📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಮಂಗಳೂರು ಜಾರಂದಾಯ ಸ್ಥಾನದ ದೈವ ನರ್ತನ ವಿವಾದ – ಸ್ಪಷ್ಟನೆ- ಮರುಪ್ರಶ್ನೆ-ಇತ್ಯರ್ಥವಾಗುತ್ತಾ..?!

ಮಂಗಳೂರಿನ ಒಂದು ದೈವಸ್ಥಾನದಲ್ಲಿ ನಡೆದ ದೈವ ನರ್ತನ ಸೇವೆ ಈಗ ತುಳುನಾಡಿನಾದ್ಯಂತ ದೊಡ್ಡ ಚರ್ಚೆಯ ವಿಷಯವಾಗಿದೆ. ವಿಷಯ ಸಿಂಪಲ್ ಆಗಿ ಹೇಳ್ಬೇಕಂದ್ರೆ –
“ದೈವ ನರ್ತನ ಸೇವೆ ಕ್ರೈಸ್ತ ವ್ಯಕ್ತಿಯಿಂದ ಮಾಡಿಸಲಾಗಿದೆ” ಅನ್ನೋ ಆರೋಪ ದೊಡ್ಡ ಮಟ್ಟಕ್ಕೆ ಹಬ್ಬಿದೆ. ಇದ್ರಿಂದ ಈಗಿನ ಪರಿಸ್ಥಿತಿ ,ದೈವಾರಾಧನಾ ವಲಯದಲ್ಲಿ ಗೊಂದಲ,ಭಕ್ತರಲ್ಲಿ ಸಂಶಯ ಹಾಗೇ ಸಾಮಾಜಿಕ ಚರ್ಚೆ ತೀವ್ರವಾಗಿದೆ.ವಿಷಯ ಈಗ ಅಧಿಕಾರಿಗಳ ಗಮನಕ್ಕೂ ಹೋಗಿದೆ.

ವಿವಾದ ಹೇಗೆ ಶುರುವಾಯ್ತು?

ಪಂಬದ ಸಮುದಾಯದ ಸಂಶೋಧಕಿ ಡಾ. ರತಿ ಅವರು ಪ್ರೆಸ್ ಮೀಟ್‌ನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಫೆಬ್ರವರಿ1ರಂದು,ಮಂಗಳೂರಿನ **ಜಾರಂದಾಯ ದೈವಸ್ಥಾನ**ದಲ್ಲಿ ನಡೆದ ನೇಮೋತ್ಸವದಲ್ಲಿ,ಕ್ರೈಸ್ತ ಯುವಕನಿಂದ ದೈವ ನರ್ತನ ಮಾಡಿಸಲಾಗಿದೆ ಅಂತ ಹೇಳಿದ್ದಾರೆ.ಹಾಗೂ ಇದು ದೈವಾರಾಧನಾ ಸಂಪ್ರದಾಯಕ್ಕೆ ವಿರುದ್ಧ ಅಂತ ಅವರು ಅಭಿಪ್ರಾಯಪಟ್ಟಿದ್ದಾರೆ.


🔥 ಆರೋಪದ ಮುಖ್ಯ ಅಂಶಗಳು

  • ದೈವ ನರ್ತನ ಸಾಮಾನ್ಯವಾಗಿ ಪಂಬದ ಸಮುದಾಯದವರು ಮಾಡಬೇಕು.ಆದರೆ ಇಲ್ಲಿ “ಅನ್ಯ ಧರ್ಮದ ವ್ಯಕ್ತಿಗೆ ಅವಕಾಶ ಕೊಟ್ಟಿದ್ದಾರೆ”.ಹಣದ ಕಾರಣಕ್ಕೆ ನಿಯಮ ಉಲ್ಲಂಘನೆ ಆಗಿದೆ ಅಂತ ಆರೋಪ.ಪ್ರಶ್ನಿಸಿದಾಗ ಅವಮಾನಕಾರಿ ಉತ್ತರ ಸಿಕ್ಕಿದೆ ಎಂಬ ಮತ್ತೊಂದು ಆರೋಪ.

🧾 ಆರೋಪಕ್ಕೆ ಉತ್ತರ – ನರ್ತಕರ ಸ್ಪಷ್ಟನೆ

ಈ ಆರೋಪಗಳನ್ನೆಲ್ಲಾ ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ.ಗಣೇಶ್ ಪಂಬದ ಹೇಳೋದು ಏನು ಅಂದ್ರೆ:

  • ನರ್ತನ ಮಾಡಿದ ಸುಶಾಂತ್ ಪಂಬದ ಕ್ರೈಸ್ತನಲ್ಲ,ಅವನು ಪಂಬದ ಸಮುದಾಯದವನೇ..ಅವನ ತಾಯಿ ಮದುವೆಯ ನಂತರ ಹಿಂದೂ ಧರ್ಮ ಪಾಲಿಸುತ್ತಿದ್ದಾರೆ.ಇವನು ಹೊಸಬನು ಅಲ್ಲ, ಹಿಂದೆ ಹಲವಾರು ಕಡೆ ಸೇವೆ ಮಾಡಿದ್ದಾನೆ. “ಯಾವುದೇ ಅಪಚಾರ ಆಗಿಲ್ಲ” ಅಂತ ಹೇಳಿದ್ದಾರೆ.
  •  ಇಷ್ಟಾಗುವಾಗ ಆರೋಪ ಮಾಡಿದವರ ಮೇಲೆಯೇ ಪ್ರಶ್ನೆ ಎತ್ತಿರುವ ಗಣೇಶ್ ಪಂಬದ ರತಿಯವರ ಕುಟುಂಬವೇ ಇವನ ಸಹೋದರನಿಂದ ಬೇರೆಡೆ ನರ್ತನ ಮಾಡಿಸಿಕೊಂಡಿದೆ ಆಗ ಸಮಸ್ಯೆ ಇರಲಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ. ಕ್ಷೇತ್ರಕ್ಕೆ ಯಾವುದೇ ಅಪಚಾರವಾಗಿಲ್ಲ ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.

ಈ ಮದ್ಯೆ ಸುಶಾಂತ್ ತುಂಬಾ ಭಾವನಾತ್ಮಕವಾಗಿ ಮಾತನಾಡಿದ್ದಾರೆ:

“ಈ ಆರೋಪದಿಂದ ಜೀವನವೇ ಬದಲಾಗಿದೆ,ಜನರಿಗೆ ಮುಖ ತೋರಿಸಲು ಕಷ್ಟ ಆಗುತ್ತಿದೆ.ತಮ್ಮ ಬಳಿ ಜಾತಿ ಪ್ರಮಾಣಪತ್ರ ಇದೆ ಎಂದು ತಿಳಿಸಿದ್ದಾರೆ.ನ್ಯಾಯ ಬೇಕು ಅಂತ ಮನವಿ ಮಾಡಿದ್ದಾರೆ.”

 ಸುಶಾಂತ್ ತಾಯಿಯ ಸ್ಪಷ್ಟನೆ

  • “ನಾನು ಮೊದಲು ಕ್ರಿಶ್ಚಿಯನ್ ಆಗಿದ್ದೆ, ಮದುವೆಯ ನಂತರ ಹಿಂದೂ ಧರ್ಮಕ್ಕೆ ಬಂದೆ ,ನಾವು ಈಗ ಚರ್ಚ್‌ಗೆ ಹೋಗೋದಿಲ್ಲ”.
  • “ನನ್ನ ಮಗ ಕ್ರಿಶ್ಚಿಯನ್ ಅಂತ ಸಾಬೀತು ಮಾಡಿದ್ರೆ ನರ್ತನ ಮಾಡಿಸಲ್ಲ”

ಈ ವಿಚಾರದಲ್ಲಿ ಎರಡು ಸ್ಪಷ್ಟ ವಿಚಾರಗಳು ಕಾಣಿಸುತ್ತವೆ:

👉 ಒಂದು ಕಡೆ
ಪರಂಪರೆ ಕಾಪಾಡಬೇಕು ಅನ್ನೋ ಆತಂಕ.

👉 ಇನ್ನೊಂದು ಕಡೆ
ತಪ್ಪು ಆರೋಪದಿಂದ ವ್ಯಕ್ತಿಯ ಬದುಕೇ ಹಾಳಾಗಬಾರದು ಅನ್ನೋ ವಿಚಾರ.

ಸತ್ಯ ಏನು ಅನ್ನೋದು ದಾಖಲೆಗಳು ಮತ್ತು ಪರಿಶೀಲನೆ ಮೇಲೆ ನಿರ್ಧಾರವಾಗಬೇಕು.

ಆದರೆ ಒಂದು ಮುಖ್ಯ ಪಾಠ ಏನೆಂದರೆ ,
👉 ಇಂತಹ ಸಂವೇದನಾಶೀಲ ವಿಷಯಗಳಲ್ಲಿ ಆರೋಪ ಮಾಡುವ ಮೊದಲು ಸಂಪೂರ್ಣ ಮಾಹಿತಿ ಇರಬೇಕು
👉 ಅದೇ ಸಮಯದಲ್ಲಿ ಪರಂಪರೆಗೂ ಗೌರವ ಇರಬೇಕು.

ಈ ವಿವಾದಕ್ಕೆ ಅಂತಿಮ ಉತ್ತರ ಇನ್ನೂ ಬರಬೇಕಿದೆ.
ಜನರು ಮತ್ತು ದೈವಾರಾಧಕರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಅನ್ನೋದೇ ಮುಂದಿನ ಬೆಳವಣಿಗೆ ನಿರ್ಧರಿಸಲಿದೆ.

#daivaraadhane#latest news#mangalore news#ಕಟ್ಟುಕಟ್ಟಲೆಗಳು#ತುಳುನಾಡ ಸಂಸ್ಕೃತಿ#ದಕ್ಷಿಣ kananda

COMMENTS

Login with Gmail to comment

ಇನ್ನಷ್ಟು ಸುದ್ದಿ

ಹೈಕೋರ್ಟ್ ತೀರ್ಪಿನಿಂದ ದಕ್ಷಿಣ ಕನ್ನಡ ಇ-ರಿಕ್ಷಾ ಚಾಲಕರಿಗೆ favour
50 ವರ್ಷಗಳ ನಂತರ NCERT 9ನೇ ತರಗತಿಗೆ ‘ತುರ್ತು ಪರಿಸ್ಥಿತಿ’ಯ ವಾಸ್ತವ ಪಾಠ!
ಮೈ ಜುಮ್ಮೆನ್ನಿಸುವ ಬೈಕ್–ಲಾರಿ ಡಿಕ್ಕಿ ಅಪಘಾತ… ಕ್ಷಣಾರ್ಧದಲ್ಲೇ ಜೀವ ಹೋದ ಹೃದಯವಿದ್ರಾವಕ ರಸ್ತೆ ದುರಂತ
ನಿಶ್ಚಿತಾರ್ಥ ಮಾಡಿಕೊಂಡು, ಫೈನಾನ್ಸಿಯಲ್ ವಂಚನೆ ದೂರು ದಾಖಲು
ಮಂಗಳೂರುಗೆ ಹೈಕೋರ್ಟ್ ಸರ್ಕ್ಯೂಟ್ ಬೆಂಚ್: ಕರಾವಳಿಗೆ ಐತಿಹಾಸಿಕ ನ್ಯಾಯಾಂಗ ಶಕ್ತಿ ನೀಡುವ ಮಹತ್ವದ ಹೆಜ್ಜೆ..
War update-ಕಂಪ್ಲೀಟ್ ಡೀಟೇಲ್ಸ್ …ಮುಂದೇನು? ceasefire ಮುಂದುವರಿಯುತ್ತದೆಯಾ?ಶಾಂತಿ ಅಥವಾ ಸಂಘರ್ಷ? ಮುಂದಿನ ಕೆಲ ದಿನಗಳು ವಿಶ್ವದ ಭವಿಷ್ಯ ತೀರ್ಮಾನಿಸುತ್ತದೆ.
ನಿಶ್ಶಬ್ದ ಕೊಠಡಿ ಹೇಳುವ ನಿಗೂಢ ರಹಸ್ಯ …!ಮನೆಯ ಗೋಡೆಗಳ ಮೇಲೆ ಬರಹ,ಕಾಗದಗಳು ನೂರಾರು…! ಅಸಹಜ ಮರಣದ ಹಿಂದೆ ಅಡಗಿರುವ ಸತ್ಯ ಇನ್ನೂ ಅನಾವರಣವಾಗಿಲ್ಲ…”
ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ, ನಿರೀಕ್ಷಿತ ತನಿಖೆ
ಪಾಕಿಸ್ತಾನಕ್ಕೆ ಭಾರತೀಯ ಸೇನಾ ಮುಖ್ಯಸ್ಥರ ಕಠಿಣ ಎಚ್ಚರಿಕೆ ದ್ವಿವೇದಿ ವಾರ್ನಿಂಗ್ ವೈರಲ್!” “ಭೂಗೋಳದ ಭಾಗವಾಗಿರಬೇಕೆ ಅಥವಾ ಇತಿಹಾಸದ ಭಾಗವಾಗಬೇಕೆ ?”
ತಿರುಮಲ ತಿಮ್ಮಪ್ಪನ 3,550 ಮೆಟ್ಟಿಲು ಹತ್ತಿದ 116 ವರ್ಷದ ನವನೀತಮ್ಮ ಕರ್ನಾಟಕದ ಶತಾಯುಷಿ!
ಒಂದೂವರೆ ವರ್ಷ ಫ್ರೀ ಬಸ್  ಪ್ರಯಾಣ…ಕೊನೆಯಲ್ಲಿ ದಂಡ ಮತ್ತು ಜೈಲು ಶಿಕ್ಷೆ!
Side Income ಇಂದು ಆಯ್ಕೆ ಅಲ್ಲ, ಅಗತ್ಯ …ಹಣ ಗಳಿಸಿ… ನಿದ್ರೆಯಲ್ಲೂ!ಒಂದು ಸಂಬಳ ಸಾಕಾಗದ ಕಾಲ ಇದು.
ಶಂಕರಾಚಾರ್ಯರ ಹೊಸ ಯೋಜನೆ ದೇಶವನ್ನೇ ಚರ್ಚೆಗೆ ತಳ್ಳಿದ ಕಾರಣ ಏನು?Go-LXಒಂದು ಕ್ಲಿಕ್‌ನಲ್ಲಿ ಹಸು ಮಾರಾಟ…
ಹತ್ತು ವರ್ಷದಿಂದ ಪೊಲೀಸರಿಗೆ ಬೇಕಾದ ಆರೋಪಿಯನ್ನು ಕೊನೆಗೂ ಬಂಧಿಸಿದ ಪೊಲೀಸರು
ಎಲ್ಲೆಡೆ LPG ಗ್ಯಾಸ್ ಸಿಲಿಂಡರ್ ಸಂಕಷ್ಟ: ಇದು ಜೀವನೋಪಾಯದ ಪ್ರಶ್ನೆ… ತಕ್ಷಣ ಸಮರ್ಪಕ ಕ್ರಮ ಸರ್ಕಾರದ ಹೊಣೆ.
₹10,000ಕ್ಕೆ NEET-UG 2026 ಪ್ರಶ್ನೆಪತ್ರಿಕೆ? ದೇಶವೇ ಬೆಚ್ಚಿಬಿದ್ದ ಲೀಕ್ ಸ್ಕಾಂಡಲ್!ಟೆಲಿಗ್ರಾಂ ಸೀಕ್ರೆಟ್ ಚಾಟ್ ವೈರಲ್…22 ಲಕ್ಷ ವಿದ್ಯಾರ್ಥಿಗಳ ಕನಸಿಗೆ ದೊಡ್ಡ ಹೊಡೆತ — NEET 2026 ರದ್ದು!
 ಡಿಗ್ರಿಗೂ ಮುನ್ನ ಹ್ಯಾಕರ್ ಗೆ IIT ಉದ್ಯೋಗ! ಪ್ರತಿಭೆ ಇದ್ದರೆ ಅವಕಾಶವೇ ನಿಮ್ಮ ಮನೆ ಬಾಗಿಲು ತಟ್ಟುತ್ತದೆ!” ಅನ್ನೋದಕ್ಕೆ ಸ್ಫೂರ್ತಿ ಈ ನಿಸರ್ಗ ಅಧಿಕಾರಿ..
ಈ ಬಾರಿ ಮಕ್ಕಳೊಟ್ಟಿಗೆ PUC ಎಕ್ಸಾಮ್ ಪಾಸಾದಅಮ್ಮಂದಿರೇ ಮನಸ್ಸಿದ್ದರೆ ಮಾರ್ಗ ಇದೆ ಅನ್ನೋದಕ್ಕೆ…ಪ್ರೇರಣೆ…!
108 ಆರೋಗ್ಯ ಕವಚ'”ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ಇನ್ಮುಂದೆ ಆಂಬ್ಯುಲೆನ್ಸ್ ನಿಮ್ಮ ಮನೆಬಾಗಿಲಿಗೆ! 
ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ SIR ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಅಳಿಸಬಹುದಾ? ಈಗಲೇ ಎಚ್ಚರ!
ರಾಪಿಡೊ ಚಾಲಕನ ಖಾತೆಯಲ್ಲಿ 300 ಕೋಟಿ ರೂ. ವಹಿವಾಟು! ಶಾಕ್ ಅದ ED
ಬೀದಿ ನಾಯಿಗಳ ಹಾವಳಿ ಮಾನವ ಜೀವ ರಕ್ಷಣೆಗೆ ಮೊದಲ ಆದ್ಯತೆ — ಸುಪ್ರೀಂ ಕೋರ್ಟ್‌ನ ಕಠಿಣ ನಿಲುವು
ಹೊರಗೆ ಕ್ಯಾಂಟೀನ್…ಆದ್ರೆ ಒಳಗೆ ನಡೆಯುತ್ತಿತ್ತು ಬೇರೆದ್ದೇ ಆಟ..!ಬಯಲಾಯ್ತು ಬೆಚ್ಚಿಬೀಳಿಸುವ ದಂಧೆ. 
ಪ್ರತೀಕಾರದ ದಾಳಿಗೆ ‘ ರೌಡಿಶೀಟರ್ ಟ್ಯಾಬ್ಲೆಟ್’ ಆರೀಫ್ ಖತಂ .!
ಗೃಹಲಕ್ಷ್ಮಿ ಫಲಾನುಭವಿಗಳೇ ಗಮನಿಸಿ: ಹಣ ಕ್ರೆಡಿಟ್ ಆಗ್ಬೇಕಾದ್ರೆ ಇನ್ಮುಂದೆ ಬಯೋಮೆಟ್ರಿಕ್ ಕಡ್ಡಾಯ!
420 ವಂಚನೆ ಪ್ರಕರಣದಲ್ಲಿ ಮಹಿಳೆಯ ಬಂಧನ – ಪೊಲೀಸ್ ತನಿಖೆ
ಸುಳ್ಯದಲ್ಲಿ ಚಿನ್ನಾಭರಣ ಕಳವು,  ಮಹಿಳೆಯ ಮೇಲೆ ಶಂಕೆ
ಸಂಸತ್ತಿನಲ್ಲಿ ಪ್ರಶ್ನೆ ಎದುರಿಸಲು ಆಗದೆ,  ಪ್ರಶ್ನೆಯನ್ನೇ ಕೇಳದಂತೆ ಮಾಡಿದರು – ರಾಹುಲ್ ಗಾಂಧಿ
ಕೊನೆಗೂ ಸೋತ ಖಾಕಿ….!!!