📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಗಂಡನಿಗೆ ಚಿನ್ನ ಕಳ್ಳತನದ ಪಿಎಚ್‌ಡಿ, ಹೆಂಡತಿಗೆ ಮಾರ್ಕೆಟಿಂಗ್ ಜಾಣ್ಮೆ…ಆಹಾ ಒಮ್ಮೆ ಓದಿ ಎಂಥಾ ಜೋಡಿ..

    ಇತ್ತೀಚೆಗೆ ಚಿನ್ನದ ಬೆಲೆ ಹಿಂದೆಂದೂ ಕಾಣದ ರೀತಿಯಲ್ಲಿ ಗಗನಕ್ಕೇರುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು, ಶ್ರಮವಿಲ್ಲದೆ ಕೋಟ್ಯಾಧಿಪತಿಗಳಾಗಲು ಕಳ್ಳತನವನ್ನೇ ಒಂದು ಫುಲ್-ಟೈಮ್ ಬಿಸಿನೆಸ್ (ಅಕ್ರಮ ವ್ಯವಹಾರ) ಮಾಡಿಕೊಂಡಿದ್ದಾರೆ! ಚಿನ್ನದ ದರ ಏರುತ್ತಿರುವ ಈ ಟ್ರೆಂಡ್ ಅನ್ನೇ ನಂಬಿ, ಇದನ್ನೇ ತಮ್ಮ ‘ಇನ್ವೆಸ್ಟ್‌ಮೆಂಟ್ ಪ್ಲಾನ್’ ಮಾಡಿಕೊಂಡಿದ್ದ ಖತರ್ನಾಕ್ ಬೆಂಗಳೂರು ಮೂಲದ ದಂಪತಿಯನ್ನು ಕುಣಿಗಲ್ ಪೊಲೀಸರು ಸಿನಿಮಾ ಸ್ಟೈಲ್‌ನಲ್ಲಿ ಹೆಡೆಮುರಿ ಕಟ್ಟಿದ್ದಾರೆ.

    ಮೇ 29 ರಂದು ಕುಣಿಗಲ್‌ನ ಹೌಸಿಂಗ್ ಬೋರ್ಡ್ ಕಾಲೋನಿಯ ರಿಜ್ವಾನ್ ಎಂಬುವವರ ಮನೆಯಲ್ಲಿ ಇಡೀ ಪ್ಲಾನ್ ಎಕ್ಸಿಕ್ಯೂಟ್ ಆಗಿತ್ತು. ರಿಜ್ವಾನ್ ಅವರು ಹೊಸ ನಿವೇಶನ (ಸೈಟ್) ಖರೀದಿಸಲು ಕಷ್ಟಪಟ್ಟು ಕೂಡಿಟ್ಟಿದ್ದ ಹಣ ಮತ್ತು ಚಿನ್ನವನ್ನು ಮನೆಯಲ್ಲಿ ಇಟ್ಟಿದ್ದರು. ಚಿನ್ನದ ಬೆಲೆ ಪೀಕ್‌ನಲ್ಲಿರುವ ಈ ಸಮಯವನ್ನೇ ಹೊಂಚು ಹಾಕಿದ ಬೆಂಗಳೂರಿನ ರಾಮಚಂದ್ರಾಪುರದ ಮಂಜುನಾಥ್ ಮತ್ತು ಅನಿತಾ ದಂಪತಿ, ಮನೆ ಬೀಗ ಮುರಿದು ಕ್ಷಣಾರ್ಧದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ದೋಚಿ ಪರಾರಿಯಾಗಿದ್ದರು.

    ಖತರ್ನಾಕ್ ಕಿಂಗ್‌ಪಿನ್ ಮಂಜುನಾಥ್: ಈತ ಸಾಮಾನ್ಯ ಕಳ್ಳನಲ್ಲ, ಕಳ್ಳತನದ ಲೋಕದ ಪಿಎಚ್‌ಡಿ ಹೋಲ್ಡರ್! ಈತನ ಮೇಲೆ ಈಗಾಗಲೇ ಬರೋಬ್ಬರಿ 35 ಕಳವು ಪ್ರಕರಣಗಳು ದಾಖಲಾಗಿವೆ ಎಂದರೆ ಈತನ “ನೆಟ್‌ವರ್ಕ್” ಮತ್ತು “ಎಕ್ಸ್‌ಪೀರಿಯೆನ್ಸ್” ಎಷ್ಟಿರಬಹುದು ಊಹಿಸಿ…!

    ಸಾಮಾನ್ಯವಾಗಿ ಗಂಡ ತಪ್ಪು ದಾರಿ ಹಿಡಿದರೆ ಹೆಂಡತಿ ಬುದ್ಧಿ ಹೇಳುತ್ತಾಳೆ, ಆದರೆ ಇಲ್ಲಿ ಸೀನ್ ಉಲ್ಟಾ ಇತ್ತು. ಗಂಡ ಕಷ್ಟಪಟ್ಟು ಕನ್ನ ಹಾಕಿ ತರುತ್ತಿದ್ದ ಒಡವೆಗಳನ್ನು, ಇಂದಿನ ಬಂಗಾರದ ಗರಿಷ್ಠ ದರಕ್ಕೆ ಮಾರ್ಕೆಟ್‌ನಲ್ಲಿ ಮಾರಿ ಅಥವಾ ಅಡವಿಟ್ಟು ಐಷಾರಾಮಿ ಜೀವನ ನಡೆಸುವುದು ಪತ್ನಿ ಅನಿತಾಳ ಮುಖ್ಯ ಕೆಲಸವಾಗಿತ್ತು. ಅಂದರೆ, ಇದೊಂದು ಪಕ್ಕಾ ವೆಲ್-ಪ್ಲಾನ್ಡ್ “ಫ್ಯಾಮಿಲಿ ಬಿಸಿನೆಸ್” ತರಹ ನಡೆದುಕೊಂಡು ಬರುತ್ತಿತ್ತು., ಲಕ್ಸುರಿ ಲೈಫ್ ಲೀಡ್ ಮಾಡುತ್ತಿದ್ದ “ಬಿಸಿನೆಸ್ ಪಾರ್ಟ್ನರ್” ಈಕೆ.

    ಆದರೆ, ಈ ಖದೀಮ ಜೋಡಿಯ ಆಟ ಸದಾ ನಡೆಯಲಿಲ್ಲ. 35 ಕೇಸ್‌ಗಳಲ್ಲಿ ಪೊಲೀಸರ ಕಣ್ಣು ತಪ್ಪಿಸಿದ್ದ ಈ ಜೋಡಿಯನ್ನು, ಕುಣಿಗಲ್ ಪೊಲೀಸರು ಖಚಿತ ಮಾಹಿತಿ ಮೇರೆಗೆ ಭರ್ಜರಿ ಕಾರ್ಯಾಚರಣೆ ನಡೆಸಿ ಈ ದಂಪತಿಯನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ ಬರೋಬ್ಬರಿ 25 ಲಕ್ಷ ರೂಪಾಯಿ ನಗದು, ಇಂದಿನ ಪೀಕ್ ರೇಟ್‌ನಲ್ಲಿ ಭಾರಿ ಮೌಲ್ಯ ಬಾಳುವ 31 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕನ್ನು ವಶಪಡಿಸಿಕೊಳ್ಳಲಾಗಿದೆ. ಚಿನ್ನದ ಬೆಲೆ ಏರಿದಂತೆ ಕಳ್ಳರ ಹಸಿವು ಮತ್ತು ಅವರ ಅಕ್ರಮ ಬಿಸಿನೆಸ್ ಹೇಗೆ ಸ್ಕೇಲ್ ಅಪ್ ಆಗುತ್ತಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ!

    ಕಷ್ಟಪಟ್ಟು ಸಂಪಾದಿಸಿದ ಹಣ, ಒಡವೆಗಳನ್ನು ಮನೆಯಲ್ಲಿಡುವಾಗ ಸಾರ್ವಜನಿಕರು ಹತ್ತು ಬಾರಿ ಯೋಚಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಸದ್ಯಕ್ಕಂತೂ ಈ “ಖತರ್ನಾಕ್ ಬಿಸಿನೆಸ್ ಜೋಡಿ” ಕಂಬಿ ಎಣಿಸುತ್ತಿದೆ!

    ##ತುಮಕೂರುಬ್ರೇಕಿಂಗ್ #ಕ್ರೈಂಸುದ್ದಿ #ಚಿನ್ನದಬೆಲೆ #ಕುಣಿಗಲ್ #ಕಳ್ಳದಂಪತಿ

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಬೀದಿ ನಾಯಿಗಳ ಹಾವಳಿ ಮಾನವ ಜೀವ ರಕ್ಷಣೆಗೆ ಮೊದಲ ಆದ್ಯತೆ — ಸುಪ್ರೀಂ ಕೋರ್ಟ್‌ನ ಕಠಿಣ ನಿಲುವು
    “ಕಣ್ಣು ಮುಚ್ಚಿಸಿ ಕಟ್ಟಿ ಹಾಕಿ ಬೆಂಕಿ ಹಚ್ಚಿದಳು: ರೋಲ್ ಪ್ಲೇ ಹೆಸರಿನಲ್ಲಿ ಪ್ರಿಯಕರನ ಭೀಕರ ಕೊಲೆ-ಬೆಚ್ಚಿಬೀಳಿಸುವ ಘಟನೆ”
    ಒಂದು ದೇಶವನ್ನೇ ಮಟ್ಟಾಶ್ ಮಾಡುವಷ್ಟು ನ್ಯೂಕ್ಲಿಯರ್ ಪವರ್ stock ಇರಾನ್ನಲ್ಲಿ ಇದ್ಯಾ !?
    ಅಮೆರಿಕಾ ಭಾರತವನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದೆ” – ಕೆ.ಸಿ. ವೇಣುಗೋಪಾಲ್
    ಆಂಬ್ಯುಲೆನ್ಸ್‌ನಲ್ಲೇ ನಡೆದ ಭೀಕರ ಘಟನೆ… ನಂಬಲು ಕಷ್ಟ, ಆದರೆ ಸತ್ಯ!
    NEET ಗೊಂದಲ, ಮರುಪರೀಕ್ಷೆ, ಮೌಲ್ಯಮಾಪನ ದೋಷಗಳು ಮತ್ತು ವಿದ್ಯಾರ್ಥಿ ಜೀವನದ ನೋವು..
    ಕೊನೆಗೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಿತೀಶ್ ಕುಮಾರ್
    ಹೋಟೆಲ್ನಲ್ಲಿ ಅಗ್ನಿಯ ಜ್ವಾಲೆ-ಉಸಿರುಗಟ್ಟಿದ ಹೊಗೆಯೊಳಗೆ ಅಡಗಿಹೋದ ಜೀವಗಳು ..!
    ಘರ್ ವಾಪ್ಸಿ ಯಾದ ಯೋಗೇಶ್ ಶೆಟ್ಟಿ ಜೆಪ್ಪು
    ಕಾಂಗ್ರೆಸ್‌ಗೆ ಹೊಸ ತಲೆನೋವು? ಅಹಿಂದ ಸಂಘಟನೆಯಿಂದ ‘ಪಕ್ಷ ವಿಭಜನೆ’ ಎಚ್ಚರಿಕೆ!
    TCS ಜಿಹಾದ್..ಗಂಭೀರ ತಿರುವು… ಟೀಮ್ ಲೀಡರ್ಸ್ ನಿಂದ subordinates ಗಳನ್ನ ಮಲೇಷ್ಯಾಕ್ಕೆ ಎತ್ತಂಗಡಿ ಮಾಡುವ ಪ್ಲಾನ್ ಇತ್ತಾ..?!ದಿನಕ್ಕೊಂದು ಮಹತ್ವದ ಸುಳಿವು…
    50 ಸಾವಿರ ಸಾಲಕ್ಕೆ ಸವಣೂರು ಪೇಟೆಯಲ್ಲಿ ರಕ್ತಸಿಕ್ತ ಘರ್ಷಣೆ ..
    ದ.ಕ ಜಿಲ್ಲಾಡಳಿತದಿಂದ ಮಂಗಳಮುಖಿಯರಲ್ಲದವರಿಗೂ ಗುರುತಿನ ಚೀಟಿ ವಿತರಣೆ – ಗಂಭೀರ ಆರೋಪ
    ಎಲಾನ್ ಮಸ್ಕ್: ವಿಶ್ವದ ಮೊದಲ ಟ್ರಿಲಿಯನೇರ್‌ನಿಂದ ಇನ್ನೂ ಎತ್ತರದತ್ತ!
    ಅಂಡಮಾನ್ ಸಮುದ್ರದಲ್ಲಿ ಸಿಕ್ಕಿದ ಖಜಾನೆ! ಭಾರತದ ಇಂಧನ ಭವಿಷ್ಯ ಬದಲಾಗುತ್ತಿದೆಯೇ?
    ಶಾಲಾ ವಾಹನಗಳ ಸುರಕ್ಷತೆ ಬಗ್ಗೆ ಜೆಡಿಎಸ್ ಆಗ್ರಹ
    MRPL ವಿರುದ್ಧ ಜನಹೋರಾಟದ ಎಚ್ಚರಿಕೆ – ಮೇ 1ರಿಂದ ಅನಿರ್ದಿಷ್ಟ ಧರಣಿಗೆ ಸಮಿತಿ ಸಜ್ಜು..
    “ಅಕ್ಕಾ, ಮನೆಗೆ ಹೋಗೋಣ” ಎಂದು ಅಕ್ಕನನ್ನು ಕರೆತರಲು ಬಂದ ಅಪೂರ್ವ… ಕೆಲವೇ ಕ್ಷಣಗಳಲ್ಲಿ ಕಬ್ಬಿಣದ ಗೇಟ್ ಅಡಿಯಲ್ಲಿ ಅಂತ್ಯ
    ಸೂರ್ಯನ ತಾಪಕ್ಕೆ ಜೋಗ ಜಲಪಾತ ದೊಡ್ಡ ಬಂಡೆಯೇ ಒಡೆಯಿತು..ಮಾನವನಿಗೆ ಅಪಾಯ ಇನ್ನಷ್ಟು!
    ಶಾಲೆಯ ಮೊದಲ ದಿನವೇ ಕಣ್ಣೀರು ತರಿಸಿದ ಫಿಲಿಪೈನ್ಸ್‌ ಭೂಕಂಪ ಸೃಷ್ಟಿಸಿದ ಭೀಕರತೆ ಮುಗ್ಧ ಮಕ್ಕಳನ್ನು ಆವರಿಸಿದ ಭೀತಿ..
    ನಂದಿಬೆಟ್ಟದ ಬಳಿ ಪ್ರೇಯಸಿ ಕೊಲೆಗೈದು ಪ್ರಿಯಕರನ ಆತ್ಮಹತ್ಯೆ ಯತ್ನ?ಲವ್ ಜಿಹಾದ್’ ಆರೋಪ ಹೊರಿಸಿದ ತಾಯಿ!
    ಮೂಡಬಿದ್ರೆ: ಅಕ್ರಮ ಜಾನುವಾರು ಸಾಗಾಟ -ಆರೋಪಿಗಳ ಬಂಧನ, ವಾಹನ ಹಾಗೂ ಕರು ವಶಕ್ಕೆ.
    5.5 ವರ್ಷದ ಹೆಣ್ಣುಮಗಳ ಕೊಲೆ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್!ಮಗು ಸತ್ತು 3 ತಿಂಗಳು…ಆದ್ರೆ FIR ಇಲ್ಲ! 3 ಪೊಲೀಸರು ಸಸ್ಪೆಂಡ್
    ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಶಾಕ್; ಸುಪ್ರೀಂ ಕೋರ್ಟ್ ಮಹತ್ವದ ಆದೇಶ
    ರಾಮಮಂದಿರ ಟ್ರಸ್ಟ್‌ನ ಮಹತ್ವದ ಹೇಳಿಕೆ!ಎಲ್ಲಾ ಕಾಣಿಕೆಗಳು ,ದೇಣಿಗೆ,ಚಿನ್ನ-ಬೆಳ್ಳಿ ಸೇರಿ 2,800 ಅಮೂಲ್ಯ ವಸ್ತುಗಳುಸುರಕ್ಷಿತ
    ಅಮೆರಿಕ–ಇರಾನ್ ಸಂಘರ್ಷಕ್ಕೆ ಮತ್ತೆ ಹೊತ್ತಿ ಉರಿದ ಮಧ್ಯಪ್ರಾಚ್ಯ! ಕದನ ವಿರಾಮ ಸಂಪೂರ್ಣ ವಿಫಲ..
    ಸೂರತ್‌ನಲ್ಲಿ ಮಳೆಯ ರೌದ್ರನರ್ತನ: 200ಕ್ಕೂ ಹೆಚ್ಚು ಅಂಗಡಿಗಳಿಗೆ ನೀರು ನುಗ್ಗಿ ₹200 ಕೋಟಿ ನಷ್ಟ – ಕಣ್ಣೀರಿನಲ್ಲಿ ಮುಳುಗಿದ ವ್ಯಾಪಾರಿಗಳು
    ಕುಮಾರಸ್ವಾಮಿ ನೆನೆದ ಗುಬ್ಬಿ ವಾಸು: ಮತ್ತೆ ಜೆಡಿಎಸ್ ಸೇರ್ಪಡೆಗೆ ಮುನ್ನುಡಿಯೇ ಈ ಹೇಳಿಕೆ?