📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

AI ಡೀಪ್‌ಫೇಕ್ ಕೇವಲ ಸಿನಿಮಾ ನಟಿಯರಿಗೆ ಸೀಮಿತವಾಗಿಲ್ಲ .

ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (AI) ಬಳಸಿ ತಯಾರಿಸಲಾಗುತ್ತಿರುವ ಡೀಪ್‌ಫೇಕ್ ವಿಡಿಯೋಗಳು ,ಆಡಿಯೋಗಳು, ಇಮೇಜ್ ಗಳು ವೈಯಕ್ತಿಕ ಹಾನಿಯಷ್ಟೇ ಅಲ್ಲದೇ ಎಲ್ಲಾ ಕ್ಷೇತ್ರದಲ್ಲೂ ಲಗ್ಗೆ ಇಟ್ಟು ಇದೀಗ ಸಾರ್ವಜನಿಕವಾಗಿಯೂ ಗಂಭೀರ ಆತಂಕಕಾರಿಯಾದ ವಿಷಯವಾಗಿವೆ.

ಇತ್ತೀಚೆಗೆ ಸುಂದರರಾಮನ್ ರಾಮಮೂರ್ತಿ ಅವರು Bombay Stock Exchange (BSE) Ltd. ನ Managing Director ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಗಿರುವ ಅವರು BSE ಮತ್ತು ಭಾರತದ ಅರ್ಥಿಕ ಬಜಾರಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ಹೆಸರಿನಲ್ಲಿ ನಕಲಿ ವಿಡಿಯೋ ಹರಿದಾಡಿದ್ದು, ಹೂಡಿಕೆದಾರರಿಗೆ ತಪ್ಪು ಷೇರು ಸಲಹೆ ನೀಡಿದ ಘಟನೆ ಬೆಳಕಿಗೆ ಬಂದಿದೆ. ಇದು ಸಂಪೂರ್ಣವಾಗಿ ಕೃತಕವಾಗಿ ತಯಾರಿಸಲಾದ ಡೀಪ್‌ಫೇಕ್ ಆಗಿತ್ತು.

🔹 ನಕಲಿ deepfake ವಿಡಿಯೋದಲ್ಲಿ ಅವರು ಪ್ರತ್ಯಕ್ಷವಾಗಿ ಹೂಡಿಕೆ ಸಲಹೆಗಳನ್ನು ನೀಡಿ, ವಿಶೇಷವಾಗಿ ಷೇರುಗಳ ಖರೀದಿ-ಮಾರಾಟಕ್ಕೆ “ಹೈ returns” ದಾಸ್ಥಾನಗಳನ್ನು ನೀಡುತ್ತಿರುವಂತೆ ತೋರುತ್ತಿತ್ತು.

ವಾಸ್ತವವಾಗಿ BSE ಅಥವಾ ರಾಮಮೂರ್ತಿ ಅವರು ಯಾವ ಸಲಹೆ ಕೊಡುವುದಿಲ್ಲ;

BSE ಮತ್ತು ರಾಮಮೂರ್ತಿಯ ಪ್ರತಿಕ್ರಿಯೆ deepfake ವಿಡಿಯೋಗಳನ್ನು ಅಧಿಕೃತವಲ್ಲ ಎಂದು ತಿರಸ್ಕರಿಸಿದೆ. CEO ಅಥವಾ BSE ಅಧಿಕಾರಿಗಳು ಯಾವುದೇ ಷೇರು ಸಲಹೆ ಅಥವಾ ಹೂಡಿಕೆ ಸಲಹೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೀಡುವುದಿಲ್ಲ. deepfake ವಿಡಿಯೋ ನಿಜದಂತೆ ಕಂಡರೂ ನಕಲಿ ಎಂದು BSE ಯು ಸ್ಪಷ್ಟಪಡಿಸಿದೆ.

🔹 deepfake ವಿಡಿಯೋಗಳು WhatsApp ಅಥವಾ ಇನ್‌ಸ್ಟಾಗ್ರಾಂ ಮುಂತಾದ ಸ್ಥಳಗಳಲ್ಲಿ ಪ್ರಚಾರವಾಗುತ್ತಿದ್ದು, ವೀಕ್ಷಕರನ್ನು ಕೆಲವು ಗುಂಪುಗಳಿಗೆ ಸೇರಲು ಕರೆದೊಯ್ಯುತ್ತಿದೆ ಹಾಗೂ “ಅಸಾಮಾನ್ಯ ಲಾಭ” ದ ಭರವಸೆ ನೀಡುತ್ತಿದೆ. ಈ ರೀತಿಯ ವಿಡಿಯೋಗಳ ಮೇಲೆ ಆಧಾರ ಮಾಡಿಕೊಂಡು ಹೂಡಿಕೆಗಳನ್ನು ಮಾಡಬೇಡಿ.deepfake ವಿಡಿಯೋಗಳು ಸ್ವಲ್ಪ ಸಮಯದಲ್ಲಿ ಹಲವು ಜನರೂ ನೋಡಿ ತಪ್ಪು ನಿರ್ಧಾರಕ್ಕೆ ಬರಬಹುದು.

ಡೀಪ್‌ಫೇಕ್ ಎಂದರೆ AI ತಂತ್ರಜ್ಞಾನವನ್ನು ಬಳಸಿಕೊಂಡು ಯಾರಾದರೂ ವ್ಯಕ್ತಿಯ ಮುಖ, ಧ್ವನಿ ಅಥವಾ ಶೈಲಿಯನ್ನು ನಕಲಿಸಿ ತಯಾರಿಸಲಾದ ಕೃತಕ ವಿಡಿಯೋ ಅಥವಾ ಆಡಿಯೋ. ಇದು ನಿಜವಾಗಿರುವಂತೆ ಕಾಣುವುದರಿಂದ ಜನರು ಸುಲಭವಾಗಿ ಮೋಸ ಹೋಗುವ ಸಾಧ್ಯತೆ ಇದೆ. ಈಗ ಕಂಪನಿಗಳು ವ್ಯಕ್ತಿಯ ಮುಖದ ಸೂಕ್ಷ್ಮ ಬದಲಾವಣೆಗಳು ಮತ್ತು ಮುಖಭಾವಗಳನ್ನು ವಿಶ್ಲೇಷಿಸಿ ಡೀಪ್‌ಫೇಕ್ ಪತ್ತೆಹಚ್ಚುವ ತಂತ್ರಜ್ಞಾನವನ್ನು ಬಳಸುತ್ತಿವೆ. ಆದರೂ, ಸಾರ್ವಜನಿಕ ಜಾಗೃತಿಯೇ ಪ್ರಮುಖ ರಕ್ಷಣೆ.

ಜನರಿಗೆ ಜಾಗೃತಿ ಸಂದೇಶ
ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ ಹೂಡಿಕೆ ಸಲಹೆಗಳನ್ನು ನಂಬಬೇಡಿ. ಅಧಿಕೃತ ವೆಬ್‌ಸೈಟ್ ಅಥವಾ ದೃಢೀಕೃತ ಖಾತೆಗಳಿಂದ ಮಾತ್ರ ಮಾಹಿತಿಯನ್ನು ಪಡೆಯಿರಿ.

ತುರ್ತು ಹಣ ವರ್ಗಾವಣೆ ಅಥವಾ ಹೂಡಿಕೆ ಸೂಚನೆಗಳು ಬಂದರೆ ಪರಿಶೀಲಿಸಿ. ಅಧಿಕೃತ ಸಂಖ್ಯೆಗೆ ಕರೆ ಮಾಡಿ ದೃಢಪಡಿಸಿಕೊಳ್ಳಿ.

ಅಸಹಜ ಧ್ವನಿ, ಮುಖದ ಚಲನೆ ಅಥವಾ ಮಾತಿನ ವ್ಯತ್ಯಾಸ ಕಂಡುಬಂದರೆ ಎಚ್ಚರಿಕೆ ವಹಿಸಿ.

ಸಂದೇಹಾಸ್ಪದ ವಿಷಯಗಳನ್ನು ತಕ್ಷಣವೇ ಸಂಬಂಧಿತ ಅಧಿಕಾರಿಗಳಿಗೆ ಮತ್ತು ಸಾಮಾಜಿಕ ಜಾಲತಾಣಗಳಿಗೆ ವರದಿ ಮಾಡಿ.

ಸೈಬರ್ ಭದ್ರತಾ ಅರಿವು ಹೆಚ್ಚಿಸಿಕೊಳ್ಳಿ ಮತ್ತು ಕುಟುಂಬದವರಿಗೂ ತಿಳಿಸಿ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಬೇಕಾದಾಗ, ಬೇಕಾದಂಗೆ ಸಂವಿಧಾನದ ಜಪ
ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಗೆ ಭೇಟಿ ನೀಡಿದ ಡಾ. ನಾಗಲಕ್ಷ್ಮಿ ಚೌಧರಿ – ಮಹಿಳಾ ಮೀನುಗಾರರ ಸಮಸ್ಯೆ ಆಲಿಕೆ
ತೈಲ, ಯುದ್ಧ ಮತ್ತು ಆರ್ಥಿಕತೆ: ಭಾರತದ ಮುಂದೆ ಹೊಸ ಸವಾಲು
🚨 “ಮಂಗಳೂರು ಜಿಲ್ಲಾಕಾರಾಗೃಹದಲ್ಲಿ ಗಲಾಟೆ: ಜೈಲು ಅಧೀಕ್ಷಕರ ಮೇಲೆಯೇ ಕೈದಿಗಳ ಹಲ್ಲೆಯತ್ನ!”
ಒಂದು ದೇಶವನ್ನೇ ಮಟ್ಟಾಶ್ ಮಾಡುವಷ್ಟು ನ್ಯೂಕ್ಲಿಯರ್ ಪವರ್ stock ಇರಾನ್ನಲ್ಲಿ ಇದ್ಯಾ !?
“ಪ್ರಜಾಪ್ರಭುತ್ವದ ಮೇಲೆ ದಾಳಿ”ಸುಪ್ರೀಂ ಕೋರ್ಟ್ ಕಿಡಿ: ಇದು ಪ್ರತಿಭಟನೆ ಅಲ್ಲ, ಸಂಚು!”
ಆರೋಪಿ ಸಮೀರ್ ಮುಲ್ಲಾ ಸ್ಫೋಟಕ ಹೇಳಿಕೆ-ಖುಷಿ ಒಳ್ಳೆ ಹುಡುಗಿ-🔥 ಹುಬ್ಬಳ್ಳಿ ಲವ್ ಜಿಹಾದ್ ಅಲ್ಲ ಎಂದ ಪೊಲೀಸರು : ಇದೀಗ ಹೊಸ ಟ್ವಿಸ್ಟ್!
ಹೆಚ್.ಪಿ.ವಿ. ಚುಚ್ಚು ಮದ್ದಿನ ಬಗ್ಗೆ ಗೊಂದಲ ಬೇಡ: ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ
HSRP ರಿಲೀಫ್ + PUCC ಫೈನ್ ಮುಕ್ತ…ಡೀಟೇಲ್ಸ್ ಇಲ್ಲಿದೆ ಕರ್ನಾಟಕದ ಎಲ್ಲ ಡ್ರೈವರ್‌ಗಳಿಗೆ ಡಬಲ್ ಗುಡ್ ನ್ಯೂಸ್!???
ಅಪ್ರಾಪ್ತನ ಕ್ರೌರ್ಯಕ್ಕೆ ಬಳ್ಳಾರಿ ವಸತಿ ಶಾಲೆಯ ದೌರ್ಜನ್ಯವೇ ಸಾಕ್ಷಿ… ಈ ಕ್ರೌರ್ಯದ ಹಿಂದೆ ಮನೋರೋಗ ಅಡಗಿದೆಯಾ? 
ಮಂಗಳೂರು ಸಿಟಿ ಪೊಲೀಸರ ಭರ್ಜರಿ ಬೇಟೆ – ನಿಷೇಧಿತ ಎಂಡಿಎಂ, ಗಾಂಜಾ ಮರಾಟಗಾರರ ಬಂಧನ
ಇಂದು ಮಾಜಿ ಸಚಿವರಿಂದ ಸೌಹಾರ್ದ ಇಫ್ತಾರ್ ಕೂಟ 
ಮಂಗಳೂರು ಶಾಕ್ ! ನೇತ್ರಾವತಿ ತೀರದ ನದಿಯಲ್ಲಿ ತೇಲಿ ಬಂದ ರಾಶಿ ರಾಶಿ ಆಧಾರ್ ಕಾರ್ಡ್‌ಗಳು !!!ಹೊಣೆ ಯಾರು?
ಶಿಶಿಲದಲ್ಲಿ ವಿಷಪೂರಿತ ಹಾವು ಕಚ್ಚಿ 65 ವರ್ಷದ ರೈತ ಮೃತ್ಯು
BRICS ನ ಡಿಜಿಟಲ್ ಕರೆನ್ಸಿ ವಿಶ್ವ ಆರ್ಥಿಕತೆಯನ್ನೇ ಬೆರಗಾಗಿಸುತ್ತಾ..?
ವಿಶ್ವಸಂಸ್ಥೆಗೆ ಜೀವ ಬಂತು ನೋಡಿ…
ದೇಶಕ್ಕಾಗಿ ಹಾರಿದ ಯುವ ಪೈಲಟ್: ಅಸ್ಸಾಂ ದುರಂತದಲ್ಲಿ ಐಎಎಫ್ ಅಧಿಕಾರಿ ವೀರಮರಣ
ಜನರ ಹಾಹಾ ಕಾರಕ್ಕೆ ಬೆಚ್ಚಿಬಿದ್ದ ಸರ್ಕಾರ –  ಎಸ್ಮ ಕಾಯ್ದೆ ಜಾರಿಗೆ
ಮೂಡಬಿದಿರೆ ಇನ್‌ಸ್ಪೆಕ್ಟರ್ ಪ್ರಕರಣಕ್ಕೆ ಟ್ವಿಸ್ಟ್: ಆರೋಪ ಮಾಡಿದ ಮಹಿಳೆಯ ವಿರುದ್ಧವೇ ಸಹೋದರಿಯ ಬಾಂಬ್!
ಉಂಡ ಮನೆಗೇ ಕನ್ನ ಹಾಕಿದ ದ್ರೋಹಿಗಳು 
2026 ವಿಧಾನಸಭೆ ಚುನಾವಣೆ – ಮುಖ್ಯ ಮಾಹಿತಿ
ಆನ್ ಲೈನ್ ವಂಚನೆ ಶಿರ್ವದ ಯುವತಿಗೆ ಲಕ್ಷ ಲಕ್ಷ ಉಂಡೆನಾಮ… ಬ್ಯಾಂಕ್ ನಿಯಮ ವಂಚಕರಿಗೆ  ಸಹಕಾರಿ?
ಹೆಣ್ಣು ಎಂಬ ಕನಿಕರ, ಸಿಗದ ಹಾಗೆ ಮಾಡಿದ ಮಾಯಾಂಗನೇ…
ಶಿರಸಿ ಮಾರಿಯಮ್ಮನ ಜಾತ್ರೆ ಪ್ರಾರಂಭ
ಇರಾನ್ ದಾಳಿಗೆ ಬೆಂಜಿಮನೇತನ್ಯಹೋ ಕೊಲ್ಲಲ್ಪಟ್ಟಿದ್ದಾರಾ?
ವಿಷಪ್ರಾಶನ  ಪ್ರಕರಣದಲ್ಲಿ ಕಾರ್ಕಳ ಗಜರಿಯ ಹಾಸ್ಪಿಟಲ್ ತಪ್ಪು ಮಾಡಿತೇ?
ಉದ್ಯಮಿ ಧೀರಜ್ ಜೈನ್ ಗಪ್ ಚುಪ್ಪಾಗಿ ನಡೆಸಿದ ಮಾನವೀಯ ನಡೆಗೆ ಸಾಕ್ಷಿ ನೋಡಿ
50 ಸಾವಿರ ಸಾಲಕ್ಕೆ ಸವಣೂರು ಪೇಟೆಯಲ್ಲಿ ರಕ್ತಸಿಕ್ತ ಘರ್ಷಣೆ ..
ಅಸ್ಸಾಂನಲ್ಲಿ ಮತದಾನದ ಹಿನ್ನೆಲೆ ಹಿಂಸಾಚಾರ: 30ಕ್ಕೂ ಹೆಚ್ಚು ಮಂದಿ ಗಾಯ, 7 ಜನರ ಬಂಧನ
ಮ್ಯಾರಥಾನ್ ನಲ್ಲಿ ಇರುವಾಗಲೇ ಹೃದಯಾಘಾತದಿಂದ  ಸಬ್ ಇನ್ಸ್ಪೆಕ್ಟರ್ ನಿಧನ