📍 Karavali Maruta
  • LOGIN
  • BREAKING
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ ದಯಾಮರಣ ಕೇಳಿದ್ದ ತುಮಕೂರು ರಾಬಿಯಾ ಇನ್ನಿಲ್ಲ …!ಪರಮೇಶ್ವರ್ ಮುಂದೆ ಕಣ್ಣೀರಿಟ್ಟಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ವಿಷಸೇವಿಸಿ ಕೊನೆಯುಸಿರು…‘ಮನೆ’ ಸಿಕ್ಕರೂ ಬದುಕು ಉಳಿಯಲಿಲ್ಲ! ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್! ಮಹಿಳಾ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ ವಾಜಪೇಯಿ ಸರ್ಕಾರದ  ಕನಸಿನ ಯೋಜನೆ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಸಹಿ ಸಂಗ್ರಹ ಅಭಿಯಾನ
    ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಎಲ್ಪಿಜಿ ಗ್ಯಾಸ್ ದರದಲ್ಲಿ ಏರಿಕೆ:  ಮಧ್ಯಮ ವರ್ಗದವರಲ್ಲಿ ಹತಾಶೆ

    ನಿರೀಕ್ಷಿತ ಬೆಲೆ ಏರಿಕೆಯೇ ಇದು. ತೈಲ ಹಾಗೂ ಗ್ಯಾಸ್ ದರ ಏರುತ್ತದೆ ಎಂಬ ನಿರ್ಧಾರಕ್ಕೆ ಈಗಾಗಲೇ ಸಾಮಾನ್ಯ ಜನರು ಬಂದುಬಿಟ್ಟಿದ್ದರು. ಈ ದರ ಏರಿಕೆಯು, ಇದಕ್ಕೆ ರಿಲೇಟೆಡ್ ಆಗಿರುವ ಅನೇಕ ವಸ್ತುವಿನ ಬೆಲೆ ಏರಿಕೆಗೆ ಕಾರಣವಾಗಲಿದೆ ಅನ್ನುವುದು ಸಹ ಇಲ್ಲಿ ಗಮನಿಸಬೇಕಾದ ಸೂಕ್ಷ್ಮ ವಿಚಾರವಾಗಿದೆ. ಗ್ಯಾಸ್ ದರ ಏರಿಕೆಯಿಂದ ಮುಖ್ಯವಾಗಿ ಮಧ್ಯಮವರ್ಗದವರ ಮುಖದಲ್ಲಿ ಕಪ್ಪು ಕಾಣಿಸಿಕೊಳ್ಳುತ್ತಿದೆ. ಅವರ ಮುಖದಲ್ಲಿ ಸ್ಪಷ್ಟವಾಗಿ ಹತಾಶೆಯ ಲಕ್ಷಣ ಗೋಚರವಾಗುತ್ತಿದೆ.

    ಮಧ್ಯ ಪ್ರಾಚ್ಯದ ಪ್ರಾಂತ್ಯಗಳಲ್ಲಿ ಯುದ್ಧದ ಪ್ರಾರಂಭಿಕ  ಕಹಳೆಯು ಈಗಷ್ಟೇ ಮೊಳಗಿದೆ. ಆಗಲೇ ತೈಲ ಬೆಲೆಯಲ್ಲಿ ಏರಿಕೆ ಕಂಡಿದೆ ಗ್ಯಾಸ್ ದರವು ಸಹ 60 ರಿಂದ 70 ರೂ ಏರಿಕೆಯಾಗಿದೆ.

    ನಮ್ಮ ದೇಶದ ಸರ್ಕಾರ ಇಂತಹ ಸಂದರ್ಭದಲ್ಲಿ ಒಂದಷ್ಟು ಕಟ್ಟು ನಿಟ್ಟಿನ ನಿರ್ಧಾರ ಹಾಗೂ ಕ್ರಮ ಎರಡನ್ನೂ ಮಾಡಬೇಕಿತ್ತು. ಆದರೆ ಆ ಕೆಲಸವನ್ನು ಈ ಕ್ಷಣದವರೆಗೆ ನಮ್ಮ ದೇಶದ ಸರ್ಕಾರಗಳು ಮಾಡಲು ಆಸಕ್ತಿಯನ್ನೇ ತೋರಿಸಿಲ್ಲ. ಅಷ್ಟಕ್ಕೂ ಇಂತಹ ಸಂದರ್ಭದಲ್ಲಿ ತಕ್ಷಣದ ಕ್ರಮಕ್ಕೆ ಅಂದರೆ ಜನಸಾಮಾನ್ಯರ ಮೇಲೆ ಯಾವುದೇ ರೀತಿಯ ಹೆಚ್ಚಿನ ಹೊರೆ ಬೀಳದ ರೀತಿಯಲ್ಲಿ ಮಾರ್ಕೆಟ್ ನಿಯಂತ್ರಣವನ್ನು ಸರ್ಕಾರವು ಖುದ್ದಾಗಿ ಮಾಡಬೇಕಿತ್ತು. ಅರಬ್ ರಾಷ್ಟ್ರಗಳ ಪೈಕಿ ಕೆಲವು ರಾಷ್ಟ್ರಗಳು ಈ ಕೆಲಸವನ್ನು ನಾಲ್ಕು ದಿನಗಳ ಹಿಂದೆಯೇ ಮಾಡಿವೆ. ಯಾವುದೇ ಅಗತ್ಯ ವಸ್ತುಗಳ ಮೇಲಿನ ದರ ಏರಿಸದಂತೆ ಕಟ್ಟುನಿಟ್ಟಿನ ಆದೇಶವನ್ನು ಆ ದೇಶದ ಉದ್ಯಮಿಗಳಿಗೆ ವ್ಯಾಪಾರಸ್ಥರಿಗೆ ನೀಡಿದ್ದಾರೆ. ಆ ದೇಶವು ನೀಡುವ ಆದೇಶವನ್ನು, ಅಲ್ಲಿನ ವ್ಯಾಪಾರಸ್ಥರು ಉದ್ಯಮಿಗಳು ಪಾಲಿಸುವಂತೆ ನೋಡಿಕೊಳ್ಳುತ್ತಾರೆ ಅದು ಕೂಡ ಮುಖ್ಯ ಎನಿಸಿಕೊಳ್ಳುತ್ತದೆ.

    ನಮ್ಮ ದೇಶದ ಸರ್ಕಾರಗಳಿಂದಲೂ ನಾವು ಇಂಥವುದೇ ನಡೆಯನ್ನು ನಿರೀಕ್ಷಿಸುವುದು ತಪ್ಪಲ್ಲ ತಾನೇ? ದುರ್ದೈವ ಎಂದರೆ, ಇಂತಹ ಮಾತನ್ನು ಆಡಿದರೆ ನಮ್ಮಲ್ಲಿ ಸರ್ಕಾರದ ಪರವಾಗಿ ನಿಂತ ಕೆಲವು ನಾಗರಿಕರು ಸರ್ಕಾರದ ನಿರ್ಧಾರವೇ ಸರಿ ಅನ್ನುವ ರೀತಿಯಲ್ಲಿ ವಾದ ಮಾಡುತ್ತ ನಾಗರಿಕರ ಮೇಲಿನ ಹೊರೆಯನ್ನು ಸಮರ್ಥಿಸಿ ಕೊಳ್ಳುವ ಮೂಲಕ ಸರ್ಕಾರಕ್ಕೆ ಬಿಸಿ ತಟ್ಟದಂತೆಯೂ ನೋಡಿಕೊಳ್ಳುತ್ತಾರೆ. ಇಂತಹ ವಿಚಾರದಲ್ಲಿ ದೇಶದ ನಾಗರಿಕರು ಒಟ್ಟಾಗಿ ಸರ್ಕಾರವನ್ನು ನಾಗರಿಕರ ಪರ ಸರ್ಕಾರವನ್ನಾಗಿಸುವ ನಿಟ್ಟಿನಲ್ಲಿ ಸಾಗಬೇಕಿತ್ತು. ಆದರೆ ಅದು ನಮ್ಮಲ್ಲಿ ಸಾಧ್ಯವಾಗುತ್ತಿಲ್ಲ ಜನರನ್ನು ಆಳುವ ವರ್ಗವು ಉದ್ಯಮಿಗಳ ಅಥವಾ ಹಲವು ಉದ್ಯಮ ಸ್ನೇಹಿ ಮಾಧ್ಯಮಗಳ ಸಹಾಯದಿಂದ ಸಾಮಾನ್ಯ ಜನರನ್ನು ಯಾವತ್ತೂ ಒಂದಾಗದಂತೆ ವಿಭಜಿಸಿಯಾಗಿದೆ. ಈ ವಿಭಜನೆಯ ಕಾರಣದಿಂದಾಗಿ ನಮ್ಮ ದೇಶದ ಸರ್ಕಾರಗಳು ಯಾವ ಅಂಜಿಕೆಯೂ ಇಲ್ಲದೆ ತಮಗೆ ಹೇಗೆ ಬೇಕೋ ಹಾಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಆಡಳಿತವನ್ನು ನಡೆಸುತ್ತಾರೆ. 

    ದೇಶದಲ್ಲಿ ಒಂದು ತಿಂಗಳಿಗಾಗುವಷ್ಟು ತೈಲಗಳು ಸ್ಟಾಕ್ ಇವೆ. ಅದು ಎಲ್ಲಾ ದೇಶದಲ್ಲೂ ಇದ್ದೇ ಇರುತ್ತದೆ. ಹಾಗಿರುವಾಗ ಆ ಸ್ಟಾಕುಗಳ ಮೇಲಿನ ದರವನ್ನು ಹೆಚ್ಚಿಸಲು ಅವಕಾಶ ಇರಬಾರದು. ಆದ್ರೂ ತೈಲೋದ್ಯಮಿಗಳು, ಅದನ್ನು ಯಾವುದೇ ಕ್ಷಣದಲ್ಲಾದರೂ ಏರಿಸುತ್ತಾರೆ. ಈ ಬಗ್ಗೆ ಆಳುವವರು ಮಾತನಾಡುವುದಿಲ್ಲ ಆಳುವವರನ್ನು ಪ್ರಶ್ನಿಸಬೇಕಾದ ವಿರೋಧಪಕ್ಷದವರು ಗಂಭೀರವಾಗಿ ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ. ಹಾಗಾಗಿ ನಮ್ಮ ಜನರ ಮೇಲಿನ ಹೊರೆಯನ್ನು ಇಳಿಸುವ ಪ್ರಯತ್ನ ಬೇಡ, ಹೊರಿಸುವ ವಿಚಾರಧಲ್ಲಾದರೂ ಸರ್ಕಾರ ಅಂಕುಶ ಇಟ್ಟುಕೊಳ್ಳದೆ ಇರುವಂತದ್ದು ದುರ್ದೈವ. ಇವೆಲ್ಲವನ್ನು ಉದ್ಯಮ ಮಾಫಿಯಾ ನಿಯಂತ್ರಿಸುತ್ತಿದೆ ಅನ್ನುವುದಕ್ಕೆ ಇದಕ್ಕಿಂತಲೂ ದೊಡ್ಡ ಉದಾಹರಣೆಯೇ ಬೇಕಿಲ್ಲ ನೋಡಿ.

    ಈಗಾಗಲೇ ಇರಾನ್ ಅಮೆರಿಕ ಇಸ್ರೇಲ್ ನಡುವಿನ ಕಾಳಗ ಎಂಟನೆಯ  ದಿನಕ್ಕೆ ಕಾಲಿಟ್ಟಿದೆ. ನಮ್ಮ ದೇಶಕ್ಕೆ ಇರಾನ್ ದೇಶದ ತೈಲ ಅತ್ಯವಶ್ಯಕ. ಈಗ ಅದಕ್ಕೆ ಈ ಕ್ಷಣದ ತಡೆ ಬಿದ್ದಿದೆ. ಕೇವಲ ಎಂಟನೇ ದಿನದಲ್ಲಿಯೇ ತೈಲ ಬೆಲೆಯಲ್ಲಿ ಏರಿಕೆಯೂ ಆಗಿದೆ. ಗ್ಯಾಸ್ ದರ ಏರಿಕೆ ಕಂಡಿದೆ. ಇದರ ಪರಿಣಾಮ, ಅಗತ್ಯ ವಸ್ತುಗಳ ಬೆಲೆಯು ಹೆಚ್ಚಾಗಲಿದೆ ಎನ್ನುವುದರಲ್ಲಿ  ಎರಡು ಮಾತೇ ಇಲ್ಲ. ಒಂದು ವಾರದಿಂದ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದೆ ಕೂಡ. ಆದರೆ ಸರ್ಕಾರವು ಮಾತ್ರ ಈ ವಿಚಾರದಲ್ಲಿ ಆರ್ಥಿಕತೆಯ ಪರಿಣಾಮ ಬೀರದ ಹಾಗೆ ಯಾವ ರೀತಿ ನಿಭಾಯಿಸಬೇಕು ಅನ್ನುವುದರ ಬಗ್ಗೆ ಗಂಭೀರ  ಚಿಂತನೆ ಮಾಡದಿರುವುದು ಮೇಲ್ನೋಟಕ್ಕೆ  ಕಂಡುಬರುತ್ತದೆ. ಈ ಸಂದರ್ಭದಲ್ಲಿ ನಾಗರಿಕರ ಪರವಾಗಿ ಹಾಗೂ ಮಾರ್ಕೆಟ್ ನಿಯಂತ್ರಣ ಮಾಡುವವರ ಮೇಲೆ ಕಣ್ಣಿಡುವ ಕೆಲಸ ಜರೂರ್ ಆಗಿ ಆಗಬೇಕಿತ್ತು , ಅದು ಯಾವುದು ಇಲ್ಲಿ ಆಗಿಲ್ಲ ಅನ್ನೋದು, ಸರ್ಕಾರದ ಕಡೆಯಿಂದ ಈ ವಿಚಾರದಲ್ಲಿ ಯಾವುದೇ ರೀತಿಯ ತಿಳುವಳಿಕೆಯಾಗಲಿ, ಆದೇಶ ಮಾಡಿದ್ದಾಗಲಿ ಕಾಣದೆ ಇರುವಂತದ್ದನ್ನು ನಾವು ನೋಡಬಹುದು. 

    ಈಗಲೂ ಕಾಲ ಮಿಂಚಿಲ್ಲ ಸರ್ಕಾರವು ಜನಸಾಮಾನ್ಯರ ಮೇಲೆ ಹೊರೆ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಈಗಾಗಲೇ ದೇಶದ ಜನರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಆದಾಯದಲ್ಲಿ ಸ್ವಲ್ಪವೂ ಹೆಚ್ಚಾಗಿಲ್ಲ ಅನ್ನುವ ಕೊರಗು ಕಳೆದ ಎರಡು ಮೂರು ವರ್ಷದಿಂದ ಇರುವುದು ಗೌಪ್ಯ ವಿಚಾರವಲ್ಲ. ಆದರೆ ಕಳೆದ ಎರಡು ಮೂರು ವರ್ಷದಲ್ಲಿ ಜನರ ಮೇಲೆ ಹೊರೆಯಂತು ಆಗಾಗ ಬೀಳುತ್ತಲೇ ಇದೆ.  ಜನರ ಆದಾಯದಲ್ಲಿ ಏರಿಕೆ ಕಾಣದೆ ಇರುವಾಗ ಅವರ ಮೇಲಿನ ಹೊರೆ ಹೆಚ್ಚಾಗದಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯ ಕರ್ತವ್ಯವಾಗುತ್ತದೆ. ಇಷ್ಟರಲ್ಲಾಗಲೇ ಬೆಲೆ ಏರಿಕೆಯ ಬಿಸಿಯಿಂದ ಸಾಕಷ್ಟು ನಲಿಗಿರುವ ನಾಗರಿಕರಿಗೆ ಇನ್ನೊಮ್ಮೆ ಬೆಲೆ ಏರಿಕೆಯ ಪೆಟ್ಟನ್ನು ಕೊಡಬೇಡಿ ಎಂಬ ಮಾತುಗಳು ನಾಗರಿಕ ಸಮಾಜದ ಮುಖಂಡರುಗಳಿಂದ ಕೇಳಿಬರುತ್ತಿವೆ

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿ ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕೊನೆಗೂ ಪತ್ತೆ ಹಚ್ಚಲಾಗಿದೆ.
    “ಕುನಾಲ್ ಶಾ ವಾಟ್ಸಾಪ್ ಗ್ಲೋಬಲ್ ಹೆಡ್! ಸುಂದರ್ ಪಿಚೈ, ಸತ್ಯ ನಾಡೆಲ್ಲಾ ಸಾಲಿಗೆ ಮತ್ತೊಬ್ಬ ಭಾರತೀಯನ ಸೇರ್ಪಡೆ.
    ದುಬೈ ಕನಸು… ಜೈಲು ವಾಸ್ತವ!ಡ್ರಗ್ ಮಾಫಿಯಾದ ಗುರಿಯೇ ಯುವಕರು..!!ಭವಿಷ್ಯ ಕಳೆದುಕೊಳ್ಳುವ ಮುನ್ನ ಎಚ್ಚರ!
    “ನನ್ನ ಮಗಳನ್ನೂ ಅದೇ ಕೋಟೆಯಿಂದ ಕೆಳಗೆ ತಳ್ಳಿ!” – ನಿಶ್ಚಿತ ವರನ ಹತ್ಯೆಗೈದ ಸಿಯಾ ಹೆತ್ತವರ ಆಕ್ರೋಶದ ಹೇಳಿಕೆ
    ಇರಾನ್ ದಾಳಿಗೆ ಬೆಂಜಿಮನೇತನ್ಯಹೋ ಕೊಲ್ಲಲ್ಪಟ್ಟಿದ್ದಾರಾ?
    ದೆಹಲಿ ಹೋಟೆಲ್ ಭೀಕರ ಅಗ್ನಿ ದುರಂತ!ಹೊತ್ತಿ ಉರಿದ ಹೋಟೆಲ್‌ನಲ್ಲಿ 21 ಮಂದಿ ಸಜೀವ ದಹನ..
    ಪ್ರೀತಿಸಿ ಓಡಿಹೋದ ಸೇಡಿನ ಬೆಂಕಿಗೆ ಬಲಿಯಾದ ನಿರ್ದೋಷಿ ಅಣ್ಣ..!
    ಬೆಂಗಳೂರು ಮಾತ್ರವಲ್ಲ… ಮಂಗಳೂರಿನಿಂದಲೂ Startup ಹಾರಾಟ! ₹9.5 ಕೋಟಿಗೂ ಅಧಿಕ ಹೂಡಿಕೆಯ K-Combinatorಗೆ ಚಾಲನೆ
    ಜಾತಿ ನಿಂದನೆಗೆ ಕೋರ್ಟ್ ಹಾಕಿದ ಕಾನೂನು ಸ್ಪಷ್ಟತೆ!?
    ಪಾಕಿಸ್ತಾನದಲ್ಲಿ ಹಿಂದೂ ಯುವತಿಯ ಸಾಧನೆ
    ಅಜ್ಜಿಯ ಚಿನ್ನಕ್ಕೇ ಕನ್ನ! ಮೊಮ್ಮಗ ಅರೆಸ್ಟ್….
    2047ರ ಕನಸಿನ ಭಾರತಕ್ಕಾಗಿ ದೆಹಲಿಯಲ್ಲಿ ಮೆಗಾ ಮಂಥನ… ಏನಿದೆ ಈ ಮಾಸ್ಟರ್ ಪ್ಲಾನ್‌ನಲ್ಲಿ?
    ಪುತ್ತೂರು ಘಟನೆ ಚಾಕು ಕಂಡು ಆತಂಕ…ಏನಾಯಿತು?ತನಿಖೆಯಲ್ಲಿ ಬಯಲಾಯ್ತು ಮತ್ತೊಂದು ಸತ್ಯ!
    “ವಾಹನ ಮಾರಾಟ-RC ಬದಲಾವಣೆ  ಅಗತ್ಯ.. ಇಲ್ಲವಾದರೆ ಕಾನೂನು ಸಮಸ್ಯೆಗಳು ತಪ್ಪಿದ್ದಲ್ಲ..!” ಹೈಕೋರ್ಟ್
    ನಿಮ್ಮ ಮಾತು ಕೇಳಿ ರಾಜೀನಾಮೆ ನೀಡಿದ್ದೇನೆ. ಈಗ ನನ್ನ ಬೇಡಿಕೆ ಈಡೇರಿಸುವುದು ನಿಮ್ಮ ಸರದಿ  ಎಂದ ಸಿದ್ದರಾಮಯ್ಯ
    Side Income ಇಂದು ಆಯ್ಕೆ ಅಲ್ಲ, ಅಗತ್ಯ …ಹಣ ಗಳಿಸಿ… ನಿದ್ರೆಯಲ್ಲೂ!ಒಂದು ಸಂಬಳ ಸಾಕಾಗದ ಕಾಲ ಇದು.
    ಮನೆಯ ಲಾಕ್ ವ್ಯವಸ್ಥೆ ಇದ್ದರೂ, ಸುರಕ್ಷತೆ ಭೇದಿಸಲಾಗಿದೆ….!ಕುಟುಂಬ ದೇವಸ್ಥಾನಕ್ಕೆ -ಕಳ್ಳರು ಅದೇ ಮನೆ ಟಾರ್ಗೆಟ್..!
    ಬಿಹಾರ ದೇವಸ್ಥಾನದಲ್ಲಿ ಭೀಕರ ಕಾಲ್ತುಳಿತ: 7 ಭಕ್ತರು ಸಾವು
    ಕೇವಲ “Aunty” ಅಂತ ಅಂದಿದಕ್ಕೆ 2 ಲಕ್ಷ ದಂಡ…!
    “ಬಾಂಬ್‌ಗಿಂತ ಅಪಾಯಕಾರಿ ಅಹಂಕಾರ …! ಜಗತ್ತೇ ಕಾಯುತ್ತಿದೆ… ಮುಂದೇನು?”
    ವಿವಾಹಿತ ದಂಪತಿಗಳಿಗೆ ಜಂಟಿ ITR ವ್ಯವಸ್ಥೆ ತರಲು- ಸಂಸತ್ತಿನಲ್ಲಿ Raghav Chadha ಆಗ್ರಹ.
    ಕಾರಿಗೆ ಮಹಿಳೆ ಡಿಕ್ಕಿ..ಗುಳಿಗಜ್ಜನೆ ಕಾಪಾಡಿದ್ದ..! ಎದೆ ಜಲ್ಲೆನಿಸುವ ದೃಶ್ಯ
    ಮುದ್ದಾದ ಅವಳಿ ಹೆಣ್ಣು ಮಕ್ಕಳನ್ನು ಕತ್ತು ಸೀಳಿ ಕೊಂದ ಪಾಪಿ ಅಪ್ಪ
    ಶಾಲಾ ಶಿಕ್ಷಕಿಯರ ಹೆಸರಿನಲ್ಲಿ ಡ್ರಗ್ಸ್ ಜಾಲ ..! ತನಿಖೆಯಲ್ಲಿ ಬೆಚ್ಚಿಬೀಳಿಸುವ ಕೊಂಡಿಗಳು ಇನ್‌ಸ್ಟಾಗ್ರಾಮ್‌ನಿಂದ ಗ್ರಾಹಕರ ಸೆಳೆತ, ಗಲ್ಫ್ ನಂಬರ್ ಮೂಲಕ ಬುಕ್ಕಿಂಗ್
    ಎಷ್ಟೇ ಚಾಣಾಕ್ಷತನ ತೋರಿದರೂ, ಡಿಜಿಟಲ್ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.” AI ಸಣ್ಣ ಸುಳಿವು’ → ‘ನಿಖರ ಪತ್ತೆ’ ಜನರ ಭದ್ರತೆಗಾಗಿ ತಂತ್ರಜ್ಞಾನವೇ ಶಕ್ತಿಯುತ ಆಯುಧ ..!
     “ಮೀನುಗಾರರ ಡೀಸೆಲ್ & ಸಿಲಿಂಡರ್ ಸಮಸ್ಯೆಗೆ ಸರ್ಕಾರದ ತುರ್ತು ಹಸ್ತಕ್ಷೇಪ -ಇಂಧನ ಭರವಸೆ: ಮಂಗಳೂರು ಬಂದರಿನಲ್ಲಿ ತುರ್ತು ಕ್ರಮ”-
    ತೊಕ್ಕೊಟ್ಟು ವಿನಮ್ರ ಬಾರ್‌ನಲ್ಲಿ ತಲವಾರು ಹಿಡಿದು ದಾಂಧಲೆ!
    ಕೇಂದ್ರದ ಮೌನ ಮತ್ತು ಪ್ರಜಾಪ್ರಭುತ್ವದ ಅಣಕಕ್ಕೆ ಜಂತರ್ ಮಂತರ್‌ನಲ್ಲಿ ಧಗಧಗಿಸುತ್ತದ ನೀಟ್ (NEET) ಕಿಚ್ಚು…!
    ಆರೋಪಿ ಸಮೀರ್ ಮುಲ್ಲಾ ಸ್ಫೋಟಕ ಹೇಳಿಕೆ-ಖುಷಿ ಒಳ್ಳೆ ಹುಡುಗಿ-🔥 ಹುಬ್ಬಳ್ಳಿ ಲವ್ ಜಿಹಾದ್ ಅಲ್ಲ ಎಂದ ಪೊಲೀಸರು : ಇದೀಗ ಹೊಸ ಟ್ವಿಸ್ಟ್!
    ಎಚ್ಚರ… ನಿಮ್ಮಸುತ್ತಮುತ್ತ ಏನು ನಡೆಯುತ್ತಿದೆ ಗೊತ್ತಿರಲಿ! 🚨Be Aware… Stay Alert… Save Youth!