📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಆಕಾಂಕ್ಷಳ ಪತ್ರ “ಮಮ್ಮಿ-ಪಾಪಾ, ನನಗೆ ಮತ್ತೆ ನೀಟ್ ಪರೀಕ್ಷೆ ಬರೆಯುವ ಧೈರ್ಯವಿಲ್ಲ” 3 ಲಕ್ಷ ಸಾಲ, ಡಾಕ್ಟರ್ ಆಗುವ ಆ ಕನಸುಗಳು…650 ಅಂಕಗಳ ನಿರೀಕ್ಷೆ..ಆದರೆ…ಕೊನೆಗೆ ಹೀಗೊಂದು ವಿದಾಯ ಪತ್ರ!

    ಮರೆಯಾದ ಒಬ್ಬ ಮಗಳ ಕನಸು, ಒಂದು ಕುಟುಂಬದ ತ್ಯಾಗ, ಒಂದು ವ್ಯವಸ್ಥೆಯ ಒತ್ತಡ… ಕೊನೆಗೆ ಎಂದೂ ಮರೆಯದ ವಿದಾಯ ಪತ್ರ..ಸಾವಿನಲ್ಲಿ ಅಂತ್ಯವಾದ ಬದುಕು..ಈಗಿನ ಮಕ್ಕಳು ಒತ್ತಡವನ್ನು ಸಹಿಸಿಕೊಳ್ಳಲು ಅಸಮರ್ಥರಾಗಿದ್ದಾರೆ ಅನ್ನೋದು ಇತ್ತೀಚಿನ ಇಂಥದೇ ಹಲವು ಸಾಲು ಸಾಲು ಘಟನೆಗಳು ಸಮಾಜದ ಹೆತ್ತವರ ಹಾಗೂ ವ್ಯವಸ್ಥೆಯ ಕಣ್ಣತೆರೆಸುವ ಎಚ್ಚರಿಕೆ ಘಂಟೆ…

    18 ವರ್ಷದ ಆಕಾಂಕ್ಷಾ ಚತುರ್ವೇದಿ. ಒಂದು ಸಾಮಾನ್ಯ ರೈತ ಕುಟುಂಬದ ಮಗಳು. ಆದರೆ ಅವಳ ಕನಸು ಮಾತ್ರ ಅಸಾಮಾನ್ಯವಾಗಿತ್ತು – ವೈದ್ಯೆಯಾಗಬೇಕು, ಅಪ್ಪ-ಅಮ್ಮನ ಕಷ್ಟಕ್ಕೆ ಪ್ರತಿಫಲ ಕೊಡಬೇಕು, ಕುಟುಂಬದ ಬದುಕು ಬದಲಿಸಬೇಕು. ಇದೇ ಕನಸನ್ನು ಹೊತ್ತು ವರ್ಷಗಳ ಕಾಲ ಹಗಲು-ರಾತ್ರಿ ಓದಿದ್ದ ಆಕಾಂಕ್ಷಾ ಇಂದು ಇಲ್ಲ. ಉಳಿದಿರುವುದು ಅವಳ ಕೊನೆಯ ಪತ್ರ ಮತ್ತು ಸಾವಿರಾರು ವಿದ್ಯಾರ್ಥಿಗಳನ್ನು ಬೆಚ್ಚಿಬೀಳಿಸುವ ಪ್ರಶ್ನೆಗಳು ಮಾತ್ರ.

    ಮಧ್ಯಪ್ರದೇಶದ ಮಾವೊಗಂಜ್ ಜಿಲ್ಲೆಯ ಕೃಷನ್ ಕುಮಾರ್ ಚೌಬೆ ಇವರ ರೈತ ಕುಟುಂಬದಲ್ಲಿ ಹುಟ್ಟಿದ ಆಕಾಂಕ್ಷಾ, ವೈದ್ಯೆಯಾಗುವ ಗುರಿಗಾಗಿ ಮನೆಯವರಿಂದ ದೂರವಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ ನೀಟ್ ತರಬೇತಿ ಪಡೆಯುತ್ತಿದ್ದರು. ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ. ಆದರೂ ಮಗಳ ಕನಸು ನನಸಾಗಲಿ ಎಂಬ ಕಾರಣಕ್ಕೆ ತಂದೆ ಕೃಷ್ಣಕುಮಾರ್ ಚತುರ್ವೇದಿ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 3 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಮಗಳ ಓದಿಗಾಗಿ ಅವರು ತಮ್ಮ ಸಾಮರ್ಥ್ಯ ಮೀರಿದ ತ್ಯಾಗ ಮಾಡಿದ್ದರು.

    “ಈ ಬಾರಿ ನಮ್ಮ ಮಗಳು ಡಾಕ್ಟರ್ ಆಗುತ್ತಾಳೆ. ನಮ್ಮ ಮನೆಯ ಕಷ್ಟಗಳೆಲ್ಲ ಮುಗಿಯುತ್ತವೆ” ಎಂಬ ಆಶಾಭಾವನೆ ಇಡೀ ಕುಟುಂಬದಲ್ಲಿತ್ತು. ಆಕಾಂಕ್ಷಾ ಕೂಡ ಉತ್ತಮ ಅಂಕಗಳ ನಿರೀಕ್ಷೆಯಲ್ಲಿದ್ದರು. ಸುಮಾರು 650 ಅಂಕಗಳು ಬರಬಹುದು ಎಂದು ಪೋಷಕರಿಗೆ ಹೇಳಿಕೊಂಡಿದ್ದರು.

    ಆದರೆ ನಂತರ ನಡೆದ ಬೆಳವಣಿಗೆಗಳು ಅವಳ ಜೀವನವನ್ನೇ ಬದಲಿಸಿಬಿಟ್ಟವು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ, ಪರೀಕ್ಷೆಯ ವಿಶ್ವಾಸಾರ್ಹತೆಯ ಬಗ್ಗೆ ಉದ್ಭವಿಸಿದ ಅನುಮಾನಗಳು, ಮರುಪರೀಕ್ಷೆಯ ಘೋಷಣೆ ಮತ್ತು ಭವಿಷ್ಯದ ಅನಿಶ್ಚಿತತೆ ಅವಳ ಮನಸ್ಸಿನ ಮೇಲೆ ಭಾರಿ ಹೊಡೆತ ನೀಡಿದವು. ವರ್ಷಗಳ ಪರಿಶ್ರಮ ಒಂದು ಕ್ಷಣದಲ್ಲಿ ಅರ್ಥ ಕಳೆದುಕೊಂಡಂತೆ ಅವಳಿಗೆ ಭಾಸವಾಗಿತ್ತು.

    ಕೊನೆಗೆ ಮೇ 20ರಂದು ಆಕಾಂಕ್ಷಾ ತನ್ನ ಕೊನೆಯ ಪತ್ರ ಬರೆದಳು.

    ಅಪ್ಪ-ಅಮ್ಮ, ನಿಮ್ಮ ಮಗಳು ಓದಿ ಡಾಕ್ಟರ್ ಆಗುತ್ತಾಳೆ ಎಂದು ನೀವು ನಂಬಿದ್ದೀರಿ. ಆದರೆ ನನಗೆ ಮತ್ತೊಮ್ಮೆ ನೀಟ್ ಪರೀಕ್ಷೆ ಬರೆಯುವ ಧೈರ್ಯವಿಲ್ಲ. ನಾನು ನಿಮ್ಮನ್ನು ನಿರಾಶೆಗೊಳಿಸುತ್ತಿದ್ದೇನೆ. ಮತ್ತೊಮ್ಮೆ ಪರೀಕ್ಷೆ ಬರೆದರೂ ಉತ್ತಮ ಅಂಕ ಬರುತ್ತದೆ ಎಂಬ ಖಾತರಿಯೂ ಇಲ್ಲ.”

    ಈ ಕೆಲವೇ ಸಾಲುಗಳಲ್ಲಿ ಒಬ್ಬ ವಿದ್ಯಾರ್ಥಿನಿಯ ಭಯ, ಆತಂಕ, ಒತ್ತಡ ಮತ್ತು ಅಸಹಾಯಕತೆ ಎಲ್ಲವೂ ಅಡಗಿಕೊಂಡಿದ್ದವು. ಕೆಲವೇ ಗಂಟೆಗಳ ಬಳಿಕ ಆಕಾಂಕ್ಷಾ ಆತ್ಮಹತ್ಯೆ ಮಾಡಿಕೊಂಡರು.

    ಒಬ್ಬ ವಿದ್ಯಾರ್ಥಿನಿಯ ಸಾವಿಗೆ ಕೇವಲ ಒತ್ತಡವೇ ಕಾರಣವಲ್ಲ, ವ್ಯವಸ್ಥೆಯ ವೈಫಲ್ಯವೂ ಕಾರಣ ಎಂಬ ಪ್ರಶ್ನೆ ಇಂದು ದೇಶದ ಮುಂದೆ ನಿಂತಿದೆ. ವರ್ಷಗಳ ಕಾಲ ಓದಿದ ವಿದ್ಯಾರ್ಥಿಗಳ ಭವಿಷ್ಯವನ್ನು ಕೆಲವರ ಅಕ್ರಮಗಳಿಂದ ಹಾಳು ಮಾಡಿದರೆ ಅದರ ಹೊಣೆ ಯಾರು ಹೊರುತ್ತಾರೆ? ಪ್ರಶ್ನೆಪತ್ರಿಕೆ ಸೋರಿಕೆ ಕೇವಲ ಪರೀಕ್ಷೆಯ ಮೇಲಿನ ದಾಳಿಯಲ್ಲ, ಲಕ್ಷಾಂತರ ಕುಟುಂಬಗಳ ಕನಸುಗಳ ಮೇಲಿನ ದ್ರೋಹ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವುದರ ಜೊತೆಗೆ, ಇಂತಹ ಘಟನೆಗಳು ಮರುಕಳಿಸದಂತೆ ವ್ಯವಸ್ಥೆಯನ್ನು ಬಲಪಡಿಸುವುದು ಕಾಲದ ಅಗತ್ಯವಾಗಿದೆ.

    ಈ ಘಟನೆ ಕೇವಲ ಒಬ್ಬ ವಿದ್ಯಾರ್ಥಿನಿಯ ಸಾವಿನ ಕಥೆಯಲ್ಲ. ಇದು ದೇಶದ ಲಕ್ಷಾಂತರ ಸ್ಪರ್ಧಾತ್ಮಕ ಪರೀಕ್ಷಾ ವಿದ್ಯಾರ್ಥಿಗಳು ಎದುರಿಸುತ್ತಿರುವ ಮಾನಸಿಕ ಒತ್ತಡದ ಪ್ರತಿಬಿಂಬವಾಗಿದೆ. ಅಂಕಗಳು, ರ‍್ಯಾಂಕ್‌ಗಳು, ಸೀಟುಗಳು ಮತ್ತು ಭವಿಷ್ಯದ ಭಯಗಳ ನಡುವೆ ಕೆಲವೊಮ್ಮೆ ವಿದ್ಯಾರ್ಥಿಗಳ ಮನಸ್ಸಿನ ನೋವು ಕಾಣಿಸದೇ ಹೋಗುತ್ತದೆ.

    ಇದೇ ಸಂದರ್ಭದಲ್ಲಿ ರಾಜಸ್ಥಾನದ ಕೋಟಾದಲ್ಲಿ ಜೆಇಇಗೆ ತಯಾರಿ ನಡೆಸುತ್ತಿದ್ದ 17 ವರ್ಷದ ವಿದ್ಯಾರ್ಥಿಯೊಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿಕ್ಷಣ ವ್ಯವಸ್ಥೆಯ ಮೇಲೆ ಮತ್ತಷ್ಟು ಪ್ರಶ್ನೆಗಳನ್ನು ಎಬ್ಬಿಸಿದೆ. ಸ್ಪರ್ಧೆ ಹೆಚ್ಚಾಗುತ್ತಿರುವಂತೆ ವಿದ್ಯಾರ್ಥಿಗಳ ಮೇಲೆ ಮಾನಸಿಕ ಒತ್ತಡವೂ ಹೆಚ್ಚುತ್ತಿದೆ ಎಂಬುದನ್ನು ಈ ಘಟನೆಗಳು ಮತ್ತೊಮ್ಮೆ ನೆನಪಿಸಿವೆ.

    ಆಕಾಂಕ್ಷಾಳ ಸಾವಿನಿಂದ ಕಳೆದುಹೋದದ್ದು ಕೇವಲ ಒಂದು ಜೀವವಲ್ಲ. ಒಂದು ಕುಟುಂಬದ ಕನಸು, ಒಬ್ಬ ತಂದೆಯ ತ್ಯಾಗ, ಒಬ್ಬ ತಾಯಿಯ ನಿರೀಕ್ಷೆ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಬಹುದಾಗಿದ್ದ ಒಬ್ಬ ಭವಿಷ್ಯದ ವೈದ್ಯೆ.

    ಯಾವುದೇ ಪರೀಕ್ಷೆ ಜೀವನಕ್ಕಿಂತ ದೊಡ್ಡದಲ್ಲ. ಒಂದು ಫಲಿತಾಂಶ ಭವಿಷ್ಯವನ್ನು ನಿರ್ಧರಿಸುವುದಿಲ್ಲ. ಆದರೆ ಕಳೆದುಹೋದ ಒಂದು ಜೀವ ಮತ್ತೆ ಮರಳಿ ಬರುವುದಿಲ್ಲ.

    ##NEET #AkankshaChaturvedi #StudentPressure #EducationSystem #MentalHealthAwareness #NEETExam #StudentLife #HeartBreakingStory #IndiaNews #Awareness

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಸಿಎಂ ಡಿಕೆ ಶಿವಕುಮಾರ್ ಕರೆದ ಸಭೆಗೆ ರಾಮಲಿಂಗಾರೆಡ್ಡಿ, ಜಮೀರ್ ಗೈರು…
    ದೆಹಲಿಯನ್ನು ನಡುಗಿಸಿದ ಸೈಕೋಪಾತ್ ಘಟನೆಯ ಕ್ರೂರ ಸತ್ಯ…. ಆನ್‌ಲೈನ್ ಬೆಟ್ಟಿಂಗ್ ಮತ್ತು ಆಟಗಳ ಅಡಿಕ್ಟ್ – ಸಾಲ …ಮನೋವೈಕಲ್ಯ ಲಕ್ಷಣ!
    ಭರತ್ ತಿವಾರಿ ಎನ್‌ಕೌಂಟರ್ -ಬಿಹಾರ ಎಡಿಜಿಪಿಯಿಂದಲೇ ಪೊಲೀಸ್ ಲೋಪದ ಒಪ್ಪಿಗೆ: ಶಾಹಪುರ SHO ಸೇರಿ 5 ಅಧಿಕಾರಿಗಳು ಸಸ್ಪೆಂಡ್!
    ಸ್ಪೇನ್ ಅಧ್ಯಕ್ಷರ ವಿರುದ್ಧ ಟ್ರಂಪ್ ಗುಡುಗು 
    ED ₹2,178 ಕೋಟಿ ಆಸ್ತಿ ಜಪ್ತಿ ನಿರವ್ ಮೋದಿ–ವಿಜಯ್ ಮಲ್ಯ ಸೇರಿ 21 ಜನರ ಆರ್ಥಿಕ ಅಪರಾಧಿಗಳ ವಿರುದ್ಧ ದೊಡ್ಡ ಮಟ್ಟದ ಕ್ರಮ
    ಡೊನಾಲ್ಡ್ ಟ್ರoಪ್ ಮುಂದೆ ಮಂಡಿಯೂರಿ ಕೂತ ಜಗತ್ತು!
    ಮಿಸೆಸ್ ಕೇರಳ ಈಗ ‘ಡ್ರಗ್ ಕ್ವೀನ್’…!?ಕೋಟಿ ಮೌಲ್ಯದ ಡ್ರಗ್ಸ್ ಜೊತೆ ಮಾಜಿ ‘ಮಿಸೆಸ್ ಕೇರಳ’ ಅರೆಸ್ಟ್!”
    ಮೊದಲ ದಿನವೇ ಯು.ಟಿ. ಖಾದರ್ ಖಡಕ್ ನಡೆ …PF ಕೊಡದ ಗುತ್ತಿಗೆದಾರನಿಗೆ ನೋಟಿಸ್, ಅಧಿಕಾರಿಗಳಿಗೆ ತರಾಟೆ
    ಡೈಮಂಡ್ ನೆಕ್ಲೇಸ್, ಕಿವಿಯೋಲೆಗಳು, ಚಿನ್ನದ ಚೈನ್, ಪ್ಲಾಟಿನಂ ಉಂಗುರ ಕಳವು…!
    ವಿದ್ಯಾರ್ಥಿ ಪ್ರತಿಭಟನೆಗೆ ಬಿಗ್ ವಿಕ್ಟರಿ:ಧರ್ಮೇಂದ್ರ ಪ್ರಧಾನ್ ರಾಜೀನಾಮೆ! ಕೊನೆಗೂ ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದ ಸರ್ಕಾರ…!?
    “ಪ್ರಜಾಪ್ರಭುತ್ವದ ಮೇಲೆ ದಾಳಿ”ಸುಪ್ರೀಂ ಕೋರ್ಟ್ ಕಿಡಿ: ಇದು ಪ್ರತಿಭಟನೆ ಅಲ್ಲ, ಸಂಚು!”
    ಸ್ಪೇನ್‌ಗೆ 2ನೇ FIFA ವಿಶ್ವಕಪ್ ಕಿರೀಟ!ನ್ಯೂಯಾರ್ಕ್‌ನಲ್ಲಿ ಮೆಸ್ಸಿಯ ಅರ್ಜೆಂಟೀನಾವನ್ನು ಮಣಿಸಿದ ಸ್ಪೇನ್ ನ ಲಾ ರೋಜಾ ಗೆ ಐತಿಹಾಸಿಕ ಜಯ! 
    ಮದರಸಾದಲ್ಲಿ ದೌರ್ಜನ್ಯ ಮತ್ತು ಬಲವಂತದ ಕೂಲಿ ಆರೋಪ-24 ಮಕ್ಕಳ ರಕ್ಷಣೆ
    ತಿರುಮಲ ತಿಮ್ಮಪ್ಪನ 3,550 ಮೆಟ್ಟಿಲು ಹತ್ತಿದ 116 ವರ್ಷದ ನವನೀತಮ್ಮ ಕರ್ನಾಟಕದ ಶತಾಯುಷಿ!
    ಶಾಲಾ ಶಿಕ್ಷಕಿಯರ ಹೆಸರಿನಲ್ಲಿ ಡ್ರಗ್ಸ್ ಜಾಲ ..! ತನಿಖೆಯಲ್ಲಿ ಬೆಚ್ಚಿಬೀಳಿಸುವ ಕೊಂಡಿಗಳು ಇನ್‌ಸ್ಟಾಗ್ರಾಮ್‌ನಿಂದ ಗ್ರಾಹಕರ ಸೆಳೆತ, ಗಲ್ಫ್ ನಂಬರ್ ಮೂಲಕ ಬುಕ್ಕಿಂಗ್
    ರಾಹುಲ್ ಗಾಂಧಿ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್!
    ಸರಸಕ್ಕೆ ಅಡ್ಡಿಪಡಿಸಿದ ಯುವಕನ ಮೇಲೆ  ಭೀಕರ ದಾಳಿ: ಗುಜರಾತ್‌ನಲ್ಲಿ 21 ವರ್ಷದ ಯುವಕ ಬಲಿ
    ಪಡ್ಡೆ ರೌಡಿಗಳ ಅಟ್ಟಹಾಸಕ್ಕೆ ಕಡಿವಾಣ ಬೀಳುವುದು ಯಾವಾಗ ಗ್ರಹಸಚಿವರೆ?
    ಮದುವೆ -ಜೀವನ ಬೇಸರವಾಯ್ತು ಆಸಕ್ತಿ ಇಲ್ಲ ಅಂದ್ರೆ ವಿಚ್ಛೇದನ ಸಿಗುತ್ತಾ ..! ಮಗಳು18 ದಾಟಿದರೂ ಶಿಕ್ಷಣದ ಹೊಣೆ ಯಾರಿಗೆ?
    ಕರಾವಳಿಯಲ್ಲಿ ಶುರುವಾಯ್ತು MESCOM ಮಹಾಸಮರ!ಬಯಲಾಗುತ್ತಾ “ಬ್ರಹ್ಮಾಂಡ ಭ್ರಷ್ಟಾಚಾರ”..!?
    ಪರಸ್ತ್ರೀ ಹುಂಡಿಗೆ  ಒಂದುವರೆ ಕೋಟಿ ಅಪಾರ್ಟ್ಮೆಂಟ್, ಮಾಜಿ ಶಾಸಕನ ರಂಗಿನಾಟ 
    ದಕ್ಷಿಣ ಕನ್ನಡದ 14 ವರ್ಷದ ಎಲ್ಲ ಬಾಲಕಿಯರು ಉಚಿತ HPV ಲಸಿಕೆ ಹಾಕಿಸಿಕೊಳ್ಳಲು ಸಂಸದರ ಕರೆ
    ಬರಾಯಿಪುರ 12 ವರ್ಷದ ಬಾಲಕಿಯ ಅತ್ಯಾಚಾರದ ಕ್ರೌರ್ಯಕ್ಕಿಂತ ಈಗ ಎನ್‌ಕೌಂಟರ್‌ ಚರ್ಚೆಯ ಕೇಂದ್ರ!?ಆರೋಪಿ ಒಟ್ಟಿಗೆ … ಎಲ್ಲಾ ಸತ್ಯವೂ ಸತ್ತಿತೇ?
    ಸರ್ಕಾರಿ ಸ್ವಾಮ್ಯದ ಬೇಲಿ ಕಂಬ ಕಿತ್ತಾಕಲು DYFI ಕುಮ್ಮಕ್ಕು….!
    ಸಿಎಂ ಕುರ್ಚಿಯನ್ನು, ಡಿಕೆಗೆ ಮಗ್ಗಲ ಮುಳ್ಳನ್ನಾಗಿಸಲು ಸಕಲ ತಯಾರಿ
    “ಜೈನ ಧರ್ಮಕ್ಕೆ ಮೇನಕಾ ಗಾಂಧಿಯಿಂದ ಅಪಮಾನ!? ಹೇಳಿಕೆಗೆ ಶಿವಮೊಗ್ಗದಲ್ಲಿ ಆಕ್ರೋಶದ ಜ್ವಾಲೆ – ಬೇಷರತ್ ಕ್ಷಮೆಯಾಚನೆಗೆ ಆಗ್ರಹ”
    ಮುದ್ದಾದ ಅವಳಿ ಹೆಣ್ಣು ಮಕ್ಕಳನ್ನು ಕತ್ತು ಸೀಳಿ ಕೊಂದ ಪಾಪಿ ಅಪ್ಪ
    17ನೇ ಆಯವ್ಯಯ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
    ಅಂಡಮಾನ್ ಜೈಲಿನ ಕರಾಳ ಕೋಣೆಯಿಂದ ಹೊರಬರಲಿದೆ ಕರ್ನಾಟಕದ 59 ರಕ್ತೇತಿಹಾಸ’ಯಾರೂ ಅರಿಯದ ವೀರರು’ …!
    BRICS ನ ಡಿಜಿಟಲ್ ಕರೆನ್ಸಿ ವಿಶ್ವ ಆರ್ಥಿಕತೆಯನ್ನೇ ಬೆರಗಾಗಿಸುತ್ತಾ..?