📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ದಕ್ಷಿಣಕನ್ನಡ ಜಿಲ್ಲಾಡಳಿತ ರೈತರ ಪರವಾಗಿ ನಿಲ್ಲುತ್ತಿಲ್ಲ ಎಂಬ ಅಸಮಾಧಾನ

ಜೈ ಜವಾನ್ ಜೈ ಕಿಸಾನ್ ಎಂಬ ಘೋಷ ವಾಕ್ಯ ನಮ್ಮ ದೇಶದ ಪವರ್ಫುಲ್ ಘೋಷಣೆಯಾಗಿದೆ. ಹೀಗಿರುವಾಗ ಸೈನಿಕ ಹಾಗೂ ರೈತ ಇವರಿಬ್ಬರಿಗೂ ಇಡೀ ದೇಶವು ಗೌರವ ಕೊಡಲೇಬೇಕು. ಆದರೆ ಇಲ್ಲಿ ಒಂದು ಕಂಪನಿಯು ಅತ್ಯಂತ ಅಗೌರವಯುತವಾಗಿ ಮತ್ತು ದಬ್ಬಾಳಿಕೆ ನಡೆಯನ್ನು ತೋರಿಸಿ ತನ್ನ ಹೀನಾತಿ ಹೀನ ನಡವಳಿಕೆಯನ್ನು ತೋರ್ಪಡಿಸಿದೆ. ಅಂತಹ ಕಂಪನಿಯ ವಿರುದ್ಧ ರಾಜ್ಯ ಸರ್ಕಾರವು ಕಠಿಣ ಕ್ರಮ ತೆಗೆದುಕೊಳ್ಳುವುದರ ಜೊತೆಗೆ ಆ ಸಂಸ್ಥೆಯ ಜೊತೆಗಿನ ಒಪ್ಪಂದವನ್ನು ಮುರಿದು ಹಾಕುವುದರತ್ತ ಗಮನ ಹರಿಸ ಬೇಕಿದ್ದ ಜಿಲ್ಲಾ ಆಡಳಿತ ಇನ್ನೂ ಯಾವುದೇ ಕಠಿಣ ಕ್ರಮ ತೆಗೆದುಕೊಂಡಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿ ಸಮೀಪದ ನಿಡ್ಡೋಡಿ ಪರಿಸರದ ವ್ಯಾಪ್ತಿಯಲ್ಲಿ ಸ್ಟೇರ್ ಲೈಟ್ ಕಂಪನಿಯು ಪೈಪ್ ಲೈನ್ ಜೋಡಣೆಯನ್ನು ಮಾಡುತ್ತಿದೆ ಈ ಒಂದು ಪೈಪ್ಲೈನ್ ಹಾಕುವ ಕಾರ್ಯವು ಏಕಾಏಕಿ ನಡೆಯಬಾರದು ತಾನೇ? ಮೊದಲನೆಯದಾಗಿ ಪೈಪ್ಲೈನ್ ಹಾದು ಹೋಗುವ ಜಾಗದಲ್ಲಿನ ಮಾಲೀಕರಲ್ಲಿ ಮಾತುಕತೆಯನ್ನು ನಡೆಸಬೇಕು ಅವರನ್ನು ಕನ್ವಿನ್ಸ್ ಮಾಡಿ ಅವರ ಒಪ್ಪಿಗೆಯನ್ನು ಪಡೆದು ಆನಂತರ ಪೈಪ್ ಲೈನ್ ಹಾಕುವ ಕಾಮಗಾರಿಯನ್ನು ಪ್ರಾರಂಭಿಸಬೇಕು. ಅದು ನಿಯಮವು ಹೌದು. ಆದರೆ ಇಲ್ಲಿ ಆ ನಿಯಮ ಪಾಲನೆ ಯಾಗಿಲ್ಲ ಸ್ಥಳೀಯ ರೈತ ಕಿಸಾನ್ ಸಂಘದ ಕಾರ್ಯಕರ್ತ ಅಲ್ಫೋನ್ ಡಿಸೋಜ ಎಂಬ ವ್ಯಕ್ತಿಯ ಜಾಗದಲ್ಲಿ ಬೆಳೆದು ನಿಂತಿರುವ ಭತ್ತ ಇರುವಾಗಲೂ ಮೊನ್ನೆ ಏಕಾಏಕಿ ಪೊಲೀಸರನ್ನು ಕರೆದುಕೊಂಡು ಬಂದು ಯಾವುದೇ ನೋಟಿಸು ಕೊಡದೆ ಗದ್ದೆಗೆ ನುಗ್ಗಿ ಮರಗಳನ್ನು ಕಡಿದು ಬತ್ತದ ಗದ್ದೆಯಲ್ಲಿನ ನನ್ನ ನಾಶ ಮಾಡಿ ಹಾಕುವ ಮೂಲಕ ಬತ್ತದ ಬೆಳೆಗೆ ಹಾನಿಯನ್ನು ಉಂಟು ಮಾಡಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಮೂಡಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಲಾಗಿದೆ. ಪ್ರಕರಣ ದಾಖಲಾಗುತ್ತದೆ..

ವಿಚಾರ ಅದಲ್ಲ, ಒಂದು ಕಂಪನಿಯು ತನ್ನ ಕೆಲಸವನ್ನು ಸ್ಥಳೀಯ ಜನರ ಸಹಕಾರ ಅವರ ವಿಶ್ವಾಸವನ್ನು ಗಳಿಸಿ ಮಾಡಿದರೆ ಅದಕ್ಕೊಂದು ಅರ್ಥ ಇರುತ್ತದೆ ಅದು ಬಿಟ್ಟು ದಬ್ಬಾಳಿಕೆಯ ಮೂಲಕ ಹಣದ ಪವರ್ ತೋರಿಸಲು ಹೋದರೆ ಅದರಿಂದ ಸಮಾಜದಲ್ಲಿ  ಗೊಂದಲಕ್ಕೆ ಕಾರಣವಾಗುತ್ತದೆ. ಗೊಂದಲವನ್ನು ಉಂಟುಮಾಡಿದ ಶ್ರೇಯಸ್ಸು ಆ ಕಂಪನಿಗೆ ದಕ್ಕುತ್ತದೆ. ಅದು ಶ್ರೇಯಸ್ ಅಲ್ಲ ಕಪ್ಪು ಚುಕ್ಕೆ ಅನ್ನೋದು ನೆನಪಿಡಬೇಕು.

ಜಿಲ್ಲಾಡಳಿತವು ಈ ವಿಚಾರವನ್ನು ನಿರ್ಲಕ್ಷ್ಯ ಮಾಡದೆ ಕೇವಲ ಒಬ್ಬ ರೈತನಿಗೆ ತೊಂದರೆಯಾಗಿದೆ ಎಂಬ ಕಾರಣಕ್ಕೆ ಗಪ್ ಚುಪ್ ಆಗಿ ಕೂರದೆ ಟೇರ್ಲೈಟ್ ಕಂಪನಿಯ ದಬ್ಬಾಳಿಕೆಗೆ ಮುಟ್ಟಿ ನೋಡಿಕೊಳ್ಳುವಂತಹ ಪೆಟ್ಟನ್ನು ನೀಡದಿದ್ದರೆ ಜಿಲ್ಲಾಡಳಿತ ರೈತರ ಪರವಾಗಿ ಇಲ್ಲ ಎಂಬ ಮೆಸೇಜ್ ಹೋಗಲು ಕಾರಣವಾಗುತ್ತದೆ. ಇಲ್ಲಿ ಕಂಪನಿಯು ತನ್ನ ಇತಿಮಿತಿಯನ್ನು ಮೀರಿ ವರ್ತನೆ ನಡೆಸಿದೆ ಅನ್ನುವುದರಲ್ಲಿ ಎರಡು ಮಾತೇ ಇಲ್ಲ. ಭೂಮಿಯ ಮಾಲೀಕನ ಬಳಿ ಮಾತುಕತೆ ನಡೆಸದೆ ಅವನ ಬೆಳೆಯನ್ನು ನಾಶ ಮಾಡಿದ್ದು ಗೋರಾತಿ ಘೋರ ಅಪರಾಧವೇ ಅನ್ನುವುದರಲ್ಲಿ ಎರಡು ಮಾತೇ ಇಲ್ಲ. ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತವೂ ತಕ್ಷಣ ರೈತನ ಪರವಾಗಿ ನಿಲ್ಲುವ ಸಾಹಸ ಮಾಡಬೇಕಿತ್ತು , ಆ ಕೆಲಸವನ್ನು ಜಿಲ್ಲಾಡಳಿತ ಮಾಡಿಲ್ಲ ಆದರೆ ಸ್ಥಳೀಯ ಪೊಲೀಸರು ಮಾತ್ರ ಕಂಪನಿಗೆ ನಿಮ್ಮ ಕಾಮಗಾರಿಯನ್ನು ನಿಲ್ಲಿಸಿ ಮಾತುಕತೆ ಮಾಡಿ ವ್ಯವಹಾರ ಬಗೆಹರಿದ ನಂತರ ಕೆಲಸ ಮುಂದುವರಿಸಿ ಎಂಬ ಮೆಸೇಜ್ ನೀಡುತ್ತಾರೆ. ಆದರೆ ಕಂಪನಿಯು ಆ ಮೆಸೇಜಿಗೆ ಕ್ಯಾರೆ ಎನ್ನದೆ ತನ್ನ ಕೆಲಸ ಮಾಡುತ್ತದೆ ಮತ್ತು ದಬ್ಬಾಳಿಕೆ ಪ್ರದರ್ಶನ ಮಾಡುತ್ತದೆ. ಕಂಪನಿಯು ಸ್ಥಳೀಯ ಮಸಲ್ ಪವರ್ ಇರುವಂತಹ ವ್ಯಕ್ತಿಗಳ ಮೂಲಕವೇ ಈ ಕೆಲಸ ಮಾಡಿಸುತ್ತದೆ. ಇದನ್ನು ಜಿಲ್ಲಾಡಳಿತ ಅರ್ಥಮಾಡಿಕೊಳ್ಳಬೇಕು ಅಂತಹ ವ್ಯಕ್ತಿಗಳ ಹೆಡೆಮುರಿ ಕಟ್ಟುವ ಕೆಲಸ ಜಿಲ್ಲಾಡಳಿತದಿಂದ ಆಗದಿದ್ದರೆ ಈ ಜಿಲ್ಲಾಡಳಿತಕ್ಕೆ ಶ್ಯೆಮ್ ಸರ್ಟಿಫಿಕೇಟ್ ಸಿಗುವುದಂತೂ ನಿಶ್ಚಿತ. ರೈತ ಕೂಡ ಈ ಕಾಮಗಾರಿಗೆ ಜಾಗ ಕೊಡುವುದಿಲ್ಲ ಅಂದಿಲ್ಲ ಯೋಗ್ಯ ದರವನ್ನು ನೀಡಿದರೆ ಜಾಗ ಕೊಡುತ್ತೇನೆ ಅಂತಾನೆ ಹೇಳಿದ್ದಾನೆ. ಅಷ್ಟೇ ಅಲ್ಲ, ಇನ್ನು ಒಂದುವರೆ ತಿಂಗಳಿನಲ್ಲಿ ಭತ್ತದ ಕಟಾವು ಬರುತ್ತದೆ ಅದು ಮುಗಿದ ನಂತರ ಕಾಮಗಾರಿ ಮಾಡಿ ಅಂತನು ಮನವಿ ಮಾಡಿಕೊಂಡಿರುತ್ತಾನೆ . ಯಾವುದನ್ನು ಕೇಳದ ಕಂಪನಿಯು ತನ್ನ ತಾಕತ್ತನ್ನು ತೋರಿಸಲು ಹೋಗಿದ್ದು ಈ ಬಡ ರೈತನ ಮೇಲೆ. ಈತನ ಮೇಲೆ ತಾಕತ್ತು ತೋರಿಸಲು ಹೋಗಿದ್ದಕ್ಕೆ ಏನು ಮಾಡಬೇಕು ಅದನ್ನು ಜಿಲ್ಲಾಡಳಿತ ಮಾಡುತ್ತದೆ ಎಂಬ ನಿರೀಕ್ಷೆ ಇತ್ತು ಆ ನಿರೀಕ್ಷೆಗೆ ತಕ್ಕಂತೆ ಜಿಲ್ಲಾಡಳಿತ ನಡೆದುಕೊಂಡಿಲ್ಲ ಅನ್ನುವುದಂತೂ ಸುಸ್ಪಷ್ಟ. ಸ್ಥಳೀಯ ಶಾಸಕರು ಸಹ ಆ ಬಗ್ಗೆ ಧ್ವನಿ ಎತ್ತಬೇಕಿತ್ತು, ಧ್ವನಿಯನ್ನು ಎತ್ತಲಿಲ್ಲ ಪ್ರತಿಕ್ರಿಯೆಯನ್ನು ನೀಡಲಿಲ್ಲ ಎಂಬ ಅಸಮಾಧಾನದ ಮಾತುಗಳು ಕೇಳಿ ಬರುತ್ತಿದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಕರ್ನಾಟಕದಲ್ಲೇ ಮೊದಲು-ಕಿಚ್ಚ ಸುದೀಪ್ ಕೈಯಿಂದ ಗ್ರಾಂಡ್ ಓಪನಿಂಗ್!₹130 ಕೋಟಿ ವೆಚ್ಚದ ವಿಶ್ವದರ್ಜೆಯ ‘MR-Linac’ ತಂತ್ರಜ್ಞಾನ ಹೈಟೆಕ್ ಕ್ಯಾನ್ಸರ್ ಆಸ್ಪತ್ರೆ!
ಜೈನ ಸನ್ಯಾಸ ದೀಕ್ಷೆ ನಿಯಮಗಳು ಏನು ಗೊತ್ತಾ?
ಸಂಸತ್ತಿನಲ್ಲಿ ಪ್ರಶ್ನೆ ಎದುರಿಸಲು ಆಗದೆ,  ಪ್ರಶ್ನೆಯನ್ನೇ ಕೇಳದಂತೆ ಮಾಡಿದರು – ರಾಹುಲ್ ಗಾಂಧಿ
8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ
ಆನ್‌ಲೈನ್ ಕೇರಳ ಲಾಟರಿ ಹೆಸರಿನಲ್ಲಿ 1.85 ಲಕ್ಷ ವಂಚನೆ – ಸೈಬರ್ ವಂಚಕರ ಜಾಲ ಪತ್ತೆ
ಸತೀಶ್’ ಆಗಿ ಹೋದವ, ‘ಸಲೀಂ’ ಆಗಿ ವಾಪಸ್ …!26 ವರ್ಷಗಳ ಬಳಿಕ ತಾಯಿಯ ಮಡಿಲಿಗೆ ಮರಳಿದ ಮಗನ ಭಾವುಕ ಕಥೆ
ಮನೆಗಣತಿ ಮಂಗಳೂರು ಮಹಾನಗರ ಪಾಲಿಕೆ-ಸ್ಪೀಕರ್ ಯು ಟಿ ಖಾದರ್ ಚಾಲನೆ
ಧೂಮಪಾನ ಮಾಡುತ್ತಿದ್ದೀರಾ? ನಿಮ್ಮ ಮುಖ ನಿಧಾನವಾಗಿ ನಾಶವಾಗುತ್ತಿದೆ…
ಪುತ್ತೂರು ಅತ್ಯಾಚಾರ ಪ್ರಕರಣ: ಹೈಕೋರ್ಟ್‌ನಲ್ಲಿ ರಾಜಿ ಸಂಧಾನ ಪ್ರಸ್ತಾಪ..!
ಕದನ ವಿರಾಮ ಚೂರುಚೂರು-ಮಧ್ಯಪ್ರಾಚ್ಯ ಮತ್ತೆ ಯುದ್ಧದ ಅಂಚಿನಲ್ಲಿ!ಜೋರ್ಡಾನ್, ಬಹ್ರೇನ್, ಕುವೈತ್‌ನಲ್ಲಿ ಕ್ಷಿಪಣಿ ಅಲರ್ಟ್ !!
ಬಿಜೆಪಿಯನ್ನು ಹಿಂದಿಕ್ಕಿದ   ಜಿರಳೆ ಪಕ್ಷ..”ಕಾಕ್ರೋಚ್ ಜನತಾ ಪಾರ್ಟಿ”
ನಾಟಕ ಕಲಾವಿದೆ ಸೌಮ್ಯ ಶೆಟ್ಟಿ ಬಂಧನ
ನಿದ್ರೆಯಲ್ಲಿದ್ದ ಪುಟ್ಟ ಕಂದಮ್ಮಗಳು ಮತ್ತೆ ಏಳಲೇ ಇಲ್ಲ… ಕಾಂಪೌಂಡ್ ಗೋಡೆ ಕುಸಿದು ಮಂಗಳೂರಿನಲ್ಲಿ ಹೃದಯವಿದ್ರಾವಕ ದುರಂತ!
17ನೇ ಆಯವ್ಯಯ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಂಗಳೂರು ನಗರದಲ್ಲಿ ಭಾರೀ ಪ್ರಮಾಣದ MDMA ವಶ – ಇಬ್ಬರು ಡ್ರಗ್ ಪೆಡ್ಲರ್‌ಗಳ ಬಂಧನ…
ವರದಕ್ಷಿಣ ಪ್ರಕರಣ:5.5 ತಿಂಗಳ ಮಗುವಿಗೂ ದೈಹಿಕ ಹಿಂಸೆ….!
ರೀಲ್ಸ್ ಮಾಡುವ ಕನಸು… ಕ್ಷಣದಲ್ಲೇ ದುರ್ಘಟನೆ,  ಜೀವವನ್ನೇ ಕಳೆದುಕೊಂಡ ಬಾಲಕ.
ಅಂಡಮಾನ್ ಜೈಲಿನ ಕರಾಳ ಕೋಣೆಯಿಂದ ಹೊರಬರಲಿದೆ ಕರ್ನಾಟಕದ 59 ರಕ್ತೇತಿಹಾಸ’ಯಾರೂ ಅರಿಯದ ವೀರರು’ …!
ಬೆಳಗಾವಿ ₹4500 ಕೋಟಿ ವಂಚನೆ ಪ್ರಕರಣ – CID ತನಿಖೆಯಿಂದ ಹೊರಬರುತ್ತಿರುವ ಕತ್ತಲೆಯ ಜಾಲ – ಯಾರು ನಿಜವಾದ ಮಾಸ್ಟರ್ ಮೈಂಡ್?
ಎಲಾನ್ ಮಸ್ಕ್: ವಿಶ್ವದ ಮೊದಲ ಟ್ರಿಲಿಯನೇರ್‌ನಿಂದ ಇನ್ನೂ ಎತ್ತರದತ್ತ!
PoKನಲ್ಲಿ ರಕ್ತಪಾತ-ಪಾಕಿಸ್ತಾನದ ವಿರುದ್ಧ ಭಾರತದ ತೀವ್ರ ಆಕ್ರೋಶ!ಗುಂಡಿನ ಮಳೆಯ ನಡುವೆ ಜೀವ ಕಳೆದುಕೊಂಡ ಪ್ರತಿಭಟನಾಕಾರರು!
ಒಂದು ಚಿನ್ನದ ಸರಕ್ಕಾಗಿ ನಿದ್ರೆಯಲ್ಲಿದ್ದ ಗೆಳತಿಯನ್ನೇ ಕೊಲ್ಲಲೆತ್ನಿಸಿದ ಆಕೆಗೆ ಜೈಲೆ ಗತಿ …..ನಂಬಿಕೆಯೇ ರಕ್ತಸಿಕ್ತವಾದ ಮಣಿಪಾಲದ ಭೀಕರ ಘಟನೆ…
ಭಾರತದ ಟ್ರಾಫಿಕ್ ಕಿರಿಕಿರಿಗೆ ಇದುವರೆಗೂ ಯಾರೂ ಯೋಚಿಸದ ಮಾಸ್ಟರ್ ಪ್ಲಾನ್!ಉಬರ್ ಡ್ರೈವರ್ ಕೊಟ್ಟ ಐಡಿಯಾ ಕೇಳಿದ್ರೆ ನೀವೂ ಹೌದಲ್ವಾ ಅಂತೀರಾ….
ಉಡುಪಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಾನೂನುಬಾಹಿರ ಚಟುವಟಿಕೆ
50ಕ್ಕೂ ಹೆಚ್ಚು ಆಟೋ ಚಾಲಕರ ದಿನನಿತ್ಯದ ಆರೋಗ್ಯದ ಬದುಕಿಗೆ ಮುಳುವಾದ ದೇರಳಕಟ್ಟೆ ಜಂಕ್ಷನ್ ದುರ್ನಾತ! 
ಡೈಮಂಡ್ ನೆಕ್ಲೇಸ್, ಕಿವಿಯೋಲೆಗಳು, ಚಿನ್ನದ ಚೈನ್, ಪ್ಲಾಟಿನಂ ಉಂಗುರ ಕಳವು…!
ಅಮಿತ್ ಶಾ- “UCC ಜಾರಿಗೆ ತಂದು ನಾಲ್ಕು ಮದುವೆ ಪದ್ಧತಿ ನಿಷೇಧ” — ಪಶ್ಚಿಮ ಬಂಗಾಳದಲ್ಲಿ ದೊಡ್ಡ ಘೋಷಣೆ
ಶೈಕ್ಷಣಿಕ ವರ್ಷ ಆರಂಭ, ನೋಟ್‌ಬುಕ್‌ನಿಂದ ಆಟೋವರೆಗೆ ಎಲ್ಲ ಖರ್ಚು ಗಗನಕ್ಕೆ….ಪೋಷಕರಿಗೆ ದುಬಾರಿ ಹೊರೆ
ಎಂಡೋಸಲ್ಫಾನ್ ಸಂತ್ರಸ್ತರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರ
ಹೊಸ ರಾಜಕೀಯ ಕ್ರಾಂತಿ! ಅಸ್ಸಾಂ ಕುದಿಯುತ್ತಿದೆ…ಹಿಂದುತ್ವ vs ಗುರುತು ರಾಜಕೀಯ…!