📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಆಕಾಂಕ್ಷಳ ಪತ್ರ “ಮಮ್ಮಿ-ಪಾಪಾ, ನನಗೆ ಮತ್ತೆ ನೀಟ್ ಪರೀಕ್ಷೆ ಬರೆಯುವ ಧೈರ್ಯವಿಲ್ಲ” 3 ಲಕ್ಷ ಸಾಲ, ಡಾಕ್ಟರ್ ಆಗುವ ಆ ಕನಸುಗಳು…650 ಅಂಕಗಳ ನಿರೀಕ್ಷೆ..ಆದರೆ…ಕೊನೆಗೆ ಹೀಗೊಂದು ವಿದಾಯ ಪತ್ರ!

ಮರೆಯಾದ ಒಬ್ಬ ಮಗಳ ಕನಸು, ಒಂದು ಕುಟುಂಬದ ತ್ಯಾಗ, ಒಂದು ವ್ಯವಸ್ಥೆಯ ಒತ್ತಡ… ಕೊನೆಗೆ ಎಂದೂ ಮರೆಯದ ವಿದಾಯ ಪತ್ರ..ಸಾವಿನಲ್ಲಿ ಅಂತ್ಯವಾದ ಬದುಕು..ಈಗಿನ ಮಕ್ಕಳು ಒತ್ತಡವನ್ನು ಸಹಿಸಿಕೊಳ್ಳಲು ಅಸಮರ್ಥರಾಗಿದ್ದಾರೆ ಅನ್ನೋದು ಇತ್ತೀಚಿನ ಇಂಥದೇ ಹಲವು ಸಾಲು ಸಾಲು ಘಟನೆಗಳು ಸಮಾಜದ ಹೆತ್ತವರ ಹಾಗೂ ವ್ಯವಸ್ಥೆಯ ಕಣ್ಣತೆರೆಸುವ ಎಚ್ಚರಿಕೆ ಘಂಟೆ…

18 ವರ್ಷದ ಆಕಾಂಕ್ಷಾ ಚತುರ್ವೇದಿ. ಒಂದು ಸಾಮಾನ್ಯ ರೈತ ಕುಟುಂಬದ ಮಗಳು. ಆದರೆ ಅವಳ ಕನಸು ಮಾತ್ರ ಅಸಾಮಾನ್ಯವಾಗಿತ್ತು – ವೈದ್ಯೆಯಾಗಬೇಕು, ಅಪ್ಪ-ಅಮ್ಮನ ಕಷ್ಟಕ್ಕೆ ಪ್ರತಿಫಲ ಕೊಡಬೇಕು, ಕುಟುಂಬದ ಬದುಕು ಬದಲಿಸಬೇಕು. ಇದೇ ಕನಸನ್ನು ಹೊತ್ತು ವರ್ಷಗಳ ಕಾಲ ಹಗಲು-ರಾತ್ರಿ ಓದಿದ್ದ ಆಕಾಂಕ್ಷಾ ಇಂದು ಇಲ್ಲ. ಉಳಿದಿರುವುದು ಅವಳ ಕೊನೆಯ ಪತ್ರ ಮತ್ತು ಸಾವಿರಾರು ವಿದ್ಯಾರ್ಥಿಗಳನ್ನು ಬೆಚ್ಚಿಬೀಳಿಸುವ ಪ್ರಶ್ನೆಗಳು ಮಾತ್ರ.

ಮಧ್ಯಪ್ರದೇಶದ ಮಾವೊಗಂಜ್ ಜಿಲ್ಲೆಯ ಕೃಷನ್ ಕುಮಾರ್ ಚೌಬೆ ಇವರ ರೈತ ಕುಟುಂಬದಲ್ಲಿ ಹುಟ್ಟಿದ ಆಕಾಂಕ್ಷಾ, ವೈದ್ಯೆಯಾಗುವ ಗುರಿಗಾಗಿ ಮನೆಯವರಿಂದ ದೂರವಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ ನೀಟ್ ತರಬೇತಿ ಪಡೆಯುತ್ತಿದ್ದರು. ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ. ಆದರೂ ಮಗಳ ಕನಸು ನನಸಾಗಲಿ ಎಂಬ ಕಾರಣಕ್ಕೆ ತಂದೆ ಕೃಷ್ಣಕುಮಾರ್ ಚತುರ್ವೇದಿ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 3 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಮಗಳ ಓದಿಗಾಗಿ ಅವರು ತಮ್ಮ ಸಾಮರ್ಥ್ಯ ಮೀರಿದ ತ್ಯಾಗ ಮಾಡಿದ್ದರು.

“ಈ ಬಾರಿ ನಮ್ಮ ಮಗಳು ಡಾಕ್ಟರ್ ಆಗುತ್ತಾಳೆ. ನಮ್ಮ ಮನೆಯ ಕಷ್ಟಗಳೆಲ್ಲ ಮುಗಿಯುತ್ತವೆ” ಎಂಬ ಆಶಾಭಾವನೆ ಇಡೀ ಕುಟುಂಬದಲ್ಲಿತ್ತು. ಆಕಾಂಕ್ಷಾ ಕೂಡ ಉತ್ತಮ ಅಂಕಗಳ ನಿರೀಕ್ಷೆಯಲ್ಲಿದ್ದರು. ಸುಮಾರು 650 ಅಂಕಗಳು ಬರಬಹುದು ಎಂದು ಪೋಷಕರಿಗೆ ಹೇಳಿಕೊಂಡಿದ್ದರು.

ಆದರೆ ನಂತರ ನಡೆದ ಬೆಳವಣಿಗೆಗಳು ಅವಳ ಜೀವನವನ್ನೇ ಬದಲಿಸಿಬಿಟ್ಟವು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ, ಪರೀಕ್ಷೆಯ ವಿಶ್ವಾಸಾರ್ಹತೆಯ ಬಗ್ಗೆ ಉದ್ಭವಿಸಿದ ಅನುಮಾನಗಳು, ಮರುಪರೀಕ್ಷೆಯ ಘೋಷಣೆ ಮತ್ತು ಭವಿಷ್ಯದ ಅನಿಶ್ಚಿತತೆ ಅವಳ ಮನಸ್ಸಿನ ಮೇಲೆ ಭಾರಿ ಹೊಡೆತ ನೀಡಿದವು. ವರ್ಷಗಳ ಪರಿಶ್ರಮ ಒಂದು ಕ್ಷಣದಲ್ಲಿ ಅರ್ಥ ಕಳೆದುಕೊಂಡಂತೆ ಅವಳಿಗೆ ಭಾಸವಾಗಿತ್ತು.

ಕೊನೆಗೆ ಮೇ 20ರಂದು ಆಕಾಂಕ್ಷಾ ತನ್ನ ಕೊನೆಯ ಪತ್ರ ಬರೆದಳು.

ಅಪ್ಪ-ಅಮ್ಮ, ನಿಮ್ಮ ಮಗಳು ಓದಿ ಡಾಕ್ಟರ್ ಆಗುತ್ತಾಳೆ ಎಂದು ನೀವು ನಂಬಿದ್ದೀರಿ. ಆದರೆ ನನಗೆ ಮತ್ತೊಮ್ಮೆ ನೀಟ್ ಪರೀಕ್ಷೆ ಬರೆಯುವ ಧೈರ್ಯವಿಲ್ಲ. ನಾನು ನಿಮ್ಮನ್ನು ನಿರಾಶೆಗೊಳಿಸುತ್ತಿದ್ದೇನೆ. ಮತ್ತೊಮ್ಮೆ ಪರೀಕ್ಷೆ ಬರೆದರೂ ಉತ್ತಮ ಅಂಕ ಬರುತ್ತದೆ ಎಂಬ ಖಾತರಿಯೂ ಇಲ್ಲ.”

ಈ ಕೆಲವೇ ಸಾಲುಗಳಲ್ಲಿ ಒಬ್ಬ ವಿದ್ಯಾರ್ಥಿನಿಯ ಭಯ, ಆತಂಕ, ಒತ್ತಡ ಮತ್ತು ಅಸಹಾಯಕತೆ ಎಲ್ಲವೂ ಅಡಗಿಕೊಂಡಿದ್ದವು. ಕೆಲವೇ ಗಂಟೆಗಳ ಬಳಿಕ ಆಕಾಂಕ್ಷಾ ಆತ್ಮಹತ್ಯೆ ಮಾಡಿಕೊಂಡರು.

ಒಬ್ಬ ವಿದ್ಯಾರ್ಥಿನಿಯ ಸಾವಿಗೆ ಕೇವಲ ಒತ್ತಡವೇ ಕಾರಣವಲ್ಲ, ವ್ಯವಸ್ಥೆಯ ವೈಫಲ್ಯವೂ ಕಾರಣ ಎಂಬ ಪ್ರಶ್ನೆ ಇಂದು ದೇಶದ ಮುಂದೆ ನಿಂತಿದೆ. ವರ್ಷಗಳ ಕಾಲ ಓದಿದ ವಿದ್ಯಾರ್ಥಿಗಳ ಭವಿಷ್ಯವನ್ನು ಕೆಲವರ ಅಕ್ರಮಗಳಿಂದ ಹಾಳು ಮಾಡಿದರೆ ಅದರ ಹೊಣೆ ಯಾರು ಹೊರುತ್ತಾರೆ? ಪ್ರಶ್ನೆಪತ್ರಿಕೆ ಸೋರಿಕೆ ಕೇವಲ ಪರೀಕ್ಷೆಯ ಮೇಲಿನ ದಾಳಿಯಲ್ಲ, ಲಕ್ಷಾಂತರ ಕುಟುಂಬಗಳ ಕನಸುಗಳ ಮೇಲಿನ ದ್ರೋಹ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವುದರ ಜೊತೆಗೆ, ಇಂತಹ ಘಟನೆಗಳು ಮರುಕಳಿಸದಂತೆ ವ್ಯವಸ್ಥೆಯನ್ನು ಬಲಪಡಿಸುವುದು ಕಾಲದ ಅಗತ್ಯವಾಗಿದೆ.

ಈ ಘಟನೆ ಕೇವಲ ಒಬ್ಬ ವಿದ್ಯಾರ್ಥಿನಿಯ ಸಾವಿನ ಕಥೆಯಲ್ಲ. ಇದು ದೇಶದ ಲಕ್ಷಾಂತರ ಸ್ಪರ್ಧಾತ್ಮಕ ಪರೀಕ್ಷಾ ವಿದ್ಯಾರ್ಥಿಗಳು ಎದುರಿಸುತ್ತಿರುವ ಮಾನಸಿಕ ಒತ್ತಡದ ಪ್ರತಿಬಿಂಬವಾಗಿದೆ. ಅಂಕಗಳು, ರ‍್ಯಾಂಕ್‌ಗಳು, ಸೀಟುಗಳು ಮತ್ತು ಭವಿಷ್ಯದ ಭಯಗಳ ನಡುವೆ ಕೆಲವೊಮ್ಮೆ ವಿದ್ಯಾರ್ಥಿಗಳ ಮನಸ್ಸಿನ ನೋವು ಕಾಣಿಸದೇ ಹೋಗುತ್ತದೆ.

ಇದೇ ಸಂದರ್ಭದಲ್ಲಿ ರಾಜಸ್ಥಾನದ ಕೋಟಾದಲ್ಲಿ ಜೆಇಇಗೆ ತಯಾರಿ ನಡೆಸುತ್ತಿದ್ದ 17 ವರ್ಷದ ವಿದ್ಯಾರ್ಥಿಯೊಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿಕ್ಷಣ ವ್ಯವಸ್ಥೆಯ ಮೇಲೆ ಮತ್ತಷ್ಟು ಪ್ರಶ್ನೆಗಳನ್ನು ಎಬ್ಬಿಸಿದೆ. ಸ್ಪರ್ಧೆ ಹೆಚ್ಚಾಗುತ್ತಿರುವಂತೆ ವಿದ್ಯಾರ್ಥಿಗಳ ಮೇಲೆ ಮಾನಸಿಕ ಒತ್ತಡವೂ ಹೆಚ್ಚುತ್ತಿದೆ ಎಂಬುದನ್ನು ಈ ಘಟನೆಗಳು ಮತ್ತೊಮ್ಮೆ ನೆನಪಿಸಿವೆ.

ಆಕಾಂಕ್ಷಾಳ ಸಾವಿನಿಂದ ಕಳೆದುಹೋದದ್ದು ಕೇವಲ ಒಂದು ಜೀವವಲ್ಲ. ಒಂದು ಕುಟುಂಬದ ಕನಸು, ಒಬ್ಬ ತಂದೆಯ ತ್ಯಾಗ, ಒಬ್ಬ ತಾಯಿಯ ನಿರೀಕ್ಷೆ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಬಹುದಾಗಿದ್ದ ಒಬ್ಬ ಭವಿಷ್ಯದ ವೈದ್ಯೆ.

ಯಾವುದೇ ಪರೀಕ್ಷೆ ಜೀವನಕ್ಕಿಂತ ದೊಡ್ಡದಲ್ಲ. ಒಂದು ಫಲಿತಾಂಶ ಭವಿಷ್ಯವನ್ನು ನಿರ್ಧರಿಸುವುದಿಲ್ಲ. ಆದರೆ ಕಳೆದುಹೋದ ಒಂದು ಜೀವ ಮತ್ತೆ ಮರಳಿ ಬರುವುದಿಲ್ಲ.

##NEET #AkankshaChaturvedi #StudentPressure #EducationSystem #MentalHealthAwareness #NEETExam #StudentLife #HeartBreakingStory #IndiaNews #Awareness

COMMENTS

Login with Gmail to comment

ಇನ್ನಷ್ಟು ಸುದ್ದಿ

ಬೆಂಗಳೂರಲ್ಲಿ Bowring Hospital ಬಳಿ ಗೋಡೆ ಕುಸಿತ ಮನ ಕಲುಕುವ ಘಟನೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಿಂತವರು… ಏಳು ಮಂದಿಯ ದುರಂತ ಅಂತ್ಯ.!
ಶಂಕರಾಚಾರ್ಯರ ಹೊಸ ಯೋಜನೆ ದೇಶವನ್ನೇ ಚರ್ಚೆಗೆ ತಳ್ಳಿದ ಕಾರಣ ಏನು?Go-LXಒಂದು ಕ್ಲಿಕ್‌ನಲ್ಲಿ ಹಸು ಮಾರಾಟ…
ಅಹಿಂಸೆ, ಸತ್ಯ ಮತ್ತು ತ್ಯಾಗದ ಮಾರ್ಗವೇ ಮಹಾವೀರರ ದರ್ಶನ — ಇದೇ ಸುಖಿ ಜೀವನದ ಗುಟ್ಟು.
ಕರ್ನಾಟಕದಲ್ಲೇ ಮೊದಲು-ಕಿಚ್ಚ ಸುದೀಪ್ ಕೈಯಿಂದ ಗ್ರಾಂಡ್ ಓಪನಿಂಗ್!₹130 ಕೋಟಿ ವೆಚ್ಚದ ವಿಶ್ವದರ್ಜೆಯ ‘MR-Linac’ ತಂತ್ರಜ್ಞಾನ ಹೈಟೆಕ್ ಕ್ಯಾನ್ಸರ್ ಆಸ್ಪತ್ರೆ!
ಬೇಕಾದಾಗ, ಬೇಕಾದಂಗೆ ಸಂವಿಧಾನದ ಜಪ
ಕಾರ್ಕಳದ ವಂಚನೆ ಪ್ರಕರಣ, ದೂರುದಾರನ ಮೇಲೂ ಶಂಕೆ
ಚಾಮನಗರದಲ್ಲೊಂದು ಅನಿಷ್ಠದ ಕ್ರೈಂ
ಬೆಂಗಳೂರಿನಲ್ಲಿ₹2,384 ಕೋಟಿ GSTದಂಧೆ ಭೇದಿಸಿದ ಇಲಾಖೆ.. ಭರ್ಜರಿ ದಾಳಿ! ಭಾರೀ GST ಸ್ಕ್ಯಾಂ .. ಹಲವರು ಬಲೆಗೆ ಬೀಳುವ ಸಾಧ್ಯತೆ!…
ಎಲ್ಪಿಜಿ ಗ್ಯಾಸ್ ದರದಲ್ಲಿ ಏರಿಕೆ:  ಮಧ್ಯಮ ವರ್ಗದವರಲ್ಲಿ ಹತಾಶೆ
ಆನ್ಲೈನ್ ಶೇರಿಂಗ್ ಹಗರಣ: ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು.
ಟೂರ್ plan ಮಾಡ್ತಿದ್ದೀರಾ ?ಸ್ಥಳವೇ ಇಲ್ಲದ address ಗೆ online book ಮಾಡಿ ಮೋಸ ಹೋಗ್ಬೇಡಿ…
30 ವರ್ಷದ ಕನಸು ಸಾಕಾರ: ಮಾಣಿಲ–ಪೆರ್ಲ ಸಂಪರ್ಕಕ್ಕೆ ಸಿರಿಯ ನದಿಗೆ ಸೇತುವೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್!
ಅಲ್ಪಸಂಖ್ಯಾತರ ಘಟಕ ಬರ್ಕಾಸ್ತು- ಡಿಕೆ ಶಿವಕುಮಾರ್ ಗಟ್ಟಿ ನಿರ್ಧಾರ.
ಸಚಿವ ಜಮೀರ್ ಕಥೆ ಗೋವಿಂದ!!!?
ಪುತ್ತೂರಿನ ಜಾತ್ರೆಯಲ್ಲಿ ಸುಡುಮದ್ದು ದುರಂತ-ಹಲವರಿಗೆ ಗಾಯ..
“ತಲೈವಾ”ಗೂ ಭಯವಾ? ಹೂವಿನ ಚೆಂಡು ಕಂಡು ವಿಜಯ್ ರನ್! ಒಂದು ಕ್ಷಣದ ಥ್ರಿಲ್ಲರ್!
ಕೊನೆಗೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಿತೀಶ್ ಕುಮಾರ್
ಕನಕಪುರ ಬಂಡೆ ಬಿಜೆಪಿಗೆ ಎಂಬ ಬೋಗಸ್ ಸುದ್ದಿ
ಟ್ರಂಪ್ ಇರಾನ್ ಡೀಲ್ ಕಥೆ ಏನು?ಒಪ್ಪಂದವಾಗುತ್ತಾ? ಅಥವಾ ಯುದ್ಧ ಮುಂದುವರೆಯುತ್ತಾ?
ಗ್ಯಾಸ್ ಅಭಾವ ಮತ್ತು ಬೆಲೆ ಏರಿಕೆ, ಸುಳ್ಳು ಎನ್ನುತ್ತಿದೆ-HPCL
ದವಳ ಕೋ- ಆಪರೇಟಿವ್ನ ಈ ಸಾಲಿನ ವ್ಯವಹಾರ ಎರಡುನೂರು ಕೋಟಿ
ಒಂದೂವರೆ ವರ್ಷ ಫ್ರೀ ಬಸ್  ಪ್ರಯಾಣ…ಕೊನೆಯಲ್ಲಿ ದಂಡ ಮತ್ತು ಜೈಲು ಶಿಕ್ಷೆ!
ಬೀಡಿ, ಗೋಡಂಬಿ ಮತ್ತು ಸ್ಕೀಮ್ ಕಾರ್ಮಿಕರಿಗೆ ಕನಿಷ್ಠ ಕೂಲಿ ನೀಡಿ: ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ.
ಸಚಿವ ಜಮೀರ್ ಅಹಮದ್ ಹಚ್ಚಿದ ಪಟಾಕಿಗೆ ಕಾಂಗ್ರೆಸ್ ಕೋಟೆಯಲ್ಲಿ ಬಿರುಕು..!?
ಒಂಟಿ – ಆಂಟಿಯರ ನಂಬಿಕೆ ಗಳಿಸಿ ಕೊಲೆಗೈಯುತ್ತಿದ್ದ ಸೀರಿಯಲ್ ಕಿಲ್ಲರ್ ಬಂಧನ …!
ಆಸ್ಪತ್ರೆಯಲ್ಲೇ ಮೂರನೇ ಮಹಡಿಯಿಂದ ಬಿದ್ದು ಸಾವುನಿರ್ಲಕ್ಷ್ಯವೇ? ಸುರಕ್ಷತೆ ಪ್ರಶ್ನೆಗೊಳಗಾಗಿದೆ!
ಮಂಗಳೂರು ಶಾಲಾ ದಾಖಲಾತಿ ಅಂದೋಲನ-ಎಲ್ಲ ಮಕ್ಕಳಿಗೂ ಶಾಲೆಯ ಹಕ್ಕು …
ಸಹೋದರಿಯ ಎಲುಬುಗಳೊಂದಿಗೆ ಬ್ಯಾಂಕ್ ಗೆ ಬಂದ ಅಣ್ಣ…!ದಾಖಲೆ ನಿಯಮಗಳ ನಡುವೆ ಸೋತ ಮಾನವೀಯತೆ”
ಗುರು ಬ್ರಹ್ಮ – ಗುರು ವಿಷ್ಣು ಅನ್ನುವ ಕಾಲ ಮುಗಿದು ಹೋಯ್ತೇ?
ಸೋಶಿಯಲ್ ಮೀಡಿಯಾದ ವೈರಲ್ ವಿಡಿಯೋದಿಂದ ಕೋರ್ಟ್ ತನಕ..!ರಸ್ತೆ ರೇಜ್ ಪ್ರಕರಣದಲ್ಲಿ ಹೊಸ ತಿರುವು