📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಖಾದರ್‌ ಖಡಕ್ ವಾರ್ನಿಂಗ್ ವೈರಲ್ : ಆದರೆ ಖಡಕ್ ಆಕ್ಷನ್ ಯಾವಾಗ?”ಪ್ರತಿ ಮಳೆಯಲ್ಲೂ ಅದೇ ಕಥೆ: ರಸ್ತೆ ಗುಂಡಿ, ಅಪಘಾತ, ಎಚ್ಚರಿಕೆ, ಜವಾಬ್ದಾರಿ ಹೊತ್ತವರ ಜಾಣ ಮರೆವು!

ಸಾವು ಆದ್ಮೇಲೆ ಹೊಣೆಗಾರರಾ? ಅಥವಾ ಸಾವು ಆಗದಂತೆ ಈಗಲೇ ಕ್ರಮವೇ?”

Google pic **

ಮಳೆಗಾಲದಲ್ಲಿ ರಸ್ತೆ ಗುಂಡಿಗಳಿಂದ ಸಾರ್ವಜನಿಕರು ಪ್ರಾಣ ಕಳೆದುಕೊಂಡರೆ ಸಂಬಂಧಪಟ್ಟ ಇಂಜಿನಿಯರ್‌ಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಎಚ್ಚರಿಕೆ ನೀಡಿದ್ದಾರೆ. ರಸ್ತೆ ಗುಂಡಿಗಳಿಂದ ಜೀವಹಾನಿಯಾದರೆ ಇಂಜಿನಿಯರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ತಾತ್ಕಾಲಿಕ ದುರಸ್ತಿ ಬದಲು ಶಾಶ್ವತ ಪರಿಹಾರಕ್ಕೆ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಆದರೆ ಜನರ ಪ್ರಶ್ನೆ — “ಸಾವು ಆದ ಮೇಲೆ ಹೊಣೆಗಾರರನ್ನಾಗಿ ಮಾಡಿದರೆ ಸಾಕಾ ಸರಿ ಹೋಗುತ್ತಾ ?

ಸಾವು ಆಗದಂತೆ ತಡೆಯುವುದು ಸರ್ಕಾರ ಮತ್ತು ಇಲಾಖೆಗಳ ಮೊದಲ ಕರ್ತವ್ಯ ಅಲ್ಲವೇ?”

ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡದ ಅನೇಕ ರಸ್ತೆಗಳಲ್ಲಿ ಮಳೆ ಆರಂಭವಾದ ಕೆಲವೇ ದಿನಗಳಲ್ಲಿ ಗುಂಡಿಗಳು ಬಾಯಿಬಿಟ್ಟಿವೆ. ಕೆಲವೆಡೆ ರಸ್ತೆ ಎಲ್ಲಿದೆ, ಗುಂಡಿ ಎಲ್ಲಿದೆ ಎಂಬುದೇ ಗೊತ್ತಾಗದ ಸ್ಥಿತಿ ನಿರ್ಮಾಣವಾಗಿದೆ. ವಾಹನ ಸವಾರರು ಪ್ರತಿದಿನ ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿದ್ದಾರೆ. ಪ್ರತಿ ವರ್ಷ ಮಳೆಗಾಲ ಬಂದಾಗ ಇದೇ ಕಥೆ, ಇದೇ ಭರವಸೆ, ಇದೇ ಎಚ್ಚರಿಕೆ. ಆದರೆ ರಸ್ತೆ ಮಾತ್ರ ಬದಲಾಗುವುದಿಲ್ಲ.

ಇನ್ನೂ ಆಶ್ಚರ್ಯದ ಸಂಗತಿ ಎಂದರೆ, ಮಳೆ ಬರುವುದಕ್ಕೂ ಮುನ್ನವೇ ಗುಂಡಿ ಮುಚ್ಚುವ ಕೆಲಸ ಮುಗಿದಿರಬೇಕಾಗಿತ್ತು. ಸ್ವತಃ ಯು.ಟಿ. ಖಾದರ್ ಅವರು ಮೇ ತಿಂಗಳಲ್ಲೇ ರಸ್ತೆ ಗುಂಡಿಗಳನ್ನು ಮಳೆಗಾಲಕ್ಕೂ ಮುನ್ನ ಮುಚ್ಚುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೂ ಜೂನ್‌ನಲ್ಲಿ ಮತ್ತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಬೇಕಾದ ಪರಿಸ್ಥಿತಿ ಏಕೆ ಬಂತು? ಮೊದಲ ಆದೇಶವನ್ನು ಯಾರು ನಿರ್ಲಕ್ಷಿಸಿದರು? ಅದರ ಹೊಣೆ ಯಾರು ಹೊರುತ್ತಾರೆ?

ಮಂಗಳೂರಿನ ಹಲವೆಡೆ ರಸ್ತೆ ಕಾಮಗಾರಿಗಳ ಸ್ಥಿತಿ ನೋಡಿದರೆ ಜನರ ತೆರಿಗೆ ಹಣವನ್ನು “ನೀರಿನಲ್ಲಿ ಹೋಮ” ಮಾಡಿದಂತೆ ಕಾಣುತ್ತದೆ. ಒಂದು ಇಲಾಖೆ ರಸ್ತೆ ಅಗೆದು ಹೋಗುತ್ತದೆ. ಮತ್ತೊಂದು ಇಲಾಖೆ ಅದೇ ರಸ್ತೆಯನ್ನು ಮತ್ತೆ ಕಿತ್ತುಹಾಕುತ್ತದೆ. ಕೆಲ ದಿನಗಳ ಬಳಿಕ ಅದನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ. ಮಳೆ ಬಂದರೆ ಮತ್ತೆ ಗುಂಡಿ. ಮತ್ತೆ ಟೆಂಡರ್. ಮತ್ತೆ ಕಾಮಗಾರಿ. ಮತ್ತೆ ಸಾರ್ವಜನಿಕರ ಹಣ. ಈ ಅಂತ್ಯವಿಲ್ಲದ ಚಕ್ರಕ್ಕೆ ಕೊನೆ ಯಾವಾಗ?

ರಸ್ತೆ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಜನರಲ್ಲಿ ಗಂಭೀರ ಅನುಮಾನಗಳಿವೆ. ಕೆಲವು ರಸ್ತೆಗಳನ್ನು ನಿರ್ಮಿಸಿದ ಕೆಲವೇ ತಿಂಗಳಲ್ಲಿ ಅವು ಹಾಳಾಗುತ್ತಿರುವುದು ಸಾಮಾನ್ಯವಾಗಿದೆ. ಮಳೆ ಬಂದರೆ ರಸ್ತೆ ಕರಗುತ್ತದೆ, ಬಿಸಿಲು ಬಂದರೆ ಬಿರುಕು ಬಿಡುತ್ತದೆ. ಇದಕ್ಕೆ ಪ್ರಕೃತಿಯೇ ಕಾರಣವಲ್ಲ; ಕಳಪೆ ಕಾಮಗಾರಿ, ಮೇಲ್ವಿಚಾರಣೆಯ ಕೊರತೆ ಮತ್ತು ಜವಾಬ್ದಾರಿತನದ ಅಭಾವವೇ ಮುಖ್ಯ ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ.

ಅತ್ಯಂತ ಕಳವಳಕಾರಿ ಸಂಗತಿ ಎಂದರೆ, ರಸ್ತೆ ಗುಂಡಿಗಳು ಕೇವಲ ಅಸೌಕರ್ಯವಲ್ಲ; ಅವು ಸಾವಿನ ಬಲೆಗಳಾಗಿವೆ. ದ್ವಿಚಕ್ರ ವಾಹನ ಸವಾರರು, ಶಾಲಾ ಮಕ್ಕಳು, ವೃದ್ಧರು, ತುರ್ತು ಸೇವೆಗಳ ವಾಹನಗಳು ಪ್ರತಿದಿನ ಅಪಾಯ ಎದುರಿಸುತ್ತಿವೆ. ಪ್ರತೀ ವರ್ಷ ಅಪಘಾತಗಳು ನಡೆಯುತ್ತವೆ, ಜೀವಗಳು ಹೋಗುತ್ತವೆ, ನಂತರ ತನಿಖೆ ಮತ್ತು ಆರೋಪ-ಪ್ರತ್ಯಾರೋಪಗಳು ಆರಂಭವಾಗುತ್ತವೆ. ಆದರೆ ಮೃತಪಟ್ಟ ವ್ಯಕ್ತಿಯ ಜೀವವನ್ನು ಯಾವ ಕ್ರಮವೂ ಮರಳಿ ತರಲು ಸಾಧ್ಯವಿಲ್ಲ.

ಆದ್ದರಿಂದ ಈಗ ಜನರು ಕೇಳುತ್ತಿರುವ ಪ್ರಶ್ನೆ ಸ್ಪಷ್ಟವಾಗಿದೆ — “ಸಾವು ಆದ ಮೇಲೆ ಹೊಣೆಗಾರರ ಹುಡುಕಾಟ ಯಾಕೆ? ಸಾವು ಆಗದಂತೆ ಈಗಲೇ ರಸ್ತೆಗಳನ್ನು ಸುರಕ್ಷಿತಗೊಳಿಸುವ ಕೆಲಸ ಎಲ್ಲಿದೆ?”

ಮಂಗಳೂರು ನಗರದ ರಸ್ತೆಗಳಿಗೆ ಇನ್ನು ತಾತ್ಕಾಲಿಕ ತೇಪೆ ಪರಿಹಾರವಲ್ಲ, ಗುಣಮಟ್ಟದ ಶಾಶ್ವತ ಕಾಮಗಾರಿ ಬೇಕಿದೆ. ಮಳೆಗಾಲದ ಪ್ರತೀ ಹನಿಯ ಜೊತೆಗೆ ಜನರ ಜೀವಗಳು ದೊಂಬರಾಟ ಆಡಬಾರದು. ಅಧಿಕಾರಿಗಳ ಸಭೆಗಳಲ್ಲಿ ಎಚ್ಚರಿಕೆಗಳು ಕೇಳಿಸಿಕೊಳ್ಳುವುದಕ್ಕಿಂತ ರಸ್ತೆಗಳ ಮೇಲೆಯೇ ಬದಲಾವಣೆ ಕಾಣಬೇಕು. ಇಲ್ಲವಾದರೆ ಮುಂದಿನ ಮಳೆಗಾಲದಲ್ಲೂ ಇದೇ ಪ್ರಶ್ನೆ ಮತ್ತೆ ಕೇಳಿಸಿಕೊಳ್ಳಲಿದೆ — “ಹೊಣೆಗಾರರನ್ನು ಹುಡುಕುವುದೇ ಮುಖ್ಯವೇ, ಜೀವ ಉಳಿಸುವುದೇ ಮುಖ್ಯವೇ?”

  1. ಗುಂಡಿಯಲ್ಲಿ ಜೀವ ಬಿದ್ದ ಮೇಲೆ ಕ್ರಮವೇ? ಜೀವ ಉಳಿಸಲು ಈಗಲೇ ಕೆಲಸ ಯಾಕಿಲ್ಲ
  2. ಮಂಗಳೂರಿನ ರಸ್ತೆಗಳಿಗೆ ತೇಪೆ ಚಿಕಿತ್ಸೆ ಬೇಡ, ಶಾಶ್ವತ ಪರಿಹಾರ ಬೇಕು!
  3. ರಸ್ತೆ ಗುಂಡಿಗಳಲ್ಲಿ ಜನರ ಜೀವಗಳೇ ಪ್ರಯೋಗವಾ?

##UTKhader #MangaloreRoads #RoadSafety #PotholeCrisis #DakshinaKannada #PublicAccountability #FixTheRoads

COMMENTS

Login with Gmail to comment

ಇನ್ನಷ್ಟು ಸುದ್ದಿ

ದಕ್ಷಿಣ ಕನ್ನಡದ 14 ವರ್ಷದ ಎಲ್ಲ ಬಾಲಕಿಯರು ಉಚಿತ HPV ಲಸಿಕೆ ಹಾಕಿಸಿಕೊಳ್ಳಲು ಸಂಸದರ ಕರೆ
ಪಿಸ್ತೂಲ್ ತೋರಿಸಿ ಬೆದರಿಸಿ ಪರಾರಿಯಾಗಿದ್ದ ಯುವಕ ಬಂಧನ
AI ಡೀಪ್‌ಫೇಕ್ ಕೇವಲ ಸಿನಿಮಾ ನಟಿಯರಿಗೆ ಸೀಮಿತವಾಗಿಲ್ಲ .
ಅಕ್ರಮ ಪ್ರವೇಶ, ದೌರ್ಜನ್ಯ, ಹಾಗೂ ಕೃಷಿ ಚಟುವಟಿಕೆಗೆ ತಡೆಯ ಬಗ್ಗೆ ದೂರು ದಾಖಲು
ಆಡುತ್ತಾ ಆಡುತ್ತಲೇ ಜೀವ ಬಿಟ್ಟ ಫಿಟ್ ಆಗಿದ್ದ ಯುವಕ್ರಿಕೆಟಿಗ… ನೀರು ಕುಡಿದ ತಕ್ಷಣವೇ ಕುಸಿದು ಬಿದ್ದ ರಣಜಿ ಆಟಗಾರ… 
ತಮಿಳುನಾಡು ರಾಜಕೀಯದಲ್ಲಿ ಮೆಗಾ ಟ್ವಿಸ್ಟ್…ಸ್ಟಾಲಿನ್ DMKತಂಡದ ವಾಕ್‌ಔಟ್ ರಾಜಕೀಯ ಲೆಕ್ಕಾಚಾರವಾ?
ಬೃಹತ್ ಅಭಿಯಾನ….5.51 ಟನ್ ವಸ್ತುಗಳು..!5000ಕ್ಕೂ ಹೆಚ್ಚು ದೇವರ ಫೋಟೋಗಳು
ಗೃಹಲಕ್ಷ್ಮಿ ಹಣ ಉಳಿಸಿ ದೇವಿಗೆ ₹17 ಲಕ್ಷ ದೇಣಿಗೆ!
KSRTC ಬಸ್ ಪಲ್ಟಿಯಾಗಿ ಕಂದಕಕ್ಕೆ — ಐವರು ದುರ್ಮರಣ, ಹಲವರಿಗೆ ಗಂಭೀರ ಗಾಯ-ಜಹೀರಾಬಾದ್ ಸಮೀಪ ಭೀಕರ ರಸ್ತೆ ಅಪಘಾತ
ಟೂರಿಸಂ ಡೆವಲಪ್‌ಮೆಂಟ್‌ಗೆ ಅಧಿಕಾರಿಗಳೇ ಮಾರಕ
ಥಾರ್ ಕಾರ್ ನಲ್ಲಿ ಬಂದು ದೇವಸ್ಥಾನದಲ್ಲಿ ವಿಕೃತಿ ಮೆರೆದ ಕಿಡಿಗೇಡಿ!
ಮಂತ್ರಾಲಯದ ಮಠದ ಹೆಸರಲ್ಲಿ 3 ಲಕ್ಷ ಆಸೆ ತೋರಿಸಿ ವಂಚನೆ..!
War update-ಕಂಪ್ಲೀಟ್ ಡೀಟೇಲ್ಸ್ …ಮುಂದೇನು? ceasefire ಮುಂದುವರಿಯುತ್ತದೆಯಾ?ಶಾಂತಿ ಅಥವಾ ಸಂಘರ್ಷ? ಮುಂದಿನ ಕೆಲ ದಿನಗಳು ವಿಶ್ವದ ಭವಿಷ್ಯ ತೀರ್ಮಾನಿಸುತ್ತದೆ.
ಭಾರತೀಯ ಸೇನೆಯ ನೆರವಿಗೆ ಡ್ರೋನ್ ನರ್ಸಿಂಗ್ ಹೋಮ್! ದುರ್ಗಮ ಪ್ರದೇಶಗಳಲ್ಲೂ ಸಿಗಲಿದೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ
ಇಂದು ಮಾಜಿ ಸಚಿವರಿಂದ ಸೌಹಾರ್ದ ಇಫ್ತಾರ್ ಕೂಟ 
ಮಂಗಳೂರಿಗರಿಗೆ ಎಚ್ಚರಿಕೆ: ನೀರನ್ನು ಜಾಣ್ಮೆಯಿಂದ ಬಳಸಿ –ಮಾರ್ಚ್ ನಲ್ಲೇ ರೇಷನಿಂಗ್ ಮಾಡುವ ಪರಿಸ್ಥಿತಿ ಇದೆ…
ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು: ದಯಾ ಮರಣಕ್ಕೆ ಅನುಮತಿ
ಬಂಗಾಳ ಚುನಾವಣೆ ಫಲಿತಾಂಶವೇ ಬದಲಾಗಿತ್ತಾ?ಬಂಗಾಳ ರಾಜಕೀಯದಲ್ಲಿ ಹೊಸ ಬಾಂಬ್!ಸುಪ್ರೀಂ ಕೋರ್ಟ್ ಮುಂದೆ ಬಿಜೆಪಿ ಜಯದ ಮೇಲೆ ಟಿಎಂಸಿ ದೊಡ್ಡ ಪ್ರಶ್ನೆ!
ಆನ್‌ಲೈನ್ ಗೋಲ್ಡ್ ಮಾರ್ಕೆಟ್ ಹೂಡಿಕೆಯಲ್ಲಿ ಮೋಸ- ಮಹಿಳೆಗೆ ₹10.55 ಲಕ್ಷ ನಷ್ಟ
ಉದ್ಯಮಿ, ಕಾಲೇಜ್ topper,  ಕೋಟ್ಯದೀಶರೇ…ಕಠಿಣ ಜೈನ ಸನ್ಯಾಸದತ್ತ…!
ಟೂರ್ plan ಮಾಡ್ತಿದ್ದೀರಾ ?ಸ್ಥಳವೇ ಇಲ್ಲದ address ಗೆ online book ಮಾಡಿ ಮೋಸ ಹೋಗ್ಬೇಡಿ…
ಹೈಕೋರ್ಟ್ ತೀರ್ಪಿನಿಂದ ದಕ್ಷಿಣ ಕನ್ನಡ ಇ-ರಿಕ್ಷಾ ಚಾಲಕರಿಗೆ favour
ಅಮೇರಿಕಾ ಅಧ್ಯಕ್ಷರ ಮೇಲೆ ಎರಡನೆಯ ಬಾರಿ ಗುಂಡಿನ ದಾಳಿ
ಆನ್‌ಲೈನ್ ಕೇರಳ ಲಾಟರಿ ಹೆಸರಿನಲ್ಲಿ 1.85 ಲಕ್ಷ ವಂಚನೆ – ಸೈಬರ್ ವಂಚಕರ ಜಾಲ ಪತ್ತೆ
ನಿಮ್ಮ ಮಾತು ಕೇಳಿ ರಾಜೀನಾಮೆ ನೀಡಿದ್ದೇನೆ. ಈಗ ನನ್ನ ಬೇಡಿಕೆ ಈಡೇರಿಸುವುದು ನಿಮ್ಮ ಸರದಿ  ಎಂದ ಸಿದ್ದರಾಮಯ್ಯ
🚨 ಮಂಗಳೂರು ನಿವಾಸಿಗಳಿಗೆ ಮಹತ್ವದ ಮಾಹಿತಿ – 2026 ಘನತ್ಯಾಜ್ಯ ನಿರ್ವಹಣೆ ಹೊಸ ನಿಯಮ  🚨
ಕೊನೆಗೂ ಸೋತ ಖಾಕಿ….!!!
ಪ.ಪಂ ಮುಖ್ಯಾಧಿಕಾರಿ – 1 ಲಕ್ಷ ಲಂಚ ಸ್ವೀಕಾರದ ವೇಳೆ ರೆಡ್ ಹ್ಯಾಂಡ್!
ಚುನಾವಣೆಯವರೆಗೆ ಮೌನ, ನಂತರ LPG ದರ ಭಾರಿ ಏರಿಕೆ –ಇದು ರಾಜಕೀಯ ಅಜೆಂಡಾನಾ?
ನಾಸಿಕ್ TCS ಪ್ರಕರಣ-ಸತ್ಯ ಮರೆಮಾಚಿದವರಾರು?ಕಾರ್ಪೊರೇಟ್ ಜಗತ್ತಿನ ಕತ್ತಲೆ ಮುಖ:HRಮಹಿಳೆಯಾಗಿಯೂ…..