📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ತೈಲ, ಯುದ್ಧ ಮತ್ತು ಆರ್ಥಿಕತೆ: ಭಾರತದ ಮುಂದೆ ಹೊಸ ಸವಾಲು


ಫೆಬ್ರವರಿ 28, 2026 ರಂದು ಅಮೆರಿಕಾ ಮತ್ತು ಇಸ್ರೇಲ್ ಸಂಯುಕ್ತವಾಗಿ ಇರಾನ್ ಮೇಲೆ ದೊಡ್ಡ ಮಟ್ಟದ ದಾಳಿ ನಡೆಸಿದ್ದು, ಇದನ್ನು Operation Epic Fury (ಅಮೆರಿಕಾ) ಮತ್ತು Roaring Lion (ಇಸ್ರೇಲ್) ಎಂದು ಕರೆಯಲಾಗಿದೆ. ಇದರ ಉದ್ದೇಶ ಇರಾನ್‌ನ ನ್ಯೂಕ್ಲಿಯರ್ ಪವರ್ ನಾಶಗೊಳಿಸುವುದು, ಬ್ಯಾಲಿಸ್ಟಿಕ್ ಮಿಸೈಲ್ ಸಾಮರ್ಥ್ಯವನ್ನು ಕಡಿಮೆ ಮಾಡುವುದು ಮತ್ತು ರೆಜಿಮ್ ಚೇಂಜ್ ಅಂದ್ರೆ ಆಡಳಿತ ಬದಲಾವಣೆ ತರುವುದು ,ಹೀಗಂತ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇದನ್ನು ಘೋಷಿಸಿದ್ದಾರೆ.

ಈ ಮದ್ಯೆ ಇರಾನ್ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಾಮೆನಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮ ಮತ್ತು ಟ್ರಂಪ್ ದೃಢಪಡಿಸಿದ್ದಾರೆ. ದಾಳಿಯಲ್ಲಿ ಇರಾನ್‌ನ 40ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇಸ್ರೇಲ್ 200ಕ್ಕೂ ಹೆಚ್ಚು ವಿಮಾನಗಳೊಂದಿಗೆ 500 ಗುರಿಗಳ ಮೇಲೆ ದಾಳಿ ನಡೆಸಿದೆ. ಇರಾನ್ ಪ್ರತಿಕ್ರಿಯೆಯಾಗಿ ಇಸ್ರೇಲ್ ಮತ್ತು ಗಲ್ಫ್ ದೇಶಗಳಲ್ಲಿರುವ ಅಮೆರಿಕಾ ಸೈನಿಕ ನೆಲೆಗಳ ಮೇಲೆ ಬ್ಯಾಲಿಸ್ಟಿಕ್ ಮಿಸೈಲ್ ಮತ್ತು ಡ್ರೋನ್ ದಾಳಿ ನಡೆಸಿದೆ.

ಯುದ್ಧದ ಸಾವುನೋವುಗಳು
ಇರಾನ್lಲ್ಲಿ : ಸರ್ಕಾರಿ ವರದಿಗಳ ಪ್ರಕಾರ 200ಕ್ಕೂ ಹೆಚ್ಚು ಸಾವುಗಳು ಕೆಲವು ವರದಿಗಳಲ್ಲಿ 100ಕ್ಕೂ ಹೆಚ್ಚು ಮಕ್ಕಳು ಒಂದು ಶಾಲೆಯ ಮೇಲಿನ ದಾಳಿಯಲ್ಲಿ ಸತ್ತಿದ್ದಾರೆ. ಹಲವು ನಾಗರಿಕರು ಮತ್ತು ಸೈನಿಕರು ಸೇರಿದ್ದಾರೆ.

  • ಇಸ್ರೇಲ್: ಇರಾನ್ ಪ್ರತಿದಾಳಿಯಲ್ಲಿ 1 ಮಹಿಳೆ ಸತ್ತಿದ್ದಾರೆ, 121 ಗಾಯಾಳುಗಳು.
  • ಅಮೆರಿಕಾ: ಯಾವುದೇ ಅಮೆರಿಕನ್ ಸೈನಿಕ ಸಾವುಗಳು ವರದಿಯಾಗಿಲ್ಲ .
  • ಇನ್ನೂ UAEಯಲ್ಲಿ 1 ಸಾವು, ಗಲ್ಫ್ ದೇಶಗಳಲ್ಲಿ ಕೆಲವು ಗಾಯಗಳು.

ಇರಾನ್ ಮುಖ್ಯವಾಗಿ ತನ್ನ ಪ್ರಾಕ್ಸಿ ಗುಂಪುಗಳೊಂದಿಗೆ (Axis of Resistance) ಹೋರಾಡುತ್ತಿದೆ:
-ಯೆಮೆನ್ ನ ಹೌತಿಗಳು – ರೆಡ್ ಸೀ ದಾಳಿಗಳನ್ನು ಮತ್ತೆ ಆರಂಭಿಸಿದ್ದಾರೆ.
ಲೆಬನಾನ್ ನ ಹಿಜ್ಬೊಲ್ಲಾ ,
ಗಾಜಾ ದ ಹಮಾಸ್
ಇರಾಕ್ ನ ಪಾಪ್ಯುಲರ್ ಫೋರ್ಸ್ ಮುಂತಾದವು.

  • ಈ ನಡುವೇ ರಷ್ಯಾ ಮತ್ತು ಚೀನಾ ಆಯುಧ/ರಾಜಕೀಯವಾಗಿ ಸೀಮಿತ ಬೆಂಬಲ ಸೂಚಿಸಿದೆ .ಯಾವುದೇ ಪ್ರಮುಖ ಸ್ವತಂತ್ರ ದೇಶ ಸೈನಿಕವಾಗಿ ನೇರವಾಗಿ ಇರಾನ್ ಗೆ ಬೆಂಬಲ ಸೂಚಿಸಿಲ್ಲ. ಆದರೆ ಪ್ರಮುಖವಾಗಿ ಅಮೆರಿಕ ಇಸ್ರೇಲ್ ಗೆ ರಕ್ಷಣಾತ್ಮಕ ಬೆಂಬಲವಾಗಿ ಸೌದಿ ಅರೇಬಿಯಾ, UAE, ಬಹ್ರೈನ್, ಕುವೈತ್, ಕತಾರ್, ಜೋರ್ಡಾನ್ – ಇರಾನ್ ದಾಳಿಗಳನ್ನು ಖಂಡಿಸಿ, ಅಮೆರಿಕಾ ನೆಲೆಗಳನ್ನು ರಕ್ಷಿಸಲು ಸಹಾಯ ಮಾಡುತ್ತಿವೆ.
  • ಯುನೈಟೆಡ್ ಕಿಂಗ್‌ಡಮ್ – ಫೈಟರ್ ಜೆಟ್‌ಗಳಂತಹ ಸೀಮಿತ ಬೆಂಬಲ .
    ಇತರ ಪಶ್ಚಿಮ ದೇಶಗಳು ಸೈನಿಕ ಬೆಂಬಲ ನೀಡಿಲ್ಲ.

ಜಾಗತಿಕ ಪರಿಣಾಮಗಳು ಏನು?
ಇರಾನ್‌ನ ನ್ಯೂಕ್ಲಿಯರ್ ಮತ್ತು ಮಿಸೈಲ್ ಪರಮಾಣು ಭಯವನ್ನು ಕಡಿಮೆ ಮಾಡಬಹುದು, ಇಸ್ರೇಲ್ ಮತ್ತು ಗಲ್ಫ್ ದೇಶಗಳ ಸುರಕ್ಷತೆ ಹೆಚ್ಚಿಸಬಹುದು.

  • ಇರಾನ್ ರೆಜಿಮ್ ಬದಲಾವಣೆಯಿಂದ ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ವಾಣಿಜ್ಯ ಅವಕಾಶಗಳು ಹೆಚ್ಚಾಗಬಹುದು.
  • ಇರಾನ್ ಪ್ರಾಕ್ಸಿ ಗುಂಪುಗಳ ದಾಳಿಗಳು ಕಡಿಮೆಯಾಗಬಹುದು.

ನಷ್ಟಗಳು ಅಥವಾ ವ್ಯತಿರಿಕ್ತ ಪರಿಣಾಮಗಳು
ಯುದ್ದಕ್ಕೆ ಪ್ರತೀಕಾರವಾಗಿ ತನ್ನ ಏಕೈಕ ಜಲಸಂಧಿ ಸ್ಟ್ರೇಟ್ ಆಫ್ ಹಾರ್ಮುಜ್ ಬಂದ್ ಮಾಡಿದೆ.ಇದರಿಂದ ಯಾವುದೇ ತೈಲ ಹಡಗುಗಳು ಗಲ್ಫ್ ರಾಷ್ಟ್ರಗಳ ಪ್ರಮುಖ ಕೊಂಡಿ ಕಳಚಿರುವುದರಿಂದ ಕಚ್ಚಾತೈಲ ಏರುಪೇರಾಗಲಿದೆ.

  • ಇದರಿಂದ ತೈಲ ಬೆಲೆಗಳ ಏರಿಕೆಯಾಗಿ (ಸ್ಟ್ರೇಟ್ ಆಫ್ ಹಾರ್ಮುಜ್ ಅಡಚಣೆಯಿಂದ), ಜಾಗತಿಕ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಬಹುದು
  • ಲೆಬನಾನ್, ಇರಾಕ್, ಯೆಮೆನ್ ಸೇರಿದಂತೆ ಪ್ರಾದೇಶಿಕ ಯುದ್ಧ ವಿಸ್ತರಣೆಯ ಅಪಾಯ
  • ನಾಗರಿಕ ಸಾವುನೋವುಗಳು ಜಾಸ್ತಿ ಯಾಗಿ ಮಾನವೀಯ ಸಂಕಷ್ಟಗಳು ಎದುರಾಗ್ಬಹುದು.
  • ರಷ್ಯಾ/ಚೀನಾ ಜೊತೆ ಉದ್ವಿಗ್ನತೆ ಹೆಚ್ಚಾಗಬಹುದಾ!

ಯುದ್ಧ ಇನ್ನೂ ಆರಂಭಿಕ ಹಂತದಲ್ಲಿದ್ದು, UN ಸಭೆಗಳು ಮತ್ತು ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿವೆ. ಸ್ಥಿತಿ ಬದಲಾಗಬಹುದು.

ದಾಳಿ ಮತ್ತು ತೈಲ ಬೆಲೆ ಏರಿಕೆಯಿಂದ ಸಂಭಾವ್ಯ ಪರಿಣಾಮ
ಭಾರತ 80-85% ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ, ಮತ್ತು ಸುಮಾರು 45-50% ಸ್ಟ್ರೇಟ್ ಆಫ್ ಹಾರ್ಮುಜ್ ಜಲಸಂಧಿ ಮೂಲಕ ಬರುತ್ತದೆ (ಮಧ್ಯಪ್ರಾಚ್ಯದಿಂದ). ಇರಾನ್ ಪ್ರತಿದಾಳಿ ಅಥವಾ ಸ್ಟ್ರೇಟ್ ಅಡಚಣೆಯಿಂದ ತೈಲ ಬೆಲೆಗಳು ಏರುತ್ತವೆ, ಇದು ಭಾರತದ ಆರ್ಥಿಕ ಬೆಳವಣಿಗೆಗೆ ಹೊಡೆತ. ಸ್ಟ್ರೇಟ್ ಆಫ್ ಹಾರ್ಮುಜ್ ಸ್ಥಿತಿ ನಿರ್ಣಾಯಕ; ಅಡಚಣೆಯಾದರೆ ದೊಡ್ಡ ಆಘಾತ. ಸ್ಥಿತಿಯನ್ನು ಗಮನಿಸಿ ,RBI ಮತ್ತು ಸರ್ಕಾರದ ನಿರ್ಧಾರಗಳು

ಪರಿಣಾಮಗಳು ಅಂದ್ರೆ ಇದರಿಂದ ಪೆಟ್ರೋಲ್/ಡೀಸಲ್ ಬೆಲೆಗಳು ₹3-5 ಏರಬಹುದು, ಸಾಗಣೆ, ಉತ್ಪಾದನೆ ವೆಚ್ಚಗಳು ಹೆಚ್ಚಾಗಬಹುದು. ಗ್ಲೋಬಲ್ ಇನ್ಫ್ಲೇಷನ್ ಆದರೆ ಭಾರತದಂತಹ ಆಮದುದಾರ ದೇಶಕ್ಕೆ ಹೆಚ್ಚು ತೊಂದರೆ.

  • ಇದು ಆಹಾರ, ಸಾಗಣೆ, ಉತ್ಪನ್ನಗಳ ಬೆಲೆಗಳನ್ನು ಏರಿಸಿ, ಆರ್ಥಿಕತೆಯನ್ನು ಮಂದಗೊಳಿಸಬಹುದು.
  • RBI ಬಡ್ಡಿ ದರಗಳನ್ನು ಕಡಿಮೆ ಮಾಡುವುದನ್ನು ನಿಲ್ಲಿಸಬಹುದು ಅಥವಾ ಹೆಚ್ಚಿಸಬಹುದು, ಇದು ಬೆಳವಣಿಗೆಗೆ ಹೊಡೆತ.
    ತೈಲ ಆಮದು ವೆಚ್ಚ ಹೆಚ್ಚಾಗಿ ಕರೆಂಟ್ ಅಕೌಂಟ್ ಡೆಫಿಸಿಟ್ ವಿಸ್ತರಣೆ, ರೂಪಾಯಿ ದುರ್ಬಲಗೊಳ್ಳುವುದು .ಇಂಧನ ಸಬ್ಸಿಡಿ ಹೆಚ್ಚಿಸಬಹುದು. ಏವಿಯೇಷನ್, ಟ್ರಾನ್ಸ್‌ಪೋರ್ಟ್, ಮ್ಯಾನುಫ್ಯಾಕ್ಚರಿಂಗ್ ವೆಚ್ಚಗಳು ಏರುತ್ತವೆ ಇದರಿಂದ ಉತ್ಪನ್ನ ಬೆಲೆಗಳು ಹೆಚ್ಚು.
  • ಸದ್ಯಕ್ಕೆ ಎಲ್ಲವೂ ಸ್ಥಿರವಾಗಿದೆ ಏಕೆಂದರೆ ಮಾರುಕಟ್ಟೆಗಳು ವೀಕೆಂಡ್‌ನಲ್ಲಿ ಮುಚ್ಚಿವೆ. ಸೋಮವಾರ (ಮಾರ್ಚ್ 2) ತೈಲ ಬೆಲೆ ಏರಿಕೆಯ ನಂತರ ನಿಜವಾದ ಪರಿಣಾಮ ಕಾಣಿಸಿಕೊಳ್ಳುತ್ತದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಬಂಟ್ಸ್ ಹಾಗೂ ಬಿಲ್ಲವ ಸಮುದಾಯವನ್ನೇ ಅವಹೇಳಿಸಿ ಮಾತಾಡಿ ವಿಡಿಯೋ ವೈರಲ್ ರಾತ್ರೋರಾತ್ರಿ… ..ಫೇಮಸ್ ಆದ ಅನಿತಾಳ ಬಂಧನ ..!
ಪ್ರಜ್ಞೆ ಬಂದಾಗ ಎದೆಯ ಮೇಲೆ ಬಿದ್ದಿತ್ತು ಪತಿಯ ಶವ!ಹಸೆಮಣೆ ಏರಿದ ಕೆಲವೇ ಗಂಟೆಗಳಲ್ಲಿ ಕತ್ತಲಾದ ಬದುಕು..
₹6,695 ಕೋಟಿಯ ಮೆಗಾ ಪ್ರಾಜೆಕ್ಟ್‌ಗೆ ಮಳೆಯ ಅಗ್ನಿಪರೀಕ್ಷೆ-ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಭೂಕುಸಿತ
ಸಿದ್ದು vs ಕೃಷ್ಣ -ಸಿದ್ಧು ವಿರುದ್ಧ ನೇರ ಸವಾಲು: ‘ಬಿ’ ರಿಪೋರ್ಟ್ ಪ್ರಶ್ನಿಸಿ ಸ್ನೇಹಮಯಿ ಕೃಷ್ಣನ ನಡೆ ಭ್ರಷ್ಟ ವ್ಯವಸ್ಥೆಗೆ ಬಿಗಿ ಹೊಡೆತ!”
Political Heatwave 2026:ದಕ್ಷಿಣದಲ್ಲಿ ಅಧಿಕಾರ ಆಟ, ಅಸ್ಸಾಂನಲ್ಲಿ ಅಬ್ಬರ..!
ಗ್ರಾಮೀಣ ವಿದ್ಯಾರ್ಥಿಗಳಿಗೂ AI ಶಿಕ್ಷಣ: ಕರ್ನಾಟಕ ಸರ್ಕಾರದ ಐತಿಹಾಸಿಕ ಹೆಜ್ಜೆ..50 ಸರ್ಕಾರಿ ಕಾಲೇಜುಗಳಲ್ಲಿ AI ಲ್ಯಾಬ್‌ಗಳು!
ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ನಿರ್ಧಾರ ಬದಲಾಗುತ್ತದೆಯೇ? ಕರಾವಳಿ ಕಾದಿದೆ ಉಸಿರು ಹಿಡಿದು!
ಕಾರ್ಕಳ ಮಹಾಮಸ್ತಕಾಭಿಷೇಕಕ್ಕೆ ₹1.59 ಕೋಟಿ ಅನುದಾನ: ಮೊದಲ ಕಂತು ಬಿಡುಗಡೆ…
“ಕುಮಾರಸ್ವಾಮಿ ಅವರನ್ನು ಹರಕೆ ಕುರಿ ಮಾಡುತ್ತಿದ್ದಾರೆ” – ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷರ ವಾಗ್ದಾಳಿ
ಮೈ ಜುಮ್ಮೆನ್ನಿಸುವ ಬೈಕ್–ಲಾರಿ ಡಿಕ್ಕಿ ಅಪಘಾತ… ಕ್ಷಣಾರ್ಧದಲ್ಲೇ ಜೀವ ಹೋದ ಹೃದಯವಿದ್ರಾವಕ ರಸ್ತೆ ದುರಂತ
ಸಿಎಂ ಕುರ್ಚಿಯನ್ನು, ಡಿಕೆಗೆ ಮಗ್ಗಲ ಮುಳ್ಳನ್ನಾಗಿಸಲು ಸಕಲ ತಯಾರಿ
ಜನಗಣತಿ 2026–27 – Self Enumeration ಮುಗಿದು ಈಗ ಮನೆ ಮನೆ ಭೇಟಿ ಹಂತ ಆರಂಭ!ನಮ್ಮ ಮಾಹಿತಿ = ನಮ್ಮ ದೇಶದ ಬೆಳವಣಿಗೆ…
ಗೃಹಲಕ್ಷ್ಮಿ ಫಲಾನುಭವಿಗಳೇ ಗಮನಿಸಿ: ಹಣ ಕ್ರೆಡಿಟ್ ಆಗ್ಬೇಕಾದ್ರೆ ಇನ್ಮುಂದೆ ಬಯೋಮೆಟ್ರಿಕ್ ಕಡ್ಡಾಯ!
ಅಯೋಧ್ಯೆ ರಾಮ ಮಂದಿರ ಸ್ಫೋಟಿಸಲು ಹರಿಹರದಲ್ಲಿ ಪ್ಲಾನ್! ಬಂಧಿತ ಸುಹೇಲ್ ಬೆನ್ನತ್ತಿದ ಇಂಟೆಲಿಜೆನ್ಸ್; 10 ಜನರ ಟೀಮ್‌ಗಾಗಿ ತೀವ್ರ ಶೋಧ!
ಮೂಡಬಿದಿರೆ ಇನ್‌ಸ್ಪೆಕ್ಟರ್ ಪ್ರಕರಣಕ್ಕೆ ಟ್ವಿಸ್ಟ್: ಆರೋಪ ಮಾಡಿದ ಮಹಿಳೆಯ ವಿರುದ್ಧವೇ ಸಹೋದರಿಯ ಬಾಂಬ್!
HSRP ರಿಲೀಫ್ + PUCC ಫೈನ್ ಮುಕ್ತ…ಡೀಟೇಲ್ಸ್ ಇಲ್ಲಿದೆ ಕರ್ನಾಟಕದ ಎಲ್ಲ ಡ್ರೈವರ್‌ಗಳಿಗೆ ಡಬಲ್ ಗುಡ್ ನ್ಯೂಸ್!???
ಬ್ರಹ್ಮಾವರ, ಮಂದಾರ್ತಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಹೇಳೋರು ಕೇಳೋರು ಯಾರು ಇಲ್ವಾ?
“ಅಮ್ಮನ ನೋವು ನೋಡಲಾಗಲಿಲ್ಲ…” ನಾಲ್ಕನೇ ಮಹಡಿಯಿಂದ ತಳ್ಳಿದ ಮಗ …
ಮೂಡಬಿದ್ರಿ ಪುರಸಭೆಯ ಬೇಜವಾಬ್ದಾರಿ ಹಾಗೂ ವೇಸ್ಟ್ ಆಗುತ್ತಿರುವ ನೀರು
🚨 ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ – ಕಟಪಾಡಿ ರಾಷ್ಟ್ರೀಯ ಹೆದ್ದಾರಿ ಅಪಘಾತ
ವರದಕ್ಷಿಣೆ ಕಿರುಕುಳ ಪ್ರಕರಣ ಹೈಕೋರ್ಟ್‌ನ ಮಹತ್ವದ ತೀರ್ಪು…!ಕಾನೂನಿನ ದುರುಪಯೋಗಕ್ಕೆ ಹೈಕೋರ್ಟ್ ಬ್ರೇಕ್..!
ವಿಜಯ್ ತಳಪತಿ ಸಂಗೀತಾ ವಿಚ್ಛೇದನ ವಿಚಾರ: 27 ವರ್ಷದ ದಾಂಪತ್ಯಕ್ಕೆ ತೆರೆ? ₹250 ಕೋಟಿ ಸೆಟ್ಲ್‌ಮೆಂಟ್ ಚರ್ಚೆ!!
ಎಚ್ಚರ… ನಿಮ್ಮಸುತ್ತಮುತ್ತ ಏನು ನಡೆಯುತ್ತಿದೆ ಗೊತ್ತಿರಲಿ! 🚨Be Aware… Stay Alert… Save Youth!
ದರೆಗುಡ್ಡೆಯಲ್ಲಿ ಬಾರಿ ಅಗ್ನಿ ಅವಗಡ…!
ಯುಎಇಯಿಂದ ಯುರೋಪ್ ತನಕ ಮೋದಿ ಐತಿಹಾಸಿಕ ವಿದೇಶ ಪ್ರವಾಸ…ಡಿಪ್ಲೊಮಸಿ – ತೈಲದಿಂದ ತಂತ್ರಜ್ಞಾನವರೆಗೆ ಇದು ಭಾರತದ ಭವಿಷ್ಯದ ತಂತ್ರಾತ್ಮಕ ನಡೆ ?!
ವಿದೇಶಿಗರ ಮೇಲೆ ನಿಗಾ ಇಟ್ಟ ಕೇಂದ್ರ ಗೃಹ ಇಲಾಖೆ! ನಿಯಮ ಮೀರಿದರೆ ಕಠಿಣ ಕ್ರಮ ಗ್ಯಾರಂಟಿ! 
ಉಡುಪಿ ಜಿಲ್ಲಾಆಸ್ಪತ್ರೆಯಲ್ಲಿ ಹಗರಣ, ತಾರತಮ್ಯದ ಆರೋಪ: ವೀಣಾದೇವಿ ವಿರುದ್ಧದಕ್ರಮ ಕಣ್ಣೊರೆಸುವ ತಂತ್ರ
ಕಾಂಗ್ರೆಸ್‌ಗೆ ಹೊಸ ತಲೆನೋವು? ಅಹಿಂದ ಸಂಘಟನೆಯಿಂದ ‘ಪಕ್ಷ ವಿಭಜನೆ’ ಎಚ್ಚರಿಕೆ!
“ಬರ್ಕಾಸ್ತು ಘಟಕಕ್ಕೆ ‘ಬೋಗಸ್ ನಾಯಕತ್ವ’ – ಕರವೇ ಮಹಿಳಾ ಘಟಕದಲ್ಲಿ ಭಿನ್ನಮತ ಸ್ಫೋಟ!”
ಇಂದಿನ ಆಧುನಿಕ ಯುಗದಲ್ಲೂ ಗಂಡನ ಮನೆಯಲ್ಲಿ ಹೆಣ್ಣೊಬ್ಬಳ ನರಕಯಾತನೆಯ ನೈಜ ದೃಶ್ಯ ತಂದೆಯೇ ಕಣ್ಣಾರೆ ನೋಡಿದರೇ ….ಕಣ್ಣೀರು ತಡೆಯಲು ಸಾಧ್ಯವಿಲ್ಲ…..