📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಕಂಪನಿಗೆ ಯಶಸ್ಸು ತಂದ ಇಂಟರ್ನ್‌ ಸಂಬಳ ಜಾಸ್ತಿಕೇಳಿದ್ದಕ್ಕೆ CEO ಅಂದ್ರು “Money-minded”-ಸಿಇಒ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ

ಯಶಸ್ಸು ತಂದಿಟ್ಟ ಇಂಟರ್ನ್‌ಗೆ ಸಿಕ್ಕಿತು ಶಾಕ್!ಟಾಕ್ಸಿಕ್ ಕಂಪನಿಗಳ ಬಗ್ಗೆ ಇರಲಿ ಎಚ್ಚರ!

ಒಂದು ಸಣ್ಣ ಸ್ಟಾರ್ಟ್‌ಅಪ್ (Startup) ಕಂಪನಿಯಲ್ಲಿ ಕೇವಲ 6 ಜನ ಕೆಲಸ ಮಾಡುತ್ತಿದ್ದರು. ಅಲ್ಲಿಗೆ AI ಇಂಟರ್ನ್ ಆಗಿ ಸೇರಿದ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ, ಹಗಲು ರಾತ್ರಿ ಕಷ್ಟಪಟ್ಟು ಕಂಪನಿಯ ಇಡೀ ತಾಂತ್ರಿಕ ವ್ಯವಸ್ಥೆಯನ್ನು (SLM Infrastructure) ತಾನೊಬ್ಬನೇ ಸಿದ್ಧಪಡಿಸಿದ್ದ. ಕಂಪನಿಯ ಖರ್ಚನ್ನು ಶೇಕಡಾ 95 ರಷ್ಟು ಕಡಿಮೆ ಮಾಡಿ, ಬರೋಬ್ಬರಿ 7 ಕ್ಕೂ ಹೆಚ್ಚು ಹೊಸ ಗ್ರಾಹಕರನ್ನು (Clients) ತಂದುಕೊಟ್ಟಿದ್ದ!

ಒಂದು ವಾಟ್ಸಾಪ್ ಮೆಸೇಜ್…ಎಲ್ಲಾ ಉಲ್ಟಾ!

ತನ್ನ ಕಠಿಣ ಪರಿಶ್ರಮಕ್ಕೆ ತಕ್ಕಂತೆ ಸಂಬಳ ಹೆಚ್ಚಿಸಬೇಕು (Raise) ಎಂದು ಆ ಇಂಟರ್ನ್ ಮ್ಯಾನೇಜರ್‌ಗೆ ಒಂದು ಸಾಮಾನ್ಯ ವಾಟ್ಸಾಪ್ ಮೆಸೇಜ್ ಕಳುಹಿಸಿದ. ಅಷ್ಟಕ್ಕೇ ಆ ಕಂಪನಿಯ ಮ್ಯಾನೇಜ್‌ಮೆಂಟ್ ಕಂಗಾಲಾಯಿತು! ಸಂಬಳ ಹೆಚ್ಚು ಮಾಡುವುದನ್ನು ಬಿಟ್ಟು, “ನೀನು ಮಾಡಿದ್ದೆಲ್ಲಾ ಬರೀ ಸಣ್ಣ ಪುಟ್ಟ ಟೆಸ್ಟ್ ಅಷ್ಟೇ” ಎಂದು ಆತನ ಸಾಧನೆಯನ್ನು ಕೀಳಾಗಿ ಕಂಡರು. ಅಷ್ಟೇ ಅಲ್ಲ, ಆ ಒಂದೇ ಒಂದು ಮೆಸೇಜ್‌ಗಾಗಿ ಆತನನ್ನು ಕೆಲಸದಿಂದಲೇ ತೆಗೆದುಹಾಕಿದರು!

ಕಂಪನಿಯ CEO ಆ ಇಂಟರ್ನ್‌ಗೆ ಬರೋಬ್ಬರಿ 30 ನಿಮಿಷಗಳ ಕಾಲ ಕ್ಲಾಸ್ ತಗೊಂಡರು. “ನಿನಗೆ ಕೇವಲ ಹಣದ ಆಸೆ (Money-minded). ನಿನ್ನ ಮೆಸೇಜ್ ನೋಡಿ ನಮ್ಮ ಮ್ಯಾನೇಜರ್ ಹೃದಯವೇ ಒಡೆದುಹೋಗಿದೆ” ಎಂದು ನಾಟಕೀಯವಾಗಿ ಮಾತನಾಡಿದರು.

ಇಂಟರ್ನ್ ಆಕ್ರೋಶ: “ಅವರು ‘ನಮ್ಮಿಂದ ಇಷ್ಟೇ ಹಣ ಕೊಡಲು ಸಾಧ್ಯ’ ಎಂದು ನೇರವಾಗಿ ಹೇಳಬಹುದಿತ್ತು, ನಾನೂ ಒಪ್ಪುತ್ತಿದ್ದೆ. ಆದರೆ ನನ್ನ 4 ತಿಂಗಳ ಕಷ್ಟದ ಕೆಲಸವನ್ನು ಮರೆತು, ಈ ರೀತಿ ಮಾಡಿದ್ದು ಸರಿ ಇಲ್ಲ. ನಾನು ಯಾರ ಮುಂದೆಯೂ ಭಿಕ್ಷೆ ಬೇಡುವುದಿಲ್ಲ!” ಎಂದು ಆ ಇಂಟರ್ನ್ ತನ್ನ ಎಕ್ಸ್‌ಪೀರಿಯನ್ಸ್ ಸರ್ಟಿಫಿಕೇಟ್ ಪಡೆದು ಅಲ್ಲಿಂದ ಹೊರಬಂದಿದ್ದಾನೆ.

ಈ ವಿಷಯ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಸ್ಟಾರ್ಟ್‌ಅಪ್ ಕಂಪನಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ:

  • ಇಂಟರ್ನ್‌ಗೆ ಬೆಂಬಲ: “ಬ್ರದರ್, ಧೃತಿಗೆಡಬೇಡ. ನಿನ್ನ ಯೋಗ್ಯತೆಯನ್ನು ಯಾರ ಮುಂದೆಯೂ ಕಡಿಮೆ ಮಾಡಿಕೊಳ್ಳಬೇಡ. ನಿನ್ನನ್ನು ಕಳೆದುಕೊಂಡಿದ್ದು ಆ ಕಂಪನಿಯ ದುರಾದೃಷ್ಟ. ನಿನ್ನ ಜ್ಞಾನದೊಂದಿಗೆ ಮುಂದೆ ಸಾಗು, ನಿನಗೆ ಒಳ್ಳೆ ಭವಿಷ್ಯವಿದೆ” ಎಂದು ಜನರು ಧೈರ್ಯ ತುಂಬುತ್ತಿದ್ದಾರೆ.
  • ಸ್ಟಾರ್ಟ್‌ಅಪ್ ಸಂಸ್ಕೃತಿಗೆ ಛೀಮಾರಿ: “ಕೆಲಸ ಮಾಡಿಸಿಕೊಳ್ಳುವಾಗ ಪ್ರೊಫೆಷನಲ್, ಸಂಬಳ ಕೇಳಿದರೆ ಡ್ರಾಮಾನಾ?” ಎಂದು ನೆಟ್ಟಿಗರು ಕಂಪನಿಯ CEO ಕಾಲೆಳೆಯುತ್ತಿದ್ದಾರೆ.

ಒಟ್ಟಿನಲ್ಲಿ, ಪ್ರತಿಭೆಗೆ ಬೆಲೆ ಕೊಡದ ಟಾಕ್ಸಿಕ್ (Toxic) ಕಂಪನಿಗಳಿಂದ ದೂರ ಇರುವುದೇ ಒಳ್ಳೆಯದು ಎಂಬ ಚರ್ಚೆ ಈಗ ಜೋರಾಗಿ ನಡೆಯುತ್ತಿದೆ!

##EmployeeRights #CorporateReality"##KnowYourWorth"##StartupCulture##ToxicWorkplace"

COMMENTS

Login with Gmail to comment

ಇನ್ನಷ್ಟು ಸುದ್ದಿ

ಅಪ್ರಾಪ್ತನ ಕ್ರೌರ್ಯಕ್ಕೆ ಬಳ್ಳಾರಿ ವಸತಿ ಶಾಲೆಯ ದೌರ್ಜನ್ಯವೇ ಸಾಕ್ಷಿ… ಈ ಕ್ರೌರ್ಯದ ಹಿಂದೆ ಮನೋರೋಗ ಅಡಗಿದೆಯಾ? 
ಮದರಸಾದಲ್ಲಿ ದೌರ್ಜನ್ಯ ಮತ್ತು ಬಲವಂತದ ಕೂಲಿ ಆರೋಪ-24 ಮಕ್ಕಳ ರಕ್ಷಣೆ
ನಾರ್ವೇ ಪತ್ರಕರ್ತರಿಗೆ ತಿರುಗೇಟು: “ಭಾರತದ ವಾಸ್ತವತೆ ಅರಿವಿಲ್ಲ” ಎಂದ MEA ಕಾರ್ಯದರ್ಶಿ ಸಿಬಿ ಜಾರ್ಜ್…
book ಮಾಡಿದ ನಿಮ್ಮ ಹೊಸ ಕಾರು-ಬೈಕ್ ಇನ್ನೂ ಬಂದಿಲ್ವಾ?ಪಶ್ಚಿಮ ಏಷ್ಯಾ ಯುದ್ಧದಿಂದ ಸರಬರಾಜು ವಿಳಂಬ…!
ಕಣ್ಣೀರಾದ ಕಣ್ಣಾಲಿಗಳು ಹೊಟ್ಟೆ ತುಂಬಾ ಊಟ ಮಾಡಿ ನಿದ್ರಿಸುವಂತೆ ಮಾಡುವ  “ಕಾರುಣ್ಯ ಸೇವಾಕ್ಕೀಗ 3000 ದಿನಗಳು…!!!”
19 ವರ್ಷದ ಆಯಾನ್ ಅಹ್ಮದ್ ತನ್ವೀರ್ ಅಹ್ಮದ್ ವಿರುದ್ಧ ಗಂಭೀರ ಸೈಬರ್ ಲೈಂಗಿಕ ಶೋಷಣೆ ..!ಅಮರಾವತಿ ಭೀಕರ ಪ್ರಕರಣ-
ಬಾಲ್ಯದ ಗೆಳೆಯನ ಬಲೆಗೆ ಬಿದ್ದ ವಾಯುಸೇನೆ ಅಧಿಕಾರಿಯ ಪತ್ನಿ?! ಲೈಂಗಿಕ ಬ್ಲ್ಯಾಕ್‌ಮೇಲ್,’ಕಬೂಲ್ ಹೈ’ ಹೇಳುವಂತೆ ಒತ್ತಾಯ!
War update-ಕಂಪ್ಲೀಟ್ ಡೀಟೇಲ್ಸ್ …ಮುಂದೇನು? ceasefire ಮುಂದುವರಿಯುತ್ತದೆಯಾ?ಶಾಂತಿ ಅಥವಾ ಸಂಘರ್ಷ? ಮುಂದಿನ ಕೆಲ ದಿನಗಳು ವಿಶ್ವದ ಭವಿಷ್ಯ ತೀರ್ಮಾನಿಸುತ್ತದೆ.
AI ಡೀಪ್‌ಫೇಕ್ ಕೇವಲ ಸಿನಿಮಾ ನಟಿಯರಿಗೆ ಸೀಮಿತವಾಗಿಲ್ಲ .
ಎಲಾನ್ ಮಸ್ಕ್: ವಿಶ್ವದ ಮೊದಲ ಟ್ರಿಲಿಯನೇರ್‌ನಿಂದ ಇನ್ನೂ ಎತ್ತರದತ್ತ!
ನೆತನ್ಯಾಹು ಎಲ್ಲಿದ್ದಾರೆ? ಬದುಕಿದ್ದರೆ ಹಿಂಬಾಲಿಸಿ ಕೊಲ್ಲುತ್ತೇವೆ ಎಂದ ಇರಾನ್
ಅಕ್ರಮ ಕಸಾಯಿ ಖಾನೆಗೆ ದಾಳಿ ಇಬ್ಬರನ್ನು ಬಂಧಿಸಿದ ಬಂಟ್ವಾಳದ ಪೊಲೀಸರು
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಿಗ್ಗಾಮುಗ್ಗ ಜಾಡಿಸಿದ ಹೆಚ್ ವಿಶ್ವನಾಥ್
ಕರ್ನಾಟಕದಲ್ಲಿ 2 ಲಕ್ಷಕ್ಕೂ ಹೆಚ್ಚು ನಾಯಿ ಕಚ್ಚಿದ ಪ್ರಕರಣಗಳು …!ನಗರಗಳಲ್ಲಿ ‘ಸ್ಟ್ರೇ ಡಾಗ್ ಟೆರರ್’ — ಜನರು ಭಯದಲ್ಲಿ ಬದುಕುತ್ತಿದ್ದಾರೆ!
🔥 ಬಿಸಿಲಿನ ಬಿಸಿ ತಾರಕ್ಕೇರಿದೆ, ಆದರೆ ಮಳೆ ಸಿಡಿಲು ಸರ್ಪ್ರೈಸ್ ಬರ್ತಿದೆ! 🌩️
ಹುಡುಗಾಟಿಕೆ ಆಡುತ್ತಿರುವ ರಾಮಲಿಂಗಾರೆಡ್ಡಿ-ಕ್ಷೇತ್ರದ ಜನರಲ್ಲಿ ಅಸಮಾಧಾನ
ಮಂಗಳೂರು ಸರ್ಕಾರಿ ಕಾಲೇಜಿನಲ್ಲಿ ಎಬಿವಿಪಿ, ಎನ್ ಎಸ್ ಯು ಐ ವಿದ್ಯಾರ್ಥಿಗಳ ಘರ್ಷಣೆ 
ವಿಷಪ್ರಾಶನ  ಪ್ರಕರಣದಲ್ಲಿ ಕಾರ್ಕಳ ಗಜರಿಯ ಹಾಸ್ಪಿಟಲ್ ತಪ್ಪು ಮಾಡಿತೇ?
8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ
ದ್ವಿತೀಯ ಪಿ.ಯು.ಸಿ ಪರೀಕ್ಷಾ ಹಾಜರಾತಿ
ಅಮಾವಾಸ್ಯೆ ಬೈಲ್ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆ ಹಾಗೂ ನಿಂದನೆಯ ಪ್ರಕರಣ ದಾಖಲು
ಅಕ್ರಮ ಗಡಿ ದಾಟಿದವರಿಗೆ ಈಗ ಭಾರತದಲ್ಲಿ ನೋ ಎಂಟ್ರಿ!ಬಾಂಗ್ಲಾ ಗಡಿಯಲ್ಲಿ ಎನ್‌ಆರ್‌ಸಿ ಅಸ್ತ್ರ: ರಾಜಕೀಯಕ್ಕಿಂತ ರಾಷ್ಟ್ರೀಯ ಭದ್ರತೆ ಮುಖ್ಯ
ಇಂದು ಮಾಜಿ ಸಚಿವರಿಂದ ಸೌಹಾರ್ದ ಇಫ್ತಾರ್ ಕೂಟ 
ಎಚ್ಚರ… ನಿಮ್ಮಸುತ್ತಮುತ್ತ ಏನು ನಡೆಯುತ್ತಿದೆ ಗೊತ್ತಿರಲಿ! 🚨Be Aware… Stay Alert… Save Youth!
ಪಾಕಿಸ್ತಾನದಲ್ಲಿ ಹಿಂದೂ ಯುವತಿಯ ಸಾಧನೆ
ಪುತ್ತೂರಿನ ಕೃಷ್ಣ ಜೆ. ರಾವ್ ಪ್ರಕರಣಕ್ಕೆ ಹೈಕೋರ್ಟ್ ಬ್ರೇಕ್!“ಮಧ್ಯಂತರ ತೀರ್ಪು: ₹75K ತಿಂಗಳ ಸಹಾಯ ಷರತ್ತು”
ರಾಪಿಡೊ ಚಾಲಕನ ಖಾತೆಯಲ್ಲಿ 300 ಕೋಟಿ ರೂ. ವಹಿವಾಟು! ಶಾಕ್ ಅದ ED
60 ದಿನಗಳ ಸ್ಟಾಕ್ – ಭಾರತಕ್ಕೆ ಎಲ್‌ಪಿಜಿ ಚಿಂತೆ ಇಲ್ಲ!
ಪರಮೇಶ್ವರ ವಿರುದ್ಧ FIR-₹500 ಬೆಟ್ಟಿಂಗ್ ಹೇಳಿಕೆಗೆ ಕಾನೂನು ಕ್ರಮ.
ಡಿಜಿಟಲ್ ದಿಗ್ಗಜರಿಗೆ ₹2 ಕೋಟಿ ಲೀಗಲ್ ನೋಟಿಸ್ ಶಾಕ್!ಯೂಟ್ಯೂಬ್ ಸ್ಟಾರ್ vs ಟಿವಿ ಸ್ಟಾರ್ ನಡುವಿನ ಕಾನೂನು ಸಮರ!