📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಜನಿವಾರಕ್ಕೆ ಕೈ ಹಾಕಿದವರು, ಪರ್ಮನೆಂಟ್ ಮನೆಗೆ ಹೋಗುವ ದಾರಿಯಲ್ಲಿ….

ಅಷ್ಟಕ್ಕೂ ಆ ಜನಿವಾರವು ಅವರಿಗೆ ಏನು ತೊಂದರೆ ಮಾಡಿತ್ತು? ಆ ಜನಿವಾರವನ್ನು ತೆಗೆಸಬೇಕು, ಆ ಮೂಲಕ ರಾಜ್ಯದ ಬ್ರಹ್ಮಣರಿಗೆ ಅವಮಾನ ಮಾಡಬೇಕು ಎಂದು, ಒಂದು ತಂಡವು ಪ್ರಯತ್ನಿಸುತ್ತಿತ್ತಾ ಎಂಬ ಪ್ರಶ್ನೆ ಎದ್ದೇಳುತ್ತಿದೆ ಈಗ. ಆ ತಂಡವು ಕೊಟ್ಟ ಬೆಂಬಲದ ಪರಿಣಾಮ, ಆ ಸಿಬ್ಬಂದಿಗಳು ಜನಿವಾರಕ್ಕೆ ಕೈಹಾಕಲು ಹೋಗಿ ಈಗ ಪರಮನೆಂಟಾಗಿ ಮನೆಯ ಮೂಲೆಯನ್ನು ಸೇರಲು ಹೊರಟಿದ್ದಾರೆ ಎನ್ನಲಾಗುತ್ತಿದೆ.

ಸಿಇಟಿ ಪರೀಕ್ಷೆಯು ರಾಜ್ಯ ರಾಜಧಾನಿಯಾದ ಬೆಂಗಳೂರಿನ ಕೃಪಾನಿ ಶಿಕ್ಷಣ ಸಂಸ್ಥೆಯಲ್ಲಿ ನಿಗದಿಯಾಗಿತ್ತು. ಹಾಗೆ ಪರೀಕ್ಷೆ ಬರೆಯಲು ಬಂದಂತಹ ವಿದ್ಯಾರ್ಥಿಗಳ ಜೇಬು ಹಾಗೂ  ಇತರ ಕಡೆ ಪರಿಶೀಲಿಸಿ ಯಾವುದೇ ನಕಲು ಹೊಡೆಯುವಂತಹ ಸಾಧನ ಇಲ್ಲದಿರುವುದನ್ನು ಕನ್ಫರ್ಮ್ ಮಾಡಿಕೊಂಡು ಒಳಗೆ ಬಿಡುತ್ತಿದ್ದ ಮೂವರು ಸಿಬ್ಬಂದಿಗಳು, ಬ್ರಾಹ್ಮಣ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡುತ್ತಾರೆ. ಅವರು ಹಾಕಿಕೊಂಡಿದ್ದ ಜನಿವಾರವನ್ನು ತೆಗೆಯುವಂತೆ ಬಲವಂತ ಪಡಿಸುತ್ತಾರೆ.

ಕಳೆದ ವರ್ಷ ಶಿವಮೊಗ್ಗದಲ್ಲೂ ಇದೇ ತರಹದ ಘಟನೆ ನಡೆದಿತ್ತು. ಅದು ವಿವಾದಕ್ಕೂ ಕಾರಣವಾಗಿತ್ತು. ಅದರ ಮುಂದುವರಿದ ಭಾಗವೇ ಕೃಪಾನಿ ಶಿಕ್ಷಣ ಸಂಸ್ಥೆಯಲ್ಲಿ ಈಗ ನಡೆದದ್ದು. ಆದರೆ, ಈ ಬಾರಿ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣವೇ ಯಾವುದೇ ರೀತಿಯ ಸಬೂಬು ಹೇಳದೆ , ತಪ್ಪಿತಸ್ಥ ಮೂವರು ಸಿಬ್ಬಂದಿಗಳಾದ ಗಿರಿಜಮ್ಮ, ಸರಿತಾ ಹಾಗೂ ಸುಧಾಕರ್ ಅವರನ್ನು ತಕ್ಷಣವೇ ಅಮಾನತ್ತು ಗೊಳಿಸಿದ್ದಾರೆ. ಹಾಗೂ ಬ್ರಾಹ್ಮಣ ಮಹಾಸಭಾ ದೂರಿನ ಆಧಾರದಲ್ಲಿ ಅವರನ್ನು ಬಂಧಿಸಲಾಗಿದೆ.

ಇದು ಕೇವಲ ಮೂವರು ಸಿಬ್ಬಂದಿಗಳಿಂದ ನಡೆದಂತಹ ಕೆಲಸವಲ್ಲ. ಶಿವಮೊಗ್ಗದಲ್ಲಿ ನಡೆದ ವಿವಾದ, ಜನಿವಾರಕ್ಕೆ ಕೈ ಹಾಕಿದಾಗ ನಡೆದಂತಹ ಘಟನೆ ಯ ಬಗ್ಗೆ ಆ ಸಿಬ್ಬಂದಿಗಳಿಗೆ ಗೊತ್ತಿಲ್ಲ ಅನ್ನುವಂತಿಲ್ಲ. ನೂರಕ್ಕೆ ನೂರರಷ್ಟು ಅವರಿಗೆ ಗೊತ್ತಿತ್ತು. ಗೊತ್ತಿಲ್ಲದೇ ಇರುವಂತಹ ವ್ಯಕ್ತಿ ಇಂತಹ ಜಾಗದಲ್ಲಿ ದುಡಿಯಲು ಅರ್ಹನೂ ಅಲ್ಲ. ಆದರೂ ಆ ಮೂವರು ಸಿಬ್ಬಂದಿಗಳು ಮತ್ತೆ ಜನಿವಾರಕ್ಕೆ ಕೈ ಹಾಕುತ್ತಾರೆ ಎಂದರೆ, ಅವರನ್ನು ಈ ರೀತಿ ಮಾಡಲು ಪ್ರೇರೇಪಿಸಿದ  ಟೀಮ್ ಒಂದು ಇರಲೇಬೇಕು. ಆ ಟೀಮ್ ಯಾವುದು? ಆ ಟಿವಿನ ಹಿನ್ನೆಲೆ ಏನು? ಆ ಟೀಮಿನ ಗುರಿ ಏನು? ಎಲ್ಲವೂ ಸಂಪೂರ್ಣ ತನಿಖೆಗೆ ಒಳಪಡಬೇಕು. ಹಾಗೆಯೇ ಈ ಒಂದು ತನಿಖೆಯು ಮತ್ತು ನೀಡಲಾಗುವ ಶಿಕ್ಷೆಯು, ಮುಂದಿನ ದಿನದಲ್ಲಿ ನಡೆಯುವ ಎಲ್ಲಾ ತರಹದ ಹುಚ್ಛಾಟಗಳಿಗೂ ಕಡಿವಾಣ ಹಾಕುವ ರೀತಿಯಲ್ಲಿರಬೇಕು. ಅದರ ಅರ್ಥ, ಈ ಮೂವರು ಸಿಬ್ಬಂದಿಗಳನ್ನು ಪರ್ಮನೆಂಟಾಗಿ ಶಿಕ್ಷಣ ಇಲಾಖೆಯಿಂದಲೇ ಬ್ಯಾನ್ ಮಾಡಬೇಕು. ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಅವರಿಗೆ ದುಡಿಯಲು ಅವಕಾಶವೇ ಇರಬಾರದು. ಇಂತಹ ಕಲುಷಿತ ಮನಸ್ಸುಳ್ಳ ವ್ಯಕ್ತಿಗಳು ಶಿಕ್ಷಣ ಇಲಾಖೆಯಂತಹ ಪವಿತ್ರ ಸ್ಥಳದಲ್ಲಿ ಇರುವುದು ತಪ್ಪು. ಮನಸ್ಸಿನಲ್ಲಿ ಕಲ್ಮಶ ತುಂಬಿಕೊಂಡಂತವರು ಶಿಕ್ಷಣ ಇಲಾಖೆಯಲ್ಲಿ ಇರಲು ಯೋಗ್ಯರೂ ಅಲ್ಲ, ಯಾವ ಅರ್ಹತೆಯೂ ಅವರಿಗಿಲ್ಲ ಅನ್ನುವುದನ್ನು ಸರ್ಕಾರವು ಹೇಳುವಂತ ಕೆಲಸ ಈ ಪ್ರಕರಣದಲ್ಲಿ ಆಗಬೇಕಿದೆ. ಹಾಗೆಯೇ ಈ ಮೂವರಿಗೂ ಪ್ರಚೋದನೆ ನೀಡಿದಂತಹ ಆ ಟೀಮಿನ ಬಗ್ಗೆಯೂ ತನಿಖೆಯಾಗಬೇಕು ಹಾಗೂ ಅವರ ಮೇಲು ಕ್ರಮ ಆಗಬೇಕು.

ಈಗಾಗಲೇ ಬೆಂಗಳೂರು ಜಿಲ್ಲಾಧಿಕಾರಿ ಜಗದೀಶ್ ಅವರು ಈ ಕ್ಷಣದ ತನಿಖಾ ವರದಿಯನ್ನು ಬಹಿರಂಗಪಡಿಸಿದ್ದಾರೆ. ಇಲ್ಲಿ ಮೂವರು ಸಿಬ್ಬಂದಿಗಳು ಬೇಕಂತಲೇ, ಯಾವುದೋ ಉದ್ದೇಶವನ್ನು ಇಟ್ಟುಕೊಂಡು ಈ ತಪ್ಪುಗಳನ್ನು ಮಾಡಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಆಗಾಗಲೇ ಇಲಾಖೆಯು ಸಿಬ್ಬಂದಿಗಳಿಗೆ ತಿಳುವಳಿಕೆ ನೀಡಿತ್ತು ಇಲಾಖೆ ಮತ್ತು, ಟ್ರೈನಿಂಗ್ ಕೂಡ ನೀಡಿತ್ತು. ಅಷ್ಟಾದರೂ ಈ ಮೂವರು ಸಿಬ್ಬಂದಿಗಳು ಸರ್ಕಾರದ ಸುತ್ತೋಲೆಯನ್ನು ಬದಿಗಿಟ್ಟು, ಬೇಕಂತಲೇ ಜನಿವಾರಕ್ಕೆ ಕೈ ಹಾಕಿದ್ದಾರೆಂದು ಪ್ರಾಥಮಿಕ ತನಿಖೆಯ ವರದಿಯನ್ನು ಬಹಿರಂಗಪಡಿಸಿದ್ದಾರೆ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಈಗಾಗಲೇ ಇಲಾಖೆಗೆ ಹಾಗೂ ಸರ್ಕಾರಕ್ಕೆ ಮನವಿ ಮಾಡಿದೆ. ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಪುಲ್ವಾಮಾ ದಾಳಿಯ ಮಾಸ್ಟರ್ಮೈಂಡ್ ಹಮ್ಜಾ ಬುರ್ಹಾನ್ ಹತ್ಯೆ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ರಹಸ್ಯ ಗುಂಡಿನ ದಾಳಿ
30 ವರ್ಷದ ಕನಸು ಸಾಕಾರ: ಮಾಣಿಲ–ಪೆರ್ಲ ಸಂಪರ್ಕಕ್ಕೆ ಸಿರಿಯ ನದಿಗೆ ಸೇತುವೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್!
ಶಂಕರಾಚಾರ್ಯರ ಹೊಸ ಯೋಜನೆ ದೇಶವನ್ನೇ ಚರ್ಚೆಗೆ ತಳ್ಳಿದ ಕಾರಣ ಏನು?Go-LXಒಂದು ಕ್ಲಿಕ್‌ನಲ್ಲಿ ಹಸು ಮಾರಾಟ…
ಐಪಿಎಲ್ ಇತಿಹಾಸದಲ್ಲೇ ಸುಮಾರು ₹230 ಕೋಟಿಗೂ ಅಧಿಕ ಒಟ್ಟು ಸಂಭಾವನೆ ಪಡೆದ ಆಟಗಾರನಾಗಿ ಕೊಹ್ಲಿ ದಾಖಲೆ…ಯ ಹಿಂದಿರುವ ಅಸಲಿ ಕಥೆ…!
🚨 “ಮಂಗಳೂರು ಜಿಲ್ಲಾಕಾರಾಗೃಹದಲ್ಲಿ ಗಲಾಟೆ: ಜೈಲು ಅಧೀಕ್ಷಕರ ಮೇಲೆಯೇ ಕೈದಿಗಳ ಹಲ್ಲೆಯತ್ನ!”
ಹತ್ತು ವರ್ಷದ ಮಗಳ ಹುಟ್ಟುಹಬ್ಬದ ಸಂಭ್ರಮ…  ವಿಧಿಯಾಟದಲ್ಲಿ ಕಣ್ಣೀರಾಗಿ ಮಾರ್ಪಟ್ಟ ದುರಂತ ಕಥೆ
“Arvind Kejriwal: ‘ಸತ್ಯಾಗ್ರಹ’ದಿಂದ ನ್ಯಾಯದ ಬೇಡಿಕೆ.”
NEET ಗೊಂದಲ, ಮರುಪರೀಕ್ಷೆ, ಮೌಲ್ಯಮಾಪನ ದೋಷಗಳು ಮತ್ತು ವಿದ್ಯಾರ್ಥಿ ಜೀವನದ ನೋವು..
₹119 ಕೋಟಿ ವ್ಯತ್ಯಾಸ ಸಣ್ಣ ವಿಷಯನಾ….ಏನಿದು ತಲೈವಾ..!
KIOCL ಮತ್ತು NDMC ವಿಲೀನಕ್ಕೆ ಶಾಸಕ ಡಾ. ಭರತ್ ಶೆಟ್ಟಿಯಿಂದ ಕೇಂದ್ರ ಸಚಿವರಿಗೆ ಮನವಿ
ಕೊನೆಗೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಿತೀಶ್ ಕುಮಾರ್
ಇನ್ನು ಹೈವೇಯಲ್ಲಿ ಲಿಮಿಟ್ ಗಿಂತ ವೇಗವಾಗಿ ಹೋಗುವವರು ಹುಷಾರಾಗಿರಿ…
ಮಂಗಳೂರು ಸಿಟಿ ಪೊಲೀಸರ ಭರ್ಜರಿ ಬೇಟೆ – ನಿಷೇಧಿತ ಎಂಡಿಎಂ, ಗಾಂಜಾ ಮರಾಟಗಾರರ ಬಂಧನ
ನಾಸಿಕ್‌ನ Tata Consultancy Services ಕಚೇರಿಯಲ್ಲಿ ಗಂಭೀರ ಆರೋಪಗಳ ನಡುವೆ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ — ಸುರಕ್ಷತೆಗೆ ಮೊದಲ ಆದ್ಯತೆ.
🔥 “Get out of here! — ಸೂಪರ್ women ವಿರುದ್ಧವೇ ಕೇಸ್?!!
ಮಾರ್ಕ್ಸ್ 90%, ಆದರೆ 19ಕ್ಕೆ ಕ್ರೂರ ಅಪರಾಧಿ!ಕನಸುಗಳಿದ್ದ ಹುಡುಗನೊಬ್ಬ ಕಟುಕನಾದ ದುರಂತ ಕಥೆ”
ಜನರ ಹಾಹಾ ಕಾರಕ್ಕೆ ಬೆಚ್ಚಿಬಿದ್ದ ಸರ್ಕಾರ –  ಎಸ್ಮ ಕಾಯ್ದೆ ಜಾರಿಗೆ
ಶಿಶಿಲದಲ್ಲಿ ವಿಷಪೂರಿತ ಹಾವು ಕಚ್ಚಿ 65 ವರ್ಷದ ರೈತ ಮೃತ್ಯು
“ಬಾದಾಮಿ ತಿಂದರೆ ಮೆಮೊರಿ ಹೆಚ್ಚಾಗಿ, ನನ್ನ ಫೈಲ್ ಎಲ್ಲಿ ಇದೆ ಎಂದು ನೆನಪಾಗಬಹುದು”-ಹಣ ಕೊಡದೇ ಕೆಲಸ ಆಗೋದಿಲ್ಲ ಎಂಬ ಭ್ರಷ್ಟ ವ್ಯವಸ್ಥೆ ಇನ್ನೂ ಬಲವಾಗಿ ಜೀವಂತವಾಗಿದೆ…!
ಇಂದು ಮಾಜಿ ಸಚಿವರಿಂದ ಸೌಹಾರ್ದ ಇಫ್ತಾರ್ ಕೂಟ 
ಮುಗ್ಧ ಮಗು ಮೇಲೆ ನಡೆದ ಅಮಾನವೀಯ ಕ್ರೌರ್ಯ… ನ್ಯಾಯಕ್ಕಾಗಿ ಸಮಾಜದ ಒಕ್ಕೊರಲ ಹೋರಾಟ
ಬೆಳ್ತಂಗಡಿ ಸ್ನಾನಕ್ಕೆ ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು…
ಪಹಲ್ಗಾಮ್ ದಾಳಿಗೆ ವರ್ಷ : ಮೋದಿ ಶ್ರದ್ಧಾಂಜಲಿ, ಉಗ್ರರಿಗೆ ಎಚ್ಚರಿಕೆ
ರಾಪಿಡೊ ಚಾಲಕನ ಖಾತೆಯಲ್ಲಿ 300 ಕೋಟಿ ರೂ. ವಹಿವಾಟು! ಶಾಕ್ ಅದ ED
ಡೊನಾಲ್ಡ್ ಟ್ರoಪ್ ಮುಂದೆ ಮಂಡಿಯೂರಿ ಕೂತ ಜಗತ್ತು!
ಭಾರತೀಯ ಸೇನೆಯ ಚಲನವಲನದ ವಿಡಿಯೋಗಳು ಪಾಕಿಸ್ತಾನಕ್ಕೆ ಹೇಗೆ ತಲುಪಿದವು?
ಅಮೆರಿಕದ ಭೀಕರ ವಾಯು ದಾಳಿ: ಇರಾನ್‌ನ ಆರ್ಥಿಕ ಹೃದಯ ‘ಖಾರ್ಗ್ ದ್ವೀಪ’ದ ಸೇನಾ ನೆಲೆಗಳು ಧ್ವಂಸ – ಪ್ರತಿದಾಳಿ ಮಾಡಿದರೆ ತೈಲ ಕೇಂದ್ರಗಳೇ ಮುಂದಿನ ಗುರಿ ಎಂದು ಟ್ರಂಪ್ ಕಠಿಣ ಎಚ್ಚರಿಕೆ
ಮಂಗಳೂರು ನೀರಿನ ಸಂಕಷ್ಟ:ಮಳೆಯಿಲ್ಲದೆ ಮುಂದಿನ 1–2 ತಿಂಗಳು ಗಂಭೀರ ನೀರಿನ ಕೊರತೆ ಸಂಭವ ಸಾಧ್ಯತೆ.
ಮದರಸಾದಲ್ಲಿ ದೌರ್ಜನ್ಯ ಮತ್ತು ಬಲವಂತದ ಕೂಲಿ ಆರೋಪ-24 ಮಕ್ಕಳ ರಕ್ಷಣೆ