📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    “ವಿ ದಿ ಲೀಡರ್ಸ್”ಅಣ್ಣಾಮಲೈ ಮಾಸ್ಟರ್ ಪ್ಲಾನ್!ಸಿನಿಮಾ ವರ್ಚಸ್ಸಿನ ಟಿವಿಕೆ (TVk) ಯನ್ನ ಮಕಾಡೆ ಮಲಗಿಸಲು ಸಜ್ಜಾಗ್ತಾ ಇದೆಯಾ..?

    ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ರಾಜಕೀಯದಲ್ಲಿ ಹೊಸ ಹಾದಿ ತುಳಿದಿರುವುದು ತಮಿಳುನಾಡು ರಾಜಕೀಯದಲ್ಲಿ ಒಂದು ದೊಡ್ಡ ಸಂಚಲನ ಮೂಡಿಸಿದೆ. ಯುಪಿಎಸ್‌ಸಿ (UPSC) ಪರೀಕ್ಷೆ ಪಾಸ್ ಮಾಡಿ, ಕರ್ನಾಟಕದಲ್ಲಿ ದಕ್ಷ ಮತ್ತು ಪ್ರಾಮಾಣಿಕ ಐಪಿಎಸ್ ಅಧಿಕಾರಿಯಾಗಿ ಜನಸಾಮಾನ್ಯರ ಸೇವೆಯಲ್ಲೇ ತೊಡಗಿಸಿಕೊಂಡು ಬಂದ ಇಂತಹ ನಾಯಕರ ಮೇಲೆ ಜನರಿಗೆ ಅಪಾರ ನಂಬಿಕೆ ಮತ್ತು ಹೆಮ್ಮೆ ಇದೆ. ಇಂತಹ ಆಡಳಿತಾತ್ಮಕ ತರಬೇತಿ ಮತ್ತು ಶಿಸ್ತು ಹೊಂದಿರುವ ಅಧಿಕಾರಿಗಳು ರಾಜಕೀಯಕ್ಕೆ ಬಂದಾಗ ದೇಶವನ್ನು ಅತ್ಯಂತ ಸನ್ಮಾರ್ಗದಲ್ಲಿ ಮುನ್ನಡೆಸಲು ಅವರು ಸಮರ್ಥರಾಗಿರುತ್ತಾರೆ ಎಂಬ ದೊಡ್ಡ ಭರವಸೆ ಸಾರ್ವಜನಿಕರಲ್ಲಿ ಮೂಡುವುದು ಸಹಜ.

    ಬಿಜೆಪಿ ತೊರೆದ ಬಳಿಕ ಅಣ್ಣಾಮಲೈ ಅವರು ಆರಂಭಿಸಿರುವ ‘ವಿ ದಿ ಲೀಡರ್ಸ್’ (ನಾವು ನಾಯಕರು) ಚಳವಳಿಯು ಅತ್ಯಂತ ಶಕ್ತಿಯುತವಾದ ಮತ್ತು ದೂರದೃಷ್ಟಿಯ ನೀಲನಕ್ಷೆಯನ್ನು ಹೊಂದಿದೆ. ತಕ್ಷಣವೇ ಚುನಾವಣೆಗೆ ಧುಮುಕದೆ, ಮುಂದಿನ ಮೂರು ವರ್ಷಗಳ ಕಾಲ ರಾಜ್ಯಾದ್ಯಂತ ಯುವಕರಿಗೆ ನಾಯಕತ್ವ ತರಬೇತಿ ನೀಡಿ, ಒಂದು ಬಲಿಷ್ಠ ಕಾರ್ಯಕರ್ತರ ಪಡೆಯನ್ನು ಸೃಷ್ಟಿಸುವುದು ಇವರ ಮೊದಲ ಗುರಿಯಾಗಿದೆ. ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ತರಬೇತಿ ಕೇಂದ್ರವನ್ನು ಸ್ಥಾಪಿಸಿ, ಆ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಯುವ ನಾಯಕರನ್ನು ಸಿದ್ಧಪಡಿಸುವ ಯೋಜನೆ ಇದಾಗಿದೆ. ವಂಶಪಾರಂಪರ್ಯ ರಾಜಕಾರಣ ಮತ್ತು ವ್ಯಕ್ತಿಪೂಜೆಯಿಂದ ದೂರ ಸರಿದು, ರಾಷ್ಟ್ರೀಯ ದೃಷ್ಟಿಕೋನದೊಂದಿಗೆ ತಮಿಳು ಗುರುತನ್ನು ಉಳಿಸುವ ‘ಸ್ವಚ್ಛ ಪ್ರಾಮಾಣಿಕ’ ರಾಜಕೀಯ ವ್ಯವಸ್ಥೆ ರೂಪಿಸುವುದು ಈ ಚಳವಳಿಯ ಮುಖ್ಯ ಸಂಕಲ್ಪವಾಗಿದೆ.

    ಆದರೆ, ತಮಿಳುನಾಡಿನ ಸದ್ಯದ ರಾಜಕೀಯ ರಂಗದಲ್ಲಿ ಅಣ್ಣಾಮಲೈ ಅವರಿಗೆ ಎದುರಾಗಿರುವ ಅತಿ ದೊಡ್ಡ ಪ್ರತಿಸ್ಪರ್ಧಿ ಎಂದರೆ ನಟ ದಳಪತಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷ. ಇವರಿಬ್ಬರ ಬಲ ಮತ್ತು ದೌರ್ಬಲ್ಯಗಳನ್ನು ಗಮನಿಸಿದರೆ ತಮಿಳುನಾಡು ರಾಜಕೀಯದ ಹೊಸ ಆಯಾಮ ನಮಗೆ ಅರ್ಥವಾಗುತ್ತದೆ. ಅಣ್ಣಾಮಲೈ ಅವರ ಅತಿ ದೊಡ್ಡ ಬಲ ಎಂದರೆ ಅವರ ಆಡಳಿತಾತ್ಮಕ ಅನುಭವ, ಭ್ರಷ್ಟಾಚಾರ ರಹಿತ ಇಮೇಜ್ ಮತ್ತು ಯುವ ಪೀಳಿಗೆಯನ್ನು (Gen Z & Alpha) ಸೆಳೆಯುವ ಬೌದ್ಧಿಕ ರಾಜಕೀಯ ಶೈಲಿ. ಆದರೆ, ತಳಮಟ್ಟದಲ್ಲಿ ಸ್ವಂತ ಪಕ್ಷದ ಸಾಂಘಿಕ ನೆಟ್‌ವರ್ಕ್ ಅನ್ನು ಶೂನ್ಯದಿಂದ ಕಟ್ಟುವುದು ಅವರಿಗೆ ದೊಡ್ಡ ಸವಾಲಾಗಿದೆ. ಮತ್ತೊಂದೆಡೆ, ನಟ ವಿಜಯ್ ಅವರ ಬಲ ಏನೆಂದರೆ ತಮಿಳುನಾಡಿನಾದ್ಯಂತ ಇರುವ ಅವರ ಕೋಟ್ಯಂತರ ಅಭಿಮಾನಿಗಳ ಸಾಗರ ಮತ್ತು ತಳಮಟ್ಟದವರೆಗೂ ಈಗಾಗಲೇ ಹರಡಿಕೊಂಡಿರುವ ಬಲಿಷ್ಠ ಅಭಿಮಾನಿ ಸಂಘಗಳ ನೆಟ್‌ವರ್ಕ್. ಆದರೆ, ವಿಜಯ್ ಅವರಿಗೆ ರಾಜಕೀಯ ಮತ್ತು ಆಡಳಿತಾತ್ಮಕ ಅನುಭವದ ಕೊರತೆ ಇರುವುದು ಹಾಗೂ ಕೇವಲ ಸಿನಿಮಾ ಗ್ಲಾಮರ್ ನಂಬಿ ದೀರ್ಘಕಾಲ ರಾಜಕಾರಣ ಮಾಡುವುದು ಅವರ ದೌರ್ಬಲ್ಯವಾಗಿದೆ.

    ಈ ಇಬ್ಬರು ಹೊಸ ನಾಯಕರ ಸವಾಲುಗಳ ಮಧ್ಯೆ, ತಮಿಳುನಾಡಿನಲ್ಲಿ ದಶಕಗಳಿಂದ ಆಡಳಿತ ನಡೆಸುತ್ತಿರುವ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ನಂತಹ ದ್ರಾವಿಡ ಪಕ್ಷಗಳು ಈಗಾಗಲೇ ಬಲಿಷ್ಠ ಹಣಬಲ, ಜಾತಿ ಸಮೀಕರಣ ಮತ್ತು ಗಟ್ಟಿಯಾದ ಸಾಂಘಿಕ ನೆಟ್‌ವರ್ಕ್ ಅನ್ನು ಹೊಂದಿವೆ. ಈ ಸಾಂಪ್ರದಾಯಿಕ ದ್ರಾವಿಡ ರಾಜಕಾರಣದ ಭದ್ರಕೋಟೆಯನ್ನು ಭೇದಿಸುವುದು ಅಣ್ಣಾಮಲೈ ಮತ್ತು ವಿಜಯ್ ಇಬ್ಬರಿಗೂ ಅಷ್ಟು ಸುಲಭವಲ್ಲ. ಆದಾಗ್ಯೂ, ತಮಿಳುನಾಡಿನ ಇಂದಿನ ಯುವಜನತೆ ಹಳೇ ರಾಜಕಾರಣದಿಂದ ಬೇಸತ್ತು ಬದಲಾವಣೆಯನ್ನು ತೀವ್ರವಾಗಿ ಬಯಸುತ್ತಿದ್ದಾರೆ. ಸಿದ್ಧಾಂತಗಳ ಜಡತ್ವವನ್ನು ಮುರಿದು, ತಮಿಳು ಮತ್ತು ಭಾರತೀಯ ಎಂಬ ಎರಡೂ ಗುರುತುಗಳನ್ನು ಒಟ್ಟಿಗೆ ಕೊಂಡೊಯ್ಯುವ ಅಣ್ಣಾಮಲೈ ಅವರ ‘ವಿ ದಿ ಲೀಡರ್ಸ್’ ಚಳವಳಿಯು ಭವಿಷ್ಯದಲ್ಲಿ ತಮಿಳುನಾಡು ರಾಜಕೀಯದ ಒಟ್ಟಾರೆ ಭಾಷೆ ಮತ್ತು ವ್ಯಾಕರಣವನ್ನೇ ಬದಲಾಯಿಸುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ.

    ಒಟ್ಟಾರೆಯಾಗಿ,”ಕೇವಲ ಸಿನಿಮಾ ಗ್ಲಾಮರ್ ಮತ್ತು ಅಭಿಮಾನಿ ಸಂಘಗಳನ್ನೇ ನಂಬಿ ಬಂದಿರುವ ಟಿವಿವಿ (TVk) ನಂತಹ ಪಕ್ಷಗಳ ಅಬ್ಬರದೆದುರು,. ವ್ಯವಸ್ಥೆಯನ್ನು ಕೊಳೆಸಿರುವ ಹಳೇ ರಾಜಕೀಯ ಜಿರಳೆಗಳನ್ನು ದೇಶದಿಂದಲೇ ಓಡಿಸಿ, ಹೊಸ ಜಿರಳೆಗಳ ಹಂಗಾಮದ ನಡುವೆ ಯುವ ನಾಯಕತ್ವದ ಹೊಸ ಇತಿಹಾಸ ಸೃಷ್ಟಿಸಲಿದೆಯಾ’ವಿ ದಿ ಲೀಡರ್ಸ್’ ಚಳವಳಿ!” ಕಾದ್ ನೋಡಬೇಕಿದೆ.

    ರಾಜಾಜರಣದಲ್ಲಿ ಯಾವಾಗ ಬೇಕಾದರೂ ಏನು ಬೇಕಾದರೂ ಆಗ್ಬಹುದು ಅಲ್ವೇ..

    ##WeTheLeaders #ZenZeeRevolution #GenAlphaPolitics #AnnamalaiNewWave #TVkVsWeTheLeaders

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ವಿದ್ಯಾರ್ಥಿಯೊಬ್ಬ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ..
    ನಿತ್ಯ bus ಪ್ರಯಾಣಿಕರಿಗೆ ಶಾಕ್‌: ‌ ಟಿಕೆಟ್‌ ದರ 5 ರಿಂದ 8% ಹೆಚ್ಚಳ: ಇನ್ಮೇಲೆ ಓಡಾಟ ಮತ್ತಷ್ಟು ದುಬಾರಿ!
    ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ದೆಹಲಿ ಹೈಕೋರ್ಟ್, ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: ಭದ್ರತೆ ಬಿಗಿ
    ವಿಟ್ಲ ಪಟಾಕಿ ತಯಾರಿಕಾ ಘಟಕದಲ್ಲಿ ಪಟಾಕಿ ಸ್ಫೋಟ
    ₹10,000ಕ್ಕೆ NEET-UG 2026 ಪ್ರಶ್ನೆಪತ್ರಿಕೆ? ದೇಶವೇ ಬೆಚ್ಚಿಬಿದ್ದ ಲೀಕ್ ಸ್ಕಾಂಡಲ್!ಟೆಲಿಗ್ರಾಂ ಸೀಕ್ರೆಟ್ ಚಾಟ್ ವೈರಲ್…22 ಲಕ್ಷ ವಿದ್ಯಾರ್ಥಿಗಳ ಕನಸಿಗೆ ದೊಡ್ಡ ಹೊಡೆತ — NEET 2026 ರದ್ದು!
    ಕೇವಲ “Aunty” ಅಂತ ಅಂದಿದಕ್ಕೆ 2 ಲಕ್ಷ ದಂಡ…!
    ಬೈಂದೂರಿನಲ್ಲಿ ಹಳೆ ವೈಷಮ್ಯದಿಂದ ಮನೆಗೆ ನುಗ್ಗಿ ಹಲ್ಲೆಗೆ ಯತ್ನ
    ಸುಬ್ರಹ್ಮಣ್ಯ ಅಭಿವೃದ್ಧಿ — ಸ್ಥಳೀಯರ ಜೊತೆಗೂಡಿ ಮಾತ್ರ ಸಾಧ್ಯ!”
    KGF, ಕಾಂತಾರ ಬ್ಯಾನರ್‌ನಲ್ಲಿ ಕಾಲಿವುಡ್ ‘ಜೈ ಭೀಮ್’..!ಹೊಂಬಾಳೆ ಜೊತೆ ಕೈಜೋಡಿಸಿದ ಸೂರ್ಯ, ಬಾಕ್ಸ್ ಆಫೀಸ್ ಧೂಳೀಪಟ ಖಚಿತ!
    ಮಂಗಳೂರು ಏರ್‌ಪೋರ್ಟ್‌ನಲ್ಲಿ ಉಬರ್ …
    2047ರ ಕನಸಿನ ಭಾರತಕ್ಕಾಗಿ ದೆಹಲಿಯಲ್ಲಿ ಮೆಗಾ ಮಂಥನ… ಏನಿದೆ ಈ ಮಾಸ್ಟರ್ ಪ್ಲಾನ್‌ನಲ್ಲಿ?
    146 ವರ್ಷಗಳಲ್ಲೇ ಅತ್ಯಂತ ಒಣ ಜೂನ್..ದೇಶಾದ್ಯಂತ 46% ಮಳೆ ಕೊರತೆ!
    ಉಡುಪಿಯಲ್ಲಿ ಆಡಳಿತ ನಡೆಸುತ್ತಿರುವುದು ಜನವಿರೋಧಿ ಜಿಲ್ಲಾಡಳಿತವೇ?
    ಮೋದಿ ಅವರ ನಿರ್ಧಾರಗಳು“ದೀರ್ಘಕಾಲೀನ ಅಭಿವೃದ್ಧಿಗೆ ಜವಾಬ್ದಾರಿಯುತ ನೀತಿಗಳು” ಆತಂಕದ ಸೂಚನೆ ಅಲ್ಲ-ಎಸ್.ಎಸ್. ನಾಯಕ್
    ‘ಸೈಯಾರಾ’ ಶೀರ್ಷಿಕೆ ಗೀತೆಗೆ ಸಿಕ್ಕ ರಾಯಲ್ಟಿ ನಿರಾಶಾದಾಯಕ: ಸಂಗೀತ ಸಂಯೋಜಕ ತನಿಷ್ಕ್ ಬಾಗ್ಚಿ ಬೇಸರ
    ಉದ್ಯಮಿ ಧೀರಜ್ ಜೈನ್ ಗಪ್ ಚುಪ್ಪಾಗಿ ನಡೆಸಿದ ಮಾನವೀಯ ನಡೆಗೆ ಸಾಕ್ಷಿ ನೋಡಿ
    ಬ್ರಹ್ಮಾವರ ಅಪಾರ್ಟ್‌ಮೆಂಟ್ ರೂಮಿನಲ್ಲಿ ಯುವತಿಯ ನಿಗೂಢ ಸಾವು
    ಮೇ 20ರ ಬಸ್ ಸ್ಟ್ರೈಕ್‌ಗೆ ಹೈಕೋರ್ಟ್ ಬ್ರೇಕ್..! KSRTC-BMTC ಬಸ್‌ಗಳು ನಿಲ್ಲೋದಿಲ್ಲ! ಹೈಕೋರ್ಟ್ ಮಹತ್ವದ ಆದೇಶ..
    ಇದು IPLನಲ್ಲಿ ಹೊಸ ಹೀರೋ ಹುಟ್ಟಿದಂತೇ…ಆದ್ರೆ ಕ್ರಿಕೆಟ್ ಅಲ್ಲ, ಬಾಕ್ಸಿಂಗ್‌ನಲ್ಲಿ! 🥊🔥
    ವರದಕ್ಷಿಣ ಪ್ರಕರಣ:5.5 ತಿಂಗಳ ಮಗುವಿಗೂ ದೈಹಿಕ ಹಿಂಸೆ….!
    ತಮಿಳುನಾಡು ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್ -TVK wave ಎಷ್ಟು ದೂರ ಸಾಗುತ್ತದೆ?
    ಬಂಟ್ವಾಳ ಬೆಚ್ಚಿಬೀಳಿಸಿದ ಯುವತಿಯಭೀಕರ ಹತ್ಯೆ: ಬಸ್ ನಿಲ್ದಾಣದಲ್ಲೇ ಬೆನ್ನಟ್ಟಿ ಇರಿದ ಕೊಲೆ ಆರೋಪಿ ಚೇತನ್ ಸುಳಿವು..!
    ಕ್ಲೀನ್ ಮಂಗಳೂರು ಕನಸು ನಿಮ್ಮದಾಗಿದ್ದರೆ ಇಲ್ಲಿದೆ ದಾರಿ…ಸ್ವಚ್ಛ ಮಂಗಳೂರು ಅಭಿಯಾನ: ನಾಗರಿಕರ ಕೈಗೆ ಸಿಕ್ಕಿತು ವಾಟ್ಸಾಪ್ ಅಸ್ತ್ರ….!
    ಭಾರೀ ಮಳೆ ಎಚ್ಚರಿಕೆ: ದಕ್ಷಿಣ ಕನ್ನಡದಲ್ಲಿ ನಾಳೆ ಶಾಲೆಗಳಿಗೆ ರಜೆ!
    ಲಿವ್-ಇನ್ ಸಂಬಂಧಗಳಲ್ಲಿ ಕಾನೂನು ಮಿತಿ ಎಲ್ಲಿದೆ?-ಸುಪ್ರೀಂ ಕೋರ್ಟ್‌ನ ಮಹತ್ವದ ಪ್ರಶ್ನೆ
    Trump ಮಾತಿಗೆ Iran ಸಂಸತ್ ಸ್ಪೀಕರ್‌ನ ಕಠಿಣ ಸಂದೇಶ ವಿಶ್ವದ ಗಮನ ಸೆಳೆದಿದೆ!
    “ಕಣ್ಣು ಮುಚ್ಚಿಸಿ ಕಟ್ಟಿ ಹಾಕಿ ಬೆಂಕಿ ಹಚ್ಚಿದಳು: ರೋಲ್ ಪ್ಲೇ ಹೆಸರಿನಲ್ಲಿ ಪ್ರಿಯಕರನ ಭೀಕರ ಕೊಲೆ-ಬೆಚ್ಚಿಬೀಳಿಸುವ ಘಟನೆ”
    ನಿರ್ಮಾಣ ಹಂತದ ಗಾಲ್ಫ್ ಕೋರ್ಸ್‌ನ ಕೆರೆಯಲ್ಲಿ ತೇಲಿದ ಮೂವರು ಬಾಲಕರ ಶವಗಳು..!
    ಬಂಗಾಳ ಚುನಾವಣೆ ಫಲಿತಾಂಶವೇ ಬದಲಾಗಿತ್ತಾ?ಬಂಗಾಳ ರಾಜಕೀಯದಲ್ಲಿ ಹೊಸ ಬಾಂಬ್!ಸುಪ್ರೀಂ ಕೋರ್ಟ್ ಮುಂದೆ ಬಿಜೆಪಿ ಜಯದ ಮೇಲೆ ಟಿಎಂಸಿ ದೊಡ್ಡ ಪ್ರಶ್ನೆ!
    “ಜೈನ ಧರ್ಮಕ್ಕೆ ಮೇನಕಾ ಗಾಂಧಿಯಿಂದ ಅಪಮಾನ!? ಹೇಳಿಕೆಗೆ ಶಿವಮೊಗ್ಗದಲ್ಲಿ ಆಕ್ರೋಶದ ಜ್ವಾಲೆ – ಬೇಷರತ್ ಕ್ಷಮೆಯಾಚನೆಗೆ ಆಗ್ರಹ”