📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ವೆಟ್-ವೆಲ್‌ಗಳ ಕಳಪೆ ನಿರ್ವಹಣೆಚರಂಡಿ-ಬಾವಿಗಳಿಗೆ ಡ್ರೈನೇಜ್ ನೀರು..

ಮಂಗಳೂರು : ನಗರದ 50 ವರ್ಷ ಹಳೆಯದಾದ ಡ್ರೈನೇಜ್ ಸಿಸ್ಟಮ್‌ಗೆ ಇನ್ನೂ ಕಾಯಕಲ್ಪ ಸಿಕ್ಕಿಲ್ಲ. ನಗರ ಪಾಲಿಕೆ ವ್ಯಾಪ್ತಿಯಲ್ಲಿ ೨೨ ವೆಟ್‌ವೆಲ್‌ಗಳಿದ್ದರೂ ಅಲ್ಲಿಯ ತೊಂದರೆಗಳಿAದ, ಟ್ರೀಟ್ಮೆಂಟ್ ಆಗದ ಸಿವೇಜ್ ನೀರು ಸರಾಗವಾಗಿ ನಗರದ ತೋಡುಗಳಿಗೆ, ಬಾವಿಗಳಿಗೆ ಹೋಗುತ್ತಿರೋದು ಗೌಪ್ಯವಾಗಿ ಉಳಿದಿಲ್ಲ. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದರೂ.. ದೂರರ್ಜಿಗಳ ನೀಡಿದರೂ ಏನೊಂದು ಕ್ರಮ ಮಹಾನಗರ ಪಾಲಿಕೆಯಿಂದ ಆಗುತ್ತಿಲ್ಲ. ಇದರಿಂದಾಗಿ ನಗರದೊಳಗಿನ ಬಾವಿಗಳು ಕಲುಷಿತಗೊಳ್ಳುವುದರೊಂದಿಗೆ ಸಾಂಕ್ರಾಮಿಕ ರೋಗಗಳು ಹರಡುವುದರಲ್ಲಿ ಎರಡು ಮಾತಿಲ್ಲ. ಸದ್ಯ ಮಹಾನಗರ ಪಾಲಿಕೆ ಆಡಳಿತಾಧಿಕಾರಿUಳಾದ ಜಿಲ್ಲಾಧಿಕಾರಿಗಳೇ ಈ ಬಗ್ಗೆ ಮುತುವರ್ಜಿ ವಹಿಸಬೇಕಾಗಿದೆ.
ನಗರದ ಡ್ರೈನೇಜ್ ಸಿಸ್ಟಮ್ ಮತ್ತು ವೆಟ್‌ವೆಲ್‌ಗಳ ನಿರ್ವಹಣೆ ಸಂಪೂರ್ಣ ಹದಗೆಟ್ಟಿದೆ. ಈ ವೆಟ್‌ವೆಲ್ ಸಿಸ್ಟಮ್‌ಗಳಿಗೆ ಅಳವಡಿಸಿದ್ದ ಪೈಪ್‌ಲೈನ್‌ಗಳು ೫೦ ವರ್ಷ ಹಳೆಯದಾಗಿವೆ. ಈ ಪೈಪ್‌ಲೈನ್ ಗಳಿಂದ ಪಂಪಿAಗ್ ಆಗುತ್ತಿರೋ ಸೀವೇಜï ನೀರನ್ನು ತಡೆಯಲು ಅಸಾಧ್ಯವಾಗಿದ್ದು ಅಲ್ಲೇ ಒಡೆದು ಹೋಗುತ್ತಿರೋದಲ್ಲದೆ, ಒಡೆದು ಹೋದ ಪೈಪಲೈನ್ ನೀರು ನೇರವಾಗಿ ಚರಂಡಿಗಳಿಗೆ ಹೋಗುತ್ತಿರೋದು ಒಂದೆಡೆಯಾದರೆ, ಸುತ್ತಮುತ್ತಲಿನ ಬಾವಿಗಳಿಗೂ ಹೊಕ್ಕುತ್ತಿರೋದು ಕೂಡ ಕಣ್ಣಿಗೆ ರಾಚುವಂತಿದೆ.

ಇಲ್ಲಿ ಬಾವಿ ನೀರು ಕಲುಷಿತವಾಗುವುದರೊಂದಿಗೆ, ಸಾಲು-ಸಾಲು ಸಾಂಕ್ರಾಮಿಕ ರೋಗಗಳು ಬರುವ ಎಲ್ಲಾ ಅವಕಾಶಗಳಿರೋದರಿಂದ ಈ ಸಮಸ್ಯೆಗಳನ್ನು ಮಂಗಳೂರು ಮಹಾನಗರ ಪಾಲಿಕೆ ಅಗತ್ಯವಾಗಿ ವಿಶೇಷ ಮುತುವರ್ಜಿ ವಹಿಸಿ ಕೆಲಸ ಮಾಡಬೇಕಾಗಿದೆ.
ಮತ್ತೊಂದೆಡೆ, ವೆಟ್‌ವೇಲ್‌ಗಳು ಫುಲ್ ಆಗ್ತಾ ಇದ್ದಂತೆ ಸೀವೇಜ್ ನೀರನ್ನ ನೇರವಾಗಿ ಕಾವೂರಿನ ಮುಲ್ಲಕಾಡು ಟ್ರೀಟ್ಮೆಂಟ್ ಪ್ಲಾಂಟ್‌ಗೆ ಪಂಪಿಂಗ್ ಮಾಡಬೇಕು. ಅಲ್ಲಿ ಈ ಸೀವೇಜ್ ನೀರನ್ನು ಟ್ರೀಟ್ಮೆಂಟ್ ಮಾಡುತ್ತಾರೆ, ಆವಾಗ ಫ್ರಶ್ ನೀರನ್ನು ನದಿಗೆ ಬಿಡಬಹುದು ಅಥವಾ ಮರುಬಳಕೆ ಮಾಡಬಹುದು, ಹಾಗೇ ಇಲ್ಲಿ ಬರೋ ಗೊಬ್ಬರ ಹಾಗು ವೇಸ್ಟನ್ನು ಕೂಡ ಮರುಬಳಕೆಗೆ ಬಳಸಬಹುದಾಗಿದೆ. ಆದರೆ ನಮ್ಮಲ್ಲಿ ಇದ್ಯಾವುದೂ ಸರಿ ಇಲ್ಲ. ಮ್ಯಾನ್ ಹೋಲ್‌ಗಳಿಂದ ಗ್ರಾವಿಟಿಯಲ್ಲಿ ವೆಟ್‌ವೆಲ್‌ಗಳಿಗೆ ಬರೋ ಲೈನ್‌ಗಳೆಲ್ಲ ಹಳೇ ಲೈನ್‌ಗಳಾಗಿದ್ದು ಅಲ್ಲೂ ಸೀವೇಜ್ ನೀರು ನೇರ ಚರಂಡಿಗೆ ಹೋಗುತ್ತಿದೆ. ಈ ಬಗ್ಗೆ ಸ್ಥಳೀಯರು ಹೇಳೋ ಪ್ರಕಾರ ಕೆಲವಮ್ಮೆ ಓವರ್ ಫ್ಲೋ ಆಗುತ್ತೆ. ಆದರೇ ಎಲ್ಲಾ ಬಾರಿ ಆಗಲ್ಲಾ ಆದರಿದು ನೇರವಾಗಿ ಚರಂಡಿಗೆ ಬಂದು ಅಲ್ಲಿಂದ ನದಿಗೆ ಸೇರುತ್ತಿದೆ, ಈ ಮದ್ಯೆ ಬರೋ ಎಲ್ಲಾ ಬಾವಿಗಳೂ ಕೂಡಾ ಇಲ್ಲಿ ಕಲುಷಿತವಾಗಿವೆ ಅನ್ನುತ್ತಿದ್ದಾರವರು.
ನಗರದಲ್ಲಿ 22 ವೆಟ್ ವೆಲ್‌ಗಳಿದ್ದು ಇವುಗಳಿಗೆ ಆಯಾ ಪ್ರದೇಶದ ಡ್ರೈನೇಜ್ ಲೈನ್‌ಗಳಿಂದ ಸೀವೇಜ್ ಹರಿದು ಬರೋದಾದರೂ, ಈ ಸರ್ಕ್ಯೂಟ್ ಅದೇನಿಲ್ಲ ಅಂದ್ರು 525 ರಿಂದ 550 ಕಿ.ಮಿ ಗಳಷ್ಟು ಉದ್ದದ ಪೈಪ್ ಲೈನ್‌ಗಳಿವೆ. ಇಲ್ಲಿ ವೆಟ್ ವೆಲ್ ಕೂಡ ಹಳೆದಿದೆ ಅದರೊಂದಿಗೆ ಪೈಪ್‌ಲೈನ್ ಗಳು ಮಾತ್ರ, ಅದೇನಿಲ್ಲ ಅಂದ್ರು  ೫೦ ವರ್ಷದ ಹಳೆಯದ್ದು ಆಗಿವೆ. ಲೈನ್‌ಗಳಿಗೆ ಪಂಪ್ ಹಾಕಿ ಪ್ರೆಶರ್ ಕೊಟ್ಟು ಸೇವೆಜ್ ನೀರು ಪಾಸ್ ಮಾಡಲು ಹೊರಟರೆ ಇಡೀ ಪೈಪ್‌ಲೈನ್‌ಗಳೇ ಒಡೆದು ಹೋಗುತ್ತಿವೆ. ಮತ್ತೆ ಕೆಲವು ಲೈನ್ಗಲ್ಲಿ ನೀರೇ ಪಾಸ್ ಆಗಲ್ಲ ಅಂತವುವನ್ನು ಡೈರೆಕ್ಟ್ ಆಗಿ ಹತ್ತರದ ಚರಂಡಿಗೇ ಕೊಡಲಾಗಿದೆ. ಹಾಗಾಗಿ ಇಲ್ಲಿ ಒಂದಷ್ಟು ಗಬ್ಬು ವಾಸನೆ ಬಂದು ನಾರುತ್ತಿರುವುದಲ್ಲದೆ, ಸಾಂಕ್ರಾಮಿಕ ರೋಗಕ್ಕೆ ರಹದಾರಿ ನೀಡಿದಂತಾಗಿದೆ.
ಈ ಬಗ್ಗೆ, ನಾಗರಿಕರು ಹತ್ತು ಹಲವು ಬಾರಿ ನಗರ ಪಾಲಿಕೆ ದೂರು ನೀಡಿದ್ದಾರೆ ಅಲ್ಲೇನು ಆಗ್ತಾ ಇಲ್ಲ. ಅಧಿಕಾರಿಗಳಿಗೆ ದೂರ್ ನೀಡಿದ್ದಾರೆ ಅಲ್ಲೂ ಏನು ಆಗ್ತಾ ಇಲ್ಲ. ಈ ಬಾರಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ಸಂತ್ರಸ್ತರ ತಂಡವೊಂದು ತಯಾರಾಗಿದೆ. ಸದ್ಯ ಜಿಲ್ಲಾಧಿಕಾರಿಗಳೇ ನಗರ ಪಾಲಿಕೆ ಆಡಳಿತಾಧಿಕಾರಿಯಾಗಿದ್ದು ಅದೇನು ಕ್ರಮ ವಹಿಸುತ್ತಾರೋ ಕಾದು ನೋಡಬೇಕಾಗಿದೆ. ಅಲ್ಲಿದೆ ಕೆಲವು ಚರಂಡಿಗಳು ನೇರವಾಗಿ ನದಿಗಳಿಗೆ ಲಿಂಕ್ ಇರೋದಕ್ಕೆ ನದಿ ನೀರುಗಳು ಕೂಡ ಕಲುಷಿತಗೊಂಡಿವೆ ಜಲಚರಗಳು ಸತ್ತಿವೆ ಹಾಗಾಗಿ ಈ ವಿಚಾರವಾಗಿ ಜಿಲ್ಲಾಡಳಿತ ಪ್ರಯಾರಿಟಿಯಾಗಿ, ತುರ್ತಾಗಿ ಈ ಕೆಲಸ ಮಾಡುವ ಅತ್ಯವಶ್ಯಕತೆ ಇದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

“ವಾಹನ ಮಾರಾಟ-RC ಬದಲಾವಣೆ  ಅಗತ್ಯ.. ಇಲ್ಲವಾದರೆ ಕಾನೂನು ಸಮಸ್ಯೆಗಳು ತಪ್ಪಿದ್ದಲ್ಲ..!” ಹೈಕೋರ್ಟ್
ಮಣಿಪಾಲ ಜೆಇಇ ಮೇನ್ಸ್ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಪ್ರಯತ್ನ….
ಹಿರಿಯಡ್ಕದ ಬಾರಿನಲ್ಲಿ ಸರಿ ಕುಡಿದು ಗುಂಡಾಗಿರಿ, ಬಿಯರ್ ಬಾಟಲಿಯಿಂದ ಹಲ್ಲೆ
Cocktail 2 ಸುತ್ತ ರಶ್ಮಿಕಾ ಮಂದಣ್ಣ ಕ್ರಿಯೇಟ್ ಮಾಡಿದ ಹೈಪ್ ಎಷ್ಟು ಗೊತ್ತಾ?ಅನ್ಟೋಲ್ಡ್ ಮಸಾಲೆ ಸ್ಟೋರಿಗಳು ಇಲ್ಲಿವೆ!
ಎಲ್ಲರಿಗೂ ಯುಗಾದಿ ಹಬ್ಬ… ಆದರೆ ಈ ಗ್ರಾಮಗಳಲ್ಲಿ ಭಯ ಮೌನ…ಹಬ್ಬ ಇಲ್ಲ…!ಒಂದು ವಿಚಿತ್ರ ಕಥೆ!
ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆ ಜಿಗಿತ-ಸುಂಕ ಏರಿಕೆಯಿಂದ ಬೆಲೆಯಲ್ಲಿ ಭಾರೀ ಏರಿಕೆ ಗ್ರಾಹಕರಿಗೆ ಹೊರೆ.
ಕನ್ನಡ ಫಿಲಂ ಇಂಡಸ್ಟ್ರಿ ಮರ್ಯಾದೆ “ಒಂದು ಬಾಟ್ಲು ಸಾರಾಯಿ, ಒಂದು ಚಮಚ ಉಪ್ಪಿನ ಕಾಯಿಗೆ”ಆನ್‌ಲೈನ್‌ನಲ್ಲಿ (Online) ಹರಾಜು..!
ವಿಮಾನ ಪ್ರಯಾಣ ದುಬಾರಿ: ಟಿಕೆಟ್ ದರ ಏರಿಕೆ ವಿರುದ್ಧ PIL: ಸರ್ಕಾರಕ್ಕೆ ಸುಪ್ರೀಂ ನೋಟಿಸ್
ಮನೆಗಣತಿ ಮಂಗಳೂರು ಮಹಾನಗರ ಪಾಲಿಕೆ-ಸ್ಪೀಕರ್ ಯು ಟಿ ಖಾದರ್ ಚಾಲನೆ
ಕೊಲೆ ಆರೋಪಿಯ ದೂರುದಾರನ ವಿಷ ಸೇವನೆಯ ಬಗ್ಗೆ  ಸ್ಪಷ್ಟನೆ
ಖಾದರ್‌ ಖಡಕ್ ವಾರ್ನಿಂಗ್ ವೈರಲ್ : ಆದರೆ ಖಡಕ್ ಆಕ್ಷನ್ ಯಾವಾಗ?”ಪ್ರತಿ ಮಳೆಯಲ್ಲೂ ಅದೇ ಕಥೆ: ರಸ್ತೆ ಗುಂಡಿ, ಅಪಘಾತ, ಎಚ್ಚರಿಕೆ, ಜವಾಬ್ದಾರಿ ಹೊತ್ತವರ ಜಾಣ ಮರೆವು!
ಪಿವಿ ಎಸ್ ಸಂಸ್ಥೆಯ ಆಡಳಿತದಲ್ಲಿ ಯಾರ ಹಸ್ತಕ್ಷೇಪವು ಇಲ್ಲ – ಸರೋಜಿನಿ ಕುಶೆ
ಭಾರತದಲ್ಲಿ ಮೊದಲ ಬಾರಿಗೆ ಭಾರೀ ಕ್ಯಾಪ್ಟಾಗನ್ “ಜಿಹಾದಿ ಡ್ರಗ್”ಜಾಲ ಬಯಲಾಗಿದ್ದು, ಸುಮಾರು ₹182 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ!ಅಪಾಯಕಾರಿ ಡ್ರಗ್ ದೇಶದೊಳಗೆ ಹೇಗೆ ಪ್ರವೇಶಿಸಿತು ಎಂಬುದರ ಬಗ್ಗೆ ತನಿಖೆ ತೀವ್ರವಾಗಿದೆ.
ಮಿಜಾರಿನಲ್ಲಿ ರಸ್ತೆ ಕುಸಿತ, ಸಾರ್ವಜನಿಕರಲ್ಲಿ ಆತಂಕ ಮೊದಲ ಮಳೆಯಲ್ಲೇ ಕೊಚ್ಚಿಹೋಯ್ತು ಹೆದ್ದಾರಿ! ಕೋಟಿ ಕೋಟಿ ಕಾಮಗಾರಿಯ ಅಸಲಿ ಮುಖ ಬಯಲು? 
“ಹಿಜಾಬ್ ಆದೇಶಕ್ಕೆ ಕರಾವಳಿಯಲ್ಲಿ ಬಿಜೆಪಿ ಸಿಡಿದೆದ್ದಿದೆ!ಓಲೈಕೆಗಾಗಿ ಶಿಕ್ಷಣವನ್ನೇ ಬಲಿ ಕೊಟ್ಟ ಕಾಂಗ್ರೆಸ್” – ಬಿಜೆಪಿ ವಾಗ್ದಾಳಿ.
ಸುರತ್ಕಲ್ ಹುಡುಗಿ ವಿಚಾರದಲ್ಲಿ ಹಲ್ಲೆ
ಪತ್ರಿಕೋದ್ಯಮವೇ? ಪ್ರಚೋದನೆಯೇ? ಸುಳ್ಳು ಸುದ್ದಿಗೆ ಕೋಮು ಬಣ್ಣ ಆರೋಪದಲ್ಲಿ 7 ಮಾಧ್ಯಮಗಳ ವಿರುದ್ಧ FIR…!
ಬಾರ್ ಲೆಕ್ಕಾಚಾರ-ಚೂರಿ ದಾಳಿ – ಯುವಕನ ಕುತ್ತಿಗೆಗೆ ಕೊಯ್ದು ಕೊಲೆ ಯತ್ನ
ಅಳಕೆ ಮಾರುಕಟ್ಟೆ ಬಳಿ ಕಸ ಸುರಿದ ಮಹಿಳೆಗೆ ₹1,000 ದಂಡ..ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದರೆ ದಂಡ ಖಚಿತ! 
ಮಂಗಳೂರು ಬೆಂಗಳೂರು ಮಧ್ಯೆ ಇನ್ನು ತಡರಾತ್ರಿಯೂ ವಿಮಾನ ಯಾನ
🎬 ಜೈಲರ್ 2 ಸೆಟ್‌ನಲ್ಲಿ ವಿದ್ಯುತ್ ಅವಘಡ…28 ವರ್ಷದ ಕಾರ್ತಿಕೇಯನ್ ವಿದ್ಯುತ್ ಶಾಕ್‌ಗೆ ಬಲಿ..
ಲಿವ್-ಇನ್ ಸಂಬಂಧಗಳಲ್ಲಿ ಕಾನೂನು ಮಿತಿ ಎಲ್ಲಿದೆ?-ಸುಪ್ರೀಂ ಕೋರ್ಟ್‌ನ ಮಹತ್ವದ ಪ್ರಶ್ನೆ
“ಧುರಂಧರ್” ನಟ ರಣವೀರ್ ಸಿಂಗ್‌ ವಿರುದ್ಧ ಇಡೀ ಬಾಲಿವುಡ್ ಒಕ್ಕೂಟವೇ ತಿರುಗಿಬಿದ್ದಿದ್ದೇಕೆ? shocking ₹45 ಕೋಟಿ ವಿವಾದದ ಅಸಲಿ ಕಥೆ ಇಲ್ಲಿದೆ!
ಮಂಗಳೂರು ನಗರದಲ್ಲಿ ಭಾರೀ ಪ್ರಮಾಣದ MDMA ವಶ – ಇಬ್ಬರು ಡ್ರಗ್ ಪೆಡ್ಲರ್‌ಗಳ ಬಂಧನ…
ತಡರಾತ್ರಿ ಭಟ್ಕಳದಲ್ಲಿ ವಿಚ್ಛಿದ್ರಕಾರಿ ಕೋಮುವಾದಿಗಳಿಂದ ದಾಂದಲೆ
ರಾಮ ಮಂದಿರ ಟ್ರಸ್ಟ್‌ಗೆ ಸರ್ಕಾರದ ನಿಯಂತ್ರಣವೇ ಇಲ್ಲ! ಆರ್‌ಟಿಐಗೂ ಬಾಧ್ಯತೆ ಇಲ್ಲ ಎಂದ ಸಿಐಸಿ
ವಿಟ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಯಲ್ಲಿ ಗಲಾಟೆ:
ಚುನಾವಣೆ ಗೆಲ್ಲುವುದು ಸಾಕಿನ್ನು, ರಾಷ್ಟ್ರದ ಸಣ್ಣ ಮತ್ತು ಮಧ್ಯಮ ವ್ಯವಹಾರ ಸ್ಥರ ಹಿತ ಕಾಪಾಡಿ
ಇದು IPLನಲ್ಲಿ ಹೊಸ ಹೀರೋ ಹುಟ್ಟಿದಂತೇ…ಆದ್ರೆ ಕ್ರಿಕೆಟ್ ಅಲ್ಲ, ಬಾಕ್ಸಿಂಗ್‌ನಲ್ಲಿ! 🥊🔥