📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಜನಪ್ರಿಯ “ಶಕ್ತಿ ಯೋಜನೆ” ವಿಫಲಗೊಳಿಸಲು ಸಂಚು!

ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಹಂತಹಂತವಾಗಿ ವಿಫಲ ಗೊಳಿಸುವ ನೀರಿನಲ್ಲಿ ಸಾರಿಗೆ ಸಂಸ್ಥೆಯ ಮುಖ್ಯಸ್ಥರೇ ಸಾಗುತ್ತಿದ್ದಾರೆ ಎಂಬ ಸುದ್ದಿಯು ಬರುತ್ತಿದೆ.

ಹಿಂದಿನ ಸಿದ್ದರಾಮಯ್ಯ ಸರ್ಕಾರದ ಕಾಲದಲ್ಲಿ ಅನುಷ್ಠಾನಗೊಂಡ ಯೋಜನೆಯನ್ನು ನಿಲ್ಲಿಸಲು ಆಗದಿರುವ ಕಾರಣ, ಯೋಜನೆಯು ಇರುವಂತೆಯೇ ಅದನ್ನು ವಿಫಲಗೊಳಿಸಲು ಪ್ಲಾನ್ ಮಾಡಲಾಗಿದೆ ಎಂಬುದು ಸಾರಿಗೆ ಸಂಸ್ಥೆಯ ಇನ್ನರ್ ಮಾಹಿತಿಯಾಗಿದೆ.

BMTC, KSRTC, KRTC ಹಾಗೂ NWKRTC ಈ ನಾಲ್ಕು ಸಂಸ್ಥೆಗಳೇ ಕರ್ನಾಟಕ ಸಾರಿಗೆ ವ್ಯವಸ್ಥೆಯನ್ನು ಬಹುಪಾಲು ನೋಡಿಕೊಳ್ಳುತ್ತಿರೋದು. ಈ ನಾಲ್ಕು ಸಂಸ್ಥೆಗಳಿಗೂ ಬೇರೆಬೇರೆ MD ಗಳಿದ್ದರೆ. ಅವರೇ ಎಲ್ಲವನ್ನೂ ನಿರ್ಧಾರ ಮಾಡೋದು. ಈ ನಾಲ್ಕು MDಗಳು ಒಟ್ಟಾಗಿಯೇ ಈಗ ಶಕ್ತಿಯೋಜನೆಯನ್ನು ಹಂತಹಂತವಾಗಿ ಆಳಕ್ಕೆ ತಳ್ಳಿ ಸಂಸ್ಥೆಯ ಆದಾಯ ಹೆಚ್ಚಿಸುವ ಬಗ್ಗೆ ತಂತ್ರ ಹೆಣೆದಿದ್ದಾರೆ ಎನ್ನಲಾಗುತ್ತಿದೆ.

ಅಷ್ಟಕ್ಕೂ ಏನಾಗಿದೆ

ಗಂಡುಮೆಟ್ಟಿನ ನಾಡು ಖ್ಯಾತಿಯ ಹುಬ್ಬಳ್ಳಿ ಡಿಪೋದಿಂದ ಈ ಹಿಂದೆ ಬೀದರ್ಗೆ ಪ್ರತಿದಿನ ಬಸ್ ಹೋಗುತ್ತಿತ್ತು. ಅದನ್ನು ಪ್ಲಾನ್ ಮಾಡಿ, ಬೀದರ್ ಬದಲು ಬೀದರ್ ಮೂಲಕವೇ ಹೈದರಾಬಾದಿಗೆ ಓಡಿಸಲು ಪ್ರಾರಂಭಿಸಿದರು. ರಾಜ್ಯದ ಒಳಗೆ ಓಡಾಡುವ ಬಸ್ ಶಕ್ತಿಯೋಜನೆ ವ್ಯಾಪ್ತಿಗೆ ಬರುತ್ತದೆ. ಮಹಿಳೆಯರ ಆಧಾರ ಕಾರ್ಡ್  ನೋಡಿ ಉಚಿತ ಪ್ರಯಾಣ ಕೊಡಲಾಗುತ್ತಿತ್ತು. ಯಾವಾಗ ಈ  ಬಸ್ ಹೈದ್ರಾಬಾದ್ ಗೆ ಹೋಗಲು ಪ್ರಾರಂಭಿಸಿತೋ ಅವತ್ತಿನಿಂದ ಆ ಬಸ್, ಶಕ್ತಿಯೋಜನೆಯಿಂದ ಹೊರ ಬಂತು. ಹೊರ ರಾಜ್ಯಕ್ಕೆ ಹೋಗುವ ಬಸ್ಗೆ ಆಧಾರ್ ಕಾರ್ಡ್ ನಡೆಯಲ್ಲ. ಈ ಕಾರಣಕ್ಕಾಗಿಯೇ, nwksratc md ಹುಬ್ಬಳ್ಳಿ ಬೀದರ್ ಬಸ್ ಬದಲಾಯಿಸಿ ಬೀದರ್ ವಾಯ ಹೈದರಾಬಾದಿಗೆ ಓಡಿಸಿ ಶಕ್ತಿಯೋಜನೆಯಿಂದ ಹೊರಗಿಟ್ಟರು.

ಈಗ ಪ್ರತಿ ದಿನ ಹುಬ್ಬಳ್ಳಿ ಇಂದ ಬೆಂಗಳೂರಿಗೆ ರಾತ್ರಿ 9.08ಕ್ಕೆ ಹೊರಡುತ್ತಿದ್ದ ಬಸ್ ನಿಲ್ಲಿಸಲಾಗಿದೆ. ಈ ಬಸ್ ನಷ್ಟದಲ್ಲಿರಲಿಲ್ಲ ಎನ್ನಲಾಗಿದ್ದು, ಪ್ರತಿ ಟ್ರಿಪ್ 50ಸಾವಿರ ದುಡಿಯುತ್ತಿದ್ದರು, ಅದನ್ನು ಏಕಾಏಕಿ ನಿಲ್ಲಿಸಲಾಗಿದೆ ಎನ್ನಲಾಗಿದೆ. ಈ ರೂಟ್ ಬಸ್ ಇವತ್ತಿನಿಂದ ಮಹಾರಾಷ್ಟ್ರದ ತುಳುಜಪುರಕ್ಕೆ ಬೆಳಿಗ್ಗೆ 8ಗಂಟೆಗೆ ಹೋಗುತ್ತಿದೆ. ಹೊರ ರಾಜ್ಯಕ್ಕೆ ಹೋಗುತ್ತಿರುವ ಕಾರಣ ಇದಕ್ಕೆ ಆಧಾರ್ ಕಾರ್ಡ್ ಅನ್ವಯಿಸದು.

ಹೀಗೆ ಹಂತ ಹಂತವಾಗಿ ಶಕ್ತಿಯೋಜನೆಯನ್ನು ಕತ್ತು ಹಿಡಿದು ಹಿಸುಕುವ ಕಾರ್ಯ ನಡೆಯುತ್ತಿದೆ ಎಂಬುದು ಸಂಸ್ಥೆಯ ಒಳಗಿನಿಂದಲೇ ಕೇಳಿ ಬರುತ್ತಿದೆ.

ಸರ್ಕಾರ ಮೊದಲು ಪ್ರತಿ ಆಧಾರ ಕಾರ್ಡ್ ಟಿಕೆಟಿಗೆ 60%ಹಣವನ್ನು ಸಂಸ್ಥೆಗೆ ನೀಡುತ್ತಿತ್ತಂತೆ. ಈಗ ಅದನ್ನು 25%ಗೆ ತರಲು ಹೊರಟಿದೆಯಂತೆ. ಹಾಗಾಗಿ ಸಾರಿಗೆ ಸಂಸ್ಥೆಯ MD ಗಳು ಶಕ್ತಿಯೋಜನೆಯನ್ನು ವಿಫಲ ಗೊಳಿಸಿ ಸಂಸ್ಥೆಯ ಆದಾಯ ಹೆಚ್ಚಿಸಿಕೊಳ್ಳಲು ಹೊರಟಿದ್ದಾರೆ ಎನ್ನಲಾಗುತ್ತಿದೆ. ಹಿಂದಿನ ಸಾರಿಗೆ ಸಚಿವರಿಗೆ ಇದರ ಬಗ್ಗೆ ಗೊತ್ತಿತ್ತು, ಅವರ ಮೌಖಿಕ ಒಪ್ಪಿಗೆಯ ಮೇಲೆ ಈ ತಂತ್ರ ಹೆಣೆಯಲಾಗಿದೆ ಅಂತಲೂ ಹೇಳುತ್ತಾರೆ ಸಾರಿಗೆ ಸಿಬ್ಬಂಧಿಗಳು.

ಒಟ್ಟಿನಲ್ಲಿ ಜನಪ್ರಿಯ ಯೋಜನೆಯನ್ನು ಸಾರಿಗೆ ಸಂಸ್ಥೆಯು ಮುಗಿಸಲು ಹೊರಟಿದೆಯೋ, ಅಥವಾ ಈ ತಂತ್ರಗಾರಿಕೆಯಲ್ಲಿ ಸರ್ಕಾರವೂ ಇನ್ವಾಲ್ವ್  ಆಗಿದೆಯೋ ಗೊತ್ತಿಲ್ಲ ಅನ್ನುತ್ತಿದ್ದಾರೆ ಸಾರಿಗೆ ಸಿಬ್ಬಂಧಿಗಳು.

COMMENTS

Login with Gmail to comment

ಇನ್ನಷ್ಟು ಸುದ್ದಿ

ಇರಾನ್ ಬಿಕ್ಕಟ್ಟು ವೀಸಾ ವಿಸ್ತರಿಸಲು ವಿದೇಶಿ ಪ್ರಜೆಗಳು ಹತ್ತಿರದ FRRO ಅನ್ನು ಸಂಪರ್ಕಿಸಲು ಭಾರತ ಸಲಹೆ
ಪಾಕಿಸ್ತಾನದಲ್ಲಿ ಹಿಂದೂ ಯುವತಿಯ ಸಾಧನೆ
ದಾವಣಗೆರೆ & ಬಾಗಲಕೋಟೆ ಬೈಎಲೆಕ್ಷನ್ ಬಿಗ್ ಬ್ಲಾಸ್ಟ್!
ಮೇ 22 ಮಂಗಳೂರು ಎಂದಿಗೂ ಮರೆಯದ ದಿನ…
40 ವರ್ಷದ ಹಳೆಯ ಕೊಲೆಕೇಸ್‌ಗೆ ಅಂತಿಮ ಕೀ ಆಗಿ ಸಾಕ್ಷಿ ಆಗಿದ್ದು ತಿಂದು ಉಗುಳಿದ ಚೂಯಿಂಗ್ ಗಮ್ …!ಏನಿದು realstory..
ಫ್ರಿಡ್ಜ್ ರಿಪೇರಿಗೆ ಬಂದವ ಮನೆ ಲೂಟಿ ಪರಾರಿ…!ಬಿ ಅಲರ್ಟ್ ‼️
ಪರಿಸರ ನಾಶಕ್ಕಾಗಿ ಸುಳ್ಳು ಸರ್ಟಿಫಿಕೇಟ್ ರೆಡಿಮಾಡಿಕೊಂಡು ಒಂದು ಊರನ್ನೇ ಭಯದಲ್ಲಿರಿಸಿದ ಉಡುಪಿ ಜಿಲ್ಲಾ ಆಡಳಿತ
ರಾಜಕೀಯ ಸುದ್ದಿ ಅಂದರೆ ಬೋರ್ ಅಂತ ಅನ್ನಿಸುವರಿಗೆ ಇದು ಒಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಎಪಿಸೋಡ್!!!
ಮಕ್ಕಳ ಕೈಯಿಂದ ಮೊಬೈಲ್ ಕಸಿಯಲು ಮುಂದಾದ ಬ್ರಿಟನ್!ಯುಕೆಯ ನಿರ್ಧಾರಕ್ಕೆ ವಿಶ್ವದ ಗಮನ…
ಆರೋಪಿ ಸಮೀರ್ ಮುಲ್ಲಾ ಸ್ಫೋಟಕ ಹೇಳಿಕೆ-ಖುಷಿ ಒಳ್ಳೆ ಹುಡುಗಿ-🔥 ಹುಬ್ಬಳ್ಳಿ ಲವ್ ಜಿಹಾದ್ ಅಲ್ಲ ಎಂದ ಪೊಲೀಸರು : ಇದೀಗ ಹೊಸ ಟ್ವಿಸ್ಟ್!
ಇಂದು ಬೆಳ್ಳಂ ಬೆಳಗ್ಗೆ ಪಲ್ಟಿ ಯಾದ ಬಸ್… ಒಬ್ಬ ಸಾವು ಹಲವರಿಗೆ ಗಾಯ
ಕರ್ನಾಟಕದಲ್ಲಿ 2 ಲಕ್ಷಕ್ಕೂ ಹೆಚ್ಚು ನಾಯಿ ಕಚ್ಚಿದ ಪ್ರಕರಣಗಳು …!ನಗರಗಳಲ್ಲಿ ‘ಸ್ಟ್ರೇ ಡಾಗ್ ಟೆರರ್’ — ಜನರು ಭಯದಲ್ಲಿ ಬದುಕುತ್ತಿದ್ದಾರೆ!
ಮಕ್ಕಳಿಗೆ ಪ್ರಕೃತಿ ಮತ್ತು ಸಕಲ ಜೀವಿಗಳನ್ನು ಪ್ರೀತಿಸುವುದನ್ನು ಕಲಿಸಿ
ಜೆಡಿಎಸ್  ಜನರಲ್ ಸೆಕ್ರೆಟರಿಯಾಗಿ ಯೋಗೇಶ್ ಶೆಟ್ಟಿ ಜಪ್ಪು ಆಯ್ಕೆಯ ಲೆಕ್ಕಾಚಾರವೇನು?
ಟೀಕೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಸೌಂದರ್ಯ – ಖಾದರ್
ತಪ್ಪೊಪ್ಪಿಕೊಂಡ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಆರೋಪಿ ಶಾರೀಕ್…!ಶಿಕ್ಷೆ ಏನು?
“Arvind Kejriwal: ‘ಸತ್ಯಾಗ್ರಹ’ದಿಂದ ನ್ಯಾಯದ ಬೇಡಿಕೆ.”
ಕಾಂಗ್ರೆಸ್ ಮೇಲಿನ ಕೋಪ ತಣ್ಣಗಾಗಿಲ್ಲ….. ಜನಪರ ಯೋಜನೆ ಮುಂದುವರೆಸಲು ಸ್ಟಾಲಿನ್ ಮನವಿ
ಮನೆಯ ಮೇಲೆ ಪೊಲೀಸರ  ದಾಳಿ  ಮಾರಾಟಕ್ಕೆ ಇಡಲಾದ ಮಾದಕ ವಸ್ತು ಹಾಗೂ ಮಾರಕ ಆಯುಧ ವಶ
ಜೈನ ಸನ್ಯಾಸ ದೀಕ್ಷೆ ನಿಯಮಗಳು ಏನು ಗೊತ್ತಾ?
ಕೂತ್ಕೊಳಪ್ಪ ಡಿಕೆಶಿ ನಿಂದೆ ಖುರ್ಚಿ … ಅಂತ CM ಸಿದ್ದು ಯಾವಾಗ ಹೇಳ್ಬೇಕಿತ್ತು??ಅಹಿಂದ ಮಾಸ್ ಲೀಡರ್ ವರ್ಸಸ್ ಮನಿ ಮ್ಯಾನ್..ಕರ್ನಾಟಕ ರಾಜಕಾರಣದ ಅತಿ ದೊಡ್ಡ ಟ್ವಿಸ್ಟ್!
ರಾಜಕೀಯ ಬದಲಾಗುತ್ತಿದೆ -ಪಂಚರಾಜ್ಯ election ರಿಸಲ್ಟ್ “ಗೆಲುವು-ಸೋಲಿನ ಶಕ್ತಿ ಪಕ್ಷದಲ್ಲಲ್ಲ… ಜನರ ಕೈಯಲ್ಲಿ”
ಇಸ್ರೇಲ್ ಸ್ಥಿತಿ ಶೋಚನೀಯ ಸೈನ್ಯದಲ್ಲೇ ಅಸಮಾಧಾನ
ಬ್ಯಾಂಕುಗಳ ಮೇಲೆ ಭೀಕರ ದಾಳಿಯ ಮುನ್ಸೂಚನೆ ನೀಡಿದ ಇರಾನ್- ಮಿನಿಮಮ್ 1000 ಮೀಟರ್ ದೂರವಿರಿ
ಮುದ್ದಾದ ಅವಳಿ ಹೆಣ್ಣು ಮಕ್ಕಳನ್ನು ಕತ್ತು ಸೀಳಿ ಕೊಂದ ಪಾಪಿ ಅಪ್ಪ
ಮನೆಯ ಲಾಕ್ ವ್ಯವಸ್ಥೆ ಇದ್ದರೂ, ಸುರಕ್ಷತೆ ಭೇದಿಸಲಾಗಿದೆ….!ಕುಟುಂಬ ದೇವಸ್ಥಾನಕ್ಕೆ -ಕಳ್ಳರು ಅದೇ ಮನೆ ಟಾರ್ಗೆಟ್..!
ಅವಿವಾಹಿತಗೆ ಗರ್ಭ ದಾನ ಮಾಡಿದವ ಜೈಲಿಗೆ
ಐಟಿ ಕ್ಷೇತ್ರದಲ್ಲಿ ಮತ್ತೆ ಲೇಆಫ್ ಭೀತಿ!
ಥಾರ್ ಕಾರ್ ನಲ್ಲಿ ಬಂದು ದೇವಸ್ಥಾನದಲ್ಲಿ ವಿಕೃತಿ ಮೆರೆದ ಕಿಡಿಗೇಡಿ!
ಕೊನೆಕ್ಷಣದ ಹೃದಯ ಕಲುಕುವ ಹರೀಶ್ ರಾಣಾ – ದಯಾಮರಣvedio