📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಚಿನ್ನ ಖರೀದಿಸುವ ಕಾಲ ಹೋಯ್ತಾ? ಗಗನಕ್ಕೇರಿದ ದರ ಕೇಳಿ ಬೆಚ್ಚಿಬಿದ್ದ ಜನ!ಒಂದೂವರೆ ಲಕ್ಷ ರೂಪಾಯಿ ಗಡಿದಾಟಿತಾ …?ಬೆಳ್ಳಿಎರಡೇ ದಿನದಲ್ಲಿ ಆರು ಸಾವಿರ ಏರಿಕೆ

    ಒಂದು ಕಾಲದಲ್ಲಿ 20-30 ಸಾವಿರ ರೂ.ಗೆ ಸಿಗುತ್ತಿದ್ದ 10 ಗ್ರಾಂ ಚಿನ್ನ ಇಂದು ಕೆಲವೆಡೆ ಒಂದೂವರೆ ಲಕ್ಷ ರೂಪಾಯಿ ಗಡಿ ದಾಟಿದೆ. ಬೆಲೆ ಕೇಳಿದರೆ ಸಾಮಾನ್ಯ ಜನರಿಗೆ ಶಾಕ್ ಆಗುತ್ತಿದೆ. ಆದರೆ ಭಾರತೀಯರ ಚಿನ್ನದ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ…ಚಿಕ್ಕದಾದ್ರೂ ಸರಿ ಅಗತ್ಯ ಬಂದ್ರೆ ಖರೀದಿಸಲೇ ಬೇಕು, ಕೆಲವ್ ಸಂದರ್ಭ ಅನಿವಾರ್ಯ ಕೂಡ ..

    ಚಿನ್ನದ ಬೆಲೆ ಗಗನಕ್ಕೇರಿತು! ಮಹಿಳೆಯರ ನೆಚ್ಚಿನ ಆಭರಣ ಈಗ ಮತ್ತಷ್ಟು ಅಮೂಲ್ಯ.

    ಗೋಲ್ಡ್ ದರ ಏರು ಮುಖದಲ್ಲಿ.. ಬೆಳ್ಳಿಯ ದರ ಎರಡೇ ದಿನದಲ್ಲಿ ಆರು ಸಾವಿರ ಏರಿಕೆ

    ಇಡೀ ಜಗತ್ತಿನ ಆರ್ಥಿಕತೆ ನಿಂತಿರುವುದೇ ಚಿನ್ನ ಬೆಳ್ಳಿಯಂತಹ ಭೂಮಿಯ ಒಡಲಿನಿಂದ ಸಿಗುವಂತಹ ಖನಿಜ ಸಂಪತ್ತಿನಿಂದ. ಡಾಲರ್ ದರ ಕೂಡ ಇದಕ್ಕೆ ಹೊರತಾಗಿಲ್ಲ. ಒಂದೇ ಸಮನೆ ಚಿನ್ನ ಬೆಳ್ಳಿಯ ದರ ಏರುತ್ತಾ ಸಾಗುತ್ತಿದೆ. ಯಾವುದೇ ಬಲಾಡ್ಯರ ಹಿಡಿತಕ್ಕೂ ಆ ದರ ಏರಿಕೆ ಕಡಿವಾಣ ಸಿಗುತ್ತಿಲ್ಲ.


    ಶನಿವಾರ ಒಂದು ಗ್ರಾಂ ಗೆ13, 300ರಷ್ಟಿದ್ದ 22 ಕ್ಯಾರೆಟ್ ಚಿನ್ನದ ದರ ಇಂದು ಬರೋಬ್ಬರಿ 220 ನಷ್ಟು ಏರಿಕೆ ಕಂಡಿದೆ. ಅದೇ ರೀತಿ ಬೆಳ್ಳಿ ೧ ಕೆ.ಜಿಗೆ ಎರಡು ಲಕ್ಷದ 52 ಸಾವಿರ ದರ ಶನಿವಾರದ ಸಂಜೆಯ ಹೊತ್ತಿಗೆ ಇತ್ತು. ಅದೇ ಒಂದು ಕೆಜಿ ಬೆಳ್ಳಿಗೆ ಸೋಮವಾರ ಮುಂಜಾನೆಯ ಹೊತ್ತಿಗೆ ಎರಡು ಲಕ್ಷದ 58000 ಆಗಿದೆ. ಬರೋಬ್ಬರಿ 6000 ನೆಗೆತ ಕಂಡಿದೆ.
    ಚಿನ್ನವೂ ಸಹ 10 ಗ್ರಾಂ ಗೆ ಎರಡು ಸಾವಿರದ ಇನ್ನೂರು ರೂಪಾಯಿ ನೆಗೆತ ಕಂಡಿದೆ.
    ಇದೇ ರೀತಿಯ ದರ ಏರಿಕೆಯು, ಅರಾಜಕತೆ ಹಾಗೂ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಯಾರ ನಿಯಂತ್ರಣಕ್ಕೂ ಸಿಗದಂತೆ ಏರುತ್ತಿರುವ ಈ ದರವನ್ನು ಕಂಟ್ರೋಲಿಗೆ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಅನಾರೋಗ್ಯಕರ ಪ್ರೀತಿಯಲ್ಲಿ ದರ ಏರಿಕೆಯಾಗುತ್ತಿದೆ.

    ಒಟ್ಟಾರೆಯಾಗಿ ಜನರ ಆದಾಯದಲ್ಲಿ ಯಾವುದೇ ಏರಿಕೆ ಕಾಣಿಸದಿದ್ದರೂ, ಚಿನ್ನ ಬೆಳ್ಳಿಯಂತಹ ಪ್ರಮುಖ ಆರ್ಥಿಕ ಮೂಲದ ದರವು ಏರಿಕೆಯಾಗುತ್ತಿರುವುದು ಸಾಮಾನ್ಯ ಜನರ ಮನೆಯ ಮೇಲು ಅದರ ಪರಿಣಾಮ ಬೀರುವುದು ಖಚಿತ ಅಂತಲೆ ಆರ್ಥಿಕ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.

    ಯಾವುದೇ ವಸ್ತುವಿನ ಬೆಲೆ ಆರೋಗ್ಯಕರವಾದ ರೀತಿಯಲ್ಲಿ ಇರಬೇಕು ಆ ರೀತಿಯಲ್ಲಿ ಇರುವಂತೆ ನೋಡಿಕೊಳ್ಳುವುದು ದೇಶ ಹಾಗೂ ಜಗತ್ತಿನ ಎಲ್ಲಾ ದೇಶಗಳ ಆಡಳಿತದ ಕರ್ತವ್ಯವಾಗಿರಬೇಕಿತ್ತು. ಆದರೆ ಈಗ, ಜಗತ್ತಿನ ಯಾವ ದೇಶದ ಆಡಳಿತಕ್ಕೂ ಸೊಪ್ಪು ಹಾಕದ ರೀತಿಯಲ್ಲಿ ನೆಗೆತ ಕಾಣುತ್ತಿರುವುದು ಭವಿಷ್ಯಕ್ಕೆ ಮಾರಕವಾಗಬಹುದು ಎನ್ನಲಾಗುತ್ತಿದೆ

    ಭಾರತೀಯರ ಬದುಕಿನಲ್ಲಿ ಚಿನ್ನಕ್ಕೆ ವಿಶೇಷ ಸ್ಥಾನವಿದೆ. ಅದರಲ್ಲೂ ಮಹಿಳೆಯರಿಗೆ ಚಿನ್ನ ಎಂದರೆ ಕೇವಲ ಆಭರಣವಲ್ಲ, ಅದು ಭಾವನೆ, ಸಂಪ್ರದಾಯ ಮತ್ತು ಭದ್ರತೆಯ ಸಂಕೇತ. ಮದುವೆ, ನಾಮಕರಣ, ಹಬ್ಬ-ಹರಿದಿನ, ಶುಭ ಸಮಾರಂಭ ಹೀಗೆ ಯಾವುದೇ ವಿಶೇಷ ಸಂದರ್ಭ ಚಿನ್ನವಿಲ್ಲದೆ ಪೂರ್ಣವಾಗುವುದಿಲ್ಲ.

    ಈಗ ಚಿನ್ನದ ಬೆಲೆ ಐತಿಹಾಸಿಕ ಏರಿಕೆ ಕಂಡಿದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಸುಮಾರು ₹1.00 ಲಕ್ಷದಿಂದ ₹1.10 ಲಕ್ಷ ಗಡಿ ದಾಟಿದೆ. ಇದರಿಂದ ಚಿನ್ನ ಖರೀದಿಸಲು ಯೋಜಿಸಿದ್ದ ಕುಟುಂಬಗಳು ಮತ್ತು ಮಹಿಳೆಯರಲ್ಲಿ ಚರ್ಚೆ ಜೋರಾಗಿದೆ. “ಇನ್ನೂ ಏರುತ್ತದೆಯೇ ಅಥವಾ ಇಳಿಯುತ್ತದೆಯೇ?” ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

    ಭಾರತೀಯ ಕುಟುಂಬಗಳಲ್ಲಿ ಚಿನ್ನವನ್ನು ಯಾವಾಗಲೂ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ಷೇರು ಮಾರುಕಟ್ಟೆ ಏರಿಳಿತ ಕಂಡರೂ, ಆರ್ಥಿಕ ಅನಿಶ್ಚಿತತೆ ಎದುರಾದರೂ, ಚಿನ್ನ ತನ್ನ ಮೌಲ್ಯವನ್ನು ಉಳಿಸಿಕೊಳ್ಳುವ ಆಸ್ತಿಯಾಗಿದೆ ಎಂಬ ನಂಬಿಕೆ ಜನರಲ್ಲಿದೆ. ಅದಕ್ಕಾಗಿಯೇ ಅನೇಕ ಕುಟುಂಬಗಳು ತಮ್ಮ ಉಳಿತಾಯದ ಒಂದು ಭಾಗವನ್ನು ಚಿನ್ನದ ರೂಪದಲ್ಲಿ ಇಡುತ್ತಾರೆ.

    ತಜ್ಞರ ಪ್ರಕಾರ ಜಾಗತಿಕ ಆರ್ಥಿಕ ಅನಿಶ್ಚಿತತೆ, ಯುದ್ಧದ ಆತಂಕ, ಡಾಲರ್ ಮೌಲ್ಯದ ಏರಿಳಿತ ಹಾಗೂ ಸುರಕ್ಷಿತ ಹೂಡಿಕೆಯತ್ತ ಜನರ ಒಲವು ಹೆಚ್ಚುತ್ತಿರುವುದು ಚಿನ್ನದ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯನ್ನೂ ಕೆಲವರು ವ್ಯಕ್ತಪಡಿಸುತ್ತಿದ್ದಾರೆ.

    ಒಂದು ಕಾಲದಲ್ಲಿ “ಚಿನ್ನ ಖರೀದಿಸೋಣ” ಎಂದು ಸುಲಭವಾಗಿ ನಿರ್ಧಾರ ಮಾಡುತ್ತಿದ್ದ ಕುಟುಂಬಗಳು ಇಂದು ಬೆಲೆ ಕೇಳಿ ಅಚ್ಚರಿ ಪಡುತ್ತಿವೆ. ಆದರೆ ಬೆಲೆ ಎಷ್ಟೇ ಏರಿದರೂ ಭಾರತೀಯರ ಚಿನ್ನದ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಏಕೆಂದರೆ ಚಿನ್ನ ಕೇವಲ ಲೋಹವಲ್ಲ, ಅದು ಭಾರತೀಯ ಸಂಸ್ಕೃತಿ, ಕುಟುಂಬದ ಗೌರವ ಮತ್ತು ಭವಿಷ್ಯದ ಭದ್ರತೆಯ ಪ್ರತೀಕವಾಗಿದೆ.

    ಹೀಗಾಗಿ ಈಗ ಎಲ್ಲರಲ್ಲೂ ಒಂದೇ ಪ್ರಶ್ನೆ – ಚಿನ್ನದ ಬೆಲೆ ಇನ್ನೂ ಎಷ್ಟು ಏರಲಿದೆ? ಅಥವಾ ಖರೀದಿಸಲು ಇದೇ ಸರಿಯಾದ ಸಮಯವೇ? ಉತ್ತರ ಮುಂದಿನ ದಿನಗಳ ಮಾರುಕಟ್ಟೆ ಬೆಳವಣಿಗೆಗಳ ಮೇಲೆ ನಿಂತಿದೆ..

    ##GoldRateToday #GoldPriceIndia #GoldNews #KannadaNews #GoldInvestment #GoldLovers

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಎಂಡೋಸಲ್ಫಾನ್ ಸಂತ್ರಸ್ತರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರ
    “ವಾಟ್ಸಾಪ್ university ” (ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ತಪ್ಪು/ಅಪೂರ್ಣ ಮಾಹಿತಿ)ಕುರಿತು ಸುಪ್ರೀಂ ಕೋರ್ಟ್ ಖಡಕ್ ನಿಲುವು…!
    ವಂದೇ ಮಾತರಂ ವಿವಾದ ದೇಶಭಕ್ತಿಯ ಸಂಕೇತವೇ, ರಾಜಕೀಯ ಅಸ್ತ್ರವೇ?
    ಲೈಂಗಿಕ ಕಿರುಕುಳ ನೀಡಿದ ಬಾಸ್‌ಗೆ ಪೊಲೀಸರ ಮುಂದೆಯೇ ಮುಖಕ್ಕೆ ಮಸಿ ಬಳಿದು ಕೆನ್ನೆಗೆ ಬಾರಿಸಿದ ಮಹಿಳೆ!
    ರೀಲ್ಸ್ ನೋಡುವ ಕೈಗಳೇ… ದೇಶ ಕಟ್ಟುವ ಕೈಗಳಾಗಬಹುದು.ಡ್ರಗ್ಸ್ ,ಮೊಬೈಲ್ ,ವ್ಯಸನಗಳು ನಿಮ್ಮ ಕನಸುಗಳನ್ನು ಕದಿಯುವ ಮೊದಲು… ಯುವಕರೇ ಎಚ್ಚರಗೊಳ್ಳಿ!
    ಕುಡಿತದ ಅಮಲಿನಲ್ಲಿ ಹೆತ್ತ ತಾಯಿಯನ್ನೇ ಕೊಂದ ಮಗಳು, ಮೊಮ್ಮಗ: ಕೆಂಗೇರಿಯಲ್ಲಿ ಕರುಳು ಹರಿಯುವ ಕೃತ್ಯ!
    Top 5, ಹೆಚ್ಚು ಅನುದಾನ ಪಡೆದ ಇಲಾಖೆಗಳು ಯಾವವು ಗೊತ್ತಾ?
    🛑 ನಾಗರಮಠದಲ್ಲಿ ಅವೈಜ್ಞಾನಿಕ ಮರಳುಗಾರಿಕೆ ವಿರುದ್ಧ ಗ್ರಾಮಸ್ಥರ ಆಕ್ರೋಶ
    ಅಮ್ಮಾ, ನನ್ನನ್ನು ಕ್ಷಮಿಸು’ ಎಂದು ಡೆತ್‌ನೋಟ್ ಬರೆದು ಯುವಕ ಆತ್ಮಹತ್ಯೆ
    ಮಾರ್ಚ್ 7 ರಂದು ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಆಗಮನ
    ಪಿವಿ ಎಸ್ ಸಂಸ್ಥೆಯ ಆಡಳಿತದಲ್ಲಿ ಯಾರ ಹಸ್ತಕ್ಷೇಪವು ಇಲ್ಲ – ಸರೋಜಿನಿ ಕುಶೆ
    ಮಣಿಪಾಲ ಜೆಇಇ ಮೇನ್ಸ್ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಪ್ರಯತ್ನ….
    ಕ್ರಿಕೆಟ್ pad gloves ಒಳಗೆ ಕೋಟಿ ಕೋಟಿ ಕೊಕೇನ್!
    ಒಂದು ದಿನ ಕೈದಿ ಆಗ್ಬೇಕಾ? ಜೈಲು ಜೀವನ ಹೇಗಿರುತ್ತೆ ಅನ್ನೋ ಕುತೂಹಲಕ್ಕೀಗ ಚಂಚಲ್‌ಗುಡ ಜೈಲು ಬಾಗಿಲು ಈಗ ಸಾರ್ವಜನಿಕರಿಗೆ ಓಪನ್!
    ಪ್ರಧಾನಿ ಮೋದಿ ಇಂದು ಬಂಟ್ವಾಳ ಸೇರಿ ಕರ್ನಾಟಕದ 4 ನವೀಕೃತ ರೈಲುನಿಲ್ದಾಣಗಳು ಲೋಕಾರ್ಪಣೆ..!
    ಅಳಕೆ ಮಾರುಕಟ್ಟೆ ಬಳಿ ಕಸ ಸುರಿದ ಮಹಿಳೆಗೆ ₹1,000 ದಂಡ..ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದರೆ ದಂಡ ಖಚಿತ! 
    ಮುಖವಾಡ ಧರಿಸಿದವರನ್ನು ನಂಬುವ ಮುನ್ನ ನೂರು ಬಾರಿ ಯೋಚಿಸಿ…!
    ಕಾರ್ಕಳದ ವೈದ್ಯಕೀಯ ವಿದ್ಯಾರ್ಥಿನಿ ಭೀಕರ  ಅಪಘಾತಕ್ಕೆ ಬಲಿ
    ಸರಸಕ್ಕೆ ಅಡ್ಡಿಪಡಿಸಿದ ಯುವಕನ ಮೇಲೆ  ಭೀಕರ ದಾಳಿ: ಗುಜರಾತ್‌ನಲ್ಲಿ 21 ವರ್ಷದ ಯುವಕ ಬಲಿ
    ₹10,000ಕ್ಕೆ NEET-UG 2026 ಪ್ರಶ್ನೆಪತ್ರಿಕೆ? ದೇಶವೇ ಬೆಚ್ಚಿಬಿದ್ದ ಲೀಕ್ ಸ್ಕಾಂಡಲ್!ಟೆಲಿಗ್ರಾಂ ಸೀಕ್ರೆಟ್ ಚಾಟ್ ವೈರಲ್…22 ಲಕ್ಷ ವಿದ್ಯಾರ್ಥಿಗಳ ಕನಸಿಗೆ ದೊಡ್ಡ ಹೊಡೆತ — NEET 2026 ರದ್ದು!
    ಆಯುಷ್ ಎಚ್ಚರಿಕೆ ಬಳಿಕ ಅಶ್ವಗಂಧ ನಿಯಂತ್ರಣ ಕ್ರಮಕ್ಕೆ ತಡೆ: ಹೈಕೋರ್ಟ್ ಮಹತ್ವದ ಆದೇಶ
    ರಾಜಧಾನಿಯ ಫುಟ್‌ಪಾತ್ ಮೇಲಿದ್ದ ಮಗುವನ್ನು ಎತ್ತಿಕೊಂಡು ಹೋಗಿ ಕ್ರೌರ್ಯ ಮೆರೆದ ಕಾಮುಕನ ಧೈರ್ಯ ಮತ್ತು ಭೀಕರ ಹತ್ಯೆ ಬಿಚ್ಚಿಟ್ಟ ಸತ್ಯ!
    ಹೊಸ ರಾಜಕೀಯ ಕ್ರಾಂತಿ! ಅಸ್ಸಾಂ ಕುದಿಯುತ್ತಿದೆ…ಹಿಂದುತ್ವ vs ಗುರುತು ರಾಜಕೀಯ…!
    ನಾಸಿಕ್ TCS ಪ್ರಕರಣ-ಸತ್ಯ ಮರೆಮಾಚಿದವರಾರು?ಕಾರ್ಪೊರೇಟ್ ಜಗತ್ತಿನ ಕತ್ತಲೆ ಮುಖ:HRಮಹಿಳೆಯಾಗಿಯೂ…..
    ಕರಾವಳಿಯಲ್ಲಿ ಶುರುವಾಯ್ತು MESCOM ಮಹಾಸಮರ!ಬಯಲಾಗುತ್ತಾ “ಬ್ರಹ್ಮಾಂಡ ಭ್ರಷ್ಟಾಚಾರ”..!?
    “ಅಕ್ಕಾ, ಮನೆಗೆ ಹೋಗೋಣ” ಎಂದು ಅಕ್ಕನನ್ನು ಕರೆತರಲು ಬಂದ ಅಪೂರ್ವ… ಕೆಲವೇ ಕ್ಷಣಗಳಲ್ಲಿ ಕಬ್ಬಿಣದ ಗೇಟ್ ಅಡಿಯಲ್ಲಿ ಅಂತ್ಯ
    ಲಖನೌ ಅಗ್ನಿ ದುರಂತದ ಕೊನೆ ಕ್ಷಣದ ಫೋನ್ ಕರೆಗಳು …”ಅಪ್ಪಾ,ಪ್ಲೀಸ್ ನನ್ನನ್ನು ಉಳಿಸು…” – “ನನ್ನ ಮಗನ ಬಳಿ ಹೋಗಲು ಬಿಡಿ…”
    ಕೊಲೆ ಆರೋಪಿಯ ದೂರುದಾರನ ವಿಷ ಸೇವನೆಯ ಬಗ್ಗೆ  ಸ್ಪಷ್ಟನೆ
     “ತಪ್ಪು ಮಾಡಿದ್ರೆ ಕೈ-ಕಾಲು ಕತ್ತರಿಸ್ಬೇಕು, ಆಗಲೇ ಕಾನೂನಿನ ಭಯ ಬರೋದು! “ಗಲ್ಫ್ ದೇಶಗಳ ಮಾದರಿ ಶಿಕ್ಷೆ ಜಾರಿಯಾಗ್ಬೇಕು ಅನ್ನೋ ನ್ಯಾಯಮೂರ್ತಿಗಳ ನಿಲುವಿಗೆ ಇಡೀ ರಾಜ್ಯವೇ ಜೈ ಅಂತಿದೆ!
    ವಿಶ್ವದ ನಂಬರ್ ವನ್ ಜನನಾಯಕನಾದ ಪ್ರಧಾನಿ ಮೋದಿ