📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಅಲ್ಲಿ ಸೌಮೆಂದು ಅಧಿಕಾರಿ…. ಇಲ್ಲಿ ಸಾಮ್ರಾಟ್ ಚೌದರಿ, ಹೆಲ್ತ್ ಮಿನಿಸ್ಟರ್ ನಿಶಾಂತ್….

ಉತ್ತರ ಭಾರತದ ಪ್ರಮುಖ ಎರಡು ರಾಜ್ಯದಲ್ಲಿ ನ ಸರ್ಕಾರದಲ್ಲಿ ಕಾಣಿಸಿಕೊಂಡಿರುವ ಮುಖಗಳ ಬಗ್ಗೆ ದೇಶದಾದ್ಯಂತ ಚರ್ಚೆಯಾಗುತ್ತಿದೆ ಇವತ್ತು. ಅಷ್ಟಕ್ಕೂ ಆ ಎರಡೂರಾಜ್ಯ ಯಾವುದು ಗೊತ್ತಾ? ಮೊನ್ನೆ ಮೊನ್ನೆಯಷ್ಟೇ, ಅಲ್ಲಿನ ಅಧಿಕಾರ( cm) ಬದಲಾವಣೆಯಾಗಿದೆ. ಒಂದು ಕಾಲದಲ್ಲಿ ಜಂಗಲ್ ರಾಜ್ಯ ಎಂದೇ ಹೆಸರು ಪಡೆದಂತಹ ರಾಜ್ಯ ಬಿಹಾರ್. ಬಿಹಾರ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಭಾರತೀಯ ಜನತಾ ಪಕ್ಷವು ತಂದು ಕೂರಿಸಿದಂತಹ ವ್ಯಕ್ತಿಯ ಬಗ್ಗೆ ಮಾತನಾಡಲಾಗುತ್ತಿದೆ. ಅದರ ಜೊತೆಜೊತೆಗೆನೇ ಅನ್ ಫಿಟ್ಟಾಗಿ ಕಾಣುತ್ತಿರುವ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಪುತ್ರ ನಿಶಾಂತ್ ಅವರನ್ನು ಬಿಹಾರ ರಾಜ್ಯದ ಆರೋಗ್ಯ ಸಚಿವರನ್ನಾಗಿ ಮಾಡಿರುವುದು. ಈ ಎರಡು ವಿಚಾರವೂ ಚರ್ಚೆಯಲ್ಲಿದೆ. ನಿಶಾಂತ್ ಆರೋಗ್ಯ ಸಚಿವ ಆಗಿರುವ ಬಗ್ಗೆ ಸಾಕಷ್ಟು ಟ್ರೋಲ್ ಮತ್ತು ಟೀಕೆಗೆ  ಗುರಿಯಾಗುತ್ತಿದೆ.

ಮತ್ತೊಂದೆಡೆ, ಈಗಷ್ಟೇ ಚುನಾವಣೆ ಮುಗಿದು, ಮೊದಲ ಬಾರಿಗೆ ರಾಜ್ಯವನ್ನು ತನ್ನ ಕೈವಶ ಮಾಡಿಕೊಂಡಿರುವ ಬಿಜೆಪಿ, ಆರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದ ವ್ಯಕ್ತಿಯ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಆ ರಾಜ್ಯ ಬೇರೆ ಯಾವುದೂ ಅಲ್ಲ, ಅದು ಪಶ್ಚಿಮಬಂಗಾಳ. ಕಳೆದ ಹತ್ತು ವರ್ಷದಿಂದ ಈ ರಾಜ್ಯವನ್ನು ವಶ ಪಡಿಸಿಕೊಳ್ಳಲು ನಡೆಸಿದ ತಂತ್ರಗಾರಿಕೆ ಹೋರಾಟದಲ್ಲಿ ಸಫಲಗೊಂಡಿದೆ ಈಗ. ಮೊದಲ ಬಿಜೆಪಿಯ ಮುಖ್ಯಮಂತ್ರಿ ಯಾರಾಗಿದ್ದಾರೆ ಎಂದರೆ,  ಸೌಮೇಂದು ಅಧಿಕಾರಿ.

ಸೌಮೆಂದು ಅಧಿಕಾರಿ ಮೂಲತಹ ಬಿಜೆಪಿಗರಲ್ಲ, ಟಿಎಂಸಿಯಲ್ಲಿರುವಾಗ, ಶಾರದಾ ಚಿಟ್ ಫಂಡ್ ಹಗರಣದಲ್ಲಿ ಹೆಸರು ಕಾಣಿಸಿಕೊಂಡಿತ್ತು. ಕುಟುಕು ಕಾರ್ಯಾಚರಣೆಯೊಂದರಲ್ಲಿ ಅಧಿಕಾರಿ ಸಹಿತ ಐದು ಮಂದಿ ಸಂಸದರು ಸಿಕ್ಕಾಕಿಕೊಂಡಿದ್ದರು. ಪರಿಣಾಮ ಇಡಿ ದಾಳಿಗೂ ಒಳಗಾಗಿದ್ದರು. ಈ ದಾಳಿಗೆ ಒಳಗಾಗುತ್ತಿದ್ದಂತೆಯೇ, ಅಧಿಕಾರಿ ಟಿಎಂಸಿಗೆ ಗುಡ್ ಬೈ ಹೇಳಿ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ. ಅಲ್ಲಿಂದ ಇಲ್ಲಿಯತನಕ ಮತ್ತೆ ಯಾವುದೇ ವಿಚಾರಣೆ ಎದುರಿಸಲಿಲ್ಲ!!. ಟಿಎಂಸಿ ಯನ್ನು ಸೋಲಿಸಲು ಅಧಿಕಾರಿ ಗುರಾಣಿಯಾದರು . ಇವತ್ತು ಅದೇ ಅಧಿಕಾರಿ ಬಿಜೆಪಿ ನೇತೃತ್ವದ ಸರ್ಕಾರದ ಪಶ್ಚಿಮ ಬಂಗಾಳದ ಮೊದಲ ಸಿ ಎಂ ಆಗಿದ್ದಾರೆ.

ಭ್ರಷ್ಟಾಚಾರ ಹಾಗೂ ಅಪರಾಧ ಚಟುವಟಿಕೆಯ ವಿರುದ್ಧ ದೂರುತ್ತಲೆ ಬಂದಿರುವಂತಹ ಬಿಜೆಪಿಯು, ಬಿಹಾರದಲ್ಲಿ ಅಪರಾಧ ಹಿನ್ನೆಲೆಯನ್ನು ಹೊಂದಿರುವಂತಹ ಸಾಮ್ರಾಟ್ ಚೌದರಿ ಅವರಿಗೆ ಮುಖ್ಯಮಂತ್ರಿಯನ್ನಾಗಿ ನಿಯುಕ್ತಿ ಗೊಳಿಸಿದರೆ, ಪಶ್ಚಿಮ ಬಂಗಾಳದಲ್ಲಿ, ಭ್ರಷ್ಟಾಚಾರದ ಆರೋಪದಲ್ಲಿ ಇವರದೇ ಸರ್ಕಾರದ ಅವಧಿಯಲ್ಲಿ ಇಡಿಯ ದಾಳಿಗೂ ಒಳಗಾದಂತಹ ವ್ಯಕ್ತಿಯನ್ನು ಬಿಜೆಪಿಗೆ ಕರೆತಂದು ಮುಖ್ಯಮಂತ್ರಿ ಮಾಡಿದ್ದಾರೆ ಎಂಬ ವಿಚಾರದಲ್ಲಿ ಸಾರ್ವಜನಿಕ ಚರ್ಚೆಗಳು ಪ್ರಾರಂಭವಾಗಿದೆ.

ಪಶ್ಚಿಮ ಬಂಗಾಳದಲ್ಲಿ, ಭಾರತೀಯ ಜನತಾ ಪಕ್ಷವನ್ನು 30- 40 ವರ್ಷದಿಂದ ಪೋಷಿಸಿಕೊಂಡು ಬೆಳೆಸಿಕೊಂಡು ಬಂದಂತಹ ನಾಯಕರು ಅಲ್ಲಿದ್ದಾರೆ. ಅವರ ಕೈ ಹಾಗೂ ಬಾಯಿ, ಎರಡೂ ಶುದ್ಧವಾಗಿದ್ದವು. ಸಂಘ ಪರಿವಾರದ ಹಿನ್ನೆಲೆಯನ್ನು ಹೊಂದಿರುವಂತಹ ಅಂತಹ ನಾಯಕರ ಕೈಗೆ ಬಂಗಾಳದ ಅಧಿಕಾರ ನೀಡಿದ್ದರೆ ಗೌರವ ಹೆಚ್ಚುತ್ತಿತ್ತು ಎಂಬ ವಿಚಾರ ಆ ಚರ್ಚೆಯಲ್ಲಿ ಪ್ರಸ್ತಾಪವಾಗುತ್ತಿದೆ.

ಬಿಹಾರದಲ್ಲಿ ಮತ್ತೊಂದು ಎಡವಟ್ಟು ಕಾಣಿಸಿಕೊಂಡಿದೆ, ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಅವರಿಗೆ ಸಚಿವ ಸ್ಥಾನವನ್ನು ನೀಡಲಾಗಿದ್ದು, ಅವರ ನಡೆ ಹಾಗೂ ನುಡಿಯ ಬಗ್ಗೆ ಸಾಕಷ್ಟು ಗೊಂದಲವನ್ನುಂಟು ಮಾಡುತ್ತಿದೆ. ನಿಶಾಂತ್ ಗೆ ಬಿಹಾರದ ಆರೋಗ್ಯ ಖಾತೆಯನ್ನು ನೀಡಲಾಗಿದೆ. ಸಾರ್ವಜನಿಕವಾಗಿಯೇ ತೂರಾಡುತ್ತಿರುವಂತೆ ಕಾಣುವ ನಿಶಾಂತ್, ಮಾತನಾಡುವುದರಲ್ಲಿಯೂ ಸಾಕಷ್ಟು ಎಡವೂತ್ತಿದ್ದಾರೆ. ಈ ವಿಚಾರ ಸಾರ್ವಜನಿಕವಾಗಿ ನಗೆಪಾಟಲಿಗೆ ಈಡಾಗುತ್ತಿದೆ. ಅಷ್ಟೇ ಅಲ್ಲ, ತೀವ್ರ ಟೀಕೆಗೋ ಗುರಿಯಾಗುತ್ತಿದೆ. ಕೇವಲ ನಿತೀಶ್ ಕುಮಾರ್ ರವರನ್ನು ಸಂತೋಷಪಡಿಸುವುದಕ್ಕೋಸ್ಕರ ಸಚಿವ ಸ್ಥಾನ ನೀಡಲಾಗಿದೆ ಎನ್ನಲಾಗುತ್ತಿದೆಯಾದರೂ, ಅದು ಬಿಹಾರದ ಸರ್ಕಾರವಾದ್ದರಿಂದ, ನಿತೇಶ್ ಕುಮಾರ್ ಸಂತೋಷ್ ಮುಖ್ಯವಲ್ಲ, ರಾಜ್ಯದ ಘನತೆ ಹಾಗೂ ಸ್ಥಿರತೆ ಮುಖ್ಯವೆನಿಸಿಕೊಳ್ಳುತ್ತದೆ. ಮೇಲ್ನೋಟಕ್ಕೆ ಅನ್ಫಿಟ್ ವ್ಯಕ್ತಿಯಂತೆ ಕಾಣುವ ನಿಶಾಂತ್ ರವರಿಗೆ ಸಚಿವಸ್ಥಾನ ನೀಡಿರುವಂತದ್ದು ಸರಿಯಲ್ಲಾ ಎಂಬ ನೇರ ಆರೋಪವು ಬಿಹಾರದಿಂದ ಕೇಳಿ ಬರುತ್ತಿದೆ.

ಒಟ್ಟಿನಲ್ಲಿ ಎರಡು ರಾಜ್ಯದ ಕಡೆಯಿಂದಲೂ ಬಿಜೆಪಿಯ ನಡೆಯ ಬಗ್ಗೆ ಮೊದಲ ಬಾರಿಗೆ ಅಪಸ್ವರ ವ್ಯಕ್ತವಾಗುತ್ತಿದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ವಿಮಾನ ಪ್ರಯಾಣ ದುಬಾರಿ: ಟಿಕೆಟ್ ದರ ಏರಿಕೆ ವಿರುದ್ಧ PIL: ಸರ್ಕಾರಕ್ಕೆ ಸುಪ್ರೀಂ ನೋಟಿಸ್
‘ಮೇಕ್ ಇನ್ ಇಂಡಿಯಾ’ಗೆ ಮತ್ತೊಂದು ದೊಡ್ಡ ಗೆಲುವು: C295 ವಿಮಾನದ ಮೊದಲ ಯಶಸ್ವಿ ಪರೀಕ್ಷಾ ಹಾರಾಟ
ಡಿ.ಕೆ. ಶಿವಕುಮಾರ್ ಪ್ರಮಾಣ ವಚನ  ಜೂನ್ 3ಕ್ಕೆ, ರಾಜ್ಯಪಾಲರಿಂದ ಆಹ್ವಾನ
Trump ಮಾತಿಗೆ Iran ಸಂಸತ್ ಸ್ಪೀಕರ್‌ನ ಕಠಿಣ ಸಂದೇಶ ವಿಶ್ವದ ಗಮನ ಸೆಳೆದಿದೆ!
ಪುತ್ತೂರಿನ ಕೃಷ್ಣ ಜೆ. ರಾವ್ ಪ್ರಕರಣಕ್ಕೆ ಹೈಕೋರ್ಟ್ ಬ್ರೇಕ್!“ಮಧ್ಯಂತರ ತೀರ್ಪು: ₹75K ತಿಂಗಳ ಸಹಾಯ ಷರತ್ತು”
ಫ್ರಿಡ್ಜ್ ರಿಪೇರಿಗೆ ಬಂದವ ಮನೆ ಲೂಟಿ ಪರಾರಿ…!ಬಿ ಅಲರ್ಟ್ ‼️
“ಅಮ್ಮ”ನ ಕಾರ್ಯಕ್ರಮದಲ್ಲಿ  ಕೇಂದ್ರ ಸಚಿವರಿಂದ ರಾಜಕೀಯ ಭಾಷಣ
ಮುಂಬೈ ಮಳೆ ಅವಾಂತರ: ಒಂದು ನಗರವೇ ಜಲಾವೃತ… ದುರಂತ, ಮಾನವೀಯತೆ ಮತ್ತು ಹೋರಾಟದ ಹಲವು ಮುಖಗಳು
“ಮಂಜಿನ ನಡುವೆ ಕ್ಷಣಾರ್ಧದಲ್ಲಿ ಮಾಯವಾದ ಮಗಳು”ಶ್ರೀನಂದಾ ಶವವಾಗಿ ಪತ್ತೆ…!
ಗಂಡನಿಗೆ ಚಿನ್ನ ಕಳ್ಳತನದ ಪಿಎಚ್‌ಡಿ, ಹೆಂಡತಿಗೆ ಮಾರ್ಕೆಟಿಂಗ್ ಜಾಣ್ಮೆ…ಆಹಾ ಒಮ್ಮೆ ಓದಿ ಎಂಥಾ ಜೋಡಿ..
ದೇವರ ಮುಂದೆ ಸಾಲಿನಲ್ಲಿ ನಿಲ್ಲಲೇಬೇಕು! ಮಂತ್ರಿ ಇರಲಿ, ಸೆಲೆಬ್ರಿಟಿ ಇರಲಿ…ಅಧಿಕಾರ ಇರಲಿ, ಅಂತಸ್ತು ಇರಲಿ…”ವಿಐಪಿ ದರ್ಶನ”ಕ್ಕೆ ಹೈಕೋರ್ಟ್ ಕೊಟ್ಟ ಚಾವಟಿ ಏಟು!
ಸ್ಕ್ಯಾಮರ್‌ಗೆ 60 ಸೆಕೆಂಡ್ ಸಾಕು… RBIಗೆ ಈಗ 60 ನಿಮಿಷ ಬೇಕಂತೆ!ಹಣ ಕಳಿಸುವ ಮುನ್ನ ಯೋಚಿಸಲು 1 ಗಂಟೆ!
ಜಮ್ಮು-ಕಾಶ್ಮೀರದಲ್ಲಿ ಖಾಕಿ ಮೇಲೆ ಖಾಕಿ ದಾಳಿ? ಹೈಡ್ರಾಮಾ: ಕರ್ನಲ್, ಮೇಜರ್ ಸೇರಿ 40 ಸೇನಾ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲು.
ಶಾಲೆ ಹತ್ತಿರವಿದ್ದರೂ,ಮಕ್ಕಳ ಹೆಲ್ಮೆಟ್ ನಿರ್ಲಕ್ಷಿಸಬೇಡಿ!4 ವರ್ಷದೊಳಗಿನ ಮಗುಗೂ ಹೆಲ್ಮೆಟ್ ಕಡ್ಡಾಯ!
ಉಡುಪಿ ಜಿಲ್ಲೆಯಲ್ಲಿ  ಹೆಚ್ಚಾದ  ಚಿರತೆ ಉಪಟಳ : ತುರ್ತು ಕ್ರಮಕ್ಕೆ ತುರವೇ ಮನವಿ
35 ವರ್ಷಗಳ ಬಳಿಕ ಮತ್ತೆ ಕಾಲೇಜಿಗೆ ಬಂದ 50 ವರ್ಷದ ಮಹಿಳೆ: ಇಂಟರ್ನೆಟ್‌ಗೆ ಸ್ಫೂರ್ತಿಯಾದ ಕಥೆ
ಹತ್ತು ವರ್ಷದಿಂದ ಪೊಲೀಸರಿಗೆ ಬೇಕಾದ ಆರೋಪಿಯನ್ನು ಕೊನೆಗೂ ಬಂಧಿಸಿದ ಪೊಲೀಸರು
ಟೀಕೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಸೌಂದರ್ಯ – ಖಾದರ್
ನಾಟಕ ಕಲಾವಿದೆ ಸೌಮ್ಯ ಶೆಟ್ಟಿ ಬಂಧನ
ಕೆತ್ತಿಕಲ್‌ನಿಂದ ಚಾರ್ಮಾಡಿವರೆಗೆ ಅಪಾಯದ ಗಂಟೆ! ಭೂಕುಸಿತ ಭೀತಿಯಲ್ಲಿ ಕರಾವಳಿ ರಸ್ತೆಗಳು !ಮಳೆ ಬಂದ ಮೇಲೆ ಸಭೆ, ಪರಿಶೀಲನೆ… ಆದರೆ ಮುನ್ನೆಚ್ಚರಿಕೆ ಎಲ್ಲಿದೆ?
ಅಮೇರಿಕಾಕ್ಕೆ ಅಷ್ಟು ಧೈರ್ಯದಿಂದ ಎಲ್ಲಿಂದ ಬಂತು?
ಕ್ರಿಕೆಟ್ pad gloves ಒಳಗೆ ಕೋಟಿ ಕೋಟಿ ಕೊಕೇನ್!
NEET ಗೊಂದಲ, ಮರುಪರೀಕ್ಷೆ, ಮೌಲ್ಯಮಾಪನ ದೋಷಗಳು ಮತ್ತು ವಿದ್ಯಾರ್ಥಿ ಜೀವನದ ನೋವು..
“ವಿ ದಿ ಲೀಡರ್ಸ್”ಅಣ್ಣಾಮಲೈ ಮಾಸ್ಟರ್ ಪ್ಲಾನ್!ಸಿನಿಮಾ ವರ್ಚಸ್ಸಿನ ಟಿವಿಕೆ (TVk) ಯನ್ನ ಮಕಾಡೆ ಮಲಗಿಸಲು ಸಜ್ಜಾಗ್ತಾ ಇದೆಯಾ..?
ಆಂಬ್ಯುಲೆನ್ಸ್‌ನಲ್ಲೇ ನಡೆದ ಭೀಕರ ಘಟನೆ… ನಂಬಲು ಕಷ್ಟ, ಆದರೆ ಸತ್ಯ!
ನೆತನ್ಯಾಹು ಎಲ್ಲಿದ್ದಾರೆ? ಬದುಕಿದ್ದರೆ ಹಿಂಬಾಲಿಸಿ ಕೊಲ್ಲುತ್ತೇವೆ ಎಂದ ಇರಾನ್
ಕರಾವಳಿಯಲ್ಲಿ ಶುರುವಾಯ್ತು MESCOM ಮಹಾಸಮರ!ಬಯಲಾಗುತ್ತಾ “ಬ್ರಹ್ಮಾಂಡ ಭ್ರಷ್ಟಾಚಾರ”..!?
ಕಲ್ಲಂಗಡಿ ಹಣ್ಣು ತಪ್ಪು ಮಾಡಲಿಲ್ಲ… ಆದರೆ ಅಪರಾಧಿ ಸುದ್ದಿ ದೊಡ್ಡದಾಗಿದೆ!
ಇಂದು ಆನ್‌ಲೈನ್ ಔಷಧ ಮಾರಾಟ ವಿರುದ್ಧ ದೇಶವ್ಯಾಪಿ ಆಕ್ರೋಶ!ದಕ್ಷಿಣ ಕನ್ನಡದಲ್ಲಿ 1100 ಮೆಡಿಕಲ್ ಶಾಪ್ ಬಂದ್!
ಬ್ರೇಕಿಂಗ್ ನ್ಯೂಸ್