📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ತೈಲ, ಯುದ್ಧ ಮತ್ತು ಆರ್ಥಿಕತೆ: ಭಾರತದ ಮುಂದೆ ಹೊಸ ಸವಾಲು


ಫೆಬ್ರವರಿ 28, 2026 ರಂದು ಅಮೆರಿಕಾ ಮತ್ತು ಇಸ್ರೇಲ್ ಸಂಯುಕ್ತವಾಗಿ ಇರಾನ್ ಮೇಲೆ ದೊಡ್ಡ ಮಟ್ಟದ ದಾಳಿ ನಡೆಸಿದ್ದು, ಇದನ್ನು Operation Epic Fury (ಅಮೆರಿಕಾ) ಮತ್ತು Roaring Lion (ಇಸ್ರೇಲ್) ಎಂದು ಕರೆಯಲಾಗಿದೆ. ಇದರ ಉದ್ದೇಶ ಇರಾನ್‌ನ ನ್ಯೂಕ್ಲಿಯರ್ ಪವರ್ ನಾಶಗೊಳಿಸುವುದು, ಬ್ಯಾಲಿಸ್ಟಿಕ್ ಮಿಸೈಲ್ ಸಾಮರ್ಥ್ಯವನ್ನು ಕಡಿಮೆ ಮಾಡುವುದು ಮತ್ತು ರೆಜಿಮ್ ಚೇಂಜ್ ಅಂದ್ರೆ ಆಡಳಿತ ಬದಲಾವಣೆ ತರುವುದು ,ಹೀಗಂತ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇದನ್ನು ಘೋಷಿಸಿದ್ದಾರೆ.

ಈ ಮದ್ಯೆ ಇರಾನ್ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಾಮೆನಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮ ಮತ್ತು ಟ್ರಂಪ್ ದೃಢಪಡಿಸಿದ್ದಾರೆ. ದಾಳಿಯಲ್ಲಿ ಇರಾನ್‌ನ 40ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇಸ್ರೇಲ್ 200ಕ್ಕೂ ಹೆಚ್ಚು ವಿಮಾನಗಳೊಂದಿಗೆ 500 ಗುರಿಗಳ ಮೇಲೆ ದಾಳಿ ನಡೆಸಿದೆ. ಇರಾನ್ ಪ್ರತಿಕ್ರಿಯೆಯಾಗಿ ಇಸ್ರೇಲ್ ಮತ್ತು ಗಲ್ಫ್ ದೇಶಗಳಲ್ಲಿರುವ ಅಮೆರಿಕಾ ಸೈನಿಕ ನೆಲೆಗಳ ಮೇಲೆ ಬ್ಯಾಲಿಸ್ಟಿಕ್ ಮಿಸೈಲ್ ಮತ್ತು ಡ್ರೋನ್ ದಾಳಿ ನಡೆಸಿದೆ.

ಯುದ್ಧದ ಸಾವುನೋವುಗಳು
ಇರಾನ್lಲ್ಲಿ : ಸರ್ಕಾರಿ ವರದಿಗಳ ಪ್ರಕಾರ 200ಕ್ಕೂ ಹೆಚ್ಚು ಸಾವುಗಳು ಕೆಲವು ವರದಿಗಳಲ್ಲಿ 100ಕ್ಕೂ ಹೆಚ್ಚು ಮಕ್ಕಳು ಒಂದು ಶಾಲೆಯ ಮೇಲಿನ ದಾಳಿಯಲ್ಲಿ ಸತ್ತಿದ್ದಾರೆ. ಹಲವು ನಾಗರಿಕರು ಮತ್ತು ಸೈನಿಕರು ಸೇರಿದ್ದಾರೆ.

  • ಇಸ್ರೇಲ್: ಇರಾನ್ ಪ್ರತಿದಾಳಿಯಲ್ಲಿ 1 ಮಹಿಳೆ ಸತ್ತಿದ್ದಾರೆ, 121 ಗಾಯಾಳುಗಳು.
  • ಅಮೆರಿಕಾ: ಯಾವುದೇ ಅಮೆರಿಕನ್ ಸೈನಿಕ ಸಾವುಗಳು ವರದಿಯಾಗಿಲ್ಲ .
  • ಇನ್ನೂ UAEಯಲ್ಲಿ 1 ಸಾವು, ಗಲ್ಫ್ ದೇಶಗಳಲ್ಲಿ ಕೆಲವು ಗಾಯಗಳು.

ಇರಾನ್ ಮುಖ್ಯವಾಗಿ ತನ್ನ ಪ್ರಾಕ್ಸಿ ಗುಂಪುಗಳೊಂದಿಗೆ (Axis of Resistance) ಹೋರಾಡುತ್ತಿದೆ:
-ಯೆಮೆನ್ ನ ಹೌತಿಗಳು – ರೆಡ್ ಸೀ ದಾಳಿಗಳನ್ನು ಮತ್ತೆ ಆರಂಭಿಸಿದ್ದಾರೆ.
ಲೆಬನಾನ್ ನ ಹಿಜ್ಬೊಲ್ಲಾ ,
ಗಾಜಾ ದ ಹಮಾಸ್
ಇರಾಕ್ ನ ಪಾಪ್ಯುಲರ್ ಫೋರ್ಸ್ ಮುಂತಾದವು.

  • ಈ ನಡುವೇ ರಷ್ಯಾ ಮತ್ತು ಚೀನಾ ಆಯುಧ/ರಾಜಕೀಯವಾಗಿ ಸೀಮಿತ ಬೆಂಬಲ ಸೂಚಿಸಿದೆ .ಯಾವುದೇ ಪ್ರಮುಖ ಸ್ವತಂತ್ರ ದೇಶ ಸೈನಿಕವಾಗಿ ನೇರವಾಗಿ ಇರಾನ್ ಗೆ ಬೆಂಬಲ ಸೂಚಿಸಿಲ್ಲ. ಆದರೆ ಪ್ರಮುಖವಾಗಿ ಅಮೆರಿಕ ಇಸ್ರೇಲ್ ಗೆ ರಕ್ಷಣಾತ್ಮಕ ಬೆಂಬಲವಾಗಿ ಸೌದಿ ಅರೇಬಿಯಾ, UAE, ಬಹ್ರೈನ್, ಕುವೈತ್, ಕತಾರ್, ಜೋರ್ಡಾನ್ – ಇರಾನ್ ದಾಳಿಗಳನ್ನು ಖಂಡಿಸಿ, ಅಮೆರಿಕಾ ನೆಲೆಗಳನ್ನು ರಕ್ಷಿಸಲು ಸಹಾಯ ಮಾಡುತ್ತಿವೆ.
  • ಯುನೈಟೆಡ್ ಕಿಂಗ್‌ಡಮ್ – ಫೈಟರ್ ಜೆಟ್‌ಗಳಂತಹ ಸೀಮಿತ ಬೆಂಬಲ .
    ಇತರ ಪಶ್ಚಿಮ ದೇಶಗಳು ಸೈನಿಕ ಬೆಂಬಲ ನೀಡಿಲ್ಲ.

ಜಾಗತಿಕ ಪರಿಣಾಮಗಳು ಏನು?
ಇರಾನ್‌ನ ನ್ಯೂಕ್ಲಿಯರ್ ಮತ್ತು ಮಿಸೈಲ್ ಪರಮಾಣು ಭಯವನ್ನು ಕಡಿಮೆ ಮಾಡಬಹುದು, ಇಸ್ರೇಲ್ ಮತ್ತು ಗಲ್ಫ್ ದೇಶಗಳ ಸುರಕ್ಷತೆ ಹೆಚ್ಚಿಸಬಹುದು.

  • ಇರಾನ್ ರೆಜಿಮ್ ಬದಲಾವಣೆಯಿಂದ ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ವಾಣಿಜ್ಯ ಅವಕಾಶಗಳು ಹೆಚ್ಚಾಗಬಹುದು.
  • ಇರಾನ್ ಪ್ರಾಕ್ಸಿ ಗುಂಪುಗಳ ದಾಳಿಗಳು ಕಡಿಮೆಯಾಗಬಹುದು.

ನಷ್ಟಗಳು ಅಥವಾ ವ್ಯತಿರಿಕ್ತ ಪರಿಣಾಮಗಳು
ಯುದ್ದಕ್ಕೆ ಪ್ರತೀಕಾರವಾಗಿ ತನ್ನ ಏಕೈಕ ಜಲಸಂಧಿ ಸ್ಟ್ರೇಟ್ ಆಫ್ ಹಾರ್ಮುಜ್ ಬಂದ್ ಮಾಡಿದೆ.ಇದರಿಂದ ಯಾವುದೇ ತೈಲ ಹಡಗುಗಳು ಗಲ್ಫ್ ರಾಷ್ಟ್ರಗಳ ಪ್ರಮುಖ ಕೊಂಡಿ ಕಳಚಿರುವುದರಿಂದ ಕಚ್ಚಾತೈಲ ಏರುಪೇರಾಗಲಿದೆ.

  • ಇದರಿಂದ ತೈಲ ಬೆಲೆಗಳ ಏರಿಕೆಯಾಗಿ (ಸ್ಟ್ರೇಟ್ ಆಫ್ ಹಾರ್ಮುಜ್ ಅಡಚಣೆಯಿಂದ), ಜಾಗತಿಕ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಬಹುದು
  • ಲೆಬನಾನ್, ಇರಾಕ್, ಯೆಮೆನ್ ಸೇರಿದಂತೆ ಪ್ರಾದೇಶಿಕ ಯುದ್ಧ ವಿಸ್ತರಣೆಯ ಅಪಾಯ
  • ನಾಗರಿಕ ಸಾವುನೋವುಗಳು ಜಾಸ್ತಿ ಯಾಗಿ ಮಾನವೀಯ ಸಂಕಷ್ಟಗಳು ಎದುರಾಗ್ಬಹುದು.
  • ರಷ್ಯಾ/ಚೀನಾ ಜೊತೆ ಉದ್ವಿಗ್ನತೆ ಹೆಚ್ಚಾಗಬಹುದಾ!

ಯುದ್ಧ ಇನ್ನೂ ಆರಂಭಿಕ ಹಂತದಲ್ಲಿದ್ದು, UN ಸಭೆಗಳು ಮತ್ತು ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿವೆ. ಸ್ಥಿತಿ ಬದಲಾಗಬಹುದು.

ದಾಳಿ ಮತ್ತು ತೈಲ ಬೆಲೆ ಏರಿಕೆಯಿಂದ ಸಂಭಾವ್ಯ ಪರಿಣಾಮ
ಭಾರತ 80-85% ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ, ಮತ್ತು ಸುಮಾರು 45-50% ಸ್ಟ್ರೇಟ್ ಆಫ್ ಹಾರ್ಮುಜ್ ಜಲಸಂಧಿ ಮೂಲಕ ಬರುತ್ತದೆ (ಮಧ್ಯಪ್ರಾಚ್ಯದಿಂದ). ಇರಾನ್ ಪ್ರತಿದಾಳಿ ಅಥವಾ ಸ್ಟ್ರೇಟ್ ಅಡಚಣೆಯಿಂದ ತೈಲ ಬೆಲೆಗಳು ಏರುತ್ತವೆ, ಇದು ಭಾರತದ ಆರ್ಥಿಕ ಬೆಳವಣಿಗೆಗೆ ಹೊಡೆತ. ಸ್ಟ್ರೇಟ್ ಆಫ್ ಹಾರ್ಮುಜ್ ಸ್ಥಿತಿ ನಿರ್ಣಾಯಕ; ಅಡಚಣೆಯಾದರೆ ದೊಡ್ಡ ಆಘಾತ. ಸ್ಥಿತಿಯನ್ನು ಗಮನಿಸಿ ,RBI ಮತ್ತು ಸರ್ಕಾರದ ನಿರ್ಧಾರಗಳು

ಪರಿಣಾಮಗಳು ಅಂದ್ರೆ ಇದರಿಂದ ಪೆಟ್ರೋಲ್/ಡೀಸಲ್ ಬೆಲೆಗಳು ₹3-5 ಏರಬಹುದು, ಸಾಗಣೆ, ಉತ್ಪಾದನೆ ವೆಚ್ಚಗಳು ಹೆಚ್ಚಾಗಬಹುದು. ಗ್ಲೋಬಲ್ ಇನ್ಫ್ಲೇಷನ್ ಆದರೆ ಭಾರತದಂತಹ ಆಮದುದಾರ ದೇಶಕ್ಕೆ ಹೆಚ್ಚು ತೊಂದರೆ.

  • ಇದು ಆಹಾರ, ಸಾಗಣೆ, ಉತ್ಪನ್ನಗಳ ಬೆಲೆಗಳನ್ನು ಏರಿಸಿ, ಆರ್ಥಿಕತೆಯನ್ನು ಮಂದಗೊಳಿಸಬಹುದು.
  • RBI ಬಡ್ಡಿ ದರಗಳನ್ನು ಕಡಿಮೆ ಮಾಡುವುದನ್ನು ನಿಲ್ಲಿಸಬಹುದು ಅಥವಾ ಹೆಚ್ಚಿಸಬಹುದು, ಇದು ಬೆಳವಣಿಗೆಗೆ ಹೊಡೆತ.
    ತೈಲ ಆಮದು ವೆಚ್ಚ ಹೆಚ್ಚಾಗಿ ಕರೆಂಟ್ ಅಕೌಂಟ್ ಡೆಫಿಸಿಟ್ ವಿಸ್ತರಣೆ, ರೂಪಾಯಿ ದುರ್ಬಲಗೊಳ್ಳುವುದು .ಇಂಧನ ಸಬ್ಸಿಡಿ ಹೆಚ್ಚಿಸಬಹುದು. ಏವಿಯೇಷನ್, ಟ್ರಾನ್ಸ್‌ಪೋರ್ಟ್, ಮ್ಯಾನುಫ್ಯಾಕ್ಚರಿಂಗ್ ವೆಚ್ಚಗಳು ಏರುತ್ತವೆ ಇದರಿಂದ ಉತ್ಪನ್ನ ಬೆಲೆಗಳು ಹೆಚ್ಚು.
  • ಸದ್ಯಕ್ಕೆ ಎಲ್ಲವೂ ಸ್ಥಿರವಾಗಿದೆ ಏಕೆಂದರೆ ಮಾರುಕಟ್ಟೆಗಳು ವೀಕೆಂಡ್‌ನಲ್ಲಿ ಮುಚ್ಚಿವೆ. ಸೋಮವಾರ (ಮಾರ್ಚ್ 2) ತೈಲ ಬೆಲೆ ಏರಿಕೆಯ ನಂತರ ನಿಜವಾದ ಪರಿಣಾಮ ಕಾಣಿಸಿಕೊಳ್ಳುತ್ತದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

“ಅಪ್ಪಾ” ಎಂದು ಕರೆದವನ ಕೈಯಿಂದಲೇ 18 ತಿಂಗಳ ಕಂದಮ್ಮನ ದೇಹದ ಮೇಲೆ 91 ಗಾಯದ ಗುರುತು – ಅಮಾನುಷ ಹತ್ಯೆ!..
ಯುವ ಜನಾಂಗದ ಹೋರಾಟ ಕಿಚ್ಚಾಗದಂತೆ ನೋಡಿಕೊಳ್ಳಿ
ಇಂದು ಬೆಳ್ಳಂ ಬೆಳಗ್ಗೆ ಪಲ್ಟಿ ಯಾದ ಬಸ್… ಒಬ್ಬ ಸಾವು ಹಲವರಿಗೆ ಗಾಯ
ಡಿಕೆಎಮುಲ್‌ನಿಂದ ₹1,270 ಕೋಟಿ ದಾಖಲೆ ಬೆಳವಣಿಗೆ ಹೊಸ ಮೈಲುಗಲ್ಲು..!
ಮೈ ಜುಮ್ಮೆನ್ನಿಸುವ ಬೈಕ್–ಲಾರಿ ಡಿಕ್ಕಿ ಅಪಘಾತ… ಕ್ಷಣಾರ್ಧದಲ್ಲೇ ಜೀವ ಹೋದ ಹೃದಯವಿದ್ರಾವಕ ರಸ್ತೆ ದುರಂತ
ಮೊಸಾದ್ ಏಜೆಂಟ್ ಇಸ್ಮಾಯಿಲ್ ಖಾನಿಯಿಂದ ಇರಾನಿ ಸರ್ವೋಚ್ಛ ನಾಯಕನ  ಹತ್ಯೆ
ಇಂದು ಮಾಜಿ ಸಚಿವರಿಂದ ಸೌಹಾರ್ದ ಇಫ್ತಾರ್ ಕೂಟ 
ನಿದ್ರೆಯಲ್ಲಿದ್ದ ಪುಟ್ಟ ಕಂದಮ್ಮಗಳು ಮತ್ತೆ ಏಳಲೇ ಇಲ್ಲ… ಕಾಂಪೌಂಡ್ ಗೋಡೆ ಕುಸಿದು ಮಂಗಳೂರಿನಲ್ಲಿ ಹೃದಯವಿದ್ರಾವಕ ದುರಂತ!
ಮೀನುಗಳ ಮಾರಣಹೋಮ, ಕಪ್ಪಾದ ನೀರು,ಉಸಿರುಗಟ್ಟಿಸುವ ದುರ್ವಾಸನೆ — ಜನರ ಬದುಕಿಗೆ ದೊಡ್ಡ ಎಚ್ಚರಿಕೆ!
“ಬಾದಾಮಿ ತಿಂದರೆ ಮೆಮೊರಿ ಹೆಚ್ಚಾಗಿ, ನನ್ನ ಫೈಲ್ ಎಲ್ಲಿ ಇದೆ ಎಂದು ನೆನಪಾಗಬಹುದು”-ಹಣ ಕೊಡದೇ ಕೆಲಸ ಆಗೋದಿಲ್ಲ ಎಂಬ ಭ್ರಷ್ಟ ವ್ಯವಸ್ಥೆ ಇನ್ನೂ ಬಲವಾಗಿ ಜೀವಂತವಾಗಿದೆ…!
ಸಾಲ ಮರುಪಾವತಿ ವಿಚಾರಕ್ಕೆ ಜಾಲ್ಸೂರು ರಸ್ತೆಯಲ್ಲೇ ಗಲಾಟೆ ಹಲ್ಲೆ
ಅಮೇರಿಕಾಕ್ಕೆ ಅಷ್ಟು ಧೈರ್ಯದಿಂದ ಎಲ್ಲಿಂದ ಬಂತು?
ಬಂಟ್ವಾಳದಲ್ಲಿ ಬೆಚ್ಚಿಬೀಳಿಸಿದ ಮಚ್ಚು ದಾಳಿ: ಕಾಲೇಜಿಗೆ ತೆರಳುತ್ತಿದ್ದ ಪಿಯುಸಿ ವಿದ್ಯಾರ್ಥಿನಿ ಮೇಲೆ ಹಲ್ಲೆ; ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು
ಕನಸು ಹೊತ್ತ ಯುವತಿಯರ ಮೇಲೆ ಕಾಮುಕ ಸಮಾಜದ ಕಣ್ಣು! ಮೌನವಾಗಿರುವ ಸಾವಿರಾರು ಕಥೆಗಳಲ್ಲೊಂದು ಬೆಂಗಳೂರು ಘಟನೆ!
ಸಾಲದ ಭಾರವೂ ಶಿಸ್ತಿನ ಮುಂದೆ ಸೋಲುತ್ತದೆ…! ಇದಕ್ಕೆ ಸಾಕ್ಷಿಯೇ ಸಾಕ್ಷಿ..!₹80 ಲಕ್ಷ ಸಾಲ-1 ವರ್ಷ ಮತ್ತು ಒಂದು ಡೆಡಿಕೇಟೆಡ್ ಟಾರ್ಗೆಟ್..!
ಕಾಂಗ್ರೆಸ್ ದೇಶದ ಹಿತಾಸಕ್ತಿಯ ವಿರುದ್ಧ ನಡೆದುಕೊಳ್ಳುತ್ತಿದೆ- ಪ್ರಧಾನಿ ಮೋದಿ ಆರೋಪ
8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
35 ವಾರಂಟ್ ಇದ್ದ ಆರೋಪಿಯು ವಿದೇಶದಿಂದ ಮರಳುತ್ತಿದ್ದಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ
ವಿಷಪ್ರಾಶನ  ಪ್ರಕರಣದಲ್ಲಿ ಕಾರ್ಕಳ ಗಜರಿಯ ಹಾಸ್ಪಿಟಲ್ ತಪ್ಪು ಮಾಡಿತೇ?
ಲಕ್ನೋ ಕೋಚಿಂಗ್ ಸೆಂಟರ್‌ನಲ್ಲಿ ಭೀಕರ ಬೆಂಕಿ,15 ವಿದ್ಯಾರ್ಥಿಗಳು ಸಜೀವ ದಹನ ಹೃದಯವಿದ್ರಾವಕ ದುರಂತ
 “ತಪ್ಪು ಮಾಡಿದ್ರೆ ಕೈ-ಕಾಲು ಕತ್ತರಿಸ್ಬೇಕು, ಆಗಲೇ ಕಾನೂನಿನ ಭಯ ಬರೋದು! “ಗಲ್ಫ್ ದೇಶಗಳ ಮಾದರಿ ಶಿಕ್ಷೆ ಜಾರಿಯಾಗ್ಬೇಕು ಅನ್ನೋ ನ್ಯಾಯಮೂರ್ತಿಗಳ ನಿಲುವಿಗೆ ಇಡೀ ರಾಜ್ಯವೇ ಜೈ ಅಂತಿದೆ!
ಪುತ್ತೂರು ಅತ್ಯಾಚಾರ ಪ್ರಕರಣ: ಹೈಕೋರ್ಟ್‌ನಲ್ಲಿ ರಾಜಿ ಸಂಧಾನ ಪ್ರಸ್ತಾಪ..!
ಕರ್ನಾಟಕ ಎಸ್‌ಎಸ್‌ಎಲ್‌ಸಿ 2026 ಫಲಿತಾಂಶ: ಇತಿಹಾಸದ ಅತ್ಯಧಿಕ ಉತ್ತೀರ್ಣ ಪ್ರಮಾಣ ಮತ್ತು ಟಾಪರ್‌ಗಳ ಸಾಧನೆ
ದ.ಕ ಜಿಲ್ಲಾಡಳಿತದಿಂದ ಮಂಗಳಮುಖಿಯರಲ್ಲದವರಿಗೂ ಗುರುತಿನ ಚೀಟಿ ವಿತರಣೆ – ಗಂಭೀರ ಆರೋಪ
ಗಂಡನ ಮನೆಯಿಂದ ಯುವತಿಯನ್ನು ಎಳೆದೊಯ್ದರು
ಹೊರಗೆ ಕ್ಯಾಂಟೀನ್…ಆದ್ರೆ ಒಳಗೆ ನಡೆಯುತ್ತಿತ್ತು ಬೇರೆದ್ದೇ ಆಟ..!ಬಯಲಾಯ್ತು ಬೆಚ್ಚಿಬೀಳಿಸುವ ದಂಧೆ. 
ರೇಪ್ ಆರೋಪಿಗೆ ಹೂಮಳೆ, ಹೂವಿನಹಾರ,ಘೋಷಣೆ, ರಾಜಕೀಯ ರೀತಿ ರೋಡ್ ಶೋ! ಉತ್ತರ ಪ್ರದೇಶದ ವೈರಲ್ ವಿಡಿಯೋಗೆ ದೇಶಾದ್ಯಂತ ಆಕ್ರೋಶ
ತಮಿಳುನಾಡು ಮುಖ್ಯಮಂತ್ರಿ ವಿಜಯ್, ಚಧುರಂಗದಾಟದಲ್ಲಿ ಲಾಂಗ್ ಟೈಮ್ ಉಳಿಯುವರೇ?
Anticipatory Bail ಗೆ ಹೊಸ ರಕ್ಷಣೆ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಆಕ್ಷೇಪ
ಸರ್ಕಾರಿ ವೈದ್ಯರ ಅನರ್ದಿಷ್ಟಾವಧಿ ಮುಷ್ಕರ ರದ್ದು