📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ದಕ್ಷಿಣಕನ್ನಡ ಜಿಲ್ಲಾಡಳಿತ ರೈತರ ಪರವಾಗಿ ನಿಲ್ಲುತ್ತಿಲ್ಲ ಎಂಬ ಅಸಮಾಧಾನ

ಜೈ ಜವಾನ್ ಜೈ ಕಿಸಾನ್ ಎಂಬ ಘೋಷ ವಾಕ್ಯ ನಮ್ಮ ದೇಶದ ಪವರ್ಫುಲ್ ಘೋಷಣೆಯಾಗಿದೆ. ಹೀಗಿರುವಾಗ ಸೈನಿಕ ಹಾಗೂ ರೈತ ಇವರಿಬ್ಬರಿಗೂ ಇಡೀ ದೇಶವು ಗೌರವ ಕೊಡಲೇಬೇಕು. ಆದರೆ ಇಲ್ಲಿ ಒಂದು ಕಂಪನಿಯು ಅತ್ಯಂತ ಅಗೌರವಯುತವಾಗಿ ಮತ್ತು ದಬ್ಬಾಳಿಕೆ ನಡೆಯನ್ನು ತೋರಿಸಿ ತನ್ನ ಹೀನಾತಿ ಹೀನ ನಡವಳಿಕೆಯನ್ನು ತೋರ್ಪಡಿಸಿದೆ. ಅಂತಹ ಕಂಪನಿಯ ವಿರುದ್ಧ ರಾಜ್ಯ ಸರ್ಕಾರವು ಕಠಿಣ ಕ್ರಮ ತೆಗೆದುಕೊಳ್ಳುವುದರ ಜೊತೆಗೆ ಆ ಸಂಸ್ಥೆಯ ಜೊತೆಗಿನ ಒಪ್ಪಂದವನ್ನು ಮುರಿದು ಹಾಕುವುದರತ್ತ ಗಮನ ಹರಿಸ ಬೇಕಿದ್ದ ಜಿಲ್ಲಾ ಆಡಳಿತ ಇನ್ನೂ ಯಾವುದೇ ಕಠಿಣ ಕ್ರಮ ತೆಗೆದುಕೊಂಡಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿ ಸಮೀಪದ ನಿಡ್ಡೋಡಿ ಪರಿಸರದ ವ್ಯಾಪ್ತಿಯಲ್ಲಿ ಸ್ಟೇರ್ ಲೈಟ್ ಕಂಪನಿಯು ಪೈಪ್ ಲೈನ್ ಜೋಡಣೆಯನ್ನು ಮಾಡುತ್ತಿದೆ ಈ ಒಂದು ಪೈಪ್ಲೈನ್ ಹಾಕುವ ಕಾರ್ಯವು ಏಕಾಏಕಿ ನಡೆಯಬಾರದು ತಾನೇ? ಮೊದಲನೆಯದಾಗಿ ಪೈಪ್ಲೈನ್ ಹಾದು ಹೋಗುವ ಜಾಗದಲ್ಲಿನ ಮಾಲೀಕರಲ್ಲಿ ಮಾತುಕತೆಯನ್ನು ನಡೆಸಬೇಕು ಅವರನ್ನು ಕನ್ವಿನ್ಸ್ ಮಾಡಿ ಅವರ ಒಪ್ಪಿಗೆಯನ್ನು ಪಡೆದು ಆನಂತರ ಪೈಪ್ ಲೈನ್ ಹಾಕುವ ಕಾಮಗಾರಿಯನ್ನು ಪ್ರಾರಂಭಿಸಬೇಕು. ಅದು ನಿಯಮವು ಹೌದು. ಆದರೆ ಇಲ್ಲಿ ಆ ನಿಯಮ ಪಾಲನೆ ಯಾಗಿಲ್ಲ ಸ್ಥಳೀಯ ರೈತ ಕಿಸಾನ್ ಸಂಘದ ಕಾರ್ಯಕರ್ತ ಅಲ್ಫೋನ್ ಡಿಸೋಜ ಎಂಬ ವ್ಯಕ್ತಿಯ ಜಾಗದಲ್ಲಿ ಬೆಳೆದು ನಿಂತಿರುವ ಭತ್ತ ಇರುವಾಗಲೂ ಮೊನ್ನೆ ಏಕಾಏಕಿ ಪೊಲೀಸರನ್ನು ಕರೆದುಕೊಂಡು ಬಂದು ಯಾವುದೇ ನೋಟಿಸು ಕೊಡದೆ ಗದ್ದೆಗೆ ನುಗ್ಗಿ ಮರಗಳನ್ನು ಕಡಿದು ಬತ್ತದ ಗದ್ದೆಯಲ್ಲಿನ ನನ್ನ ನಾಶ ಮಾಡಿ ಹಾಕುವ ಮೂಲಕ ಬತ್ತದ ಬೆಳೆಗೆ ಹಾನಿಯನ್ನು ಉಂಟು ಮಾಡಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಮೂಡಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಲಾಗಿದೆ. ಪ್ರಕರಣ ದಾಖಲಾಗುತ್ತದೆ..

ವಿಚಾರ ಅದಲ್ಲ, ಒಂದು ಕಂಪನಿಯು ತನ್ನ ಕೆಲಸವನ್ನು ಸ್ಥಳೀಯ ಜನರ ಸಹಕಾರ ಅವರ ವಿಶ್ವಾಸವನ್ನು ಗಳಿಸಿ ಮಾಡಿದರೆ ಅದಕ್ಕೊಂದು ಅರ್ಥ ಇರುತ್ತದೆ ಅದು ಬಿಟ್ಟು ದಬ್ಬಾಳಿಕೆಯ ಮೂಲಕ ಹಣದ ಪವರ್ ತೋರಿಸಲು ಹೋದರೆ ಅದರಿಂದ ಸಮಾಜದಲ್ಲಿ  ಗೊಂದಲಕ್ಕೆ ಕಾರಣವಾಗುತ್ತದೆ. ಗೊಂದಲವನ್ನು ಉಂಟುಮಾಡಿದ ಶ್ರೇಯಸ್ಸು ಆ ಕಂಪನಿಗೆ ದಕ್ಕುತ್ತದೆ. ಅದು ಶ್ರೇಯಸ್ ಅಲ್ಲ ಕಪ್ಪು ಚುಕ್ಕೆ ಅನ್ನೋದು ನೆನಪಿಡಬೇಕು.

ಜಿಲ್ಲಾಡಳಿತವು ಈ ವಿಚಾರವನ್ನು ನಿರ್ಲಕ್ಷ್ಯ ಮಾಡದೆ ಕೇವಲ ಒಬ್ಬ ರೈತನಿಗೆ ತೊಂದರೆಯಾಗಿದೆ ಎಂಬ ಕಾರಣಕ್ಕೆ ಗಪ್ ಚುಪ್ ಆಗಿ ಕೂರದೆ ಟೇರ್ಲೈಟ್ ಕಂಪನಿಯ ದಬ್ಬಾಳಿಕೆಗೆ ಮುಟ್ಟಿ ನೋಡಿಕೊಳ್ಳುವಂತಹ ಪೆಟ್ಟನ್ನು ನೀಡದಿದ್ದರೆ ಜಿಲ್ಲಾಡಳಿತ ರೈತರ ಪರವಾಗಿ ಇಲ್ಲ ಎಂಬ ಮೆಸೇಜ್ ಹೋಗಲು ಕಾರಣವಾಗುತ್ತದೆ. ಇಲ್ಲಿ ಕಂಪನಿಯು ತನ್ನ ಇತಿಮಿತಿಯನ್ನು ಮೀರಿ ವರ್ತನೆ ನಡೆಸಿದೆ ಅನ್ನುವುದರಲ್ಲಿ ಎರಡು ಮಾತೇ ಇಲ್ಲ. ಭೂಮಿಯ ಮಾಲೀಕನ ಬಳಿ ಮಾತುಕತೆ ನಡೆಸದೆ ಅವನ ಬೆಳೆಯನ್ನು ನಾಶ ಮಾಡಿದ್ದು ಗೋರಾತಿ ಘೋರ ಅಪರಾಧವೇ ಅನ್ನುವುದರಲ್ಲಿ ಎರಡು ಮಾತೇ ಇಲ್ಲ. ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತವೂ ತಕ್ಷಣ ರೈತನ ಪರವಾಗಿ ನಿಲ್ಲುವ ಸಾಹಸ ಮಾಡಬೇಕಿತ್ತು , ಆ ಕೆಲಸವನ್ನು ಜಿಲ್ಲಾಡಳಿತ ಮಾಡಿಲ್ಲ ಆದರೆ ಸ್ಥಳೀಯ ಪೊಲೀಸರು ಮಾತ್ರ ಕಂಪನಿಗೆ ನಿಮ್ಮ ಕಾಮಗಾರಿಯನ್ನು ನಿಲ್ಲಿಸಿ ಮಾತುಕತೆ ಮಾಡಿ ವ್ಯವಹಾರ ಬಗೆಹರಿದ ನಂತರ ಕೆಲಸ ಮುಂದುವರಿಸಿ ಎಂಬ ಮೆಸೇಜ್ ನೀಡುತ್ತಾರೆ. ಆದರೆ ಕಂಪನಿಯು ಆ ಮೆಸೇಜಿಗೆ ಕ್ಯಾರೆ ಎನ್ನದೆ ತನ್ನ ಕೆಲಸ ಮಾಡುತ್ತದೆ ಮತ್ತು ದಬ್ಬಾಳಿಕೆ ಪ್ರದರ್ಶನ ಮಾಡುತ್ತದೆ. ಕಂಪನಿಯು ಸ್ಥಳೀಯ ಮಸಲ್ ಪವರ್ ಇರುವಂತಹ ವ್ಯಕ್ತಿಗಳ ಮೂಲಕವೇ ಈ ಕೆಲಸ ಮಾಡಿಸುತ್ತದೆ. ಇದನ್ನು ಜಿಲ್ಲಾಡಳಿತ ಅರ್ಥಮಾಡಿಕೊಳ್ಳಬೇಕು ಅಂತಹ ವ್ಯಕ್ತಿಗಳ ಹೆಡೆಮುರಿ ಕಟ್ಟುವ ಕೆಲಸ ಜಿಲ್ಲಾಡಳಿತದಿಂದ ಆಗದಿದ್ದರೆ ಈ ಜಿಲ್ಲಾಡಳಿತಕ್ಕೆ ಶ್ಯೆಮ್ ಸರ್ಟಿಫಿಕೇಟ್ ಸಿಗುವುದಂತೂ ನಿಶ್ಚಿತ. ರೈತ ಕೂಡ ಈ ಕಾಮಗಾರಿಗೆ ಜಾಗ ಕೊಡುವುದಿಲ್ಲ ಅಂದಿಲ್ಲ ಯೋಗ್ಯ ದರವನ್ನು ನೀಡಿದರೆ ಜಾಗ ಕೊಡುತ್ತೇನೆ ಅಂತಾನೆ ಹೇಳಿದ್ದಾನೆ. ಅಷ್ಟೇ ಅಲ್ಲ, ಇನ್ನು ಒಂದುವರೆ ತಿಂಗಳಿನಲ್ಲಿ ಭತ್ತದ ಕಟಾವು ಬರುತ್ತದೆ ಅದು ಮುಗಿದ ನಂತರ ಕಾಮಗಾರಿ ಮಾಡಿ ಅಂತನು ಮನವಿ ಮಾಡಿಕೊಂಡಿರುತ್ತಾನೆ . ಯಾವುದನ್ನು ಕೇಳದ ಕಂಪನಿಯು ತನ್ನ ತಾಕತ್ತನ್ನು ತೋರಿಸಲು ಹೋಗಿದ್ದು ಈ ಬಡ ರೈತನ ಮೇಲೆ. ಈತನ ಮೇಲೆ ತಾಕತ್ತು ತೋರಿಸಲು ಹೋಗಿದ್ದಕ್ಕೆ ಏನು ಮಾಡಬೇಕು ಅದನ್ನು ಜಿಲ್ಲಾಡಳಿತ ಮಾಡುತ್ತದೆ ಎಂಬ ನಿರೀಕ್ಷೆ ಇತ್ತು ಆ ನಿರೀಕ್ಷೆಗೆ ತಕ್ಕಂತೆ ಜಿಲ್ಲಾಡಳಿತ ನಡೆದುಕೊಂಡಿಲ್ಲ ಅನ್ನುವುದಂತೂ ಸುಸ್ಪಷ್ಟ. ಸ್ಥಳೀಯ ಶಾಸಕರು ಸಹ ಆ ಬಗ್ಗೆ ಧ್ವನಿ ಎತ್ತಬೇಕಿತ್ತು, ಧ್ವನಿಯನ್ನು ಎತ್ತಲಿಲ್ಲ ಪ್ರತಿಕ್ರಿಯೆಯನ್ನು ನೀಡಲಿಲ್ಲ ಎಂಬ ಅಸಮಾಧಾನದ ಮಾತುಗಳು ಕೇಳಿ ಬರುತ್ತಿದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಸಿಐಡಿ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್: ವಂಚಕರ ಬಲೆಯಿಂದ ಜಸ್ಟ್ ಎಸ್ಕೇಪ್
ಪ್ರಧಾನಿ ಮೋದಿ ನೆದರ್ಲ್ಯಾಂಡ್ ಭೇಟಿ ಭಾರತ ಸಹಕಾರದ ಸೇತುವೆ ಕಟ್ಟುವ ದ್ವಿಪಕ್ಷೀಯ ಸಂಬಂಧಗಳ ವಿಸ್ತರಣೆ…
ಮಂಡ್ಯದಲ್ಲಿ ವೈರಲ್ ವಿಡಿಯೋ!ಜಿಂಕೆ ಸಂಪೂರ್ಣ ಮಾಯ!ಈ ದೃಶ್ಯ ನೋಡಿದ್ರೆ ಗಾಬರಿಯಾಗ್ತೀರಾ!ಜೀವಂತ ಪ್ರಕೃತಿ ಡಾಕ್ಯುಮೆಂಟರಿ…
ಜಸ್ಟ್ one click ನಲ್ಲೇ ಎಲ್ಲಾ ಸರ್ಟಿಫಿಕೇಟ್…!2026–27ರಿಂದ ಅಂಕಪಟ್ಟಿ ಹಾರ್ಡ್ ಕಾಪಿ ಇಲ್ಲ..
ಕಾಂಗ್ರೆಸ್ ಜನರ ವಿಶ್ವಾಸದಿಂದ ದಿನದಿಂದ ದಿನಕ್ಕೂ ದೂರ ಹೋಗುತ್ತಿರುವುದಕ್ಕೆ ಸಾಕ್ಷಿನೇ ಇದು
ಘರ್ಷಣೆಗಳ ನಡುವೆಯೂ ಜನರ ಮತದ ಹಕ್ಕು ಅಚಲ…ಸಂಕ್ಷಿಪ್ತ ನೋಟ..
ಜಮೀರ್ ಅಹಮದ್ ಉಚ್ಛಾಟನೆಗೆ ಕ್ಷಣಗಣನೆ
🚨 ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ – ಕಟಪಾಡಿ ರಾಷ್ಟ್ರೀಯ ಹೆದ್ದಾರಿ ಅಪಘಾತ
ತಮಿಳುನಾಡು ಮುಖ್ಯಮಂತ್ರಿ ವಿಜಯ್, ಚಧುರಂಗದಾಟದಲ್ಲಿ ಲಾಂಗ್ ಟೈಮ್ ಉಳಿಯುವರೇ?
ಅಂದು ಮುಖ್ಯ ಮಂತ್ರಿ, ಇಂದು ಪುಟ್ಟಪಾತ್ ವ್ಯಾಪಾರಿ!!
ಸಚಿವ ಜಮೀರ್ ಅಹಮದ್ ಹಚ್ಚಿದ ಪಟಾಕಿಗೆ ಕಾಂಗ್ರೆಸ್ ಕೋಟೆಯಲ್ಲಿ ಬಿರುಕು..!?
ಸುಳ್ಯದಲ್ಲಿ ಚಿನ್ನಾಭರಣ ಕಳವು,  ಮಹಿಳೆಯ ಮೇಲೆ ಶಂಕೆ
ಮೂಡಬಿದ್ರೆ ಪೊಲೀಸ್ ಅಧಿಕಾರಿಯ ಮಾನ ಹರಾಜಿಗೆ ನಿಂತವರು ಯಾರು?
ಕರ್ನಾಟಕ CM ಬದಲಾವಣೆ ರಾಜಕೀಯ ಕೌಂಟ್‌ಡೌನ್ ಶುರುವಾಗಿದೆ! ತೆರೆಮರೆಯಲ್ಲಿ ಏನೋ ನಡೀತಿದೆ… 
ಬೇಜವಾಬ್ದಾರಿ ಸ್ಟೇಟ್ಮೆಂಟ್ ಪಾಸ್ ಮಾಡಿದ ಕೇಂದ್ರ ಸಚಿವ- ಜೋಶಿ
ಪುತ್ತೂರಿನ ಕೃಷ್ಣ ಜೆ. ರಾವ್ ಪ್ರಕರಣಕ್ಕೆ ಹೈಕೋರ್ಟ್ ಬ್ರೇಕ್!“ಮಧ್ಯಂತರ ತೀರ್ಪು: ₹75K ತಿಂಗಳ ಸಹಾಯ ಷರತ್ತು”
ಟಾಟಾ ಸನ್ಸ್ IPOಗೆ ಒತ್ತಾಯ: ಟ್ರಸ್ಟಿಗಳಲ್ಲಿ ಭಿನ್ನಾಭಿಪ್ರಾಯ ಹೆಚ್ಚಳ…!
ಗುರು ಬ್ರಹ್ಮ – ಗುರು ವಿಷ್ಣು ಅನ್ನುವ ಕಾಲ ಮುಗಿದು ಹೋಯ್ತೇ?
ಪರಿಸರ ನಾಶಕ್ಕಾಗಿ ಸುಳ್ಳು ಸರ್ಟಿಫಿಕೇಟ್ ರೆಡಿಮಾಡಿಕೊಂಡು ಒಂದು ಊರನ್ನೇ ಭಯದಲ್ಲಿರಿಸಿದ ಉಡುಪಿ ಜಿಲ್ಲಾ ಆಡಳಿತ
ಸ್ಪೇನ್ ಅಧ್ಯಕ್ಷರ ವಿರುದ್ಧ ಟ್ರಂಪ್ ಗುಡುಗು 
ಹಳೆಯ ಬಟ್ಟೆಗೂ ಹಣ ಸಿಗುತ್ತಾ?! ಬೆಂಗಳೂರಿನ ಈ ಸ್ಟಾರ್ಟ್‌ಅಪ್ ನಿಜಕ್ಕೂ ಶಾಕ್ ಕೊಡುತ್ತಿದೆ!
ಅಕ್ರಮ ಮರಳುಗಾರಿಕೆ, ಕ್ರಮ ಕೈಗೊಂಡ ವೇಣೂರು ಪೊಲೀಸರು
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಿಗ್ಗಾಮುಗ್ಗ ಜಾಡಿಸಿದ ಹೆಚ್ ವಿಶ್ವನಾಥ್
ಪುತ್ತೂರು ಗ್ರಾಮಾಂತರದಲ್ಲಿ ಭೂ ವಿವಾದದ ಗಲಾಟೆ ತೀವ್ರತೆ: ಪರಸ್ಪರ ಹಲ್ಲೆ – ಎರಡು ಪ್ರಕರಣಗಳು ದಾಖಲು
ಯಕ್ಷಗಾನದಲ್ಲಿ ಶಿಳ್ಳೆ ಹಾಕ್ಲಿಕ್ಕೆ ಪರ್ಮಿಶನ್ ಬೇಕಾ..…!?
“ವಾಹನ ಮಾರಾಟ-RC ಬದಲಾವಣೆ  ಅಗತ್ಯ.. ಇಲ್ಲವಾದರೆ ಕಾನೂನು ಸಮಸ್ಯೆಗಳು ತಪ್ಪಿದ್ದಲ್ಲ..!” ಹೈಕೋರ್ಟ್
“ಅಪ್ರಾಪ್ತ ಅತ್ಯಾಚಾರ ಸಂತ್ರಸ್ತರಿಗೆ ಅಬಾರ್ಷನ್ ಮಾಡಲು ಆದ್ಯತೆ ,ಕಾನೂನು ತಿದ್ದುಪಡಿ”- ಸುಪ್ರೀಂ ಕೋರ್ಟ್
ನಾಳೆ ಮಂಗಳೂರಲ್ಲಿ ಇಡೀ ದಿನ ಕರೆಂಟಿಲ್ಲ Power Cut.. ಎಲ್ಲೆಲ್ಲಿ?
Tesla Experience Centre ಬೆಂಗಳೂರು ಈಗ EV ಕ್ರೇಜ್ ಹಬ್!car craze ಇರುವವರು ಮುಗಿಬೀಳುತ್ತಿದ್ದಾರೆ..
ಅಮೇರಿಕಾ ಅಧ್ಯಕ್ಷರ ಮೇಲೆ ಎರಡನೆಯ ಬಾರಿ ಗುಂಡಿನ ದಾಳಿ