📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಎಲ್ಪಿಜಿ ಗ್ಯಾಸ್ ದರದಲ್ಲಿ ಏರಿಕೆ:  ಮಧ್ಯಮ ವರ್ಗದವರಲ್ಲಿ ಹತಾಶೆ

ನಿರೀಕ್ಷಿತ ಬೆಲೆ ಏರಿಕೆಯೇ ಇದು. ತೈಲ ಹಾಗೂ ಗ್ಯಾಸ್ ದರ ಏರುತ್ತದೆ ಎಂಬ ನಿರ್ಧಾರಕ್ಕೆ ಈಗಾಗಲೇ ಸಾಮಾನ್ಯ ಜನರು ಬಂದುಬಿಟ್ಟಿದ್ದರು. ಈ ದರ ಏರಿಕೆಯು, ಇದಕ್ಕೆ ರಿಲೇಟೆಡ್ ಆಗಿರುವ ಅನೇಕ ವಸ್ತುವಿನ ಬೆಲೆ ಏರಿಕೆಗೆ ಕಾರಣವಾಗಲಿದೆ ಅನ್ನುವುದು ಸಹ ಇಲ್ಲಿ ಗಮನಿಸಬೇಕಾದ ಸೂಕ್ಷ್ಮ ವಿಚಾರವಾಗಿದೆ. ಗ್ಯಾಸ್ ದರ ಏರಿಕೆಯಿಂದ ಮುಖ್ಯವಾಗಿ ಮಧ್ಯಮವರ್ಗದವರ ಮುಖದಲ್ಲಿ ಕಪ್ಪು ಕಾಣಿಸಿಕೊಳ್ಳುತ್ತಿದೆ. ಅವರ ಮುಖದಲ್ಲಿ ಸ್ಪಷ್ಟವಾಗಿ ಹತಾಶೆಯ ಲಕ್ಷಣ ಗೋಚರವಾಗುತ್ತಿದೆ.

ಮಧ್ಯ ಪ್ರಾಚ್ಯದ ಪ್ರಾಂತ್ಯಗಳಲ್ಲಿ ಯುದ್ಧದ ಪ್ರಾರಂಭಿಕ  ಕಹಳೆಯು ಈಗಷ್ಟೇ ಮೊಳಗಿದೆ. ಆಗಲೇ ತೈಲ ಬೆಲೆಯಲ್ಲಿ ಏರಿಕೆ ಕಂಡಿದೆ ಗ್ಯಾಸ್ ದರವು ಸಹ 60 ರಿಂದ 70 ರೂ ಏರಿಕೆಯಾಗಿದೆ.

ನಮ್ಮ ದೇಶದ ಸರ್ಕಾರ ಇಂತಹ ಸಂದರ್ಭದಲ್ಲಿ ಒಂದಷ್ಟು ಕಟ್ಟು ನಿಟ್ಟಿನ ನಿರ್ಧಾರ ಹಾಗೂ ಕ್ರಮ ಎರಡನ್ನೂ ಮಾಡಬೇಕಿತ್ತು. ಆದರೆ ಆ ಕೆಲಸವನ್ನು ಈ ಕ್ಷಣದವರೆಗೆ ನಮ್ಮ ದೇಶದ ಸರ್ಕಾರಗಳು ಮಾಡಲು ಆಸಕ್ತಿಯನ್ನೇ ತೋರಿಸಿಲ್ಲ. ಅಷ್ಟಕ್ಕೂ ಇಂತಹ ಸಂದರ್ಭದಲ್ಲಿ ತಕ್ಷಣದ ಕ್ರಮಕ್ಕೆ ಅಂದರೆ ಜನಸಾಮಾನ್ಯರ ಮೇಲೆ ಯಾವುದೇ ರೀತಿಯ ಹೆಚ್ಚಿನ ಹೊರೆ ಬೀಳದ ರೀತಿಯಲ್ಲಿ ಮಾರ್ಕೆಟ್ ನಿಯಂತ್ರಣವನ್ನು ಸರ್ಕಾರವು ಖುದ್ದಾಗಿ ಮಾಡಬೇಕಿತ್ತು. ಅರಬ್ ರಾಷ್ಟ್ರಗಳ ಪೈಕಿ ಕೆಲವು ರಾಷ್ಟ್ರಗಳು ಈ ಕೆಲಸವನ್ನು ನಾಲ್ಕು ದಿನಗಳ ಹಿಂದೆಯೇ ಮಾಡಿವೆ. ಯಾವುದೇ ಅಗತ್ಯ ವಸ್ತುಗಳ ಮೇಲಿನ ದರ ಏರಿಸದಂತೆ ಕಟ್ಟುನಿಟ್ಟಿನ ಆದೇಶವನ್ನು ಆ ದೇಶದ ಉದ್ಯಮಿಗಳಿಗೆ ವ್ಯಾಪಾರಸ್ಥರಿಗೆ ನೀಡಿದ್ದಾರೆ. ಆ ದೇಶವು ನೀಡುವ ಆದೇಶವನ್ನು, ಅಲ್ಲಿನ ವ್ಯಾಪಾರಸ್ಥರು ಉದ್ಯಮಿಗಳು ಪಾಲಿಸುವಂತೆ ನೋಡಿಕೊಳ್ಳುತ್ತಾರೆ ಅದು ಕೂಡ ಮುಖ್ಯ ಎನಿಸಿಕೊಳ್ಳುತ್ತದೆ.

ನಮ್ಮ ದೇಶದ ಸರ್ಕಾರಗಳಿಂದಲೂ ನಾವು ಇಂಥವುದೇ ನಡೆಯನ್ನು ನಿರೀಕ್ಷಿಸುವುದು ತಪ್ಪಲ್ಲ ತಾನೇ? ದುರ್ದೈವ ಎಂದರೆ, ಇಂತಹ ಮಾತನ್ನು ಆಡಿದರೆ ನಮ್ಮಲ್ಲಿ ಸರ್ಕಾರದ ಪರವಾಗಿ ನಿಂತ ಕೆಲವು ನಾಗರಿಕರು ಸರ್ಕಾರದ ನಿರ್ಧಾರವೇ ಸರಿ ಅನ್ನುವ ರೀತಿಯಲ್ಲಿ ವಾದ ಮಾಡುತ್ತ ನಾಗರಿಕರ ಮೇಲಿನ ಹೊರೆಯನ್ನು ಸಮರ್ಥಿಸಿ ಕೊಳ್ಳುವ ಮೂಲಕ ಸರ್ಕಾರಕ್ಕೆ ಬಿಸಿ ತಟ್ಟದಂತೆಯೂ ನೋಡಿಕೊಳ್ಳುತ್ತಾರೆ. ಇಂತಹ ವಿಚಾರದಲ್ಲಿ ದೇಶದ ನಾಗರಿಕರು ಒಟ್ಟಾಗಿ ಸರ್ಕಾರವನ್ನು ನಾಗರಿಕರ ಪರ ಸರ್ಕಾರವನ್ನಾಗಿಸುವ ನಿಟ್ಟಿನಲ್ಲಿ ಸಾಗಬೇಕಿತ್ತು. ಆದರೆ ಅದು ನಮ್ಮಲ್ಲಿ ಸಾಧ್ಯವಾಗುತ್ತಿಲ್ಲ ಜನರನ್ನು ಆಳುವ ವರ್ಗವು ಉದ್ಯಮಿಗಳ ಅಥವಾ ಹಲವು ಉದ್ಯಮ ಸ್ನೇಹಿ ಮಾಧ್ಯಮಗಳ ಸಹಾಯದಿಂದ ಸಾಮಾನ್ಯ ಜನರನ್ನು ಯಾವತ್ತೂ ಒಂದಾಗದಂತೆ ವಿಭಜಿಸಿಯಾಗಿದೆ. ಈ ವಿಭಜನೆಯ ಕಾರಣದಿಂದಾಗಿ ನಮ್ಮ ದೇಶದ ಸರ್ಕಾರಗಳು ಯಾವ ಅಂಜಿಕೆಯೂ ಇಲ್ಲದೆ ತಮಗೆ ಹೇಗೆ ಬೇಕೋ ಹಾಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಆಡಳಿತವನ್ನು ನಡೆಸುತ್ತಾರೆ. 

ದೇಶದಲ್ಲಿ ಒಂದು ತಿಂಗಳಿಗಾಗುವಷ್ಟು ತೈಲಗಳು ಸ್ಟಾಕ್ ಇವೆ. ಅದು ಎಲ್ಲಾ ದೇಶದಲ್ಲೂ ಇದ್ದೇ ಇರುತ್ತದೆ. ಹಾಗಿರುವಾಗ ಆ ಸ್ಟಾಕುಗಳ ಮೇಲಿನ ದರವನ್ನು ಹೆಚ್ಚಿಸಲು ಅವಕಾಶ ಇರಬಾರದು. ಆದ್ರೂ ತೈಲೋದ್ಯಮಿಗಳು, ಅದನ್ನು ಯಾವುದೇ ಕ್ಷಣದಲ್ಲಾದರೂ ಏರಿಸುತ್ತಾರೆ. ಈ ಬಗ್ಗೆ ಆಳುವವರು ಮಾತನಾಡುವುದಿಲ್ಲ ಆಳುವವರನ್ನು ಪ್ರಶ್ನಿಸಬೇಕಾದ ವಿರೋಧಪಕ್ಷದವರು ಗಂಭೀರವಾಗಿ ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ. ಹಾಗಾಗಿ ನಮ್ಮ ಜನರ ಮೇಲಿನ ಹೊರೆಯನ್ನು ಇಳಿಸುವ ಪ್ರಯತ್ನ ಬೇಡ, ಹೊರಿಸುವ ವಿಚಾರಧಲ್ಲಾದರೂ ಸರ್ಕಾರ ಅಂಕುಶ ಇಟ್ಟುಕೊಳ್ಳದೆ ಇರುವಂತದ್ದು ದುರ್ದೈವ. ಇವೆಲ್ಲವನ್ನು ಉದ್ಯಮ ಮಾಫಿಯಾ ನಿಯಂತ್ರಿಸುತ್ತಿದೆ ಅನ್ನುವುದಕ್ಕೆ ಇದಕ್ಕಿಂತಲೂ ದೊಡ್ಡ ಉದಾಹರಣೆಯೇ ಬೇಕಿಲ್ಲ ನೋಡಿ.

ಈಗಾಗಲೇ ಇರಾನ್ ಅಮೆರಿಕ ಇಸ್ರೇಲ್ ನಡುವಿನ ಕಾಳಗ ಎಂಟನೆಯ  ದಿನಕ್ಕೆ ಕಾಲಿಟ್ಟಿದೆ. ನಮ್ಮ ದೇಶಕ್ಕೆ ಇರಾನ್ ದೇಶದ ತೈಲ ಅತ್ಯವಶ್ಯಕ. ಈಗ ಅದಕ್ಕೆ ಈ ಕ್ಷಣದ ತಡೆ ಬಿದ್ದಿದೆ. ಕೇವಲ ಎಂಟನೇ ದಿನದಲ್ಲಿಯೇ ತೈಲ ಬೆಲೆಯಲ್ಲಿ ಏರಿಕೆಯೂ ಆಗಿದೆ. ಗ್ಯಾಸ್ ದರ ಏರಿಕೆ ಕಂಡಿದೆ. ಇದರ ಪರಿಣಾಮ, ಅಗತ್ಯ ವಸ್ತುಗಳ ಬೆಲೆಯು ಹೆಚ್ಚಾಗಲಿದೆ ಎನ್ನುವುದರಲ್ಲಿ  ಎರಡು ಮಾತೇ ಇಲ್ಲ. ಒಂದು ವಾರದಿಂದ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದೆ ಕೂಡ. ಆದರೆ ಸರ್ಕಾರವು ಮಾತ್ರ ಈ ವಿಚಾರದಲ್ಲಿ ಆರ್ಥಿಕತೆಯ ಪರಿಣಾಮ ಬೀರದ ಹಾಗೆ ಯಾವ ರೀತಿ ನಿಭಾಯಿಸಬೇಕು ಅನ್ನುವುದರ ಬಗ್ಗೆ ಗಂಭೀರ  ಚಿಂತನೆ ಮಾಡದಿರುವುದು ಮೇಲ್ನೋಟಕ್ಕೆ  ಕಂಡುಬರುತ್ತದೆ. ಈ ಸಂದರ್ಭದಲ್ಲಿ ನಾಗರಿಕರ ಪರವಾಗಿ ಹಾಗೂ ಮಾರ್ಕೆಟ್ ನಿಯಂತ್ರಣ ಮಾಡುವವರ ಮೇಲೆ ಕಣ್ಣಿಡುವ ಕೆಲಸ ಜರೂರ್ ಆಗಿ ಆಗಬೇಕಿತ್ತು , ಅದು ಯಾವುದು ಇಲ್ಲಿ ಆಗಿಲ್ಲ ಅನ್ನೋದು, ಸರ್ಕಾರದ ಕಡೆಯಿಂದ ಈ ವಿಚಾರದಲ್ಲಿ ಯಾವುದೇ ರೀತಿಯ ತಿಳುವಳಿಕೆಯಾಗಲಿ, ಆದೇಶ ಮಾಡಿದ್ದಾಗಲಿ ಕಾಣದೆ ಇರುವಂತದ್ದನ್ನು ನಾವು ನೋಡಬಹುದು. 

ಈಗಲೂ ಕಾಲ ಮಿಂಚಿಲ್ಲ ಸರ್ಕಾರವು ಜನಸಾಮಾನ್ಯರ ಮೇಲೆ ಹೊರೆ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಈಗಾಗಲೇ ದೇಶದ ಜನರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಆದಾಯದಲ್ಲಿ ಸ್ವಲ್ಪವೂ ಹೆಚ್ಚಾಗಿಲ್ಲ ಅನ್ನುವ ಕೊರಗು ಕಳೆದ ಎರಡು ಮೂರು ವರ್ಷದಿಂದ ಇರುವುದು ಗೌಪ್ಯ ವಿಚಾರವಲ್ಲ. ಆದರೆ ಕಳೆದ ಎರಡು ಮೂರು ವರ್ಷದಲ್ಲಿ ಜನರ ಮೇಲೆ ಹೊರೆಯಂತು ಆಗಾಗ ಬೀಳುತ್ತಲೇ ಇದೆ.  ಜನರ ಆದಾಯದಲ್ಲಿ ಏರಿಕೆ ಕಾಣದೆ ಇರುವಾಗ ಅವರ ಮೇಲಿನ ಹೊರೆ ಹೆಚ್ಚಾಗದಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯ ಕರ್ತವ್ಯವಾಗುತ್ತದೆ. ಇಷ್ಟರಲ್ಲಾಗಲೇ ಬೆಲೆ ಏರಿಕೆಯ ಬಿಸಿಯಿಂದ ಸಾಕಷ್ಟು ನಲಿಗಿರುವ ನಾಗರಿಕರಿಗೆ ಇನ್ನೊಮ್ಮೆ ಬೆಲೆ ಏರಿಕೆಯ ಪೆಟ್ಟನ್ನು ಕೊಡಬೇಡಿ ಎಂಬ ಮಾತುಗಳು ನಾಗರಿಕ ಸಮಾಜದ ಮುಖಂಡರುಗಳಿಂದ ಕೇಳಿಬರುತ್ತಿವೆ

COMMENTS

Login with Gmail to comment

ಇನ್ನಷ್ಟು ಸುದ್ದಿ

ಹೊಟ್ಟೆಪಾಡಿಗಾಗಿ ಬಂದ ಕಾರ್ಮಿಕನ ಜೀವ ರೋಡ್ ರೋಲರ್ ಹರಿದು ರಸ್ತೆಯಲ್ಲೇ ಅಂತ್ಯ…
ಸಾರ್ವಜನಿಕ ಸ್ಥಳದಲ್ಲಿ ಕೈಕೈ ಮಿಲಾಯಿಸಿ ಜಗಳ ಮಾಡಿದ್ರೇ ಹುಷಾರ್…!
War update-ಕಂಪ್ಲೀಟ್ ಡೀಟೇಲ್ಸ್ …ಮುಂದೇನು? ceasefire ಮುಂದುವರಿಯುತ್ತದೆಯಾ?ಶಾಂತಿ ಅಥವಾ ಸಂಘರ್ಷ? ಮುಂದಿನ ಕೆಲ ದಿನಗಳು ವಿಶ್ವದ ಭವಿಷ್ಯ ತೀರ್ಮಾನಿಸುತ್ತದೆ.
Maths hate ಮಾಡ್ತಿರಾ ? ಹಾಗಾದ್ರೆ ಈ ವರದಿ ನೋಡಿ ಸಮಸ್ಯೆ ನಿಮ್ಮಲ್ಲಿಲ್ಲ … research ಹೇಳುತ್ತೆ ಸಂಖ್ಯೆಗಳಲ್ಲಿ ಇದೆ!”
ವಿಶ್ವ ಸಂಸ್ಥೆಯು ಯಾವ ಪುರುಷಾರ್ಥಕ್ಕೆ? ಬಲವರ್ಧನೆಯ  ಅಗತ್ಯತೆ
ಆರೋಪಿ ಸಮೀರ್ ಮುಲ್ಲಾ ಸ್ಫೋಟಕ ಹೇಳಿಕೆ-ಖುಷಿ ಒಳ್ಳೆ ಹುಡುಗಿ-🔥 ಹುಬ್ಬಳ್ಳಿ ಲವ್ ಜಿಹಾದ್ ಅಲ್ಲ ಎಂದ ಪೊಲೀಸರು : ಇದೀಗ ಹೊಸ ಟ್ವಿಸ್ಟ್!
ವರದಕ್ಷಿಣ ಪ್ರಕರಣ:5.5 ತಿಂಗಳ ಮಗುವಿಗೂ ದೈಹಿಕ ಹಿಂಸೆ….!
ರಾಜ್ಯದ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಾಗಿ ಉನ್ನತೀಕರಿಸಲು 3900 ಕೋಟಿ ಮೀಸಲು
ಕೊನೆಗೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಿತೀಶ್ ಕುಮಾರ್
“ಗ್ಯಾರಂಟಿ “ಹಣದ ಮೇಲೆ ಆಯೋಗದ ಕಣ್ಣು: ಸಿಎಂ ಸಿಡಿಮಿಡಿ ..ರಾಜಕೀಯ ಕಿಡಿ!
ಭಾರತ ಮುಸ್ಲಿಂ ದೇಶವಾಗುವುದೇ?- ನಾಳೆ ಪುಸ್ತಕ ಬಿಡುಗಡೆಯ ಕಾರ್ಯಕ್ರಮ
ಮೂಡಬಿದ್ರೆ: ಅಕ್ರಮ ಜಾನುವಾರು ಸಾಗಾಟ -ಆರೋಪಿಗಳ ಬಂಧನ, ವಾಹನ ಹಾಗೂ ಕರು ವಶಕ್ಕೆ.
ಆಮಾದ್ಮಿ ಪಕ್ಷದ ಏಳು ಸಂಸದರು ಬಿಜೆಪಿಯ ತೆಕ್ಕೆಗೆ ರೈಟೋ?  ರಾಂಗೋ?
Trump ಮಾತಿಗೆ Iran ಸಂಸತ್ ಸ್ಪೀಕರ್‌ನ ಕಠಿಣ ಸಂದೇಶ ವಿಶ್ವದ ಗಮನ ಸೆಳೆದಿದೆ!
ಜಸ್ಟ್ one click ನಲ್ಲೇ ಎಲ್ಲಾ ಸರ್ಟಿಫಿಕೇಟ್…!2026–27ರಿಂದ ಅಂಕಪಟ್ಟಿ ಹಾರ್ಡ್ ಕಾಪಿ ಇಲ್ಲ..
ಗ್ಯಾಸ್ ಅಭಾವ ಮತ್ತು ಬೆಲೆ ಏರಿಕೆ, ಸುಳ್ಳು ಎನ್ನುತ್ತಿದೆ-HPCL
ಉಡುಪಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಾನೂನುಬಾಹಿರ ಚಟುವಟಿಕೆ
₹3 ಕೋಟಿ ಹೂಡಿಕೆ ಮಾಡಿದ ಶಾಲೆಗೀಗ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಮಾತನಾಡುವ ಸುಂದರಿ “ಐರಿಸ್” ಮೇಡಂ…ಸರ್ಕಾರಿ ಶಾಲೆ ನೋಡಿ ದೇಶವೇ ಶಾಕ್!
ಪ್ರತೀಕಾರದ ದಾಳಿಗೆ ‘ ರೌಡಿಶೀಟರ್ ಟ್ಯಾಬ್ಲೆಟ್’ ಆರೀಫ್ ಖತಂ .!
ಮೋದಿ ಅವರ ನಿರ್ಧಾರಗಳು“ದೀರ್ಘಕಾಲೀನ ಅಭಿವೃದ್ಧಿಗೆ ಜವಾಬ್ದಾರಿಯುತ ನೀತಿಗಳು” ಆತಂಕದ ಸೂಚನೆ ಅಲ್ಲ-ಎಸ್.ಎಸ್. ನಾಯಕ್
ಮಂಗಳೂರು ಸಿಟಿ ಪೊಲೀಸರ ಭರ್ಜರಿ ಬೇಟೆ – ನಿಷೇಧಿತ ಎಂಡಿಎಂ, ಗಾಂಜಾ ಮರಾಟಗಾರರ ಬಂಧನ
ಹಾರರ್ ಸಿನಿಮಾ ಸೀನ್ ಅಂತ ಅನಿಸ್ತು… ಆದರೆ ಇದು ನಿಜ ಘಟನೆ! ಟಾಯ್ಲೆಟ್ ಒಳಗಿಂದ ತಲೆ ಎತ್ತಿದ ವಿಷದ ರಾಜ…
ಎಂಡೋಸಲ್ಫಾನ್ ಸಂತ್ರಸ್ತರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರ
ಘರ್ಷಣೆಗಳ ನಡುವೆಯೂ ಜನರ ಮತದ ಹಕ್ಕು ಅಚಲ…ಸಂಕ್ಷಿಪ್ತ ನೋಟ..
ಮಾಜಿ ಸಚಿವರಿಂದ ಮಂಗಳೂರು ವೈಭವಕ್ಕೆ ಬೃಹತ್ ಕೊಡುಗೆ
ಕಾಂಗೋದಲ್ಲಿ ಎಬೋಲಾ ಅಟ್ಟಹಾಸ:ಜಗತ್ತಿಗೆ ಮತ್ತೆ ಸಾಂಕ್ರಾಮಿಕ ಭೀತಿಯ ಗಂಟೆ..!
ವಿಟ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಯಲ್ಲಿ ಗಲಾಟೆ:
ಕುತ್ತಾರಿನಲ್ಲಿ ಸ್ಪೀಕರ್‌ನ್ನೇ ಜನರು ಸುತ್ತುವರಿದ ಶಾಕಿಂಗ್ ದೃಶ್ಯ! ಏನಾಯ್ತು ನಿಜವಾಗಿಯೂ?ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿರುವ ಕುತ್ತಾರು ವಾದವಿವಾದ!
ಜಮೀರ್ ಅಹಮದ್ ಉಚ್ಛಾಟನೆಗೆ ಕ್ಷಣಗಣನೆ
ಇಂಧನ ಬೆಲೆ ಏರಿಕೆ ಹೊಡೆತ Air India ಹೊಸ ತೀರ್ಮಾನ ಶಾಕಿಂಗ್ …!