📍 Karavali Maruta
  • LOGIN
  • BREAKING
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ ದಯಾಮರಣ ಕೇಳಿದ್ದ ತುಮಕೂರು ರಾಬಿಯಾ ಇನ್ನಿಲ್ಲ …!ಪರಮೇಶ್ವರ್ ಮುಂದೆ ಕಣ್ಣೀರಿಟ್ಟಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ವಿಷಸೇವಿಸಿ ಕೊನೆಯುಸಿರು…‘ಮನೆ’ ಸಿಕ್ಕರೂ ಬದುಕು ಉಳಿಯಲಿಲ್ಲ! ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್! ಮಹಿಳಾ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ ವಾಜಪೇಯಿ ಸರ್ಕಾರದ  ಕನಸಿನ ಯೋಜನೆ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಸಹಿ ಸಂಗ್ರಹ ಅಭಿಯಾನ
    ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    30ಕ್ಕೂ ಹೆಚ್ಚು ರಾಕ್ಷಸರ ಕಪಿಮುಷ್ಟಿಯಲ್ಲಿ ನಲುಗಿದ 13 ವರ್ಷದ ಮಗು!-ಶ್ರೀಗಂಗಾನಗರದ ಪೈಶಾಚಿಕ ಕೃತ್ಯ

    13 ವರ್ಷದ ಕಂದಮ್ಮನ ಆಕ್ರಂದನ ಕೇಳಿಸದ ಕಾನೂನು ವ್ಯವಸ್ಥೆ .!ಐದು ದಿನಗಳು… 30ಕ್ಕೂ ಹೆಚ್ಚು ನರಾಧಮರ ಪೈಶಾಚಿಕ ನರಕಯಾತನೆ! ರಕ್ಷಿಸಬೇಕಾದ ರಿಕ್ಷಾ ಚಾಲಕನೇ ಮಾರಿದಾಗ, ಹೋಟೆಲ್ ಕೋಣೆಗಳಲ್ಲಿ ಕಣ್ಣೀರಿಟ್ಟ ಆ ಮಗುವಿನ ಆರ್ತನಾದಕ್ಕೆ ನಮ್ಮ ವ್ಯವಸ್ಥೆ ಇನ್ನೂ ಕಿವುಡಾಗಿದೆಯೇ? ಇದು ಕೇವಲ ಅತ್ಯಾಚಾರವಲ್ಲ, ಇಡೀ ಸಮಾಜದ ಆತ್ಮಸಾಕ್ಷಿಗೆ ಬಿದ್ದ ಭೀಕರ ಕೊಡಲಿಪೆಟ್ಟು.ಕಾನೂನಿನ ಓರೆಕೋರೆಗಳ ನಡುವೆ ಕ್ರೂರಿಗಳು ರಾಜಾತಿಥ್ಯ ಅನುಭವಿಸಬೇಕೇ? ವರ್ಷಗಟ್ಟಲೆ ಕಾಯುವ ತಾಳ್ಮೆ ಈಗ ಸಾರ್ವಜನಿಕರಿಗಿಲ್ಲ. ಹೆಣ್ಣುಮಕ್ಕಳ ರಕ್ಷಣೆ ಕೇವಲ ಭಾಷಣಕ್ಕೆ ಸೀಮಿತವಾಗದಿರಲಿ; ಮಗುವಿನ ಬಾಳನ್ನು ನರಕವಾಗಿಸಿದ ಆ ರಾಕ್ಷಸರಿಗೆ ತಕ್ಷಣದ ಮರಣದಂಡನೆಯೇ ಸೂಕ್ತ ಪ್ರಾಯಶ್ಚಿತ್ತ! ಅಲ್ಲವೇ?

    ಹೋಟೆಲ್‌ಗಳು ನೆಲಸಮವಾಗಿರಬಹುದು, ಆದರೆ ಆ ಮಗುವಿನ ಮನಸ್ಸಿಗೆ ಆದ ಗಾಯ ಮಾಯುವುದೇ? ರಾಜಕೀಯ ಬದಿಗಿಟ್ಟು, ಸ್ವಾರ್ಥ ಬಿಟ್ಟು ದೇಶದ ಯುವಶಕ್ತಿ ಒಂದಾಗಬೇಕಿದೆ. ಹೆಣ್ಣಿನ ತಂಟೆಗೆ ಬಂದರೆ ಬದುಕುಳಿಯುವುದಿಲ್ಲ ಎಂಬ ಭಯ ಪ್ರತಿಯೊಬ್ಬ ರಾಕ್ಷಸನ ಎದೆಯಲ್ಲೂ ಬಿತ್ತಬೇಕಾಗಿದೆ.

    ರಾಜಕೀಯದ ಬೇಳೆ ಬೇಯಿಸಿಕೊಳ್ಳಬೇಡಿ; ದೇಶದ ಹೆಣ್ಣುಮಕ್ಕಳ ಅಸ್ತಿತ್ವಕ್ಕಾಗಿ ಈಗ ಧ್ವನಿ ಎತ್ತಿ!

    ಜೂನ್ 18ರಂದು ಈ 13 ವರ್ಷದ ಶಾಲಾ ಬಾಲಕಿ ತನ್ನ ಸ್ನೇಹಿತೆಯನ್ನು ಭೇಟಿಯಾಗಲು ಹೋಗಿದ್ದಾಗ ತಡರಾತ್ರಿಯಾಗಿದೆ. ಮನೆಗೆ ಮರಳಲು ಸಹಾಯ ಕೋರಿ ಈಕೆ ರಾಮಬಾಬು ಎಂಬ ಇ-ರಿಕ್ಷಾ ಚಾಲಕನ ವಾಹನ ಹತ್ತಿದ್ದಾಳೆ. ಆದರೆ, ಆ ನರಾಧಮ ಚಾಲಕ ಬಾಲಕಿಯನ್ನ ಮನೆಗೆ ತಲುಪಿಸುವ ಬದಲು ಹೋಟೆಲ್ ಮಾಲೀಕರಿಗೆ ಮಾರಾಟ ಮಾಡಿದ್ದಾನೆ. ಕೇವಲ 13 ವರ್ಷದ ಹಸುಗೂಸಿನಂತಿದ್ದ ಬಾಲಕಿಯನ್ನ ನಗರದ ‘ಜಾಯ್ ಇನ್’, ‘ಸಫೈರ್ ಇನ್’, ‘ಡ್ರೀಮ್’ ಮತ್ತು ‘ಖುಂಗರ್’ ಎಂಬ ಹೋಟೆಲ್‌ಗಳಲ್ಲಿ ಇಟ್ಟು, ಸುಮಾರು 5 ದಿನಗಳ ಕಾಲ 30ಕ್ಕೂ ಹೆಚ್ಚು ಕ್ರೂರಿಗಳು ಸತತವಾಗಿ ಅತ್ಯಾಚಾರವೆಸಗಿ ಪೈಶಾಚಿಕ ಆನಂದ ಹೊಂದಿದ್ದಾರೆ. ನರಕಯಾತನೆ ಅನುಭವಿಸುತ್ತಿದ್ದ ಆ ಮಗುವಿಗೆ ಧ್ವನಿ ಅಡಗಿಸಲು ಬಲವಂತವಾಗಿ ಮದ್ಯವನ್ನು ಕುಡಿಸಲಾಗುತ್ತಿತ್ತು ಎಂದು ಬಾಲಕಿ ಎಫ್‌ಐಆರ್‌ನಲ್ಲಿ ನೀಡಿದ ಹೇಳಿಕೆ ಕೇಳಿದರೆ ಎಂತಹ ಕಠಿಣ ಹೃದಯಿಯೂ ಕರಗುತ್ತದೆ.

    ಸಿಸ್ಟಮ್ ಹಾಗೂ ಕಾನೂನಿನ ಲೋಪದೋಷಗಳ ವಿರುದ್ಧ ಆಕ್ರೋಶ.

    ನಮ್ಮ ದೇಶದ ಕಾನೂನು ವ್ಯವಸ್ಥೆಯಲ್ಲಿನ ದೀರ್ಘಾವಧಿಯ ತನಿಖೆ, ನ್ಯಾಯಾಲಯದ ಪ್ರಕ್ರಿಯೆಗಳು ಮತ್ತು ತಾಂತ್ರಿಕ ಲೋಪದೋಷಗಳನ್ನೇ ಬಂಡವಾಳ ಮಾಡಿಕೊಳ್ಳುವ ಇಂತಹ ರಾಕ್ಷಸರು ತಪ್ಪು ಮಾಡಿ ವರ್ಷಗಟ್ಟಲೆ ಜೈಲಿನಲ್ಲಿ ರಾಜಾತಿಥ್ಯ ಅನುಭವಿಸುತ್ತಾರೆ. ಮಗು ಕಾಣೆಯಾದಾಗ ತಕ್ಷಣವೇ ಕಾರ್ಯಪ್ರವೃತ್ತರಾಗದ ಸ್ಥಳೀಯ ಆಡಳಿತದ ಬೇಜವಾಬ್ದಾರಿತನ ಹಾಗೂ ನಗರದಲ್ಲಿ ಅವೇಧನೀಯವಾಗಿ ನಡೆಯುತ್ತಿದ್ದ ಅನಧಿಕೃತ ಹೋಟೆಲ್‌ಗಳ ದಂಧೆ ಈ ಭೀಕರ ಕೃತ್ಯಕ್ಕೆ ದಾರಿ ಮಾಡಿಕೊಟ್ಟಿದೆ. ತನಿಖೆ, ಸಾಕ್ಷ್ಯಾಧಾರಗಳ ಹೆಸರಿನಲ್ಲಿ ಆರೋಪಿಗಳಿಗೆ ಜಾಮೀನು ಸಿಗುವಂತಾಗುವುದು ಮತ್ತು ಮರಣದಂಡನೆ ಜಾರಿಯಾಗಲು ದಶಕಗಳೇ ಕಳೆಯುವುದು ಇಂದಿನ ಸಾರ್ವಜನಿಕರಲ್ಲಿ ಕಾನೂನಿನ ಭಯವನ್ನು ಇಲ್ಲದಂತಾಗಿಸಿದೆ.

    ಪ್ರಸ್ತುತ ಕೈಗೊಳ್ಳಲಾದ ಕಟ್ಟುನಿಟ್ಟಿನ ಕ್ರಮಗಳು:

    ಜೂನ್ 22 ರಂದು ಬಾಲಕಿಯನ್ನು ಹೋಟೆಲ್‌ನಿಂದ ರಕ್ಷಿಸಿದ ನಂತರ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಸ್ಫೋಟಗೊಂಡಿದೆ.ಪ್ರಸ್ತುತ ಶ್ರೀಗಂಗಾನಗರದ ಪೊಲೀಸ್ ಇಲಾಖೆಯು ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದು, ಹೋಟೆಲ್ ಮಾಲೀಕರು, ಮ್ಯಾನೇಜರ್‌ಗಳು ಮತ್ತು ರಿಕ್ಷಾ ಚಾಲಕ ಸೇರಿದಂತೆ ಇದುವರೆಗೆ 14ಕ್ಕೂ ಹೆಚ್ಚು ಮುಖ್ಯ ಆರೋಪಿಗಳನ್ನು ಬಂಧಿಸಲಾಗಿದೆ. ಅಷ್ಟೇ ಅಲ್ಲದೆ, ಸಾರ್ವಜನಿಕರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕೃತ್ಯಕ್ಕೆ ಬಳಕೆಯಾದ 4 ಹೋಟೆಲ್‌ಗಳನ್ನು ಜೆಸಿಬಿ ಮತ್ತು ಹೈಡ್ರಾಲಿಕ್ ಯಂತ್ರಗಳ ಮೂಲಕ ಸಂಪೂರ್ಣವಾಗಿ ಧ್ವಂಸಗೊಳಿಸಿ ನೆಲಸಮ ಮಾಡಿದೆ.

    ಸಾರ್ವಜನಿಕರ ಧ್ವನಿ ಮತ್ತು ಸೂಕ್ತ ಶಿಕ್ಷೆಯ ಆಗ್ರಹ:

    ಯಾವ ನರಾಧಮರು ಇಂತಹ ಕೃತ್ಯವೆಸಗಿದ್ದಾರೋ ಅವರಿಗೆ ಯಾವುದೇ ಮಾನವೀಯ ಹಕ್ಕುಗಳು ಇರಬಾರದು ಎಂಬುದು ಇಡೀ ಸಮಾಜದ ಮುಕ್ತ ಧ್ವನಿಯಾಗಿದೆ. ಇಂತಹ ಕ್ರೂರಿಗಳಿಗೆ ಯಾವುದೇ ತಡವಿಲ್ಲದೆ, ತಕ್ಷಣವೇ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ವಿಧಿಸಬೇಕು. ಆಗ ಮಾತ್ರ ಮುಂದಿನ ದಿನಗಳಲ್ಲಿ ಹೆಣ್ಣುಮಕ್ಕಳ ತಂಟೆಗೆ ಬರಲು ಇಂತಹ ರಾಕ್ಷಸರು ನೂರು ಬಾರಿ ಯೋಚಿಸುತ್ತಾರೆ. ರಾಜಕೀಯ ಲಾಭ-ನಷ್ಟ ಅಥವಾ ಸಂಘಟನೆಗಳ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು, ದೇಶದ ಯುವಜನತೆ, ರಾಜಕೀಯ ನಾಯಕರು ಮತ್ತು ಪ್ರತಿಯೊಬ್ಬ ನಾಗರಿಕನೂ ಪಕ್ಷಾತೀತವಾಗಿ ಈ ಘಟನೆಯ ವಿರುದ್ಧ ಧ್ವನಿ ಎತ್ತಬೇಕಿದೆ. ಈ ಮಗುವಿಗೆ ಸಿಗುವ ತ್ವರಿತ ನ್ಯಾಯವೇ ಇನ್ನುಳಿದ ಹೆಣ್ಣುಮಕ್ಕಳಿಗೆ ಸಿಗುವ ನಿಜವಾದ ರಕ್ಷಣೆಯಾಗಬಲ್ಲದು.

    ರಾಜಸ್ಥಾನದ ಶ್ರೀಗಂಗಾನಗರದಲ್ಲಿ ನಡೆದ 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರದ ಘಟನೆ ಇಡೀ ಮಾನವಕುಲವೇ ತಲೆತಗ್ಗಿಸುವಂತೆ ಮಾಡಿದೆ.ಇಂದು ಶ್ರೀಗಂಗಾನಗರದ ಮಗಳು, ನಾಳೆ ನಮ್ಮದೇ ಮನೆಯ ಮಗುವಾಗಿರಬಹುದು. ಇದು ಪಕ್ಷಗಳ ಹೋರಾಟವಲ್ಲ, ಮಾನವೀಯತೆಯ ಉಳಿವಿಗಾಗಿ ನಡೆಯಬೇಕಾದ ಕ್ರಾಂತಿ. ಯಾವುದೇ ತಡವಿಲ್ಲದೆ ತ್ವರಿತ ನ್ಯಾಯ ಸಿಗುವವರೆಗೂ ನಮ್ಮ ಆಕ್ರೋಶದ ಧ್ವನಿ ಅಡಗದಿರಲಿ!

    ##JusticeForGanganagarVictim #HangTheRapistsImmediately #ProtectOurDaughters #NoDelayInJustice #StrictLawsAgainstMonsters

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಕೊಡಗಿನಲ್ಲಿ ಪ್ರವಾಸಿ ಬಸ್ ಪಲ್ಟಿ20 ಪ್ರವಾಸಿಗರು ಕೂದಲೆಳೆಯ ಅಂತರದಲ್ಲಿ ಪಾರು; ಜೆಸಿಬಿಯಿಂದ ಬಸ್‌ ರಕ್ಷಣೆ!
    ಡಿಸ್ಟಿಂಕ್ಷನ್ ಪಡೆದರೆ ಸಂಭ್ರಮಿಸುತ್ತಿದ್ದ ಕಾಲ ಹೋಗಿ, ಇಂದು 99% ಬಂದರೂ ಬೀದಿಯಲ್ಲಿ ನಿಂತು ಅಳಬೇಕಾದ ದುಸ್ಥಿತಿ ..ಇದು ನಮ್ಮಇಂದಿನ ಶಿಕ್ಷಣ ವ್ಯವಸ್ಥೆ!
    ಸಾಯಿ ಚಿರಾಗ್ ಚಿಕಿತ್ಸೆಗೆ ಹರಿದುಬಂತು 2 ಕೋಟಿ ರೂ. ಜನಸಾಗರದ ನಿಧಿ!
    ಕುಡಿತದ ಅಮಲಿನಲ್ಲಿ ಹೆತ್ತ ತಾಯಿಯನ್ನೇ ಕೊಂದ ಮಗಳು, ಮೊಮ್ಮಗ: ಕೆಂಗೇರಿಯಲ್ಲಿ ಕರುಳು ಹರಿಯುವ ಕೃತ್ಯ!
    ಸಚಿನ್ ತೆಂಡೂಲ್ಕರ್ ಮಗಳ ಜಪಾನೀಸ್ ಕನೆಕ್ಷನ್ ಈಗ ದೇಶದ ಗಮನ ಸೆಳೆಯುತ್ತಿದೆ…ಸಾರಾ ಹೊಸ ಒಪ್ಪಂದ ಚರ್ಚೆಯಲ್ಲಿ
    FSSAI ಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ…!ಕಾರ್ಪೊರೇಟ್ ಒತ್ತಡಕ್ಕೆ ಮಣಿದಿರಾ?ಪ್ಯಾಕ್ ಆಹಾರಕ್ಕೆ ಎಚ್ಚರಿಕೆ ಲೇಬಲ್ ಕಡ್ಡಾಯ ಯಾಕಿಲ್ಲ? 
    ಬಾಲಗರ್ಭಿಣಿಯರ ಸಂಖ್ಯೆ 5975….!!
    “ಬಾದಾಮಿ ತಿಂದರೆ ಮೆಮೊರಿ ಹೆಚ್ಚಾಗಿ, ನನ್ನ ಫೈಲ್ ಎಲ್ಲಿ ಇದೆ ಎಂದು ನೆನಪಾಗಬಹುದು”-ಹಣ ಕೊಡದೇ ಕೆಲಸ ಆಗೋದಿಲ್ಲ ಎಂಬ ಭ್ರಷ್ಟ ವ್ಯವಸ್ಥೆ ಇನ್ನೂ ಬಲವಾಗಿ ಜೀವಂತವಾಗಿದೆ…!
    ಉದ್ಯಮಿ, ಕಾಲೇಜ್ topper,  ಕೋಟ್ಯದೀಶರೇ…ಕಠಿಣ ಜೈನ ಸನ್ಯಾಸದತ್ತ…!
    ಸಂಸತ್ತಿನಲ್ಲಿ ಪ್ರಶ್ನೆ ಎದುರಿಸಲು ಆಗದೆ,  ಪ್ರಶ್ನೆಯನ್ನೇ ಕೇಳದಂತೆ ಮಾಡಿದರು – ರಾಹುಲ್ ಗಾಂಧಿ
    🔴ಬ್ರೇಕಿಂಗ್ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ಜುಲೈ 8 ರಜೆ ಘೋಷಣೆ!
    ಪ್ರಚೋದನಾಕಾರಿ ಭಾಷಣ ಪ್ರಕರಣ: ರಿಯಾಝ್ ಫರಂಗಿಪೇಟೆಗೆ 6 ತಿಂಗಳ ಜೈಲು ಶಿಕ್ಷೆ, ₹10 ಸಾವಿರ ದಂಡ
    ಹೀಟ್ ಸ್ಟ್ರೋಕ್ ಗಂಭೀರ – ನಿರ್ಲಕ್ಷ್ಯ ಬೇಡ …ತಲೆ ಸುತ್ತಿದ್ರೆ ತಕ್ಷಣ ನೆರವು ಪಡೆಯಿರಿ.
    ಶಿರಸಿ ಮಾರಿಯಮ್ಮನ ಜಾತ್ರೆ ಪ್ರಾರಂಭ
    ‘ನನ್ನ ಮೇಲ್‌ಗೆ ಉತ್ತರವೇ ಬರಲಿಲ್ಲ…’ ಸಭೆಯಲ್ಲೇ ಮಹಿಳೆಯ ಪ್ರಶ್ನೆ; ನಿಖಿಲ್ ಕಾಮತ್ ನೀಡಿದ ಪ್ರತಿಕ್ರಿಯೆಗೆ ದೇಶವೇ ಫಿದಾ!
    ಮೋದಿ–ಶಾ ಆಡಳಿತದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ: ತಪ್ಪಿತಸ್ಥರನ್ನು ರಕ್ಷಿಸಲು ಅಧಿಕಾರ ದುರ್ಬಳಕೆ ಆರೋಪ
    21 ವರ್ಷದ ಆಡಳಿತಕ್ಕೆ ತೆರೆ: ನಿತೀಶ್ ಕುಮಾರ್ ಹೊರಟರೇ?ಸಿಎಂ ಕುರ್ಚಿ ಖಾಲಿ-ಬಿಜೆಪಿ ಹೊಸ ಮುಖ ಮುಂದಿನ ಸಿಎಂ??
    ಈಶ್ವರ್ ಮಲ್ಪೆ ತಂಡಕ್ಕೆ MAHE ಸಂಸ್ಥೆಯಿಂದ ಅಮೂಲ್ಯ ರಕ್ಷಣಾ ವಾಹನ ಕೊಡುಗೆ-ಜೀವ ಉಳಿಸುವ ಸೇವೆಗೆ ಮತ್ತಷ್ಟು ಶಕ್ತಿ
    ಶಾಲೆಗಳ ದುಸ್ಥಿತಿ ತೋರಿಸಲು CJP ಸಜ್ಜು; ‘ಹೊರಗಿನವರಿಗೆ ನೋ ಎಂಟ್ರಿ’ ಎಂದ ರಾಜಸ್ಥಾನ ಸರ್ಕಾರ!
    ಖಾಸಗಿ ಆಸ್ಪತ್ರೆಯ ಜೊತೆಗಿನ ಒಪ್ಪಂದ ರದ್ದುಪಡಿಸಲು ಆಗ್ರಹಿಸಿ ಪ್ರತಿಭಟನೆ
    ಮಂಗಳೂರು: ಖಚಿತ ಮಾಹಿತಿಗೆ ಖಾಕಿ ಆಕ್ಷನ್! ಮುಕ್ಕದ ಕಟ್ಟಡದಲ್ಲಿ 8 ಅಕ್ರಮ ಬಾಂಗ್ಲಾದೇಶಿ ಪ್ರಜೆಗಳ ಬಂಧನ
    ಅಂಡಮಾನ್ ಸಮುದ್ರದಲ್ಲಿ ಸಿಕ್ಕಿದ ಖಜಾನೆ! ಭಾರತದ ಇಂಧನ ಭವಿಷ್ಯ ಬದಲಾಗುತ್ತಿದೆಯೇ?
    ರಾಪಿಡೊ ಚಾಲಕನ ಖಾತೆಯಲ್ಲಿ 300 ಕೋಟಿ ರೂ. ವಹಿವಾಟು! ಶಾಕ್ ಅದ ED
    ರಾಜ್ಯ ಬಿಜೆಪಿಯಲ್ಲಿ ಕೋಲಾಹಲ, ನಾಯಕರ ಒಗ್ಗೂಡಿಸುವಲ್ಲಿ ವಿಫಲ: ರಾಧಾ ಮೋಹನ್ ತಲೆದಂಡಕ್ಕೆ ಸಿದ್ಧತೆ
    ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿ ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕೊನೆಗೂ ಪತ್ತೆ ಹಚ್ಚಲಾಗಿದೆ.
    ಮಂಗಳೂರಿನಲ್ಲಿ ಮುಂಜಾನೆ ನಡೆದ ರೌಡಿಶೀಟರ್ ಹತ್ಯೆ – ದುಷ್ಕರ್ಮಿಗಳ  ಜಾಡು ಬೆನ್ನಟ್ಟಿದ ಪೊಲೀಸ್‌ ಪಡೆ….ಮಹತ್ವದ ಸುಳಿವು…..!
    ದೊಡ್ಡ ಮಿಕವನ್ನೇ ಬಲೆಗೆ ಹಾಕಿದ  ಲೋಕಾಯುಕ್ತ ಪೊಲೀಸರು 
    ಮಧ್ಯಪ್ರಾಚ್ಯದಲ್ಲಿ ರೆಡ್ ಅಲರ್ಟ್!3 ತಿಂಗಳ ಯುದ್ಧಕ್ಕೆ ಮಹಾ ಟ್ವಿಸ್ಟ್ ಇರಾನ್ ಸೇನಾ ನೆಲೆಗಳನ್ನು ಧೂಳೀಪಟ ಮಾಡಿದ ಅಮೆರಿಕ!
    ಉಪಚುನಾವಣೆ ಮುಗಿಯುತಿದ್ದಂತೆಯೇ, ವಿದ್ಯುತ್ ದರ ಏರಿಸುತ್ತಿರುವ ರಾಜ್ಯ ಸರ್ಕಾರ