📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಹೆಣ್ಣು ಎಂಬ ಕನಿಕರ, ಸಿಗದ ಹಾಗೆ ಮಾಡಿದ ಮಾಯಾಂಗನೇ…

ಇತ್ತೀಚೆಗಿನ ದಿನದಲ್ಲಿ ನಡೆಯುತ್ತಿರುವ ಅನೇಕ ಕ್ರಿಮಿನಲ್ ಪ್ರಕರಣಗಳಲ್ಲಿ ಹೆಣ್ಣು ಮಕ್ಕಳ ಪಾತ್ರ ಪ್ರಮುಖವಾಗಿ ಕಂಡುಬರುತ್ತದೆ. ಯಾವ ಮಟ್ಟಕ್ಕೂ ಇಳಿಯಬಲ್ಲರು ಅನ್ನುವುದನ್ನು ಅವರ ವರ್ತನೆಯು ಪ್ರೂವ್ ಮಾಡುತ್ತಿದೆ. ಅಂತಹುದೇ ಒಂದು ಪ್ರಕರಣವು ರಾಷ್ಟ್ರ ರಾಜಧಾನಿಯಲ್ಲಿ ಪತ್ತೆಯಾಗಿದೆ ನೋಡಿ.
2016ರಲ್ಲಿ ಹರಿಯಾಣದ ಕೌಶಂಬಿ ಜಿಲ್ಲೆಯ ಮಹಾ ವಾಗತ್ ಪೊಲೀಸ್ ಠಾಣಾ ವ್ಯಾಪ್ತಿಯ ಅಲ್ವಾರ ಗ್ರಾಮದ ನಿವಾಸಿ ರಾಜು ತಿವಾರಿ ಎಂಬವರ ಜೊತೆಗೆ ಸದರ್ ಕೊತ್ವಾಲಿಯ ತೇವಾಂ ಗ್ರಾಮದ ಅಂಕಿತ ಶರ್ಮ ವಿವಾಹವು ಅದ್ದೂರಿಯಾಗಿ ನಡೆಯುತ್ತದೆ. ರಾಜು ತಿವಾರಿಯನ್ನು ಮದುವೆಯಾದ ಅಂಕಿತ ಶರ್ಮ, ತಿವಾರಿ ಮನೆಯ ಸೊಸೆಯಾಗಿ ಉತ್ತಮ ಹೆಸರನ್ನು ಸಂಪಾದಿಸಲಿಲ್ಲ. ಈ ಕಾರಣದಿಂದಾಗಿ ಕುಟುಂಬದಲ್ಲಿ ಒಂದಷ್ಟು ಗೊಂದಲಗಳು ಇದ್ದವು . ಅಷ್ಟೇ ಅಲ್ಲ, ಅಂಕಿತ ಶರ್ಮ ನಡತೆ ತೀವ್ರ ಚರ್ಚೆಗೂ ಕಾರಣವಾಗಿತ್ತು. ಪದೇ ಪದೇ ತವರು ಮನೆಗೆ ಹೋಗುತ್ತಿದ್ದ ಅಂಕಿತ್ ಶರ್ಮ, ಈ ಸಂದರ್ಭದಲ್ಲಿ ಇನ್ನೊಬ್ಬನ ಜೊತೆಗೆ ಸರಸವಾಡುತ್ತಿದ್ದಳು. ಈ ವಿಚಾರವಾಗಿ ರಾಜು ತಿವಾರಿ ಮನನೊಂದಿದ್ದ. ಅಂಕಿತ್ ಶರ್ಮಾ ತಂದೆ ತಾಯಿಯರಿಗೂ ತಿಳುವಳಿಕೆ ಹೇಳಲು ಹೇಳಿದ್ದರು ಪರಿಣಾಮ ಶೂನ್ಯವಾಗಿತ್ತು.
2024ರಲ್ಲಿ ಈ ಅಂಕಿತ್ ಶರ್ಮ, ಸ್ವತಃ ತನ್ನ ಚಿಕ್ಕಮ್ಮನ ಮಗ ರಾಮ್ ಆಲಿಯಾಸ್ ಸಂಕಲ್ಪ ಮಿಶ್ರ ಜೊತೆಗೆ ಓಡಿ ಹೋಗಿದ್ದಳು. ಈ ಸಂದರ್ಭದಲ್ಲಿ ಪಂಚಾಯಿತಿಗೆ ನಡೆದು ಎರಡು ಕುಟುಂಬದ ಹಿರಿಯರು ಮಾತನಾಡಿ ಇನ್ನು ಮುಂದೆ ಈ ರೀತಿಯ ತಪ್ಪು ಮಾಡುವುದಿಲ್ಲ ಎಂದು ಅಂಕಿತ್ ಶರ್ಮ ಕ್ಷಮೆ ಕೋರಿದ ನಂತರ ಅವತ್ತಿನ ಪ್ರಕರಣ ಸುಖಾಂತ್ಯವಾಗಿತ್ತು.
ಆದರೆ, ಇದೇ 2026ರ ಜನವರಿ 21ರಂದು ಅಂಕಿತ್ ಶರ್ಮ ಮನೆಯಲ್ಲಿದ್ದ ಚಿನ್ನ ಹಾಗೂ ನಗದು ಹಣವನ್ನು ದೋಚಿಕೊಂಡು ಪರಾರಿಯಾಗುತ್ತಾಳೆ. ಹಾಗೆ ಪರಾರಿಯಾದ ವಿಚಾರದಲ್ಲಿ ರಾಜು ತಿವಾರಿ ಮಹಾ ವಾಗತ್ ಪೊಲೀಸ್ ಠಾಣೆಯಲ್ಲಿ ಹೆಂಡತಿ ಕಾಣೆಯಾಗಿದ್ದರ ಬಗ್ಗೆ ದೂರು ದಾಖಲಿಸಿರುತ್ತಾರೆ.
ಯಾವಾಗ ಅಂಕಿತ್ ಶರ್ಮ ಕಾಣೆಯಾಗಿದ್ದಾಳೆ ಎನ್ನುವುದು ಗೊತ್ತಾಗುತ್ತದೆಯೋ, ಆಗ ಅಂಕಿತ್ ಶರ್ಮಾ ತಂದೆ ಸಹಿತ ಕೆಲವರು ಬಂದು ರಾಜು ತಿವಾರಿಯ ಮೇಲೆ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಪ್ರಕರಣವನ್ನು ದಾಖಲಿಸುತ್ತಾರೆ. ಇದರಿಂದಾಗಿ ರಾಜು ತಿವಾರಿ ಜೈಲು ಪಾಲಾಗುತ್ತಾರೆ. ಕಳೆದ ಜನವರಿಯಲ್ಲಿ ಜೈಲು ಪಾಲಾದ ರಾಜು ತಿವಾರಿಗೆ, ಈಗ ಜೈಲಿನಿಂದ ಬಿಡುಗಡೆಯಾಗುವ ಭಾಗ್ಯ ಬಂದಿದೆ. ಅಂಕಿತ ಶರ್ಮಾ ಹಾಗೂ ಆತನ ಪ್ರಿಯಕರ ಮತ್ತು ಅವಳ ತಂದೆಯು ಸೇರಿದಂತೆ ನಾಲ್ಕು ಜನರ ಮೇಲೆ ಗಂಭೀರ ಪ್ರಕರಣ ದಾಖಲಾಗಿದೆ ಮತ್ತು ಜೈಲಿನ ಹೊಳಕ್ಕೆ ಹೋಗಿದ್ದಾರೆ.
ಅಷ್ಟಕ್ಕೂ ಆಗಿದ್ದೇನು ಗೊತ್ತಾ?
ಅಂಕಿತ್ ಶರ್ಮಾ ಜನವರಿ 21ರಂದು ಒಡವೆ ಹಾಗೂ ಹಣದೊಂದಿಗೆ ಅದೇ ತನ್ನ ಚಿಕ್ಕಮ್ಮನ ಮಗ ಸಂಕಲ್ಪ ಮಿಶ್ರ ಜೊತೆ ದೆಹಲಿಗೆ ಪರಾರಿ ಯಾಗುತ್ತಾಳೆ. ಇತ್ತ ಈ ವಿಚಾರ ಅವಳ ತಂದೆಗೆ ಗೊತ್ತಿದ್ದರೂ ಸಹ, ಅವರು ರಾಜು ತಿವಾರಿಯ ಮೇಲೆ ವರದಕ್ಷಿಣೆ ಹಾಗೂ ಕೊಲೆ ಪ್ರಕರಣವನ್ನು ದಾಖಲಿಸುತ್ತಾರೆ. ರಾಜು ತಿವಾರಿ ಜೈಲಿಗೆ ಹೋಗುತ್ತಿದ್ದಂತೆಯೇ ಅಂಕಿತ್ ಶರ್ಮ ಸಂಕಲ್ಪ ಶರ್ಮನ ಜೊತೆ ದೆಹಲಿಯಲ್ಲಿ ಬಿಂದಾಸಾಗಿ ಎಂಜಾಯ್ ಮಾಡುತ್ತಿದ್ದಲು. ಈ ಒಂದು ವಿಚಾರ ಕೌಶಂಬಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅನಾಮಧೇಯ ವ್ಯಕ್ತಿಯಿಂದ ತಿಳಿದು ಬರುತ್ತದೆ. ಆ ಒಂದು ಮೆಸೇಜಿನ ಆಧಾರದ ಮೇಲೆ ಮಹಾವಾಗ ಪೊಲೀಸ್ ಠಾಣೆಯ ಪೊಲೀಸರು ದೆಹಲಿಯಲ್ಲಿ, ಸಕತ್ತಾಗಿ ಎಂಜಾಯ್ ಮಾಡುತ್ತಿದ್ದ ಅಂಕಿತ್ ಶರ್ಮಾ ಮನೆಯ ಬಾಗಿಲನ್ನು ಬಡಿಯುತ್ತಾರೆ. ಎದುರುಗಡೆ ಪೊಲೀಸರನ್ನು ಕಾಣುತ್ತಿದ್ದಂತೆಯೇ ಅಂಕಿತ್ ಶರ್ಮ ನಡುಗಿ ಹೋಗುತ್ತಾಳೆ. ತನ್ನ ಜೊತೆಗೆ ಕರೆದು ತಂದಿದ್ದ ಸಂಕಲ್ಪ ಶರ್ಮ, ತಪ್ಪಿಸಿಕೊಳ್ಳಲು ಹೆಣಗಾಡಿದರು ಪೊಲೀಸರು ಬಿಡಲಿಲ್ಲ. ಅವರಿಬ್ಬರನ್ನು ಹೆಡೆಮರಿ ಕಟ್ಟಿ ಹರಿಯಾಣಕ್ಕೆ ಕರೆದೊಯ್ದಿದ್ದಾರೆ ಪೊಲೀಸರು. ಈ ಎಲ್ಲಾ ವಿಚಾರವನ್ನು ಕೌಶಂಬಿ ಎಸ್ ಪಿ ರಾಜೇಂದ್ರ ಕುಮಾರ್ ತಿಳಿಸಿದ್ದಾರೆ. ವಿನಾಕಾರಣ ಜೈಲಿನೊಳಗಿದ್ದ ರಾಜ್ ತಿವಾರಿ ಬಂದ ಮುಕ್ತರಾಗಿದ್ದಾನೆ.

##CrimeCase #FalseAllegations #DowryCase##SocialAwareness#JusticeServed #HaryanaCase

COMMENTS

Login with Gmail to comment

ಇನ್ನಷ್ಟು ಸುದ್ದಿ

ಸಂಸತ್ತಿನಲ್ಲಿ ಇತಿಹಾಸ ಸೃಷ್ಟಿಸುವ ಚರ್ಚೆ-ಮಹಿಳಾ ಮೀಸಲು ಬಿಲ್ಲಿನ ಸುತ್ತ ಕಂಗೊಳಿಸಿದ ಸಂಸತ್ !
60 ಕೋಟಿ ರೂ. ಸರ್ಕಾರಿ ಹಣ ಗುಳುಂ: ಸಿಬಿಐ ಬಲೆಯಲ್ಲಿ ಹಿರಿಯ ಐಎಎಸ್ ಅಧಿಕಾರಿ!
ತಿರುಪತಿಯಲ್ಲಿ ಒಂದಿಡೀ ಕುಟುಂಬವೇ ನಾಶ!
ಬಾಲಗರ್ಭಿಣಿಯರ ಸಂಖ್ಯೆ 5975….!!
ಅಹಮದಾಬಾದ್ ಬಾಂಬ್ ಸ್ಫೋಟ:38 ಮಂದಿಗೆ ಗಲ್ಲು ಎತ್ತಿಹಿಡಿದ ಹೈಕೋರ್ಟ್
ಬಂಟ್ಸ್ ಹಾಗೂ ಬಿಲ್ಲವ ಸಮುದಾಯವನ್ನೇ ಅವಹೇಳಿಸಿ ಮಾತಾಡಿ ವಿಡಿಯೋ ವೈರಲ್ ರಾತ್ರೋರಾತ್ರಿ… ..ಫೇಮಸ್ ಆದ ಅನಿತಾಳ ಬಂಧನ ..!
War update-ಕಂಪ್ಲೀಟ್ ಡೀಟೇಲ್ಸ್ …ಮುಂದೇನು? ceasefire ಮುಂದುವರಿಯುತ್ತದೆಯಾ?ಶಾಂತಿ ಅಥವಾ ಸಂಘರ್ಷ? ಮುಂದಿನ ಕೆಲ ದಿನಗಳು ವಿಶ್ವದ ಭವಿಷ್ಯ ತೀರ್ಮಾನಿಸುತ್ತದೆ.
ಪ್ರಜ್ಞೆ ಬಂದಾಗ ಎದೆಯ ಮೇಲೆ ಬಿದ್ದಿತ್ತು ಪತಿಯ ಶವ!ಹಸೆಮಣೆ ಏರಿದ ಕೆಲವೇ ಗಂಟೆಗಳಲ್ಲಿ ಕತ್ತಲಾದ ಬದುಕು..
50 ಸಾವಿರ ಸಾಲಕ್ಕೆ ಸವಣೂರು ಪೇಟೆಯಲ್ಲಿ ರಕ್ತಸಿಕ್ತ ಘರ್ಷಣೆ ..
ಇ-ಸಿಗರೇಟ್‌ಗೆ ಭಾರಿ ಡಿಮ್ಯಾಂಡ್ – ಗೋಣಿ ಚೀಲದಲ್ಲಿಸಂಗ್ರಹಿಸಿಟ್ಟ ಆರೋಪಿ ಬಂಧನ..!
‘ಮೇಕ್ ಇನ್ ಇಂಡಿಯಾ’ಗೆ ಮತ್ತೊಂದು ದೊಡ್ಡ ಗೆಲುವು: C295 ವಿಮಾನದ ಮೊದಲ ಯಶಸ್ವಿ ಪರೀಕ್ಷಾ ಹಾರಾಟ
ಇಂದು ಆನ್‌ಲೈನ್ ಔಷಧ ಮಾರಾಟ ವಿರುದ್ಧ ದೇಶವ್ಯಾಪಿ ಆಕ್ರೋಶ!ದಕ್ಷಿಣ ಕನ್ನಡದಲ್ಲಿ 1100 ಮೆಡಿಕಲ್ ಶಾಪ್ ಬಂದ್!
ಭಾರತದಲ್ಲಿ ಮೊದಲ ಬಾರಿಗೆ ಭಾರೀ ಕ್ಯಾಪ್ಟಾಗನ್ “ಜಿಹಾದಿ ಡ್ರಗ್”ಜಾಲ ಬಯಲಾಗಿದ್ದು, ಸುಮಾರು ₹182 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ!ಅಪಾಯಕಾರಿ ಡ್ರಗ್ ದೇಶದೊಳಗೆ ಹೇಗೆ ಪ್ರವೇಶಿಸಿತು ಎಂಬುದರ ಬಗ್ಗೆ ತನಿಖೆ ತೀವ್ರವಾಗಿದೆ.
ಹೆಚ್.ಪಿ.ವಿ. ಚುಚ್ಚು ಮದ್ದಿನ ಬಗ್ಗೆ ಗೊಂದಲ ಬೇಡ: ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ
ಕಂಬಳಕ್ಕೆ ಘೋಷಿತ ಅನುದಾನ ಕೊಡುವಂತೆ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ..
ಮೂಡಬಿದ್ರೆ ಪೊಲೀಸ್ ಅಧಿಕಾರಿಯ ಮಾನ ಹರಾಜಿಗೆ ನಿಂತವರು ಯಾರು?
ನಿಮ್ಮ ಮಾತು ಕೇಳಿ ರಾಜೀನಾಮೆ ನೀಡಿದ್ದೇನೆ. ಈಗ ನನ್ನ ಬೇಡಿಕೆ ಈಡೇರಿಸುವುದು ನಿಮ್ಮ ಸರದಿ  ಎಂದ ಸಿದ್ದರಾಮಯ್ಯ
ಮಹಿಳೆಯ ಸ್ಕೂಟಿಯನ್ನೇ ಕದ್ದ ಕಳ್ಳರು….. ಹೆಚ್ಚುತ್ತಿರುವ ವಾಹನ ಕಳ್ಳತನ
ಭಾರತೀಯ ಸೇನೆಯ ಚಲನವಲನದ ವಿಡಿಯೋಗಳು ಪಾಕಿಸ್ತಾನಕ್ಕೆ ಹೇಗೆ ತಲುಪಿದವು?
“ಕುನಾಲ್ ಶಾ ವಾಟ್ಸಾಪ್ ಗ್ಲೋಬಲ್ ಹೆಡ್! ಸುಂದರ್ ಪಿಚೈ, ಸತ್ಯ ನಾಡೆಲ್ಲಾ ಸಾಲಿಗೆ ಮತ್ತೊಬ್ಬ ಭಾರತೀಯನ ಸೇರ್ಪಡೆ.
ಸಿಎಂ ಕುರ್ಚಿಯನ್ನು, ಡಿಕೆಗೆ ಮಗ್ಗಲ ಮುಳ್ಳನ್ನಾಗಿಸಲು ಸಕಲ ತಯಾರಿ
ಬಾಲ್ಯವಿವಾಹಕ್ಕೆ ಬ್ರೇಕ್ ಹಾಕಲು ಮಹಾರಾಷ್ಟ್ರದ ಮಾಸ್ಟರ್ ಪ್ಲಾನ್: ಇನ್ವಿಟೇಶನ್ ಕಾರ್ಡ್‌ನಲ್ಲಿ ಜನ್ಮ ದಿನಾಂಕ ಕಡ್ಡಾಯ!
ಮಂಗಳೂರಿನಲ್ಲಿ ಪಕ್ಕಪ್ಲಾನ್ ಡ್ ಅಟ್ಯಾಕ್ ..!ರೌಡಿ ಶೀಟರ್ ಬರ್ಬರ ಹತ್ಯೆ…ವಿಶೇಷ ತಂಡ ರಚನೆ..!
ಮಂಗಳೂರಿನಲ್ಲಿ ಮುಂಜಾನೆ ನಡೆದ ರೌಡಿಶೀಟರ್ ಹತ್ಯೆ – ದುಷ್ಕರ್ಮಿಗಳ  ಜಾಡು ಬೆನ್ನಟ್ಟಿದ ಪೊಲೀಸ್‌ ಪಡೆ….ಮಹತ್ವದ ಸುಳಿವು…..!
MRPL ವಿರುದ್ಧ ಜನಹೋರಾಟದ ಎಚ್ಚರಿಕೆ – ಮೇ 1ರಿಂದ ಅನಿರ್ದಿಷ್ಟ ಧರಣಿಗೆ ಸಮಿತಿ ಸಜ್ಜು..
ಭಾರತ ಮುಸ್ಲಿಂ ದೇಶವಾಗುವುದೇ?- ನಾಳೆ ಪುಸ್ತಕ ಬಿಡುಗಡೆಯ ಕಾರ್ಯಕ್ರಮ
AI ಹವಾ-ಬೇಗನೆ ಫೈನಾನ್ಷಿಯಲ್ ಇಂಡಿಪೆಂಡೆಂಟ್ ಆಗೋ ಟ್ರೆಂಡ್- ಕೈಬಿಟ್ಟ  ಓದು!! ಇದು ಗಂಭೀರ ಸೂಚನೆ….
Golden Hour ಉಳಿಸುವತ್ತ ಗ್ರಾಮದಿಂದ ನಗರವರೆಗೆ – ಕರ್ನಾಟಕ ಹೆಲ್ತ್ ಸಿಸ್ಟಮ್ ಮಹತ್ವದ ಹೆಜ್ಜೆ
ಸುಬ್ರಹ್ಮಣ್ಯದಲ್ಲಿ ಭಟ್ಟರಿಗೆ ದಕ್ಷಿಣೆ ಕೊಡುವoತಿಲ್ಲ- ಸಿಟ್ಟಿಗೆಳುತ್ತಿರುವ ಪುರೋಹಿತರು
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಮಾತ್ರ (ಅ)ವ್ಯವಸ್ಥೆ ಎಚ್ಚರಗೊಳ್ಳಬೇಕೇ? ಯಾರು ಹೊಣೆ? ಏನು ಕ್ರಮ?