📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಕನಕಪುರ ಬಂಡೆ ಬಿಜೆಪಿಗೆ ಎಂಬ ಬೋಗಸ್ ಸುದ್ದಿ

ಕನಕಪುರ ಬಂಡೆ ಖ್ಯಾತಿಯ ಕರ್ನಾಟಕ ರಾಜ್ಯ ಉಪ ಮುಖ್ಯಮಂತ್ರಿ ಆಗೋ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆಂಬ ಮಾಹಿತಿಯು ಫೋಟೋ ಸಹಿತ ಸಾಮಾಜಿಕ ತಾಣದಲ್ಲಿ ಪ್ರಕಟವಾಗಿರುವುದು ಸಾಕಷ್ಟು ಜನರಿಗೆ ಗೊಂದಲ ತರಿಸಿದೆ. ಆದರೆ ಅದು ಸತ್ಯವಲ್ಲ ಭೋಗಸ್ ಸುದ್ದಿ.

ರಾಜಕೀಯದಲ್ಲಿ, ಯಾವುದೇ ಸಂದರ್ಭ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಈ ಹಿಂದೆ, ಪ್ರಧಾನಿ ಮೋದಿ ಹಾಗೂ ಬಿಜೆಪಿಯ ಬಗ್ಗೆ ಬಹಳ ಕಠಿಣವಾಗಿ ಮಾತನಾಡುತ್ತಿದ್ದ ರಾಘವ್ ಚಡ್ಡ ಬಿಜೆಪಿಗೆ ಸೇರ್ಪಡೆಯಾಗಿದ್ದೆ  ಸಾಕ್ಷಿ.

ಆದರೆ ಡಿಕೆ ಶಿವಕುಮಾರ್ ಕಾಂಗ್ರೆಸ್ನ ಭಕ್ತ, ಕಾಂಗ್ರೆಸಿಗಾಗಿ ಸಾಕಷ್ಟು ರಿಸ್ಕ್ ತೆಗೆದುಕೊಂಡು ಕೆಲಸ ಮಾಡಿದಂತಹ ವ್ಯಕ್ತಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಭಕ್ತರಲ್ಲ. ಆದರೆ ಡಿಕೆ ಶಿವಕುಮಾರ್ ಕಾಂಗ್ರೆಸ್ ಭಕ್ತ ಎಂಬ ವಿಚಾರ ಪಕ್ಷಕ್ಕೆ ಗೊತ್ತಿದೆ. ಆದ್ರೂ ಡಿಕೆಗೆ, ಅವರ ಕೆಲಸಕ್ಕೆ ಸರಿಸಮಾನವಾದ ಸ್ಥಾನಮಾನ ಸಿಗುತ್ತಿಲ್ಲ, ಕೆಲಸವನ್ನೇ ಮಾಡದವರು ಸ್ಥಾನಮಾನ ಪಡೆದು ಆನಂದಿಸುತ್ತಿದ್ದಾರೆ ಎಂಬ ವಿಚಾರದಲ್ಲಿ ಬೇಸರ ಹೊಂದಿದ್ದಾರೆ ಎನ್ನುವುದೂ ಸತ್ಯವೇ. ಆದ್ರೂ ಪಕ್ಷದ ಹೈಕಮಾಂಡ್, ಈ ವಿಚಾರದಲ್ಲಿ ಡಿಕೆ ಜೊತೆಗೆ ನಿಲ್ಲಲೂ ಸಿದ್ದವಿಲ್ಲ ಹಾಗೆಯೇ ಡಿಕೆಯನ್ನು ಬಿಟ್ಟುಕೊಡಲೂ ಅವರಿಂದ ಆಗುತ್ತಿಲ್ಲ.

ಹೆಚ್ಚು ಕಡಿಮೆ ಕಳೆದ ಆರು ತಿಂಗಳಿನಿಂದ ನಾಯಕತ್ವ ಬದಲಾವಣೆ ಆಗಬೇಕು ಎಂಬ ನಿರೀಕ್ಷೆಯಲ್ಲಿ ಡಿಕೆ ಶಿವಕುಮಾರ್ ಇದ್ದರು. ಆದರದು ಆಗುತ್ತಿಲ್ಲ. ಸಿದ್ದರಾಮಯ್ಯನವರ ಕೈ ಮೇಲಾಗುತ್ತಿದೆ. ಹೈಕಮಾಂಡ್ ಡಿಕೆ ಶಿವಕುಮಾರ್ ವಿಚಾರದಲ್ಲಿ  ಸೇಫ್ ಜೋನ್ ಎಂದು ಭಾವಿಸಿದ್ದಾರೆ. ಡಿಕೆ, ಪಕ್ಷಕ್ಕೆ ದ್ರೋಹ ಬಗೆಯುವುದಿಲ್ಲ, ಸ್ಥಾನ ಸಿಗದಿದ್ದರೂ ಪಕ್ಷಕ್ಕೆ ಡ್ಯಾಮೇಜ್ ಮಾಡುವುದಿಲ್ಲ ಎಂಬ ಧೈರ್ಯದಲ್ಲಿ ಸಿದ್ದರಾಮಯ್ಯರನ್ನು ಮುಂದುವರೆಸುತ್ತಿದ್ದಾರೆ. ಅತ್ತ ಸಿದ್ದರಾಮಯ್ಯರವರನ್ನು ತೆಗೆದರೆ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಾರೆಂಬ ಸಂಶಯ ಹೈಕಮಾಂಡ್ಗಿದೆ. ಈ ಕಾರಣದಿಂದಾಗಿ, ಡಿಕೆ ಶಿವಕುಮಾರ್ ಅವರ ಬೇಡಿಕೆಗೆ ಹೈಕಮಾಂಡ್ ತೇಪೆ ಹಾಕುತ್ತಿದೆಯಷ್ಟೇ.  ಯಾವುದೇ ನಿರ್ಧಾರವನ್ನು ಪ್ರಕಟಿಸುತ್ತಿಲ್ಲ. ನಿರ್ಧಾರ ಪ್ರಕಟಿಸುವ ಯೋಚನೆಯಲ್ಲೂ ಅದು ಇಲ್ಲ.

ಇದರ ಮಧ್ಯೆ, ಡಿಕೆ ಶಿವಕುಮಾರ್ ಅವರಿಗೆ ಬಿಜೆಪಿ ಕಡೆಯಿಂದ ಸ್ಪಷ್ಟ ಆಹ್ವಾನ ಹೋಗಿದೆ. ನೀವು ಪಕ್ಷಕ್ಕೆ ಬನ್ನಿ, ಮುಂದಿನ ಮುಖ್ಯಮಂತ್ರಿ ನೀವೇ ಆಗುತ್ತೀರಿ ಎಂಬುದನ್ನು ನಾವು ನಿಮಗೆ ಪ್ರಾಮಿಸ್ ಮಾಡುತ್ತೇವೆ. ಸುಮ್ಮನೆ ಮುಳುಗುತ್ತಿರುವ ಹಡಗಿನಲ್ಲಿ ಯಾಕೆ ಮುಂದುವರೆಯುತ್ತಿರಿ. ಆರ್ಥಿಕವಾಗಿ ಸಾಕಷ್ಟು ಬೆಳೆದಿದ್ದೀರಿ ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದಕ್ಕೆ ಬಲಿಷ್ಠ ಸರ್ಕಾರದ ಅಗತ್ಯತೆ ಇದೆ ಏನಂತೀರಿ ಎಂಬ ಪ್ರಶ್ನೆಯನ್ನು ಡಿಕೆ ಮುಂದೆ ಇಡಲಾಗಿದೆ. ಇದೆಲ್ಲಾ ಹಳೆಯ ಸುದ್ದಿಯೂ ಆಗಿದೆ. ಆ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆದಿದೆ ಕೂಡ. ಇದನ್ನು ಸ್ವತಃ ಡಿಕೆ ಶಿವಕುಮಾರ್ ಕೂಡ ಹೇಳಿಕೊಂಡಿದ್ದಾರೆ.

ಆದರೆ ಕಾಂಗ್ರೆಸ್ ಪಕ್ಷದಲ್ಲಿ, ಡಿಕೆ ವಿಚಾರವಾಗಿ ಒಂದಷ್ಟು ಸಚಿವರು ನಡೆದುಕೊಳ್ಳುತ್ತಿರುವ ರೀತಿ ಮತ್ತು ಪಕ್ಷದ ಅಧ್ಯಕ್ಷ ಎಂಬುದನ್ನು ನೋಡದೆ ಗೌರವವನ್ನು ಕೊಡದೆ ಆಡಿಕೊಳ್ಳುತ್ತಿರುವ ರೀತಿ, ಡಿಕೆ ಮತ್ತು ಡಿಕೆ ಬೆಂಬಲಿಗರಲ್ಲಿ ಬೇಸರ ತರಿಸಿದ್ದರಲ್ಲಿ ಯಾವ ತಪ್ಪು ಇಲ್ಲ. ಈ ಹಿಂದೆ ರಾಜಣ್ಣ ಸಚಿವ ಸ್ಥಾನ ಕಳೆದುಕೊಂಡದ್ದು ಡಿಕೆ ವಿಚಾರದಲ್ಲಿ ನಡೆದುಕೊಂಡ ರೀತಿಗಲ್ಲ. ಬದಲಿಗೆ, ರಾಹುಲ್ ಗಾಂಧಿ ವಿಚಾರದಲ್ಲಿ ಮಾಡಿದ ಕಾಮೆಂಟ್ ಗಾಗಿ. ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧವಾಗಿ ಮಾತನಾಡಿದರೆ ಯಾವ ಕ್ರಮವೂ ಇಲ್ಲ ಅಂದರೆ, ಇಲ್ಲಿ ಪಕ್ಷ ಬೆಳೆಸಿದ್ದಕ್ಕೆ ಏನು ಕೊಡುಗೆ ಸಿಗುತ್ತಿದೆ ಎಂಬ ಪ್ರಶ್ನೆ ಡಿಕೆ ಬೆಂಬಲಿಗರಿಂದ ಬರುತ್ತಿರುವುದು ಸತ್ಯವೇ. ಇದೆಲ್ಲವೂ ಡಿಕೆ ಬಿಜೆಪಿಗೆ ಹೋದರು ಅಚ್ಚರಿ ಇಲ್ಲ ಎಂಬ ಮಾತುಗಳಿಗೆ ಇಂಬು ಕೊಡಬಹುದು, ಅದು ಸುಲಭವೇ?

ಹಾಲಿ ಕೆಪಿಸಿಸಿ ಅಧ್ಯಕ್ಷ ಮತ್ತು ಹಾಲಿ ಉಪಮುಖ್ಯಮಂತ್ರಿ ಅಷ್ಟು ಈಜಿಯಾಗಿ ಇನ್ನೊಂದು ಪಕ್ಷದ ತೆಕ್ಕೆಗೆ ಹೋಗಲು ಸಾಧ್ಯವೇ? ಹೋದರೆ, ಆ ಪಕ್ಷದ ಆಡಳಿತ ಬರುತ್ತದೆಯೇ? ಸಿದ್ದರಾಮಯ್ಯನವರ ಪಕ್ಷ ಬಿದ್ದು ಹೋಗುತ್ತದೆಯೇ?  ಇನ್ನೂ ಎರಡು ವರ್ಷದ ಆಡಳಿತ ಬಾಕಿ ಇದೆ. ಹೀಗಿರುವಾಗ ಈಗಲೇ ಡಿಕೆ ಶಿವಕುಮಾರ್ ಪಕ್ಷ ಬಿಟ್ಟು ಹೋಗಿ ಹೊಸ ಸರ್ಕಾರ ಮಾಡಬೇಕು ಎಂದರೆ ಕನಿಷ್ಠ ನೂರರಷ್ಟು ಶಾಸಕರನ್ನು ತಮ್ಮ ಜೊತೆಗೆ ಕರೆದೊಯ್ಯ ಬೇಕಾಗುತ್ತದೆ. ಅದು ಸಾಧ್ಯವೇ ಅನ್ನುವುದು ಪ್ರಶ್ನೆ? ಸದ್ಯದ ಮಟ್ಟಿಗೆ ಅದು ಅಸಂಭವ. ಡಿಕೆ ಶಿವಕುಮಾರ್ ಪಕ್ಷ ತ್ಯಜಿಸಿದರೆ ಕಾಂಗ್ರೆಸ್ ಬಲ ನೂರಕ್ಕೆ ನೂರರಷ್ಟು ಕುಸಿಯುತ್ತದೆ ಅನ್ನುವುದರಲ್ಲಿ ಎರಡು ಮಾತೇ ಇಲ್ಲ. ಕಾಂಗ್ರೆಸ್ಸಿಗೆ ದೊಡ್ಡ ಡ್ಯಾಮೇಜ್ ಆಗುವುದು ಗ್ಯಾರಂಟಿ. ಆದರೆ ಈ ಕ್ಷಣಕ್ಕೆ ಡಿಕೆ ಶಿವಕುಮಾರ್ ಗೆ ಲಾಭವೇನು? ಸಿದ್ದರಾಮಯ್ಯರವರನ್ನು ಪದಚ್ಯುತಗೊಳಿಸಲು ಸಾಧ್ಯವಾಗಿಲ್ಲ ಅಂದರೆ, ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಳ್ಳಲಾಗಲಿಲ್ಲ ಅಂದರೆ ಈ ಒಂದು ಪಕ್ಷಾಂತರದಿಂದ ಏನು ಉಪಯೋಗ?

ಹಾಗಾಗಿ ಪದ್ಯಕ್ಕೆ ಡಿಕೆ ಶಿವಕುಮಾರ್ ಬಿಜೆಪಿಯ ತೆಕ್ಕೆಗೆ ಹೋಗಲಾರರು. 1 ಥರ್ಡ್ ಮೆಜಾರಿಟಿ ಶಾಸಕರ ಬೆಂಬಲ ಇಲ್ಲದೆ ಡಿಕೆ ಅಂತಹ ನಿರ್ಧಾರ ತೆಗೆದುಕೊಳ್ಳಲಾರರು. ಒಂದೊಮ್ಮೆ ಅಂತಹ ನಿರ್ಧಾರಕ್ಕೆ ಅವರು ಬರುತ್ತಾರೆಂದರೆ ಮುಂದಿನ ಚುನಾವಣೆಯ ಹೊತ್ತಿಗೆ ಬರಬಹುದು ಅಷ್ಟೇ. ಹಾಗಾಗಿ, ಈಗ ಪ್ರಕಟವಾಗಿರುವಂತಹ ಸುದ್ದಿ ಬೋಗಸ್ ಮತ್ತು ಆ ಫೋಟೋ ಕೂಡ ಅತ್ಯಂತ ಅಚ್ಚುಕಟ್ಟಾಗಿ ಮತ್ತು ಚಂದದಲ್ಲಿ ತಯಾರು ಮಾಡಲಾದ ನಕಲಿ ಫೋಟೋ. ಸೇಮ್ ಫೋಟೋವನ್ನು ಕಾಂಗ್ರೆಸ್ಸಿಗೆ ಮೋದಿ ಬಂದ ಹಾಗೆ ಕೌಂಟರ್ ಆಗಿ ತಯಾರ ಮಾಡಿ ಕಳುಹಿಸಿದ್ದಾರೆ. ಅದನ್ನೂ ನೋಡಿ. ಈ ಎರಡೂ ಫೋಟೋ ನಕಲಿಗಳೆ ಆಗಿವೆ.

-ದತ್ತು

COMMENTS

Login with Gmail to comment

ಇನ್ನಷ್ಟು ಸುದ್ದಿ

ವಿಟ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಯಲ್ಲಿ ಗಲಾಟೆ:
ಟ್ರಂಪ್ ಮೇಲೆ ದಾಳಿ ಯತ್ನ -ಗನ್ ಸದ್ದು ಮತ್ತೆ ವೈಟ್ ಹೌಸ್ ರಾಜಕೀಯವನ್ನ ನಡುಗಿಸಿದೆ!ಭದ್ರತಾ ಪ್ರಶ್ನೆ!
ಮಂಗಳೂರಿನಲ್ಲಿ ಮುಂಜಾನೆ ನಡೆದ ರೌಡಿಶೀಟರ್ ಹತ್ಯೆ – ದುಷ್ಕರ್ಮಿಗಳ  ಜಾಡು ಬೆನ್ನಟ್ಟಿದ ಪೊಲೀಸ್‌ ಪಡೆ….ಮಹತ್ವದ ಸುಳಿವು…..!
ಅಮೆರಿಕ–ಇಸ್ರೇಲ್ ದಾಳಿ ಬಳಿಕ ಇರಾನ್‌ನಲ್ಲಿ ಉದ್ವಿಗ್ನತೆ ತಾರಕಕ್ಕೆ
17 ವರ್ಷದ ಯುವಕ ಸಂಸತ್ತಿನ ಕದ ತಟ್ಟಬಲ್ಲ ಎಂದಾದರೆ, ನಿಮ್ಮ ಧ್ವನಿಗೆ ಎಷ್ಟು ಶಕ್ತಿಯಿದೆ ಯೋಚಿಸಿ!..ವ್ಯವಸ್ಥೆಯ ಲೋಪದ ವಿರುದ್ಧ ಧ್ವನಿ ಎತ್ತದಿದ್ದರೆ ಬದಲಾವಣೆ ಸಾಧ್ಯವಿಲ್ಲ.
ದರೆಗುಡ್ಡೆಯಲ್ಲಿ ಬಾರಿ ಅಗ್ನಿ ಅವಗಡ…!
ಸದ್ಯದಲ್ಲೇ ಬರುತ್ತೆ ತಣ್ಣೀರ್ಬಾವಿ ಬೀಚ್‌ಗೆ shortcut ಮಾರ್ಗ!30 ನಿಮಿಷ ಕಡಿಮೆ ಪ್ರಯಾಣ..!
ಮಂಗಳೂರುಗೆ ಹೈಕೋರ್ಟ್ ಸರ್ಕ್ಯೂಟ್ ಬೆಂಚ್: ಕರಾವಳಿಗೆ ಐತಿಹಾಸಿಕ ನ್ಯಾಯಾಂಗ ಶಕ್ತಿ ನೀಡುವ ಮಹತ್ವದ ಹೆಜ್ಜೆ..
ಭೋಪಾಲ್ ತ್ವಿಷಾ ಶರ್ಮಾ ಪ್ರಕರಣ ಪೋಷಕರ ಪಟ್ಟು-ಅಂತ್ಯಕ್ರಿಯೆ ಮಾಡುವುದಿಲ್ಲ “ನ್ಯಾಯ ಸಿಗುವವರೆಗೂ ನಾವು ದೇಹವನ್ನು ಸ್ವೀಕರಿಸುವುದಿಲ್ಲ” 
ಮಂಗಳೂರು ಏರ್‌ಪೋರ್ಟ್ ಬಳಿ ಬರ್ತಿದೆ ಲಕ್ಸುರಿ ಇಂಟರ್‌ನ್ಯಾಷನಲ್ ಹೋಟೆಲ್!
ಇರಾನ್–ಇಸ್ರೇಲ್ ಯುದ್ಧ: ಯುದ್ಧ ನಿಲ್ಲಿಸಲು ಇರಾನ್‌ನ 3 ಷರತ್ತುಗಳು… ಅಮೇರಿಕಾ ಕಂಗಾಲು
ಕೂದಲೆಳೆ ಅಂತರದಲ್ಲಿ ಪಾರಾದ ಗುಜರಾತ್ ಟೈಟಾನ್ಸ್!ಕ್ಷಣಾರ್ಧ ತಡವಾಗಿದ್ದರೂ ಸಂಭವಿಸುತ್ತಿತ್ತು ಘೋರ ಅಗ್ನಿ ದುರಂತ!
₹3 ಕೋಟಿ ಹೂಡಿಕೆ ಮಾಡಿದ ಶಾಲೆಗೀಗ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಮಾತನಾಡುವ ಸುಂದರಿ “ಐರಿಸ್” ಮೇಡಂ…ಸರ್ಕಾರಿ ಶಾಲೆ ನೋಡಿ ದೇಶವೇ ಶಾಕ್!
🚨 ಮಂಗಳೂರು ನಿವಾಸಿಗಳಿಗೆ ಮಹತ್ವದ ಮಾಹಿತಿ – 2026 ಘನತ್ಯಾಜ್ಯ ನಿರ್ವಹಣೆ ಹೊಸ ನಿಯಮ  🚨
ಉದ್ಯಮಿ ಧೀರಜ್ ಜೈನ್ ಗಪ್ ಚುಪ್ಪಾಗಿ ನಡೆಸಿದ ಮಾನವೀಯ ನಡೆಗೆ ಸಾಕ್ಷಿ ನೋಡಿ
“ಧುರಂಧರ್” ನಟ ರಣವೀರ್ ಸಿಂಗ್‌ ವಿರುದ್ಧ ಇಡೀ ಬಾಲಿವುಡ್ ಒಕ್ಕೂಟವೇ ತಿರುಗಿಬಿದ್ದಿದ್ದೇಕೆ? shocking ₹45 ಕೋಟಿ ವಿವಾದದ ಅಸಲಿ ಕಥೆ ಇಲ್ಲಿದೆ!
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕನ ಬ್ಯಾಗ್‌ನಲ್ಲಿ 47 ಜೀವಂತ ಅಪರೂಪದ ಪ್ರಾಣಿಗಳು ಪತ್ತೆ! 
“ಬಾಂಬ್‌ಗಿಂತ ಅಪಾಯಕಾರಿ ಅಹಂಕಾರ …! ಜಗತ್ತೇ ಕಾಯುತ್ತಿದೆ… ಮುಂದೇನು?”
ಸಿಐಡಿ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್: ವಂಚಕರ ಬಲೆಯಿಂದ ಜಸ್ಟ್ ಎಸ್ಕೇಪ್
ಭಾರತದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಅನ್ನೋ ಇತಿಹಾಸ ಬರೆಯಲಿದ್ದಾರೆ ‘ಡಿ ಕೆ ಶಿ’!
ಗ್ರಾಹಕರ ಮಾತು ಕೇಳಿ, ₹900 ಕೋಟಿಯ ರೆಸ್ಟೋರೆಂಟ್ ಸಾಮ್ರಾಜ್ಯ ನಿರ್ಮಿಸಿದ ಉದ್ಯಮಿ..
ಪುಲ್ವಾಮಾ ದಾಳಿಯ ಮಾಸ್ಟರ್ಮೈಂಡ್ ಹಮ್ಜಾ ಬುರ್ಹಾನ್ ಹತ್ಯೆ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ರಹಸ್ಯ ಗುಂಡಿನ ದಾಳಿ
ಉಡುಪಿ ಜಿಲ್ಲೆಯಲ್ಲಿ  ಹೆಚ್ಚಾದ  ಚಿರತೆ ಉಪಟಳ : ತುರ್ತು ಕ್ರಮಕ್ಕೆ ತುರವೇ ಮನವಿ
ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿಗೆ  ಪ್ರತಿದಾಳಿ ಯುಎಇ, ಬಹ್ರೇನ್, ಸೌದಿಯಲ್ಲಿ ಅಮೆರಿಕದ ನೆಲೆಗಳಿಗೆ ನಡುಕ.
ಹವ್ಯಕ ಭಾಷಾ ಅಕಾಡೆಮಿ ಅಸ್ತಿತ್ವಕ್ಕೆ ಗ್ರೀನ್ ಸಿಗ್ನಲ್ 
ಮಂಗಳೂರಿನಲ್ಲಿ ವಕೀಲರೊಬ್ಬರ ನಕಲಿ ದುಷ್ಕೃತ್ಯ ಬಯಲಿಗೆ?
ಉಡುಪಿ ನಗರ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸಭೆ ಎರಡೂ ಕಮಾಯಿಗೆ ಕುಳಿತು ಕೊಂಡಿದೆಯಾ?
ಬಾಗಲಕೋಟೆ ಜಿಲ್ಲೆ ಕೆರೂರು ಠಾಣೆಯಲ್ಲಿ ಪಿಎಸ್ಐ & ಪೇದೆ ₹1.70 ಲಕ್ಷ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಬಲೆಗೆ!
ಕಲ್ಲಂಗಡಿ ಹಣ್ಣು ತಪ್ಪು ಮಾಡಲಿಲ್ಲ… ಆದರೆ ಅಪರಾಧಿ ಸುದ್ದಿ ದೊಡ್ಡದಾಗಿದೆ!
“ಮಂಜಿನ ನಡುವೆ ಕ್ಷಣಾರ್ಧದಲ್ಲಿ ಮಾಯವಾದ ಮಗಳು”ಶ್ರೀನಂದಾ ಶವವಾಗಿ ಪತ್ತೆ…!