳೆಗೆ ₹10.55 ಲಕ್ಷ ನಷ್ಟ