📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ತಿರುಪತಿಯಲ್ಲಿ ಒಂದಿಡೀ ಕುಟುಂಬವೇ ನಾಶ!

ಅದು ಪವಿತ್ರವಾದಂತಹ ತಿರುಪತಿ ಕ್ಷೇತ್ರ. ಶ್ರೀಮನ್ನಾರಾಯಣನ ವಾಸಸ್ಥಾನ. ಅಂತಹ ಒಂದು ಕ್ಷೇತ್ರದ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ, ಸುಖ ಸಂಸಾರ ನಡೆಸುತ್ತಿದ್ದ ಕುಟುಂಬವೊಂದು ಪೂರ್ತಿಯಾಗಿ ನಾಶಗೊಂಡಿರುವಂತಹ ಆಘಾತಕಾರಿ ಘಟನೆ ಮೊನ್ನೆ ಮಧ್ಯಾಹ್ನ ನಡೆದಿದೆ.

ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ನಾರಾಯಣವನಂ ಮಂಡಲದ ವೆಂಕಟ ಕೃಷ್ಣ ಪಾಳ್ಯದಲ್ಲಿ ಇಂತಹುದೊಂದು ಭೀಬತ್ಸ ಘಟನೆ ನಡೆದಿದೆ. ಈ ಒಂದು ಘಟನೆಯ ಹಿಂದೆ ಯಾರ ಕೈವಾಡವಿದೆ? ಎಂಬುವುದರ ಬಗ್ಗೆ ಅಲ್ಲಿನ ಪೊಲೀಸರು ವಿಪರೀತವಾಗಿ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಒಂದೇ ಕುಟುಂಬದ ಐದು ಜನರು ಆಘಾತಕಾರಿ ರೀತಿಯಲ್ಲಿ ಸತ್ತು ಬಿದ್ದಿದ್ದಾರೆ.

ವೆಂಕಟ ಕೃಷ್ಣ ಪಾಳ್ಯದ ನಿವಾಸಿಯಾದ ಮೋಹನ್ ಹಾಗೂ ಅವರ ತಾಯಿ ಚಂದ್ರಕಲಾ  ಮತ್ತು ಹೆಂಡತಿ ಹರಿತ, ಮಗ ಕೌಶಿಕ್ ಹಾಗೂ ಮಗಳು ಹರಿಣಿ ಇವಿಷ್ಟು ಜನರು ಅನುಮಾನಾಸ್ಪದ ರೀತಿಯಲ್ಲಿ ಹಾಡ ಹಗಲೇ ಸತ್ತು ಬಿದ್ದಿದ್ದರು.

ಮೋಹನ್ ಕುಮಾರ್, ಇವರು ಇದೇ ವೆಂಕಟಪ್ಪ ಕೃಷ್ಣ ಪಾಳ್ಯದಲ್ಲಿ ಸಿಮೆಂಟ್ ಅಂಗಡಿಯೊಂದನ್ನು ನಡೆಸುತ್ತಿದ್ದರು. ಆರ್ಥಿಕವಾಗಿ ಆಗಲಿ, ಕುಟುಂಬದ ವಿಚಾರದಲ್ಲಾಗಲಿ ಎಲ್ಲೂ ಕೂಡ ಒಂದು ಸಣ್ಣ ವ್ಯತ್ಯಾಸವು ಇರಲಿಲ್ಲ ಎನ್ನುವುದು ಆ ಕುಟುಂಬಕ್ಕೆ ತೀರಾ ಹತ್ತಿರದವರ ಹೇಳಿಕೆ. ಸಂತೋಷದಿಂದ ಇಡೀ ಕುಟುಂಬವು ಇದ್ದಂತಹ ಸಂದರ್ಭದಲ್ಲೇ, ಇದ್ದಕ್ಕಿದ್ದಂತೆಯೇ ಕುಟುಂಬಕ್ಕೆ ಕುಟುಂಬವೇ ನಾಶವಾಗುತ್ತದೆ ಅಂದರೆ ಇಡೀ ಊರು ದಿಗ್ಗಬ್ರಾಂತಗೊಳ್ಳದೆ ಇರುತ್ತದ?

ಮೊನ್ನೆ ಮಧ್ಯಾಹ್ನ ಮೋಹನ್, ಮಧ್ಯಾಹ್ನದ ಊಟಕ್ಕೆ ಯಾವತ್ತು ಹೋಗುವಂತೆ ಮನೆಗೆ ಹೋಗುತ್ತಾರೆ. ಆ ಸಂದರ್ಭದಲ್ಲಿ ಅಂಗಡಿಯನ್ನು ಅವರ ಭಾಮೈದ ನೋಡಿಕೊಳ್ಳುತ್ತಿದ್ದ. ಹಾಗೆ ಮನೆಗೆ ಹೋದ ವ್ಯಕ್ತಿ ತುಂಬಾ ಸಮಯವಾದರೂ ವಾಪಸ್ ಬರದ್ದನ್ನು ಗಮನಿಸಿ ಆ ಬಾಮೈದ ಸನಿಹದಲ್ಲೇ ಇರುವ ಮನೆಗೆ ಬಂದು ನೋಡಿದರೆ, ಮನೆಯ ಒಳಗೆ ಮೋಹನ್ ಕುಮಾರ್ ಅವರ ತಾಯಿ ಚಂದ್ರಕಲಾ ಮತ್ತು ಅವರ ಹೆಂಡತಿ ಹರಿತ ಅವರ ಬಾಡಿ ಬಿದ್ದಿರೋದನ್ನು ನೋಡಿ ಅಘಾತಗೊಳ್ಳುತ್ತಾನೆ . ತಕ್ಷಣವೇ ಪೊಲೀಸರಿಗೆ ಸುದ್ದಿ ಹೋಗುತ್ತದೆ. ಪೊಲೀಸರು ಬಂದು ಹುಡುಕಲು ಪ್ರಾರಂಭಿಸುತ್ತಿದ್ದಂತೆಯೇ, ಮೋಹನ್ ಕುಮಾರ್ ಹಾಗೂ ಅವರ ಮಕ್ಕಳಾದ ಕೌಶಿಕ್ ಮತ್ತು ಹರಿಣಿಈ ಮೂವರ ಮೂವರ ಬಾಡಿಯೂ ಹತ್ತಿರದಲ್ಲಿಯೇ ಇರುವ ರೈಲ್ವೆ ಟ್ರ್ಯಾಕಿನಲ್ಲಿ ಸಿಗುತ್ತದೆ. ಕನಿಷ್ಠ ಎರಡು ರೈಲು ಆಗಲೇ ಪಾಸಾದ ಕಾರಣ ಬಹುತೇಕ ಅವರ ಬಾಡಿ ನುಜ್ಜಂಗುಜ್ಜಾಗಿತ್ತು.

ಮೋಹನ್ ಕುಮಾರ್ ಅವರ ಬಾಮೈದ ಹೇಳುವ ಪ್ರಕಾರ ಅವರ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯವಿರಲಿಲ್ಲ, ಸಂತೋಷಕರವಾಗಿರುವಂತಹ ಕುಟುಂಬ ಅದಾಗಿತ್ತು. ವ್ಯವಹಾರಿಕವಾಗಿಯೂ, ಆರ್ಥಿಕ ಸಂಕಷ್ಟಕ್ಕೆನು ಈಡಾಗಿರಲಿಲ್ಲ. ಮೋಹನ್ ಕುಮಾರ್ ಯಾವುದೇ ಒತ್ತಡಕ್ಕೂ ಒಳಗಾದಂತಹ ವ್ಯಕ್ತಿಯಲ್ಲ. ಹೀಗಿರುವಾಗ ಅವರು ಇಡೀ ಕುಟುಂಬದ ಜೊತೆಗೆಅವರು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಕುಟುಂಬದ ಸದಸ್ಯರನ್ನು ಸಾಯಿಸಿ ಇವರು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ಅತ್ಯಂತ ಗುಪ್ತ ಕಾರ್ಯಾಚರಣೆ ನಡೆದಂತೆ ಕಾಣುತ್ತದೆ. ಇಡೀ ಕುಟುಂಬವನ್ನು ನಾಶ ಮಾಡಲಾಗಿದೆ ಎಂಬ ವಿಚಾರವನ್ನು ಸ್ಥಳೀಯರು ಸ್ಪಷ್ಟವಾಗಿ ಹೇಳುತ್ತಿದ್ದಾರೆ.

ಒಂದೊಮ್ಮೆ ಇದು ಮೋಹನ್ ಕುಮಾರ್ ಅವರ ಆತ್ಮಹತ್ಯೆ ಅಂತನೇ ಇಟ್ಟುಕೊಳ್ಳುವ, ಮನೆಗೆ ಊಟಕ್ಕೆ ಬಂದವ ಹೆಂಡತಿ ಮತ್ತು ತಾಯಿಯನ್ನು ಬಲವಂತವಾಗಿ ಸಾಯಿಸಿ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿ ರೈಲ್ವೆ ಹಳಿಗೆ ಹಾಕಿ ಅವರನ್ನು ಸಾಯಿಸಿ ಸ್ವತಃ ಮೋಹನ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ಅಂದರೆ, ನಂಬುವುದಾದರೂ ಹೇಗೆ? ಆತ ಮಕ್ಕಳನ್ನು ಸಹ, ಮನೆಯ ಒಳಗಡೆಯೇ ಸಾಯಿಸಬಹುದಿತ್ತು. ಮನೆಯಲ್ಲಿ ತಾಯಿ ಮತ್ತು ಅಜ್ಜಿಯ ಸಾವನ್ನು ನೋಡಿದಮೇಲೆ ಅವರು ಹೇಗೆ ಅಪ್ಪನ ಜೊತೆ ನಾರ್ಮಲ್ಲಾಗಿ ಹೊರಹೋಗಲು ಸಾಧ್ಯ? ಇಲ್ಲಿ ಕಾಣದ ಕೈ ಯಾವುದೋ  ಈ ಕೆಲಸ ಮಾಡಿದಂತಿದೆ ಅನ್ನುವುದು ಬಾಮೈದನ ಮತ್ತು ಊರಿನವರ ಸ್ಟೇಟ್ಮೆಂಟ್.

COMMENTS

Login with Gmail to comment

ಇನ್ನಷ್ಟು ಸುದ್ದಿ

ಮಂಗಳೂರು -ವೆನ್ಲಾಕ್ ಮಾಸ್ಟರ್ ಪ್ಲ್ಯಾನ್…!
ಬಾಲಕಾರ್ಮಿಕ ಪತ್ತೆ : ಮಾಲೀಕನಿಗೆ ಜೈಲು, ದಂಡ
ಜೀವನ್ಮರಣ ಹೋರಾಟದಲ್ಲೂ ಗೆಳೆಯರ ಬದುಕಿಸಿದ 14ರ ಬಾಲಕನ ರೋಚಕ  ಸ್ಟೋರಿ 
MLC ಐವನ್ ಡಿಸೋಜಾರಿಂದ ಕಾಮಗಾರಿ ಸ್ಥಳ ಪರಿಶೀಲನೆ
ಕರ್ನಾಟಕದಲ್ಲಿ ಮಳೆ ಅಲರ್ಟ್! 13 ಜಿಲ್ಲೆಗಳಿಗೆ ಯೆಲ್ಲೋ ವಾರ್ನಿಂಗ್ – ಜನರು ಎಚ್ಚರಿಕೆ ಅಗತ್ಯ
ಇರಾನ್–ಇಸ್ರೇಲ್ ಯುದ್ಧ: ಯುದ್ಧ ನಿಲ್ಲಿಸಲು ಇರಾನ್‌ನ 3 ಷರತ್ತುಗಳು… ಅಮೇರಿಕಾ ಕಂಗಾಲು
ಪ್ರತೀಕಾರದ ದಾಳಿಗೆ ‘ ರೌಡಿಶೀಟರ್ ಟ್ಯಾಬ್ಲೆಟ್’ ಆರೀಫ್ ಖತಂ .!
ತಸ್ಲಿಮಳ ಹಣೆಗೆ ಸಿಂಧೂರವಿಟ್ಟ ಕೇಶವ, ಬುರ್ಖಾ ತೆಗೆದಿಟ್ಟ ತಸ್ಲೀಮಾ
ಆಂಬುಲೆನ್ಸ್ ಡ್ರೈವರ್ ನ ಸಮಾಜ ಸೇವೆಯ ಕಾರ್ಯ ಶ್ಲಾಘನಿಯ – ಸುದೇಶ್ ಕುಮಾರ್
ಸರ್ಕಾರಿ ಸ್ವಾಮ್ಯದ ಬೇಲಿ ಕಂಬ ಕಿತ್ತಾಕಲು DYFI ಕುಮ್ಮಕ್ಕು….!
ಸಭೆಯ ನಡುವೆ ಬ್ಲಾಕ್ ಅಧ್ಯಕ್ಷ ಕಾಣೆ …ಕಾರ್ಯಕರ್ತರು ಗುಸು ಗುಸು – ಪಿಸುಪಿಸು
ಎಲ್ಲರಿಗೂ ಯುಗಾದಿ ಹಬ್ಬ… ಆದರೆ ಈ ಗ್ರಾಮಗಳಲ್ಲಿ ಭಯ ಮೌನ…ಹಬ್ಬ ಇಲ್ಲ…!ಒಂದು ವಿಚಿತ್ರ ಕಥೆ!
ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ, ನಿರೀಕ್ಷಿತ ತನಿಖೆ
ಸಚಿವ ಜಮೀರ್ ಅಹಮದ್ ಹಚ್ಚಿದ ಪಟಾಕಿಗೆ ಕಾಂಗ್ರೆಸ್ ಕೋಟೆಯಲ್ಲಿ ಬಿರುಕು..!?
ಭಾರತದಲ್ಲಿ ಎಚ್‌ಪಿವಿ (HPV) ಲಸಿಕೆ ಕಾರ್ಯಕ್ರಮ ಹೆಣ್ಣೆತ್ತವರು ತಿಳಿದುಕೊಳ್ಳಲೇಬೇಕಾದ ವಿಚಾರ
ಒಂದು ದೇಶವನ್ನೇ ಮಟ್ಟಾಶ್ ಮಾಡುವಷ್ಟು ನ್ಯೂಕ್ಲಿಯರ್ ಪವರ್ stock ಇರಾನ್ನಲ್ಲಿ ಇದ್ಯಾ !?
ಪಂಚ ಗ್ಯಾರಂಟಿ ಯೋಜನೆಯಿಂದ ಕರ್ನಾಟಕ ಸಾಲದ ಸುಳಿಗೆ……..
ಅಮೆರಿಕಾ ಭಾರತವನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದೆ” – ಕೆ.ಸಿ. ವೇಣುಗೋಪಾಲ್
ಕರ್ನಾಟಕ ಎಸ್‌ಎಸ್‌ಎಲ್‌ಸಿ 2026 ಫಲಿತಾಂಶ: ಇತಿಹಾಸದ ಅತ್ಯಧಿಕ ಉತ್ತೀರ್ಣ ಪ್ರಮಾಣ ಮತ್ತು ಟಾಪರ್‌ಗಳ ಸಾಧನೆ
ಮುಂಬೈ ಬೀದಿಯಲ್ಲಿ ನಾರಿ ಶಕ್ತಿಯ ಸಿಡಿಲು!ಜನರ ಬದುಕು ಅಡ್ಡಗಟ್ಟಿದರೆ ಎದುರಿಸುವವರು ಹೀಗೆ ಒಬ್ಬೊಬ್ಬರೇ ಇನ್ನೂ ಹುಟ್ಟುತ್ತಾರೆ..
₹3 ಕೋಟಿ ಹೂಡಿಕೆ ಮಾಡಿದ ಶಾಲೆಗೀಗ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಮಾತನಾಡುವ ಸುಂದರಿ “ಐರಿಸ್” ಮೇಡಂ…ಸರ್ಕಾರಿ ಶಾಲೆ ನೋಡಿ ದೇಶವೇ ಶಾಕ್!
ಸುಳ್ಳು ಸ್ಟೇಟ್ಮೆಂಟ್ ನೀಡಿದ ಎಚ್ ಪಿ ಸಿ ಎಲ್
ಮನೆಯ ಮೇಲೆ ಪೊಲೀಸರ  ದಾಳಿ  ಮಾರಾಟಕ್ಕೆ ಇಡಲಾದ ಮಾದಕ ವಸ್ತು ಹಾಗೂ ಮಾರಕ ಆಯುಧ ವಶ
ಅಕ್ರಮ ಮರಳುಗಾರಿಕೆ, ಕ್ರಮ ಕೈಗೊಂಡ ವೇಣೂರು ಪೊಲೀಸರು
ಏರ್ ಇಂಡಿಯಾದಿಂದ ದೈನಂದಿನ ವಿಮಾನ ಹಾರಾಟದ ಬಗ್ಗೆ ನೂತನ ಪ್ರಕಟಣೆ
17ನೇ ಆಯವ್ಯಯ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
ರೀಲ್ಸ್ ಮಾಡುವ ಕನಸು… ಕ್ಷಣದಲ್ಲೇ ದುರ್ಘಟನೆ,  ಜೀವವನ್ನೇ ಕಳೆದುಕೊಂಡ ಬಾಲಕ.
ಪ.ಪಂ ಮುಖ್ಯಾಧಿಕಾರಿ – 1 ಲಕ್ಷ ಲಂಚ ಸ್ವೀಕಾರದ ವೇಳೆ ರೆಡ್ ಹ್ಯಾಂಡ್!
ವಿದ್ಯಾರ್ಥಿಯೊಬ್ಬ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ..