📍 Karavali Maruta
  • LOGIN
  • BREAKING
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ ದಯಾಮರಣ ಕೇಳಿದ್ದ ತುಮಕೂರು ರಾಬಿಯಾ ಇನ್ನಿಲ್ಲ …!ಪರಮೇಶ್ವರ್ ಮುಂದೆ ಕಣ್ಣೀರಿಟ್ಟಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ವಿಷಸೇವಿಸಿ ಕೊನೆಯುಸಿರು…‘ಮನೆ’ ಸಿಕ್ಕರೂ ಬದುಕು ಉಳಿಯಲಿಲ್ಲ! ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್! ಮಹಿಳಾ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ ವಾಜಪೇಯಿ ಸರ್ಕಾರದ  ಕನಸಿನ ಯೋಜನೆ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಸಹಿ ಸಂಗ್ರಹ ಅಭಿಯಾನ
    ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಬಲಪಂಥೀಯರ ಜೊತೆ ಮುಖ್ಯಮಂತ್ರಿಗಳ ಸ್ನೇಹ : ಅಭದ್ರತೆ ಯಾರಿಗೆಲ್ಲ?

    ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನಡೆ ಹಲವರಲ್ಲಿ ಅಚ್ಚರಿಯನ್ನುಂಟು ಮಾಡಿದ್ದರೆ ಇನ್ನು ಹಲವರಲ್ಲಿ ಆಕ್ರೋಶವನ್ನುಂಟು ಮಾಡುತ್ತಿದೆ. ಹಾಗಿದ್ದರೆ ಮುಖ್ಯಮಂತ್ರಿಗಳ ಈ ಬದಲಾವಣೆಗೆ ಕಾರಣ ಏನು? ಅವರ ಈ ಬದಲಾವಣೆಯ ಹಿಂದಿನ ರಹಸ್ಯವೇನು? ಈ ಬದಲಾವಣೆಗೂ ಪ್ರಸ್ತುತ ರಾಜಕಾರಣಕ್ಕೂ ಏನಾದರೂ ಸಂಬಂಧ ಇದೆಯಾ? ಎಲ್ಲದಕ್ಕೂ ಹೆಚ್ಚಾಗಿ ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆಯ ಅಚ್ಚರಿ ಘೋಷಣೆಯ ಹಿಂದೆ ಏನೆಲ್ಲಾ ಅಡಗಿದೆ ಇದು ಎಲ್ಲವೂ ಹೊಸ ರಾಜಕಾರಣದ ಹೆಜ್ಜೆಗೆ ನಾಂದಿ ಹಾಡಲಿದೆಯಾ

    ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಂಥವರು ಅನ್ನೋದು ಎಲ್ಲರಿಗೂ ಗೊತ್ತಿರುವಂತಹ ಸಂಗತಿ. ಸಮಾಜವಾದಿ ಸಿದ್ಧಾಂತ ಹಾಗೂ ಅಹಿಂದ್ ನಾಯಕ ಎಂದೆಲ್ಲಾ ಪ್ರೊಜೆಕ್ಟ್ ಮಾಡಿಕೊಂಡು ಬಂದಂತಹ ವ್ಯಕ್ತಿ. ಇದರ ಪರಿಣಾಮವೊ ಅಥವಾ ಇನ್ನೇನೊ , ಸಿದ್ದರಾಮಯ್ಯ ಸಾಹೇಬರು ಬ್ರಾಹ್ಮಣ ವಿರೋಧಿ ಎಂಬ ಹಣೆಪಟ್ಟಿ ಅಂಟಿಸಿಕೊಂಡದ್ದು ಸುಳ್ಳಲ್ಲ. ಆ ಹಣೆ ಪಟ್ಟಿಯನ್ನು ಅವರ ನಡೆಯ ಮೂಲಕ ಅಂಟಿಸಿಕೊಂಡರೋ ಅಥವಾ ನಿಜವಾಗಿಯೂ ಬ್ರಾಹ್ಮಣ ವಿರೋಧಿಯಾಗಿಯೇ ಇದ್ದರೊ, ಇಲ್ಲವೇ ಅವರ ಹಿಂದೆ ಮುಂದೆ ಓಡಾಡಿಕೊಂಡಿದ್ದ ವ್ಯಕ್ತಿಗಳ ಕಾರಣದಿಂದಾಗಿ ಈ ಒಂದು ಹಣೆಪಟ್ಟಿ ಅವರಿಗೆ ಬಂತೋ ಗೊತ್ತಿಲ್ಲ. ಒಟ್ಟಿನಲ್ಲಿ ಸಿದ್ದರಾಮಯ್ಯ ಸಾಹೇಬರ ಬಗ್ಗೆ ಈ ರೀತಿಯ ಹಣೆಪಟ್ಟೆ  ಅಂಟಿಕೊಂಡದ್ದಂತೂ ಸುಳ್ಳಲ್ಲ.

    ಅದಿರ್ಲಿ, ಈಗ ಈ ವಿಚಾರ ಪ್ರಸ್ತುತ ವಾಗಲು ಕಾರಣ ಏನು ಗೊತ್ತಾ? ಮೊನ್ನೆ ನಡೆದ ರಾಜ್ಯ ಬಜೆಟ್ ಮಂಡನೆಯ ಮೊದಲು ಹಾಗೂ ಬಜೆಟ್ ಸಂದರ್ಭದಲ್ಲಿ ಘೋಷಿಸಿದ ಆ ಒಂದು ವಿಚಾರ ಕೆಲವರಲ್ಲಿ ಅಭದ್ರತೆ ಸೃಷ್ಟಿಸಿದೆ ಅನ್ನುವುದಕ್ಕೆ, ವ್ಯಕ್ತವಾಗುತ್ತಿರುವ ಅನವಶ್ಯಕ ಟೀಕೆಗಳು ಸಾಕ್ಷಿ ನುಡಿಯುತ್ತಿವೆ.

    ಎಸ್ ಅವತ್ತು ಕೆಲವು ಪ್ರಮುಖ ಪತ್ರಕರ್ತರನ್ನು ಕರೆದು ಡಿನ್ನರ್ ಪಾರ್ಟಿ ನೀಡುತ್ತಾರೆ ಮುಖ್ಯಮಂತ್ರಿಗಳು. ಪತ್ರಕರ್ತರ ಮತ್ತು ರಾಜಕಾರಣಿಗಳ ಮಧ್ಯೆ ಇಂತಹ ಪಾರ್ಟಿಗಳು ಸಹಜ ಹಾಗೂ ನಿರಂತರ ಕೂಡ. ಆದರೆ ಅವತ್ತಿನ ಪಾರ್ಟಿಯ ವಿಚಾರದಲ್ಲಿ ಒಂದಿಷ್ಟು ಜನರು ತಗಾದೆ ತೆಗೆದಿದ್ದಾರೆ. ಹಾಗೆ ತಗಾದೆ ತೆಗೆದವರಲ್ಲಿ ಪತ್ರಕರ್ತರೂ ಇದ್ದಾರೆ ಪತ್ರಕರ್ತರಲ್ಲದವರೂ ಇದ್ದಾರೆ. ಈ ವಿಚಾರವನ್ನು ನಾವು ವಿಶ್ಲೇಷಣೆಗೆ ಒಳಪಡಿಸಬಹುದೇ ಹೊರತು ಟೀಕೆ ಮಾಡುವುದಕ್ಕಲ್ಲ. ಖಂಡಿತವಾಗಿಯೂ ಈ ವಿಚಾರ ವಿಶ್ಲೇಷಣೆಗೆ ಯಾಕೆ ಒಳಪಡುತ್ತದೆ ಎಂದರೆ ಸಿದ್ದರಾಮಯ್ಯನವರು ಇಲ್ಲಿಯವರೆಗೆ ನಡೆದುಕೊಂಡು ಬಂದ ರೀತಿ ಮತ್ತು ಅವರು ಗಟ್ಟಿಯಾಗಿ ನಿಂತ ಸ್ಥಳದ ವಿಚಾರ ದಿಂದಾಗಿ ಅವರ ಇವತ್ತಿನ ನಡೆ ಅಚ್ಚರಿಗೆ ಕಾರಣವಾಗಿದ್ದಂತೂ ಸತ್ಯ.  ಹಾಗಾಗಿ ಅವರ ಈ ಬದಲಾದ ನಿಲುವಿಗೆ ಕಾರಣ ಏನು ಅನ್ನುವುದರ ವಿಶ್ಲೇಷಣೆ ಸಹಜವಾದದ್ದು ತಾನೇ?

    ಆದರೆ ಎಡಪಂತಿಯ ವಿಚಾರಧಾರೆಯನ್ನು ಹೊತ್ತಿರುವಂತಹ ವ್ಯಕ್ತಿಗಳು ಸಿದ್ದರಾಮಯ್ಯನವರ ಈ ನಡೆಯ ವಿಚಾರವಾಗಿ ಟೀಕೆಗೆ ಧೂಮಕಿರುವಂತದ್ದು ಎಲ್ಲೋ ಒಂದು ಕಡೆ ಅವರ ಒಳಗಿನ ಅಭದ್ರತೆಯನ್ನು ತೋರ್ಪಡಿಸುತ್ತಿದೆ ಅಂತಲೇ ವ್ಯಾಖ್ಯಾನಿಸಬೇಕಾಗುತ್ತದೆ.

    ಎಡ ಪಂಥೀಯ ಹಾಗೂ ಬಲಪಂಥೀಯ ವಿಚಾರವಾಗಿ ಸಾಕಷ್ಟು ವಿಚಾರಧಾರೆಗಳು ಟೀಕೆ ಟಿಪ್ಪಣಿಗಳು ನಿರಂತರವಾಗಿ ನಾವು ಕಾಣುತ್ತಲೇ ಬಂದಿದ್ದೇವೆ ಅದು ಅವಶ್ಯಕತೆ ಕೂಡ. ಎರಡು ಪಂಥಗಳ ನಡುವೆ ಆರೋಗ್ಯಕರವಾದಂತಹ ಚರ್ಚೆ ಒಬ್ಬರನ್ನೊಬ್ಬರು ಎಕ್ಸ್ಪೋಸ್ ಮಾಡುವಂತಹ ನಡೆಗಳು ಬೇಕೇ ಬೇಕು. ಆದರೆ ಈಗ ವ್ಯಕ್ತವಾಗುತ್ತಿರುವ ಅಭಿಪ್ರಾಯ, ಟೀಕೆ ಅನಾರೋಗ್ಯಕರವಾಗಿದೆ ಅದು ಆರೋಗ್ಯಕರವಾದದ್ದಲ್ಲ . ಏಕೆ ಮಾಡುತ್ತಿರುವವರು ತಂತ್ರಗಾರಿಕೆಯ ಭಾಗವಾಗಿ ಟೀಕೆ ಮಾಡುತ್ತಿದ್ದಾರೆ ಯೇ ಎಂಬ ಸಂಶಯವೂ ಇಲ್ಲದಿಲ್ಲ.

    ಆ ವಿಚಾರವನ್ನು ಅಲ್ಲಿಗೆ ಬಿಟ್ಟುಬಿಡುವ   ಈಗ ಮುಖ್ಯಮಂತ್ರಿಗಳ ಈ ನಡೆಯ ಬಗ್ಗೆ ಕಾರಣ ತಿಳಿದುಕೊಳ್ಳಲು ಪ್ರಯತ್ನಿಸೋಣ. ಎಲ್ಲಾ ಮುಖ್ಯಮಂತ್ರಿಗಳು, ಸಚಿವರುಗಳು, ವಿರೋಧಪಕ್ಷದ ನಾಯಕರುಗಳು ತಮ್ಮ ಆತ್ಮೀಯ ಹಾಗೂ ರಾಜಕೀಯ ತೋಟದಲ್ಲೇ ಮಿಂದುನ್ನುತ್ತಿರುವ ಹಿರಿಯ ಪತ್ರಕರ್ತರನ್ನು ಕರೆದು ಮಾತನಾಡಿಸುವುದು ಹಾಗೂ ಅವರ ಜೊತೆ ಎಲ್ಲಾ ರೀತಿಯ ಪಾರ್ಟಿಗಳನ್ನು ಅಟೆಂಡ್ ಮಾಡುವಂತದ್ದು ಇದೆ ಮೊದಲೆನಲ್ಲ. ಅದು ನಿರಂತರ ಪ್ರಕ್ರಿಯೆ . ಹಾಗಾಗಿ ಸಿದ್ದರಾಮಯ್ಯನವರು ಪಾರ್ಟಿ ಕೊಟ್ಟಿದ್ದಾರೆ ಅನ್ನೋದು ತೀರ ಟೀಕೆ ಮಾಡುವಂತಹ ವಿಚಾರ ಅಲ್ಲ. ಆದರೆ ಆ ಪಾರ್ಟಿಯಲ್ಲಿ ಬಲಪಂತೀಯ ಪತ್ರಕರ್ತರಿಗೆ ಆದ್ಯತೆ ಸಿಕ್ಕಿರುವದರ ಬಗ್ಗೆ ಒಂದಷ್ಟು ಜನರಿಗೆ ಅದರಲ್ಲೂ ಎಡಪಂತೀಯ ವಿಭಾಗದಲ್ಲಿ ಕಾಣಿಸಿಕೊಳ್ಳುವವರಿಗೆ ಕಸಿವಿಸಿ ಆಗಿದೆ. ಅದಕ್ಕೆ ಕಾರಣ…… ಸಹಜ ಅರ್ಥ ಆಯ್ತು ಅಂದುಕೊಳ್ಳುವ

    ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಪಟ್ಟುಗಳು ಅದ್ಭುತವಾದಂತದ್ದು. ಅದು ಬಿಗಿಪಟ್ಟೆ ಆಗಿರುತ್ತದೆ. ಅದರ ಭಾಗವೇ ಈ ಚೇಂಜಸ್ ನಡೆ ಯಾಕಾಗಿರಬಾರದು? ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕೂಗು ಅದಕ್ಕೆ ಸಂಬಂಧಿಸಿದ ರಾಜಕಾರಣ ಕಳೆದ ಏಳೆಂಟು ತಿಂಗಳಿನಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ಡಿಕೆ ಶಿವಕುಮಾರ್ ಈ ಬಾರಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಲೇಬೇಕು ಎಂಬ ನಿರ್ಧಾರಕ್ಕೆ ಬಂದಿರುವಂಥದ್ದು ಕಣ್ಣಿಗೆ ನೇರವಾಗಿ ಕಾಣುತ್ತಿರುವಂತಹ ಸತ್ಯ ಅದರಲ್ಲಿ ಯಾವುದೇ ಮುಚ್ಚು ಮರೆಯು ಇಲ್ಲ. ಅದೇರೀತಿ ಸಿದ್ದರಾಮಯ್ಯನವರು ಸಹ, ಪೂರ್ಣಾವಧಿಯಾಗಿ ತಾವೇ ಅಧಿಕಾರವನ್ನು ಹೊಂದಬೇಕು, ಅಧಿಕಾರ ಹಸ್ತಾಂತರ ವಿಚಾರ ಗೌಣ ವಾಗಿಸಬೇಕು ಎಂಬ ನಿಟ್ಟಿನಲ್ಲಿ ಅವರು ಸಾಗುತ್ತಿರುವಂಥದ್ದು  ರಾಜಕಾರಣದ ಭಾಗ,ಅದು ತಪ್ಪು ಅಲ್ಲ.

    ಎಸ್, ಮಾಧ್ಯಮ ವಿಭಾಗದಲ್ಲಿ ಬಲಪಂಥೀಯ ವಿಚಾರಧಾರೆಗೆ ಅಂಟಿರುವವರು  ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆ ವಿಚಾರಧಾರೆಯನ್ನು ಅಪ್ಪಿಕೊಳ್ಳುವವರ ಸಂಖ್ಯೆಯು ದೊಡ್ಡದಿದೆ. ಈ ವಿಚಾರವನ್ನು ಸಿದ್ದರಾಮಯ್ಯನವರು ಸ್ವಲ್ಪ ಲೇಟಾಗಿ ಅರ್ಥ ಮಾಡಿಕೊಂಡಿದ್ದಾರೆ ಅಷ್ಟೇ. ಡಿಕೆ ಶಿವಕುಮಾರ್ ಬಲ ಕುಗ್ಗಿಸಬೇಕು ಎಂದರೆ ಅವರ ಪರವಾಗಿರುವಂತಹ ಅಲೆ ಹಾಗೂ ನಡೆಯುವ ಪ್ರಚಾರ ಎರಡನ್ನು ಕಂಟ್ರೋಲ್ ಗೆ ತೆಗೆದುಕೊಳ್ಳುವ ಪ್ಲಾನ್ ಮಾಡಿದ್ದಾರೆ. ಆದರೆ ಆ ಪ್ಲಾನ್ ವರ್ಕೌಟ್ ಆಗಬೇಕು ಅಂದರೆ ಅದಕ್ಕೊಂದು ತಂಟ್ರಾಗರಿಕೆಯ ಅಗತ್ಯತೆ ಇದೆ. ಸಿದ್ದರಾಮಯ್ಯ ನವರು ಮೊನ್ನೆ ಪತ್ರಕರ್ತರಿಗೆ ಡಿನ್ನರ್ ಪಾರ್ಟಿ ನೀಡಿರುವಂತದ್ದು. ಈ ವಿಚಾರವನ್ನು ಮುನ್ನೆಲೆಗೆ ತರುತ್ತಿರುವುದು ಕೂಡ ಅದರ ಒಂದು ಭಾಗವೇ ಆಗಿದೆ. ಸಿದ್ದರಾಮಯ್ಯನವರ ಸಿದ್ಧಾಂತದ ಜೊತೆಗೆ ಥಳುಕು ಹಾಕಿಕೊಂಡವರು ಬೇಕಂತಲೇ ಈ ವಿಚಾರವನ್ನು ಮುನ್ನಲೆಗೆ ತರುತ್ತಿದ್ದಾರೆ. ಅವರ ಇಂಟೆನ್ಶನ್ ಇಷ್ಟೇ. ಸಿದ್ದರಾಮಯ್ಯನವರು ಬದಲಾಗಿದ್ದಾರೆ ಅನ್ನುವುದನ್ನು ಪ್ರಚುರಪಡಿಸಬೇಕು. ಆ ಬದಲಾವಣೆಯನ್ನು ಬಲಪಂಥೀಯ ಪತ್ರಕರ್ತರು ನಂಬಬೇಕು.  ಕಾರಣಕ್ಕಾಗಿಯೇ  ಮುಖ್ಯಮಂತ್ರಿಗಳ ಬಲಪಂಥೀಯ ಸ್ನೇಹವನ್ನು ಟೀಕಿಸುವ ಮೂಲಕ ಅವರ ಬದಲಾವಣೆಯನ್ನು  ಪ್ರಚುರಪಡಿಸಿ ಈ ರೀತಿಯ ಚರ್ಚೆಗೆ ಕಾರಣವಾಗಬೇಕು. ಇದರ ಅರ್ಥ ಇಷ್ಟೇ , ಇದೆಲ್ಲವೂ ಅಧಿಕಾರಕ್ಕೋಸ್ಕರ ಹೆಣೆಯಲಾದ ತಂತ್ರಗಾರಿಕೆ . ಇದರಲ್ಲಿ ಹೆಚ್ಚಿನ ಆಶ್ಚರ್ಯವೇನು ಇಲ್ಲ. ಸಿದ್ದರಾಮಯ್ಯನವರಿಗೆ ಬೇಕಿರುವಂಥದ್ದು ಬಲಪಂಥೀಯ ಪತ್ರಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು   ಅದು ಅಷ್ಟು ಈಜಿ ಆಗಿ ಸಿಗುವುದಿಲ್ಲ ಅನ್ನುವುದು ಸಹ ಗೊತ್ತಿತ್ತು. ಆ ಕೆಲಸವನ್ನು ಸಿದ್ದರಾಮಯ್ಯ ಅಂಡ್ ಟೀಮ್ ಅಚ್ಚುಕಟ್ಟಾಗಿ ಮಾಡಿ ಮುಗಿಸಿದೆ  

    ಇದರ ಜೊತೆಗೇನೆ ಹವ್ಯಕ  ಭಾಷಾ ಅಕಾಡೆಮಿ ಘೋಷಿಸುವ ಮೂಲಕ ತಲೆ ತಿರುಗುವಂತಹ ಹೆಜ್ಜೆಯನ್ನು ಇಟ್ಟಿದ್ದಾರೆ. ಈ ಎರಡು ನಡೆಯಿಂದಾಗಿ ಸಿದ್ದರಾಮಯ್ಯ ವಿಚಾರದಲ್ಲಿ ಬಲ ಬಂತಿಯರ ಕೋಟೆಯಲ್ಲಿ  ಮೆಚ್ಚುಗೆಯ ಮಾತುಗಳು ಕೇಳಲಾರಂಬಿಸಿದೆ. ಇದು ಅವರ ಪ್ಲಾನ್ ವರ್ಕೌಟ್ ಆಗುತ್ತಿರುವುದರ ಮುನ್ಸೂಚನೆ.

    ಎಸ್ ಡಿ ಕೆ ಶಿವಕುಮಾರ್ ಅವರ ಪರವಾಗಿ ಹಾಗೂ ಪ್ರಚಾರವನ್ನು ಕಂಟ್ರೋಲ್ ಮಾಡಬೇಕು ಎಂದರೆ ಈ ಬಲಪಂಥೀಯ ಪತ್ರಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆ ಮೂಲಕವೇ ಡಿಕೆ ಅಲೆಯನ್ನ ಕುಗ್ಗಿಸಬಹುದು ಎಂಬ ಲೆಕ್ಕಾಚಾರದ ಭಾಗವೇ ಸಿದ್ದರಾಮಯ್ಯನವರ ಈ ಬದಲಾವಣೆಯ ನಡೆ. ಇದರಲ್ಲಿ ಯಾವ ಅನುಮಾನವೂ ಇಲ್ಲ. ಅಷ್ಟೇ ಅಲ್ಲ, ಸಿದ್ದರಾಮಯ್ಯನವರ ಈ ನಡೆಯನ್ನ ಟೀಕಿಸುತ್ತಿರುವ ಎಡಪಂತಿಯ ಪ್ರಮುಖರುಗಳು ಸಹ ಈ ಒಂದು ಪ್ಲಾನಿನ ಭಾಗವೇ ಆಗಿದ್ದಾರೆ ಅಂತ ಅಂದುಕೊಳ್ಳಬೇಕು. ಏನಂತೀರಿ?

    ದತ್ತು

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಮೋದಿ ವಿಡಿಯೋ ಡಿಲೀಟ್ ವಿವಾದ: ಭಾರತಕ್ಕೆ ಕ್ಷಮೆಯಾಚಿಸಿದ ಮಾರ್ಕ್ ಜುಕರ್‌ಬರ್ಗ್!
    ಐಟಿ ಕ್ಷೇತ್ರದಲ್ಲಿ ಮತ್ತೆ ಲೇಆಫ್ ಭೀತಿ!
    ಎರಡು ಭೀಕರ ಕ್ಷಣಗಳು!ಒಂದು ರನ್‌ವೇಯಲ್ಲಿ ಸಾವು… ಮತ್ತೊಂದು ರನ್‌ವೇಯಲ್ಲಿ ಅದ್ಭುತ ಪಾರು!
    ಟೀಕೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಸೌಂದರ್ಯ – ಖಾದರ್
    ಹೆಣ್ಣು ಎಂಬ ಕನಿಕರ, ಸಿಗದ ಹಾಗೆ ಮಾಡಿದ ಮಾಯಾಂಗನೇ…
    ಬ್ಯಾರಿ ಸಾಹಿತ್ಯ ಸಮ್ಮೇಳನಕ್ಕೆ ಸಹಕರಿಸಲು ಮನವಿ
    ಅಹಿಂಸೆ, ಸತ್ಯ ಮತ್ತು ತ್ಯಾಗದ ಮಾರ್ಗವೇ ಮಹಾವೀರರ ದರ್ಶನ — ಇದೇ ಸುಖಿ ಜೀವನದ ಗುಟ್ಟು.
    ಗುರುವಾಯನಕೆರೆ ಯ ಪ್ರತಿಷ್ಠಿತ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ
    ಹಿರಿಯಡ್ಕದ ಬಾರಿನಲ್ಲಿ ಸರಿ ಕುಡಿದು ಗುಂಡಾಗಿರಿ, ಬಿಯರ್ ಬಾಟಲಿಯಿಂದ ಹಲ್ಲೆ
    TCS ಜಿಹಾದ್..ಗಂಭೀರ ತಿರುವು… ಟೀಮ್ ಲೀಡರ್ಸ್ ನಿಂದ subordinates ಗಳನ್ನ ಮಲೇಷ್ಯಾಕ್ಕೆ ಎತ್ತಂಗಡಿ ಮಾಡುವ ಪ್ಲಾನ್ ಇತ್ತಾ..?!ದಿನಕ್ಕೊಂದು ಮಹತ್ವದ ಸುಳಿವು…
    ಮ್ಯಾರಥಾನ್ ನಲ್ಲಿ ಇರುವಾಗಲೇ ಹೃದಯಾಘಾತದಿಂದ  ಸಬ್ ಇನ್ಸ್ಪೆಕ್ಟರ್ ನಿಧನ
    ಶೃಂಗೇರಿ ವಿಧಾನಸಭೆಯ ಮರುಕೌಂಟಿಂಗ್ ನಲ್ಲಿ ನಡೆದ ಲಪಡಾಗಳೇನು?
    ಒಂದೂವರೆ ವರ್ಷ ಫ್ರೀ ಬಸ್  ಪ್ರಯಾಣ…ಕೊನೆಯಲ್ಲಿ ದಂಡ ಮತ್ತು ಜೈಲು ಶಿಕ್ಷೆ!
    ಬ್ರೇಕಿಂಗ್ ನ್ಯೂಸ್
    ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ದೆಹಲಿ ಹೈಕೋರ್ಟ್, ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: ಭದ್ರತೆ ಬಿಗಿ
    “ಐಡಿ ಇಲ್ಲ ಅಂದ್ರೆ ಎಂಟ್ರಿಯೇ ಇಲ್ಲ! ಎಲ್ಲಿಗೆ…..!?ಯುವಕರ ಭವಿಷ್ಯಕ್ಕಾಗಿ ಖರ್ಗೆಯ ಕಠಿಣ ಎಚ್ಚರಿಕೆ.”
    Must read…ನಾಗಪ್ರಸನ್ನರ ನ್ಯಾಯಾಲಯದಲ್ಲಿ ‘ಸುಳ್ಳು ಜಾತಿ-ಆದಾಯ ಪ್ರಮಾಣಪತ್ರ ಮುಂದಿಟ್ಟ ಸಾಹುಕಾರ್ ಪುತ್ರಿಗೆ ಕ್ಲಾಸ್! ಅರುಣ್ ಶ್ಯಾಮ್ ವಾದಕ್ಕೆ ನಾಗಪ್ರಸನ್ನರ ಒಂದೊಂದು ಪ್ರಶ್ನೆಯೂ ವ್ಯವಸ್ಥೆಗೆ ಕನ್ನಡಿಯಾಯಿತು!”
    ಹಾಡುಹಗಲೇ ಉಡುಪಿಯ ಕರಾವಳಿ ಬೈಪಾಸ್ ನಲ್ಲಿ ಗುಂಡಾಗಿರಿ
    ಅಯೋಧ್ಯೆ ವಿವಾದದ ಬೆನ್ನಲ್ಲೇ ಬದರಿನಾಥ ದೇಗುಲದಲ್ಲೂ ಕಾಣಿಕೆ ದುರುಪಯೋಗದ ಆರೋಪ – ದೇಶಾದ್ಯಂತ ಭಕ್ತರಲ್ಲಿ ಆತಂಕ..!
    ಹಾರ್ಮುಜ್ ಬಳಿ ಹಡಗುಗಳ ಹಿಂತಿರುಗುವ ಸರಣಿ!ಜಾಗತಿಕ ತೈಲ ಸರಬರಾಜಿಗೆ ಶಾಕ್ ⚠️
    ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್!
    ಶಸ್ತ್ರಚಿಕಿತ್ಸೆಯ ಪಿತಾಮಹ ಮಹಾನ್ ವೈದ್ಯ….ಸುಶ್ರುತನನ್ನ ಜಗತ್ತು ಗೌರವಿಸಿದ ಕ್ಷಣ…ಆಧುನಿಕ ವೈದ್ಯಕೀಯದ ಬೇರುಗಳು ಭಾರತದಲ್ಲೇ…
    ಹತ್ತು ವರ್ಷದಿಂದ ಪೊಲೀಸರಿಗೆ ಬೇಕಾದ ಆರೋಪಿಯನ್ನು ಕೊನೆಗೂ ಬಂಧಿಸಿದ ಪೊಲೀಸರು
    ವೈರಲ್ ವೀಡಿಯೊ ….ನಗು ಆರೋಗ್ಯಕ್ಕೆ ಒಳ್ಳೆಯದು, ಆದ್ರೆ ಹೆಣ್ಣುಮಗುವಿನ ಹೆಣದ ಮುಂದೆ ನಕ್ಕರೆ.. ಏನಂತಾರೆ?ತಮಿಳುನಾಡಿನ ಜನ ಕಣ್ಣೀರಲ್ಲಿರುವಾಗ ಇವರಿಗೆ ಜೋಕ್ಸ್‌ ನೆನಪಾಯ್ತಾ? ಏನದು ಅಂತ ಜೋಕ್ಸ್ …
    ನೀರು ಪೋಲು ಬೇಡ….ಈಗಲೇ ಎಚ್ಚೆತ್ತುಕೊಳ್ಳಿ!ಇಂದು ನಿರ್ಲಕ್ಷ್ಯ,ನಾಳೆ ಜಲ ಸಂಕಷ್ಟದ ಎಚ್ಚರಿಕೆ…!
    ಇತಿಹಾಸ ಸೃಷ್ಟಿಸಿದ ಈಶಾಂಕ್ ಸಮುದ್ರವನ್ನೇ ಸವಾಲಾಗಿ ತೆಗೆದುಕೊಂಡ 7 ವರ್ಷದ ಹೀರೋ ..!
    ಪಹಲ್ಗಾಮ್ ದಾಳಿಗೆ ವರ್ಷ : ಮೋದಿ ಶ್ರದ್ಧಾಂಜಲಿ, ಉಗ್ರರಿಗೆ ಎಚ್ಚರಿಕೆ
    ಕರ್ನಾಟಕದಲ್ಲಿ ಮಳೆ ಅಲರ್ಟ್! 13 ಜಿಲ್ಲೆಗಳಿಗೆ ಯೆಲ್ಲೋ ವಾರ್ನಿಂಗ್ – ಜನರು ಎಚ್ಚರಿಕೆ ಅಗತ್ಯ
    “ಕುಂಡೆ(ತಿಕ)ಯಲ್ಲಿ ಲಕ್ಷ್ಮಿ ಇರುತ್ತಾಳೆ” ಎಂಬ ಹೇಳಿಕೆ ವೈರಲ್! ಆರ್ಯವರ್ಧನ್ ಗುರೂಜಿ ವಿರುದ್ಧ ದೂರು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ
    ವರದಕ್ಷಿಣೆ ಕಿರುಕುಳ ಪ್ರಕರಣ ಹೈಕೋರ್ಟ್‌ನ ಮಹತ್ವದ ತೀರ್ಪು…!ಕಾನೂನಿನ ದುರುಪಯೋಗಕ್ಕೆ ಹೈಕೋರ್ಟ್ ಬ್ರೇಕ್..!