📍 Karavali Maruta
  • LOGIN
  • BREAKING
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ ದಯಾಮರಣ ಕೇಳಿದ್ದ ತುಮಕೂರು ರಾಬಿಯಾ ಇನ್ನಿಲ್ಲ …!ಪರಮೇಶ್ವರ್ ಮುಂದೆ ಕಣ್ಣೀರಿಟ್ಟಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ವಿಷಸೇವಿಸಿ ಕೊನೆಯುಸಿರು…‘ಮನೆ’ ಸಿಕ್ಕರೂ ಬದುಕು ಉಳಿಯಲಿಲ್ಲ! ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್! ಮಹಿಳಾ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ ವಾಜಪೇಯಿ ಸರ್ಕಾರದ  ಕನಸಿನ ಯೋಜನೆ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಸಹಿ ಸಂಗ್ರಹ ಅಭಿಯಾನ
    ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಗೃಹಲಕ್ಷ್ಮಿ ಹಣ ಉಳಿಸಿ ದೇವಿಗೆ ₹17 ಲಕ್ಷ ದೇಣಿಗೆ!

    ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ  ಯೋಜನೆ ಇಂದ ಬಂದಂತಹ 2000 ಹಣವನ್ನು  ಸೌದತ್ತಿ ಎಲ್ಲಮ್ಮ  ದೇವಿಗೆ ಸಮರ್ಪಣೆ ಮಾಡಲು ಗದಗ ಜಿಲ್ಲೆಯ ಲಕ್ಕುಂಡಿ ಸಮೀಪದ – ತಿಮ್ಮಾಪುರದ 850 ಮಹಿಳೆಯರು ಸ್ವಯಂ ನಿರ್ಧಾರ ಮಾಡಿ ಒಟ್ಟು  ₹17 ಲಕ್ಷ ರೂಪಾಯಿಯನ್ನು  ಎಲ್ಲಮ್ಮ ದೇವಿಯ ಪದತಲದಡಿ ಅರ್ಪಿಸಿದ್ದಾರೆ ! /Grihalakshmi – 850 women from Thimmapur donate ₹17 lakh! To Yallama temple Gadaga

    ಇಂತಹುದೊಂದು  ಅಭೂತಪೂರ್ವ ಘಟನೆ ಗದಗ ಜಿಲ್ಲೆಯ ಲಕ್ಕುಂಡಿ ಸಮೀಪದ  ತಿಮ್ಮಾಪುರ ಗ್ರಾಮದ  ಸುಮಾರು 850 ಮಹಿಳೆಯರ ಸ್ವಯಂ ನಿರ್ಧಾರದಿಂದ ನಡೆದಿದೆ. 

    ಆ ಮಹಿಳೆಯರು ಯಾರ ಒತ್ತಡಕ್ಕೂ ಒಳಗಾಗದೆ ತಮ್ಮೊಳಗೆ ತಾವು ನಿರ್ಧರಿಸಿಕೊಂಡು ಆ ಊರಿನ ಗ್ರಹಲಕ್ಷ್ಮಿ ಯೋಜನೆಯ ಬಹುತೇಕ 850 ಫಲಾನುಭವಿಗಳು ಒಟ್ಟಾಗಿ ತಮ್ಮ ಒಂದು ತಿಂಗಳ ಯೋಜನೆಯ ಹಣವನ್ನು ಎಲ್ಲಮ್ಮ ದೇವಿಯ ಕಟ್ಟಡ ನಿರ್ಮಾಣಕ್ಕೆ ದೇಣಿಗೆಯಾಗಿ ನೀಡಲು ನಿರ್ಧರಿಸಿದರು ಹಾಗೂ ಅದರಂತೆಯೇ ನಡೆದುಕೊಂಡರು. ಆ ಎಲ್ಲಾ 850 ಮಹಿಳೆಯರ ಒಂದು ತಿಂಗಳ ಗ್ರಹಲಕ್ಷ್ಮಿ ಯೋಜನೆಯ ಮೊತ್ತ ₹17 ಲಕ್ಷ ಆಗುತ್ತದೆ. ಅದನ್ನು Yellamma Templeಗೆ ದೇಣಿಗೆಯಾಗಿ ನೀಡಿದ್ದಾರೆ. ಸರ್ಕಾರ ನೀಡಿದ ಸಹಾಯ ನಮ್ಮ ಕುಟುಂಬದ ನೆರವಿಗೆ. ಅದರಲ್ಲಿ ಒಂದು ಭಾಗವನ್ನು ದೇವಿಗೆ ಅರ್ಪಿಸೋಣ” ಎಂಬ ಆಲೋಚನೆ ಗ್ರಾಮದಲ್ಲಿ ಒಗ್ಗಟ್ಟಿನ ಸಂಕಲ್ಪವಾಗಿ ರೂಪುಗೊಂಡಿತು.
    ಭಕ್ತಿ ಮತ್ತು ಏಕತೆಯ ಮೇಳೈಸಿತು.

    ಇತಿಹಾಸ ಪ್ರಸಿದ್ಧ  ಯಲ್ಲಮ್ಮ ದೇವಿಯ ಮೇಲಿನ ಭಕ್ತಿಯೇ ಈ ಕಾರ್ಯಕ್ಕೆ ಮೂಲ ಪ್ರೇರಣೆ. ದೇವಾಲಯದ ಅಭಿವೃದ್ಧಿ ಮತ್ತು ಧಾರ್ಮಿಕ ಕಾರ್ಯಗಳಿಗೆ ನೆರವಾಗಬೇಕು ಎಂಬ ಮನೋಭಾವದಿಂದ ತಿಮ್ಮಾಪುರದ  ಮಹಿಳೆಯರು ಈ ದೇಣಿಗೆಯನ್ನು ಸಮರ್ಪಿಸಿದ್ದಾರೆ.

    ಗ್ರಾಮೀಣ ಮಹಿಳೆಯರ ಸಂಘಟನಾ ಶಕ್ತಿ ಹಾಗೂ ಸಮಾಜಮುಖಿ ಮನೋಭಾವ ಈ ಘಟನೆಯ ಮೂಲಕ ಸ್ಪಷ್ಟವಾಗಿದೆ. 

    ಸರ್ಕಾರದ ಯೋಜನೆಗಳನ್ನು ಜವಾಬ್ದಾರಿಯಿಂದ ಬಳಸುವ ಮೂಲಕ  ಈ ಮಹಿಳೆಯರು ಮಾದರಿಯಾಗಿ ಕಾಣುತ್ತಾರೆ. ಮಹಿಳಾ ಸಬಲೀಕರಣದ ನಿಜವಾದ ಶಕ್ತಿಗೆ ಸಾಕ್ಷಿಯಾಗುತ್ತಲೇ, ಭಕ್ತಿ ಮತ್ತು ಸಮಾಜಮುಖಿ ಚಿಂತನೆಯ ಸಂಯೋಜನೆ ಅದ್ಭುತವಾಗಿ ಗೋಚರಿಸುತ್ತದೆ.  ಬಹಳ ಮುಖ್ಯವಾಗಿ ಗ್ರಾಮೀಣ  ಮಟ್ಟದಲ್ಲಿನ ಮಹಿಳೆಯರ ಏಕತೆಯ ಈ ಶಕ್ತಿಯು ರಾಜ್ಯದ ಇತರ ಮಹಿಳೆಯರಿಗೆಷ್ಟೇ ಅಲ್ಲ ಪುರುಷರಿಗೂ ಮಾದರಿ ಎನಿಸುವಂತಿದೆ.

    ತಿಮ್ಮಾಪುರದ ಈ 850 ಮಹಿಳೆಯರ ಮಹಾಸಂಕಲ್ಪ  ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.
    ಒಬ್ಬಳ ಗ್ರಾಹಲಕ್ಷ್ಮಿಯ 2000ರೂ ಚಿಕ್ಕದಾಗಿ ಕಾಣಬಹುದು, ಆದರೆ 850 ಮಹಿಳೆಯರ ಒಗ್ಗಟ್ಟಿನ  ಸಂಕಲ್ಪ ದಿಂದಾಗಿ ಅದು 17 ಲಕ್ಷ ರೂಪಾಯಿಗಳ ಮಹಾಸಾಗರವಾಗಿ ಪರಿವರ್ತಿತವಾಗಿದೆ! ಇದು ಕೇವಲ ಹಣದ ಸಂಗ್ರಹವಲ್ಲ, ಇದು ಮಹಿಳಾ ಶಕ್ತಿ, ಆತ್ಮವಿಶ್ವಾಸ ಮತ್ತು ಸಂಘಟನೆಯ ಸಂಕೇತವಾಗಿದೆ. ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಮತ್ತು ಧಾರ್ಮಿಕ ಕಾರ್ಯಗಳಿಗಾಗಿ ಮಹಿಳೆಯರು Gruha Lakshmi ಯೋಜನೆಯ ಅಡಿಯಲ್ಲಿ ರಾಜ್ಯ ಸರ್ಕಾರ ನೀಡುತ್ತಿರುವ ಮಾಸಿಕ ನೆರವು 2000ರೂ ಹಣವನ್ನು  ಭಕ್ತಿಭಾವದಿಂದ ಮತ್ತು ದೇವಿಯ ಆಶೀರ್ವಾದಕ್ಕಾಗಿ  ಈ ದೇಣಿಗೆಯನ್ನು ನೀಡಿದರು. ಮಹಿಳೆಯರು “ಈ ಹಣ ನಮ್ಮ ಮನೆಗೆ ಸರ್ಕಾರ ನೀಡಿದ ನೆರವು, ಅದರಲ್ಲಿ ಒಂದು ತಿಂಗಳ ನೆರವನ್ನು ದೇವಿಗೆ ಅರ್ಪಿಸುತ್ತೇವೆ” ಎಂದು ಹೇಳಿದ್ದಾರೆ

    ತಿಮ್ಮಾಪುರ ಗ್ರಾಮದ ಮಹಿಳೆಯರು  ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೊಡುಗೆ ನೀಡಿ, “ನಾವು ಒಂದಾದರೆ ಅಸಾಧ್ಯವೆಂಬುದೇ ಇಲ್ಲ” ಎಂಬ ಸಂದೇಶವನ್ನು ಘೋಷಿಸಿದ್ದಾರೆ.
    ಸಾಮಾನ್ಯವಾಗಿ “ಏಕತೆ” ಎಂಬ ಪದವನ್ನು ನಾವು ಕೇಳುತ್ತೇವೆ. ಆದರೆ ಅದನ್ನು ಕೃತ್ಯದಲ್ಲಿ ತೋರಿಸಿದರೆ ಅದು ಇತಿಹಾಸವಾಗುತ್ತದೆ. ಇಂತಹ ಇತಿಹಾಸವನ್ನು ನಿರ್ಮಿಸಿರುವುದು  ತಿಮ್ಮಾಪುರದ ಹೆಮ್ಮೆಯ ಮಹಿಳೆಯರು ಅನ್ನಬಹುದು.

    • -ಪ್ರಿಯಾ

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಗಂಡನ ಮನೆಯಿಂದ ಯುವತಿಯನ್ನು ಎಳೆದೊಯ್ದರು
    “ASDDO ಪಟ್ಟಿಯಲ್ಲಿ 1.11 ಕೋಟಿ ಮತದಾರರು…!ನಿಮ್ಮ ಹೆಸರು ಇದೆಯೇ? ವೋಟರ್ ಲಿಸ್ಟ್‌ನಲ್ಲಿ ನಿಮ್ಮ ಹೆಸರು ಮಿಸ್ಸಿಂಗ್?ಫಾರ್ಮ್-6 ಸಲ್ಲಿಸಲು ಮರೆಯಬೇಡಿ!
    ಮುದ್ದಾದ ಅವಳಿ ಹೆಣ್ಣು ಮಕ್ಕಳನ್ನು ಕತ್ತು ಸೀಳಿ ಕೊಂದ ಪಾಪಿ ಅಪ್ಪ
    ಬಂಟರ ಸಮುದಾಯದಲ್ಲೊಂದು ಹೀನ ಸಂಪ್ರದಾಯ-ವರದಕ್ಷಿಣೆಗಾಗಿ ಹಿಂಸೆ, ಹಲ್ಲೆ.. ಬೆದರಿಕೆ!
    ಖಾಸಗಿ ಆಸ್ಪತ್ರೆ ವೈದ್ಯರಿಗೆ ಬ್ಲ್ಯಾಕ್‌ಮೇಲ್: 2 ಕೋಟಿಗೂ ಅಧಿಕ ಹಣ ವಸೂಲಿ ಮಾಡಿದ ನರ್ಸ್‌ ಬಂಧನ
    ಆರು ಲಕ್ಷ ರೂ. ಶುಲ್ಕದ ಸಂಕಷ್ಟಕ್ಕೆ ಮಾನವೀಯ ಸ್ಪಂದನೆ: ವಿದ್ಯಾರ್ಥಿನಿಯ ಕನಸಿಗೆ ಸಚಿವ ಬಾಲಕೃಷ್ಣ ಬೆನ್ನೆಲುಬು
    ಇರಾನ್–ಇಸ್ರೇಲ್ ಯುದ್ಧ: ಯುದ್ಧ ನಿಲ್ಲಿಸಲು ಇರಾನ್‌ನ 3 ಷರತ್ತುಗಳು… ಅಮೇರಿಕಾ ಕಂಗಾಲು
    “ವಾಹನ ಮಾರಾಟ-RC ಬದಲಾವಣೆ  ಅಗತ್ಯ.. ಇಲ್ಲವಾದರೆ ಕಾನೂನು ಸಮಸ್ಯೆಗಳು ತಪ್ಪಿದ್ದಲ್ಲ..!” ಹೈಕೋರ್ಟ್
    ಕರಾವಳಿಯಲ್ಲಿ ವಾಪಸ್ ಆದ ಮುಂಗಾರು: ಜುಲೈ 6ರವರೆಗೆ ಆರೆಂಜ್ ಅಲರ್ಟ್ – ಜನರಿಗೆ ಎಚ್ಚರಿಕೆ
    ಕುಂದಾಪುರದಲ್ಲಿ ಗುಂಡಿನ ದಾಳಿ: ಬಾರ್ಕೂರು ಮೂಲದ ಐವನ್ ರಿಚರ್ಡ್ ಮಸ್ಕರೇನಸ್ ಹತ್ಯೆ
    ವಿಶ್ವ ಸಂಸ್ಥೆಯು ಯಾವ ಪುರುಷಾರ್ಥಕ್ಕೆ? ಬಲವರ್ಧನೆಯ  ಅಗತ್ಯತೆ
    ಹೆಣ್ಣು ಎಂಬ ಕನಿಕರ, ಸಿಗದ ಹಾಗೆ ಮಾಡಿದ ಮಾಯಾಂಗನೇ…
    ಮದರಸಾದಲ್ಲಿ ದೌರ್ಜನ್ಯ ಮತ್ತು ಬಲವಂತದ ಕೂಲಿ ಆರೋಪ-24 ಮಕ್ಕಳ ರಕ್ಷಣೆ
    ಗ್ರಾಹಕರ ಮಾತು ಕೇಳಿ, ₹900 ಕೋಟಿಯ ರೆಸ್ಟೋರೆಂಟ್ ಸಾಮ್ರಾಜ್ಯ ನಿರ್ಮಿಸಿದ ಉದ್ಯಮಿ..
    Maths hate ಮಾಡ್ತಿರಾ ? ಹಾಗಾದ್ರೆ ಈ ವರದಿ ನೋಡಿ ಸಮಸ್ಯೆ ನಿಮ್ಮಲ್ಲಿಲ್ಲ … research ಹೇಳುತ್ತೆ ಸಂಖ್ಯೆಗಳಲ್ಲಿ ಇದೆ!”
    ಭಾರತೀಯ ಸೇನೆಯ ಚಲನವಲನದ ವಿಡಿಯೋಗಳು ಪಾಕಿಸ್ತಾನಕ್ಕೆ ಹೇಗೆ ತಲುಪಿದವು?
    ಮಂಗಳೂರು ಏರ್‌ಪೋರ್ಟ್‌ನಲ್ಲಿ ಉಬರ್ …
    TCS ಜಿಹಾದ್..ಗಂಭೀರ ತಿರುವು… ಟೀಮ್ ಲೀಡರ್ಸ್ ನಿಂದ subordinates ಗಳನ್ನ ಮಲೇಷ್ಯಾಕ್ಕೆ ಎತ್ತಂಗಡಿ ಮಾಡುವ ಪ್ಲಾನ್ ಇತ್ತಾ..?!ದಿನಕ್ಕೊಂದು ಮಹತ್ವದ ಸುಳಿವು…
    ಡಿ.ಕೆ. ಶಿವಕುಮಾರ್ ಪ್ರಮಾಣ ವಚನ  ಜೂನ್ 3ಕ್ಕೆ, ರಾಜ್ಯಪಾಲರಿಂದ ಆಹ್ವಾನ
    ಕೇಂದ್ರ ಸಚಿವ ಸೋಮಣ್ಣರ ವಿರುದ್ಧ  ವಾಗ್ದಾಳಿ: “ನಡೆದು ಬಂದ ದಾರಿ ಮರೆತು ಮಾತನಾಡಬೇಡಿ”
    ಭಾರತ ಬಗ್ಗೆ ಟ್ರಂಪ್ ಡಬಲ್ ಸ್ಟ್ಯಾಂಡ್…!ವಿವಾದ ಸೃಷ್ಟಿಸಿ, ಬಳಿಕ ಸಮಾಧಾನದ ಮಾತು
    ₹119 ಕೋಟಿ ವ್ಯತ್ಯಾಸ ಸಣ್ಣ ವಿಷಯನಾ….ಏನಿದು ತಲೈವಾ..!
    ವಿಷಪ್ರಾಶನ  ಪ್ರಕರಣದಲ್ಲಿ ಕಾರ್ಕಳ ಗಜರಿಯ ಹಾಸ್ಪಿಟಲ್ ತಪ್ಪು ಮಾಡಿತೇ?
    ಕೇರಳ ಸರ್ಕಾರ ರಚನೆಯ ಕಗ್ಗಂಟು.. ಸಿಎಂ ಅಭ್ಯರ್ಥಿ ಆಯ್ಕೆಗೆ ಕಸರತ್ತು… ಕಾಂಗ್ರೆಸ್ ದುರ್ಬಲತೆಗೆ ಸಾಕ್ಷಿ
    ಮಂಗಳೂರು ಜಾರಂದಾಯ ಸ್ಥಾನದ ದೈವ ನರ್ತನ ವಿವಾದ – ಸ್ಪಷ್ಟನೆ- ಮರುಪ್ರಶ್ನೆ-ಇತ್ಯರ್ಥವಾಗುತ್ತಾ..?!
    ಕಾಂಗ್ರೆಸ್‌ಗೆ ದಾವಣಗೆರೆ ಬಿಸಿ ತುಪ್ಪ!..“ಸಮುದಾಯದ ಹೆಸರಿನಲ್ಲಿ ರಾಜಕೀಯ… ಅಥವಾ ರಾಜಕೀಯದ ಹೆಸರಿನಲ್ಲಿ ಸಮುದಾಯ?”
    ಭಾರತದ ‘ಗೋಲ್ಡನ್ ಗರ್ಲ್’ ಮೀರಾಬಾಯಿ ಚಾನು ಮತ್ತೊಮ್ಮೆ ಇತಿಹಾಸ ಬರೆದಿದ್ದಾರೆ! 
    ನಾಲ್ಕು ವರ್ಷದ ಬಾಲಕಿ  ಅಪಹರಿಸಿ, ಲೈಂಗಿಕ ದೌರ್ಜನ್ಯ ನಡೆಸಿ ಕೊಲೆಗೈದ ಆರೋಪಿಯನ್ನು ಎನ್ಕೌಂಟರ್ ಮಾಡಿದ ಪೊಲೀಸರು
    ಕಾರ್ಕಳದಲ್ಲಿ  ಜಾಗ ಕಿತ್ತುಕೊಳ್ಳಲು ಮಾಡಿದ ಪ್ಲಾನ್, ರಿವರ್ಸಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದೆ
    🔴 ಯುದ್ಧದ ಹೊತ್ತಿನಲ್ಲಿ ಮಾನವೀಯ ರಾಜತಾಂತ್ರಿಕತೆ: ಇರಾನ್‌ಗೆ ಭಾರತದಿಂದ ಮೊದಲ ವೈದ್ಯಕೀಯ ನೆರವು: