📍 Karavali Maruta
  • LOGIN
  • BREAKING
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ ದಯಾಮರಣ ಕೇಳಿದ್ದ ತುಮಕೂರು ರಾಬಿಯಾ ಇನ್ನಿಲ್ಲ …!ಪರಮೇಶ್ವರ್ ಮುಂದೆ ಕಣ್ಣೀರಿಟ್ಟಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ವಿಷಸೇವಿಸಿ ಕೊನೆಯುಸಿರು…‘ಮನೆ’ ಸಿಕ್ಕರೂ ಬದುಕು ಉಳಿಯಲಿಲ್ಲ! ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್! ಮಹಿಳಾ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ ವಾಜಪೇಯಿ ಸರ್ಕಾರದ  ಕನಸಿನ ಯೋಜನೆ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಸಹಿ ಸಂಗ್ರಹ ಅಭಿಯಾನ
    ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ತೈಲ, ಯುದ್ಧ ಮತ್ತು ಆರ್ಥಿಕತೆ: ಭಾರತದ ಮುಂದೆ ಹೊಸ ಸವಾಲು


    ಫೆಬ್ರವರಿ 28, 2026 ರಂದು ಅಮೆರಿಕಾ ಮತ್ತು ಇಸ್ರೇಲ್ ಸಂಯುಕ್ತವಾಗಿ ಇರಾನ್ ಮೇಲೆ ದೊಡ್ಡ ಮಟ್ಟದ ದಾಳಿ ನಡೆಸಿದ್ದು, ಇದನ್ನು Operation Epic Fury (ಅಮೆರಿಕಾ) ಮತ್ತು Roaring Lion (ಇಸ್ರೇಲ್) ಎಂದು ಕರೆಯಲಾಗಿದೆ. ಇದರ ಉದ್ದೇಶ ಇರಾನ್‌ನ ನ್ಯೂಕ್ಲಿಯರ್ ಪವರ್ ನಾಶಗೊಳಿಸುವುದು, ಬ್ಯಾಲಿಸ್ಟಿಕ್ ಮಿಸೈಲ್ ಸಾಮರ್ಥ್ಯವನ್ನು ಕಡಿಮೆ ಮಾಡುವುದು ಮತ್ತು ರೆಜಿಮ್ ಚೇಂಜ್ ಅಂದ್ರೆ ಆಡಳಿತ ಬದಲಾವಣೆ ತರುವುದು ,ಹೀಗಂತ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇದನ್ನು ಘೋಷಿಸಿದ್ದಾರೆ.

    ಈ ಮದ್ಯೆ ಇರಾನ್ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಾಮೆನಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮ ಮತ್ತು ಟ್ರಂಪ್ ದೃಢಪಡಿಸಿದ್ದಾರೆ. ದಾಳಿಯಲ್ಲಿ ಇರಾನ್‌ನ 40ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
    ಇಸ್ರೇಲ್ 200ಕ್ಕೂ ಹೆಚ್ಚು ವಿಮಾನಗಳೊಂದಿಗೆ 500 ಗುರಿಗಳ ಮೇಲೆ ದಾಳಿ ನಡೆಸಿದೆ. ಇರಾನ್ ಪ್ರತಿಕ್ರಿಯೆಯಾಗಿ ಇಸ್ರೇಲ್ ಮತ್ತು ಗಲ್ಫ್ ದೇಶಗಳಲ್ಲಿರುವ ಅಮೆರಿಕಾ ಸೈನಿಕ ನೆಲೆಗಳ ಮೇಲೆ ಬ್ಯಾಲಿಸ್ಟಿಕ್ ಮಿಸೈಲ್ ಮತ್ತು ಡ್ರೋನ್ ದಾಳಿ ನಡೆಸಿದೆ.

    ಯುದ್ಧದ ಸಾವುನೋವುಗಳು
    ಇರಾನ್lಲ್ಲಿ : ಸರ್ಕಾರಿ ವರದಿಗಳ ಪ್ರಕಾರ 200ಕ್ಕೂ ಹೆಚ್ಚು ಸಾವುಗಳು ಕೆಲವು ವರದಿಗಳಲ್ಲಿ 100ಕ್ಕೂ ಹೆಚ್ಚು ಮಕ್ಕಳು ಒಂದು ಶಾಲೆಯ ಮೇಲಿನ ದಾಳಿಯಲ್ಲಿ ಸತ್ತಿದ್ದಾರೆ. ಹಲವು ನಾಗರಿಕರು ಮತ್ತು ಸೈನಿಕರು ಸೇರಿದ್ದಾರೆ.

    • ಇಸ್ರೇಲ್: ಇರಾನ್ ಪ್ರತಿದಾಳಿಯಲ್ಲಿ 1 ಮಹಿಳೆ ಸತ್ತಿದ್ದಾರೆ, 121 ಗಾಯಾಳುಗಳು.
    • ಅಮೆರಿಕಾ: ಯಾವುದೇ ಅಮೆರಿಕನ್ ಸೈನಿಕ ಸಾವುಗಳು ವರದಿಯಾಗಿಲ್ಲ .
    • ಇನ್ನೂ UAEಯಲ್ಲಿ 1 ಸಾವು, ಗಲ್ಫ್ ದೇಶಗಳಲ್ಲಿ ಕೆಲವು ಗಾಯಗಳು.

    ಇರಾನ್ ಮುಖ್ಯವಾಗಿ ತನ್ನ ಪ್ರಾಕ್ಸಿ ಗುಂಪುಗಳೊಂದಿಗೆ (Axis of Resistance) ಹೋರಾಡುತ್ತಿದೆ:
    -ಯೆಮೆನ್ ನ ಹೌತಿಗಳು – ರೆಡ್ ಸೀ ದಾಳಿಗಳನ್ನು ಮತ್ತೆ ಆರಂಭಿಸಿದ್ದಾರೆ.
    ಲೆಬನಾನ್ ನ ಹಿಜ್ಬೊಲ್ಲಾ ,
    ಗಾಜಾ ದ ಹಮಾಸ್
    ಇರಾಕ್ ನ ಪಾಪ್ಯುಲರ್ ಫೋರ್ಸ್ ಮುಂತಾದವು.

    • ಈ ನಡುವೇ ರಷ್ಯಾ ಮತ್ತು ಚೀನಾ ಆಯುಧ/ರಾಜಕೀಯವಾಗಿ ಸೀಮಿತ ಬೆಂಬಲ ಸೂಚಿಸಿದೆ .ಯಾವುದೇ ಪ್ರಮುಖ ಸ್ವತಂತ್ರ ದೇಶ ಸೈನಿಕವಾಗಿ ನೇರವಾಗಿ ಇರಾನ್ ಗೆ ಬೆಂಬಲ ಸೂಚಿಸಿಲ್ಲ. ಆದರೆ ಪ್ರಮುಖವಾಗಿ ಅಮೆರಿಕ ಇಸ್ರೇಲ್ ಗೆ ರಕ್ಷಣಾತ್ಮಕ ಬೆಂಬಲವಾಗಿ ಸೌದಿ ಅರೇಬಿಯಾ, UAE, ಬಹ್ರೈನ್, ಕುವೈತ್, ಕತಾರ್, ಜೋರ್ಡಾನ್ – ಇರಾನ್ ದಾಳಿಗಳನ್ನು ಖಂಡಿಸಿ, ಅಮೆರಿಕಾ ನೆಲೆಗಳನ್ನು ರಕ್ಷಿಸಲು ಸಹಾಯ ಮಾಡುತ್ತಿವೆ.
    • ಯುನೈಟೆಡ್ ಕಿಂಗ್‌ಡಮ್ – ಫೈಟರ್ ಜೆಟ್‌ಗಳಂತಹ ಸೀಮಿತ ಬೆಂಬಲ .
      ಇತರ ಪಶ್ಚಿಮ ದೇಶಗಳು ಸೈನಿಕ ಬೆಂಬಲ ನೀಡಿಲ್ಲ.

    ಜಾಗತಿಕ ಪರಿಣಾಮಗಳು ಏನು?
    ಇರಾನ್‌ನ ನ್ಯೂಕ್ಲಿಯರ್ ಮತ್ತು ಮಿಸೈಲ್ ಪರಮಾಣು ಭಯವನ್ನು ಕಡಿಮೆ ಮಾಡಬಹುದು, ಇಸ್ರೇಲ್ ಮತ್ತು ಗಲ್ಫ್ ದೇಶಗಳ ಸುರಕ್ಷತೆ ಹೆಚ್ಚಿಸಬಹುದು.

    • ಇರಾನ್ ರೆಜಿಮ್ ಬದಲಾವಣೆಯಿಂದ ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ವಾಣಿಜ್ಯ ಅವಕಾಶಗಳು ಹೆಚ್ಚಾಗಬಹುದು.
    • ಇರಾನ್ ಪ್ರಾಕ್ಸಿ ಗುಂಪುಗಳ ದಾಳಿಗಳು ಕಡಿಮೆಯಾಗಬಹುದು.

    ನಷ್ಟಗಳು ಅಥವಾ ವ್ಯತಿರಿಕ್ತ ಪರಿಣಾಮಗಳು
    ಯುದ್ದಕ್ಕೆ ಪ್ರತೀಕಾರವಾಗಿ ತನ್ನ ಏಕೈಕ ಜಲಸಂಧಿ ಸ್ಟ್ರೇಟ್ ಆಫ್ ಹಾರ್ಮುಜ್ ಬಂದ್ ಮಾಡಿದೆ.ಇದರಿಂದ ಯಾವುದೇ ತೈಲ ಹಡಗುಗಳು ಗಲ್ಫ್ ರಾಷ್ಟ್ರಗಳ ಪ್ರಮುಖ ಕೊಂಡಿ ಕಳಚಿರುವುದರಿಂದ ಕಚ್ಚಾತೈಲ ಏರುಪೇರಾಗಲಿದೆ.

    • ಇದರಿಂದ ತೈಲ ಬೆಲೆಗಳ ಏರಿಕೆಯಾಗಿ (ಸ್ಟ್ರೇಟ್ ಆಫ್ ಹಾರ್ಮುಜ್ ಅಡಚಣೆಯಿಂದ), ಜಾಗತಿಕ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಬಹುದು
    • ಲೆಬನಾನ್, ಇರಾಕ್, ಯೆಮೆನ್ ಸೇರಿದಂತೆ ಪ್ರಾದೇಶಿಕ ಯುದ್ಧ ವಿಸ್ತರಣೆಯ ಅಪಾಯ
    • ನಾಗರಿಕ ಸಾವುನೋವುಗಳು ಜಾಸ್ತಿ ಯಾಗಿ ಮಾನವೀಯ ಸಂಕಷ್ಟಗಳು ಎದುರಾಗ್ಬಹುದು.
    • ರಷ್ಯಾ/ಚೀನಾ ಜೊತೆ ಉದ್ವಿಗ್ನತೆ ಹೆಚ್ಚಾಗಬಹುದಾ!

    ಯುದ್ಧ ಇನ್ನೂ ಆರಂಭಿಕ ಹಂತದಲ್ಲಿದ್ದು, UN ಸಭೆಗಳು ಮತ್ತು ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿವೆ. ಸ್ಥಿತಿ ಬದಲಾಗಬಹುದು.

    ದಾಳಿ ಮತ್ತು ತೈಲ ಬೆಲೆ ಏರಿಕೆಯಿಂದ ಸಂಭಾವ್ಯ ಪರಿಣಾಮ
    ಭಾರತ 80-85% ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ, ಮತ್ತು ಸುಮಾರು 45-50% ಸ್ಟ್ರೇಟ್ ಆಫ್ ಹಾರ್ಮುಜ್ ಜಲಸಂಧಿ ಮೂಲಕ ಬರುತ್ತದೆ (ಮಧ್ಯಪ್ರಾಚ್ಯದಿಂದ). ಇರಾನ್ ಪ್ರತಿದಾಳಿ ಅಥವಾ ಸ್ಟ್ರೇಟ್ ಅಡಚಣೆಯಿಂದ ತೈಲ ಬೆಲೆಗಳು ಏರುತ್ತವೆ, ಇದು ಭಾರತದ ಆರ್ಥಿಕ ಬೆಳವಣಿಗೆಗೆ ಹೊಡೆತ. ಸ್ಟ್ರೇಟ್ ಆಫ್ ಹಾರ್ಮುಜ್ ಸ್ಥಿತಿ ನಿರ್ಣಾಯಕ; ಅಡಚಣೆಯಾದರೆ ದೊಡ್ಡ ಆಘಾತ. ಸ್ಥಿತಿಯನ್ನು ಗಮನಿಸಿ ,RBI ಮತ್ತು ಸರ್ಕಾರದ ನಿರ್ಧಾರಗಳು

    ಪರಿಣಾಮಗಳು ಅಂದ್ರೆ ಇದರಿಂದ ಪೆಟ್ರೋಲ್/ಡೀಸಲ್ ಬೆಲೆಗಳು ₹3-5 ಏರಬಹುದು, ಸಾಗಣೆ, ಉತ್ಪಾದನೆ ವೆಚ್ಚಗಳು ಹೆಚ್ಚಾಗಬಹುದು. ಗ್ಲೋಬಲ್ ಇನ್ಫ್ಲೇಷನ್ ಆದರೆ ಭಾರತದಂತಹ ಆಮದುದಾರ ದೇಶಕ್ಕೆ ಹೆಚ್ಚು ತೊಂದರೆ.

    • ಇದು ಆಹಾರ, ಸಾಗಣೆ, ಉತ್ಪನ್ನಗಳ ಬೆಲೆಗಳನ್ನು ಏರಿಸಿ, ಆರ್ಥಿಕತೆಯನ್ನು ಮಂದಗೊಳಿಸಬಹುದು.
    • RBI ಬಡ್ಡಿ ದರಗಳನ್ನು ಕಡಿಮೆ ಮಾಡುವುದನ್ನು ನಿಲ್ಲಿಸಬಹುದು ಅಥವಾ ಹೆಚ್ಚಿಸಬಹುದು, ಇದು ಬೆಳವಣಿಗೆಗೆ ಹೊಡೆತ.
      ತೈಲ ಆಮದು ವೆಚ್ಚ ಹೆಚ್ಚಾಗಿ ಕರೆಂಟ್ ಅಕೌಂಟ್ ಡೆಫಿಸಿಟ್ ವಿಸ್ತರಣೆ, ರೂಪಾಯಿ ದುರ್ಬಲಗೊಳ್ಳುವುದು .ಇಂಧನ ಸಬ್ಸಿಡಿ ಹೆಚ್ಚಿಸಬಹುದು. ಏವಿಯೇಷನ್, ಟ್ರಾನ್ಸ್‌ಪೋರ್ಟ್, ಮ್ಯಾನುಫ್ಯಾಕ್ಚರಿಂಗ್ ವೆಚ್ಚಗಳು ಏರುತ್ತವೆ ಇದರಿಂದ ಉತ್ಪನ್ನ ಬೆಲೆಗಳು ಹೆಚ್ಚು.
    • ಸದ್ಯಕ್ಕೆ ಎಲ್ಲವೂ ಸ್ಥಿರವಾಗಿದೆ ಏಕೆಂದರೆ ಮಾರುಕಟ್ಟೆಗಳು ವೀಕೆಂಡ್‌ನಲ್ಲಿ ಮುಚ್ಚಿವೆ. ಸೋಮವಾರ (ಮಾರ್ಚ್ 2) ತೈಲ ಬೆಲೆ ಏರಿಕೆಯ ನಂತರ ನಿಜವಾದ ಪರಿಣಾಮ ಕಾಣಿಸಿಕೊಳ್ಳುತ್ತದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ನಾಳೆ ಮಂಗಳೂರಲ್ಲಿ ಇಡೀ ದಿನ ಕರೆಂಟಿಲ್ಲ Power Cut.. ಎಲ್ಲೆಲ್ಲಿ?
    ಕುಂದಾಪುರದಲ್ಲಿ ಎರಡು ಮಕ್ಕಳ ತಾಯಿ ನಾಪತ್ತೆ. ಸ್ನೇಹಿತರ ಜೊತೆಯಲ್ಲಿ ಹೋಗಿರುವ ಶಂಕೆ
    ಮಂಗಳೂರಲ್ಲಿ 10ನೇ ತರಗತಿ ತಾಯಿಯಿಲ್ಲದ ಬಾಲಕಿ ಮೇಲೆ ಜಲೀಲ್ ಎಂಬಾತ 7 ತಿಂಗಳು ನಿರಂತರ ದೌರ್ಜನ್ಯ! 
    ಲಾರ್ಡ್ಸ್‌ನಲ್ಲಿ ಭಾರತ ಮಹಿಳಾ ತಂಡದ ಐತಿಹಾಸಿಕ ಟೆಸ್ಟ್ ಜಯ; ದೇಶದಲ್ಲಿ ಕ್ರಿಕೆಟ್‌ನಿಂದ ಟೆನಿಸ್‌ವರೆಗೆ… ಕ್ರೀಡೆಗಳತ್ತ ಹೆಚ್ಚುತ್ತಿರುವ ಆಸಕ್ತಿ..!
    ಪುತ್ತೂರಿನ ಜಾತ್ರೆಯಲ್ಲಿ ಸುಡುಮದ್ದು ದುರಂತ-ಹಲವರಿಗೆ ಗಾಯ..
    ಸಂಸತ್ತಿನಲ್ಲಿ ಇತಿಹಾಸ ಸೃಷ್ಟಿಸುವ ಚರ್ಚೆ-ಮಹಿಳಾ ಮೀಸಲು ಬಿಲ್ಲಿನ ಸುತ್ತ ಕಂಗೊಳಿಸಿದ ಸಂಸತ್ !
    ಬೇಜವಾಬ್ದಾರಿ ಸ್ಟೇಟ್ಮೆಂಟ್ ಪಾಸ್ ಮಾಡಿದ ಕೇಂದ್ರ ಸಚಿವ- ಜೋಶಿ
    ಸಂಸತ್ತಿನಲ್ಲಿ ಪ್ರಶ್ನೆ ಎದುರಿಸಲು ಆಗದೆ,  ಪ್ರಶ್ನೆಯನ್ನೇ ಕೇಳದಂತೆ ಮಾಡಿದರು – ರಾಹುಲ್ ಗಾಂಧಿ
    ಹತ್ತು ವರ್ಷದಿಂದ ಪೊಲೀಸರಿಗೆ ಬೇಕಾದ ಆರೋಪಿಯನ್ನು ಕೊನೆಗೂ ಬಂಧಿಸಿದ ಪೊಲೀಸರು
    ಬಂಟ್ವಾಳ ಬೆಚ್ಚಿಬೀಳಿಸಿದ ಯುವತಿಯಭೀಕರ ಹತ್ಯೆ: ಬಸ್ ನಿಲ್ದಾಣದಲ್ಲೇ ಬೆನ್ನಟ್ಟಿ ಇರಿದ ಕೊಲೆ ಆರೋಪಿ ಚೇತನ್ ಸುಳಿವು..!
    ₹119 ಕೋಟಿ ವ್ಯತ್ಯಾಸ ಸಣ್ಣ ವಿಷಯನಾ….ಏನಿದು ತಲೈವಾ..!
    ಗುಜರಾತ್ ಪೊಲೀಸರಲ್ಲಿ ಆಗದ ಕೆಲಸ, ಒಬ್ಬ ಮಂತ್ರವಾದಿಯಿಂದ ಆಯ್ತು
    ಮರಣದಂಡನೆಗೆ ಗುರಿಯಾದ ಅಪರಾಧಿಯಿಂದ ಮಾಧ್ಯಮ ಪ್ರತಿನಿಧಿಗಳ ಮೇಲೆ ಏಕಾಏಕಿ ಹಲ್ಲೆ: ಸ್ಥಳದಲ್ಲಿ ಕೆಲಕಾಲ ಉದ್ವಿಗ್ನತೆ
    ಎಲ್ಲರಿಗೂ ಯುಗಾದಿ ಹಬ್ಬ… ಆದರೆ ಈ ಗ್ರಾಮಗಳಲ್ಲಿ ಭಯ ಮೌನ…ಹಬ್ಬ ಇಲ್ಲ…!ಒಂದು ವಿಚಿತ್ರ ಕಥೆ!
    ಡ್ರೋನ್ ದಾಳಿಯ ನಂತರ ಬಹ್ರೇನ್‌ನಲ್ಲಿ ಕನಿಷ್ಠ 32 ಜನರಿಗೆ ಗಾಯ
    ಶಾಲಾ ವಾಹನಗಳ ಸುರಕ್ಷತೆ ಬಗ್ಗೆ ಜೆಡಿಎಸ್ ಆಗ್ರಹ
    ಕೇಂದ್ರ ಸಚಿವ ಸೋಮಣ್ಣರ ವಿರುದ್ಧ  ವಾಗ್ದಾಳಿ: “ನಡೆದು ಬಂದ ದಾರಿ ಮರೆತು ಮಾತನಾಡಬೇಡಿ”
    ಕೇರಳ ಹೈಕೋರ್ಟ್ ಬಿಗ್ ರೂಲಿಂಗ್: ಅಧಿಕೃತ ಪ್ರಮಾಣವಚನದಲ್ಲಿ ‘ದೇವತೆಗಳು’, ‘ಹುತಾತ್ಮರ’ ಹೆಸರು ಹೇಳುವಾಗಿಲ್ಲ…
    ಫ್ರಿಡ್ಜ್ ರಿಪೇರಿಗೆ ಬಂದವ ಮನೆ ಲೂಟಿ ಪರಾರಿ…!ಬಿ ಅಲರ್ಟ್ ‼️
    ಖಾಸಗಿ ಆಸ್ಪತ್ರೆಯ ಜೊತೆಗಿನ ಒಪ್ಪಂದ ರದ್ದುಪಡಿಸಲು ಆಗ್ರಹಿಸಿ ಪ್ರತಿಭಟನೆ
    ಇನ್ಮುಂದೆ ಏರ್‌ಪೋರ್ಟ್‌ನಲ್ಲಿ ಇಷ್ಟ ಬಂದಂತೆ ವಿಡಿಯೋ ಮಾಡುವಂತಿಲ್ಲ! ಇನ್ಸ್ಟಾರೀಲ್ಸ್, ವಿಡಿಯೋ ಮಾಡಿದರೆ ‘ನೋ-ಫ್ಲೈ ಲಿಸ್ಟ್’ ಸೇರುವ ಮುನ್ನೆಚ್ಚರಿಕೆ ನೀಡಿದ DGCA! ಲೇಟೆಸ್ಟ್ ಅಪ್ಡೇಟ್ ಹೊಸ ರೂಲ್ಸ್ ಇಲ್ಲಿದೆ.. ಓದಿ..
    ಡೈಮಂಡ್ ನೆಕ್ಲೇಸ್, ಕಿವಿಯೋಲೆಗಳು, ಚಿನ್ನದ ಚೈನ್, ಪ್ಲಾಟಿನಂ ಉಂಗುರ ಕಳವು…!
    ಕರಾವಳಿಯಲ್ಲಿ ವಾಪಸ್ ಆದ ಮುಂಗಾರು: ಜುಲೈ 6ರವರೆಗೆ ಆರೆಂಜ್ ಅಲರ್ಟ್ – ಜನರಿಗೆ ಎಚ್ಚರಿಕೆ
    ಬರದ ಭೀತಿ ಎದುರಿಸುತ್ತಿರುವ ಕರ್ನಾಟಕ ,ಮಳೆ ಇಲ್ಲ… ಬೆಳೆ ಇಲ್ಲ… ಅನ್ನ ಇಲ್ಲ!,ಕೇಂದ್ರಕ್ಕೆ ನೆರವಿಗಾಗಿ ಡಿ ಕೆ ಶಿ ಮನವಿ
    ಬಾಲಗರ್ಭಿಣಿಯರ ಸಂಖ್ಯೆ 5975….!!
    ಕುಂದಾಪುರ ಗಂಗೊಳ್ಳಿಯಲ್ಲಿ ಕತ್ತಿ  ದೊಣ್ಣೆಗಳಿಂದ ಮಾರಾಮಾರಿ; ವೈರಲ್ ವಿಡಿಯೋದಿಂದ ಪ್ರಕರಣಕ್ಕೆ ಹೊಸ ತಿರುವು?
    ಪಿಸ್ತೂಲ್ ತೋರಿಸಿ ಬೆದರಿಸಿ ಪರಾರಿಯಾಗಿದ್ದ ಯುವಕ ಬಂಧನ
    ಹುಡುಗಾಟಿಕೆ ಆಡುತ್ತಿರುವ ರಾಮಲಿಂಗಾರೆಡ್ಡಿ-ಕ್ಷೇತ್ರದ ಜನರಲ್ಲಿ ಅಸಮಾಧಾನ
    ಸಾಲು ಸಾಲು ಹೀನ ಕೃತ್ಯದ ಆರೋಪಿ….ಸೈನೈಡ್ ಮೋಹನ್ ಖುಲಾಸೆ! ಸಾಕ್ಷ್ಯಗಳ ಕೊಂಡಿ ಜೋಡಿಸಲು ಪ್ರಾಸಿಕ್ಯೂಷನ್ ವಿಫಲ
    ಕರ್ನಾಟಕ ಎಸ್‌ಎಸ್‌ಎಲ್‌ಸಿ 2026 ಫಲಿತಾಂಶ: ಇತಿಹಾಸದ ಅತ್ಯಧಿಕ ಉತ್ತೀರ್ಣ ಪ್ರಮಾಣ ಮತ್ತು ಟಾಪರ್‌ಗಳ ಸಾಧನೆ