📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ತಿರುಪತಿಯಲ್ಲಿ ಒಂದಿಡೀ ಕುಟುಂಬವೇ ನಾಶ!

ಅದು ಪವಿತ್ರವಾದಂತಹ ತಿರುಪತಿ ಕ್ಷೇತ್ರ. ಶ್ರೀಮನ್ನಾರಾಯಣನ ವಾಸಸ್ಥಾನ. ಅಂತಹ ಒಂದು ಕ್ಷೇತ್ರದ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ, ಸುಖ ಸಂಸಾರ ನಡೆಸುತ್ತಿದ್ದ ಕುಟುಂಬವೊಂದು ಪೂರ್ತಿಯಾಗಿ ನಾಶಗೊಂಡಿರುವಂತಹ ಆಘಾತಕಾರಿ ಘಟನೆ ಮೊನ್ನೆ ಮಧ್ಯಾಹ್ನ ನಡೆದಿದೆ.

ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ನಾರಾಯಣವನಂ ಮಂಡಲದ ವೆಂಕಟ ಕೃಷ್ಣ ಪಾಳ್ಯದಲ್ಲಿ ಇಂತಹುದೊಂದು ಭೀಬತ್ಸ ಘಟನೆ ನಡೆದಿದೆ. ಈ ಒಂದು ಘಟನೆಯ ಹಿಂದೆ ಯಾರ ಕೈವಾಡವಿದೆ? ಎಂಬುವುದರ ಬಗ್ಗೆ ಅಲ್ಲಿನ ಪೊಲೀಸರು ವಿಪರೀತವಾಗಿ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಒಂದೇ ಕುಟುಂಬದ ಐದು ಜನರು ಆಘಾತಕಾರಿ ರೀತಿಯಲ್ಲಿ ಸತ್ತು ಬಿದ್ದಿದ್ದಾರೆ.

ವೆಂಕಟ ಕೃಷ್ಣ ಪಾಳ್ಯದ ನಿವಾಸಿಯಾದ ಮೋಹನ್ ಹಾಗೂ ಅವರ ತಾಯಿ ಚಂದ್ರಕಲಾ  ಮತ್ತು ಹೆಂಡತಿ ಹರಿತ, ಮಗ ಕೌಶಿಕ್ ಹಾಗೂ ಮಗಳು ಹರಿಣಿ ಇವಿಷ್ಟು ಜನರು ಅನುಮಾನಾಸ್ಪದ ರೀತಿಯಲ್ಲಿ ಹಾಡ ಹಗಲೇ ಸತ್ತು ಬಿದ್ದಿದ್ದರು.

ಮೋಹನ್ ಕುಮಾರ್, ಇವರು ಇದೇ ವೆಂಕಟಪ್ಪ ಕೃಷ್ಣ ಪಾಳ್ಯದಲ್ಲಿ ಸಿಮೆಂಟ್ ಅಂಗಡಿಯೊಂದನ್ನು ನಡೆಸುತ್ತಿದ್ದರು. ಆರ್ಥಿಕವಾಗಿ ಆಗಲಿ, ಕುಟುಂಬದ ವಿಚಾರದಲ್ಲಾಗಲಿ ಎಲ್ಲೂ ಕೂಡ ಒಂದು ಸಣ್ಣ ವ್ಯತ್ಯಾಸವು ಇರಲಿಲ್ಲ ಎನ್ನುವುದು ಆ ಕುಟುಂಬಕ್ಕೆ ತೀರಾ ಹತ್ತಿರದವರ ಹೇಳಿಕೆ. ಸಂತೋಷದಿಂದ ಇಡೀ ಕುಟುಂಬವು ಇದ್ದಂತಹ ಸಂದರ್ಭದಲ್ಲೇ, ಇದ್ದಕ್ಕಿದ್ದಂತೆಯೇ ಕುಟುಂಬಕ್ಕೆ ಕುಟುಂಬವೇ ನಾಶವಾಗುತ್ತದೆ ಅಂದರೆ ಇಡೀ ಊರು ದಿಗ್ಗಬ್ರಾಂತಗೊಳ್ಳದೆ ಇರುತ್ತದ?

ಮೊನ್ನೆ ಮಧ್ಯಾಹ್ನ ಮೋಹನ್, ಮಧ್ಯಾಹ್ನದ ಊಟಕ್ಕೆ ಯಾವತ್ತು ಹೋಗುವಂತೆ ಮನೆಗೆ ಹೋಗುತ್ತಾರೆ. ಆ ಸಂದರ್ಭದಲ್ಲಿ ಅಂಗಡಿಯನ್ನು ಅವರ ಭಾಮೈದ ನೋಡಿಕೊಳ್ಳುತ್ತಿದ್ದ. ಹಾಗೆ ಮನೆಗೆ ಹೋದ ವ್ಯಕ್ತಿ ತುಂಬಾ ಸಮಯವಾದರೂ ವಾಪಸ್ ಬರದ್ದನ್ನು ಗಮನಿಸಿ ಆ ಬಾಮೈದ ಸನಿಹದಲ್ಲೇ ಇರುವ ಮನೆಗೆ ಬಂದು ನೋಡಿದರೆ, ಮನೆಯ ಒಳಗೆ ಮೋಹನ್ ಕುಮಾರ್ ಅವರ ತಾಯಿ ಚಂದ್ರಕಲಾ ಮತ್ತು ಅವರ ಹೆಂಡತಿ ಹರಿತ ಅವರ ಬಾಡಿ ಬಿದ್ದಿರೋದನ್ನು ನೋಡಿ ಅಘಾತಗೊಳ್ಳುತ್ತಾನೆ . ತಕ್ಷಣವೇ ಪೊಲೀಸರಿಗೆ ಸುದ್ದಿ ಹೋಗುತ್ತದೆ. ಪೊಲೀಸರು ಬಂದು ಹುಡುಕಲು ಪ್ರಾರಂಭಿಸುತ್ತಿದ್ದಂತೆಯೇ, ಮೋಹನ್ ಕುಮಾರ್ ಹಾಗೂ ಅವರ ಮಕ್ಕಳಾದ ಕೌಶಿಕ್ ಮತ್ತು ಹರಿಣಿಈ ಮೂವರ ಮೂವರ ಬಾಡಿಯೂ ಹತ್ತಿರದಲ್ಲಿಯೇ ಇರುವ ರೈಲ್ವೆ ಟ್ರ್ಯಾಕಿನಲ್ಲಿ ಸಿಗುತ್ತದೆ. ಕನಿಷ್ಠ ಎರಡು ರೈಲು ಆಗಲೇ ಪಾಸಾದ ಕಾರಣ ಬಹುತೇಕ ಅವರ ಬಾಡಿ ನುಜ್ಜಂಗುಜ್ಜಾಗಿತ್ತು.

ಮೋಹನ್ ಕುಮಾರ್ ಅವರ ಬಾಮೈದ ಹೇಳುವ ಪ್ರಕಾರ ಅವರ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯವಿರಲಿಲ್ಲ, ಸಂತೋಷಕರವಾಗಿರುವಂತಹ ಕುಟುಂಬ ಅದಾಗಿತ್ತು. ವ್ಯವಹಾರಿಕವಾಗಿಯೂ, ಆರ್ಥಿಕ ಸಂಕಷ್ಟಕ್ಕೆನು ಈಡಾಗಿರಲಿಲ್ಲ. ಮೋಹನ್ ಕುಮಾರ್ ಯಾವುದೇ ಒತ್ತಡಕ್ಕೂ ಒಳಗಾದಂತಹ ವ್ಯಕ್ತಿಯಲ್ಲ. ಹೀಗಿರುವಾಗ ಅವರು ಇಡೀ ಕುಟುಂಬದ ಜೊತೆಗೆಅವರು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಕುಟುಂಬದ ಸದಸ್ಯರನ್ನು ಸಾಯಿಸಿ ಇವರು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ಅತ್ಯಂತ ಗುಪ್ತ ಕಾರ್ಯಾಚರಣೆ ನಡೆದಂತೆ ಕಾಣುತ್ತದೆ. ಇಡೀ ಕುಟುಂಬವನ್ನು ನಾಶ ಮಾಡಲಾಗಿದೆ ಎಂಬ ವಿಚಾರವನ್ನು ಸ್ಥಳೀಯರು ಸ್ಪಷ್ಟವಾಗಿ ಹೇಳುತ್ತಿದ್ದಾರೆ.

ಒಂದೊಮ್ಮೆ ಇದು ಮೋಹನ್ ಕುಮಾರ್ ಅವರ ಆತ್ಮಹತ್ಯೆ ಅಂತನೇ ಇಟ್ಟುಕೊಳ್ಳುವ, ಮನೆಗೆ ಊಟಕ್ಕೆ ಬಂದವ ಹೆಂಡತಿ ಮತ್ತು ತಾಯಿಯನ್ನು ಬಲವಂತವಾಗಿ ಸಾಯಿಸಿ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿ ರೈಲ್ವೆ ಹಳಿಗೆ ಹಾಕಿ ಅವರನ್ನು ಸಾಯಿಸಿ ಸ್ವತಃ ಮೋಹನ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ಅಂದರೆ, ನಂಬುವುದಾದರೂ ಹೇಗೆ? ಆತ ಮಕ್ಕಳನ್ನು ಸಹ, ಮನೆಯ ಒಳಗಡೆಯೇ ಸಾಯಿಸಬಹುದಿತ್ತು. ಮನೆಯಲ್ಲಿ ತಾಯಿ ಮತ್ತು ಅಜ್ಜಿಯ ಸಾವನ್ನು ನೋಡಿದಮೇಲೆ ಅವರು ಹೇಗೆ ಅಪ್ಪನ ಜೊತೆ ನಾರ್ಮಲ್ಲಾಗಿ ಹೊರಹೋಗಲು ಸಾಧ್ಯ? ಇಲ್ಲಿ ಕಾಣದ ಕೈ ಯಾವುದೋ  ಈ ಕೆಲಸ ಮಾಡಿದಂತಿದೆ ಅನ್ನುವುದು ಬಾಮೈದನ ಮತ್ತು ಊರಿನವರ ಸ್ಟೇಟ್ಮೆಂಟ್.

COMMENTS

Login with Gmail to comment

ಇನ್ನಷ್ಟು ಸುದ್ದಿ

ಕನ್ನಡದ ನೆಲದಲ್ಲಿ ಕನ್ನಡಕ್ಕೇ ಗೇಟ್ ಪಾಸ್: ಇವರು ಕರ್ನಾಟಕದ ಸಚಿವರೊ⁉️ಇಂಗ್ಲೆಂಡಿನ ಪ್ರತಿನಿಧಿಯೋ?
ಸಚಿವ ಜಮೀರ್ ಅಹಮದ್ ಹಚ್ಚಿದ ಪಟಾಕಿಗೆ ಕಾಂಗ್ರೆಸ್ ಕೋಟೆಯಲ್ಲಿ ಬಿರುಕು..!?
“ತಲೈವಾ”ಗೂ ಭಯವಾ? ಹೂವಿನ ಚೆಂಡು ಕಂಡು ವಿಜಯ್ ರನ್! ಒಂದು ಕ್ಷಣದ ಥ್ರಿಲ್ಲರ್!
ಮೂಡಬಿದಿರೆ ಇನ್‌ಸ್ಪೆಕ್ಟರ್ ಪ್ರಕರಣಕ್ಕೆ ಟ್ವಿಸ್ಟ್: ಆರೋಪ ಮಾಡಿದ ಮಹಿಳೆಯ ವಿರುದ್ಧವೇ ಸಹೋದರಿಯ ಬಾಂಬ್!
ಅಮೆರಿಕಾ ವಿರುದ್ಧ ‘ಪೈರಸಿ’ ಆರೋಪ: ಇರಾನ್ ಯುಎನ್‌ಗೆ ದೂರು
ಒಂದು ರಾಷ್ಟ್ರ, ಒಂದು ಚುನಾವಣೆ’ಗೆ ಡಿಕೆಶಿ ಸಿಡಿದೆದ್ದೇಕೆ?
ಕೂದಲೆಳೆ ಅಂತರದಲ್ಲಿ ಪಾರಾದ ಗುಜರಾತ್ ಟೈಟಾನ್ಸ್!ಕ್ಷಣಾರ್ಧ ತಡವಾಗಿದ್ದರೂ ಸಂಭವಿಸುತ್ತಿತ್ತು ಘೋರ ಅಗ್ನಿ ದುರಂತ!
ಕೊನೆಗೂ ಸೋತ ಖಾಕಿ….!!!
ಟ್ರಂಪ್ ಇರಾನ್ ಡೀಲ್ ಕಥೆ ಏನು?ಒಪ್ಪಂದವಾಗುತ್ತಾ? ಅಥವಾ ಯುದ್ಧ ಮುಂದುವರೆಯುತ್ತಾ?
ಇರಾನ್–ಇಸ್ರೇಲ್ ಯುದ್ಧ: ಯುದ್ಧ ನಿಲ್ಲಿಸಲು ಇರಾನ್‌ನ 3 ಷರತ್ತುಗಳು… ಅಮೇರಿಕಾ ಕಂಗಾಲು
ಸಿದ್ದು vs ಕೃಷ್ಣ -ಸಿದ್ಧು ವಿರುದ್ಧ ನೇರ ಸವಾಲು: ‘ಬಿ’ ರಿಪೋರ್ಟ್ ಪ್ರಶ್ನಿಸಿ ಸ್ನೇಹಮಯಿ ಕೃಷ್ಣನ ನಡೆ ಭ್ರಷ್ಟ ವ್ಯವಸ್ಥೆಗೆ ಬಿಗಿ ಹೊಡೆತ!”
ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಹೆಸರಲ್ಲಿ ನಡಿತಿರೋದೇನು?
ಸ್ಪೇನ್ ಅಧ್ಯಕ್ಷರ ವಿರುದ್ಧ ಟ್ರಂಪ್ ಗುಡುಗು 
ಬಂಗಾಳ ರಾಜಕೀಯದಲ್ಲಿ ಭಾರಿ ಟ್ವಿಸ್ಟ್ ಮೇಲೆ ಟ್ವಿಸ್ಟ್..! ಸುವೇಂದು ಪ್ರಮಾಣವಚನಕ್ಕೂ ಬ್ರೇಕ್ ಬೀಳುತ್ತಾ?ಸುಪ್ರೀಂ ಕೋರ್ಟ್ ಎಂಟ್ರಿ ಆಗುತ್ತಾ?
“ವಾಹನ ಮಾರಾಟ-RC ಬದಲಾವಣೆ  ಅಗತ್ಯ.. ಇಲ್ಲವಾದರೆ ಕಾನೂನು ಸಮಸ್ಯೆಗಳು ತಪ್ಪಿದ್ದಲ್ಲ..!” ಹೈಕೋರ್ಟ್
ರಾಜ್ಯಮಟ್ಟದಲ್ಲಿ ಸದ್ದು ಮಾಡಿದ ತೆರಿಗೆ ವಂಚನೆ ಪ್ರಕರಣದ ನಂತರವೂ ಅಧಿಕಾರಿಗಳು ಪಾಠ ಕಲಿತಿಲ್ಲವೇ….!?
ನಿಶ್ಚಿತಾರ್ಥ ಮಾಡಿಕೊಂಡು, ಫೈನಾನ್ಸಿಯಲ್ ವಂಚನೆ ದೂರು ದಾಖಲು
ಪುತ್ತೂರಿನ ಕೃಷ್ಣ ಜೆ. ರಾವ್ ಪ್ರಕರಣಕ್ಕೆ ಹೈಕೋರ್ಟ್ ಬ್ರೇಕ್!“ಮಧ್ಯಂತರ ತೀರ್ಪು: ₹75K ತಿಂಗಳ ಸಹಾಯ ಷರತ್ತು”
ಜಬಲ್ಪುರ್ ದುರಂತಕ್ಕೆ ಹೊಣೆ ಯಾರು? ಕ್ರಮ ಏನು?
ಟಾಟಾ ಸನ್ಸ್ IPOಗೆ ಒತ್ತಾಯ: ಟ್ರಸ್ಟಿಗಳಲ್ಲಿ ಭಿನ್ನಾಭಿಪ್ರಾಯ ಹೆಚ್ಚಳ…!
“ವೇತನಕ್ಕಾಗಿ ಹೋರಾಟದಿಂದ ಆರಂಭವಾದ ಪ್ರತಿಭಟನೆ… ನೋಯ್ಡಾ ರಸ್ತೆಗಳಲ್ಲಿ ಅರಾಜಕತೆ, ಬೆಂಕಿ, ಘರ್ಷಣೆ — ಈಗ ಸರ್ಕಾರವೇ ತನಿಖೆ ನಡೆಸುವಷ್ಟು ಗಂಭೀರ ಪರಿಸ್ಥಿತಿ!” 🔥🚨
ಇ-ಸಿಗರೇಟ್‌ಗೆ ಭಾರಿ ಡಿಮ್ಯಾಂಡ್ – ಗೋಣಿ ಚೀಲದಲ್ಲಿಸಂಗ್ರಹಿಸಿಟ್ಟ ಆರೋಪಿ ಬಂಧನ..!
ವಿಜಯ್ ತಳಪತಿ ಸಂಗೀತಾ ವಿಚ್ಛೇದನ ವಿಚಾರ: 27 ವರ್ಷದ ದಾಂಪತ್ಯಕ್ಕೆ ತೆರೆ? ₹250 ಕೋಟಿ ಸೆಟ್ಲ್‌ಮೆಂಟ್ ಚರ್ಚೆ!!
ಸಂಸದ ಸಂಜಯ್ ಅರೋರ ಬಂಧನ…. ಉಳಿದ ಮೂರು ಸಂಸದರನ್ನು ಸೆಳೆಯಲು ಈ ಅನೈತಿಕ ಮಾರ್ಗ ಎಂದು ಎಎಪಿ.
Tesla Experience Centre ಬೆಂಗಳೂರು ಈಗ EV ಕ್ರೇಜ್ ಹಬ್!car craze ಇರುವವರು ಮುಗಿಬೀಳುತ್ತಿದ್ದಾರೆ..
ಬ್ರಹ್ಮಾವರದ ಹಲಸು ಮೇಳ ಮಾಡಿದ ಹೊಲಸು – ಸಾರ್ವಜನಿಕರ ಆಕ್ರೋಶ
ಜೈಲಿನೊಳಗೆ ಮೊಬೈಲ್ ಮಾಫಿಯಾ: ಖತರ್ನಾಕ್ ಐಡಿಯಾ..!
ಬಾಲಗರ್ಭಿಣಿಯರ ಸಂಖ್ಯೆ 5975….!!
ಡಿಕೆಶಿ ಸೈಲೆಂಟ್ ಆಪರೇಷನ್ ಮಿಸ್ ಫೈರ್ ಆಗಿದ್ದೆಲ್ಲಿ?ರಾಷ್ಟ್ರ ರಾಜಧಾನಿಯಲ್ಲಿ ಕರ್ನಾಟಕ ಕಾಂಗ್ರೆಸ್ ಹೈ-ವೋಲ್ಟೇಜ್ ಹರಟೆ…!