📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

30ಕ್ಕೂ ಹೆಚ್ಚು ರಾಕ್ಷಸರ ಕಪಿಮುಷ್ಟಿಯಲ್ಲಿ ನಲುಗಿದ 13 ವರ್ಷದ ಮಗು!-ಶ್ರೀಗಂಗಾನಗರದ ಪೈಶಾಚಿಕ ಕೃತ್ಯ

13 ವರ್ಷದ ಕಂದಮ್ಮನ ಆಕ್ರಂದನ ಕೇಳಿಸದ ಕಾನೂನು ವ್ಯವಸ್ಥೆ .!ಐದು ದಿನಗಳು… 30ಕ್ಕೂ ಹೆಚ್ಚು ನರಾಧಮರ ಪೈಶಾಚಿಕ ನರಕಯಾತನೆ! ರಕ್ಷಿಸಬೇಕಾದ ರಿಕ್ಷಾ ಚಾಲಕನೇ ಮಾರಿದಾಗ, ಹೋಟೆಲ್ ಕೋಣೆಗಳಲ್ಲಿ ಕಣ್ಣೀರಿಟ್ಟ ಆ ಮಗುವಿನ ಆರ್ತನಾದಕ್ಕೆ ನಮ್ಮ ವ್ಯವಸ್ಥೆ ಇನ್ನೂ ಕಿವುಡಾಗಿದೆಯೇ? ಇದು ಕೇವಲ ಅತ್ಯಾಚಾರವಲ್ಲ, ಇಡೀ ಸಮಾಜದ ಆತ್ಮಸಾಕ್ಷಿಗೆ ಬಿದ್ದ ಭೀಕರ ಕೊಡಲಿಪೆಟ್ಟು.ಕಾನೂನಿನ ಓರೆಕೋರೆಗಳ ನಡುವೆ ಕ್ರೂರಿಗಳು ರಾಜಾತಿಥ್ಯ ಅನುಭವಿಸಬೇಕೇ? ವರ್ಷಗಟ್ಟಲೆ ಕಾಯುವ ತಾಳ್ಮೆ ಈಗ ಸಾರ್ವಜನಿಕರಿಗಿಲ್ಲ. ಹೆಣ್ಣುಮಕ್ಕಳ ರಕ್ಷಣೆ ಕೇವಲ ಭಾಷಣಕ್ಕೆ ಸೀಮಿತವಾಗದಿರಲಿ; ಮಗುವಿನ ಬಾಳನ್ನು ನರಕವಾಗಿಸಿದ ಆ ರಾಕ್ಷಸರಿಗೆ ತಕ್ಷಣದ ಮರಣದಂಡನೆಯೇ ಸೂಕ್ತ ಪ್ರಾಯಶ್ಚಿತ್ತ! ಅಲ್ಲವೇ?

ಹೋಟೆಲ್‌ಗಳು ನೆಲಸಮವಾಗಿರಬಹುದು, ಆದರೆ ಆ ಮಗುವಿನ ಮನಸ್ಸಿಗೆ ಆದ ಗಾಯ ಮಾಯುವುದೇ? ರಾಜಕೀಯ ಬದಿಗಿಟ್ಟು, ಸ್ವಾರ್ಥ ಬಿಟ್ಟು ದೇಶದ ಯುವಶಕ್ತಿ ಒಂದಾಗಬೇಕಿದೆ. ಹೆಣ್ಣಿನ ತಂಟೆಗೆ ಬಂದರೆ ಬದುಕುಳಿಯುವುದಿಲ್ಲ ಎಂಬ ಭಯ ಪ್ರತಿಯೊಬ್ಬ ರಾಕ್ಷಸನ ಎದೆಯಲ್ಲೂ ಬಿತ್ತಬೇಕಾಗಿದೆ.

ರಾಜಕೀಯದ ಬೇಳೆ ಬೇಯಿಸಿಕೊಳ್ಳಬೇಡಿ; ದೇಶದ ಹೆಣ್ಣುಮಕ್ಕಳ ಅಸ್ತಿತ್ವಕ್ಕಾಗಿ ಈಗ ಧ್ವನಿ ಎತ್ತಿ!

ಜೂನ್ 18ರಂದು ಈ 13 ವರ್ಷದ ಶಾಲಾ ಬಾಲಕಿ ತನ್ನ ಸ್ನೇಹಿತೆಯನ್ನು ಭೇಟಿಯಾಗಲು ಹೋಗಿದ್ದಾಗ ತಡರಾತ್ರಿಯಾಗಿದೆ. ಮನೆಗೆ ಮರಳಲು ಸಹಾಯ ಕೋರಿ ಈಕೆ ರಾಮಬಾಬು ಎಂಬ ಇ-ರಿಕ್ಷಾ ಚಾಲಕನ ವಾಹನ ಹತ್ತಿದ್ದಾಳೆ. ಆದರೆ, ಆ ನರಾಧಮ ಚಾಲಕ ಬಾಲಕಿಯನ್ನ ಮನೆಗೆ ತಲುಪಿಸುವ ಬದಲು ಹೋಟೆಲ್ ಮಾಲೀಕರಿಗೆ ಮಾರಾಟ ಮಾಡಿದ್ದಾನೆ. ಕೇವಲ 13 ವರ್ಷದ ಹಸುಗೂಸಿನಂತಿದ್ದ ಬಾಲಕಿಯನ್ನ ನಗರದ ‘ಜಾಯ್ ಇನ್’, ‘ಸಫೈರ್ ಇನ್’, ‘ಡ್ರೀಮ್’ ಮತ್ತು ‘ಖುಂಗರ್’ ಎಂಬ ಹೋಟೆಲ್‌ಗಳಲ್ಲಿ ಇಟ್ಟು, ಸುಮಾರು 5 ದಿನಗಳ ಕಾಲ 30ಕ್ಕೂ ಹೆಚ್ಚು ಕ್ರೂರಿಗಳು ಸತತವಾಗಿ ಅತ್ಯಾಚಾರವೆಸಗಿ ಪೈಶಾಚಿಕ ಆನಂದ ಹೊಂದಿದ್ದಾರೆ. ನರಕಯಾತನೆ ಅನುಭವಿಸುತ್ತಿದ್ದ ಆ ಮಗುವಿಗೆ ಧ್ವನಿ ಅಡಗಿಸಲು ಬಲವಂತವಾಗಿ ಮದ್ಯವನ್ನು ಕುಡಿಸಲಾಗುತ್ತಿತ್ತು ಎಂದು ಬಾಲಕಿ ಎಫ್‌ಐಆರ್‌ನಲ್ಲಿ ನೀಡಿದ ಹೇಳಿಕೆ ಕೇಳಿದರೆ ಎಂತಹ ಕಠಿಣ ಹೃದಯಿಯೂ ಕರಗುತ್ತದೆ.

ಸಿಸ್ಟಮ್ ಹಾಗೂ ಕಾನೂನಿನ ಲೋಪದೋಷಗಳ ವಿರುದ್ಧ ಆಕ್ರೋಶ.

ನಮ್ಮ ದೇಶದ ಕಾನೂನು ವ್ಯವಸ್ಥೆಯಲ್ಲಿನ ದೀರ್ಘಾವಧಿಯ ತನಿಖೆ, ನ್ಯಾಯಾಲಯದ ಪ್ರಕ್ರಿಯೆಗಳು ಮತ್ತು ತಾಂತ್ರಿಕ ಲೋಪದೋಷಗಳನ್ನೇ ಬಂಡವಾಳ ಮಾಡಿಕೊಳ್ಳುವ ಇಂತಹ ರಾಕ್ಷಸರು ತಪ್ಪು ಮಾಡಿ ವರ್ಷಗಟ್ಟಲೆ ಜೈಲಿನಲ್ಲಿ ರಾಜಾತಿಥ್ಯ ಅನುಭವಿಸುತ್ತಾರೆ. ಮಗು ಕಾಣೆಯಾದಾಗ ತಕ್ಷಣವೇ ಕಾರ್ಯಪ್ರವೃತ್ತರಾಗದ ಸ್ಥಳೀಯ ಆಡಳಿತದ ಬೇಜವಾಬ್ದಾರಿತನ ಹಾಗೂ ನಗರದಲ್ಲಿ ಅವೇಧನೀಯವಾಗಿ ನಡೆಯುತ್ತಿದ್ದ ಅನಧಿಕೃತ ಹೋಟೆಲ್‌ಗಳ ದಂಧೆ ಈ ಭೀಕರ ಕೃತ್ಯಕ್ಕೆ ದಾರಿ ಮಾಡಿಕೊಟ್ಟಿದೆ. ತನಿಖೆ, ಸಾಕ್ಷ್ಯಾಧಾರಗಳ ಹೆಸರಿನಲ್ಲಿ ಆರೋಪಿಗಳಿಗೆ ಜಾಮೀನು ಸಿಗುವಂತಾಗುವುದು ಮತ್ತು ಮರಣದಂಡನೆ ಜಾರಿಯಾಗಲು ದಶಕಗಳೇ ಕಳೆಯುವುದು ಇಂದಿನ ಸಾರ್ವಜನಿಕರಲ್ಲಿ ಕಾನೂನಿನ ಭಯವನ್ನು ಇಲ್ಲದಂತಾಗಿಸಿದೆ.

ಪ್ರಸ್ತುತ ಕೈಗೊಳ್ಳಲಾದ ಕಟ್ಟುನಿಟ್ಟಿನ ಕ್ರಮಗಳು:

ಜೂನ್ 22 ರಂದು ಬಾಲಕಿಯನ್ನು ಹೋಟೆಲ್‌ನಿಂದ ರಕ್ಷಿಸಿದ ನಂತರ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಸ್ಫೋಟಗೊಂಡಿದೆ.ಪ್ರಸ್ತುತ ಶ್ರೀಗಂಗಾನಗರದ ಪೊಲೀಸ್ ಇಲಾಖೆಯು ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದು, ಹೋಟೆಲ್ ಮಾಲೀಕರು, ಮ್ಯಾನೇಜರ್‌ಗಳು ಮತ್ತು ರಿಕ್ಷಾ ಚಾಲಕ ಸೇರಿದಂತೆ ಇದುವರೆಗೆ 14ಕ್ಕೂ ಹೆಚ್ಚು ಮುಖ್ಯ ಆರೋಪಿಗಳನ್ನು ಬಂಧಿಸಲಾಗಿದೆ. ಅಷ್ಟೇ ಅಲ್ಲದೆ, ಸಾರ್ವಜನಿಕರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕೃತ್ಯಕ್ಕೆ ಬಳಕೆಯಾದ 4 ಹೋಟೆಲ್‌ಗಳನ್ನು ಜೆಸಿಬಿ ಮತ್ತು ಹೈಡ್ರಾಲಿಕ್ ಯಂತ್ರಗಳ ಮೂಲಕ ಸಂಪೂರ್ಣವಾಗಿ ಧ್ವಂಸಗೊಳಿಸಿ ನೆಲಸಮ ಮಾಡಿದೆ.

ಸಾರ್ವಜನಿಕರ ಧ್ವನಿ ಮತ್ತು ಸೂಕ್ತ ಶಿಕ್ಷೆಯ ಆಗ್ರಹ:

ಯಾವ ನರಾಧಮರು ಇಂತಹ ಕೃತ್ಯವೆಸಗಿದ್ದಾರೋ ಅವರಿಗೆ ಯಾವುದೇ ಮಾನವೀಯ ಹಕ್ಕುಗಳು ಇರಬಾರದು ಎಂಬುದು ಇಡೀ ಸಮಾಜದ ಮುಕ್ತ ಧ್ವನಿಯಾಗಿದೆ. ಇಂತಹ ಕ್ರೂರಿಗಳಿಗೆ ಯಾವುದೇ ತಡವಿಲ್ಲದೆ, ತಕ್ಷಣವೇ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ವಿಧಿಸಬೇಕು. ಆಗ ಮಾತ್ರ ಮುಂದಿನ ದಿನಗಳಲ್ಲಿ ಹೆಣ್ಣುಮಕ್ಕಳ ತಂಟೆಗೆ ಬರಲು ಇಂತಹ ರಾಕ್ಷಸರು ನೂರು ಬಾರಿ ಯೋಚಿಸುತ್ತಾರೆ. ರಾಜಕೀಯ ಲಾಭ-ನಷ್ಟ ಅಥವಾ ಸಂಘಟನೆಗಳ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು, ದೇಶದ ಯುವಜನತೆ, ರಾಜಕೀಯ ನಾಯಕರು ಮತ್ತು ಪ್ರತಿಯೊಬ್ಬ ನಾಗರಿಕನೂ ಪಕ್ಷಾತೀತವಾಗಿ ಈ ಘಟನೆಯ ವಿರುದ್ಧ ಧ್ವನಿ ಎತ್ತಬೇಕಿದೆ. ಈ ಮಗುವಿಗೆ ಸಿಗುವ ತ್ವರಿತ ನ್ಯಾಯವೇ ಇನ್ನುಳಿದ ಹೆಣ್ಣುಮಕ್ಕಳಿಗೆ ಸಿಗುವ ನಿಜವಾದ ರಕ್ಷಣೆಯಾಗಬಲ್ಲದು.

ರಾಜಸ್ಥಾನದ ಶ್ರೀಗಂಗಾನಗರದಲ್ಲಿ ನಡೆದ 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರದ ಘಟನೆ ಇಡೀ ಮಾನವಕುಲವೇ ತಲೆತಗ್ಗಿಸುವಂತೆ ಮಾಡಿದೆ.ಇಂದು ಶ್ರೀಗಂಗಾನಗರದ ಮಗಳು, ನಾಳೆ ನಮ್ಮದೇ ಮನೆಯ ಮಗುವಾಗಿರಬಹುದು. ಇದು ಪಕ್ಷಗಳ ಹೋರಾಟವಲ್ಲ, ಮಾನವೀಯತೆಯ ಉಳಿವಿಗಾಗಿ ನಡೆಯಬೇಕಾದ ಕ್ರಾಂತಿ. ಯಾವುದೇ ತಡವಿಲ್ಲದೆ ತ್ವರಿತ ನ್ಯಾಯ ಸಿಗುವವರೆಗೂ ನಮ್ಮ ಆಕ್ರೋಶದ ಧ್ವನಿ ಅಡಗದಿರಲಿ!

##JusticeForGanganagarVictim #HangTheRapistsImmediately #ProtectOurDaughters #NoDelayInJustice #StrictLawsAgainstMonsters

COMMENTS

Login with Gmail to comment

ಇನ್ನಷ್ಟು ಸುದ್ದಿ

ದಿಲ್ಲಿಯಲ್ಲಿ ವಾಗ್ದಾಳಿ.. ಗಲ್ಲಿಯಲ್ಲಿ ಒಪ್ಪಂದ?! ದೇಶದ ಅತ್ಯಂತ ಕಾಂಟ್ರವರ್ಸಿಯಲ್ ಬಿಡ್ ತೆರೆಮರೆಯಲ್ಲಿ ನಡೆದ ಆ ಒಂದು ನಡೆ ಕಾಂಗ್ರೆಸ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು ಯಾಕೆ?!
ಬೀಡಿ, ಗೋಡಂಬಿ ಮತ್ತು ಸ್ಕೀಮ್ ಕಾರ್ಮಿಕರಿಗೆ ಕನಿಷ್ಠ ಕೂಲಿ ನೀಡಿ: ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ.
ಬರ್ಗಿ ಅಣೆಕಟ್ಟಿನಲ್ಲಿ ಭೀಕರ ದುರಂತ-ಕರುಳು ಹಿಂಡುವ ದೃಶ್ಯ ಅಮ್ಮ-ಮಗು ಅಪ್ಪಿಕೊಂಡೇ ಜಲಸಮಾದಿ ಸಂತೋಷದ ಪ್ರವಾಸದಿಂದ ಶೋಕದ ಸಾಗರಕ್ಕೆ
ಅಂಡಮಾನ್ boat ದುರಂತ-250 ಕ್ಕೂ ಹೆಚ್ಚು ಮಂದಿ ಕಾಣೆ..
ಉಡುಪಿ ಜಿಲ್ಲಾಆಸ್ಪತ್ರೆಯಲ್ಲಿ ಹಗರಣ, ತಾರತಮ್ಯದ ಆರೋಪ: ವೀಣಾದೇವಿ ವಿರುದ್ಧದಕ್ರಮ ಕಣ್ಣೊರೆಸುವ ತಂತ್ರ
ಸಂಸತ್ತಿನಲ್ಲಿ ಇತಿಹಾಸ ಸೃಷ್ಟಿಸುವ ಚರ್ಚೆ-ಮಹಿಳಾ ಮೀಸಲು ಬಿಲ್ಲಿನ ಸುತ್ತ ಕಂಗೊಳಿಸಿದ ಸಂಸತ್ !
🔴 ಪೊಲೀಸರ ಮೇಲಿನ ಹಿಡಿತ ಕಠಿಣ: PEBಗೆ ಹೆಚ್ಚಿದ ಅಧಿಕಾರ — ರಾಜ್ಯದ ದೊಡ್ಡ ಆಡಳಿತಾತ್ಮಕ ತೀರ್ಮಾನ
17 ವರ್ಷದ ಯುವಕ ಸಂಸತ್ತಿನ ಕದ ತಟ್ಟಬಲ್ಲ ಎಂದಾದರೆ, ನಿಮ್ಮ ಧ್ವನಿಗೆ ಎಷ್ಟು ಶಕ್ತಿಯಿದೆ ಯೋಚಿಸಿ!..ವ್ಯವಸ್ಥೆಯ ಲೋಪದ ವಿರುದ್ಧ ಧ್ವನಿ ಎತ್ತದಿದ್ದರೆ ಬದಲಾವಣೆ ಸಾಧ್ಯವಿಲ್ಲ.
ಐಸಿಸಿ ಟ್ವೆಂಟಿ-20 ವಿಶ್ವಕಪ್ ಮೂಡಿಗೇರಿಸಿಕೊಂಡ ಭಾರತ
ದೆಹಲಿಯಲ್ಲಿ ಬಸ್‌ನಲ್ಲಿ ನಿರ್ಭಯಾ ನೆನಪಿಸುವ ಘಟನೆ -30 ವರ್ಷದ ಮಹಿಳೆ ಗ್ಯಾಂಗ್‌ರೇಪ್ ಶಾಕ್
ದೊಡ್ಡ ಬಜೇಟ್  ತುಳು ಸಿನಿಮಾ`ಗಜಾನನ ಕ್ರಿಕೆಟರ್ಸ್’ ಮೇ 22 ರಂದು ತೆರೆಗೆ
ಯುದ್ಧದ ಹೊಡೆತ: ಹಣ ಕೊಟ್ಟರೂ ಗ್ಯಾಸ್ ಇಲ್ಲ! ಕಾರವಾರ ಬಂದರು ಸ್ತಬ್ಧ — ಜನಜೀವನ ಅಸ್ತವ್ಯಸ್ತ 🔥
ಆಸ್ಪತ್ರೆಯಲ್ಲೇ ಮೂರನೇ ಮಹಡಿಯಿಂದ ಬಿದ್ದು ಸಾವುನಿರ್ಲಕ್ಷ್ಯವೇ? ಸುರಕ್ಷತೆ ಪ್ರಶ್ನೆಗೊಳಗಾಗಿದೆ!
ಇಬ್ಬರು ಮಕ್ಕಳ ಕಣ್ಣೆದುರೇ ಪತ್ನಿಯನ್ನು ಸುಮಾರು 20 ಬಾರಿ ಚಾಕುವಿನಿಂದ ಇರಿದು ಕೊಂದ ಪತಿ – ಕಾರಣ ಮೊಬೈಲ್‌ನಲ್ಲಿ ಆಟ
ಮನೆಯವರಿಂದಲೇ 16 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು! ಪೊಲೀಸರಿಗೆ ದೂರು 🚨
ಮಂಗಳೂರು- ಕೊಲ್ಲೂರಿನವರೆಗೆ ಹೈ ಅಲರ್ಟ್!ಕ.ರ.ವೇ ಕಪ್ಪು ಬಾವುಟ .!!ತಮಿಳುನಾಡು ಸಿಎಂ ವಿಜಯ್ ಭೇಟಿ-ಕೊಲ್ಲೂರಿನಲ್ಲಿ ಹೈವೋಲ್ಟೇಜ್ ದಿನ! 
ಮನೆ ಬಾಡಿಗೆ ಕೊಡುವಾಗ ನಿಗಾ ಇರಿಸಲು ಮಾಲಕರಿಗೆ ಎಚ್ಚರಿಕೆ ..!ಗಾಂಜಾ ಸೇವಿಸಿದ ಐದು ನರ್ಸಿಂಗ್ ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ….
ಮಂಗಳೂರು ಏರ್‌ಪೋರ್ಟ್‌ನಲ್ಲಿ ಉಬರ್ …
ಭಾರತೀಯ ಸೇನೆಯ ಚಲನವಲನದ ವಿಡಿಯೋಗಳು ಪಾಕಿಸ್ತಾನಕ್ಕೆ ಹೇಗೆ ತಲುಪಿದವು?
ಯಾರದ್ದೋ ಹಠ, ಮತ್ತ್ಯಾರದೋ ಚಟ, ಹೆತ್ತವರ ಜಗಳಕ್ಕೆ ಬಲಿಯಾಯ್ತು ಮಗುವಿನ ಬಾಲ್ಯ -ಭವಿಷ್ಯ!
ಮೇ 20ರ ಬಸ್ ಸ್ಟ್ರೈಕ್‌ಗೆ ಹೈಕೋರ್ಟ್ ಬ್ರೇಕ್..! KSRTC-BMTC ಬಸ್‌ಗಳು ನಿಲ್ಲೋದಿಲ್ಲ! ಹೈಕೋರ್ಟ್ ಮಹತ್ವದ ಆದೇಶ..
ಜನಪ್ರಿಯ “ಶಕ್ತಿ ಯೋಜನೆ” ವಿಫಲಗೊಳಿಸಲು ಸಂಚು!
ಆಕಾಂಕ್ಷಳ ಪತ್ರ “ಮಮ್ಮಿ-ಪಾಪಾ, ನನಗೆ ಮತ್ತೆ ನೀಟ್ ಪರೀಕ್ಷೆ ಬರೆಯುವ ಧೈರ್ಯವಿಲ್ಲ” 3 ಲಕ್ಷ ಸಾಲ, ಡಾಕ್ಟರ್ ಆಗುವ ಆ ಕನಸುಗಳು…650 ಅಂಕಗಳ ನಿರೀಕ್ಷೆ..ಆದರೆ…ಕೊನೆಗೆ ಹೀಗೊಂದು ವಿದಾಯ ಪತ್ರ!
ಐಪಿಎಲ್ ಇತಿಹಾಸದಲ್ಲೇ ಸುಮಾರು ₹230 ಕೋಟಿಗೂ ಅಧಿಕ ಒಟ್ಟು ಸಂಭಾವನೆ ಪಡೆದ ಆಟಗಾರನಾಗಿ ಕೊಹ್ಲಿ ದಾಖಲೆ…ಯ ಹಿಂದಿರುವ ಅಸಲಿ ಕಥೆ…!
ಸೂರ್ಯನ ತಾಪಕ್ಕೆ ಜೋಗ ಜಲಪಾತ ದೊಡ್ಡ ಬಂಡೆಯೇ ಒಡೆಯಿತು..ಮಾನವನಿಗೆ ಅಪಾಯ ಇನ್ನಷ್ಟು!
17ನೇ ಆಯವ್ಯಯ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಧ್ಯಪ್ರಾಚ್ಯದಲ್ಲಿ ಯುದ್ಧ– ಸಂಕಷ್ಟದಲ್ಲಿ ಜಗತ್ತು-ಉಸಿರು ತಡೆದ ಪರಿಸ್ಥಿತಿ!ಏನಾಗ್ತಾ ಇದೆ…
ಚಿಕ್ಕಸ್ವಾಮಿ-ದೊಡ್ಡಸ್ವಾಮಿ ಭಕ್ತರ ಮಿಲನ! ಕಾಶಿಮಠ ವಿವಾದಕ್ಕೆ ಸಂಯಮೇ೦ದ್ರ ಮದ್ದು
ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ರೋಗಿಗಳಿಗೆ heartattack !!!..ಐಸಿಯು ಮತ್ತು ಸಿಸಿಟಿವಿ ದೃಶ್ಯಗಳಲ್ಲಿದೆ ಕ್ಲಾರಿಟಿ!
ಜೂನ್ 22ರವರೆಗೆ ಭಾರತದಲ್ಲಿ ಟೆಲಿಗ್ರಾಂ ಬ್ಯಾನ್…!ಅಪ್ಲಿಕೇಶನ್ ಬ್ಯಾನ್ ಅಲ್ಲ, ವ್ಯವಸ್ಥೆ ಸರಿಪಡಿಸಿ! ಸರ್ಕಾರಕ್ಕೆ ನಿಸರ್ಗ ಅಧಿಕಾರಿಯ ಸಲಹೆ