📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ತೈಲ, ಯುದ್ಧ ಮತ್ತು ಆರ್ಥಿಕತೆ: ಭಾರತದ ಮುಂದೆ ಹೊಸ ಸವಾಲು


ಫೆಬ್ರವರಿ 28, 2026 ರಂದು ಅಮೆರಿಕಾ ಮತ್ತು ಇಸ್ರೇಲ್ ಸಂಯುಕ್ತವಾಗಿ ಇರಾನ್ ಮೇಲೆ ದೊಡ್ಡ ಮಟ್ಟದ ದಾಳಿ ನಡೆಸಿದ್ದು, ಇದನ್ನು Operation Epic Fury (ಅಮೆರಿಕಾ) ಮತ್ತು Roaring Lion (ಇಸ್ರೇಲ್) ಎಂದು ಕರೆಯಲಾಗಿದೆ. ಇದರ ಉದ್ದೇಶ ಇರಾನ್‌ನ ನ್ಯೂಕ್ಲಿಯರ್ ಪವರ್ ನಾಶಗೊಳಿಸುವುದು, ಬ್ಯಾಲಿಸ್ಟಿಕ್ ಮಿಸೈಲ್ ಸಾಮರ್ಥ್ಯವನ್ನು ಕಡಿಮೆ ಮಾಡುವುದು ಮತ್ತು ರೆಜಿಮ್ ಚೇಂಜ್ ಅಂದ್ರೆ ಆಡಳಿತ ಬದಲಾವಣೆ ತರುವುದು ,ಹೀಗಂತ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇದನ್ನು ಘೋಷಿಸಿದ್ದಾರೆ.

ಈ ಮದ್ಯೆ ಇರಾನ್ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಾಮೆನಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮ ಮತ್ತು ಟ್ರಂಪ್ ದೃಢಪಡಿಸಿದ್ದಾರೆ. ದಾಳಿಯಲ್ಲಿ ಇರಾನ್‌ನ 40ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇಸ್ರೇಲ್ 200ಕ್ಕೂ ಹೆಚ್ಚು ವಿಮಾನಗಳೊಂದಿಗೆ 500 ಗುರಿಗಳ ಮೇಲೆ ದಾಳಿ ನಡೆಸಿದೆ. ಇರಾನ್ ಪ್ರತಿಕ್ರಿಯೆಯಾಗಿ ಇಸ್ರೇಲ್ ಮತ್ತು ಗಲ್ಫ್ ದೇಶಗಳಲ್ಲಿರುವ ಅಮೆರಿಕಾ ಸೈನಿಕ ನೆಲೆಗಳ ಮೇಲೆ ಬ್ಯಾಲಿಸ್ಟಿಕ್ ಮಿಸೈಲ್ ಮತ್ತು ಡ್ರೋನ್ ದಾಳಿ ನಡೆಸಿದೆ.

ಯುದ್ಧದ ಸಾವುನೋವುಗಳು
ಇರಾನ್lಲ್ಲಿ : ಸರ್ಕಾರಿ ವರದಿಗಳ ಪ್ರಕಾರ 200ಕ್ಕೂ ಹೆಚ್ಚು ಸಾವುಗಳು ಕೆಲವು ವರದಿಗಳಲ್ಲಿ 100ಕ್ಕೂ ಹೆಚ್ಚು ಮಕ್ಕಳು ಒಂದು ಶಾಲೆಯ ಮೇಲಿನ ದಾಳಿಯಲ್ಲಿ ಸತ್ತಿದ್ದಾರೆ. ಹಲವು ನಾಗರಿಕರು ಮತ್ತು ಸೈನಿಕರು ಸೇರಿದ್ದಾರೆ.

  • ಇಸ್ರೇಲ್: ಇರಾನ್ ಪ್ರತಿದಾಳಿಯಲ್ಲಿ 1 ಮಹಿಳೆ ಸತ್ತಿದ್ದಾರೆ, 121 ಗಾಯಾಳುಗಳು.
  • ಅಮೆರಿಕಾ: ಯಾವುದೇ ಅಮೆರಿಕನ್ ಸೈನಿಕ ಸಾವುಗಳು ವರದಿಯಾಗಿಲ್ಲ .
  • ಇನ್ನೂ UAEಯಲ್ಲಿ 1 ಸಾವು, ಗಲ್ಫ್ ದೇಶಗಳಲ್ಲಿ ಕೆಲವು ಗಾಯಗಳು.

ಇರಾನ್ ಮುಖ್ಯವಾಗಿ ತನ್ನ ಪ್ರಾಕ್ಸಿ ಗುಂಪುಗಳೊಂದಿಗೆ (Axis of Resistance) ಹೋರಾಡುತ್ತಿದೆ:
-ಯೆಮೆನ್ ನ ಹೌತಿಗಳು – ರೆಡ್ ಸೀ ದಾಳಿಗಳನ್ನು ಮತ್ತೆ ಆರಂಭಿಸಿದ್ದಾರೆ.
ಲೆಬನಾನ್ ನ ಹಿಜ್ಬೊಲ್ಲಾ ,
ಗಾಜಾ ದ ಹಮಾಸ್
ಇರಾಕ್ ನ ಪಾಪ್ಯುಲರ್ ಫೋರ್ಸ್ ಮುಂತಾದವು.

  • ಈ ನಡುವೇ ರಷ್ಯಾ ಮತ್ತು ಚೀನಾ ಆಯುಧ/ರಾಜಕೀಯವಾಗಿ ಸೀಮಿತ ಬೆಂಬಲ ಸೂಚಿಸಿದೆ .ಯಾವುದೇ ಪ್ರಮುಖ ಸ್ವತಂತ್ರ ದೇಶ ಸೈನಿಕವಾಗಿ ನೇರವಾಗಿ ಇರಾನ್ ಗೆ ಬೆಂಬಲ ಸೂಚಿಸಿಲ್ಲ. ಆದರೆ ಪ್ರಮುಖವಾಗಿ ಅಮೆರಿಕ ಇಸ್ರೇಲ್ ಗೆ ರಕ್ಷಣಾತ್ಮಕ ಬೆಂಬಲವಾಗಿ ಸೌದಿ ಅರೇಬಿಯಾ, UAE, ಬಹ್ರೈನ್, ಕುವೈತ್, ಕತಾರ್, ಜೋರ್ಡಾನ್ – ಇರಾನ್ ದಾಳಿಗಳನ್ನು ಖಂಡಿಸಿ, ಅಮೆರಿಕಾ ನೆಲೆಗಳನ್ನು ರಕ್ಷಿಸಲು ಸಹಾಯ ಮಾಡುತ್ತಿವೆ.
  • ಯುನೈಟೆಡ್ ಕಿಂಗ್‌ಡಮ್ – ಫೈಟರ್ ಜೆಟ್‌ಗಳಂತಹ ಸೀಮಿತ ಬೆಂಬಲ .
    ಇತರ ಪಶ್ಚಿಮ ದೇಶಗಳು ಸೈನಿಕ ಬೆಂಬಲ ನೀಡಿಲ್ಲ.

ಜಾಗತಿಕ ಪರಿಣಾಮಗಳು ಏನು?
ಇರಾನ್‌ನ ನ್ಯೂಕ್ಲಿಯರ್ ಮತ್ತು ಮಿಸೈಲ್ ಪರಮಾಣು ಭಯವನ್ನು ಕಡಿಮೆ ಮಾಡಬಹುದು, ಇಸ್ರೇಲ್ ಮತ್ತು ಗಲ್ಫ್ ದೇಶಗಳ ಸುರಕ್ಷತೆ ಹೆಚ್ಚಿಸಬಹುದು.

  • ಇರಾನ್ ರೆಜಿಮ್ ಬದಲಾವಣೆಯಿಂದ ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ವಾಣಿಜ್ಯ ಅವಕಾಶಗಳು ಹೆಚ್ಚಾಗಬಹುದು.
  • ಇರಾನ್ ಪ್ರಾಕ್ಸಿ ಗುಂಪುಗಳ ದಾಳಿಗಳು ಕಡಿಮೆಯಾಗಬಹುದು.

ನಷ್ಟಗಳು ಅಥವಾ ವ್ಯತಿರಿಕ್ತ ಪರಿಣಾಮಗಳು
ಯುದ್ದಕ್ಕೆ ಪ್ರತೀಕಾರವಾಗಿ ತನ್ನ ಏಕೈಕ ಜಲಸಂಧಿ ಸ್ಟ್ರೇಟ್ ಆಫ್ ಹಾರ್ಮುಜ್ ಬಂದ್ ಮಾಡಿದೆ.ಇದರಿಂದ ಯಾವುದೇ ತೈಲ ಹಡಗುಗಳು ಗಲ್ಫ್ ರಾಷ್ಟ್ರಗಳ ಪ್ರಮುಖ ಕೊಂಡಿ ಕಳಚಿರುವುದರಿಂದ ಕಚ್ಚಾತೈಲ ಏರುಪೇರಾಗಲಿದೆ.

  • ಇದರಿಂದ ತೈಲ ಬೆಲೆಗಳ ಏರಿಕೆಯಾಗಿ (ಸ್ಟ್ರೇಟ್ ಆಫ್ ಹಾರ್ಮುಜ್ ಅಡಚಣೆಯಿಂದ), ಜಾಗತಿಕ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಬಹುದು
  • ಲೆಬನಾನ್, ಇರಾಕ್, ಯೆಮೆನ್ ಸೇರಿದಂತೆ ಪ್ರಾದೇಶಿಕ ಯುದ್ಧ ವಿಸ್ತರಣೆಯ ಅಪಾಯ
  • ನಾಗರಿಕ ಸಾವುನೋವುಗಳು ಜಾಸ್ತಿ ಯಾಗಿ ಮಾನವೀಯ ಸಂಕಷ್ಟಗಳು ಎದುರಾಗ್ಬಹುದು.
  • ರಷ್ಯಾ/ಚೀನಾ ಜೊತೆ ಉದ್ವಿಗ್ನತೆ ಹೆಚ್ಚಾಗಬಹುದಾ!

ಯುದ್ಧ ಇನ್ನೂ ಆರಂಭಿಕ ಹಂತದಲ್ಲಿದ್ದು, UN ಸಭೆಗಳು ಮತ್ತು ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿವೆ. ಸ್ಥಿತಿ ಬದಲಾಗಬಹುದು.

ದಾಳಿ ಮತ್ತು ತೈಲ ಬೆಲೆ ಏರಿಕೆಯಿಂದ ಸಂಭಾವ್ಯ ಪರಿಣಾಮ
ಭಾರತ 80-85% ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ, ಮತ್ತು ಸುಮಾರು 45-50% ಸ್ಟ್ರೇಟ್ ಆಫ್ ಹಾರ್ಮುಜ್ ಜಲಸಂಧಿ ಮೂಲಕ ಬರುತ್ತದೆ (ಮಧ್ಯಪ್ರಾಚ್ಯದಿಂದ). ಇರಾನ್ ಪ್ರತಿದಾಳಿ ಅಥವಾ ಸ್ಟ್ರೇಟ್ ಅಡಚಣೆಯಿಂದ ತೈಲ ಬೆಲೆಗಳು ಏರುತ್ತವೆ, ಇದು ಭಾರತದ ಆರ್ಥಿಕ ಬೆಳವಣಿಗೆಗೆ ಹೊಡೆತ. ಸ್ಟ್ರೇಟ್ ಆಫ್ ಹಾರ್ಮುಜ್ ಸ್ಥಿತಿ ನಿರ್ಣಾಯಕ; ಅಡಚಣೆಯಾದರೆ ದೊಡ್ಡ ಆಘಾತ. ಸ್ಥಿತಿಯನ್ನು ಗಮನಿಸಿ ,RBI ಮತ್ತು ಸರ್ಕಾರದ ನಿರ್ಧಾರಗಳು

ಪರಿಣಾಮಗಳು ಅಂದ್ರೆ ಇದರಿಂದ ಪೆಟ್ರೋಲ್/ಡೀಸಲ್ ಬೆಲೆಗಳು ₹3-5 ಏರಬಹುದು, ಸಾಗಣೆ, ಉತ್ಪಾದನೆ ವೆಚ್ಚಗಳು ಹೆಚ್ಚಾಗಬಹುದು. ಗ್ಲೋಬಲ್ ಇನ್ಫ್ಲೇಷನ್ ಆದರೆ ಭಾರತದಂತಹ ಆಮದುದಾರ ದೇಶಕ್ಕೆ ಹೆಚ್ಚು ತೊಂದರೆ.

  • ಇದು ಆಹಾರ, ಸಾಗಣೆ, ಉತ್ಪನ್ನಗಳ ಬೆಲೆಗಳನ್ನು ಏರಿಸಿ, ಆರ್ಥಿಕತೆಯನ್ನು ಮಂದಗೊಳಿಸಬಹುದು.
  • RBI ಬಡ್ಡಿ ದರಗಳನ್ನು ಕಡಿಮೆ ಮಾಡುವುದನ್ನು ನಿಲ್ಲಿಸಬಹುದು ಅಥವಾ ಹೆಚ್ಚಿಸಬಹುದು, ಇದು ಬೆಳವಣಿಗೆಗೆ ಹೊಡೆತ.
    ತೈಲ ಆಮದು ವೆಚ್ಚ ಹೆಚ್ಚಾಗಿ ಕರೆಂಟ್ ಅಕೌಂಟ್ ಡೆಫಿಸಿಟ್ ವಿಸ್ತರಣೆ, ರೂಪಾಯಿ ದುರ್ಬಲಗೊಳ್ಳುವುದು .ಇಂಧನ ಸಬ್ಸಿಡಿ ಹೆಚ್ಚಿಸಬಹುದು. ಏವಿಯೇಷನ್, ಟ್ರಾನ್ಸ್‌ಪೋರ್ಟ್, ಮ್ಯಾನುಫ್ಯಾಕ್ಚರಿಂಗ್ ವೆಚ್ಚಗಳು ಏರುತ್ತವೆ ಇದರಿಂದ ಉತ್ಪನ್ನ ಬೆಲೆಗಳು ಹೆಚ್ಚು.
  • ಸದ್ಯಕ್ಕೆ ಎಲ್ಲವೂ ಸ್ಥಿರವಾಗಿದೆ ಏಕೆಂದರೆ ಮಾರುಕಟ್ಟೆಗಳು ವೀಕೆಂಡ್‌ನಲ್ಲಿ ಮುಚ್ಚಿವೆ. ಸೋಮವಾರ (ಮಾರ್ಚ್ 2) ತೈಲ ಬೆಲೆ ಏರಿಕೆಯ ನಂತರ ನಿಜವಾದ ಪರಿಣಾಮ ಕಾಣಿಸಿಕೊಳ್ಳುತ್ತದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಕೇವಲ “Aunty” ಅಂತ ಅಂದಿದಕ್ಕೆ 2 ಲಕ್ಷ ದಂಡ…!
“ಪ್ರೇಮ ಕಥೆ ತಿರುವು: ಗಂಡನ ಜೀವವೇ ಟಾರ್ಗೆಟ್!”ಬ್ಯಾಂಕ್ ಅಧಿಕಾರಿ ಪತ್ನಿ taxi ಚಾಲಕನೊಂದಿಗೆ ಸೇರಿ killing plan
ವಿಪರೀತ ಸೆಕೆಯಿಂದ ಬಳಲುತ್ತಿರುವಾಗಲೇ ಕರೆಂಟ್ ತೆಗೆದ ದುಷ್ಟ ಮೆಸ್ಕಾಂ
ಆಡುತ್ತಾ ಆಡುತ್ತಲೇ ಜೀವ ಬಿಟ್ಟ ಫಿಟ್ ಆಗಿದ್ದ ಯುವಕ್ರಿಕೆಟಿಗ… ನೀರು ಕುಡಿದ ತಕ್ಷಣವೇ ಕುಸಿದು ಬಿದ್ದ ರಣಜಿ ಆಟಗಾರ… 
ಸಿಐಡಿ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್: ವಂಚಕರ ಬಲೆಯಿಂದ ಜಸ್ಟ್ ಎಸ್ಕೇಪ್
ಸುಳ್ಯದಲ್ಲಿ ಚಿನ್ನಾಭರಣ ಕಳವು,  ಮಹಿಳೆಯ ಮೇಲೆ ಶಂಕೆ
ಸಂಸತ್ತಿನಲ್ಲಿ ಇತಿಹಾಸ ಸೃಷ್ಟಿಸುವ ಚರ್ಚೆ-ಮಹಿಳಾ ಮೀಸಲು ಬಿಲ್ಲಿನ ಸುತ್ತ ಕಂಗೊಳಿಸಿದ ಸಂಸತ್ !
₹10,000ಕ್ಕೆ NEET-UG 2026 ಪ್ರಶ್ನೆಪತ್ರಿಕೆ? ದೇಶವೇ ಬೆಚ್ಚಿಬಿದ್ದ ಲೀಕ್ ಸ್ಕಾಂಡಲ್!ಟೆಲಿಗ್ರಾಂ ಸೀಕ್ರೆಟ್ ಚಾಟ್ ವೈರಲ್…22 ಲಕ್ಷ ವಿದ್ಯಾರ್ಥಿಗಳ ಕನಸಿಗೆ ದೊಡ್ಡ ಹೊಡೆತ — NEET 2026 ರದ್ದು!
ರಾಪಿಡೊ ಚಾಲಕನ ಖಾತೆಯಲ್ಲಿ 300 ಕೋಟಿ ರೂ. ವಹಿವಾಟು! ಶಾಕ್ ಅದ ED
30 ವರ್ಷದ ಕನಸು ಸಾಕಾರ: ಮಾಣಿಲ–ಪೆರ್ಲ ಸಂಪರ್ಕಕ್ಕೆ ಸಿರಿಯ ನದಿಗೆ ಸೇತುವೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್!
ಕ್ರಿಕೆಟ್ pad gloves ಒಳಗೆ ಕೋಟಿ ಕೋಟಿ ಕೊಕೇನ್!
ತಡರಾತ್ರಿ ಭಟ್ಕಳದಲ್ಲಿ ವಿಚ್ಛಿದ್ರಕಾರಿ ಕೋಮುವಾದಿಗಳಿಂದ ದಾಂದಲೆ
ಬಾವಿ ಮುಖ್ಯಮಂತ್ರಿ ಆಪ್ತನ ಭೀಕರ ಹತ್ಯೆ ಹಿಂದೆ ಯಾರು?
ಚುನಾವಣೆ ಗೆಲ್ಲುವುದು ಸಾಕಿನ್ನು, ರಾಷ್ಟ್ರದ ಸಣ್ಣ ಮತ್ತು ಮಧ್ಯಮ ವ್ಯವಹಾರ ಸ್ಥರ ಹಿತ ಕಾಪಾಡಿ
594 ಕಿಮೀ ಗಂಗಾ ಎಕ್ಸ್‌ಪ್ರೆಸ್‌ ವೇ ..!ಮೀರಟ್‌ನಿಂದ ಪ್ರಯಾಗರಾಜ್‌ವರೆಗೆ -ದೇಶದ ಪ್ರಗತಿಗೆ ಮತ್ತೊಂದು ಮೈಲುಗಲ್ಲು 
ಜೆಡಿಎಸ್  ಜನರಲ್ ಸೆಕ್ರೆಟರಿಯಾಗಿ ಯೋಗೇಶ್ ಶೆಟ್ಟಿ ಜಪ್ಪು ಆಯ್ಕೆಯ ಲೆಕ್ಕಾಚಾರವೇನು?
ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡಿಪಾರು ಆದೇಶ….
ಶಾಸಕ ಹ್ಯಾರಿಸ್ ಮೇಲೆ ಪ್ರಕರಣ ದಾಖಲು
AI ಹವಾ-ಬೇಗನೆ ಫೈನಾನ್ಷಿಯಲ್ ಇಂಡಿಪೆಂಡೆಂಟ್ ಆಗೋ ಟ್ರೆಂಡ್- ಕೈಬಿಟ್ಟ  ಓದು!! ಇದು ಗಂಭೀರ ಸೂಚನೆ….
ಗಾಯಕನಿಗಿಂತ ದೊಡ್ಡದಾಗಿ ಕಾಣಿಸಿಕೊಂಡ ನೋಟುಗಳ ರಾಶಿ!ನೋಟುಗಳ ಮಧ್ಯೆಯೂ ನಿಲ್ಲದ ಗೋಪಾಲ್ ಸಾಧು ಗಾನಾಸುಧೆ !
ಭಾರತೀಯ ಸೇನೆಯ ಚಲನವಲನದ ವಿಡಿಯೋಗಳು ಪಾಕಿಸ್ತಾನಕ್ಕೆ ಹೇಗೆ ತಲುಪಿದವು?
ಕರ್ನಾಟಕ ಎಸ್‌ಎಸ್‌ಎಲ್‌ಸಿ 2026 ಫಲಿತಾಂಶ: ಇತಿಹಾಸದ ಅತ್ಯಧಿಕ ಉತ್ತೀರ್ಣ ಪ್ರಮಾಣ ಮತ್ತು ಟಾಪರ್‌ಗಳ ಸಾಧನೆ
ಮರಣದಂಡನೆ ಶಿಕ್ಷೆಗೆ ಈಡಾದ  ತಮಿಳುನಾಡು   ಪೊಲೀಸರು
ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ – 10 ರೋಗಿಗಳ ದುರ್ಮರಣ-11 ಸಿಬ್ಬಂದಿಗೆ ಗಾಯ
ಅಮೇರಿಕಾಕ್ಕೆ ಅಷ್ಟು ಧೈರ್ಯದಿಂದ ಎಲ್ಲಿಂದ ಬಂತು?
ಸ್ಕ್ಯಾಮರ್‌ಗೆ 60 ಸೆಕೆಂಡ್ ಸಾಕು… RBIಗೆ ಈಗ 60 ನಿಮಿಷ ಬೇಕಂತೆ!ಹಣ ಕಳಿಸುವ ಮುನ್ನ ಯೋಚಿಸಲು 1 ಗಂಟೆ!
“ಕಣ್ಣು ಮುಚ್ಚಿಸಿ ಕಟ್ಟಿ ಹಾಕಿ ಬೆಂಕಿ ಹಚ್ಚಿದಳು: ರೋಲ್ ಪ್ಲೇ ಹೆಸರಿನಲ್ಲಿ ಪ್ರಿಯಕರನ ಭೀಕರ ಕೊಲೆ-ಬೆಚ್ಚಿಬೀಳಿಸುವ ಘಟನೆ”
NEET ಗೊಂದಲ, ಮರುಪರೀಕ್ಷೆ, ಮೌಲ್ಯಮಾಪನ ದೋಷಗಳು ಮತ್ತು ವಿದ್ಯಾರ್ಥಿ ಜೀವನದ ನೋವು..
ಮಗಳ ಎಡವಟ್ಟಿಗೆ ಪಿಣರಾಯಿ ಬಲಿ…..ಕೇರಳ ರಾಜಕಾರಣದಲ್ಲಿ ಹೈವೋಲ್ಟೇಜ್ ಭೂಕಂಪ
ದಾವೂದ್ ಇಬ್ರಾಹಿಂನ ಆಪ್ತ. ಸಲೀಂ ಡೋಲಾ ಬಂದನ ವಿದೇಶದಲ್ಲಿ ಅಡಗಿದ್ದರೂ ಕಾನೂನಿನಿಂದ ತಪ್ಪಿಸಿಕೊಳ್ಳಲಾಗಲಿಲ್ಲ