📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಎಲ್ಪಿಜಿ ಗ್ಯಾಸ್ ದರದಲ್ಲಿ ಏರಿಕೆ:  ಮಧ್ಯಮ ವರ್ಗದವರಲ್ಲಿ ಹತಾಶೆ

ನಿರೀಕ್ಷಿತ ಬೆಲೆ ಏರಿಕೆಯೇ ಇದು. ತೈಲ ಹಾಗೂ ಗ್ಯಾಸ್ ದರ ಏರುತ್ತದೆ ಎಂಬ ನಿರ್ಧಾರಕ್ಕೆ ಈಗಾಗಲೇ ಸಾಮಾನ್ಯ ಜನರು ಬಂದುಬಿಟ್ಟಿದ್ದರು. ಈ ದರ ಏರಿಕೆಯು, ಇದಕ್ಕೆ ರಿಲೇಟೆಡ್ ಆಗಿರುವ ಅನೇಕ ವಸ್ತುವಿನ ಬೆಲೆ ಏರಿಕೆಗೆ ಕಾರಣವಾಗಲಿದೆ ಅನ್ನುವುದು ಸಹ ಇಲ್ಲಿ ಗಮನಿಸಬೇಕಾದ ಸೂಕ್ಷ್ಮ ವಿಚಾರವಾಗಿದೆ. ಗ್ಯಾಸ್ ದರ ಏರಿಕೆಯಿಂದ ಮುಖ್ಯವಾಗಿ ಮಧ್ಯಮವರ್ಗದವರ ಮುಖದಲ್ಲಿ ಕಪ್ಪು ಕಾಣಿಸಿಕೊಳ್ಳುತ್ತಿದೆ. ಅವರ ಮುಖದಲ್ಲಿ ಸ್ಪಷ್ಟವಾಗಿ ಹತಾಶೆಯ ಲಕ್ಷಣ ಗೋಚರವಾಗುತ್ತಿದೆ.

ಮಧ್ಯ ಪ್ರಾಚ್ಯದ ಪ್ರಾಂತ್ಯಗಳಲ್ಲಿ ಯುದ್ಧದ ಪ್ರಾರಂಭಿಕ  ಕಹಳೆಯು ಈಗಷ್ಟೇ ಮೊಳಗಿದೆ. ಆಗಲೇ ತೈಲ ಬೆಲೆಯಲ್ಲಿ ಏರಿಕೆ ಕಂಡಿದೆ ಗ್ಯಾಸ್ ದರವು ಸಹ 60 ರಿಂದ 70 ರೂ ಏರಿಕೆಯಾಗಿದೆ.

ನಮ್ಮ ದೇಶದ ಸರ್ಕಾರ ಇಂತಹ ಸಂದರ್ಭದಲ್ಲಿ ಒಂದಷ್ಟು ಕಟ್ಟು ನಿಟ್ಟಿನ ನಿರ್ಧಾರ ಹಾಗೂ ಕ್ರಮ ಎರಡನ್ನೂ ಮಾಡಬೇಕಿತ್ತು. ಆದರೆ ಆ ಕೆಲಸವನ್ನು ಈ ಕ್ಷಣದವರೆಗೆ ನಮ್ಮ ದೇಶದ ಸರ್ಕಾರಗಳು ಮಾಡಲು ಆಸಕ್ತಿಯನ್ನೇ ತೋರಿಸಿಲ್ಲ. ಅಷ್ಟಕ್ಕೂ ಇಂತಹ ಸಂದರ್ಭದಲ್ಲಿ ತಕ್ಷಣದ ಕ್ರಮಕ್ಕೆ ಅಂದರೆ ಜನಸಾಮಾನ್ಯರ ಮೇಲೆ ಯಾವುದೇ ರೀತಿಯ ಹೆಚ್ಚಿನ ಹೊರೆ ಬೀಳದ ರೀತಿಯಲ್ಲಿ ಮಾರ್ಕೆಟ್ ನಿಯಂತ್ರಣವನ್ನು ಸರ್ಕಾರವು ಖುದ್ದಾಗಿ ಮಾಡಬೇಕಿತ್ತು. ಅರಬ್ ರಾಷ್ಟ್ರಗಳ ಪೈಕಿ ಕೆಲವು ರಾಷ್ಟ್ರಗಳು ಈ ಕೆಲಸವನ್ನು ನಾಲ್ಕು ದಿನಗಳ ಹಿಂದೆಯೇ ಮಾಡಿವೆ. ಯಾವುದೇ ಅಗತ್ಯ ವಸ್ತುಗಳ ಮೇಲಿನ ದರ ಏರಿಸದಂತೆ ಕಟ್ಟುನಿಟ್ಟಿನ ಆದೇಶವನ್ನು ಆ ದೇಶದ ಉದ್ಯಮಿಗಳಿಗೆ ವ್ಯಾಪಾರಸ್ಥರಿಗೆ ನೀಡಿದ್ದಾರೆ. ಆ ದೇಶವು ನೀಡುವ ಆದೇಶವನ್ನು, ಅಲ್ಲಿನ ವ್ಯಾಪಾರಸ್ಥರು ಉದ್ಯಮಿಗಳು ಪಾಲಿಸುವಂತೆ ನೋಡಿಕೊಳ್ಳುತ್ತಾರೆ ಅದು ಕೂಡ ಮುಖ್ಯ ಎನಿಸಿಕೊಳ್ಳುತ್ತದೆ.

ನಮ್ಮ ದೇಶದ ಸರ್ಕಾರಗಳಿಂದಲೂ ನಾವು ಇಂಥವುದೇ ನಡೆಯನ್ನು ನಿರೀಕ್ಷಿಸುವುದು ತಪ್ಪಲ್ಲ ತಾನೇ? ದುರ್ದೈವ ಎಂದರೆ, ಇಂತಹ ಮಾತನ್ನು ಆಡಿದರೆ ನಮ್ಮಲ್ಲಿ ಸರ್ಕಾರದ ಪರವಾಗಿ ನಿಂತ ಕೆಲವು ನಾಗರಿಕರು ಸರ್ಕಾರದ ನಿರ್ಧಾರವೇ ಸರಿ ಅನ್ನುವ ರೀತಿಯಲ್ಲಿ ವಾದ ಮಾಡುತ್ತ ನಾಗರಿಕರ ಮೇಲಿನ ಹೊರೆಯನ್ನು ಸಮರ್ಥಿಸಿ ಕೊಳ್ಳುವ ಮೂಲಕ ಸರ್ಕಾರಕ್ಕೆ ಬಿಸಿ ತಟ್ಟದಂತೆಯೂ ನೋಡಿಕೊಳ್ಳುತ್ತಾರೆ. ಇಂತಹ ವಿಚಾರದಲ್ಲಿ ದೇಶದ ನಾಗರಿಕರು ಒಟ್ಟಾಗಿ ಸರ್ಕಾರವನ್ನು ನಾಗರಿಕರ ಪರ ಸರ್ಕಾರವನ್ನಾಗಿಸುವ ನಿಟ್ಟಿನಲ್ಲಿ ಸಾಗಬೇಕಿತ್ತು. ಆದರೆ ಅದು ನಮ್ಮಲ್ಲಿ ಸಾಧ್ಯವಾಗುತ್ತಿಲ್ಲ ಜನರನ್ನು ಆಳುವ ವರ್ಗವು ಉದ್ಯಮಿಗಳ ಅಥವಾ ಹಲವು ಉದ್ಯಮ ಸ್ನೇಹಿ ಮಾಧ್ಯಮಗಳ ಸಹಾಯದಿಂದ ಸಾಮಾನ್ಯ ಜನರನ್ನು ಯಾವತ್ತೂ ಒಂದಾಗದಂತೆ ವಿಭಜಿಸಿಯಾಗಿದೆ. ಈ ವಿಭಜನೆಯ ಕಾರಣದಿಂದಾಗಿ ನಮ್ಮ ದೇಶದ ಸರ್ಕಾರಗಳು ಯಾವ ಅಂಜಿಕೆಯೂ ಇಲ್ಲದೆ ತಮಗೆ ಹೇಗೆ ಬೇಕೋ ಹಾಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಆಡಳಿತವನ್ನು ನಡೆಸುತ್ತಾರೆ. 

ದೇಶದಲ್ಲಿ ಒಂದು ತಿಂಗಳಿಗಾಗುವಷ್ಟು ತೈಲಗಳು ಸ್ಟಾಕ್ ಇವೆ. ಅದು ಎಲ್ಲಾ ದೇಶದಲ್ಲೂ ಇದ್ದೇ ಇರುತ್ತದೆ. ಹಾಗಿರುವಾಗ ಆ ಸ್ಟಾಕುಗಳ ಮೇಲಿನ ದರವನ್ನು ಹೆಚ್ಚಿಸಲು ಅವಕಾಶ ಇರಬಾರದು. ಆದ್ರೂ ತೈಲೋದ್ಯಮಿಗಳು, ಅದನ್ನು ಯಾವುದೇ ಕ್ಷಣದಲ್ಲಾದರೂ ಏರಿಸುತ್ತಾರೆ. ಈ ಬಗ್ಗೆ ಆಳುವವರು ಮಾತನಾಡುವುದಿಲ್ಲ ಆಳುವವರನ್ನು ಪ್ರಶ್ನಿಸಬೇಕಾದ ವಿರೋಧಪಕ್ಷದವರು ಗಂಭೀರವಾಗಿ ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ. ಹಾಗಾಗಿ ನಮ್ಮ ಜನರ ಮೇಲಿನ ಹೊರೆಯನ್ನು ಇಳಿಸುವ ಪ್ರಯತ್ನ ಬೇಡ, ಹೊರಿಸುವ ವಿಚಾರಧಲ್ಲಾದರೂ ಸರ್ಕಾರ ಅಂಕುಶ ಇಟ್ಟುಕೊಳ್ಳದೆ ಇರುವಂತದ್ದು ದುರ್ದೈವ. ಇವೆಲ್ಲವನ್ನು ಉದ್ಯಮ ಮಾಫಿಯಾ ನಿಯಂತ್ರಿಸುತ್ತಿದೆ ಅನ್ನುವುದಕ್ಕೆ ಇದಕ್ಕಿಂತಲೂ ದೊಡ್ಡ ಉದಾಹರಣೆಯೇ ಬೇಕಿಲ್ಲ ನೋಡಿ.

ಈಗಾಗಲೇ ಇರಾನ್ ಅಮೆರಿಕ ಇಸ್ರೇಲ್ ನಡುವಿನ ಕಾಳಗ ಎಂಟನೆಯ  ದಿನಕ್ಕೆ ಕಾಲಿಟ್ಟಿದೆ. ನಮ್ಮ ದೇಶಕ್ಕೆ ಇರಾನ್ ದೇಶದ ತೈಲ ಅತ್ಯವಶ್ಯಕ. ಈಗ ಅದಕ್ಕೆ ಈ ಕ್ಷಣದ ತಡೆ ಬಿದ್ದಿದೆ. ಕೇವಲ ಎಂಟನೇ ದಿನದಲ್ಲಿಯೇ ತೈಲ ಬೆಲೆಯಲ್ಲಿ ಏರಿಕೆಯೂ ಆಗಿದೆ. ಗ್ಯಾಸ್ ದರ ಏರಿಕೆ ಕಂಡಿದೆ. ಇದರ ಪರಿಣಾಮ, ಅಗತ್ಯ ವಸ್ತುಗಳ ಬೆಲೆಯು ಹೆಚ್ಚಾಗಲಿದೆ ಎನ್ನುವುದರಲ್ಲಿ  ಎರಡು ಮಾತೇ ಇಲ್ಲ. ಒಂದು ವಾರದಿಂದ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದೆ ಕೂಡ. ಆದರೆ ಸರ್ಕಾರವು ಮಾತ್ರ ಈ ವಿಚಾರದಲ್ಲಿ ಆರ್ಥಿಕತೆಯ ಪರಿಣಾಮ ಬೀರದ ಹಾಗೆ ಯಾವ ರೀತಿ ನಿಭಾಯಿಸಬೇಕು ಅನ್ನುವುದರ ಬಗ್ಗೆ ಗಂಭೀರ  ಚಿಂತನೆ ಮಾಡದಿರುವುದು ಮೇಲ್ನೋಟಕ್ಕೆ  ಕಂಡುಬರುತ್ತದೆ. ಈ ಸಂದರ್ಭದಲ್ಲಿ ನಾಗರಿಕರ ಪರವಾಗಿ ಹಾಗೂ ಮಾರ್ಕೆಟ್ ನಿಯಂತ್ರಣ ಮಾಡುವವರ ಮೇಲೆ ಕಣ್ಣಿಡುವ ಕೆಲಸ ಜರೂರ್ ಆಗಿ ಆಗಬೇಕಿತ್ತು , ಅದು ಯಾವುದು ಇಲ್ಲಿ ಆಗಿಲ್ಲ ಅನ್ನೋದು, ಸರ್ಕಾರದ ಕಡೆಯಿಂದ ಈ ವಿಚಾರದಲ್ಲಿ ಯಾವುದೇ ರೀತಿಯ ತಿಳುವಳಿಕೆಯಾಗಲಿ, ಆದೇಶ ಮಾಡಿದ್ದಾಗಲಿ ಕಾಣದೆ ಇರುವಂತದ್ದನ್ನು ನಾವು ನೋಡಬಹುದು. 

ಈಗಲೂ ಕಾಲ ಮಿಂಚಿಲ್ಲ ಸರ್ಕಾರವು ಜನಸಾಮಾನ್ಯರ ಮೇಲೆ ಹೊರೆ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಈಗಾಗಲೇ ದೇಶದ ಜನರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಆದಾಯದಲ್ಲಿ ಸ್ವಲ್ಪವೂ ಹೆಚ್ಚಾಗಿಲ್ಲ ಅನ್ನುವ ಕೊರಗು ಕಳೆದ ಎರಡು ಮೂರು ವರ್ಷದಿಂದ ಇರುವುದು ಗೌಪ್ಯ ವಿಚಾರವಲ್ಲ. ಆದರೆ ಕಳೆದ ಎರಡು ಮೂರು ವರ್ಷದಲ್ಲಿ ಜನರ ಮೇಲೆ ಹೊರೆಯಂತು ಆಗಾಗ ಬೀಳುತ್ತಲೇ ಇದೆ.  ಜನರ ಆದಾಯದಲ್ಲಿ ಏರಿಕೆ ಕಾಣದೆ ಇರುವಾಗ ಅವರ ಮೇಲಿನ ಹೊರೆ ಹೆಚ್ಚಾಗದಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯ ಕರ್ತವ್ಯವಾಗುತ್ತದೆ. ಇಷ್ಟರಲ್ಲಾಗಲೇ ಬೆಲೆ ಏರಿಕೆಯ ಬಿಸಿಯಿಂದ ಸಾಕಷ್ಟು ನಲಿಗಿರುವ ನಾಗರಿಕರಿಗೆ ಇನ್ನೊಮ್ಮೆ ಬೆಲೆ ಏರಿಕೆಯ ಪೆಟ್ಟನ್ನು ಕೊಡಬೇಡಿ ಎಂಬ ಮಾತುಗಳು ನಾಗರಿಕ ಸಮಾಜದ ಮುಖಂಡರುಗಳಿಂದ ಕೇಳಿಬರುತ್ತಿವೆ

COMMENTS

Login with Gmail to comment

ಇನ್ನಷ್ಟು ಸುದ್ದಿ

ಮುದ್ದಾದ ಅವಳಿ ಹೆಣ್ಣು ಮಕ್ಕಳನ್ನು ಕತ್ತು ಸೀಳಿ ಕೊಂದ ಪಾಪಿ ಅಪ್ಪ
ವರದಕ್ಷಿಣೆ ಕಿರುಕುಳ ಪ್ರಕರಣ ಹೈಕೋರ್ಟ್‌ನ ಮಹತ್ವದ ತೀರ್ಪು…!ಕಾನೂನಿನ ದುರುಪಯೋಗಕ್ಕೆ ಹೈಕೋರ್ಟ್ ಬ್ರೇಕ್..!
ಅಮೇರಿಕಾಕ್ಕೆ ಅಷ್ಟು ಧೈರ್ಯದಿಂದ ಎಲ್ಲಿಂದ ಬಂತು?
ಮಂಗಳೂರಲ್ಲಿ ಮಳೆಯ ಅಬ್ಬರ… ಗುಡುಗು-ಮಿಂಚಿನ ಆಟ ದಕ್ಷಿಣ ಕನ್ನಡದಲ್ಲಿ ಮತ್ತೆ pre-ಮಾನ್ಸೂನ್ ಮ್ಯಾಜಿಕ್!?
ಪ್ರಜ್ಞಾನಂದನ ದಿಗ್ವಿಜಯ…ಚೆಸ್ ಚಕ್ರವ್ಯೂಹದಲ್ಲಿ ದಿಗ್ಗಜರನ್ನೆಲ್ಲಾ ಮಣಿಸಿ ಸಿಂಹಾಸನಕ್ಕೇರಿದ ಭಾರತೀಯ ಬಾಲಪ್ರತಿಭೆ! 
“ಮಂಜಿನ ನಡುವೆ ಕ್ಷಣಾರ್ಧದಲ್ಲಿ ಮಾಯವಾದ ಮಗಳು”ಶ್ರೀನಂದಾ ಶವವಾಗಿ ಪತ್ತೆ…!
“ಕುಂಡೆ(ತಿಕ)ಯಲ್ಲಿ ಲಕ್ಷ್ಮಿ ಇರುತ್ತಾಳೆ” ಎಂಬ ಹೇಳಿಕೆ ವೈರಲ್! ಆರ್ಯವರ್ಧನ್ ಗುರೂಜಿ ವಿರುದ್ಧ ದೂರು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ
ಬ್ರಹ್ಮಾವರ, ಮಂದಾರ್ತಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಹೇಳೋರು ಕೇಳೋರು ಯಾರು ಇಲ್ವಾ?
sdfdf
ಮೂರನೇ ಮಹಾಯುದ್ಧದ ಭೀತಿ: ಇರಾನ್ ಹೊಸ ನಾಯಕನಾಗಿ ಮೊಜ್ತಬಾ ಖಮೇನಿ –ನೂತನ ನಾಯಕನಿಗೆ ರಷ್ಯಾ, ಚೀನಾ ಬೆಂಬಲ
ನಾಟೆಕಲ್ ತಿರುವಿನಲ್ಲಿ ಪಿ.ಎ. ಕಾಲೇಜು ಬಸ್ ಅಪಘಾತ: ಬಸ್‌ನಡಿ ಸಿಲುಕಿ ಬೈಕ್ ಸವಾರ ಗಂಭೀರ ಗಾಯಗೊಂಡು ಸಾವು
ತಸ್ಲಿಮಳ ಹಣೆಗೆ ಸಿಂಧೂರವಿಟ್ಟ ಕೇಶವ, ಬುರ್ಖಾ ತೆಗೆದಿಟ್ಟ ತಸ್ಲೀಮಾ
ದಾವೂದ್ ಇಬ್ರಾಹಿಂನ ಆಪ್ತ. ಸಲೀಂ ಡೋಲಾ ಬಂದನ ವಿದೇಶದಲ್ಲಿ ಅಡಗಿದ್ದರೂ ಕಾನೂನಿನಿಂದ ತಪ್ಪಿಸಿಕೊಳ್ಳಲಾಗಲಿಲ್ಲ
ದಕ್ಷಿಣ ಕನ್ನಡ–ಉಡುಪಿಯಲ್ಲಿ ಗೋಡಂಬಿ ಕ್ರಾಂತಿಗೆ ರಾಜ್ಯ ಸರ್ಕಾರ ಸಜ್ಜು..₹1 ಕೋಟಿ ಯೋಜನೆ ಘೋಷಿಸಿದ ಈಶ್ವರ್ ಖಂಡ್ರೆ…
ಬಲಪಂಥೀಯರ ಜೊತೆ ಮುಖ್ಯಮಂತ್ರಿಗಳ ಸ್ನೇಹ : ಅಭದ್ರತೆ ಯಾರಿಗೆಲ್ಲ?
ಮಂತ್ರಾಲಯದ ಮಠದ ಹೆಸರಲ್ಲಿ 3 ಲಕ್ಷ ಆಸೆ ತೋರಿಸಿ ವಂಚನೆ..!
ಟ್ರಂಪ್-“Strait of Hormuz ತಕ್ಷಣ ತೆರೆಯಿರಿ…! “ ಇರಾನ್-“ಕೀ ಗಳನ್ನು ಕಳೆದುಕೊಂಡಿದ್ದೇವೆ…!”
ನಿರ್ಮಾಣ ಹಂತದ ಗಾಲ್ಫ್ ಕೋರ್ಸ್‌ನ ಕೆರೆಯಲ್ಲಿ ತೇಲಿದ ಮೂವರು ಬಾಲಕರ ಶವಗಳು..!
ಮೇ 29ರಿಂದ ತಣ್ಣೀರುಬಾವಿ ಬೀಚ್‌ನಲ್ಲಿ ಮೂರು ದಿನಗಳ ರಾಷ್ಟ್ರಮಟ್ಟದ ಸರ್ಫಿಂಗ್ ಸ್ಪರ್ಧೆ…
“ವೇತನಕ್ಕಾಗಿ ಹೋರಾಟದಿಂದ ಆರಂಭವಾದ ಪ್ರತಿಭಟನೆ… ನೋಯ್ಡಾ ರಸ್ತೆಗಳಲ್ಲಿ ಅರಾಜಕತೆ, ಬೆಂಕಿ, ಘರ್ಷಣೆ — ಈಗ ಸರ್ಕಾರವೇ ತನಿಖೆ ನಡೆಸುವಷ್ಟು ಗಂಭೀರ ಪರಿಸ್ಥಿತಿ!” 🔥🚨
ಹಾರರ್ ಸಿನಿಮಾ ಸೀನ್ ಅಂತ ಅನಿಸ್ತು… ಆದರೆ ಇದು ನಿಜ ಘಟನೆ! ಟಾಯ್ಲೆಟ್ ಒಳಗಿಂದ ತಲೆ ಎತ್ತಿದ ವಿಷದ ರಾಜ…
“ವಾಹನ ಮಾರಾಟ-RC ಬದಲಾವಣೆ  ಅಗತ್ಯ.. ಇಲ್ಲವಾದರೆ ಕಾನೂನು ಸಮಸ್ಯೆಗಳು ತಪ್ಪಿದ್ದಲ್ಲ..!” ಹೈಕೋರ್ಟ್
ಕರಾವಳಿ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯ: “ಕರಾವಳಿ ಪಡೆ” ಹೋರಾಟ ತೀವ್ರಗೊಳಿಸಲು ನಿರ್ಧಾರ
ಸಚಿನ್ ತೆಂಡೂಲ್ಕರ್ ಮಗಳ ಜಪಾನೀಸ್ ಕನೆಕ್ಷನ್ ಈಗ ದೇಶದ ಗಮನ ಸೆಳೆಯುತ್ತಿದೆ…ಸಾರಾ ಹೊಸ ಒಪ್ಪಂದ ಚರ್ಚೆಯಲ್ಲಿ
ಮೂಡಬಿದಿರೆ ಇನ್‌ಸ್ಪೆಕ್ಟರ್ ಪ್ರಕರಣಕ್ಕೆ ಟ್ವಿಸ್ಟ್: ಆರೋಪ ಮಾಡಿದ ಮಹಿಳೆಯ ವಿರುದ್ಧವೇ ಸಹೋದರಿಯ ಬಾಂಬ್!
ಟ್ರಂಪ್ ಇರಾನ್ ಡೀಲ್ ಕಥೆ ಏನು?ಒಪ್ಪಂದವಾಗುತ್ತಾ? ಅಥವಾ ಯುದ್ಧ ಮುಂದುವರೆಯುತ್ತಾ?
ಚಾರ್ಮಾಡಿ ಘಾಟಿಯಲ್ಲಿ ಬಂಡೆ ಕುಸಿತ; ಅದೃಷ್ಟವಶಾತ್ ಅಪಾಯ ತಪ್ಪಿತು
ಶೃಂಗೇರಿ ವಿಧಾನಸಭೆಯ ಮರುಕೌಂಟಿಂಗ್ ನಲ್ಲಿ ನಡೆದ ಲಪಡಾಗಳೇನು?
ಮನೆಯ ಮೇಲೆ ಪೊಲೀಸರ  ದಾಳಿ  ಮಾರಾಟಕ್ಕೆ ಇಡಲಾದ ಮಾದಕ ವಸ್ತು ಹಾಗೂ ಮಾರಕ ಆಯುಧ ವಶ
ಮಂಗಳೂರು ಜಾರಂದಾಯ ಸ್ಥಾನದ ದೈವ ನರ್ತನ ವಿವಾದ – ಸ್ಪಷ್ಟನೆ- ಮರುಪ್ರಶ್ನೆ-ಇತ್ಯರ್ಥವಾಗುತ್ತಾ..?!
ಬ್ರಹ್ಮಾವರದ ಹಲಸು ಮೇಳ ಮಾಡಿದ ಹೊಲಸು – ಸಾರ್ವಜನಿಕರ ಆಕ್ರೋಶ