📍 Karavali Maruta
  • LOGIN
  • BREAKING
    ‘ಮೇಡ್ ಇನ್ ಮಂಗಳೂರು’ ಹಡಗು ಜರ್ಮನ್ ಸಂಸ್ಥೆಯ ತೆಕ್ಕೆಗೆ; ವಿಶ್ವದ ಗಮನ ಸೆಳೆದ ಚೌಗುಲೆ ಶಿಪ್‌ಯಾರ್ಡ್! ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ ದಯಾಮರಣ ಕೇಳಿದ್ದ ತುಮಕೂರು ರಾಬಿಯಾ ಇನ್ನಿಲ್ಲ …!ಪರಮೇಶ್ವರ್ ಮುಂದೆ ಕಣ್ಣೀರಿಟ್ಟಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ವಿಷಸೇವಿಸಿ ಕೊನೆಯುಸಿರು…‘ಮನೆ’ ಸಿಕ್ಕರೂ ಬದುಕು ಉಳಿಯಲಿಲ್ಲ! ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್! ಮಹಿಳಾ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ
    ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಸಚಿವ ಜಮೀರ್ ಅಹಮದ್ ಹಚ್ಚಿದ ಪಟಾಕಿಗೆ ಕಾಂಗ್ರೆಸ್ ಕೋಟೆಯಲ್ಲಿ ಬಿರುಕು..!?

    ಇದು ಸಚಿವ ಜಮೀರ್ ಅಹ್ಮದ್ ಖಾನ್ ರವರ ಅಧಿಕ ಪ್ರಸಂಗತನ ಅನ್ನುವುದರಲ್ಲಿ ಎರಡು ಮಾತೇ ಇಲ್ಲ. ಆತನೇ ಖುದ್ದಾಗಿ ಬಂದು ದಾವಣಗೆರೆಯಲ್ಲಿ ಕೂತು ಇಂತಹದೊಂದು ಪಟಾಕಿಗೆ ಬೆಂಕಿ ಹಚ್ಚಿ ಹೋದ ಪರಿಣಾಮ, ದಾವಣಗೆರೆಯ ಕಾಂಗ್ರೆಸ್ ಕೋಟೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದರ ಹೊಣೆ ಹೊರಬೇಕಾದವರು ಯಾರು?

    ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಏನೂ ಮಾತನಾಡುತ್ತಿಲ್ಲ. ಇನ್ನೊಂದು ಕಡೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ಏನು ಮಾತನಾಡುತ್ತಿಲ್ಲ. ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿರುವವರ ಮೇಲೆ, ಅನವಶ್ಯಕವಾಗಿ ಎಲ್ಲಿಂದಲೋ ಎಲ್ಲಿಗೋ ಹೋಗಿ ವೈಯಕ್ತಿಕ ಜಾತಿ ಧರ್ಮದ ಹೆಸರಲ್ಲಿ ಬ್ಲಾಕ್ಮೈಲಿಗೆ ಇಳಿಯುವ ವ್ಯಕ್ತಿಗಳ ಮೇಲೆ ಕಂಟ್ರೋಲ್ ಇಲ್ಲಾಂದ್ರೆ ನಾಳೆ ಪಕ್ಷದ ಗತಿ ಏನು ಎಂಬ ಮಾತುಗಳು ಕಾಂಗ್ರೆಸ್ ಪಕ್ಷದ ಒಳಗಿನಿಂದಲೇ ಭುಗಿಲೇ ಹೇಳಲಾರಂಬಿಸಿದೆ.
    ಜಮೀರ್ ಅಹಮದ್ ಖಾನ್ ಈತ ಕಟ್ಟಾ ಕಾಂಗ್ರೆಸ್ಸಿಗರೇನಲ್ಲ. ಕಾಂಗ್ರೆಸಿನಲ್ಲಿರುವ ಕಟ್ಟರ್ ಪಕ್ಷ ನಿಷ್ಠೆ ಹೊಂದಿರುವ ಮುಸ್ಲಿಮರಿಗಿಂತ, ಈ ಜಮೀರ್ ಅಹ್ಮದ್ ಮೇಲಕ್ಕೆ ಬೆಳೆದು ನಿಂತಿದ್ದಾರೆ. ಸಾಲು ಸಾಲು ಮುಸ್ಲಿಂ ನಾಯಕರುಗಳು ಕಾಂಗ್ರೆಸ್ಸಿನ ಒಳಗಿದ್ದಾರೆ. ಅವರಿಗೆ ಇನ್ನೂ ಸರಿಯಾದ ಸ್ಥಾನ ಮಾನ ಸಿಕ್ಕಿಲ್ಲ. ಹಲವು ಕಾರಣಗಳಿಂದಾಗಿ ಇನ್ನು ಅವರು ಸ್ಥಾನಕ್ಕಾಗಿ ಕಾಯುತ್ತಿದ್ದಾರೆ. ಅಂಥವರ ಮಧ್ಯೆ ಜೆಡಿಎಸ್ ನಿಂದ ಹಾರಿ ಬಂದ ಜಮೀರ್ ಅಹ್ಮದ್ ಖಾನ್, ಅವರೆಲ್ಲರನ್ನು ಓವರ್ಟೇಕ್ ಮಾಡಿ ಪಕ್ಷದಲ್ಲಿ ತನ್ನನ್ನು ತಾನು ಮುಸ್ಲಿಂ ಸಮುದಾಯದ ಪ್ರಶ್ನಾತೀತ ನಾಯಕ ಎಂದು ಬಿಂಬಿಸಿಕೊಳ್ಳಲು ಹೋಗುತ್ತಿರುವುದು, ಅದನ್ನು ನೋಡಿ ಪಕ್ಷ ಯಾವುದೇ ನಿರ್ಧಾರ ಮಾಡದಿರುವುದು ಭವಿಷ್ಯದಲ್ಲಿ ಪಕ್ಷಕ್ಕೆ ಅಪಾಯವನ್ನು ತಂದುಡ್ಡುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬ ನೋವಿನ ಮಾತನ್ನು ಸ್ವತಃ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹೇಳುತ್ತಿದ್ದಾರೆ.
    ಸಾಧಿಕ್ ಪೈಲ್ವಾನ್
    ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಅದು. ಇಲ್ಲಿ ಯಾವತ್ತೂ ಕಾಂಗ್ರೆಸ್ ತನ್ನ ಬಿಗಿ ಪಟ್ಟನ್ನು ಬಿಟ್ಟು ಕೊಟ್ಟಿರಲಿಲ್ಲ. ಸತತವಾಗಿ ಶಾಮನೂರು ಶಿವಶಂಕ್ರಪ್ಪ ಇಲ್ಲಿ ಗೆಲ್ಲುತ್ತಾ ಬಂದಿದ್ದಾರೆ. ಅಂತಹ ಬಲಿಷ್ಠ ಕಾಂಗ್ರೆಸ್ ಕೋಟೆ, ಈ ದಕ್ಷಿಣ ವಿಧಾನಸಭಾ ಕ್ಷೇತ್ರ. ಈ ಕ್ಷೇತ್ರದಲ್ಲಿ ಸಾಕಷ್ಟು ಮುಸ್ಲಿಂ ಮತದಾರರೂ ಇದ್ದಾರೆ ಅನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಸಾಧಿಕ್ ಪೈಲ್ವಾನ್ ನಂತಹ ಕಟ್ಟರ್ ಕಾಂಗ್ರೆಸ್ಸಿಗ ಈ ಕ್ಷೇತ್ರದ ಮುಸ್ಲಿಂ ಮತದಾರರ ಮೇಲೆ ಹಿಡಿತವನ್ನು ಹೊಂದಿರುವಂತಹ ವ್ಯಕ್ತಿ. ಈ ವ್ಯಕ್ತಿ ಶಿವಶಂಕ್ರಪ್ಪನವರ ಗರಡಿಯಲ್ಲೇ ಪಳಗಿದವರು. ಅಂತಹ ಸಾಧಿಕ್ ಪೈಲ್ವಾನರನ್ನೇ ಜಮೀರ್ ಅಹ್ಮದ್ ಕೀ ಕೊಟ್ಟು ಆಡಿಸಿದರು ಎಂದರೆ ಲೆಕ್ಕ ಹಾಕಿ, ಈತನ ಖದರ್ ನ್ನು.
    ಶಾಮನೂರು ಶಿವಶಂಕ್ರಪ್ಪನವರ ನಿಧನದಿಂದಾಗಿ ತೆರವಾದ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಸ್ವತಹ ಶಾಮನೂರು ಶಿವಶಂಕ್ರಪ್ಪನವರ ಸುಪುತ್ರ ಎಸ್ ಎಸ್ ಮಲ್ಲಿಕಾರ್ಜುನ್ ಜಿಲ್ಲೆಯ ಉಸ್ತುವಾರಿ ಮಂತ್ರಿ ಬೇರೆ. ಅವರು ಇರುವಾಗಲೇ ಈ ಕ್ಷೇತ್ರಕ್ಕೆ ಸಂಬಂಧವೇ ಇಲ್ಲದಂತಹ ಜಮೀರ್ ಅಹ್ಮದ್ ಖಾನ್ ದಾವಣಗೆರೆಗೆ ಬಂದು ಮುಸ್ಲಿಂ ಸಮಾಜದ ಮುಖಂಡರ ಜೊತೆ ಕುಳಿತು ಈ ಕ್ಷೇತ್ರಕ್ಕೆ ಮುಸಲ್ಮಾನ ಅಭ್ಯರ್ಥಿಯಾಗುತ್ತಾರೆ ಅಂತ ಘೋಷಿಸಿ ಹೋಗುತ್ತಾರೆ. ಅಲ್ಲಿಂದ ಶುರುವಾಗುತ್ತದೆ ಬಿಸಿ ಬಿಸಿ ವಾತಾವರಣ.
    ಈ ಹಿಂದೆ ಶ್ಯಾಮನೂರು ಶಿವಶಂಕ್ರಪ್ಪನವರು ಬಿಜೆಪಿಯ ಜಾಧವ್ ವಿರುದ್ಧ ಕೇವಲ ಐದಾರು ಸಾವಿರ ಮತಗಳಿಂದ ಗೆದ್ದಿದ್ದರು. ಈ ಇತಿಹಾಸವನ್ನು ಹೊಂದಿರುವ ಬಿಜೆಪಿಯು ಈ ಬಾರಿ ಸಖತ್ ಫೈಟ್ ಕೊಡಲು ರೆಡಿಯಾಗಿದೆ. ಇದರ ನಡುವೆ ಎಪ್ಪತ್ತು ಸಾವಿರದಷ್ಟು ಮತದಾರರನ್ನು ಹೊಂದಿರುವ ಮುಸ್ಲಿಂ ಸಮಾಜದ ಎದುರು ಜಮೀರ್ ಅಹಮದ್ ಖಾನ್ ಬಂದು ಮಾಡಿದ ಬಾಣಗಡಿಯ ಕಾರಣದಿಂದಾಗಿ ಕಾಂಗ್ರೆಸ್ ಕೋಟೆಯ ಒಳಗೆ ಬಿರುಕು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದರ ಲಾಭವನ್ನು ಬಿಜೆಪಿ ಪಡೆದುಕೊಳ್ಳುವುದಕ್ಕೆ ತನ್ನೆಲ್ಲಾ ಶಕ್ತಿಯನ್ನು ಬಳಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಕಾಂಗ್ರೆಸ್ಸಿನ ಅಭ್ಯರ್ಥಿ ಶಾಮನೂರು ಶಿವಶಂಕ್ರಪ್ಪನವರ ಮೊಮ್ಮಗ ಸಮರ್ಥ್ ಗೆ ಇದು ಪ್ರತಿಷ್ಠೆಯ ಕಣ ಆಗಿದೆ. ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡುತ್ತಿರುವ ಸಮರ್ಥ್ ಸೋಲನ್ನು ಸಹಿಸಿಕೊಳ್ಳಲಾರರು. ಎಲ್ಲದಕ್ಕೂ ಹೆಚ್ಚಾಗಿ ಜಿಲ್ಲಾ ಮಂತ್ರಿಯಾದ ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಇದು ಪ್ರತಿಷ್ಠೆಯ ಪ್ರಶ್ನೆಯೂ ಹೌದು. ಶಾಮನೂರು ಶಿವಶಂಕ್ರಪ್ಪನವರ ನಿಧನದ ನಂತರ ಆ ಕುಟುಂಬದ ಹಿಡಿತವು ಕೈತಪ್ಪಿ ಹೋಯಿತು ಎಂಬ ಮೆಸೇಜ್ ದಾವಣಗೆರೆ ಜಿಲ್ಲೆಗೆ ಪಸರಿಸಿದರೆ ಅದರ ಪರಿಣಾಮ ಭವಿಷ್ಯದಲ್ಲಿ ಕಾಂಗ್ರೆಸ್ಸಿಗಷ್ಟೇ ಅಲ್ಲ ಶಾಮನೂರು ಕುಟುಂಬಕ್ಕೂ ದೊಡ್ಡ ಹಿನ್ನಡೆಯನ್ನು ಉಂಟುಮಾಡಲಿದೆ.
    ಇದೆಲ್ಲವುದಕ್ಕೂ ಕಾರಣ ಜಮೀರ್ ಅಹಮದ್ ಖಾನ್ಆಟ. ಅವರ ಅನವಶ್ಯಕವಾದ ತಪ್ಪುಗಳಿಂದಾಗಿ ಇವತ್ತು ಕಾಂಗ್ರೆಸ್ ಸಲೀಸಾಗಿ ಗೆಲ್ಲಬೇಕಿದ್ದ ಕ್ಷೇತ್ರದಲ್ಲಿ ಹರ ಸಾಹಸ ಪಡಬೇಕಾದಂತಹ ವಾತಾವರಣ ಸೃಷ್ಟಿಯಾಗಿದ್ದು.
    ಈಗಾಗಲೇ ಸಾಧಿಕ್ ಪೈಲ್ವಾನ್ ಜೊತೆಗೆ ಕಾಂಗ್ರೆಸ್ ರಾಜ್ಯ ನಾಯಕರು ಮಾತುಕತೆ ಮಾಡಿ ಅವರನ್ನು ತಣ್ಣಗಾಗಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಸಾಕಷ್ಟು ತಡವಾಗಿತ್ತು. ಸಾಧಿಕ್ ತಮ್ಮ ನಾಮಪತ್ರವನ್ನು ಹಿಂಪಡೆದಿಲ್ಲ, ಆದರೆ ತಾನು ಪ್ರಚಾರ ಮಾಡುವುದಿಲ್ಲ, ಕಾಂಗ್ರೆಸಿಗಾಗಿಯೇ ಮತ ಕೇಳುತ್ತೇನೆ. ಪಕ್ಷದ ವಿರುದ್ಧ ಹೋಗುವುದಿಲ್ಲ. ಏನೋ ಒಂದಿಷ್ಟು ವ್ಯತ್ಯಾಸ ಆಗಿ ಹೋಗಿದೆ ಅದನ್ನು ಸರಿಪಡಿಸಿಕೊಳ್ಳುತ್ತಿದ್ದೇವೆ. ಸಮರ್ಥ್ ನಮ್ಮ ಮನೆಯ ಮಗನೇ ಆಗಿದ್ದಾರೆ. ವರನ್ನು ಗೆಲ್ಲಿಸಿಕೊಂಡು ಬರಲು ಶ್ರಮಿಸುತ್ತೇನೆ ಅಂತ ಮಾಧ್ಯಮದ ಮುಂದೆ ಸಾಧಿಕ್ ಪೈಲ್ವಾನ್ ಹೇಳಿದ್ದು ಒತ್ತಡದಿಂದಲೋ ಅಥವಾ ಮನಃಪೂರ್ವಕವಾಗಿ ಹೇಳಿದ್ದಾರೋ ಅರ್ಥವಾಗುತ್ತಿಲ್ಲ. ಒಂದೊಮ್ಮೆ ಪಕ್ಷ ನಿಷ್ಠೆಯ ವಿಚಾರವೇ ಮುಖ್ಯವಾಗಿದ್ದರೆ ಪೈಲ್ವಾನ್ ತಮ್ಮ ನಾಮಪತ್ರವನ್ನು ವಾಪಸ್ ಪಡೆಯಬೇಕಿತ್ತು. ಆದರೆ ಆ ಕೆಲಸವನ್ನು ಪೈಲ್ವಾನ್ ಮಾಡಿಲ್ಲ. ಬದಲಿಗೆ ನಾನು ಕಾಂಗ್ರೆಸ್ಸಿಗೆ ಮತ ಕೇಳುತ್ತೇನೆ ಅಂತ ಸ್ಟೇಟ್ಮೆಂಟ್ ನೀಡಿದ್ದಾರೆ ಅಷ್ಟೇ.
    ಇನ್ನು ಜಮೀರ್ ಅಹ್ಮದ್ ಖಾನ್ ದಾವಣಗೆರೆಗೆ ಹೋಗಿ ಪಟಾಕಿ ಹಚ್ಚಿ ಬಂದಮೇಲೆ ಅತ್ತ ಕಡೆ ತಲೆ ಹಾಕಿಲ್ಲ. ಸಾಧಿಕ್ ಪೈಲ್ವಾನ್ ಅವರನ್ನು ಅಭ್ಯರ್ಥಿಯಾಗಲು ಹುರಿದುಂಬಿಸಿದ್ದು ಈ ಜಮೀರ್. ಇನ್ನೊಬ್ಬರ ಕ್ಷೇತ್ರದಲ್ಲಿ ಯಾವುದೇ ಅಧಿಕಾರ ಇಲ್ಲದೆ ಹೋಗಿ ಮೂಗು ತೂರಿಸಿ ಬಂದ ಜಮೀರ್ ಅಹ್ಮದ್ ರಿಂದಾಗಿ ಕಾಂಗ್ರೆಸ್ಗೆ ನಷ್ಟವಂತೂ ಆಗಿದೆ. ಅದನ್ನು ಸರಿಪಡಿಸುವವರಾರು? ಈ ವ್ಯಕ್ತಿಯ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಲವಾದ ಆಶೀರ್ವಾದವಿದ್ದಂತಿದೆ. ಈಗಾಗಲೇ ಹಲವು ಬಾರಿ ಬಾಯಿಯನ್ನು ಹರಿದು ಬಿಟ್ಟು ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿದ್ದಾರೆ. ಆದರೂ ಯಾವುದೇ ಕ್ರಮ ಆಗದಂತೆ ನೋಡಿಕೊಂಡಿದ್ದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಈಗಲೂ ಅದೇ ರಕ್ಷಣೆಯ ಕಾರ್ಯ ಸಿದ್ದರಾಮಯ್ಯನವರಿಂದ ಆಗುತ್ತಿದೆಯೇ? ಪಕ್ಷಕ್ಕೆ ಡ್ಯಾಮೇಜ್ ಮಾಡಿದ ವ್ಯಕ್ತಿಯನ್ನು ಸಚಿವ ಸ್ಥಾನದಲ್ಲಿ ಮುಂದುವರೆಸುವುದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಅದೇ ಪಕ್ಷದ ಒಳಗಿನಿಂದ ಶುರುವಾಗಿದೆ. ಅವರ ಅಭಿಪ್ರಾಯ ಏನು ಅಂದರೆ, ಕಾಂಗ್ರೆಸ್ ನಾಯಕರು ಜಮೀರ್ ಅಹ್ಮದ್ ನಂತಹ ನಾಯಕರಿಗೆ ಮಣೆ ಹಾಕಿದರೆ ಬಿಜೆಪಿಯ ಬಟ್ಟಲಿಗೆ ತುಪ್ಪ ಹಾಕಿದಂತೆಯೇ ಸರಿ. ಬಿಜೆಪಿಯು ಇಂತಹ ಅವಕಾಶವನ್ನೇ ಕಾಯುತ್ತಿರುತ್ತದೆ. ಕಾಂಗ್ರೆಸ್ಸನ್ನು ಮುಸ್ಲಿಮರ ಪಕ್ಷ ಎಂದು ಬಿಂಬಿಸುವಲ್ಲಿ ಈಗಾಗಲೇ ಶೇಕಡಾ 50ರಷ್ಟು ಸಕ್ಸಸ್ ಪಡೆದಿದೆ ಬಿಜೆಪಿ. ಹಾಗಿರುವಾಗ ಪಕ್ಷದ ನಾಯಕರು ಇಂತಹ ಜಮೀರ್ ಅಹ್ಮದ್ ಅಂತವರನ್ನು ಅವರ ಕ್ಷೇತ್ರಕಷ್ಟೇ ಸೀಮಿತಗೊಳಿಸಿದರೆ ಪಕ್ಷಕ್ಕೆ ಹಾಗೂ ಸರ್ಕಾರ ಎರಡಕ್ಕೂ ಒಳ್ಳೆಯದು ಎಂಬ ಅಗ್ರಹವನ್ನು ಮಾಡಲು ಆರಂಭಿಸಿದ್ದಾರೆ.
    ಶಾಮನೂರು ಶಿವಶಂಕ್ರಪ್ಪ ನವರ ಕುಟುಂಬ ಶ್ರೀಮಂತ ಹಾಗೂ ಬಲಿಷ್ಠ ಕುಟುಂಬ ಅನ್ನುವುದರಲ್ಲಿ ಎರಡು ಮಾತಿಲ್ಲ. ಅಭ್ಯರ್ಥಿ ಸಮರ್ಥ್ ಇನ್ನೂ ರಾಜಕೀಯ ಅಂಗಳದಲ್ಲಿ ಕೂಸು. ತಾಯಿ ಸಂಸದೆ ಆಗಿದ್ದರು ರಾಜಕೀಯ ಅನುಭವ ಕಡಿಮೆನೇ. ಮಲ್ಲಿಕಾರ್ಜುನ್ ಅವರಿಗೆ ರಾಜಕೀಯದ ಅನುಭವ ಇದ್ದರೂ, ಕ್ಷೇತ್ರವನ್ನು ಬಿಟ್ಟು ಹೊರಗೆ ಅವರ ರಾಜಕೀಯದ ಪಟ್ಟು ವಿಸ್ತರಣೆಯಾಗಿಲ್ಲ. ಜೊತೆಗೆ ಅವರ ದಿನಚರಿ ಜನರಿಗೆ ಅಷ್ಟು ಇಷ್ಟವಾಗುತ್ತಿಲ್ಲ ಕೂಡ. ರಾಜಕಾರಣಿಗಳು ಬೆಳಗಿನ ಹೊತ್ತಿನಲ್ಲಿ ಜನಸಾಮಾನ್ಯರಿಗೆ ಸಿಗುವಂತಾದರೆ ಮಾತ್ರ ಜನರಿಗೆ ಒಂದಿಷ್ಟು ಉಪಕಾರವಾಗುತ್ತದೆ. ಮಲ್ಲಿಕಾರ್ಜುನ್ ರವರು ಬೆಳಗಿನ ಸಮಯದಲ್ಲಿ ಜನರಿಗೆ ಸಿಗುವುದು ದುರ್ಲಭ. ಅವರೇನಿದ್ದರೂ ಮಧ್ಯಾಹ್ನ 12ರ ನಂತರವೇ ಸಿಗುವುದು ಎಂಬ ಮೆಸೇಜ್ ಯಾವಾಗಲೊ ದಾವಣಗೆರೆಯ ತುಂಬಾ ಪಸರಿಸಿಕೊಂಡಾಗಿದೆ. ಇದು ಕೂಡ, ಅವರಿಗೆ ಕೊಂಚ ಹಿನ್ನಡೆಯನ್ನು ಉಂಟು ಮಾಡಬಹುದು. ಒಂದು ಕಡೆ ಮುಸ್ಲಿಂ ಮತದಾರರ ಮಧ್ಯ ಈಗಾಗಲೇ ಗೊಂದಲದ ಸನ್ನಿವೇಶವನ್ನು ಉಂಟು ಮಾಡಿದ್ದರಿಂದ ಕಡಿಮೆ ಅಂದರೂ 20% ನಷ್ಟು ಮುಸ್ಲಿಂ ಮತವನ್ನು ಈ ಬಾರಿ ಕಾಂಗ್ರೆಸ್ ಕಳೆದುಕೊಳ್ಳಲಿದೆ. ಈ ಸಂಖ್ಯೆ ಬಿಜೆಪಿಯ ಪಾಳೆಯಕ್ಕೆ ಹೊಸ ಹುರಪನ್ನು ನೀಡುತ್ತಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ ನೋಡಿ
    -ದತ್ತು

    ##DavangerePolitics #ByElection##MuslimVotes #BJPvsCongress##ZameerAhmedKhan #CongressKarnataka#analysis#latest news#politics

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಮಾಜಿ ಮುಖ್ಯಮಂತ್ರಿಯ ಮೇಲೆ ಗುಂಡಿನ ದಾಳಿ,- Z+ ಭದ್ರತೆಯ ನಡುವೆ ದಾಳಿಕೋರ ಹೇಗೆ  ಬಂದ?
    ಸುಬ್ರಹ್ಮಣ್ಯದಲ್ಲಿ ಭಟ್ಟರಿಗೆ ದಕ್ಷಿಣೆ ಕೊಡುವoತಿಲ್ಲ- ಸಿಟ್ಟಿಗೆಳುತ್ತಿರುವ ಪುರೋಹಿತರು
    ಕ್ರಿಮಿನಲ್ಸ್ ಸಪೋರ್ಟಿಗೆ ನಿಂತವರು ಯಾರ್ಯಾರು ಅನ್ನುವುದು ಈಗ ಗೊತ್ತಾಗುತ್ತಿದೆ ನೋಡಿ….!
    ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ನಡುವೆ ತೀವ್ರ ವಾಕ್ಸಮರ, ಬಿಗುವಿನ ವಾತಾವರಣ
    ಮನೆಯ ಮೇಲೆ ಪೊಲೀಸರ  ದಾಳಿ  ಮಾರಾಟಕ್ಕೆ ಇಡಲಾದ ಮಾದಕ ವಸ್ತು ಹಾಗೂ ಮಾರಕ ಆಯುಧ ವಶ
    🔴ಬ್ರೇಕಿಂಗ್ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ಜುಲೈ 8 ರಜೆ ಘೋಷಣೆ!
    ಮಣಿಪಾಲ ಜೆಇಇ ಮೇನ್ಸ್ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಪ್ರಯತ್ನ….
    ಪೊಲೀಸರಿಂದ ಕ್ರೂರವಾಗಿ ತಳಿಸಲ್ಪಟ್ಟ ವಿದ್ಯಾರ್ಥಿಗಳಲ್ಲಿ ಕ್ಷಮೆ ಕೇಳಿದ ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ
    War update-ಕಂಪ್ಲೀಟ್ ಡೀಟೇಲ್ಸ್ …ಮುಂದೇನು? ceasefire ಮುಂದುವರಿಯುತ್ತದೆಯಾ?ಶಾಂತಿ ಅಥವಾ ಸಂಘರ್ಷ? ಮುಂದಿನ ಕೆಲ ದಿನಗಳು ವಿಶ್ವದ ಭವಿಷ್ಯ ತೀರ್ಮಾನಿಸುತ್ತದೆ.
    ಮುಗ್ಧ ಮಗು ಮೇಲೆ ನಡೆದ ಅಮಾನವೀಯ ಕ್ರೌರ್ಯ… ನ್ಯಾಯಕ್ಕಾಗಿ ಸಮಾಜದ ಒಕ್ಕೊರಲ ಹೋರಾಟ
    ಅಂಡಮಾನ್ ಸಮುದ್ರದಲ್ಲಿ ಸಿಕ್ಕಿದ ಖಜಾನೆ! ಭಾರತದ ಇಂಧನ ಭವಿಷ್ಯ ಬದಲಾಗುತ್ತಿದೆಯೇ?
    ಬೆಳಗಾವಿ ಮಾಜಿ ಯೋಧನ ಸಾವಿನ ಹಿಂದೆ ಬೆಚ್ಚಿಬೀಳಿಸುವ ಸತ್ಯ ₹2 ಕೋಟಿ ವಿಮೆ..!? ಸಿನೆಮಾವನ್ನೂ ಮೀರಿಸಿದ ಕ್ರೈಂ ಸ್ಟೋರಿ!
    ಹೋಟೆಲ್ ಉದ್ಯಮ ಉಳಿಸಲು ಜಿಎಸ್‌ಟಿ ಕಡಿತ ಅಗತ್ಯ-ಕರ್ನಾಟಕ ಹೋಟೆಲ್ ಸಂಘದ ಆಗ್ರಹ
    ಬಂಟ್ವಾಳ ಬೆಚ್ಚಿಬೀಳಿಸಿದ ಯುವತಿಯಭೀಕರ ಹತ್ಯೆ: ಬಸ್ ನಿಲ್ದಾಣದಲ್ಲೇ ಬೆನ್ನಟ್ಟಿ ಇರಿದ ಕೊಲೆ ಆರೋಪಿ ಚೇತನ್ ಸುಳಿವು..!
    ಹಾಸನದಲ್ಲಿ ಮೀಸಲಾತಿ ವಿಚಾರಕ್ಕೆ ವಾಕ್ಸಮರ: ರೇವಣ್ಣ–ಶಿವಲಿಂಗೇಗೌಡ ತಿರುಗೇಟು
    ಖಾಸಗಿ ಬಸ್ಸಿನಲ್ಲಿ ಮಹಿಳೆಯ ಮಂಗಳಸೂತ್ರ ಏಗರಿಸಿದ್ರಾ?
    ಪುತ್ತೂರಿನ ಕೃಷ್ಣ ಜೆ. ರಾವ್ ಪ್ರಕರಣಕ್ಕೆ ಹೈಕೋರ್ಟ್ ಬ್ರೇಕ್!“ಮಧ್ಯಂತರ ತೀರ್ಪು: ₹75K ತಿಂಗಳ ಸಹಾಯ ಷರತ್ತು”
    ಭಾರತದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಅನ್ನೋ ಇತಿಹಾಸ ಬರೆಯಲಿದ್ದಾರೆ ‘ಡಿ ಕೆ ಶಿ’!
    ಕಾಂಗ್ರೆಸ್–ಮುಸ್ಲಿಂ ಸಮುದಾಯ ಸಂಬಂಧದಲ್ಲಿ ದೊಡ್ಡ ಬಿರುಕು?
    ಮಧ್ಯಪ್ರಾಚ್ಯದಲ್ಲಿ ಯುದ್ಧ– ಸಂಕಷ್ಟದಲ್ಲಿ ಜಗತ್ತು-ಉಸಿರು ತಡೆದ ಪರಿಸ್ಥಿತಿ!ಏನಾಗ್ತಾ ಇದೆ…
    ಕಂಬಳಕ್ಕೆ ಘೋಷಿತ ಅನುದಾನ ಕೊಡುವಂತೆ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ..
    ವಿಟ್ಲದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮ
    ತಡರಾತ್ರಿ ಭಟ್ಕಳದಲ್ಲಿ ವಿಚ್ಛಿದ್ರಕಾರಿ ಕೋಮುವಾದಿಗಳಿಂದ ದಾಂದಲೆ
    ನಿಮ್ಮ ಮಾತು ಕೇಳಿ ರಾಜೀನಾಮೆ ನೀಡಿದ್ದೇನೆ. ಈಗ ನನ್ನ ಬೇಡಿಕೆ ಈಡೇರಿಸುವುದು ನಿಮ್ಮ ಸರದಿ  ಎಂದ ಸಿದ್ದರಾಮಯ್ಯ
    ಆನ್ ಲೈನ್ ವಂಚನೆ ಶಿರ್ವದ ಯುವತಿಗೆ ಲಕ್ಷ ಲಕ್ಷ ಉಂಡೆನಾಮ… ಬ್ಯಾಂಕ್ ನಿಯಮ ವಂಚಕರಿಗೆ  ಸಹಕಾರಿ?
    ಸುರ್ಜೆವಾಲ ಸಿಎಂ ಡಿಕೆಶಿ ಗುಪ್ತ ಮಾತುಕತೆ
    ₹1270 ಕೋಟಿ ಕಾನ್ಟ್ರಾಕ್ಟ್ ಹಗರಣ -CM ಖಾಂಡು ಕುಟುಂಬ ವಿಚಾರಣೆ-ಸುಪ್ರೀಂಕೋರ್ಟ್ ಸಿಬಿಐಗೆ ಆದೇಶ..
    ಜನಪ್ರತಿನಿಧಿಗಳಿಗೆ ಕೆಲಸ ,ಜನಸೇವೆ ಬೇಡ ,ಪ್ಲೆಕ್ಸ್ ಮಾತ್ರ ಫುಲ್ ಸೈಜ್ …ಕಾನೂನು ಇದೆ… ಪಾಲನೆ ಮಾತ್ರ ಇಲ್ಲ!
    ಹೆಡ್‌ಲೈಟ್ ಇಲ್ಲ… ಮೊಬೈಲ್ ಟಾರ್ಚ್‌ನಲ್ಲೇ ಓಡಿದ ಸರ್ಕಾರಿ ಬಸ್!
    ಹೊಸ ಸಂಸತ್ ಭವನದ ವಿನ್ಯಾಸಕ್ಕೆ ಶಶಿ ತರೂರ್ ಅಸಮಾಧಾನ: “ಆತ್ಮ ರಹಿತ ಸಮಾವೇಶ ಕೇಂದ್ರ”