📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ನಿಮ್ಮ ಮಾತು ಕೇಳಿ ರಾಜೀನಾಮೆ ನೀಡಿದ್ದೇನೆ. ಈಗ ನನ್ನ ಬೇಡಿಕೆ ಈಡೇರಿಸುವುದು ನಿಮ್ಮ ಸರದಿ  ಎಂದ ಸಿದ್ದರಾಮಯ್ಯ

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತಕ್ಷಣವೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯ ಹೈಕಮಾಂಡ್ ಬಂಗಲೆಗೆ ನುಗ್ಗಿದ್ದಾರೆ. ಅವರು ಹಾಗೇ ನುಗ್ಗುವುದರ ಹಿಂದಿನ ಉದ್ದೇಶವೇನು? ನಾನು ನಿಮ್ಮ ಮಾತಿಗೆ ಬೆಲೆ ಕೊಟ್ಟು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಶಾಸಕರ ಸಂಪೂರ್ಣ ಬೆಂಬಲ ಇದ್ದರೂ ಸಹ, ನಾನು ನಿಮಗೆ ಗೌರವ ನೀಡಿ ರಾಜೀನಾಮೆ ನೀಡಿದ್ದೇನೆ. ನೀವು ಹೇಳಿದಂತೆಯೇ ರಾಜೀನಾಮೆ ಕೊಟ್ಟು ನಿಮ್ಮ ಮುಂದಿದ್ದೇನೆ ನೋಡಿ, ಈಗ ನನ್ನ ಬೇಡಿಕೆ ಈಡೇರಿಸುವುದು  ನಿಮ್ಮ ಜವಾಬ್ದಾರಿಯಾಗಿದೆ  ಎಂದು ಜಟ್ಟಿಯಂತೆ ಕೂತಿದ್ದಾರೆ ಸಿದ್ದರಾಮಯ್ಯ.

ಹೌದು ದೆಹಲಿಗೆ ಹೋಗಿರುವ ಸಿದ್ದರಾಮಯ್ಯ, ತಮ್ಮ ರಾಜಕೀಯ ದಾಳವನ್ನು ಉರುಳಿಸಲು ಪ್ರಾರಂಭಿಸಿದ್ದಾರೆ. ರಾಷ್ಟ್ರ ರಾಜಕಾರಣಕ್ಕೆ ಬರಲು ನನ್ನ ಮನಸ್ಸು ಒಪ್ಪುತ್ತಿಲ್ಲ ನಾನೇನಿದ್ದರೂ ರಾಜ್ಯದಲ್ಲಿಯೇ ಸಕ್ರಿಯ ನಾಗರುತ್ತೇನೆ ಎಂದು ಹೇಳುತ್ತಲೇ, ತಮ್ಮದೇ ಆದ ಲಿಸ್ಟನ್ನು  ವರಿಷ್ಠರ ಬಳಿ ಇಟ್ಟಿದ್ದಾರೆ

ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲು ಸುತಾರಾಂ ಇಷ್ಟಪಡದ ಸಿದ್ದರಾಮಯ್ಯ, ವರಿಷ್ಠರನ್ನು ಎದುರು ಹಾಕಿಕೊಳ್ಳಲಾಗದೆ ಡಿಕೆ ಮುಖ್ಯಮಂತ್ರಿ ಗಾದಿಗೆರಲು ಗ್ರೀನ್ ಸಿಗ್ನಲ್ ಕೊಟ್ಟಿದ್ದರೆ. ಆದರೆ ಮನಸ್ಸು ಡಿಕೆ ಮುಖ್ಯಮಂತ್ರಿ ಆಗಿ ಒಂದು ವರೆಯಲು ಒಪ್ಪುತ್ತಿಲ್ಲ. ಹಾಗಾಗಿಯೇ ಈಗ ಸರ್ಕಾರ ಹಾಗೂ ಪಕ್ಷದ ಮೇಲೆ ತಮ್ಮ ಪ್ರಬಲ ಹಿಡಿತವನ್ನು ಸ್ಥಾಪಿಸುವ ಕೆಲಸಕ್ಕಾಗಿಯೇ ಸಿದ್ದರಾಮಯ್ಯ ಮಗನ ಜೊತೆಗೆ ದೆಹಲಿಯ ಪ್ರಯಾಣ ಮುಂದುವರೆಸಿದ್ದಾರೆ.

ರಾಹುಲ್ ಗಾಂಧಿಯವರ ನಿವಾಸಕ್ಕೆ ಅಧಿಕೃತವಾಗಿ ಭೇಟಿ ನೀಡಿದ ಮಾಜಿ ಸಿಎಂ, ನಿಮ್ಮ ಮಾತನ್ನು ಪಾಲಿಸಿದ್ದೇನೆ. ಇನ್ನು ನನ್ನ ಇಚ್ಛೆಯನ್ನು ಈಡೇರಿಸುವುದು ನಿಮ್ಮ ಹೊಣೆ ಎಂದು ಮುಗುಳ್ನಗುತ್ತಲೇ ಪಟ್ಟಿಯನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಆ ಪಟ್ಟಿಯಲ್ಲಿರುವ  20 ಜನರ ಪೈಕಿ ಕನಿಷ್ಠ 15 ಜನರಿಗಾದರೂ ಮಂತ್ರಿ ಮಾಡಬೇಕೆಂದು ಹಾಗೂ ಅವರಿಗೆ ಸಚಿವ ಸ್ಥಾನ ನೀಡಬೇಕೆನ್ನುವ ಪಟ್ಟಿ ಹೈಕಮಾಂಡ್ ಮುಂದೆ ಇಟ್ಟಿದ್ದಾರೆ.

ರಾಜ್ಯದಲ್ಲಿ, ಸಾಮಾಜಿಕ ನ್ಯಾಯದ ಅವಶ್ಯಕತೆ ಖಂಡಿತಾ ಇದೆ. ಕಾಂಗ್ರೆಸಿನ ಭವಿಷ್ಯ ಇರುವುದೇ ಆ ವಿಚಾರದಲ್ಲಿ. ಅಹಿಂದ ವರ್ಗ ಸಂಪೂರ್ಣವಾಗಿ ನನ್ನ ಜೊತೆಗಿದೆ. ಅವರು ನನ್ನ ಸಾಮಾಜಿಕ ನ್ಯಾಯದ ವಿಚಾರದ ಪರವಾಗಿದ್ದಾರೆ. ಆ ವಿಚಾರದಲ್ಲಿ ನಾನು ಎಂದು ರಾಜ ಮಾಡಿಕೊಂಡಿಲ್ಲ ಅನ್ನುವುದು ಅವರಿಗೆ ಗೊತ್ತಿದೆ. ಒಂದೊಮ್ಮೆ ನಾನು ತಟಸ್ಥರಾದರೆ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಬಹುದೊಡ್ಡ ಡ್ಯಾಮೇಜ್ ಆಗುತ್ತದೆ ಎಂಬುದನ್ನು ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯ ಮುಂದೆ ಹೇಳಿದ್ದಾರೆ ಅನ್ನುವುದಕ್ಕಿಂತ ಸೈಲೆಂಟಾಗಿ ನಗುನಗುತ್ತಲೇ ಥ್ರೆಟ್ ನೀಡಿದ್ದಾರೆ ಎನ್ನಬಹುದು

ಪ್ರಿಯಾಂಕ ಗಾಂಧಿ ಹಾಗೂ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿರುವ ಸಿದ್ದರಾಮಯ್ಯನವರು, ಪಕ್ಷ ಹಾಗೂ ಸರ್ಕಾರ ಎರಡಕ್ಕೂ ಭದ್ರತೆ ಇರಬೇಕು ಎಂದರೆ ನಾನು ರಾಜ್ಯದಲ್ಲಿ ಸಕ್ರಿಯನಾಗಿರಲೇಬೇಕು. ನಾನು ಸಕ್ರಿಯನಾಗಿರಬೇಕು ಎಂದರೆ ನನಗೆ ಬಲ ತುಂಬುವ ಕೆಲಸವನ್ನು ನೀವು ಮಾಡಬೇಕು. ಸರ್ಕಾರ ಹಾಗೂ ಪಕ್ಷ ಎರಡು ವಿಚಾರದಲ್ಲಿ ನನಗೆ ಅವಕಾಶ ಇರುವ ಹಾಗೆ ನೋಡಿಕೊಳ್ಳಬೇಕು. ಹೀಗೆ ಮಾಡಿದಲ್ಲಿ, 2028ರ ಚುನಾವಣೆ ಫಲಿತಾಂಶ ನಮ್ಮ ಪರವಾಗಿರುತ್ತದೆ ಎನ್ನುವುದನ್ನು ನಾನು ಈಗ ವಾಗ್ದಾನ ನೀಡುತ್ತೇನೆ ಎಂದು ಕಾನ್ಫಿಡೆನ್ಸ್ ನಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

ಆದರೆ, ಇದರ ಮುನ್ಸೂಚನೆ ಸಿಗುತ್ತಿದ್ದಂತೆಯೇ ನಿಯೋಜಿತ ಮುಖ್ಯಮಂತ್ರಿ, ಡಿಕೆ ಶಿವಕುಮಾರ್ ಕೂಡ ಅದಕ್ಕೆ ತಕ್ಕ ಪ್ಲಾನ್ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸರ್ಕಾರದಲ್ಲಿ ಮುಖ್ಯಮಂತ್ರಿಯಾದ ನನಗೆ ಬೇಡಿ ಹಾಕುವ ಕೆಲಸ ಆಗಬಾರದು, ತಂತ್ರವಾಗಿ ಕೆಲಸ ನಿರ್ವಹಿಸಲು  ಅವಕಾಶ ಇರಬೇಕು ಎಂಬುದು ಡಿಕೆ ಶಿವಕುಮಾರ್ ಬೇಡಿಕೆ. ಸಿದ್ದರಾಮಯ್ಯನವರು ಕಳೆದ ಮೂರು ವರ್ಷದಲ್ಲಿ ಹೇಗೆ ಸ್ವತಂತ್ರವಾಗಿ ಆಡಳಿತ ನಡೆಸಿದ್ದಾರೋ, ಅದೇ ರೀತಿಯ ಆಡಳಿತ ನಡೆಸಲು ಮುಂದಿನ ಎರಡು ವರ್ಷಕ್ಕೆ ಸ್ವಾತಂತ್ರ್ಯ ನೀಡಬೇಕು ಅನ್ನುವುದು ಡಿಕೆ ಶಿವಕುಮಾರ್ ಖಡಕ್ ಆಗ್ರಹವಾಗಿದೆ.

ಒಂದು ಕಡೆ ಸಿದ್ದರಾಮಯ್ಯ ನಾಲ್ಕು ಉಪ ಮುಖ್ಯಮಂತ್ರಿಗಳಿಗೆ ಪಟ್ಟು ಹಿಡಿದಿದ್ದಾರೆ. ಡಿಕೆ ಶಿವಕುಮಾರ್ ಒಬ್ಬರಿಗೆನೆ ಉಪಮುಖ್ಯಮಂತ್ರಿ ಅನ್ನುತ್ತಿದ್ದಾರೆ. ಹಾಗೆಯೇ, ಸಚಿವ ಸ್ಥಾನದ ವಿಚಾರದಲ್ಲೂ ಬಹುತೇಕ ಹಿರಿಯರಿಗೆ ಹಾಗೂ ಪಕ್ಷನಿಷ್ಠ ರಿಗೆ ಸಚಿವ ಸ್ಥಾನ ಮುಂದುವರೆಯುತ್ತದೆ, ಹಾಗೆಯೇ ಹೊಸಬರಿಗೆ ಅವಕಾಶ ಕೊಡುವ ನಿಟ್ಟಿನಲ್ಲಿ ಮುನ್ನಡೆಯುವುದು ಅನಿವಾರ್ಯ. ಇದೆಲ್ಲವುದರ ಕಾರಣದಿಂದಾಗಿ, ಆಡಳಿತಾತ್ಮಕ ವಿಚಾರದಲ್ಲಿ ಮುಖ್ಯಮಂತ್ರಿಯಾದವರಿಗೆ ಸ್ವಾತಂತ್ರ್ಯ ಅತ್ಯವಶ್ಯಕವಾಗಿ ಬೇಕು ಆ ವಿಚಾರದಲ್ಲಿ ಬೇರೆಯವರ ಹಸ್ತಕ್ಷೇಪ ಇರಬಾರದು ಎಂದು ಪ್ರತಿಪಾದಿಸುತ್ತಿದ್ದಾರೆ ಡಿಕೆ ಶಿವಕುಮಾರ್. ಒಟ್ಟಿನಲ್ಲಿ ಈಗ ಹೊಸ ಸರ್ಕಾರದ ಮೇಲೆ ಹಿಡಿತ ಸಾಧಿಸಲು ಸಿದ್ದರಾಮಯ್ಯ ಕಸರತ್ತು ಪ್ರಾರಂಭಿಸಿದ್ದಾರೆ. ಡಿಕೆ ಶಿವಕುಮಾರ್ ಅದಕ್ಕೆ ಅವಕಾಶ ನೀಡಬಾರದು ಎನ್ನುವ ನಿಟ್ಟಿನಲ್ಲಿ ತಮ್ಮ ತಂತ್ರಗಾರಿಕೆ ಶುರು ಮಾಡಿದ್ದಾರೆ. ಜೂನ್ 5ಕ್ಕೆ ಎಲ್ಲವೂ ಬಹಿರಂಗವಾಗಲಿದೆ ಬಿಡಿ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಮಹಿಳಾ ಟಿ20 ವಿಶ್ವಕಪ್‌ಗೂ ಮುನ್ನ ಭಾರತ-ಪಾಕ್ ಹೈಪ್ ನಡುವೆ ಮಂಧಾನಾ ಮಾತು ವೈರಲ್…
ನಾಲ್ಕು ದಶಕಗಳ ಕಾಲ ರೋಗಿಗಳಿಗೆ ಜೀವ ನೀಡಿದ ವೈದ್ಯನೇ ಇಂದು ಯಾಕೆ ತನ್ನ ಜೀವ ತಾನೇ ತೆಗೆದುಕೊಂಡರು …
ದೆಹಲಿಯನ್ನು ನಡುಗಿಸಿದ ಸೈಕೋಪಾತ್ ಘಟನೆಯ ಕ್ರೂರ ಸತ್ಯ…. ಆನ್‌ಲೈನ್ ಬೆಟ್ಟಿಂಗ್ ಮತ್ತು ಆಟಗಳ ಅಡಿಕ್ಟ್ – ಸಾಲ …ಮನೋವೈಕಲ್ಯ ಲಕ್ಷಣ!
ಅಂಡಮಾನ್ ಸಮುದ್ರದಲ್ಲಿ ಸಿಕ್ಕಿದ ಖಜಾನೆ! ಭಾರತದ ಇಂಧನ ಭವಿಷ್ಯ ಬದಲಾಗುತ್ತಿದೆಯೇ?
ಎಚ್ಚರ… ನಿಮ್ಮಸುತ್ತಮುತ್ತ ಏನು ನಡೆಯುತ್ತಿದೆ ಗೊತ್ತಿರಲಿ! 🚨Be Aware… Stay Alert… Save Youth!
ಕದನ ವಿರಾಮ ಹೇಳಿಕೆ ಮಾತ್ರ…“Middle East ಮತ್ತೆ ಸ್ಫೋಟಕ
ಕಿಡ್ನಿ ಕಾಯಿಲೆಯ ಬಗ್ಗೆ ಎಚ್ಚರಿಕೆ ಅಗತ್ಯ- ಡಾಕ್ಟರ್ ಅಶೋಕ್ ಭಟ್
ಕಪ್ಪೆ ಚಿಪ್ಪು ದುರಂತಕ್ಕೆ ಮತ್ತೆರಡು ಜೀವ ಬಲಿ, ಬಲಿಯ ಸಂಖ್ಯೆ ಏರುವ ಸಾಧ್ಯತೆ
ಶಿರಸಿ ಮಾರಿಯಮ್ಮನ ಜಾತ್ರೆ ಪ್ರಾರಂಭ
ಕಮ್ ಬ್ಯಾಕ್ ಮಾಡಿದ ಮುಂಬೈ ಇಂಡಿಯನ್, ಕ್ಯಾಪ್ಟನ್ ಪ್ರೇರಣೆಗೆ ವರ್ಮಾ ಬ್ಯಾಟಿನಿಂದ  ಮೊದಲ ಸೆಂಚುರಿ
ಅಮ್ಮಾ ಎದ್ದು ಬಾ… ಕಣ್ಣೀರಾಕಿ ಕರೆದರೂ, ಬರಲಾರದೇ ಒದ್ದಾಡಿದ ಅಮ್ಮ …ದುಬಾರೆ ಶಿಬಿರದಲ್ಲಿ ಮನಕಲುಕುವ ಘಟನೆ-ಆನೆಗಳ ಕಾದಾಟ… ಜೀವ ಕಳೆದುಕೊಂಡ ಮಹಿಳೆ
ಡಿಜಿಟಲ್ ಡಿಟಾಕ್ಸ್‌ಗೆ ಮಾದರಿಯಾದ ಸಿಇಒ: ಯುವಜನತೆಗೆ ಹೊಸ ಸಂದೇಶ!
ಹಾಡುಹಗಲೇ ಉಡುಪಿಯ ಕರಾವಳಿ ಬೈಪಾಸ್ ನಲ್ಲಿ ಗುಂಡಾಗಿರಿ
ಗ್ರಾಮೀಣ ವಿದ್ಯಾರ್ಥಿಗಳಿಗೂ AI ಶಿಕ್ಷಣ: ಕರ್ನಾಟಕ ಸರ್ಕಾರದ ಐತಿಹಾಸಿಕ ಹೆಜ್ಜೆ..50 ಸರ್ಕಾರಿ ಕಾಲೇಜುಗಳಲ್ಲಿ AI ಲ್ಯಾಬ್‌ಗಳು!
ಬಿಡದಿ “ಸಮಗ್ರ ಉಪನಗರ” ಯೋಜನೆ ಕೈಬಿಡಿ: ಸಿಎಂ ಡಿಕೆ ಶಿಗೆ ಎಚ್.ಡಿ. ದೇವೇಗೌಡ ಪತ್ರ
“ಪ್ರಜಾಪ್ರಭುತ್ವದ ಮೇಲೆ ದಾಳಿ”ಸುಪ್ರೀಂ ಕೋರ್ಟ್ ಕಿಡಿ: ಇದು ಪ್ರತಿಭಟನೆ ಅಲ್ಲ, ಸಂಚು!”
ಇಂದಿನ ಆಧುನಿಕ ಯುಗದಲ್ಲೂ ಗಂಡನ ಮನೆಯಲ್ಲಿ ಹೆಣ್ಣೊಬ್ಬಳ ನರಕಯಾತನೆಯ ನೈಜ ದೃಶ್ಯ ತಂದೆಯೇ ಕಣ್ಣಾರೆ ನೋಡಿದರೇ ….ಕಣ್ಣೀರು ತಡೆಯಲು ಸಾಧ್ಯವಿಲ್ಲ…..
ಗ್ಯಾಸ್ ಅಭಾವ ಮತ್ತು ಬೆಲೆ ಏರಿಕೆ, ಸುಳ್ಳು ಎನ್ನುತ್ತಿದೆ-HPCL
ಗೃಹ ಸಚಿವರಾದ ಜಿ ಪರಮೇಶ್ವರ್ ರವರ ಒಡೆತನದ ಸಂಸ್ಥೆಯಲ್ಲಿ ನಡೆದಿದೆ ಎಂಬ ವಿಡಿಯೋ ವೈರಲ್….!
“ಕಾಂತರಾ” ಖ್ಯಾತಿಯ ಸಪ್ತಮಿ ಗೌಡ, ದುಮುಕಿದ್ದು  ಹೋರಾಟದ ಅಂಗಳಕ್ಕೆ
ಮೇ 29ರಿಂದ ತಣ್ಣೀರುಬಾವಿ ಬೀಚ್‌ನಲ್ಲಿ ಮೂರು ದಿನಗಳ ರಾಷ್ಟ್ರಮಟ್ಟದ ಸರ್ಫಿಂಗ್ ಸ್ಪರ್ಧೆ…
ಮಸೀದಿ ಹುಂಡಿಗೂ ಲಗ್ಗೆ ಇಟ್ಟ ಕಳ್ಳರು….!
ಅರೆ ವಾ..! ಕರ್ನಾಟಕದ ಜನರಿಗೆ ಫ್ಯಾನ್ಸಿ ನಂಬರ್‌ಗಳೇ ಫೇವರಿಟ್…RTOಗೆ ₹118 ಕೋಟಿ ಆದಾಯ!
ಪಿವಿ ಎಸ್ ಸಂಸ್ಥೆಯ ಆಡಳಿತದಲ್ಲಿ ಯಾರ ಹಸ್ತಕ್ಷೇಪವು ಇಲ್ಲ – ಸರೋಜಿನಿ ಕುಶೆ
ಕಾಂಚನಾ ಟೆಕ್ಸ್‌ಟೈಲ್ಸ್ ಮ್ಯಾನೇಜರ್ ದಿನೇಶ್ ರಾಜ್ ಕೊಲೆ ಆರೋಪಿ 11 ವರ್ಷ ಬಳಿಕ ಅರೆಸ್ಟ್..!
Side Income ಇಂದು ಆಯ್ಕೆ ಅಲ್ಲ, ಅಗತ್ಯ …ಹಣ ಗಳಿಸಿ… ನಿದ್ರೆಯಲ್ಲೂ!ಒಂದು ಸಂಬಳ ಸಾಕಾಗದ ಕಾಲ ಇದು.
ಬಾಲ್ಯದ ಗೆಳೆಯನ ಬಲೆಗೆ ಬಿದ್ದ ವಾಯುಸೇನೆ ಅಧಿಕಾರಿಯ ಪತ್ನಿ?! ಲೈಂಗಿಕ ಬ್ಲ್ಯಾಕ್‌ಮೇಲ್,’ಕಬೂಲ್ ಹೈ’ ಹೇಳುವಂತೆ ಒತ್ತಾಯ!
ಮಿಜಾರಿನಲ್ಲಿ ರಸ್ತೆ ಕುಸಿತ, ಸಾರ್ವಜನಿಕರಲ್ಲಿ ಆತಂಕ ಮೊದಲ ಮಳೆಯಲ್ಲೇ ಕೊಚ್ಚಿಹೋಯ್ತು ಹೆದ್ದಾರಿ! ಕೋಟಿ ಕೋಟಿ ಕಾಮಗಾರಿಯ ಅಸಲಿ ಮುಖ ಬಯಲು? 
ಕರ್ನಾಟಕ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: 123 ಕೇಂದ್ರಗಳ ಪಾಸ್ ವಿತರಣ –ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ, ಬಸ್‌ಗಳ ಸಂಖ್ಯೆಯೂ ಹೆಚ್ಚುತ್ತದೆಯೇ?
ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಸಿಪಿಐಎಂ ರಣಕಹಳೆ!”