📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

“ಬಾಂಬ್‌ಗಿಂತ ಅಪಾಯಕಾರಿ ಅಹಂಕಾರ …! ಜಗತ್ತೇ ಕಾಯುತ್ತಿದೆ… ಮುಂದೇನು?”

ಮೌನವೇ ದೊಡ್ಡ ಸಂಶಯ — ಇಸ್ರೇಲ್ ಪಾತ್ರ ಏನು?ಪವರ್ ಗೇಮ್ ಮಧ್ಯೆ ಸಿಲುಕಿದ ಜಗತ್ತು!ದೊಡ್ಡ ದೇಶಗಳ ಆಟ… ಸಾಮಾನ್ಯ ಜನರ ನೋವು,ಯುದ್ಧ ಶುರು ಮಾಡೋದು ಸುಲಭ… ಮುಗಿಸಲು ಯಾರಿಗೂ ಸಾಧ್ಯವಾಗುತ್ತಿಲ್ಲ!

ಯುದ್ಧದ ಕಥೆ – ಯಾರು ಶುರುಮಾಡಿದರು?

2026ರಲ್ಲಿ ಮಧ್ಯಪೂರ್ವದಲ್ಲಿ ಉಂಟಾದ ಈ ಸಂಘರ್ಷವು ಏಕಾಏಕಿ ಹುಟ್ಟಿದುದಲ್ಲ. ಅಮೆರಿಕಾ (ಟ್ರಂಪ್ ನೇತೃತ್ವದಲ್ಲಿ) ಮತ್ತು ಇಸ್ರೇಲ್ ಸೇರಿ ಇರಾನ್ ಮೇಲೆ ದಾಳಿ ನಡೆಸಿದ ನಂತರ ಪರಿಸ್ಥಿತಿ ಉಗ್ರಗೊಂಡಿತು. ಅಮೆರಿಕಾ ಇದನ್ನು “ಇರಾನ್ ಜಗತ್ತನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದೆ,ಸುರಕ್ಷತೆಗಾಗಿ ಮುನ್ನೆಚ್ಚರಿಕೆ ಕ್ರಮ” ಎಂದು ಹೇಳಿದರೆ, ಇರಾನ್ ಇದನ್ನು ನೇರ ಆಕ್ರಮಣವೆಂದು ಹೇಳಿ “ನಾವು ಪ್ರತಿರೋಧ ಮಾಡ್ತಿದ್ದೇವೆ”ಅಂತ ಪ್ರತಿಕ್ರಿಯೆ ನೀಡುತ್ತಿದೆ. ಹೀಗಾಗಿ, ಯಾರು ತಪ್ಪು, ಯಾರು ಸರಿ ಎಂಬುದಕ್ಕಿಂತ “ಯಾರು ಮೊದಲ ಹೊಡೆತ ಕೊಟ್ಟರು?” ಎಂಬ ಪ್ರಶ್ನೆಯೇ ಹೆಚ್ಚು ಚರ್ಚೆಯಾಗಿದೆ.

ಹಾರ್ಮುಜ್” ಅಲ್ಲ… “ಟ್ರಂಪ್ ಜಲಸಂಧಿ”?

ಹಾರ್ಮುಜ್ ಜಲಸಂಧಿ ಈ ಯುದ್ಧದ ಕೇಂದ್ರಬಿಂದುವಾಗಿದೆ. ಜಗತ್ತಿನ ಬಹುಪಾಲು ತೈಲ ಸಾಗಾಟ ಇದೇ ಮಾರ್ಗದಿಂದ ಸಾಗುತ್ತದೆ. ಇರಾನ್ ಇದನ್ನು ತನ್ನ ನಿಯಂತ್ರಣದಲ್ಲಿ ಇಡಲು ಪ್ರಯತ್ನಿಸುತ್ತಿದೆ. ಅಮೆರಿಕಾ ಇದನ್ನು ತೆರೆಯಲು ನೌಕಾಪಡೆಯಿಂದ ಒತ್ತಡ ಹಾಕುತ್ತಿದೆ. ಟ್ರಂಪ್ ಕಠಿಣ ಮಾತುಗಳಲ್ಲಿ ಎಚ್ಚರಿಕೆ ನೀಡುತ್ತಾ, ಕೆಲವೊಮ್ಮೆ “ಇದು ಈಗ ನಮ್ಮ ನಿಯಂತ್ರಣದಲ್ಲಿ ಇರಬೇಕು” ಇದನ್ನು “Strait of Trump” ಎಂದು ಕರೆಯುತ್ತಿದ್ದಾರೆ.

ಇರಾನ್ ನಿಲುವು – ತಗ್ಗುವುದಿಲ್ಲ ಇರಾನ್ ಸ್ಪಷ್ಟವಾಗಿ ಹೇಳಿದೆ: “ಹಾರ್ಮುಜ್ ನಮ್ಮ ಹಕ್ಕು, ನಮ್ಮ ನಿಯಂತ್ರಣದಲ್ಲೇ ಇರುತ್ತದೆ.” ಅಮೆರಿಕಾ ಒತ್ತಡಕ್ಕೆ ಮಣಿಯುವುದಿಲ್ಲ, ಮತ್ತೆ ದಾಳಿ ಮಾಡಿದರೆ ಕಠಿಣ ಪ್ರತಿಕ್ರಿಯೆ ಕೊಡುತ್ತೇವೆ ಎಂದು ಎಚ್ಚರಿಸಿದೆ. ಮಾತುಕತೆಗೆ ಸಿದ್ಧತೆ ಇದೆ ಆದರೆ ಒತ್ತಡದ ರಾಜಕೀಯವನ್ನು ಒಪ್ಪುವುದಿಲ್ಲ ಎಂಬುದು ಅವರ ನಿಲುವು.

ಇಸ್ರೇಲ್ – ಮೌನದ ಹಿಂದೆ ಪಾತ್ರ

ಯುದ್ಧದ ಆರಂಭದಲ್ಲಿ ಇಸ್ರೇಲ್ ಪ್ರಮುಖ ಪಾತ್ರ ವಹಿಸಿದ್ದರೂ, ಈಗ ಅದು ಬಹಳಷ್ಟು ಮೌನವಾಗಿದೆ. ಆದರೆ ಇದು ಸಂಪೂರ್ಣ ದೂರವಾಗಿದೆ ಎಂದಲ್ಲ. ಹಿಂದಿನಿಂದ ಸೈನಿಕ ಮತ್ತು ತಾಂತ್ರಿಕ ಬೆಂಬಲ ನೀಡುತ್ತಿದೆ ಎಂಬ ಅಭಿಪ್ರಾಯ ಇದೆ. ಸಾಮಾನ್ಯ ಜನರ ದೃಷ್ಟಿಯಲ್ಲಿ, “ಯುದ್ಧ ಶುರುಮಾಡಿಸಿ ಈಗ ಮೌನವಾಗಿರುವುದು” ಎಂಬ ಟೀಕೆ ಕೇಳಿಬರುತ್ತಿದೆ.

ಟ್ರಂಪ್ – ಅತಂತ್ರ

ಟ್ರಂಪ್ ತಮ್ಮ ಕ್ರಮವನ್ನು ಯಶಸ್ವಿಯೆಂದು ತೋರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ನೆಲಮಟ್ಟದ ಸ್ಥಿತಿ ನೋಡಿದರೆ, ಸಮಸ್ಯೆಗಳು ಇನ್ನೂ ಮುಂದುವರಿದಿವೆ. ಜಲಸಂಧಿ ಸಂಪೂರ್ಣವಾಗಿ ತೆರೆಯಲ್ಪಟ್ಟಿಲ್ಲ, ತೈಲ ಬೆಲೆ ಏರಿಕೆಯಾಗಿದೆ, ಜಾಗತಿಕ ಒತ್ತಡ ಹೆಚ್ಚಾಗಿದೆ. ಇದರಿಂದ “ಯುದ್ಧ ಶುರು ಮಾಡುವುದು ಸುಲಭ, ಮುಗಿಸುವುದು ಕಷ್ಟ” ಎಂಬ ಟೀಕೆಗಳು ಕೇಳಿಬರುತ್ತಿವೆ.

ಸಾಮಾನ್ಯ ಜನರ ಮನಸ್ಥಿತಿ

ಈ ಯುದ್ಧದ ದೊಡ್ಡ ಹೊಡೆತ ಸಾಮಾನ್ಯ ಜನರಿಗೆ ತಟ್ಟುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ, ಆರ್ಥಿಕ ಒತ್ತಡ — ಇವು ಜನರ ದಿನನಿತ್ಯದ ಜೀವನವನ್ನು ಪ್ರಭಾವಿಸುತ್ತಿವೆ. “ದೊಡ್ಡ ದೇಶಗಳ ರಾಜಕೀಯ ಆಟ, ಆದರೆ ಕಷ್ಟ ನಮಗೆ” ಎಂಬ ಭಾವನೆ ವ್ಯಾಪಕವಾಗಿದೆ.

ಈ ಯುದ್ಧವು— ಶಕ್ತಿ, ಅಹಂಕಾರ, ತೈಲ ಮತ್ತು ರಾಜಕೀಯದ ಮಿಶ್ರಣ. ಟ್ರಂಪ್ ಒತ್ತಡ ಹಾಕುತ್ತಿದ್ದಾರೆ, ಇರಾನ್ ತಗ್ಗುತ್ತಿಲ್ಲ, ಇಸ್ರೇಲ್ ಮೌನದಲ್ಲಿದೆ. ಆದರೆ ಕೊನೆಗೆ, ಈ ಎಲ್ಲಾ ನಡುವೆ ಸಾಮಾನ್ಯ ಜನರೇ ಹೆಚ್ಚು ಬೆಲೆ ಕಟ್ಟುತ್ತಿದ್ದಾರೆ.

##Israel #MiddleEast #HiddenMoves #WarAnalysis##Trump #USIran #PowerPlay #WorldPolitics

COMMENTS

Login with Gmail to comment

ಇನ್ನಷ್ಟು ಸುದ್ದಿ

ಹೋಳಿ ಮತ್ತು ರಂಜಾನ್ ಒಂದು ಜೀವವನ್ನೇ ನುಂಗಿತು..!
60 ದಿನಗಳ ಸ್ಟಾಕ್ – ಭಾರತಕ್ಕೆ ಎಲ್‌ಪಿಜಿ ಚಿಂತೆ ಇಲ್ಲ!
ಏರ್ ಇಂಡಿಯಾದಿಂದ ದೈನಂದಿನ ವಿಮಾನ ಹಾರಾಟದ ಬಗ್ಗೆ ನೂತನ ಪ್ರಕಟಣೆ
ತಮಿಳುನಾಡು ಮುಖ್ಯಮಂತ್ರಿ ವಿಜಯ್, ಚಧುರಂಗದಾಟದಲ್ಲಿ ಲಾಂಗ್ ಟೈಮ್ ಉಳಿಯುವರೇ?
ಕರ್ನಾಟಕದ ಮಾಜಿ ಸಚಿವರಿಗೆ ಜೈಲು ಜೈಲು ಶಿಕ್ಷೆಗೆ ಉಪಮುಖ್ಯಮಂತ್ರಿ ಡಿಕೆಯ ಶಾಕ್ ಸ್ಟೇಟ್ಮೆಂಟ್
8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ
ನಾಲ್ಕು ದಶಕಗಳ ಕಾಲ ರೋಗಿಗಳಿಗೆ ಜೀವ ನೀಡಿದ ವೈದ್ಯನೇ ಇಂದು ಯಾಕೆ ತನ್ನ ಜೀವ ತಾನೇ ತೆಗೆದುಕೊಂಡರು …
ಮಂಗಳೂರುಗೆ ಹೈಕೋರ್ಟ್ ಸರ್ಕ್ಯೂಟ್ ಬೆಂಚ್: ಕರಾವಳಿಗೆ ಐತಿಹಾಸಿಕ ನ್ಯಾಯಾಂಗ ಶಕ್ತಿ ನೀಡುವ ಮಹತ್ವದ ಹೆಜ್ಜೆ..
ದೇಶಾದ್ಯಂತ ಇಂದು ಮೊಬೈಲ್‌ನಲ್ಲಿ ತುರ್ತು ಎಚ್ಚರಿಕೆ ಡ್ರಿಲ್ – ಗಾಬರಿ ಬೇಡ
“ಕಾಂತರಾ” ಖ್ಯಾತಿಯ ಸಪ್ತಮಿ ಗೌಡ, ದುಮುಕಿದ್ದು  ಹೋರಾಟದ ಅಂಗಳಕ್ಕೆ
ಹಳೆಯ ಬಟ್ಟೆಗೂ ಹಣ ಸಿಗುತ್ತಾ?! ಬೆಂಗಳೂರಿನ ಈ ಸ್ಟಾರ್ಟ್‌ಅಪ್ ನಿಜಕ್ಕೂ ಶಾಕ್ ಕೊಡುತ್ತಿದೆ!
ಇ-ಸಿಗರೇಟ್‌ಗೆ ಭಾರಿ ಡಿಮ್ಯಾಂಡ್ – ಗೋಣಿ ಚೀಲದಲ್ಲಿಸಂಗ್ರಹಿಸಿಟ್ಟ ಆರೋಪಿ ಬಂಧನ..!
ಜನಿವಾರಕ್ಕೆ ಕೈ ಹಾಕಿದವರು, ಪರ್ಮನೆಂಟ್ ಮನೆಗೆ ಹೋಗುವ ದಾರಿಯಲ್ಲಿ….
ದೇಶಕ್ಕಾಗಿ ಹಾರಿದ ಯುವ ಪೈಲಟ್: ಅಸ್ಸಾಂ ದುರಂತದಲ್ಲಿ ಐಎಎಫ್ ಅಧಿಕಾರಿ ವೀರಮರಣ
ರಾಜ್ಯದ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಾಗಿ ಉನ್ನತೀಕರಿಸಲು 3900 ಕೋಟಿ ಮೀಸಲು
ದೊಡ್ಡ ಮಿಕವನ್ನೇ ಬಲೆಗೆ ಹಾಕಿದ  ಲೋಕಾಯುಕ್ತ ಪೊಲೀಸರು 
ಉದ್ಯಮಿ, ಕಾಲೇಜ್ topper,  ಕೋಟ್ಯದೀಶರೇ…ಕಠಿಣ ಜೈನ ಸನ್ಯಾಸದತ್ತ…!
ಉಪಚುನಾವಣೆ ಮುಗಿಯುತಿದ್ದಂತೆಯೇ, ವಿದ್ಯುತ್ ದರ ಏರಿಸುತ್ತಿರುವ ರಾಜ್ಯ ಸರ್ಕಾರ
Golden Hour ಉಳಿಸುವತ್ತ ಗ್ರಾಮದಿಂದ ನಗರವರೆಗೆ – ಕರ್ನಾಟಕ ಹೆಲ್ತ್ ಸಿಸ್ಟಮ್ ಮಹತ್ವದ ಹೆಜ್ಜೆ
ರಸ್ತೆಯ ವಿಚಾರಕ್ಕೆ ನೆರೆಹೊರೆಯರ ನಡುವೆ ಬಾರಿ ಗಲಾಟೆ !
ಮಂಗಳೂರು ಗ್ರಾಮಾಂತರ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ
ಬ್ಯಾಂಕುಗಳ ಮೇಲೆ ಭೀಕರ ದಾಳಿಯ ಮುನ್ಸೂಚನೆ ನೀಡಿದ ಇರಾನ್- ಮಿನಿಮಮ್ 1000 ಮೀಟರ್ ದೂರವಿರಿ
“ಬೆಡ್‌ರೂಮ್ ರಾಜಕೀಯ”ಪಪ್ಪು ಯಾದವ್ ಹೇಳಿಕೆ ಸ್ಫೋಟಕ ಚರ್ಚೆ…!ಪಪ್ಪು ತಪ್ಪಾಗ್ ಮಾತಾಡಿದ್ದು ತಪ್ಪು 
ನಾಸಿಕ್‌ನ Tata Consultancy Services ಕಚೇರಿಯಲ್ಲಿ ಗಂಭೀರ ಆರೋಪಗಳ ನಡುವೆ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ — ಸುರಕ್ಷತೆಗೆ ಮೊದಲ ಆದ್ಯತೆ.
ಹೋಟೆಲ್, ಕೆಫೆ ಬಿಸಿ ಬಿಸಿ ಪ್ಲಾಸ್ಟಿಕ್ ಲ್ಲಿ ಪಾರ್ಸೆಲ್‌ಗೆ ಬ್ರೇಕ್ –ಹಾಗೆ 5ರೂ 10ರೂ ಬೀಡಿ ಸಿಗರೇಟ್ ಗುಟ್ಕಾಕ್ಕೆ ₹1000 ದಂಡ ಕಟ್ಟಬೇಕಾದಿತು ಎಚ್ಚರ …!
ನಿಶ್ಚಿತಾರ್ಥ ಮಾಡಿಕೊಂಡು, ಫೈನಾನ್ಸಿಯಲ್ ವಂಚನೆ ದೂರು ದಾಖಲು
ಸೋಶಿಯಲ್ ಮೀಡಿಯಾ ಮೂಲಕ ಸಾರ್ವಜನಿಕರಲ್ಲಿ ಭಯ ಸೃಷ್ಠಿ -45 ಜನರ ಬಂಧನ
KIOCL ಮತ್ತು NDMC ವಿಲೀನಕ್ಕೆ ಶಾಸಕ ಡಾ. ಭರತ್ ಶೆಟ್ಟಿಯಿಂದ ಕೇಂದ್ರ ಸಚಿವರಿಗೆ ಮನವಿ
“ಗ್ಯಾರಂಟಿ “ಹಣದ ಮೇಲೆ ಆಯೋಗದ ಕಣ್ಣು: ಸಿಎಂ ಸಿಡಿಮಿಡಿ ..ರಾಜಕೀಯ ಕಿಡಿ!
ಎಲ್ಲೆಡೆ LPG ಗ್ಯಾಸ್ ಸಿಲಿಂಡರ್ ಸಂಕಷ್ಟ: ಇದು ಜೀವನೋಪಾಯದ ಪ್ರಶ್ನೆ… ತಕ್ಷಣ ಸಮರ್ಪಕ ಕ್ರಮ ಸರ್ಕಾರದ ಹೊಣೆ.