📍 Karavali Maruta kannada News
LIVE CONTACT

ಸನ್ಯಾಸಿಗೆ ಕಾಡಿದ ಸುಂದರಿಯ  ಬಂಧನ

ಸನ್ಯಾಸಿಗೆ ಕಾಡಿದ ಸುಂದರಿಯ  ಬಂಧನ




ಒಂದು ಪ್ರತಿಷ್ಠಿತ ಮಠ ಒಂದರ ಮಠಾಧಿಪತಿ ಒಬ್ಬರನ್ನು ಕಾಡಿದ ಸುರಸುಂದರಿ ಒಬ್ಬಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧನಕ್ಕೆ ಒಳಗಾದ ಸುರಸುಂದರಿಯ ಹೆಸರು ಸ್ಫೂರ್ತಿ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ನಿವಾಸಿಯಾಗಿದ್ದ ಸ್ಫೂರ್ತಿ, ಬೆಂಗಳೂರಿನಲ್ಲಿ ಇದ್ದುಕೊಂಡು ಕಾಲೇಜಿಗೆ ಹೋಗುತ್ತಿದ್ದಳಂತೆ. ಹಾಗೆ ಕಾಲೇಜಿಗೆ ಹೋಗುತ್ತಿದ್ದವಳಿಗೆ ತುಮಕೂರು ಜಿಲ್ಲೆಯ ತಿಪಟೂರಿನ ಪ್ರತಿಷ್ಠಿತ ಮಠ ಒಂದರ ಸ್ವಾಮೀಜಿಗೆ ಸ್ವಾಮೀಜಿಗೆ ಅದು ಹೇಗೆ ಪರಿಚಿತಳಾದಳು ಗೊತ್ತಿಲ್ಲ. ಆದರೆ ಸ್ವಾಮೀಜಿ ಕೃಪೆಗೆ ಪಾತ್ರಳಾಗಿ ಅವರಿಂದ ನಾಲ್ಕುವರೆ ಲಕ್ಷವನ್ನು ಹಂತ ಹಂತವಾಗಿ ತೆಗೆದುಕೊಂಡ ದಷ್ಟ ಅಲ್ಲ ಇನ್ನು ಹಣ ನೀಡಬೇಕು ಎಂದು ಒತ್ತಡ ಹೇರಿದ್ದರಿಂದ ಸ್ವಾಮೀಜಿ ಅಧಿಕೃತವಾಗಿ ಪೊಲೀಸ್ ದೂರು ನೀಡುತ್ತಾರೆ.

ಅವರ ದೂರಿನ ಆಧಾರದ ಮೇಲೆ  ಬೆಂಗಳೂರು ಸಿಸಿಬಿ ಪೊಲೀಸರು ಸ್ವಾಮೀಜಿಯನ್ನು ಕಾಡಿದ ಆ ಸುರಸುಂದರಾಂಗಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಸ್ವಾಮೀಜಿಗೆ ಕಾಡಿದ್ದು ಇದೇ ಮೊದಲಲ್ಲ ಈಗ ಒಂದುವರೆ ವರ್ಷದ ಹಿಂದೆ ಇದೇ ಸ್ವಾಮೀಜಿಯನ್ನು ದಿವ್ಯ ಎಂಬ ಹೆಂಗಸು ಕಾಡಿದ್ದಳಂತೆ ಆಗಲು ಸಿಸಿಬಿ ಪೊಲೀಸರೇ ಸ್ವಾಮೀಜಿಯನ್ನು ಕಾಪಾಡಿದ್ದು. ಈ ಸ್ವಾಮೀಜಿಯವರಿಗೂ ಲಲನೆಯರಿಗೂ ಅದೇನು ನಂಟೊ ದೇವರಿಗೆ ಗೊತ್ತು.

ದತ್ತು