📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಕನಕಪುರ ಬಂಡೆ ಬಿಜೆಪಿಗೆ ಎಂಬ ಬೋಗಸ್ ಸುದ್ದಿ

    ಕನಕಪುರ ಬಂಡೆ ಖ್ಯಾತಿಯ ಕರ್ನಾಟಕ ರಾಜ್ಯ ಉಪ ಮುಖ್ಯಮಂತ್ರಿ ಆಗೋ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆಂಬ ಮಾಹಿತಿಯು ಫೋಟೋ ಸಹಿತ ಸಾಮಾಜಿಕ ತಾಣದಲ್ಲಿ ಪ್ರಕಟವಾಗಿರುವುದು ಸಾಕಷ್ಟು ಜನರಿಗೆ ಗೊಂದಲ ತರಿಸಿದೆ. ಆದರೆ ಅದು ಸತ್ಯವಲ್ಲ ಭೋಗಸ್ ಸುದ್ದಿ.

    ರಾಜಕೀಯದಲ್ಲಿ, ಯಾವುದೇ ಸಂದರ್ಭ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಈ ಹಿಂದೆ, ಪ್ರಧಾನಿ ಮೋದಿ ಹಾಗೂ ಬಿಜೆಪಿಯ ಬಗ್ಗೆ ಬಹಳ ಕಠಿಣವಾಗಿ ಮಾತನಾಡುತ್ತಿದ್ದ ರಾಘವ್ ಚಡ್ಡ ಬಿಜೆಪಿಗೆ ಸೇರ್ಪಡೆಯಾಗಿದ್ದೆ  ಸಾಕ್ಷಿ.

    ಆದರೆ ಡಿಕೆ ಶಿವಕುಮಾರ್ ಕಾಂಗ್ರೆಸ್ನ ಭಕ್ತ, ಕಾಂಗ್ರೆಸಿಗಾಗಿ ಸಾಕಷ್ಟು ರಿಸ್ಕ್ ತೆಗೆದುಕೊಂಡು ಕೆಲಸ ಮಾಡಿದಂತಹ ವ್ಯಕ್ತಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಭಕ್ತರಲ್ಲ. ಆದರೆ ಡಿಕೆ ಶಿವಕುಮಾರ್ ಕಾಂಗ್ರೆಸ್ ಭಕ್ತ ಎಂಬ ವಿಚಾರ ಪಕ್ಷಕ್ಕೆ ಗೊತ್ತಿದೆ. ಆದ್ರೂ ಡಿಕೆಗೆ, ಅವರ ಕೆಲಸಕ್ಕೆ ಸರಿಸಮಾನವಾದ ಸ್ಥಾನಮಾನ ಸಿಗುತ್ತಿಲ್ಲ, ಕೆಲಸವನ್ನೇ ಮಾಡದವರು ಸ್ಥಾನಮಾನ ಪಡೆದು ಆನಂದಿಸುತ್ತಿದ್ದಾರೆ ಎಂಬ ವಿಚಾರದಲ್ಲಿ ಬೇಸರ ಹೊಂದಿದ್ದಾರೆ ಎನ್ನುವುದೂ ಸತ್ಯವೇ. ಆದ್ರೂ ಪಕ್ಷದ ಹೈಕಮಾಂಡ್, ಈ ವಿಚಾರದಲ್ಲಿ ಡಿಕೆ ಜೊತೆಗೆ ನಿಲ್ಲಲೂ ಸಿದ್ದವಿಲ್ಲ ಹಾಗೆಯೇ ಡಿಕೆಯನ್ನು ಬಿಟ್ಟುಕೊಡಲೂ ಅವರಿಂದ ಆಗುತ್ತಿಲ್ಲ.

    ಹೆಚ್ಚು ಕಡಿಮೆ ಕಳೆದ ಆರು ತಿಂಗಳಿನಿಂದ ನಾಯಕತ್ವ ಬದಲಾವಣೆ ಆಗಬೇಕು ಎಂಬ ನಿರೀಕ್ಷೆಯಲ್ಲಿ ಡಿಕೆ ಶಿವಕುಮಾರ್ ಇದ್ದರು. ಆದರದು ಆಗುತ್ತಿಲ್ಲ. ಸಿದ್ದರಾಮಯ್ಯನವರ ಕೈ ಮೇಲಾಗುತ್ತಿದೆ. ಹೈಕಮಾಂಡ್ ಡಿಕೆ ಶಿವಕುಮಾರ್ ವಿಚಾರದಲ್ಲಿ  ಸೇಫ್ ಜೋನ್ ಎಂದು ಭಾವಿಸಿದ್ದಾರೆ. ಡಿಕೆ, ಪಕ್ಷಕ್ಕೆ ದ್ರೋಹ ಬಗೆಯುವುದಿಲ್ಲ, ಸ್ಥಾನ ಸಿಗದಿದ್ದರೂ ಪಕ್ಷಕ್ಕೆ ಡ್ಯಾಮೇಜ್ ಮಾಡುವುದಿಲ್ಲ ಎಂಬ ಧೈರ್ಯದಲ್ಲಿ ಸಿದ್ದರಾಮಯ್ಯರನ್ನು ಮುಂದುವರೆಸುತ್ತಿದ್ದಾರೆ. ಅತ್ತ ಸಿದ್ದರಾಮಯ್ಯರವರನ್ನು ತೆಗೆದರೆ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಾರೆಂಬ ಸಂಶಯ ಹೈಕಮಾಂಡ್ಗಿದೆ. ಈ ಕಾರಣದಿಂದಾಗಿ, ಡಿಕೆ ಶಿವಕುಮಾರ್ ಅವರ ಬೇಡಿಕೆಗೆ ಹೈಕಮಾಂಡ್ ತೇಪೆ ಹಾಕುತ್ತಿದೆಯಷ್ಟೇ.  ಯಾವುದೇ ನಿರ್ಧಾರವನ್ನು ಪ್ರಕಟಿಸುತ್ತಿಲ್ಲ. ನಿರ್ಧಾರ ಪ್ರಕಟಿಸುವ ಯೋಚನೆಯಲ್ಲೂ ಅದು ಇಲ್ಲ.

    ಇದರ ಮಧ್ಯೆ, ಡಿಕೆ ಶಿವಕುಮಾರ್ ಅವರಿಗೆ ಬಿಜೆಪಿ ಕಡೆಯಿಂದ ಸ್ಪಷ್ಟ ಆಹ್ವಾನ ಹೋಗಿದೆ. ನೀವು ಪಕ್ಷಕ್ಕೆ ಬನ್ನಿ, ಮುಂದಿನ ಮುಖ್ಯಮಂತ್ರಿ ನೀವೇ ಆಗುತ್ತೀರಿ ಎಂಬುದನ್ನು ನಾವು ನಿಮಗೆ ಪ್ರಾಮಿಸ್ ಮಾಡುತ್ತೇವೆ. ಸುಮ್ಮನೆ ಮುಳುಗುತ್ತಿರುವ ಹಡಗಿನಲ್ಲಿ ಯಾಕೆ ಮುಂದುವರೆಯುತ್ತಿರಿ. ಆರ್ಥಿಕವಾಗಿ ಸಾಕಷ್ಟು ಬೆಳೆದಿದ್ದೀರಿ ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದಕ್ಕೆ ಬಲಿಷ್ಠ ಸರ್ಕಾರದ ಅಗತ್ಯತೆ ಇದೆ ಏನಂತೀರಿ ಎಂಬ ಪ್ರಶ್ನೆಯನ್ನು ಡಿಕೆ ಮುಂದೆ ಇಡಲಾಗಿದೆ. ಇದೆಲ್ಲಾ ಹಳೆಯ ಸುದ್ದಿಯೂ ಆಗಿದೆ. ಆ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆದಿದೆ ಕೂಡ. ಇದನ್ನು ಸ್ವತಃ ಡಿಕೆ ಶಿವಕುಮಾರ್ ಕೂಡ ಹೇಳಿಕೊಂಡಿದ್ದಾರೆ.

    ಆದರೆ ಕಾಂಗ್ರೆಸ್ ಪಕ್ಷದಲ್ಲಿ, ಡಿಕೆ ವಿಚಾರವಾಗಿ ಒಂದಷ್ಟು ಸಚಿವರು ನಡೆದುಕೊಳ್ಳುತ್ತಿರುವ ರೀತಿ ಮತ್ತು ಪಕ್ಷದ ಅಧ್ಯಕ್ಷ ಎಂಬುದನ್ನು ನೋಡದೆ ಗೌರವವನ್ನು ಕೊಡದೆ ಆಡಿಕೊಳ್ಳುತ್ತಿರುವ ರೀತಿ, ಡಿಕೆ ಮತ್ತು ಡಿಕೆ ಬೆಂಬಲಿಗರಲ್ಲಿ ಬೇಸರ ತರಿಸಿದ್ದರಲ್ಲಿ ಯಾವ ತಪ್ಪು ಇಲ್ಲ. ಈ ಹಿಂದೆ ರಾಜಣ್ಣ ಸಚಿವ ಸ್ಥಾನ ಕಳೆದುಕೊಂಡದ್ದು ಡಿಕೆ ವಿಚಾರದಲ್ಲಿ ನಡೆದುಕೊಂಡ ರೀತಿಗಲ್ಲ. ಬದಲಿಗೆ, ರಾಹುಲ್ ಗಾಂಧಿ ವಿಚಾರದಲ್ಲಿ ಮಾಡಿದ ಕಾಮೆಂಟ್ ಗಾಗಿ. ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧವಾಗಿ ಮಾತನಾಡಿದರೆ ಯಾವ ಕ್ರಮವೂ ಇಲ್ಲ ಅಂದರೆ, ಇಲ್ಲಿ ಪಕ್ಷ ಬೆಳೆಸಿದ್ದಕ್ಕೆ ಏನು ಕೊಡುಗೆ ಸಿಗುತ್ತಿದೆ ಎಂಬ ಪ್ರಶ್ನೆ ಡಿಕೆ ಬೆಂಬಲಿಗರಿಂದ ಬರುತ್ತಿರುವುದು ಸತ್ಯವೇ. ಇದೆಲ್ಲವೂ ಡಿಕೆ ಬಿಜೆಪಿಗೆ ಹೋದರು ಅಚ್ಚರಿ ಇಲ್ಲ ಎಂಬ ಮಾತುಗಳಿಗೆ ಇಂಬು ಕೊಡಬಹುದು, ಅದು ಸುಲಭವೇ?

    ಹಾಲಿ ಕೆಪಿಸಿಸಿ ಅಧ್ಯಕ್ಷ ಮತ್ತು ಹಾಲಿ ಉಪಮುಖ್ಯಮಂತ್ರಿ ಅಷ್ಟು ಈಜಿಯಾಗಿ ಇನ್ನೊಂದು ಪಕ್ಷದ ತೆಕ್ಕೆಗೆ ಹೋಗಲು ಸಾಧ್ಯವೇ? ಹೋದರೆ, ಆ ಪಕ್ಷದ ಆಡಳಿತ ಬರುತ್ತದೆಯೇ? ಸಿದ್ದರಾಮಯ್ಯನವರ ಪಕ್ಷ ಬಿದ್ದು ಹೋಗುತ್ತದೆಯೇ?  ಇನ್ನೂ ಎರಡು ವರ್ಷದ ಆಡಳಿತ ಬಾಕಿ ಇದೆ. ಹೀಗಿರುವಾಗ ಈಗಲೇ ಡಿಕೆ ಶಿವಕುಮಾರ್ ಪಕ್ಷ ಬಿಟ್ಟು ಹೋಗಿ ಹೊಸ ಸರ್ಕಾರ ಮಾಡಬೇಕು ಎಂದರೆ ಕನಿಷ್ಠ ನೂರರಷ್ಟು ಶಾಸಕರನ್ನು ತಮ್ಮ ಜೊತೆಗೆ ಕರೆದೊಯ್ಯ ಬೇಕಾಗುತ್ತದೆ. ಅದು ಸಾಧ್ಯವೇ ಅನ್ನುವುದು ಪ್ರಶ್ನೆ? ಸದ್ಯದ ಮಟ್ಟಿಗೆ ಅದು ಅಸಂಭವ. ಡಿಕೆ ಶಿವಕುಮಾರ್ ಪಕ್ಷ ತ್ಯಜಿಸಿದರೆ ಕಾಂಗ್ರೆಸ್ ಬಲ ನೂರಕ್ಕೆ ನೂರರಷ್ಟು ಕುಸಿಯುತ್ತದೆ ಅನ್ನುವುದರಲ್ಲಿ ಎರಡು ಮಾತೇ ಇಲ್ಲ. ಕಾಂಗ್ರೆಸ್ಸಿಗೆ ದೊಡ್ಡ ಡ್ಯಾಮೇಜ್ ಆಗುವುದು ಗ್ಯಾರಂಟಿ. ಆದರೆ ಈ ಕ್ಷಣಕ್ಕೆ ಡಿಕೆ ಶಿವಕುಮಾರ್ ಗೆ ಲಾಭವೇನು? ಸಿದ್ದರಾಮಯ್ಯರವರನ್ನು ಪದಚ್ಯುತಗೊಳಿಸಲು ಸಾಧ್ಯವಾಗಿಲ್ಲ ಅಂದರೆ, ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಳ್ಳಲಾಗಲಿಲ್ಲ ಅಂದರೆ ಈ ಒಂದು ಪಕ್ಷಾಂತರದಿಂದ ಏನು ಉಪಯೋಗ?

    ಹಾಗಾಗಿ ಪದ್ಯಕ್ಕೆ ಡಿಕೆ ಶಿವಕುಮಾರ್ ಬಿಜೆಪಿಯ ತೆಕ್ಕೆಗೆ ಹೋಗಲಾರರು. 1 ಥರ್ಡ್ ಮೆಜಾರಿಟಿ ಶಾಸಕರ ಬೆಂಬಲ ಇಲ್ಲದೆ ಡಿಕೆ ಅಂತಹ ನಿರ್ಧಾರ ತೆಗೆದುಕೊಳ್ಳಲಾರರು. ಒಂದೊಮ್ಮೆ ಅಂತಹ ನಿರ್ಧಾರಕ್ಕೆ ಅವರು ಬರುತ್ತಾರೆಂದರೆ ಮುಂದಿನ ಚುನಾವಣೆಯ ಹೊತ್ತಿಗೆ ಬರಬಹುದು ಅಷ್ಟೇ. ಹಾಗಾಗಿ, ಈಗ ಪ್ರಕಟವಾಗಿರುವಂತಹ ಸುದ್ದಿ ಬೋಗಸ್ ಮತ್ತು ಆ ಫೋಟೋ ಕೂಡ ಅತ್ಯಂತ ಅಚ್ಚುಕಟ್ಟಾಗಿ ಮತ್ತು ಚಂದದಲ್ಲಿ ತಯಾರು ಮಾಡಲಾದ ನಕಲಿ ಫೋಟೋ. ಸೇಮ್ ಫೋಟೋವನ್ನು ಕಾಂಗ್ರೆಸ್ಸಿಗೆ ಮೋದಿ ಬಂದ ಹಾಗೆ ಕೌಂಟರ್ ಆಗಿ ತಯಾರ ಮಾಡಿ ಕಳುಹಿಸಿದ್ದಾರೆ. ಅದನ್ನೂ ನೋಡಿ. ಈ ಎರಡೂ ಫೋಟೋ ನಕಲಿಗಳೆ ಆಗಿವೆ.

    -ದತ್ತು

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಭಾರತದ ‘ಗೋಲ್ಡನ್ ಗರ್ಲ್’ ಮೀರಾಬಾಯಿ ಚಾನು ಮತ್ತೊಮ್ಮೆ ಇತಿಹಾಸ ಬರೆದಿದ್ದಾರೆ! 
    ಕರಾವಳಿಯಲ್ಲಿ ಶುರುವಾಯ್ತು MESCOM ಮಹಾಸಮರ!ಬಯಲಾಗುತ್ತಾ “ಬ್ರಹ್ಮಾಂಡ ಭ್ರಷ್ಟಾಚಾರ”..!?
    NEET ಕಿಚ್ಚಿನ ನಡುವೆ ಶಿಕ್ಷಣ ಖಾತೆ ಪ್ರಹ್ಲಾದ್ ಜೋಶಿಗೆ…!ಈದ್ಗಾ ಹೋರಾಟದ ಮೈದಾನದಿಂದ ಕೇಂದ್ರದ ಮಹತ್ವದ ಹೊಣೆಗಾರಿಕೆಯವರೆಗೆ!
    ಅಸ್ಸಾಂನಲ್ಲಿ ಮತದಾನದ ಹಿನ್ನೆಲೆ ಹಿಂಸಾಚಾರ: 30ಕ್ಕೂ ಹೆಚ್ಚು ಮಂದಿ ಗಾಯ, 7 ಜನರ ಬಂಧನ
    50 ವರ್ಷಗಳ ನಂತರ NCERT 9ನೇ ತರಗತಿಗೆ ‘ತುರ್ತು ಪರಿಸ್ಥಿತಿ’ಯ ವಾಸ್ತವ ಪಾಠ!
    ಪುತ್ತೂರಿನ ಕೃಷ್ಣ ಜೆ. ರಾವ್ ಪ್ರಕರಣಕ್ಕೆ ಹೈಕೋರ್ಟ್ ಬ್ರೇಕ್!“ಮಧ್ಯಂತರ ತೀರ್ಪು: ₹75K ತಿಂಗಳ ಸಹಾಯ ಷರತ್ತು”
    80 ಲಕ್ಷ ವಂಚನೆ ಪ್ರಕರಣ ದೂರು ದಾಖಲು
    ಮಂಗಳೂರುಗೆ ಹೈಕೋರ್ಟ್ ಸರ್ಕ್ಯೂಟ್ ಬೆಂಚ್: ಕರಾವಳಿಗೆ ಐತಿಹಾಸಿಕ ನ್ಯಾಯಾಂಗ ಶಕ್ತಿ ನೀಡುವ ಮಹತ್ವದ ಹೆಜ್ಜೆ..
    ವಿಟ್ಲದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮ
    “ವಕೀಲರೇ ಎಚ್ಚರ! ಕೋರ್ಟ್‌ನಲ್ಲಿ ನಕಲಿ AI ರೆಫರೆನ್ಸ್ ನೀಡಿದರೆ ಕಠಿಣ ಶಿಸ್ತು ಕ್ರಮ: BCIಗೆ ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ”
    ಸಾಲದ ಭಾರವೂ ಶಿಸ್ತಿನ ಮುಂದೆ ಸೋಲುತ್ತದೆ…! ಇದಕ್ಕೆ ಸಾಕ್ಷಿಯೇ ಸಾಕ್ಷಿ..!₹80 ಲಕ್ಷ ಸಾಲ-1 ವರ್ಷ ಮತ್ತು ಒಂದು ಡೆಡಿಕೇಟೆಡ್ ಟಾರ್ಗೆಟ್..!
    ದಲಿತ ವಿಧವೆ ಮೇಲೆ ಸಾಮೂಹಿಕ ಅತ್ಯಾಚಾರ – ಮೂವರು ಆರೋಪಿಗಳು ಬಂಧನ
    ದೇವರ ಮುಂದೆ ಸಾಲಿನಲ್ಲಿ ನಿಲ್ಲಲೇಬೇಕು! ಮಂತ್ರಿ ಇರಲಿ, ಸೆಲೆಬ್ರಿಟಿ ಇರಲಿ…ಅಧಿಕಾರ ಇರಲಿ, ಅಂತಸ್ತು ಇರಲಿ…”ವಿಐಪಿ ದರ್ಶನ”ಕ್ಕೆ ಹೈಕೋರ್ಟ್ ಕೊಟ್ಟ ಚಾವಟಿ ಏಟು!
    ಅಣ್ಣಾಮಲೈ ಸಿಡಿಸಿದ ಬಾಂಬ್: ವಿಜಯ್ ಸರ್ಕಾರದ ಸಚಿವರ ವಿರುದ್ಧ 2–4% ಕಿಕ್‌ಬ್ಯಾಕ್ ಆರೋಪ!
    21 ವರ್ಷದ ಆಡಳಿತಕ್ಕೆ ತೆರೆ: ನಿತೀಶ್ ಕುಮಾರ್ ಹೊರಟರೇ?ಸಿಎಂ ಕುರ್ಚಿ ಖಾಲಿ-ಬಿಜೆಪಿ ಹೊಸ ಮುಖ ಮುಂದಿನ ಸಿಎಂ??
    ತೊಕ್ಕೊಟ್ಟು ವಿನಮ್ರ ಬಾರ್‌ನಲ್ಲಿ ತಲವಾರು ಹಿಡಿದು ದಾಂಧಲೆ!
    ಭಾರತದಲ್ಲಿ ಮೊದಲ ಬಾರಿಗೆ ಭಾರೀ ಕ್ಯಾಪ್ಟಾಗನ್ “ಜಿಹಾದಿ ಡ್ರಗ್”ಜಾಲ ಬಯಲಾಗಿದ್ದು, ಸುಮಾರು ₹182 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ!ಅಪಾಯಕಾರಿ ಡ್ರಗ್ ದೇಶದೊಳಗೆ ಹೇಗೆ ಪ್ರವೇಶಿಸಿತು ಎಂಬುದರ ಬಗ್ಗೆ ತನಿಖೆ ತೀವ್ರವಾಗಿದೆ.
     “ಮೀನುಗಾರರ ಡೀಸೆಲ್ & ಸಿಲಿಂಡರ್ ಸಮಸ್ಯೆಗೆ ಸರ್ಕಾರದ ತುರ್ತು ಹಸ್ತಕ್ಷೇಪ -ಇಂಧನ ಭರವಸೆ: ಮಂಗಳೂರು ಬಂದರಿನಲ್ಲಿ ತುರ್ತು ಕ್ರಮ”-
    ಗೃಹಲಕ್ಷ್ಮಿ ಹಣ ಉಳಿಸಿ ದೇವಿಗೆ ₹17 ಲಕ್ಷ ದೇಣಿಗೆ!
    ಬೈಜು ರವೀಂದ್ರನ್ ಗೆ ಕೊನೆಗೂ ಜೈಲು ಶಿಕ್ಷೆ …!ಮುಳುಗಿಯೇ ಹೋಯ್ತು ಬೈಜೂಸ್!ಕೋಟಿ ಕೋಟಿ ಲೂಟಿ ಮಾಡಿ ಕ್ರಿಕೆಟ್ ಜರ್ಸಿಯಿಂದ ಜೈಲಿನ ಕೈದಿ ನಂಬರ್ ವರೆಗೆ….ಬೈಜೂಸ್ ಸಾಮ್ರಾಜ್ಯದ ರೋಚಕ ಪತನದ inside story
    ಉಡುಪಿಯಲ್ಲಿ  ಹರಿಕಥಾ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಶಂಕರಾಚಾರ್ಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ- ಯುಟಿಕ್ಷಮೆ ಯಾಚನೆ
    ಶಿಕ್ಷಣ ಸುಧಾರಣೆಗೆ ರಾಜ್ಯ ಸರ್ಕಾರದ ಭರ್ಜರಿ ಪ್ಲಾನ್ ಬಹಿರಂಗ!
    E20 ಪೆಟ್ರೋಲ್‌ನಿಂದ ಮರ್ಸಿಡಿಸ್ ಕಾರಿನ ಮೈಲೇಜ್ ಕುಸಿತವೇ? ವೈರಲ್ ವಿಡಿಯೋ ಬಳಿಕ ಕಂಪನಿಯ ಸ್ಪಷ್ಟನೆ; ನಿಜ ಏನು?
    ಸರ್ಕಾರಿ ವೈದ್ಯರ ಅನರ್ದಿಷ್ಟಾವಧಿ ಮುಷ್ಕರ ರದ್ದು
    ಟ್ರಂಪ್-“Strait of Hormuz ತಕ್ಷಣ ತೆರೆಯಿರಿ…! “ ಇರಾನ್-“ಕೀ ಗಳನ್ನು ಕಳೆದುಕೊಂಡಿದ್ದೇವೆ…!”
    ವಂಚಕನ ಬೆನ್ನಿಗೆ ನಿಂತರೆ, ಕೊರಳಿಗೆ ಉರುಳಾದೀತು!
    ಉಡುಪಿಯಲ್ಲಿ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ  ಮಹಿಳೆಗೆ ₹65 ಲಕ್ಷ ವಂಚನೆ
    ಬೆಳ್ತಂಗಡಿ ಸ್ನಾನಕ್ಕೆ ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು…
    ಮಳೆ ಬರುತ್ತದೆ ಎಂದಾಗ ರಜೆ ಇಲ್ಲ… ರಜೆ ಕೊಟ್ಟ ದಿನ ಮಳೆಯೇ ಇಲ್ಲ!ಹವಾಮಾನ ಮುನ್ಸೂಚನೆನಾ? ಖಚಿತ ಭವಿಷ್ಯವಾಣಿಯಾ? ಮಳೆ–ರಜೆ ಗೊಂದಲಕ್ಕೆ ಕಾರಣವೇನು?
    ಆಂಬ್ಯುಲೆನ್ಸ್‌ನಲ್ಲೇ ನಡೆದ ಭೀಕರ ಘಟನೆ… ನಂಬಲು ಕಷ್ಟ, ಆದರೆ ಸತ್ಯ!