📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಪಹಲ್ಗಾಂಮ್ ದಾಳಿಯ ಒಂದು ವರ್ಷ: ಇನ್ನೂ ಮುಗಿಯದ ನೋವು, ಮರೆಯಲಾಗದ ನೆನಪುಗಳು

ಏಪ್ರಿಲ್ 22, 2025 ಈ ದಿನಾಂಕ ಭಾರತ ದೇಶದ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಅಚ್ಚೊತ್ತಲ್ಪಟ್ಟಿದೆ. ಜಮ್ಮು ಮತ್ತು ಕಾಶ್ಮೀರದ ಸುಂದರ ಪಹಲ್ಗಾಂಮ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿ ಕೇವಲ 26 ಜೀವಗಳನ್ನು ಕಸಿದುಕೊಳ್ಳಲಿಲ್ಲ; ಅನೇಕ ಕುಟುಂಬಗಳ ಬದುಕನ್ನೇ ಶಾಶ್ವತವಾಗಿ ಬದಲಿಸಿತು. ಒಂದು ವರ್ಷ ಕಳೆದರೂ, ಆ ದಿನದ ಗಾಯಗಳು ಇನ್ನೂ ಹಸಿವಾಗಿಯೇ ಉಳಿದಿವೆ.

ಕೇವಲ ಒಂದು ಕುಟುಂಬದ ನೋವಲ್ಲ ಸಮೂಹದ ಗಾಯ

ಈ ದಾಳಿಯ ಭೀಕರತೆ ಕೇವಲ ಸಾವಿನ ಸಂಖ್ಯೆಯಲ್ಲಿ ಮಾತ್ರವಲ್ಲ, ಅದರ ಕ್ರೂರತೆಯಲ್ಲಿಯೂ ಇದೆ. ದಾಳಿಕೋರರು ಜನರನ್ನು ಅವರ ಧರ್ಮದ ಬಗ್ಗೆ ಕೇಳಿ ಕೊಂದರೆಂಬ ವರದಿಗಳು ಈ ಘಟನೆಯನ್ನು ಇನ್ನಷ್ಟು ಮನಕಲಕುವಂತೆ ಮಾಡಿವೆ.

ಈ ದುರಂತವು ದೇಶದ ಮನಸ್ಸಿನಲ್ಲಿ ಆಳವಾದ ಬಿರುಕು ಮೂಡಿಸಿದೆ:ಮಕ್ಕಳು ತಂದೆಯನ್ನು ಕಳೆದುಕೊಂಡರು.ಪತ್ನಿಯರು ತಮ್ಮ ಬದುಕಿನ ಸಂಗಾತಿಯನ್ನು ಕಳೆದುಕೊಂಡರು.ವೃದ್ಧರು ತಮ್ಮ ಆಧಾರವನ್ನು ಕಳೆದುಕೊಂಡರು .ಈ ನೋವು ಇನ್ನೂ ಶಮನವಾಗಿಲ್ಲ….


“ಯಾರಿಲ್ಲದಿದ್ದರೂ ಜೀವನ ಮುಂದುವರಿಯುತ್ತದೆ… ಆದರೆ ಹೇಗೆ?” ಹೀಗೆ…….

ಪೂಣೆಯ ಆಸಾವರಿ ಜಗದಾಳೆ — ತನ್ನ ತಂದೆ ಸಂತೋಷ್ ಜಗದಾಳೆಯನ್ನು ಕಳೆದುಕೊಂಡ ಮಗಳು — ಕಳೆದ ಒಂದು ವರ್ಷವನ್ನು ನೆನಸಿಕೊಳ್ಳುವಾಗ ಕಣ್ಣೀರು ತಡೆಯಲಾಗುವುದಿಲ್ಲ.

ಪ್ರಸಂತ್ ಕುಮಾರ್ ಸತಪಥಿಯವರ ಪತ್ನಿಯ ಮಾತುಗಳು ನಮ್ಮ ಹೃದಯವನ್ನು ಚೂರುಮಾಡುತ್ತವೆ:

“ಒಂದು ವರ್ಷವಾಗುತ್ತಿದೆ… ಆದರೆ ಒಂದು ದಿನವೂ ಅವರನ್ನು ನೆನಪಿಸಿಕೊಳ್ಳದೇ ಹೋಗಿಲ್ಲ

ನಾವು ನರಕದ ಮೂಲಕ ಹಾದುಬಂದಿದ್ದೇವೆ…” — ಇದು ಕೇವಲ ಒಂದು ವಾಕ್ಯವಲ್ಲ, ಅನೇಕ ಕುಟುಂಬಗಳ ಮುರಿದ ಹೃದಯಗಳ ಸ್ವರ.

ಒಂದು ವರ್ಷ ಕಳೆದರೂ ನೋವು ಕಡಿಮೆಯಾಗಿಲ್ಲ. ಪ್ರತಿದಿನವೂ ಕಳೆದುಕೊಂಡವರ ನೆನಪು ಹೊಸ ಗಾಯವಾಗಿ ಉಳಿದಿದೆ. ಮನೆಯ ಆಧಾರವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡಾಗ, ಜೀವನವೇ ದಿಕ್ಕುತಪ್ಪಿದಂತೆ ಆಗುತ್ತದೆ.

“ಅವರು ಇದ್ದಾಗ ಜೀವನವೇ ಬೇರೆ ಆಗಿತ್ತು… ಈಗ ಬದುಕು ಸಾಗಿಸುವುದೇ ಹೋರಾಟವಾಗಿದೆ.”

“ಸಹಾಯದ ಭರವಸೆಗಳು ಇನ್ನೂ ಅರ್ಧದಲ್ಲೇ ಉಳಿದಿವೆ.ಆರ್ಥಿಕ ನೆರವು ಸಿಕ್ಕಿದ್ದರೂ, ಭದ್ರವಾದ ಭವಿಷ್ಯ ಇನ್ನೂ ದೂರದಲ್ಲಿದೆ.”

ಇವೆಲ್ಲಾ ಸಂತ್ರಸ್ತರ ಒಡಲ ಧ್ವನಿ…

ಪ್ರತಿಕ್ರಿಯೆ ಕಠಿಣವಾಗಿತ್ತು — “ಆಪರೇಷನ್ ಸಿಂಧೂರ್” ನ್ಯಾಯದ ಹೆಸರಿನಲ್ಲಿ ನೀಡಿದ ಗಟ್ಟಿಯಾದ ಉತ್ತರ. ಶತ್ರು ತಾಣಗಳು ಧ್ವಂಸವಾದವು, ಕೆಲ ಉಗ್ರರು ಹತರಾದರು, ಯುದ್ಧ ವಿರಾಮವೂ ಜಾರಿಯಾಯಿತು. ನಂತರ “ಆಪರೇಷನ್ ಮಹಾದೇವ್” ಮೂಲಕ ದಾಳಿಗೆ ಕಾರಣರಾದ ಮೂವರನ್ನು ನಿರ್ಮೂಲ ಮಾಡಲಾಯಿತು.

ಆದರೆ, ಈ ಎಲ್ಲದಕ್ಕೂ ನಡುವೆಯೂ ಒಂದು ಸತ್ಯ ಬದಲಾಗಿಲ್ಲ —ಕುಟುಂಬಗಳ ನೋವಿಗೆ ಅಂತ್ಯವಿಲ್ಲ.

“ನ್ಯಾಯ” ಎಂಬುದು ಅವರಿಗಾಗಿ ಯುದ್ಧದ ಗೆಲುವಲ್ಲ,ಅದು ಮರಳಿ ಬಾರದ ಪ್ರಿಯರ ಖಾಲಿತನವನ್ನು ತುಂಬಲಾರದು.ಹೀಗಾಗಿ ಅವರ ಒಂದೇ ಕೋರಿಕೆ —ನಮ್ಮ ಬೇಡಿಕೆ ದೊಡ್ಡದಲ್ಲ — ಕೊಟ್ಟ ಮಾತುಗಳನ್ನು ನಿಭಾಯಿಸಿ… ನಮ್ಮ ಮಕ್ಕಳ ಭವಿಷ್ಯವನ್ನು ಕಾಪಾಡಿ.”

##ಪಹಲ್ಗಾಂಮ್_ದಾಳಿ #NeverForget #JusticeForVictims #ನಾವು_ಮರೆಯುವುದಿಲ್ಲ #IndiaAgainstTerror

COMMENTS

Login with Gmail to comment

ಇನ್ನಷ್ಟು ಸುದ್ದಿ

ಕರ್ನಾಟಕದಲ್ಲಿ ಬೇಸಿಗೆ ಬೆಂಕಿ ತೀವ್ರ ಬಿಸಿಗಾಳಿ ಹೈ ಅಲರ್ಟ್
ಮಹಿಳೆಯ ಸ್ಕೂಟಿಯನ್ನೇ ಕದ್ದ ಕಳ್ಳರು….. ಹೆಚ್ಚುತ್ತಿರುವ ವಾಹನ ಕಳ್ಳತನ
ಮ್ಯಾರಥಾನ್ ನಲ್ಲಿ ಇರುವಾಗಲೇ ಹೃದಯಾಘಾತದಿಂದ  ಸಬ್ ಇನ್ಸ್ಪೆಕ್ಟರ್ ನಿಧನ
ಜನಿವಾರಕ್ಕೆ ಕೈ ಹಾಕಿದವರು, ಪರ್ಮನೆಂಟ್ ಮನೆಗೆ ಹೋಗುವ ದಾರಿಯಲ್ಲಿ….
ಡಿ.ಕೆ. ಶಿವಕುಮಾರ್ ಪ್ರಮಾಣ ವಚನ  ಜೂನ್ 3ಕ್ಕೆ, ರಾಜ್ಯಪಾಲರಿಂದ ಆಹ್ವಾನ
🔥 ಬಿಸಿಲಿನ ಬಿಸಿ ತಾರಕ್ಕೇರಿದೆ, ಆದರೆ ಮಳೆ ಸಿಡಿಲು ಸರ್ಪ್ರೈಸ್ ಬರ್ತಿದೆ! 🌩️
ಬ್ರೇಕಿಂಗ್ ನ್ಯೂಸ್
ರೀಲ್ಸ್ ಮಾಡುವ ಕನಸು… ಕ್ಷಣದಲ್ಲೇ ದುರ್ಘಟನೆ,  ಜೀವವನ್ನೇ ಕಳೆದುಕೊಂಡ ಬಾಲಕ.
ಮೊಹಾಲಿ ಬೆಚ್ಚಿಬೀಳಿಸಿದ ಕಚೇರಿ ಕೊಲೆ: ಮಹಿಳೆ ಮೇಲೆ ಮಾರಣಾಂತಿಕ ದಾಳಿ, ದೇಶಾದ್ಯಂತ ಆಕ್ರೋಶ…
ಪ್ರೀತಿಸಿ ಓಡಿಹೋದ ಸೇಡಿನ ಬೆಂಕಿಗೆ ಬಲಿಯಾದ ನಿರ್ದೋಷಿ ಅಣ್ಣ..!
ಆನ್‌ಲೈನ್ ಕೇರಳ ಲಾಟರಿ ಹೆಸರಿನಲ್ಲಿ 1.85 ಲಕ್ಷ ವಂಚನೆ – ಸೈಬರ್ ವಂಚಕರ ಜಾಲ ಪತ್ತೆ
ಮೀನುಗಳ ಮಾರಣಹೋಮ, ಕಪ್ಪಾದ ನೀರು,ಉಸಿರುಗಟ್ಟಿಸುವ ದುರ್ವಾಸನೆ — ಜನರ ಬದುಕಿಗೆ ದೊಡ್ಡ ಎಚ್ಚರಿಕೆ!
ವಿಶಾಖಪಟ್ಟಣಂ ಉಕ್ಕಿನ ಕಾರ್ಖಾನೆ ದುರಂತ:ಕೆಲವೇ ಕ್ಷಣಗಳಲ್ಲಿ ಎಂಟು ಜೀವಗಳನ್ನು ನುಂಗಿದ ಉಕ್ಕಿನ ಬೆಂಕಿ!ಕೆಲಸಕ್ಕೆ ಹೋದವರು ಮನೆಗೆ ಮರಳಲಿಲ್ಲ… 
ಪ್ರಜ್ಞಾನಂದನ ದಿಗ್ವಿಜಯ…ಚೆಸ್ ಚಕ್ರವ್ಯೂಹದಲ್ಲಿ ದಿಗ್ಗಜರನ್ನೆಲ್ಲಾ ಮಣಿಸಿ ಸಿಂಹಾಸನಕ್ಕೇರಿದ ಭಾರತೀಯ ಬಾಲಪ್ರತಿಭೆ! 
PoKನಲ್ಲಿ ರಕ್ತಪಾತ-ಪಾಕಿಸ್ತಾನದ ವಿರುದ್ಧ ಭಾರತದ ತೀವ್ರ ಆಕ್ರೋಶ!ಗುಂಡಿನ ಮಳೆಯ ನಡುವೆ ಜೀವ ಕಳೆದುಕೊಂಡ ಪ್ರತಿಭಟನಾಕಾರರು!
ವಿವಾಹಿತ ದಂಪತಿಗಳಿಗೆ ಜಂಟಿ ITR ವ್ಯವಸ್ಥೆ ತರಲು- ಸಂಸತ್ತಿನಲ್ಲಿ Raghav Chadha ಆಗ್ರಹ.
ಇಂದು ಮಾಜಿ ಸಚಿವರಿಂದ ಸೌಹಾರ್ದ ಇಫ್ತಾರ್ ಕೂಟ 
ಪಿವಿ ಎಸ್ ಸಂಸ್ಥೆಯ ಆಡಳಿತದಲ್ಲಿ ಯಾರ ಹಸ್ತಕ್ಷೇಪವು ಇಲ್ಲ – ಸರೋಜಿನಿ ಕುಶೆ
ಕೇವಲ “Aunty” ಅಂತ ಅಂದಿದಕ್ಕೆ 2 ಲಕ್ಷ ದಂಡ…!
AI ಡೀಪ್‌ಫೇಕ್ ಕೇವಲ ಸಿನಿಮಾ ನಟಿಯರಿಗೆ ಸೀಮಿತವಾಗಿಲ್ಲ .
book ಮಾಡಿದ ನಿಮ್ಮ ಹೊಸ ಕಾರು-ಬೈಕ್ ಇನ್ನೂ ಬಂದಿಲ್ವಾ?ಪಶ್ಚಿಮ ಏಷ್ಯಾ ಯುದ್ಧದಿಂದ ಸರಬರಾಜು ವಿಳಂಬ…!
2027ರಲ್ಲಿ ರಸ್ತೆಗಿಳಿಯಲಿರುವ EV ಕಾರ್ Avinya X ನೋಡಿದರೆ ಸಾಮಾನ್ಯ SUVಗಳನ್ನೇ ಮರೆತುಬಿಡುತ್ತಿರಾ…ಬರುತ್ತಿದೆ ಟಾಟಾದ ಅತ್ಯಂತ ದುಬಾರಿ ಕನಸು!
ಕಂದಾಯ ಸಚಿವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ
ಕರ್ನಾಟಕದಲ್ಲಿ ತಾಪಮಾನ ಅಪಾಯ ಮಟ್ಟಕ್ಕೆ!ಆಸ್ಪತ್ರೆಗಳಲ್ಲಿ ವಿಶೇಷ ಹೀಟ್ ಸ್ಟ್ರೋಕ್ ರೂಮ್‌ಗಳು-ಆರೋಗ್ಯ ಇಲಾಖೆ ತುರ್ತು ಕ್ರಮ ಜಾರಿ
AAP ಸದ್ದು ಮಂಗಳೂರಲ್ಲೂ! ಜನರ ಸಮಸ್ಯೆಗೆ ನೇರ ಹೋರಾಟ
ತಮಿಳು ರಾಜಕೀಯ ರಣರಂಗದಲ್ಲಿ “ವಿಜಯ”ಗಾಥೆ 118 ದಾಟಿದ TVK  ವಿಜಯ್ ಕೈ ಹಿಡಿದ ಮೈತ್ರಿ ಪಕ್ಷಗಳು!
ಘೋರ ಭಾನುವಾರ, ಒಂದೇ ಕುಟುಂಬದ ಎಂಟು ಮಹಿಳೆಯರ ದುರ್ಮರಣ
ದೆಹಲಿ ಭಾರೀ ದುರಂತದಿಂದ ಪಾರು!: ಏರ್ ಇಂಡಿಯಾ ವಿಮಾನಗಳು ಜಖಂಗೊಂಡರೂ ತಪ್ಪಿದ ಪ್ರಾಣಾಪಾಯ!
ಉಡುಪಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಾನೂನುಬಾಹಿರ ಚಟುವಟಿಕೆ
ಮಾರ್ಕ್ಸ್ 90%, ಆದರೆ 19ಕ್ಕೆ ಕ್ರೂರ ಅಪರಾಧಿ!ಕನಸುಗಳಿದ್ದ ಹುಡುಗನೊಬ್ಬ ಕಟುಕನಾದ ದುರಂತ ಕಥೆ”