📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಶೃಂಗೇರಿ ವಿಧಾನಸಭೆಯ ಮರುಕೌಂಟಿಂಗ್ ನಲ್ಲಿ ನಡೆದ ಲಪಡಾಗಳೇನು?

ಈ ಗೊಂದಲಕ್ಕೆ ನೇರಾನೇರವಾಗಿ ಚುನಾವಣಾ ಅಧಿಕಾರಿಗಳೇ ಹೊಣೆಯಾಗುತ್ತಾರೆ. ಟಿ ರಾಜೇಗೌಡ 200ರಷ್ಟು ಕಡಿಮೆ ಮತಗಳ  ಅಂತರದಿಂದ ಗೆದ್ದಿದ್ದರೆ ಎನ್ನುವುದು ಅವತ್ತಿನ ಚುನಾವಣಾ ಅಧಿಕಾರಿಗಳ ಘೋಷಣೆಯಾಗಿತ್ತು. ಇದನ್ನು ಪ್ರಶ್ನಿಸಿ ಪ್ರತಿಸ್ಪರ್ಧಿ ಮಾಜಿ ಶಾಸಕ ಜೀವರಾಜ್ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ನ್ಯಾಯಾಲಯವು ಮೂರು ವರ್ಷದ ನಂತರ ಮರು ಎಣಿಕೆ ಮಾಡಲು ಆದೇಶ ನೀಡಿತು. ಆ ಆದೇಶದ ಪ್ರಕಾರ, ನಡೆದ ಕೌಂಟಿಂಗ್ನಲ್ಲಿ ಎಲ್ಲವೂ ಅಯೋಮಯ. ಹಾಗಾದ್ರೆ ದೇಶದ ಎಲ್ಲಾ ಕ್ಷೇತ್ರದಲ್ಲೂ ಇದೇ ರೀತಿಯ ಎಡವಟ್ಟುಗಳು ನಡೆದಿರಬಹುದು ಅಂತ ಊಹಿಸಬೇಕೇ?

ಆವತ್ತು ಅಂದರೆ ಮೂರು ವರ್ಷದ ಹಿಂದೆ, ಚುನಾವಣೆಯ ಕೌಂಟಿಂಗ್ ಮುಗಿದ ತಕ್ಷಣ, ಗೆದ್ದ ಹಾಗೂ ಸೋತ ಅಭ್ಯರ್ಥಿಗಳ ಪರವಾಗಿ ಅಲ್ಲಿ ಉಪಸ್ಥಿತರಿದ್ದ ಎಲೆಕ್ಷನ್ ಏಜೆಂಟ್ ರ ಸಹಿ ಪಡೆದೆಯಲಾಗುತ್ತದೆ. ಅವರ ಸಮ್ಮುಖದಲ್ಲೇ ಅವೆಲ್ಲಾ ಕೌಂಟಿಂಗ್ ನಡೆದಿರುತ್ತದೆ. ಹಾಗೆಯೇ  ಆ ಏಜೆಂಟರುಗಳ ಸಹಿಯನ್ನು  ಪಡೆಯಲಾಗಿರುತ್ತದೆ. ಒಂದೊಮ್ಮೆ ಸರಿಯಾದ ಎಣಿಕೆ ನಡೆದಿಲ್ಲ ಎಂದರೆ, ಆ ಏಜೆಂಟರುಗಳಿಗೆ ಸಹಿ ಹಾಕದೆ ಪ್ರತಿಭಟಿಸುವ ಅವಕಾಶವಿತ್ತು. ಆವತ್ತು, ಅದ್ಯಾವುದು ಆಗದ ಕಾರಣ, ಚುನಾವಣಾ ಅಧಿಕಾರಿಗಳು ರಾಜೇಗೌಡರನ್ನು ಗೆದ್ದ ಅಭ್ಯರ್ಥಿಯೆಂದು ಘೋಷಿಸಿದ್ದರು.

ಇವತ್ತು, ಮರು ಎಣಿಕೆಯ ನಂತರ ಗೊಂದಲಗಳಾಗಿದೆ, ರಾಜೇಗೌಡರಿಗೆ ಬಿದ್ದ ಮತಗಳಲ್ಲಿ ದೊಡ್ಡ ಪ್ರಮಾಣದಲ್ಲೇ ಅಸಿಂಧು ಮತಗಳೆಂದು ತಳ್ಳಲ್ಪಡುತ್ತದೆ. ಹಾಗಿದ್ದರೆ ಆವತ್ತು,  ಅಸಿಂದು ಮತವನ್ನು ಯಾಕೆ ಸಿಂಧೂ ಮಾಡಿದ್ದರು? ಆ ಅಸಿಂಧು ಮತಗಳನ್ನು ಸಿಂಧೂ ಮಾಡಲು ಜೀವರಾಜ್ಪರ   ಇದ್ದ ಏಜೆಂಟರು ಏಕೆ ಅವಕಾಶ ಕೊಟ್ಟಿದ್ದರು? ಈ ಎರಡೂ ಪ್ರಶ್ನೆ ಮುಖ್ಯವಾಗುತ್ತದೆ. ಜೀವರಾಜ ಗೆಲ್ಲಲಿ ಅಥವಾ ರಾಜೇಗೌಡ ಗೆಲ್ಲಲಿ ನಮಗೆ ಇಲ್ಲಿ ಅದು ಮುಖ್ಯವೇ ಅಲ್ಲ. ಆದರೆ ಜನರ ಮತಕ್ಕೆ ನ್ಯಾಯ ದೊರಕಬೇಕು. ಜನರ ತೀರ್ಪು ಯಾಸಿಟೀಸ್ ಬಹಿರಂಗವಾಗಬೇಕು. ಆದರೆ ಅವತ್ತು ಬಂದ ಮತದ ಲೆಕ್ಕ ಬೇರೆ, ಇವತ್ತು ಬಂದ ಮತದ ಲೆಕ್ಕವೆ ಬೇರೆ

ಆದರೆ ಅದನ್ನು ನಾವು ಏನನ್ನಬೇಕು? ಅಧಿಕಾರಿಗಳು ಇಲ್ಲಿ ತಪ್ಪು ಮಾಡಿದ್ದಾರೆ ಎನ್ನಬೇಕಾಗುತ್ತದೆ? ಅಧಿಕಾರಿಗಳು, ಆವತ್ತು ತಪ್ಪು ಮಾಡಿದ್ದರೋ ಅಥವಾ ಇವತ್ತು ತಪ್ಪು ಮಾಡಿದ್ದಾರೋ?

ಕೇವಲ ಖಡಕ್ ನಿರ್ಧಾರ ಪತ್ರಿಕೆಯಲ್ಲಿದ್ದರೆ ಸಾಲದು, ಇಲಾಖೆಯ ಅಧಿಕಾರಿಗಳು, ತಪ್ಪು ಮಾಡಿದಾಗ ಅವರ ಮೇಲೆ ಯಾವ ರೀತಿಯ ಕಠಿಣ ಕ್ರಮ ತೆಗೆದುಕೊಂಡಿದ್ದೀರಿ ಅನ್ನುವುದು ಸಾರ್ವಜನಿಕರಿಗೆ ಗೊತ್ತಾಗಬೇಕು, ಅವತ್ತಿನ ಚುನಾವಣೆಯ ರಿಸಲ್ಟ್ ಬೇರೆ ಇವತ್ತಿನ ಚುನಾವಣೆಯ ರಿಸಲ್ಟ್ ಬೇರೆ ಆಗಿದ್ದಾರೆ, ಅಧಿಕಾರಿಗಳತಪ್ಪು ಅಲ್ಲಿ ಇದೆ ಅಂತಾಯ್ತು. ಹಾಗಿರುವಾಗ ಆ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಆಗಲೇಬೇಕು ತಾನೆ? ಜನರ ಆದೇಶವನ್ನು ಅವರು ಬದಲಾಯಿಸಿದ್ದಾರೆ ಅಂತನ್ನಿಸಿಕೊಳ್ಳುವುದಿಲ್ಲವೇ? ಜನರ ಆದೇಶವನ್ನೇ ಬದಲಿಸುವಷ್ಟು ಈ ಅಧಿಕಾರಿಗಳು ಹೆಚ್ಚು ಕೊಂಡಿದ್ದಾರೆ ಎಂದರೆ, ಅವರನ್ನು ಸುಮ್ಮನೆ ಬಿಡುವುದು ತಪ್ಪಾಗುತ್ತದೆ ಜನದ್ರೋಹವಾಗುತ್ತದೆ. ಈಗ, ಮಾತನ್ನು ಕೇಳಬೇಕಂತಿಲ್ಲ ಸ್ವತಹ ನ್ಯಾಯಾಲಯವೇ ಅಧಿಕಾರಿಗಳ ಮೇಲೆ ಜನದ್ರೋಹ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಆದೇಶಿಸಬೇಕು. ಹಾಗೆಯೇ ಆ ತಪ್ಪಿತಸ್ಥರ ಮೇಲೆ ಆಗಬೇಕು. ಹೀಗಾದಾಗ ಇನ್ನೆಲ್ಲೋ ಜನರ ಮತವನ್ನು ತಿರುಗಿಸುವುದಕ್ಕೆ ಯಾರೂ ಹೋಗುವುದಿಲ್ಲ. ಜನರ ಮತಕ್ಕೆ ಇನ್ನೂ ಒಂದಿಷ್ಟು ಬಲ ಬರುತ್ತದೆ. ಕೆಲಸವಾಗದಿದ್ದರೆ ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರಜಾಪ್ರಭುತ್ವವಾದಿಗಳು ಅಂತ ಎನಿಸಿಕೊಂಡವರು ಈ ಬಗ್ಗೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಅಷ್ಟೇ. ಎಲ್ಲಕ್ಕೂ ಹೆಚ್ಚಾಗಿ ನ್ಯಾಯಾಂಗದ ಜವಾಬ್ದಾರಿ ಇಲ್ಲಿ ಅತ್ಯಂತ ಮಹತ್ವದ್ದು. ತನ್ನ ಜವಾಬ್ದಾರಿಯನ್ನು ನ್ಯಾಯಾಂಗ ನಿಭಾಯಿಸುತ್ತದೆ ಎನ್ನುವ ನಂಬಿಕೆಯನ್ನು ಶೃಂಗೇರಿ ವಿಧಾನಸಭಾ ಕ್ಷೇತ್ರದ ನಾಗರಿಕರು ವ್ಯಕ್ತಪಡಿಸುತ್ತಿದ್ದಾರೆ. ನ್ಯಾಯಾಂಗವು ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತದೆ, ಈ ಕಾರಣಕ್ಕಾಗಿ ಜನರು ಹೋರಾಟಕ್ಕೆ ಇಳಿಯದಂತೆ ನೋಡಿಕೊಳ್ಳಬಹುದು ಎಂಬುದು ಕ್ಷೇತ್ರದ ಜನರ ನಂಬಿಕೆಯಾಗಿದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಡಿಕೆಶಿ ಸೈಲೆಂಟ್ ಆಪರೇಷನ್ ಮಿಸ್ ಫೈರ್ ಆಗಿದ್ದೆಲ್ಲಿ?ರಾಷ್ಟ್ರ ರಾಜಧಾನಿಯಲ್ಲಿ ಕರ್ನಾಟಕ ಕಾಂಗ್ರೆಸ್ ಹೈ-ವೋಲ್ಟೇಜ್ ಹರಟೆ…!
ಸರ್ಕಾರಿ ವೈದ್ಯರ ಅನರ್ದಿಷ್ಟಾವಧಿ ಮುಷ್ಕರ ರದ್ದು
ಗ್ರಾಮೀಣ ವಿದ್ಯಾರ್ಥಿಗಳಿಗೂ AI ಶಿಕ್ಷಣ: ಕರ್ನಾಟಕ ಸರ್ಕಾರದ ಐತಿಹಾಸಿಕ ಹೆಜ್ಜೆ..50 ಸರ್ಕಾರಿ ಕಾಲೇಜುಗಳಲ್ಲಿ AI ಲ್ಯಾಬ್‌ಗಳು!
“ಭಾರತೀಯ ಕುಟುಂಬ ಆಸ್ತಿ ವಿವಾದಗಳಲ್ಲಿ ಮಧ್ಯಸ್ಥಿಕೆಯ ಮಹತ್ವವನ್ನು ಮತ್ತೊಮ್ಮೆ ಎತ್ತಿಹಿಡಿದ ಸುಪ್ರೀಂ ಕೋರ್ಟ್”
ಕೊಲೆ ಆರೋಪಿಗಳ ಕಾರು ಮಾಣಿಯಲ್ಲಿ ಪತ್ತೆ ….!
ಡೈಮಂಡ್ ನೆಕ್ಲೇಸ್, ಕಿವಿಯೋಲೆಗಳು, ಚಿನ್ನದ ಚೈನ್, ಪ್ಲಾಟಿನಂ ಉಂಗುರ ಕಳವು…!
ಹಾರ್ಮುಜ್‌ನಲ್ಲಿ ಹಡಗು ಸಂಚಾರ ಹೆಚ್ಚಳ—ಇಂಧನ ಪೂರೈಕೆಗೆ ದೊಡ್ಡ ಮುನ್ನಡೆ 🚢
ಹತ್ತು ವರ್ಷದ ಮಗಳ ಹುಟ್ಟುಹಬ್ಬದ ಸಂಭ್ರಮ…  ವಿಧಿಯಾಟದಲ್ಲಿ ಕಣ್ಣೀರಾಗಿ ಮಾರ್ಪಟ್ಟ ದುರಂತ ಕಥೆ
ಕೊನೆಗೂ ಸೋತ ಖಾಕಿ….!!!
ಕಾಂಗ್ರೆಸ್ ದೇಶದ ಹಿತಾಸಕ್ತಿಯ ವಿರುದ್ಧ ನಡೆದುಕೊಳ್ಳುತ್ತಿದೆ- ಪ್ರಧಾನಿ ಮೋದಿ ಆರೋಪ
ಯುಎಇಯಿಂದ ಯುರೋಪ್ ತನಕ ಮೋದಿ ಐತಿಹಾಸಿಕ ವಿದೇಶ ಪ್ರವಾಸ…ಡಿಪ್ಲೊಮಸಿ – ತೈಲದಿಂದ ತಂತ್ರಜ್ಞಾನವರೆಗೆ ಇದು ಭಾರತದ ಭವಿಷ್ಯದ ತಂತ್ರಾತ್ಮಕ ನಡೆ ?!
ದಕ್ಷಿಣ ಕನ್ನಡ–ಉಡುಪಿಯಲ್ಲಿ ಗೋಡಂಬಿ ಕ್ರಾಂತಿಗೆ ರಾಜ್ಯ ಸರ್ಕಾರ ಸಜ್ಜು..₹1 ಕೋಟಿ ಯೋಜನೆ ಘೋಷಿಸಿದ ಈಶ್ವರ್ ಖಂಡ್ರೆ…
ಒಬ್ಬರೇ ಹಾಗಾಗಿ ಕಾರಿನಲ್ಲಿ ಯಾಕೆ? ಫ್ಲೈಟ್ ಫೇರ್ ಜಾಸ್ತಿ ಇದೆ..ಟ್ರೈನ್ ಲೇಟ್ ಆಗುತ್ತೆ..so ಹೆಗೋಗೋಣ….!? ಹೀಗೂ ಹೋಗ್ಬಹುದು ತಿಳ್ಕೊಳ್ಳಿ..
ಹೈ ಪ್ರೋಫೈಲ್ ಕೇಸ್ ಬಿಹಾರದಿಂದ UPವರೆಗೆ CID ಚೇಸ್… ಕೊನೆಗೂ ಸಿಕ್ಕಿದ ಸುಪಾರಿ ಕಿಲ್ಲರ್ಸ್!ಸಿನಿಮಾ ಸ್ಟೈಲ್ ಮರ್ಡರ್ ಮಿಸ್ಟರಿ: ಹೈಟೆಕ್ ಪ್ಲಾನ್ ಮಾಡಿದ ಹಂತಕರು… 
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಮಾತ್ರ (ಅ)ವ್ಯವಸ್ಥೆ ಎಚ್ಚರಗೊಳ್ಳಬೇಕೇ? ಯಾರು ಹೊಣೆ? ಏನು ಕ್ರಮ?
“ಯೋಗೇಶ್ ಗೌಡ ಪ್ರಕರಣದಲ್ಲಿ ಕಾನೂನು ಗರ್ಜನೆ!”ಕಾನೂನು ಕಾಯುವವರೇ ಬೂಟು ನೆಕ್ಕಿಕಾನೂನು ಮುರಿದಾಗ-7 ವರ್ಷಗಳ ಜೈಲು!ಕಾನೂನು ಇನ್ನೂ ಜೀವಂತ!”
ಪಕ್ಷದಿಂದ ಪಕ್ಕಕ್ಕೆ? ರಾಘವ್ ಚಡ್ಡಾ ಹಿಂದೆ ಏನಿದೆ ದೊಡ್ಡ ರಾಜಕೀಯ ಆಟ!”ಮೌನಗೊಳಿಸಿದರೂ ನಿಲ್ಲದ ಧ್ವನಿ – ರಾಘವ್ ಚಡ್ಡಾ!”
ಬ್ಯಾಂಕಿಂಗ್ ಸೇವೆ ಸ್ಮಾರ್ಟ್‌ಫೋನ್ ನೇ ಬೇಕಂತಿಲ್ಲ .ಕೀಪ್ಯಾಡ್ ಫೋನ್ ಸಾಕು ಈಗ “ಸ್ಮಾರ್ಟ್” ಆಗಿದ್ದರೆ ಸಾಕು! 
ಆನ್ಲೈನ್ ವಂಚಕರಿಂದ ಮಂಗಳೂರು ಡಾಕ್ಟರ್ ಒಬ್ಬರ ಏಳು ದಿನಗಳ ಕಾಲ ಹೌಸ್ ಅರೆಸ್ಟ್
ತಮಿಳು ರಾಜಕೀಯ ರಣರಂಗದಲ್ಲಿ “ವಿಜಯ”ಗಾಥೆ 118 ದಾಟಿದ TVK  ವಿಜಯ್ ಕೈ ಹಿಡಿದ ಮೈತ್ರಿ ಪಕ್ಷಗಳು!
ಅನ್ನಭಾಗ್ಯ ಅಕ್ಕಿಯ ಅಕ್ರಮ ದಾಸ್ತಾನು ಪತ್ತೆ – ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಬೆಂಗಳೂರಿನಲ್ಲಿ₹2,384 ಕೋಟಿ GSTದಂಧೆ ಭೇದಿಸಿದ ಇಲಾಖೆ.. ಭರ್ಜರಿ ದಾಳಿ! ಭಾರೀ GST ಸ್ಕ್ಯಾಂ .. ಹಲವರು ಬಲೆಗೆ ಬೀಳುವ ಸಾಧ್ಯತೆ!…
17 ವರ್ಷದ ಯುವಕ ಸಂಸತ್ತಿನ ಕದ ತಟ್ಟಬಲ್ಲ ಎಂದಾದರೆ, ನಿಮ್ಮ ಧ್ವನಿಗೆ ಎಷ್ಟು ಶಕ್ತಿಯಿದೆ ಯೋಚಿಸಿ!..ವ್ಯವಸ್ಥೆಯ ಲೋಪದ ವಿರುದ್ಧ ಧ್ವನಿ ಎತ್ತದಿದ್ದರೆ ಬದಲಾವಣೆ ಸಾಧ್ಯವಿಲ್ಲ.
ಚಿಕ್ಕಸ್ವಾಮಿ-ದೊಡ್ಡಸ್ವಾಮಿ ಭಕ್ತರ ಮಿಲನ! ಕಾಶಿಮಠ ವಿವಾದಕ್ಕೆ ಸಂಯಮೇ೦ದ್ರ ಮದ್ದು
ರಾಮಮಂದಿರ ಟ್ರಸ್ಟ್‌ನ ಮಹತ್ವದ ಹೇಳಿಕೆ!ಎಲ್ಲಾ ಕಾಣಿಕೆಗಳು ,ದೇಣಿಗೆ,ಚಿನ್ನ-ಬೆಳ್ಳಿ ಸೇರಿ 2,800 ಅಮೂಲ್ಯ ವಸ್ತುಗಳುಸುರಕ್ಷಿತ
🔴 ಪೊಲೀಸರ ಮೇಲಿನ ಹಿಡಿತ ಕಠಿಣ: PEBಗೆ ಹೆಚ್ಚಿದ ಅಧಿಕಾರ — ರಾಜ್ಯದ ದೊಡ್ಡ ಆಡಳಿತಾತ್ಮಕ ತೀರ್ಮಾನ
ಮಂಗಳೂರು ಏರ್‌ಪೋರ್ಟ್‌ನಲ್ಲಿ ಉಬರ್ …
ಇಂದು ಮಾಜಿ ಸಚಿವರಿಂದ ಸೌಹಾರ್ದ ಇಫ್ತಾರ್ ಕೂಟ 
ಗ್ಯಾಸ್ ಪೈಪ್‍ಲೈನ್ ಸೋರಿಕೆ: ಅಣಕು ಪ್ರದರ್ಶನ
ಕಂಪನಿಗೆ ಯಶಸ್ಸು ತಂದ ಇಂಟರ್ನ್‌ ಸಂಬಳ ಜಾಸ್ತಿಕೇಳಿದ್ದಕ್ಕೆ CEO ಅಂದ್ರು “Money-minded”-ಸಿಇಒ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ