📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಕಂಪನಿಗೆ ಯಶಸ್ಸು ತಂದ ಇಂಟರ್ನ್‌ ಸಂಬಳ ಜಾಸ್ತಿಕೇಳಿದ್ದಕ್ಕೆ CEO ಅಂದ್ರು “Money-minded”-ಸಿಇಒ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ

    ಯಶಸ್ಸು ತಂದಿಟ್ಟ ಇಂಟರ್ನ್‌ಗೆ ಸಿಕ್ಕಿತು ಶಾಕ್!ಟಾಕ್ಸಿಕ್ ಕಂಪನಿಗಳ ಬಗ್ಗೆ ಇರಲಿ ಎಚ್ಚರ!

    ಒಂದು ಸಣ್ಣ ಸ್ಟಾರ್ಟ್‌ಅಪ್ (Startup) ಕಂಪನಿಯಲ್ಲಿ ಕೇವಲ 6 ಜನ ಕೆಲಸ ಮಾಡುತ್ತಿದ್ದರು. ಅಲ್ಲಿಗೆ AI ಇಂಟರ್ನ್ ಆಗಿ ಸೇರಿದ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ, ಹಗಲು ರಾತ್ರಿ ಕಷ್ಟಪಟ್ಟು ಕಂಪನಿಯ ಇಡೀ ತಾಂತ್ರಿಕ ವ್ಯವಸ್ಥೆಯನ್ನು (SLM Infrastructure) ತಾನೊಬ್ಬನೇ ಸಿದ್ಧಪಡಿಸಿದ್ದ. ಕಂಪನಿಯ ಖರ್ಚನ್ನು ಶೇಕಡಾ 95 ರಷ್ಟು ಕಡಿಮೆ ಮಾಡಿ, ಬರೋಬ್ಬರಿ 7 ಕ್ಕೂ ಹೆಚ್ಚು ಹೊಸ ಗ್ರಾಹಕರನ್ನು (Clients) ತಂದುಕೊಟ್ಟಿದ್ದ!

    ಒಂದು ವಾಟ್ಸಾಪ್ ಮೆಸೇಜ್…ಎಲ್ಲಾ ಉಲ್ಟಾ!

    ತನ್ನ ಕಠಿಣ ಪರಿಶ್ರಮಕ್ಕೆ ತಕ್ಕಂತೆ ಸಂಬಳ ಹೆಚ್ಚಿಸಬೇಕು (Raise) ಎಂದು ಆ ಇಂಟರ್ನ್ ಮ್ಯಾನೇಜರ್‌ಗೆ ಒಂದು ಸಾಮಾನ್ಯ ವಾಟ್ಸಾಪ್ ಮೆಸೇಜ್ ಕಳುಹಿಸಿದ. ಅಷ್ಟಕ್ಕೇ ಆ ಕಂಪನಿಯ ಮ್ಯಾನೇಜ್‌ಮೆಂಟ್ ಕಂಗಾಲಾಯಿತು! ಸಂಬಳ ಹೆಚ್ಚು ಮಾಡುವುದನ್ನು ಬಿಟ್ಟು, “ನೀನು ಮಾಡಿದ್ದೆಲ್ಲಾ ಬರೀ ಸಣ್ಣ ಪುಟ್ಟ ಟೆಸ್ಟ್ ಅಷ್ಟೇ” ಎಂದು ಆತನ ಸಾಧನೆಯನ್ನು ಕೀಳಾಗಿ ಕಂಡರು. ಅಷ್ಟೇ ಅಲ್ಲ, ಆ ಒಂದೇ ಒಂದು ಮೆಸೇಜ್‌ಗಾಗಿ ಆತನನ್ನು ಕೆಲಸದಿಂದಲೇ ತೆಗೆದುಹಾಕಿದರು!

    ಕಂಪನಿಯ CEO ಆ ಇಂಟರ್ನ್‌ಗೆ ಬರೋಬ್ಬರಿ 30 ನಿಮಿಷಗಳ ಕಾಲ ಕ್ಲಾಸ್ ತಗೊಂಡರು. “ನಿನಗೆ ಕೇವಲ ಹಣದ ಆಸೆ (Money-minded). ನಿನ್ನ ಮೆಸೇಜ್ ನೋಡಿ ನಮ್ಮ ಮ್ಯಾನೇಜರ್ ಹೃದಯವೇ ಒಡೆದುಹೋಗಿದೆ” ಎಂದು ನಾಟಕೀಯವಾಗಿ ಮಾತನಾಡಿದರು.

    ಇಂಟರ್ನ್ ಆಕ್ರೋಶ: “ಅವರು ‘ನಮ್ಮಿಂದ ಇಷ್ಟೇ ಹಣ ಕೊಡಲು ಸಾಧ್ಯ’ ಎಂದು ನೇರವಾಗಿ ಹೇಳಬಹುದಿತ್ತು, ನಾನೂ ಒಪ್ಪುತ್ತಿದ್ದೆ. ಆದರೆ ನನ್ನ 4 ತಿಂಗಳ ಕಷ್ಟದ ಕೆಲಸವನ್ನು ಮರೆತು, ಈ ರೀತಿ ಮಾಡಿದ್ದು ಸರಿ ಇಲ್ಲ. ನಾನು ಯಾರ ಮುಂದೆಯೂ ಭಿಕ್ಷೆ ಬೇಡುವುದಿಲ್ಲ!” ಎಂದು ಆ ಇಂಟರ್ನ್ ತನ್ನ ಎಕ್ಸ್‌ಪೀರಿಯನ್ಸ್ ಸರ್ಟಿಫಿಕೇಟ್ ಪಡೆದು ಅಲ್ಲಿಂದ ಹೊರಬಂದಿದ್ದಾನೆ.

    ಈ ವಿಷಯ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಸ್ಟಾರ್ಟ್‌ಅಪ್ ಕಂಪನಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ:

    • ಇಂಟರ್ನ್‌ಗೆ ಬೆಂಬಲ: “ಬ್ರದರ್, ಧೃತಿಗೆಡಬೇಡ. ನಿನ್ನ ಯೋಗ್ಯತೆಯನ್ನು ಯಾರ ಮುಂದೆಯೂ ಕಡಿಮೆ ಮಾಡಿಕೊಳ್ಳಬೇಡ. ನಿನ್ನನ್ನು ಕಳೆದುಕೊಂಡಿದ್ದು ಆ ಕಂಪನಿಯ ದುರಾದೃಷ್ಟ. ನಿನ್ನ ಜ್ಞಾನದೊಂದಿಗೆ ಮುಂದೆ ಸಾಗು, ನಿನಗೆ ಒಳ್ಳೆ ಭವಿಷ್ಯವಿದೆ” ಎಂದು ಜನರು ಧೈರ್ಯ ತುಂಬುತ್ತಿದ್ದಾರೆ.
    • ಸ್ಟಾರ್ಟ್‌ಅಪ್ ಸಂಸ್ಕೃತಿಗೆ ಛೀಮಾರಿ: “ಕೆಲಸ ಮಾಡಿಸಿಕೊಳ್ಳುವಾಗ ಪ್ರೊಫೆಷನಲ್, ಸಂಬಳ ಕೇಳಿದರೆ ಡ್ರಾಮಾನಾ?” ಎಂದು ನೆಟ್ಟಿಗರು ಕಂಪನಿಯ CEO ಕಾಲೆಳೆಯುತ್ತಿದ್ದಾರೆ.

    ಒಟ್ಟಿನಲ್ಲಿ, ಪ್ರತಿಭೆಗೆ ಬೆಲೆ ಕೊಡದ ಟಾಕ್ಸಿಕ್ (Toxic) ಕಂಪನಿಗಳಿಂದ ದೂರ ಇರುವುದೇ ಒಳ್ಳೆಯದು ಎಂಬ ಚರ್ಚೆ ಈಗ ಜೋರಾಗಿ ನಡೆಯುತ್ತಿದೆ!

    ##EmployeeRights #CorporateReality"##KnowYourWorth"##StartupCulture##ToxicWorkplace"

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಸರಸಕ್ಕೆ ಅಡ್ಡಿಪಡಿಸಿದ ಯುವಕನ ಮೇಲೆ  ಭೀಕರ ದಾಳಿ: ಗುಜರಾತ್‌ನಲ್ಲಿ 21 ವರ್ಷದ ಯುವಕ ಬಲಿ
    ಅಣ್ಣಾ ಹಜಾರೆಗೆ ಲೈವ್, ಸೋನಂ ವಾಂಗ್ಚುಕ್‌ಗೆ ಮೌನವೇಕೆ?”  ದ್ವಂದ್ವ ನೀತಿಯ ಬಗ್ಗೆ ಪ್ರಶ್ನೆ
    ಮಕ್ಕಳಿಲ್ಲದ ನೋವನ್ನು ಮರಗಳ ಪ್ರೀತಿಯಾಗಿ ಬದಲಿಸಿ ಬರಡು ಭೂಮಿಯನ್ನು ಹಸಿರು ಕಾಡಾಗಿಸಿದ ದಂಪತಿಗಳ ಅದ್ಭುತ ಜೀವನಗಾಥೆ
    ಕರ್ನಾಟಕ ಪ್ರವಾಸೋದ್ಯಮದ ರಾಯಭಾರಿಯಾಗಿ ರಿಷಬ್ ಶೆಟ್ಟಿ…
    ಬೀಡಿ, ಗೋಡಂಬಿ ಮತ್ತು ಸ್ಕೀಮ್ ಕಾರ್ಮಿಕರಿಗೆ ಕನಿಷ್ಠ ಕೂಲಿ ನೀಡಿ: ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ.
    ಮಂಗಳೂರಿನಲ್ಲಿ ಪಕ್ಕಪ್ಲಾನ್ ಡ್ ಅಟ್ಯಾಕ್ ..!ರೌಡಿ ಶೀಟರ್ ಬರ್ಬರ ಹತ್ಯೆ…ವಿಶೇಷ ತಂಡ ರಚನೆ..!
    ಬಾವಿ ಮುಖ್ಯಮಂತ್ರಿ ಆಪ್ತನ ಭೀಕರ ಹತ್ಯೆ ಹಿಂದೆ ಯಾರು?
    ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆಯ ಕ್ರೆಡಿಟ್ ಪಡೆದುಕೊಳ್ಳಲು ಶುರುವಾಯಿತು ಫೈಟ್
    ಮುಂಜಾನೆ ಹೊತ್ತಿ ಉರಿದ ಆಸ್ಪತ್ರೆ…ಜೀವ ಉಳಿಸಿಕೊಳ್ಳಲು ರೋಗಿಗಳ ಪರದಾಟ.ಬಿಹಾರದಲ್ಲಿ ಹೃದಯವಿದ್ರಾವಕ ಘಟನೆ.
    17ನೇ ಆಯವ್ಯಯ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
    ಕೇವಲ ₹5 ಕ್ಕೆ ಸಿಗಲಿದೆ ಬಿಸಿಬಿಸಿ ಮೀನು-ಊಟ! ಮಹಿಳೆಯರ ಖಾತೆಗೆ ಪ್ರತಿ ತಿಂಗಳು ₹3,000 ಫಿಕ್ಸ್! ಎಲ್ಲಿ ಯಾರು ಕೊಡ್ತಾರೆ …
    30ಕ್ಕೂ ಹೆಚ್ಚು ರಾಕ್ಷಸರ ಕಪಿಮುಷ್ಟಿಯಲ್ಲಿ ನಲುಗಿದ 13 ವರ್ಷದ ಮಗು!-ಶ್ರೀಗಂಗಾನಗರದ ಪೈಶಾಚಿಕ ಕೃತ್ಯ
    ಉಡುಪಿಯಲ್ಲಿ  ಬೆಟ್ಟಿಂಗ್ ಮಾಫಿಯಾದ ಚಟುವಟಿಕೆಯನ್ನು ಡೆತ್ ನೋಟ್ ರಿವಿಲ್ ಮಾಡಿತೇ?
    ಆಹಾರ ಬೆಲೆ ಏರಿಕೆ: ಸಾಮಾನ್ಯರ ಅಡಿಗೆ ಮನೆಗೆ ಮತ್ತೆ ಹೊರೆ?
    ಕನಕಪುರ ಬಂಡೆ ಬಿಜೆಪಿಗೆ ಎಂಬ ಬೋಗಸ್ ಸುದ್ದಿ
    ಅಜ್ಜಿಯ ಚಿನ್ನಕ್ಕೇ ಕನ್ನ! ಮೊಮ್ಮಗ ಅರೆಸ್ಟ್….
    ₹1270 ಕೋಟಿ ಕಾನ್ಟ್ರಾಕ್ಟ್ ಹಗರಣ -CM ಖಾಂಡು ಕುಟುಂಬ ವಿಚಾರಣೆ-ಸುಪ್ರೀಂಕೋರ್ಟ್ ಸಿಬಿಐಗೆ ಆದೇಶ..
    ‘ಅಮರ್ ಜವಾನ್ ಪಾರ್ಕ್’ಗೆ ಯುದ್ಧ ಟ್ಯಾಂಕ್, ಯುದ್ಧವಿಮಾನ ಸ್ಥಾಪನೆಗೆ ರಕ್ಷಣಾ ಸಚಿವರಿಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಮನವಿ
    ಮಂತ್ರಾಲಯದ ಮಠದ ಹೆಸರಲ್ಲಿ 3 ಲಕ್ಷ ಆಸೆ ತೋರಿಸಿ ವಂಚನೆ..!
    “ಕುಂಡೆ(ತಿಕ)ಯಲ್ಲಿ ಲಕ್ಷ್ಮಿ ಇರುತ್ತಾಳೆ” ಎಂಬ ಹೇಳಿಕೆ ವೈರಲ್! ಆರ್ಯವರ್ಧನ್ ಗುರೂಜಿ ವಿರುದ್ಧ ದೂರು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ
    2027ರಿಂದ YouTube ಹೊಸ ರೂಲ್ಸ್..ಕ್ರಿಯೇಟರ್‌ಗಳಿಗೆ ಶಾಕ್!YouTube Monetization ಕಠಿಣ!
    ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ಲಾಟಿನಂ ಕಿರೀಟ!
    ವೃಷಣಗಳಿಗೆ ₹6 ಕೋಟಿ? ನಾ ರೀಲ್ ನಂಬಿ  16ರ ಬಾಲಕ ಹತ್ಯೆ!ಇದು ₹6 ಕೋಟಿ ಆಸೆಗೆ ನಡೆದ ಭೀಕರ ಕೃತ್ಯ…!
    ಬೆಂಗಳೂರಿನಲ್ಲಿ₹2,384 ಕೋಟಿ GSTದಂಧೆ ಭೇದಿಸಿದ ಇಲಾಖೆ.. ಭರ್ಜರಿ ದಾಳಿ! ಭಾರೀ GST ಸ್ಕ್ಯಾಂ .. ಹಲವರು ಬಲೆಗೆ ಬೀಳುವ ಸಾಧ್ಯತೆ!…
    ಇಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ಪ್ರತಿಭಟನೆ
    ಲಕ್ನೋ ಕೋಚಿಂಗ್ ಸೆಂಟರ್‌ನಲ್ಲಿ ಭೀಕರ ಬೆಂಕಿ,15 ವಿದ್ಯಾರ್ಥಿಗಳು ಸಜೀವ ದಹನ ಹೃದಯವಿದ್ರಾವಕ ದುರಂತ
    ಇನ್ನು ಹೈವೇಯಲ್ಲಿ ಲಿಮಿಟ್ ಗಿಂತ ವೇಗವಾಗಿ ಹೋಗುವವರು ಹುಷಾರಾಗಿರಿ…
    ಜಿಮ್,“ಫಿಟ್ನೆಸ್ ಸೆಂಟರ್‌ಗಳಲ್ಲಿ ಹೆಚ್ಚುತ್ತಿರುವ ಅಪಾಯಕಾರಿ ಸಂಬಂಧಗಳು: ಜಿಮ್ ಟ್ರೈನರ್ ಆತ್ಮಹತ್ಯೆ
    AAP ಸದ್ದು ಮಂಗಳೂರಲ್ಲೂ! ಜನರ ಸಮಸ್ಯೆಗೆ ನೇರ ಹೋರಾಟ
    ಮಣಿಪಾಲ ಜೆಇಇ ಮೇನ್ಸ್ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಪ್ರಯತ್ನ….