📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಶೃಂಗೇರಿ ವಿಧಾನಸಭೆಯ ಮರುಕೌಂಟಿಂಗ್ ನಲ್ಲಿ ನಡೆದ ಲಪಡಾಗಳೇನು?

ಈ ಗೊಂದಲಕ್ಕೆ ನೇರಾನೇರವಾಗಿ ಚುನಾವಣಾ ಅಧಿಕಾರಿಗಳೇ ಹೊಣೆಯಾಗುತ್ತಾರೆ. ಟಿ ರಾಜೇಗೌಡ 200ರಷ್ಟು ಕಡಿಮೆ ಮತಗಳ  ಅಂತರದಿಂದ ಗೆದ್ದಿದ್ದರೆ ಎನ್ನುವುದು ಅವತ್ತಿನ ಚುನಾವಣಾ ಅಧಿಕಾರಿಗಳ ಘೋಷಣೆಯಾಗಿತ್ತು. ಇದನ್ನು ಪ್ರಶ್ನಿಸಿ ಪ್ರತಿಸ್ಪರ್ಧಿ ಮಾಜಿ ಶಾಸಕ ಜೀವರಾಜ್ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ನ್ಯಾಯಾಲಯವು ಮೂರು ವರ್ಷದ ನಂತರ ಮರು ಎಣಿಕೆ ಮಾಡಲು ಆದೇಶ ನೀಡಿತು. ಆ ಆದೇಶದ ಪ್ರಕಾರ, ನಡೆದ ಕೌಂಟಿಂಗ್ನಲ್ಲಿ ಎಲ್ಲವೂ ಅಯೋಮಯ. ಹಾಗಾದ್ರೆ ದೇಶದ ಎಲ್ಲಾ ಕ್ಷೇತ್ರದಲ್ಲೂ ಇದೇ ರೀತಿಯ ಎಡವಟ್ಟುಗಳು ನಡೆದಿರಬಹುದು ಅಂತ ಊಹಿಸಬೇಕೇ?

ಆವತ್ತು ಅಂದರೆ ಮೂರು ವರ್ಷದ ಹಿಂದೆ, ಚುನಾವಣೆಯ ಕೌಂಟಿಂಗ್ ಮುಗಿದ ತಕ್ಷಣ, ಗೆದ್ದ ಹಾಗೂ ಸೋತ ಅಭ್ಯರ್ಥಿಗಳ ಪರವಾಗಿ ಅಲ್ಲಿ ಉಪಸ್ಥಿತರಿದ್ದ ಎಲೆಕ್ಷನ್ ಏಜೆಂಟ್ ರ ಸಹಿ ಪಡೆದೆಯಲಾಗುತ್ತದೆ. ಅವರ ಸಮ್ಮುಖದಲ್ಲೇ ಅವೆಲ್ಲಾ ಕೌಂಟಿಂಗ್ ನಡೆದಿರುತ್ತದೆ. ಹಾಗೆಯೇ  ಆ ಏಜೆಂಟರುಗಳ ಸಹಿಯನ್ನು  ಪಡೆಯಲಾಗಿರುತ್ತದೆ. ಒಂದೊಮ್ಮೆ ಸರಿಯಾದ ಎಣಿಕೆ ನಡೆದಿಲ್ಲ ಎಂದರೆ, ಆ ಏಜೆಂಟರುಗಳಿಗೆ ಸಹಿ ಹಾಕದೆ ಪ್ರತಿಭಟಿಸುವ ಅವಕಾಶವಿತ್ತು. ಆವತ್ತು, ಅದ್ಯಾವುದು ಆಗದ ಕಾರಣ, ಚುನಾವಣಾ ಅಧಿಕಾರಿಗಳು ರಾಜೇಗೌಡರನ್ನು ಗೆದ್ದ ಅಭ್ಯರ್ಥಿಯೆಂದು ಘೋಷಿಸಿದ್ದರು.

ಇವತ್ತು, ಮರು ಎಣಿಕೆಯ ನಂತರ ಗೊಂದಲಗಳಾಗಿದೆ, ರಾಜೇಗೌಡರಿಗೆ ಬಿದ್ದ ಮತಗಳಲ್ಲಿ ದೊಡ್ಡ ಪ್ರಮಾಣದಲ್ಲೇ ಅಸಿಂಧು ಮತಗಳೆಂದು ತಳ್ಳಲ್ಪಡುತ್ತದೆ. ಹಾಗಿದ್ದರೆ ಆವತ್ತು,  ಅಸಿಂದು ಮತವನ್ನು ಯಾಕೆ ಸಿಂಧೂ ಮಾಡಿದ್ದರು? ಆ ಅಸಿಂಧು ಮತಗಳನ್ನು ಸಿಂಧೂ ಮಾಡಲು ಜೀವರಾಜ್ಪರ   ಇದ್ದ ಏಜೆಂಟರು ಏಕೆ ಅವಕಾಶ ಕೊಟ್ಟಿದ್ದರು? ಈ ಎರಡೂ ಪ್ರಶ್ನೆ ಮುಖ್ಯವಾಗುತ್ತದೆ. ಜೀವರಾಜ ಗೆಲ್ಲಲಿ ಅಥವಾ ರಾಜೇಗೌಡ ಗೆಲ್ಲಲಿ ನಮಗೆ ಇಲ್ಲಿ ಅದು ಮುಖ್ಯವೇ ಅಲ್ಲ. ಆದರೆ ಜನರ ಮತಕ್ಕೆ ನ್ಯಾಯ ದೊರಕಬೇಕು. ಜನರ ತೀರ್ಪು ಯಾಸಿಟೀಸ್ ಬಹಿರಂಗವಾಗಬೇಕು. ಆದರೆ ಅವತ್ತು ಬಂದ ಮತದ ಲೆಕ್ಕ ಬೇರೆ, ಇವತ್ತು ಬಂದ ಮತದ ಲೆಕ್ಕವೆ ಬೇರೆ

ಆದರೆ ಅದನ್ನು ನಾವು ಏನನ್ನಬೇಕು? ಅಧಿಕಾರಿಗಳು ಇಲ್ಲಿ ತಪ್ಪು ಮಾಡಿದ್ದಾರೆ ಎನ್ನಬೇಕಾಗುತ್ತದೆ? ಅಧಿಕಾರಿಗಳು, ಆವತ್ತು ತಪ್ಪು ಮಾಡಿದ್ದರೋ ಅಥವಾ ಇವತ್ತು ತಪ್ಪು ಮಾಡಿದ್ದಾರೋ?

ಕೇವಲ ಖಡಕ್ ನಿರ್ಧಾರ ಪತ್ರಿಕೆಯಲ್ಲಿದ್ದರೆ ಸಾಲದು, ಇಲಾಖೆಯ ಅಧಿಕಾರಿಗಳು, ತಪ್ಪು ಮಾಡಿದಾಗ ಅವರ ಮೇಲೆ ಯಾವ ರೀತಿಯ ಕಠಿಣ ಕ್ರಮ ತೆಗೆದುಕೊಂಡಿದ್ದೀರಿ ಅನ್ನುವುದು ಸಾರ್ವಜನಿಕರಿಗೆ ಗೊತ್ತಾಗಬೇಕು, ಅವತ್ತಿನ ಚುನಾವಣೆಯ ರಿಸಲ್ಟ್ ಬೇರೆ ಇವತ್ತಿನ ಚುನಾವಣೆಯ ರಿಸಲ್ಟ್ ಬೇರೆ ಆಗಿದ್ದಾರೆ, ಅಧಿಕಾರಿಗಳತಪ್ಪು ಅಲ್ಲಿ ಇದೆ ಅಂತಾಯ್ತು. ಹಾಗಿರುವಾಗ ಆ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಆಗಲೇಬೇಕು ತಾನೆ? ಜನರ ಆದೇಶವನ್ನು ಅವರು ಬದಲಾಯಿಸಿದ್ದಾರೆ ಅಂತನ್ನಿಸಿಕೊಳ್ಳುವುದಿಲ್ಲವೇ? ಜನರ ಆದೇಶವನ್ನೇ ಬದಲಿಸುವಷ್ಟು ಈ ಅಧಿಕಾರಿಗಳು ಹೆಚ್ಚು ಕೊಂಡಿದ್ದಾರೆ ಎಂದರೆ, ಅವರನ್ನು ಸುಮ್ಮನೆ ಬಿಡುವುದು ತಪ್ಪಾಗುತ್ತದೆ ಜನದ್ರೋಹವಾಗುತ್ತದೆ. ಈಗ, ಮಾತನ್ನು ಕೇಳಬೇಕಂತಿಲ್ಲ ಸ್ವತಹ ನ್ಯಾಯಾಲಯವೇ ಅಧಿಕಾರಿಗಳ ಮೇಲೆ ಜನದ್ರೋಹ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಆದೇಶಿಸಬೇಕು. ಹಾಗೆಯೇ ಆ ತಪ್ಪಿತಸ್ಥರ ಮೇಲೆ ಆಗಬೇಕು. ಹೀಗಾದಾಗ ಇನ್ನೆಲ್ಲೋ ಜನರ ಮತವನ್ನು ತಿರುಗಿಸುವುದಕ್ಕೆ ಯಾರೂ ಹೋಗುವುದಿಲ್ಲ. ಜನರ ಮತಕ್ಕೆ ಇನ್ನೂ ಒಂದಿಷ್ಟು ಬಲ ಬರುತ್ತದೆ. ಕೆಲಸವಾಗದಿದ್ದರೆ ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರಜಾಪ್ರಭುತ್ವವಾದಿಗಳು ಅಂತ ಎನಿಸಿಕೊಂಡವರು ಈ ಬಗ್ಗೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಅಷ್ಟೇ. ಎಲ್ಲಕ್ಕೂ ಹೆಚ್ಚಾಗಿ ನ್ಯಾಯಾಂಗದ ಜವಾಬ್ದಾರಿ ಇಲ್ಲಿ ಅತ್ಯಂತ ಮಹತ್ವದ್ದು. ತನ್ನ ಜವಾಬ್ದಾರಿಯನ್ನು ನ್ಯಾಯಾಂಗ ನಿಭಾಯಿಸುತ್ತದೆ ಎನ್ನುವ ನಂಬಿಕೆಯನ್ನು ಶೃಂಗೇರಿ ವಿಧಾನಸಭಾ ಕ್ಷೇತ್ರದ ನಾಗರಿಕರು ವ್ಯಕ್ತಪಡಿಸುತ್ತಿದ್ದಾರೆ. ನ್ಯಾಯಾಂಗವು ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತದೆ, ಈ ಕಾರಣಕ್ಕಾಗಿ ಜನರು ಹೋರಾಟಕ್ಕೆ ಇಳಿಯದಂತೆ ನೋಡಿಕೊಳ್ಳಬಹುದು ಎಂಬುದು ಕ್ಷೇತ್ರದ ಜನರ ನಂಬಿಕೆಯಾಗಿದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಆಡುತ್ತಾ ಆಡುತ್ತಲೇ ಜೀವ ಬಿಟ್ಟ ಫಿಟ್ ಆಗಿದ್ದ ಯುವಕ್ರಿಕೆಟಿಗ… ನೀರು ಕುಡಿದ ತಕ್ಷಣವೇ ಕುಸಿದು ಬಿದ್ದ ರಣಜಿ ಆಟಗಾರ… 
ವಿಷ ಸೇವನೆ ಸ್ವಯಂ ಆಗಿತ್ತೇ ಅಥವಾ ಪ್ರಚೋದನೆ ಕಾರಣವೇ ….?!
ಅಲ್ಲಿ ಸೌಮೆಂದು ಅಧಿಕಾರಿ…. ಇಲ್ಲಿ ಸಾಮ್ರಾಟ್ ಚೌದರಿ, ಹೆಲ್ತ್ ಮಿನಿಸ್ಟರ್ ನಿಶಾಂತ್….
ಮನೆಗಣತಿ ಮಂಗಳೂರು ಮಹಾನಗರ ಪಾಲಿಕೆ-ಸ್ಪೀಕರ್ ಯು ಟಿ ಖಾದರ್ ಚಾಲನೆ
108 ಆರೋಗ್ಯ ಕವಚ'”ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ಇನ್ಮುಂದೆ ಆಂಬ್ಯುಲೆನ್ಸ್ ನಿಮ್ಮ ಮನೆಬಾಗಿಲಿಗೆ! 
ಥಾರ್ ಕಾರ್ ನಲ್ಲಿ ಬಂದು ದೇವಸ್ಥಾನದಲ್ಲಿ ವಿಕೃತಿ ಮೆರೆದ ಕಿಡಿಗೇಡಿ!
ಗುಜರಾತ್ ಪೊಲೀಸರಲ್ಲಿ ಆಗದ ಕೆಲಸ, ಒಬ್ಬ ಮಂತ್ರವಾದಿಯಿಂದ ಆಯ್ತು
 ಆಸ್ಪತ್ರೆಯಲ್ಲಿ ಡಾಕ್ಟರ್ “mistakeಎಡವಟ್”…ಅಚ್ಚರಿಯೂ ಮೀರಿದ ಆಘಾತ!
ಹೀಟ್ ಸ್ಟ್ರೋಕ್ ಗಂಭೀರ – ನಿರ್ಲಕ್ಷ್ಯ ಬೇಡ …ತಲೆ ಸುತ್ತಿದ್ರೆ ತಕ್ಷಣ ನೆರವು ಪಡೆಯಿರಿ.
ನಿಶ್ಚಿತಾರ್ಥ ಮಾಡಿಕೊಂಡು, ಫೈನಾನ್ಸಿಯಲ್ ವಂಚನೆ ದೂರು ದಾಖಲು
ಇರಾನ್ ದಾಳಿಗೆ ಬೆಂಜಿಮನೇತನ್ಯಹೋ ಕೊಲ್ಲಲ್ಪಟ್ಟಿದ್ದಾರಾ?
ಸುಳ್ಯ:  ಕರ್ತವ್ಯದಲ್ಲಿದ್ದ ಉಪನ್ಯಾಸಕ ಕುಸಿದು ಬಿದ್ದು ಸಾವು
ಜನಪ್ರತಿನಿಧಿಗಳಿಗೆ ಕೆಲಸ ,ಜನಸೇವೆ ಬೇಡ ,ಪ್ಲೆಕ್ಸ್ ಮಾತ್ರ ಫುಲ್ ಸೈಜ್ …ಕಾನೂನು ಇದೆ… ಪಾಲನೆ ಮಾತ್ರ ಇಲ್ಲ!
🚢 “ಹಾರ್ಮುಝ್‌ನಿಂದ ಮಂಗಳೂರುವರೆಗೆ – 46,000 MT ಎಲ್‌ಪಿಜಿ ಯಮಹಾಯಾತ್ರೆ!
ಕಂದಾಯ ಸಚಿವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ
ಡ್ರೋನ್ ದಾಳಿಯ ನಂತರ ಬಹ್ರೇನ್‌ನಲ್ಲಿ ಕನಿಷ್ಠ 32 ಜನರಿಗೆ ಗಾಯ
ಡೊನಾಲ್ಡ್ ಟ್ರoಪ್ ಮುಂದೆ ಮಂಡಿಯೂರಿ ಕೂತ ಜಗತ್ತು!
ಜೀತಕ್ಕಿಟ್ಟುಕೊಂಡು ದರ್ಬಾರ್ ನಡೆಸುತ್ತಿದ್ದ ರಜನಿಶೆಟ್ಟಿಯ ಬಂಧನ
ಬೇಕಾದಾಗ, ಬೇಕಾದಂಗೆ ಸಂವಿಧಾನದ ಜಪ
ಇಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ಪ್ರತಿಭಟನೆ
ಶಿಕ್ಷಣ ಸುಧಾರಣೆಗೆ ರಾಜ್ಯ ಸರ್ಕಾರದ ಭರ್ಜರಿ ಪ್ಲಾನ್ ಬಹಿರಂಗ!
ಕನಕಪುರ ಬಂಡೆ ಬಿಜೆಪಿಗೆ ಎಂಬ ಬೋಗಸ್ ಸುದ್ದಿ
ಸಂಸತ್ತಿನಲ್ಲಿ ಇತಿಹಾಸ ಸೃಷ್ಟಿಸುವ ಚರ್ಚೆ-ಮಹಿಳಾ ಮೀಸಲು ಬಿಲ್ಲಿನ ಸುತ್ತ ಕಂಗೊಳಿಸಿದ ಸಂಸತ್ !
ಪೂಜೆಗಾಗಿ ತೆರಳಿದ ಅರ್ಚಕರ ಶವ ನಾಲೆಯಲ್ಲಿ ಪತ್ತೆ
ಐಟಿ ಕ್ಷೇತ್ರದಲ್ಲಿ ಮತ್ತೆ ಲೇಆಫ್ ಭೀತಿ!
ಮಂಗಳೂರು ದಸರಾ ಮೆರವಣಿಗೆಗೆ ವಿದ್ಯುತ್ ತಂತಿಗಳ ಸಮಸ್ಯೆಗೆ ಗುಡ್‌ಬೈ!
₹10,000ಕ್ಕೆ NEET-UG 2026 ಪ್ರಶ್ನೆಪತ್ರಿಕೆ? ದೇಶವೇ ಬೆಚ್ಚಿಬಿದ್ದ ಲೀಕ್ ಸ್ಕಾಂಡಲ್!ಟೆಲಿಗ್ರಾಂ ಸೀಕ್ರೆಟ್ ಚಾಟ್ ವೈರಲ್…22 ಲಕ್ಷ ವಿದ್ಯಾರ್ಥಿಗಳ ಕನಸಿಗೆ ದೊಡ್ಡ ಹೊಡೆತ — NEET 2026 ರದ್ದು!
Maths hate ಮಾಡ್ತಿರಾ ? ಹಾಗಾದ್ರೆ ಈ ವರದಿ ನೋಡಿ ಸಮಸ್ಯೆ ನಿಮ್ಮಲ್ಲಿಲ್ಲ … research ಹೇಳುತ್ತೆ ಸಂಖ್ಯೆಗಳಲ್ಲಿ ಇದೆ!”
ಬಾಗಲಕೋಟೆ ಜಿಲ್ಲೆ ಕೆರೂರು ಠಾಣೆಯಲ್ಲಿ ಪಿಎಸ್ಐ & ಪೇದೆ ₹1.70 ಲಕ್ಷ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಬಲೆಗೆ!
ಸುಬ್ರಹ್ಮಣ್ಯದಲ್ಲಿ ಭಟ್ಟರಿಗೆ ದಕ್ಷಿಣೆ ಕೊಡುವoತಿಲ್ಲ- ಸಿಟ್ಟಿಗೆಳುತ್ತಿರುವ ಪುರೋಹಿತರು