📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ತಿರುಪತಿಯಲ್ಲಿ ಒಂದಿಡೀ ಕುಟುಂಬವೇ ನಾಶ!

ಅದು ಪವಿತ್ರವಾದಂತಹ ತಿರುಪತಿ ಕ್ಷೇತ್ರ. ಶ್ರೀಮನ್ನಾರಾಯಣನ ವಾಸಸ್ಥಾನ. ಅಂತಹ ಒಂದು ಕ್ಷೇತ್ರದ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ, ಸುಖ ಸಂಸಾರ ನಡೆಸುತ್ತಿದ್ದ ಕುಟುಂಬವೊಂದು ಪೂರ್ತಿಯಾಗಿ ನಾಶಗೊಂಡಿರುವಂತಹ ಆಘಾತಕಾರಿ ಘಟನೆ ಮೊನ್ನೆ ಮಧ್ಯಾಹ್ನ ನಡೆದಿದೆ.

ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ನಾರಾಯಣವನಂ ಮಂಡಲದ ವೆಂಕಟ ಕೃಷ್ಣ ಪಾಳ್ಯದಲ್ಲಿ ಇಂತಹುದೊಂದು ಭೀಬತ್ಸ ಘಟನೆ ನಡೆದಿದೆ. ಈ ಒಂದು ಘಟನೆಯ ಹಿಂದೆ ಯಾರ ಕೈವಾಡವಿದೆ? ಎಂಬುವುದರ ಬಗ್ಗೆ ಅಲ್ಲಿನ ಪೊಲೀಸರು ವಿಪರೀತವಾಗಿ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಒಂದೇ ಕುಟುಂಬದ ಐದು ಜನರು ಆಘಾತಕಾರಿ ರೀತಿಯಲ್ಲಿ ಸತ್ತು ಬಿದ್ದಿದ್ದಾರೆ.

ವೆಂಕಟ ಕೃಷ್ಣ ಪಾಳ್ಯದ ನಿವಾಸಿಯಾದ ಮೋಹನ್ ಹಾಗೂ ಅವರ ತಾಯಿ ಚಂದ್ರಕಲಾ  ಮತ್ತು ಹೆಂಡತಿ ಹರಿತ, ಮಗ ಕೌಶಿಕ್ ಹಾಗೂ ಮಗಳು ಹರಿಣಿ ಇವಿಷ್ಟು ಜನರು ಅನುಮಾನಾಸ್ಪದ ರೀತಿಯಲ್ಲಿ ಹಾಡ ಹಗಲೇ ಸತ್ತು ಬಿದ್ದಿದ್ದರು.

ಮೋಹನ್ ಕುಮಾರ್, ಇವರು ಇದೇ ವೆಂಕಟಪ್ಪ ಕೃಷ್ಣ ಪಾಳ್ಯದಲ್ಲಿ ಸಿಮೆಂಟ್ ಅಂಗಡಿಯೊಂದನ್ನು ನಡೆಸುತ್ತಿದ್ದರು. ಆರ್ಥಿಕವಾಗಿ ಆಗಲಿ, ಕುಟುಂಬದ ವಿಚಾರದಲ್ಲಾಗಲಿ ಎಲ್ಲೂ ಕೂಡ ಒಂದು ಸಣ್ಣ ವ್ಯತ್ಯಾಸವು ಇರಲಿಲ್ಲ ಎನ್ನುವುದು ಆ ಕುಟುಂಬಕ್ಕೆ ತೀರಾ ಹತ್ತಿರದವರ ಹೇಳಿಕೆ. ಸಂತೋಷದಿಂದ ಇಡೀ ಕುಟುಂಬವು ಇದ್ದಂತಹ ಸಂದರ್ಭದಲ್ಲೇ, ಇದ್ದಕ್ಕಿದ್ದಂತೆಯೇ ಕುಟುಂಬಕ್ಕೆ ಕುಟುಂಬವೇ ನಾಶವಾಗುತ್ತದೆ ಅಂದರೆ ಇಡೀ ಊರು ದಿಗ್ಗಬ್ರಾಂತಗೊಳ್ಳದೆ ಇರುತ್ತದ?

ಮೊನ್ನೆ ಮಧ್ಯಾಹ್ನ ಮೋಹನ್, ಮಧ್ಯಾಹ್ನದ ಊಟಕ್ಕೆ ಯಾವತ್ತು ಹೋಗುವಂತೆ ಮನೆಗೆ ಹೋಗುತ್ತಾರೆ. ಆ ಸಂದರ್ಭದಲ್ಲಿ ಅಂಗಡಿಯನ್ನು ಅವರ ಭಾಮೈದ ನೋಡಿಕೊಳ್ಳುತ್ತಿದ್ದ. ಹಾಗೆ ಮನೆಗೆ ಹೋದ ವ್ಯಕ್ತಿ ತುಂಬಾ ಸಮಯವಾದರೂ ವಾಪಸ್ ಬರದ್ದನ್ನು ಗಮನಿಸಿ ಆ ಬಾಮೈದ ಸನಿಹದಲ್ಲೇ ಇರುವ ಮನೆಗೆ ಬಂದು ನೋಡಿದರೆ, ಮನೆಯ ಒಳಗೆ ಮೋಹನ್ ಕುಮಾರ್ ಅವರ ತಾಯಿ ಚಂದ್ರಕಲಾ ಮತ್ತು ಅವರ ಹೆಂಡತಿ ಹರಿತ ಅವರ ಬಾಡಿ ಬಿದ್ದಿರೋದನ್ನು ನೋಡಿ ಅಘಾತಗೊಳ್ಳುತ್ತಾನೆ . ತಕ್ಷಣವೇ ಪೊಲೀಸರಿಗೆ ಸುದ್ದಿ ಹೋಗುತ್ತದೆ. ಪೊಲೀಸರು ಬಂದು ಹುಡುಕಲು ಪ್ರಾರಂಭಿಸುತ್ತಿದ್ದಂತೆಯೇ, ಮೋಹನ್ ಕುಮಾರ್ ಹಾಗೂ ಅವರ ಮಕ್ಕಳಾದ ಕೌಶಿಕ್ ಮತ್ತು ಹರಿಣಿಈ ಮೂವರ ಮೂವರ ಬಾಡಿಯೂ ಹತ್ತಿರದಲ್ಲಿಯೇ ಇರುವ ರೈಲ್ವೆ ಟ್ರ್ಯಾಕಿನಲ್ಲಿ ಸಿಗುತ್ತದೆ. ಕನಿಷ್ಠ ಎರಡು ರೈಲು ಆಗಲೇ ಪಾಸಾದ ಕಾರಣ ಬಹುತೇಕ ಅವರ ಬಾಡಿ ನುಜ್ಜಂಗುಜ್ಜಾಗಿತ್ತು.

ಮೋಹನ್ ಕುಮಾರ್ ಅವರ ಬಾಮೈದ ಹೇಳುವ ಪ್ರಕಾರ ಅವರ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯವಿರಲಿಲ್ಲ, ಸಂತೋಷಕರವಾಗಿರುವಂತಹ ಕುಟುಂಬ ಅದಾಗಿತ್ತು. ವ್ಯವಹಾರಿಕವಾಗಿಯೂ, ಆರ್ಥಿಕ ಸಂಕಷ್ಟಕ್ಕೆನು ಈಡಾಗಿರಲಿಲ್ಲ. ಮೋಹನ್ ಕುಮಾರ್ ಯಾವುದೇ ಒತ್ತಡಕ್ಕೂ ಒಳಗಾದಂತಹ ವ್ಯಕ್ತಿಯಲ್ಲ. ಹೀಗಿರುವಾಗ ಅವರು ಇಡೀ ಕುಟುಂಬದ ಜೊತೆಗೆಅವರು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಕುಟುಂಬದ ಸದಸ್ಯರನ್ನು ಸಾಯಿಸಿ ಇವರು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ಅತ್ಯಂತ ಗುಪ್ತ ಕಾರ್ಯಾಚರಣೆ ನಡೆದಂತೆ ಕಾಣುತ್ತದೆ. ಇಡೀ ಕುಟುಂಬವನ್ನು ನಾಶ ಮಾಡಲಾಗಿದೆ ಎಂಬ ವಿಚಾರವನ್ನು ಸ್ಥಳೀಯರು ಸ್ಪಷ್ಟವಾಗಿ ಹೇಳುತ್ತಿದ್ದಾರೆ.

ಒಂದೊಮ್ಮೆ ಇದು ಮೋಹನ್ ಕುಮಾರ್ ಅವರ ಆತ್ಮಹತ್ಯೆ ಅಂತನೇ ಇಟ್ಟುಕೊಳ್ಳುವ, ಮನೆಗೆ ಊಟಕ್ಕೆ ಬಂದವ ಹೆಂಡತಿ ಮತ್ತು ತಾಯಿಯನ್ನು ಬಲವಂತವಾಗಿ ಸಾಯಿಸಿ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿ ರೈಲ್ವೆ ಹಳಿಗೆ ಹಾಕಿ ಅವರನ್ನು ಸಾಯಿಸಿ ಸ್ವತಃ ಮೋಹನ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ಅಂದರೆ, ನಂಬುವುದಾದರೂ ಹೇಗೆ? ಆತ ಮಕ್ಕಳನ್ನು ಸಹ, ಮನೆಯ ಒಳಗಡೆಯೇ ಸಾಯಿಸಬಹುದಿತ್ತು. ಮನೆಯಲ್ಲಿ ತಾಯಿ ಮತ್ತು ಅಜ್ಜಿಯ ಸಾವನ್ನು ನೋಡಿದಮೇಲೆ ಅವರು ಹೇಗೆ ಅಪ್ಪನ ಜೊತೆ ನಾರ್ಮಲ್ಲಾಗಿ ಹೊರಹೋಗಲು ಸಾಧ್ಯ? ಇಲ್ಲಿ ಕಾಣದ ಕೈ ಯಾವುದೋ  ಈ ಕೆಲಸ ಮಾಡಿದಂತಿದೆ ಅನ್ನುವುದು ಬಾಮೈದನ ಮತ್ತು ಊರಿನವರ ಸ್ಟೇಟ್ಮೆಂಟ್.

COMMENTS

Login with Gmail to comment

ಇನ್ನಷ್ಟು ಸುದ್ದಿ

ಚಾಮನಗರದಲ್ಲೊಂದು ಅನಿಷ್ಠದ ಕ್ರೈಂ
ಪರಮೇಶ್ವರ ವಿರುದ್ಧ FIR-₹500 ಬೆಟ್ಟಿಂಗ್ ಹೇಳಿಕೆಗೆ ಕಾನೂನು ಕ್ರಮ.
ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣಕ್ಕೆ ಅಂತಿಮ ತೀರ್ಪು – ಶಾರೀಕ್ ಗೆ 10 ವರ್ಷ ಜೈಲು..
ಗುರು ಬ್ರಹ್ಮ – ಗುರು ವಿಷ್ಣು ಅನ್ನುವ ಕಾಲ ಮುಗಿದು ಹೋಯ್ತೇ?
ರಾಜ್ಯ ಪೊಲೀಸ್ ಇಲಾಖೆಯಲ್ಲಿ “ಕಲೋನಿಯಲ್ ಆರ್ಡರ್ಲಿ” ‘ಆಡಲ್’ (Adal) ಪದ್ದತಿ ರದ್ದು
ಮತ್ತೆ ಹೊತ್ತಿ ಉರಿದ ಮಧ್ಯಪ್ರಾಚ್ಯ: ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿಕೆ ಬೆನ್ನಲ್ಲೇ ಲೆಬನಾನ್ ಮತ್ತು ಗಾಜಾದಲ್ಲಿ ಹೆಚ್ಚಿದ ಭೀಕರ ಯುದ್ಧದ ತೀವ್ರತೆ.
ಆಯುಷ್ ಎಚ್ಚರಿಕೆ ಬಳಿಕ ಅಶ್ವಗಂಧ ನಿಯಂತ್ರಣ ಕ್ರಮಕ್ಕೆ ತಡೆ: ಹೈಕೋರ್ಟ್ ಮಹತ್ವದ ಆದೇಶ
ಪಾಕಿಸ್ತಾನದಲ್ಲಿ ಹಿಂದೂ ಯುವತಿಯ ಸಾಧನೆ
ಡಿಕೆಎಮುಲ್‌ನಿಂದ ₹1,270 ಕೋಟಿ ದಾಖಲೆ ಬೆಳವಣಿಗೆ ಹೊಸ ಮೈಲುಗಲ್ಲು..!
🚨 ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ – ಕಟಪಾಡಿ ರಾಷ್ಟ್ರೀಯ ಹೆದ್ದಾರಿ ಅಪಘಾತ
ಅಲ್ಲಿ ಸೌಮೆಂದು ಅಧಿಕಾರಿ…. ಇಲ್ಲಿ ಸಾಮ್ರಾಟ್ ಚೌದರಿ, ಹೆಲ್ತ್ ಮಿನಿಸ್ಟರ್ ನಿಶಾಂತ್….
ವಿಶ್ವ ಸಂಸ್ಥೆಯು ಯಾವ ಪುರುಷಾರ್ಥಕ್ಕೆ? ಬಲವರ್ಧನೆಯ  ಅಗತ್ಯತೆ
AAP ಸದ್ದು ಮಂಗಳೂರಲ್ಲೂ! ಜನರ ಸಮಸ್ಯೆಗೆ ನೇರ ಹೋರಾಟ
ಮಂಗಳೂರು ಶಾಲಾ ದಾಖಲಾತಿ ಅಂದೋಲನ-ಎಲ್ಲ ಮಕ್ಕಳಿಗೂ ಶಾಲೆಯ ಹಕ್ಕು …
ಜೈನ ಸನ್ಯಾಸ ದೀಕ್ಷೆ ನಿಯಮಗಳು ಏನು ಗೊತ್ತಾ?
ಪಂಜಿಮೊಗರುವಿನಲ್ಲಿ ಹೆಂಡತಿಯ ಅಕ್ರಮ ಸಂಬಂಧಕ್ಕೆ, ಗಂಡ ಫಿನಿಶ್!
ದ.ಕ ಜಿಲ್ಲಾಡಳಿತದಿಂದ ಮಂಗಳಮುಖಿಯರಲ್ಲದವರಿಗೂ ಗುರುತಿನ ಚೀಟಿ ವಿತರಣೆ – ಗಂಭೀರ ಆರೋಪ
ಸುಳ್ಯದಲ್ಲಿ ಚಿನ್ನಾಭರಣ ಕಳವು,  ಮಹಿಳೆಯ ಮೇಲೆ ಶಂಕೆ
ಸಾರ್ವಜನಿಕ ಸ್ಥಳದಲ್ಲಿ ಕೈಕೈ ಮಿಲಾಯಿಸಿ ಜಗಳ ಮಾಡಿದ್ರೇ ಹುಷಾರ್…!
ಇನ್ಮುಂದೆ ಏರ್‌ಪೋರ್ಟ್‌ನಲ್ಲಿ ಇಷ್ಟ ಬಂದಂತೆ ವಿಡಿಯೋ ಮಾಡುವಂತಿಲ್ಲ! ಇನ್ಸ್ಟಾರೀಲ್ಸ್, ವಿಡಿಯೋ ಮಾಡಿದರೆ ‘ನೋ-ಫ್ಲೈ ಲಿಸ್ಟ್’ ಸೇರುವ ಮುನ್ನೆಚ್ಚರಿಕೆ ನೀಡಿದ DGCA! ಲೇಟೆಸ್ಟ್ ಅಪ್ಡೇಟ್ ಹೊಸ ರೂಲ್ಸ್ ಇಲ್ಲಿದೆ.. ಓದಿ..
ಪುತ್ತೂರು ಗ್ರಾಮಾಂತರದಲ್ಲಿ ಭೂ ವಿವಾದದ ಗಲಾಟೆ ತೀವ್ರತೆ: ಪರಸ್ಪರ ಹಲ್ಲೆ – ಎರಡು ಪ್ರಕರಣಗಳು ದಾಖಲು
 “ಮೀನುಗಾರರ ಡೀಸೆಲ್ & ಸಿಲಿಂಡರ್ ಸಮಸ್ಯೆಗೆ ಸರ್ಕಾರದ ತುರ್ತು ಹಸ್ತಕ್ಷೇಪ -ಇಂಧನ ಭರವಸೆ: ಮಂಗಳೂರು ಬಂದರಿನಲ್ಲಿ ತುರ್ತು ಕ್ರಮ”-
🎬 ಜೈಲರ್ 2 ಸೆಟ್‌ನಲ್ಲಿ ವಿದ್ಯುತ್ ಅವಘಡ…28 ವರ್ಷದ ಕಾರ್ತಿಕೇಯನ್ ವಿದ್ಯುತ್ ಶಾಕ್‌ಗೆ ಬಲಿ..
ಗ್ಯಾಸ್ ಅಭಾವ ಮತ್ತು ಬೆಲೆ ಏರಿಕೆ, ಸುಳ್ಳು ಎನ್ನುತ್ತಿದೆ-HPCL
ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ನಡುವೆ ಮಹಿಳಾ ಮಿಸಲಿಗೆ ಸೋಲು….
‼️ ಮುಂಗಾರು ಅಬ್ಬರ ಶುರು: ಕರ್ನಾಟಕ-ಕೇರಳಕ್ಕೆ IMD ರೆಡ್ ಸಿಗ್ನಲ್! ಮುಂದಿನ 7 ದಿನ ಭಾರೀ ಮಳೆ, ಬಿರುಗಾಳಿ ಸಾಧ್ಯತೆ!
AI ಹವಾ-ಬೇಗನೆ ಫೈನಾನ್ಷಿಯಲ್ ಇಂಡಿಪೆಂಡೆಂಟ್ ಆಗೋ ಟ್ರೆಂಡ್- ಕೈಬಿಟ್ಟ  ಓದು!! ಇದು ಗಂಭೀರ ಸೂಚನೆ….
ಬಾರ್ ಲೆಕ್ಕಾಚಾರ-ಚೂರಿ ದಾಳಿ – ಯುವಕನ ಕುತ್ತಿಗೆಗೆ ಕೊಯ್ದು ಕೊಲೆ ಯತ್ನ
ಇನ್ನು ಮುಂದೆ ದೇವಸ್ಥಾನ ಆಸ್ತಿಗೆ ದಾಖಲೆಗಳಲ್ಲಿ ದೇವರ ಹೆಸರೇ ಮಾಲೀಕ….34 ಸಾವಿರಕ್ಕೂ ಹೆಚ್ಚುಮುಜರಾಯಿ ದೇವಸ್ಥಾನಗಳ ಆಸ್ತಿ ರಕ್ಷಣೆ:
ಶೋಕಿ ಜೀವನಕ್ಕೆ ಸ್ಕೀಮ್ ಸ್ಕ್ಯಾಮ್:ಗಿಫ್ಟ್ ಆಸೆ-ದೊಡ್ಡ ಕನಸು ತೋರಿಸಿ, ಹಣದೊಂದಿಗೆ ಪರಾರಿ—ಇದುವೇ ನಕಲಿ ಸ್ಕೀಮ್‌ಗಳ ಅಸಲಿ ಕಥೆ!